Wednesday, February 11, 2026
Wednesday, February 11, 2026
Home Blog Page 90

District Chamber of Commerce and Industry ರಾಗಿಗುಡ್ಡದ ರಾಜ್ಯ ವಿಮಾ ಆಸ್ಪತ್ರೆಯ ಸಿಬ್ಬಂದಿಗೃಹಗಳ ಕಾಮಗಾರಿ ಪೂರ್ಣಗೊಳಿಸಲು ಮನವಿ

0

District Chamber of Commerce and Industry ರಾಗಿಗುಡ್ಡದಲ್ಲಿ 100 ಹಾಸಿಗೆಗಳ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಆಸ್ಪತ್ರೆ ಮತ್ತು 32 ಸಿಬ್ಬಂದಿ ವಸತಿ ಗೃಹಗಳ ಕಾಮಗಾರಿಯನ್ನು 2026ರ ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮನವಿ ಮಾಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಭೇಟಿ ನೀಡಿದ್ದ ಹುಬ್ಬಳ್ಳಿಯ ಇಎಸ್‌ಐಸಿ ಉಪವಿಭಾಗೀಯ ಕಚೇರಿ ಜಂಟಿ ನಿರ್ದೇಶಕ ರಘುರಾಮನ್ ಅವರಿಗೆ ಸನ್ಮಾನಿಸಿ ಮಾತನಾಡಿದರು.

ಎಸ್‌ಪಿಆರ್‌ಇಇ 2025 ಸ್ವಯಂ ನೋಂದಣಿ ಯೋಜನೆಯ ಪ್ರಯೋಜನವನ್ನು ಸಂಬಂಧಪಟ್ಟ ಎಲ್ಲರೂ ಪಡೆಯಬೇಕು. ಇಎಸ್‌ಐ ಕಾಯ್ದೆಯಡಿ ದಂಡವಿಲ್ಲದೆ ಸ್ವಯಂ ನೋಂದಣಿ ಯೋಜನೆ ಬಗ್ಗೆ ಮಾಹಿತಿ ಹೊಂದಬೇಕು ಎಂದು ತಿಳಿಸಿದರು.

ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರಿ ವೀಕ್ಷಣೆ ಹಾಗೂ ಇಎಸ್‌ಐಸಿ ಅನುಮೋದಿಸಿದ ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ ಎಸ್‌ಪಿಆರ್‌ಇಇ 2025 ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸಂಯೋಜಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಜಂಟಿ ನಿರ್ದೇಶಕ ರಘುರಾಮನ್ ಮಾತನಾಡಿ, ಎಸ್‌ಪಿಆರ್‌ಇಇ 2025 ಯೋಜನೆ ಇಎಸ್‌ಐ ಕಾಯ್ದೆಯಡಿಯಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ವಿಶೇಷ ಉಪಕ್ರಮವಾಗಿದೆ. ಈ ಯೋಜನೆಯು ಜುಲೈ 1 ರಿಂದ ಡಿಸೆಂಬರ್ 31ರವರೆಗೆ ಸಕ್ರಿಯವಾಗಿರುತ್ತದೆ ಎಂದು ಹೇಳಿದರು.

ನೋಂದಾಯಿಸದ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ, ಗುತ್ತಿಗೆ ಮತ್ತು ತಾತ್ಕಾಲಿಕ ಕೆಲಸಗಾರರು ಸೇರಿದಂತೆ ತಪಾಸಣೆ ಅಥವಾ ಹಿಂದಿನ ಬಾಕಿಗಳ ಬೇಡಿಕೆಗಳನ್ನು ಎದುರಿಸದೆ ನೋಂದಾಯಿಸಿಕೊಳ್ಳಲು ಒಂದು ಬಾರಿ ಅವಕಾಶ ಒದಗಿಸುತ್ತದೆ. ಈ ಯೋಜನೆಯು ಹಿಂದಿನಿಂದ ಬರುವ ದಂಡಗಳ ಭಯವನ್ನು ತೆಗೆದುಹಾಕುವ ಮೂಲಕ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮೂಲಕ ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸುತ್ತದೆ. ನಿರ್ದಿಷ್ಟ ಸಮಯದೊಳಗೆ ನೋಂದಣಿ ಮಾಡದಿದ್ದರೆ ಕಾನೂನು ಕ್ರಮ ಮತ್ತು ಹಳೆಯ ಬಾಕಿಗಳ ಬೇಡಿಕೆಗೆ ಕಾರಣವಾಗಬಹುದು ಎಂದು ತಿಳಿಸಿದರು.

