Wednesday, June 25, 2025
Wednesday, June 25, 2025

ಶ್ರೀಲಂಕಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳ ಸಜ್ಜು

Date:

ನೆರೆಯ ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಕೈಮೀರಿ ಹೋಗುತ್ತಿರುವ ನಡುವೆ ಅಲ್ಲಿನ ಪ್ರತಿಪಕ್ಷ ಇವತ್ತು ಅಧ್ಯಕ್ಷ ಗೋಟಬಯ ರಾಜಪಕ್ಸ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ಗಡಿ ಮಹಾಭಿಯೋಗಕ್ಕೆ ಸಹಿ ಹಾಕಿದೆ.

ಲಂಕಾದ ಪ್ರತಿಪಕ್ಷವಾದ ಸಮಗಿ ಜನ ಬಲವೆಗಯ ನಾಯಕ ಸಜಿತ್‌ ಪ್ರೇಮದಾಸ ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಬದಲಾವಣೆ ಆಗದೇ ನಾವು ಸುಮ್ಮನಾಗೊಲ್ಲ. ಅವಿಶ್ವಾಸ ನಿರ್ಣಯ ಮತ್ತು ಪದಚ್ಯುತಿ ನಿರ್ಣಯಕ್ಕೆ ಸಹಿ ಮಾಡ್ತಾ ಇದ್ದೇವೆ. ಜೊತೆಗೆ ಅಧ್ಯಕ್ಷೀಯ ಪದ್ದತಿ ಬದಲಾವಣೆ ಆಗೋಕೆ ಸಂವಿಧಾನಾತ್ಮಕ ತಿದ್ದುಪಡಿ ಆಗಲಿದೆ ಅಂತ ಹೇಳಿದ್ದಾರೆ.

ಈ ನಿರ್ಣಯಗಳನ್ನ ಮಂಡಿಸೋಕು ಮೊದಲು ಲಂಕಾದ ಪ್ರತಿಪಕ್ಷಗಳಿಗೆ ವಿವಿಧ ಪಕ್ಷಗಳ 40 ಚುನಾಯಿತ ಸದಸ್ಯರ ಸಹಿ ಬೇಕು. ಈಗಾಗಲೇ ಎಸ್‌ಜೆಬಿ ಇಂದ 50 ಜನ ಸಹಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಆ ಕಡೆ ಪ್ರತಿಭಟನಾಕಾರರ ಜೊತೆ ಮಾತಾಡೋಕೆ ತಯಾರಿದ್ದೇವೆ ಎಂದು ಶ್ರೀಲಂಕಾ ಸರ್ಕಾರ ಹೇಳಿದ್ದು ಮಾತುಕತೆಗೆ ಆಹ್ವಾನಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Gurudatta Hegde ಅತ್ಯಾಧುನಿಕ ತಂತ್ರಾಂಶವನ್ನು ಅರಿತು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಿ : ಗುರುದತ್ತ ಹೆಗಡೆ

Gurudatta Hegde ನಾಗಾಲೋಟದಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರವು ಸುಗಮ ಆಡಳಿತಕ್ಕೆ...

MESCOM ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ.26 ರಂದು ಬೆಳಿಗ್ಗೆ...

Backward Classes Welfare Department ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ...

Department of Horticulture ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Horticulture ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ...