Sunday, September 6, 2026
Sunday, September 6, 2026

ಇಂಡಿಗೊ ‌ವಿಮಾನ ಸಂಸ್ಥೆಯಿಂದ ನಟಿ ಪೂಜಾಹೆಗ್ಡೆ ಅವರಲ್ಲಿ ಕ್ಷಮಾಯಾಚನೆ

Date:

ಸೌತ್ ಇಂಡಿಯಾದ ಫೇಮಸ್ ನಟಿ ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.

ಆದರೆ ಈ ಭಾರಿ ಮಾತ್ರ ತಮಗೆ ವಿಮಾನಯಾನದ ವೇಳೆ ಉಂಟಾದ ಕೆಟ್ಟ ಅನುಭವವನ್ನು ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಫುಲ್ ವೈರಲ್ ಆಗಿದೆ.

ಬಾಲಿವುಡ್ ಸೇರಿದಂತೆ ತಮಿಳು ಹಾಗೂ ತೆಲುಗು ಸಿನಿಮಾ ದಲ್ಲಿ ಸದಾ ಬ್ಯುಸಿಯಾಗಿರರಕ ಪೂಜಾ ಹೆಗ್ಡೆ, ಇತ್ತೀಚಿಗೆ ತಮಗೆ ಮುಂಬೈನಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಅನುಭವವಾಗಿದೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ತಾವು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಮಗೆ ವಿಮಾನ ಸಿಬ್ಬಂದಿಯಿಂದ ಅವಮಾನವಾಗಿದೆ. ಅತಿರೇಕದ ಹಾಗೂ ಅತ್ಯಂತ ಕಟುವಾದ ವರ್ತನೆ ತೋರಿದರು ಎಂದು ಪೂಜಾ ಹೆಗ್ಡೆ ಇಂಡಿಗೋ ವಿಮಾನದ ವಿರುದ್ಧ ದೂರಿದ್ದಾರೆ.

ಈ ಬಗ್ಗೆ ವಿವರವಾಗಿ ಟ್ವೀಟ್ ಮಾಡಿರುವ ಪೂಜಾ ಹೆಗ್ಡೆ, ವಿಷಾದದಿಂದ ಬರೆಯುತ್ತಿದ್ದೇನೆ. ಇಂಡಿಗೋ ವಿಮಾನದ ಸಿಬ್ಬಂದಿ ಅತ್ಯಂತ ಒರಟುತನದಿಂದ ವರ್ತಿಸಿದರು. ವಿಫುಲ್ ನಕಾಶೆ ಎಂಬ ಸಿಬ್ಬಂದಿ ನನ್ನೊಂದಿಗೆ ಅತ್ಯಂತ ದುರಂಹಕಾರದಿಂದ ನಡೆದುಕೊಂಡರು. ಯಾವುದೇ ಕಾರಣವಿಲ್ಲದೇ ಈ ರೀತಿ ನಡೆದುಕೊಂಡಿದ್ದಾರೆ. ಅವರ ಮಾತು ಬೆದರಿಕೆಯಂತಿತ್ತು.‌ ಸಾಮಾನ್ಯವಾಗಿ‌ ನಾನು ಇಂತಹ ವಿಚಾರಗಳ ಬಗ್ಗೆ ಟ್ವೀಟ್ ಮಾಡೋದಿಲ್ಲ. ಆದರೆ ಈ ಭಾರಿ ಅನಿವಾರ್ಯವಾಗಿದೆ ಎಂದಿದ್ದಾರೆ.

ಈ ಮಧ್ಯೆ ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಅವಮಾನವಾಗಿದೆ ಅನ್ನೋ ಸಂಗತಿ ಟ್ವೀಟ್ ನಲ್ಲಿ ಬಹಿರಂಗವಾಗುತ್ತಿದ್ದಂತೆ ಇಂಡಿಗೋ ಸಂಸ್ಥೆ ಟ್ವೀಟರ್ ನಲ್ಲಿ ಪೂಜಾ ಹೆಗ್ಡೆ ಬಳಿ ಕ್ಷಮೆಯಾಚಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಂಡಿಗೋ ಸಂಸ್ಥೆ, ದಯಮಾಡಿ ಕ್ಷಮೆ ಇರಲಿ. ನಾವು ನಿಮ್ಮನ್ನು ಶೀಘ್ರದಲ್ಲೇ ಸಂಪರ್ಕ ಮಾಡುತ್ತೇವೆ. ನಿಮ್ಮ ಪಿಎನ್‌ಆರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಕಳುಹಿಸಿಕೊಡಿ ಎಂದು ಸಂಸ್ಥೆ ಕೇಳಿದೆ.

ಒಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳ ದುವರ್ತನೆಗೆ ಸೆಲೆಬ್ರಿಟಿಗಳು ಹೊರತಲ್ಲ ಅನ್ನೋದು ಈಗ ಸಾಬೀತಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...