ಸಾಗರ ರಸ್ತೆ ಕೈಗಾರಿಕಾ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ ಮಾತನಾಡಿ, ಯೋಜನೆ ಬಗ್ಗೆ ಹೆಚ್ಚು ಪ್ರಚಾರ ನಡೆಸಬೇಕು. ದಂಡವಿಲ್ಲದೆ ನೊಂದಣಿಗೆ 2026ರ ಮಾರ್ಚ್ 31ರವರೆಗೆ ಅವಕಾಶ ನೀಡಬೇಕು ಎಂದರು.

District Chamber of Commerce and Industry ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಇಎಸ್‌ಐ ಔಷಧಾಲಯ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಅಡಕೆ ಹಾಳೆ ತಯಾರಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಇಎಸ್‌ಐ ನೋಂದಣಿಯಲ್ಲಿನ ಸಮಸ್ಯೆಗಳ ಪರಿಹಾರದ ಬಗ್ಗೆ ಗಮನ ಸೆಳೆದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಡಾ. ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಕುಮಾರ್, ಪ್ರದೀಪ್ ವಿ ಯಲಿ, ಇಎಸ್‌ಐಸಿ ಬ್ರಾಂಚ್ ಮ್ಯಾನೇಜರ್ ಆಶಾದೇವಿ ಹಾಗೂ ಇತರರು ಭಾಗವಹಿಸಿದ್ದರು.

Kuvempu University ವಿಶ್ವವಿದ್ಯಾಲಯಗಳು ಜ್ಞಾನಕೇಂದ್ರಗಳು. ಇಲ್ಲಿ ವಿಷಯಗಳ ವಿಶ್ಲೇಷಣಾತ್ಮಕ ಚರ್ಚೆಯಾಗಬೇಕು- ಪ್ರೊ.ಶರತ್ ಅನಂತ ಮೂರ್ತಿ

0

Kuvempu University ವಿಶ್ವವಿದ್ಯಾಲಯಗಳು ಜ್ಞಾನಕೇಂದ್ರಗಳು. ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ರಚಿತವಾಗಿವೆ‌ . ಯಾವುದೇ ಧರ್ಮದ ಬಗ್ಗೆ ,ಅದರ ಎಲ್ಲಾ ಮಗ್ಗುಲುಗಳ ಬಗ್ಗೆ ವಿಶ್ಲೇಷಾಣಾತ್ಮಕ ನಿಟ್ಟಿನಲ್ಲಿ ಚರ್ಚೆ ನಡೆಸಬಹುದು. ಈ ಹಿನ್ನೆಲೆಯಲ್ಲಿ ಪ್ರಿಯವಾದ ಸಂಗತಿಗಳ ಚರ್ಚೆಗೆ ಮಾತ್ರ ಸೀಮಿತವಾಗಬಾರದು. ಅ‌ಪ್ರಿಯವಾದ ಸಂಗತಿಗಳನ್ನ ಮೂಲೆಗೆ ತಳ್ಳದೇ ಅವುಗಳ ಬಗ್ಗೆಯೂ ಆರೋಗ್ಯಕರ ಚರ್ಚೆ ವಾಗ್ವಾದ ನಡೆಯಬೇಕೆನ್ನುವುದು ನನ್ನ ಅನಿಸಿಕೆ. ಬೀದಿಯಲ್ಲಿ ಚರ್ಚೆಯಾದರೆ ಜಗಳದ ಸ್ವರೂಪ ಪಡೆಯುತ್ತದೆ. ಆದರೆ ವಿಶ್ವವಿದ್ಯಾಲಯಗಳಂತಹ ಕೇಂದ್ರಗಳಲ್ಲಿ ಎರಡೂ ಪಕ್ಷದವರು ಗೌರವಯುತವಾಗಿ ಚರ್ಚಿಸುವಂತಾಗಬೇಕು ಎಂದು
ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ ಮೂರ್ತಿ ಹೇಳಿದ್ದಾರೆ.

