Saturday, May 16, 2026
Saturday, May 16, 2026

Children’s Day ಆದರ್ಶಗಳ ಅರಿವನ್ನು ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಜಾಗೃತಗೊಳಿಸಬೇಕು- ಡಾ. ಎಚ್.ಬಿ.ಮಂಜುನಾಥ್

Date:

Children’s Day ದಾವಣಗೆರೆ : ಆದರ್ಶ ಪ್ರಜೆಗಳಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿದ್ದು ಇಂತಹ ಆದರ್ಶಗಳ ಅರಿವನ್ನು ಭಾವಿ ಪ್ರಜೆಗಳಾದ ಮಕ್ಕಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ಜಾಗೃತಗೊಳಿಸಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಕರೆ ಕೊಟ್ಟರು.

ಅವರು ದಾವಣಗೆರೆ ನಗರ ಸಮೀಪದ ತೋಳಹುಣಸೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಸತಿಯುತ ಶಾಲಾ ಸಮೂಹಗಳ ವತಿಯಿಂದ ಏರ್ಪಾಡಾಗಿದ್ದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ವಿಶ್ವದಲ್ಲೇ ಮುಂಚಿತವಾಗಿ ಭಾರತವು ಮಕ್ಕಳ ದಿನಾಚರಣೆಯನ್ನು ‘ಪುಷ್ಪ ದಿನಾಚರಣೆ ಎಂಬುದಾಗಿ 1948 ರಿಂದ ಆಚರಿಸಿಕೊಂಡು ಬರುತ್ತಿತ್ತು. ವಿಶ್ವ ರಾಷ್ಟ್ರ ಸಂಸ್ಥೆಯು 1954ರಲ್ಲಿ ನವೆಂಬರ್ 20 ನ್ನು ‘ವಿಶ್ವ ಮಕ್ಕಳ ದಿನಾಚರಣೆ’ ಎಂಬುದಾಗಿ ಘೋಷಿಸಿತು.

ಭಾರತವು ನೆಹರುರವರ ಜನ್ಮದಿನವಾದ ನವೆಂಬರ್ 14 ನ್ನು 1964 ರಿಂದ ರಾಷ್ಟ್ರೀಯ ಮಕ್ಕಳ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದು ಮಹಾನ್ ವ್ಯಕ್ತಿಗಳ ಬದುಕಿನ ಆದರ್ಶಗಳನ್ನು ಮಕ್ಕಳಿಗೆ ಮನದಟ್ಟು ಮಾಡಲು ಇದು ಅವಕಾಶವಾಗಿದೆ ಎಂದರು.

Children’s Day ಉಪ ಪ್ರಾಂಶುಪಾಲ ಉಮಾಪತಿ ಕೇಶವಪುರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮೂಹ ಸಂಸ್ಥೆಯ ಸಹಸ್ರಾರು ಮಕ್ಕಳು ಭಾಗವಹಿಸಿದ್ದು ಅಧ್ಯಾಪಕ ವರ್ಗದವರೇ ಮಕ್ಕಳಂತೆ ಪೋಷಾಕು ಧರಿಸಿ ಮಕ್ಕಳ ರೀತಿಯಲ್ಲೇ ಅಭಿನಯಿಸುತ್ತಾ ಬ್ಯಾಂಡ್ ಸೆಟ್ ನುಡಿಸಿ ಮಕ್ಕಳಿಗೆ ದಿನಾಚರಣೆಯ ಶುಭಾಶಯ ಕೋರಿದ್ದು ನೆರೆದಿದ್ದ ಮಕ್ಕಳಿಗೆ ವಿಶೇಷ ರಂಜನೆ ನೀಡಿತು.

ಕನ್ನಡ ಅಧ್ಯಾಪಕ ಶಂಕರ್ ನಸ್ವಿ ಸ್ವಾಗತ ಕೋರುತ್ತಾ ಅತಿಥಿಗಳ ಪರಿಚಯ ಮಾಡಿದರು. ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...