Tuesday, August 25, 2026
Tuesday, August 25, 2026

ಮಲೆನಾಡಿನಲ್ಲಿ ಮಳೆ: ತುಂಗಭದ್ರ ನದಿ ನೀರಿನ ಹರಿವು ಗಣನೀಯ ಏರಿಕೆ

Date:

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಚುರುಕಾಗಿರುವುದರಿಂದ ಇಲ್ಲಿನ ತುಂಗ, ಭದ್ರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ.

ಶನಿವಾರಂದು ನದಿಯಲ್ಲಿ ನೀರಿನ ಮಟ್ಟ 9.200 ಮೀ.ಗೆ ಏರಿದೆ. ಶುಕ್ರವಾರ 7.240 ಮೀ., ಗುರುವಾರ 7.210 ಮೀ.
ಇತ್ತು. ಕೇವಲ 3 ದಿನಗಳ ಅಂತರದಲ್ಲಿ ನದಿಯಲ್ಲಿ 2 ಮೀ. ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಇನ್ನೂ ಮುಂದುವರಿದರೆ ಅಥವಾ ಜಲಾಶಯದಿಂದ ಹೆಚ್ಚುವರಿ ನೀರು ಹರಿಸಿದರೆ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ಜುಲೈ ತಿಂಗಳಲ್ಲಿ ನಗರದ ಗಂಗಾನಗರದ ಮನೆಗಳು ಜಲಾವೃತವಾಗಿದ್ದವು. ಚಿಕ್ಕಬಿದರಿ ಸಾರಥಿ ಮತ್ತು ಉಕ್ಕಡಗಾತ್ರಿ ಯಿಂದ ನಂದಿಗುಡಿ ನಡುವಿನ ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಮತ್ತೆ ಅದೇ ದುಃಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಪ್ರವಾಹಕ್ಕೀಡಾದ ಪ್ರದೇಶಗಳ ಜನರು ಆತಂಕದಲ್ಲಿದೆ.

ಹರಿಹರದಲ್ಲಿ ಶುಕ್ರವಾರ 10.2 ಮಿ.ಮೀ., ಮಲೇಬೆನ್ನೂರು 14 ಮಿ.ಮೀ., ಕೊಂಡಜ್ಜಿ 9.2 ಮಿ.ಮೀ., ಹೊಳೆಸಿರಿಗೆರೆಯಲ್ಲಿ 10.4 ಮಿ.ಮೀ., ಒಟ್ಟು 43.6, ಸರಾಸರಿ 10.90 ಮಿ.ಮೀ. ಮಳೆ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...