ಸ್ವರ್ಣರಶ್ಮಿ ಟ್ರಸ್ಟ್ , ಶ್ರೀಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿಯ ಹಾಗೂ ಕುವೆಂಪು ವಿವಿಯ ಆಶ್ರಯದಲ್ಲಿ ನವೆಂಬರ್ 18 ರಂದು ಏರ್ಪಡಿಸಿದ್ದ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ “ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಯಾವುದೇ ಚರ್ಚಾಸ್ಪದ ವಿಚಾರಗಳ ಬಗ್ಗೆ ಆರಂಭಿಸುವಾಗ ಪೂರ್ವಪಕ್ಷ ,ಉತ್ತರ ಪಕ್ಷ ಎಂಬುದಿರುತ್ತದೆ.
ಅಂತಹ ಸಂರ್ದರ್ಭದಲ್ಲಿ ವಿಷಯ ಮಂಡಿಸಿ ಚರ್ಚೆ ನಡೆಸುವುದು ಭಾರತೀಯರಲ್ಲಿ ರೂಢಿಗತವಾಗಿ ಬಂದಿದೆ. ನಮ್ಮ ಭಾರತೀಯ ಜನ ಸಂಸ್ಕೃತಿ ಶ್ರೇಷ್ಠವಾಗಿರುವುದು ಈ ಕಾರಣದಿಂದ. ಅಷ್ಟೇ ಅಲ್ಲ‌ ನಮ್ಮ ಪೂರ್ವಿಕರು ನಿರೀಶ್ವರವಾದಿಗಳೊಂದಿಗೂ ಚರ್ಚೆ ನಡೆಸಿಕೊಂಡೇ ಬಂದ್ದಿದ್ದಾರೆ. ಎಂದು ಪ್ರೊ.ಶರತ್ ಅನಂತಮೂರ್ತಿ ನುಡಿದರು.
ಇಂತಹ ಗಹನವಾದ ವುಚಾರ ಸಂಕಿರಣದಲ್ಲಿ ಗೀತೆ ಹಾಗೂ ಅಪರಾಧ ನಿಯಂತ್ರಣ, ಮನಃಶಾಸ್ತ್ರ ಇವುಗಳ
ಆಂತರಿಕ ಸಂಬಂಧಗಳ ಬಗ್ಗೆ ಚರ್ಚೆ
ಏರ್ಪಡಿಸುವ ಮುನ್ನ ಸ್ವಾಮೀಜಿಗಳಲ್ಲಿ ನನ್ನ ನಮ್ರ ಸಲಹೆ ಎಂದರೆ ಸಲಹೆಯೆಂದರೆ ನಾವೀಗ ಆಧುನಿಕ ಭಾರತದಲ್ಲಿದ್ದೇವೆ ಆದ್ದರಿಂದ ಗಾಂಧೀಜಿ ಮತ್ತು ಗೀತೆಯ ಬಗ್ಗೆ ಅವರ ಸಮರ್ಥನೆ,
ಮತ್ತು ಅಂಬೇಡ್ಕರ ಹಾಗೂ ಅವರ ಗೀತೆಯ ಸಮರ್ಥನೆ ಈ ಎರಡೂ
ವಿಷಯಗಳ ಬಗ್ಗೆ ಒಂದು ಅವಧಿಯನ್ನ ಇಂತಹ ವಿಚಾರ ಸಂಕಿರಣದಲ್ಲಿ ಮೀಸಲಿಡಬೇಕು
ಎಂದು ಕೋರಿದರು.
ಅದೇ ಸಂದರ್ಭದಲ್ಲಿ ವಿವಿಯ ಆವರಣದ ಹೊರಗಡೆ ವಿಚಾರ ಸಂಕಿರಣದ ವಿರುದ್ಧವೆದ್ದ ಪ್ರತಿಭಟನಾಕಾರರ ಧ್ವನಿಯನ್ನೂ
ಪ್ರಸ್ತಾಪಿಸಿ ಆ ಮಿತ್ರರೊಡನೆ ತಾವು
ಮುಕ್ತವಾಗಿ ಮಾತನಾಡುವುದಾಗಿ
ಹೇಳಿದರು.
ಶ್ರೀಭಗವದ್ಗೀತಾ ಅಭಿಯಾನ ಕೈಗೊಂಡಿರುವ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ
ಶ್ರೀ ಗಂಗಾಧರೇಂದ್ರ ಸರಸ್ವತಿ‌ ಮಹಾಸ್ವಾಮಿಗಳು ದಿಕ್ಸೂಚಿ ಭಾಷಣ ಮಾಡಿದರು.

