ರಾಜ್ಯ ಸರ್ಕಾರ ಬತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಖರೀದಿಗಾಗಿ ಎಲ್ಲೆಡೆ ಖರೀದಿ ಕೇಂದ್ರ ತರೆಯಬೇಕೆಂದು ರಾಜ್ಯ ರೈತಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ದುಬಾರಿ ಕೂಲಿ, ರಸಗೊಬ್ಬರ, ಕೀಟನಾಶಕಗಳ, ಬೆಲೆ ಎರಡುಪಟ್ಟು ಹೆಚ್ಚಾಗಿದೆ. ರೈತರ ಜೀವನ ವೆಚ್ಚವೂ ಜಾಸ್ತಿಯಾಗಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಕಡಿಮೆಯಾಗುತ್ತಿದೆ. ರೈತರು ಬೆಳೆಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆ ಕಾರಣದಿಂದ ಅವರು ಬ್ಯಾಂಕ್ ಗಳ ಸಾಲವನ್ನು ತೀರಿಸಲು ಆಗುತ್ತಿಲ್ಲ. ಸಾಲದ ಹೊರೆ ಜಾಸ್ತಿಯಾಗಿ ಜೀವನ ನಿರ್ವಹಣೆಯ ದುರಸ್ತವಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪನವರು ಹೇಳಿದ್ದಾರೆ.
ಜಿಲ್ಲೆಯಲ್ಲಿ 78,000 ಹೆಕ್ಟೇರ್ ನಲ್ಲಿ ಭತ್ತ, 53,000 ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಹಾಗೂ ರಾಜ್ಯದಲ್ಲಿ 10.22 ಲಕ್ಷ ಹೆಕ್ಟೇರ್ ನಲ್ಲಿ ಭತ್ತ ,14.16 ಲಕ್ಷ ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಮತ್ತು 6.90 ನಲ್ಲಿ ರಾಗಿ ಬೆಳೆದಿದ್ದಾರೆ.
ಈ ವರ್ಷ ಉತ್ತಮ ಫಸಲು ಬಂದರೂ ಕುಯ್ಲು ಹಂತದಲ್ಲಿ ಬಂದ ಮಳೆಯಿಂದಾಗಿ ಕೈಗೆ ಸಿಕ್ಕಿದ್ದು, ಬಾಯಿಗೆ ಬರದಂತಾಗಿದೆ.
ಆದ್ದರಿಂದ ಮೆಕ್ಕೆಜೋಳ ಮತ್ತು ಭತ್ತದ ಧಾರಣೆ ಕುಸಿತ ವಾಗಿರುವುದರಿಂದ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಿ ಎರಡೂ ಬೆಳೆಗಳಿಗೆ ರೂ.3 ಸಾವಿರ ಮತ್ತು ರಾಗಿಗೆ 4 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡಬೇಕೆಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭತ್ತ, ಮೆಕ್ಕೆಜೋಳ ರಾಗಿಗೆ ಬೆಂಬಲ ಬೆಲೆ ಹೆಚ್ಚಿಸಿ
Date: