Wednesday, August 12, 2026
Wednesday, August 12, 2026

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Date:

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಶಿವಮೊಗ್ಗ ಜಿಲ್ಲೆ ವತಿಯಿಂದ ಶಿವಮೊಗ್ಗದ ವಿಕಾಸ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 23ರಂದು ಸಂಜೆ 5:00 ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹಿರಿಯ ಚಿಂತಕರು ಮತ್ತು ಲೇಖಕರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ. ಎನ್. ಸುಧೀಂದ್ರ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕವಿಗಳು ಮತ್ತು ತುಂಗಾ ತರಂಗ ದಿನಪತ್ರಿಕೆ ಸಂಪಾದಕರಾದ ಶ್ರೀ ಎಸ್ ಕೆ ಗಜೇಂದ್ರ ಸ್ವಾಮಿ, ವಿಭಾಗಿಯ ಸಂಚಾಲಕರಾದ ಶ್ರೀ ಹರ್ಷ , ಸಂಪರ್ಕ ಪ್ರಮುಖರಾದ ಶ್ರೀ ಸತ್ಯನಾರಾಯಣ , ಕಾರ್ಯದರ್ಶಿ ಸುರೇಶ್ ಭಟ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

Akhila Bharatiya Sahitya Parishad ಶಿವಮೊಗ್ಗ ಜಿಲ್ಲೆಯ ಕವಿ ಕವಯಿತ್ರಿಯರಾದ ಮಂಜುನಾಥ್ ಎಚ್. ಬುಳ್ಳಾಪುರ, ರಮೇಶ್ ಭದ್ರಾವತಿ, ಚೇತನಾ ಅಜ್ಜಿಹಳ್ಳಿ , ಮೇದಿನಿ ಕೆಸವೆಮನೆ, ಸಂತೋಷ್ ಬಿದರಗದ್ದೆ, ಎಸ್ ರುದ್ರೇಶ್ ಆಚಾರ್ , ಶುಭಾ ಕುಸ್ಕೂರು , ಶಾರದಾ ಉಳುವೆ, ಅಂಜುಮ್.ಬಿ.ಎಸ್., ಕನಕಾ ರಾಜಾರಾಂ, ಪೂರ್ಣಿಮಾ ಪ್ರಸನ್ನ, ಮನು ಶಿವಮೊಗ್ಗ, ಮಮತಾ ಹೆಗ್ಡೆ, ಮತ್ತು ಪದ್ಮಾ ದಿವಾಕರ್ ಇವರು ಕವನ ವಾಚನ ಮಾಡಲಿದ್ದಾರೆ.

ಕನ್ನಡ ಅಭಿಮಾನಿಗಳು , ಕನ್ನಡ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...