ಸಮಾಜದಲ್ಲಿ ವರ್ಷವರ್ಷವೂ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.
ಅದರಲಗಲೂ ಮಹಿಳೆಯರ ,ಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣಗಳು ಅಧಿಕವಾಗಿವೆ
ಈ ಸಂದರ್ಭದಲ್ಲಿ ಅಪರಾಧಗಳ ಬಗ್ಗೆ ಗೀತೆಯಲ್ಲಿ ಅವುಗಳಿಗೆ ಕಾರಣ, ಪರಿಹಾರಗಳನ್ನ ಕಂಡುಕೊಳ್ಳಬಹುದಾಗಿದೆ.
ಹಮ್ಮಿಕೊಂಡಿರುವ ವಿಚಾರಸಂಕಿರಣದಲ್ಲಿ ತಜ್ಞರು ಈ ಬಗ್ಗೆ ವಿಚಾರದ ಬೆಳಕು ಚೆಲ್ಲಲಿದ್ದಾರೆ‌ . ಕುವೆಂಪು ವಿವಿಯ
ಕುಲಪತಿಗಳಾದ ಶರತ್ ಅನಂತಮೂರ್ತಿ ಅವರು ಯಾವುದೇ ಶರತ್ತು ವಿಧಿಸದೇ ಸಂಕಿರಣಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಈಗ ಶರತ್ ಕಾಲ ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು.
ವಿಧಾನ ಪರಿಷತ್ತಿನ ಸದಸ್ಯ ಹಾಗೂ ಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿದರು. ನಾವು ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಹೆಸರು ಮಾಡಿದ್ದೇವೆ. ಆದರೆ ಅದರ ಜೊತೆಯಲ್ಲೇ ವ್ಯಕ್ತಿತ್ವ ನಿರ್ಮಾಣವನ್ನ ಮರೆತಿದ್ದೇವೆ.
ಪೂಜ್ಯ ಸ್ವಾಮೀಜಿಯವರು ತಿಳಿಸಿದಂತೆ ಭಗವದ್ಗೀತೆಗೂ ‌ನಮ್ಮ ಜೀವನ ಶೈಲಿಗೂ ಸಂಬಂಧವಿದೆಯೆ? ಗೀತೆಯಲ್ಲಿನ ಯಾವ ಅಂಶಗಳು ನಮ್ಮ ಜೀವನಕ್ಕೆ ಬೆಸೆಯುತ್ತವೆ ಎಂಬುದನ್ನ ತಿಳಿಯಬೇಕಿದೆ. ಅದರಿಂದ ಎಲ್ಲರೂ ಒಳ್ಳೆಯವರಾಗುತ್ತೇವೆ ಎಂದು ಡಿ.ಎಸ್ .ಅರುಣ್ ನುಡಿದರು.

