Monday, August 24, 2026
Monday, August 24, 2026

Araga Jnanendra ಕಾಂಗ್ರೆಸ್ ಪಕ್ಷ ತನ್ನ ಸೋಲಿಗೆ ನಿಜವಾದ ಕಾರಣ ಹುಡುಕದೇ ಚುನಾವಣಾ ಆಯೋಗದ ಮೇಲೆ ತಪ್ಪು ಹೊರಿಸುತ್ತಿದೆ- ಆರಗ ಜ್ಞಾನೇಂದ್ರ

Date:

Araga Jnanendra ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಪಾದಯಾತ್ರೆ ವಿಚಾರವಾಗಿ ಶಾಸಕರಾದ ಆರಗ ಜ್ಞಾನೇಂದ್ರ ವಿಡಂಬಿಸಿ ಮಾತನಾಡಿದರು

ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಚುನಾವಣಾ ಆಯೋಗ ವಿರುದ್ಧ ಆರೋಪ ಮಾಡುತ್ತದೆ
ಪಕ್ಷದ ಸೋಲಿಗೆ ಮತಗಳ ಕಳ್ಳತನ ಆಗಿದೆ, ಚುನಾವಣಾ ಆಯೋಗ ತಪ್ಪು ಮಾಡಿದೆ ಎಂದು ಆರೋಪಿಸುತ್ತದೆ
ಆದರೆ ಗೆದ್ದಾಗ ಏನನ್ನು ಹೇಳುವುದಿಲ್ಲ
ಕಾಂಗ್ರೆಸ್ ತನ್ನ ಸೋಲಿಗೆ ನಿಜವಾದ ಕಾರಣ ಏನು ಎಂಬುದನ್ನು ಕಂಡು ಹಿಡಿದುಕೊಳ್ಳುತ್ತಿಲ್ಲ
ಬದಲಿಗೆ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತದೆ
ಈ ಮೂಲಕ ಜನರ ಭಾವನೆಯಿಂದ ತೊಲಗುತ್ತಿದೆ

ಇಷ್ಟು ದಿನ ಇವಿಎಂ ಬಗ್ಗೆ ಆರೋಪಿಸುತ್ತಿದ್ದರು

ಆದರೆ ಕರ್ನಾಟಕದಲ್ಲಿ ಅವರೇ ಆಡಳಿತ ನಡೆಸುತ್ತಿದ್ದಾರೆ
ಅವರದೇ ಸಿಬ್ಬಂದಿ ಮತದಾರರ ಪಟ್ಟಿಯನ್ನು ತಯಾರು ಮಾಡಿದ್ದಾರೆ

ಇದು ಕಾಂಗ್ರೆಸ್ ನ ಕುತಂತ್ರದ ಒಂದು ಭಾಗ
ಚುನಾವಣಾ ಆಯೋಗ ಹಂಡ್ರೆಡ್ ಪರ್ಸೆಂಟ್ ಸರಿಯಾಗಿದೆ
ಮತದಾರರ ಪಟ್ಟಿಯಲ್ಲಿ ಇಲ್ಲದವರು, ಸತ್ತು ಹೋದವರ ಹೆಸರನ್ನ ಕೈ ಬಿಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು

ಅಮರಿಕದ ಟ್ರಂಪ್ ಹಾಗೂ ಕಾಂಗ್ರೆಸ್ ನ ರಾಹುಲ್ ಗಾಂಧಿ ಒಂದೇ ರೀತಿ ವರ್ತಿಸುತ್ತಿದ್ದಾರೆ
ಭಾರತದ ಆರ್ಥಿಕತೆ ಸತ್ತು ಹೋಗಿದೆ ಎಂದು ಟ್ರಂಪ್ ಹೇಳುತ್ತಾರೆ
ಅದಕ್ಕೆ ರಾಹುಲ್ ಗಾಂಧಿ ಹೌದೆಂದು ಹೇಳುವ ಮೂಲಕ ತಲೆ ಆಡಿಸುತ್ತಾರೆ.
ಈ ಪ್ರಪಂಚದಲ್ಲಿ ಒಬ್ಬ ಟ್ರಂಪ್ ಹಾಗೂ ಒಬ್ಬ ರಾಹುಲ್ ಗಾಂಧಿ ಮಾತ್ರ ಶ್ರೇಷ್ಠ ಆರ್ಥಿಕ ತಜ್ಞರು
ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಂಡು ಇವರಿಬ್ಬರೇ
ಅವರು ಯಾವುದೇ ದೇಶದ ಆರ್ಥಿಕತೆ ಸತ್ತು ಹೋಗಿದೆ ಎಂದು ಹೇಳಬಹುದು
ಟ್ರಂಪ್ ಹೇಳಿಕೆಯಿಂದ ದೇಶಕ್ಕೆ
ಆಘಾತವಾಗಿದೆ
ಆದರೆ ರಾಹುಲ್ ಗಾಂಧಿ ಮಾತ್ರ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಜ್ಞಾನೇಂದ್ರ ಟೀಕಿಸಿದರು.

Araga Jnanendra ರಾಹುಲ್ ಗಾಂಧಿ ನಮ್ಮ ದೇಶದ ಪರವಾಗಿ ಯಾವಾಗಲೂ ಯೋಚನೆಯನ್ನು ಮಾಡಿಲ್ಲ
ದೇಶದ ವಿರೋಧಿಗಳ ರೀತಿಯಲ್ಲೇ ಅವರು ಯಾವಾಗಲೂ ಮಾತನಾಡುತ್ತಾರೆ
ಹಾಗಾಗಿ ರಾಹುಲ್ ಗಾಂಧಿ ಅಂತಹ ನಾಯಕತ್ವ ಇರುವ ತನಕ ಕಾಂಗ್ರೆಸ್ ಮಣ್ಣಾಗಿ ಹೋಗುತ್ತದೆ ಎಂದು ರಾಜ್ಯದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿಷಾದದ ಧ್ವನಿಯಲ್ಲಿ ನುಡಿದಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...