Kuvempu University ಸಮಾರಂಭದಲ್ಲಿ ಕುವೆಂಪು ವಿವಿಯ ಹಣಕಾಸು ಅಧಿಕಾರಿ ಹೆಚ್.ಎನ್‌.ರಮೇಶ್, ಕುಲ ಸಚಿವ ಹೆಚ್.ಎಲ್.ಮಂಜುನಾಥ್,
ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ ಜಿ.ಭಟ್.
ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ‌ಭಗವದ್ಗೀತೆ ಮತ್ತು ಮನಃಶಾಸ್ತ್ರ ವಿಷಯದ ಬಗ್ಗೆ
ಶಿವಮೊಗ್ಗದ ಖ್ಯಾತ ಮನೋವೈದ್ಯ
ಡಾ.ಕೆ.ಆರ್.ಶ್ರೀಧರ್ ಮಾತನಾಡಿದರು.ಭೋಜನಾನಂತರದ ಅವಧಿಯಲ್ಲಿ ಬೆಂಗಳೂರು
ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ವಿಕ್ರಂ ಫಡ್ಕೆ, ಕೆಎಸ್ಆರ್ ಪಿ ಯ ಹಿರಿಯ ಪೊಲೀಸ್ ಅಧಿಕಾರಿ ಡಾ.ರಾಮಕೃಷ್ಣ ಮುದ್ದೆಪಾಲ್ ಮತ್ತು ವಿದ್ವಾಂಸ ರಾಮಚಂದ್ರ ಭಟ್ ,ಕೋಟೆಮನೆ ತಮ್ಮ‌ ವಿದ್ವತ್ ಪೂರ್ಣ ಪ್ರಬಂಧಗಳನ್ನ ಮಂಡಿಸಿದರು. ನಂತರ ಪ್ರಶ್ನೋತ್ತರ ಅವಧಿಯಲ್ಲಿ ವಿದ್ಯಾರ್ಥಿವೃಂದ ಆಸಕ್ತಯಿಂದ ಪಾಲ್ಗೊಂಡಿತ್ತು.

ನವೆಂಬರ್ 20. ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಭಜನೆ ಮತ್ತು ಸಂಗೀತ ಸೇವೆ

0

ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ 141ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ನ. 20ರಂದು ಸಂಜೆ 6:30ಕ್ಕೆ ಪುಣ್ಯಾಶ್ರಮದ ಆವರಣದಲ್ಲಿ ಆಯೋಜಿಸಲಾಗಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು. ನವುಲೆಯ ಅರ್ಪತಾ ಭಜನಾ ಮಂಡಳಿ ಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ.

ದಾವಣಗೆರೆ ಆಶ್ರಮದ ಗಾಯಕ ಉದಯ ರಾಣೆಬೆನ್ನೂರು ಅವರಿಂದ ಸಂಗೀತ ಸೇವೆ ನಡೆಯಲಿದೆ. ಮಹಂತೆಶ್ ಕಿರಟಗೆರೆ ಅವರ ಹಾರ್‍ಮೋನಿಯಂ ಸೋಲೊ, ದಿತ್ಯ ಜಿಗಳಿ ಅವರ ತಬಲ, ರಾಮಣ್ಣ ಭಜಂತ್ರಿ ಶಹನಾಯ, ವೀರಭದ್ರಯ್ಯ ಶಾಸ್ತ್ರಿಗಳಿಂದ ವೇದಘೋಷ ಹಾಗೂ ಹಿರಿಯ ತಬಲ ಕಲಾವಿದರಾದ ಪಂ. ಆರ್. ತುಕಾರಾಮ್ ರಂಗಧೋಳ್ ಅವರ ತಬಲಸೇವೆ ಹಾಗೂ ಸಿದ್ದಣ್ಣ ಬಡಿಗಾರ್ ಅವರು ಆರ್‍ಮೋನಿಯಂ ನೊಂದಿಗೆ ಸಾಥ್ ನೀಡಲಿದ್ದಾರೆ.

ರೇವಣ್ಣ ಸಿದ್ದಯ್ಯ ಶಾಸ್ತ್ರಿ ನಿರೂಪಿಸಲಿದ್ದಾರೆ.

Rotary Club Shivamogga ಶಿವಮೊಗ್ಗ ಪೂರ್ವ ರೋಟರಿ ಕ್ಲಬ್ ಗೆ ವಲಯ ಚಾಂಪಿಯನ್ ಪಟ್ಟ

0

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನ.23ರಂದು ಶೃಂಗೇರಿಯಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಯಾಗಿದೆ.
ರೋಟರಿ ಕ್ಲಬ್ ಕೋಣಂದೂರು ವತಿಯಿಂದ ಕೋಣಂದೂರಿನ ವಿನಾಯಕ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ್ದ ರೋಟರಿ ಕಲೋತ್ಸವ 2025 ಗಾನ, ನೃತ್ಯ, ಕಲರವ ಸಂಬಂಧಿಸಿದ ವಲಯ 11ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯಮಟ್ಟದ ಚಾಂಪಿಯನ್ ಆಗಿದೆ.

ಜನಪದ ಗೀತೆಯಲ್ಲಿ ಶೈಲಜಾ ತಿರುಮಲೇಶ್ ಪ್ರಥಮ ಸ್ಥಾನ, ಸೋಲೋ ಡ್ಯಾನ್ಸ್ ನಲ್ಲಿ ಶಶಿಕಾಂತ್ ನಾಡಿಗ್ ಪ್ರಥಮ ಸ್ಥಾನ, ಸೋಲೋ ಡ್ಯಾನ್ಸ್ ಆನೆಟ್‌ನಲ್ಲಿ ಕೀರ್ತನಾ ಪ್ರಥಮ ಸ್ಥಾನ, ಯುಗಳ ಗೀತೆಯಲ್ಲಿ ಜಿ.ವಿಜಯಕುಮಾರ್ ಮತ್ತು ಶೈಲಜಾ ತಿರುಮಲೇಶ್ ಪ್ರಥಮ ಸ್ಥಾನ, ಏಕವ್ಯಕ್ತಿ ಅಭಿನಯ ಸ್ಪರ್ಧೆಯಲ್ಲಿ ಡಾ. ಅರುಣ್ ಪ್ರಥಮ ಸ್ಥಾನ, ಗ್ರೂಪ್ ಡ್ಯಾನ್ಸ್ ನಲ್ಲಿ ಕ್ಲಬ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್, ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಡಾ. ಅರುಣ್, ಶಶಿಕಾಂತ್ ನಾಡಿಗ್, ಜಿ.ವಿಜಯಕುಮಾರ್, ಸತೀಶ್ ಚಂದ್ರ, ಬಿಂದು ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Rotary Club Shivamogga ಕೋಣಂದೂರು ಕ್ಲಬ್ ಅಧ್ಯಕ್ಷ ಸದಾಶಿವ, ಸಾಂಸ್ಕೃತಿಕ ಸಮಿತಿಯ ಚೇರ್ಮನ್ ಸತೀಶ್ ಚಂದ್ರ, ಸುಮತಿ ಕುಮಾರಸ್ವಾಮಿ, ಅರುಣ್ ದೀಕ್ಷಿತ್, ಎಚ್.ಡಿ.ವಿನಯ್, ಎಂ.ಬಿ.ಲಕ್ಷ್ಮಣ ಗೌಡ, ಎಚ್.ಎಂ.ಸುರೇಶ್, ಜೆ.ರಾಧಾಕೃಷ್ಣ, ಭರತ್‌ಕುಮಾರ್ ಕೂಡ್ಲು, ಜಿ.ಕಿರಣ್‌ಕುಮಾರ್, ಡಾ. ರಾಜನಂದಿನಿ ಕಾಗೋಡು, ಜೆ.ಪಿ.ಕಿರಣ್, ಬಿ.ಟಿ.ಈಶ್ವರಪ್ಪ ಹಾಜರಿದ್ದರು.

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ, ಶಿವಮೊಗ್ಗದ ಗುಡ್ ಲಕ್ ಆರೈಕೆ ಕೇಂದ್ರದ ಸೇವೆ ಶ್ಲಾಘನೀಯ- ಕೆ.ಫಾಲಾಕ್ಷ

0

Rotary Club Shimoga ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗುಡ್‌ಲಕ್ ಆರೈಕೆ ಕೇಂದ್ರದ ಕಾರ್ಯ ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸೇವಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ಅಶಕ್ತರು, ಅನಾಥರು ಹಾಗೂ ಹಿರಿಯರನ್ನು ಆರೈಕೆ ಮಾಡಿ ಪೋಷಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ನಮ್ಮ ಜೀವನದಲ್ಲಿ ಪುಣ್ಯ ಪ್ರಾಪ್ತಿ ಜೊತೆಗೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.
ಇಂದು ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿವೆ. ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿದ್ದೇವೆ. ರೋಟರಿ ಸಂಸ್ಥೆಗಳ ಮುಖಾಂತರ ಪ್ರಪಂಚಾದ್ಯಂತ ಮಾನವೀಯ ಸೇವೆಗಳು ನಿರಂತರವಾಗಿ ನಡೆದು ಬರುತ್ತಿವೆ. ಅದರಲ್ಲೂ ಇಂತಹ ಅನಾಥ ಆರೈಕೆ ಕೇಂದ್ರಗಳಿಗೆ ಮಾಡಿದ ದಾನದಿಂದ ಅದರ ಹತ್ತು ಪಟ್ಟು ಲಾಭ ಫಲಿಸುತ್ತದೆ ತಿಳಿಸಿದರು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಗುಡ್‌ಲಕ್ ಆರೈಕೆ ಕೇಂದ್ರದ ಸೇವೆಗಳ ಬಗ್ಗೆ ಶ್ಲಾಘಿಸಿದರು. ರೋಟರಿ ಉತ್ತರ ಸದಸ್ಯ ದತ್ತಾತ್ರಿ ಅವರು ಆರೈಕೆ ಕೇಂದ್ರಕ್ಕೆ 25,000 ರೂ. ಬೆಲೆ ಬಾಳುವ ಯುಪಿಎಸ್ ಬ್ಯಾಟರಿ ಸಂಪೂರ್ಣ ಸೆಟ್ ದೇಣಿಗೆ ನೀಡಿದರು.
ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ್ ಐತಾಳ್ ಅವರು ದಾನಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ, ಗುಡ್‌ಲಕ್ ಆರೈಕೆ ಕೇಂದ್ರ ವ್ಯವಸ್ಥಿತವಾಗಿ ನಡೆಯಲು ರೋಟರಿ ಸದಸ್ಯರು ಪ್ರಮುಖ ಕಾರಣರಾಗಿದ್ದಾರೆ. ಪ್ರತಿ ವರ್ಷ ನಿತ್ಯ ಅನ್ನಪೂರ್ಣೇಶ್ವರಿ ಪ್ರಸಾದ ಯೋಜನೆಗೆ ಪ್ರಾರಂಭದಿಂದಲೂ ಸಹಕಾರ ನೀಡುತ್ತ ಬಂದಿದ್ದಾರೆ. ಸಾಕಷ್ಟು ದಾನಿಗಳು ಕೈಜೋಡಿಸಿದ್ದಾರೆ. ಅವರ ಸೇವೆ ನಿತ್ಯ ಸ್ಮರಣೀಯ ಎಂದು ತಿಳಿಸಿದರು.
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ರೋಟರಿ ಸಂಸ್ಥೆಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸೇವಾ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ರೇಖಾ ಪಾಲಾಕ್ಷ, ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಕಾರ್ಯದರ್ಶಿ ಶಿವಕುಮಾರ್, ಸರ್ಜಾ ಜಗದೀಶ್, ಜಿ.ವಿಜಯಕುಮಾರ್, ಎಸ್.ದತ್ತಾತ್ರಿ, ವಾರಿಜಾ ಜಗದೀಶ್, ರವೀಂದ್ರನಾಥ ಐತಾಳ್, ರಮೇಶ್, ವೆಂಕಟೇಶ್, ಉಷಾ ವೆಂಕಟೇಶ್, ಕಡಿದಾಳ್ ಸದಾನಂದ, ಶ್ರಾವಣ, ಶಾರದಾ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು

ಇ-ಪೌತಿ ಖಾತೆ ಬದಲಾವಣೆ, ಸರ್ಕಾರದ ಬಹುಮುಖ್ಯ ಸೂಚನೆ

0

ಶಿವಮೊಗ್ಗ ತಾಲೂಕಿನಲ್ಲಿ ಇ-ಪೌತಿ ಖಾತೆ ಬದಲಾವಣೆಯು ನಡೆಯುತ್ತಿದ್ದು, ಅದರಲ್ಲಿ ವಂಶವೃಕ್ಷ ಮಾಡುವ ಸಂದರ್ಭದಲ್ಲಿ ಖಾತೆದಾರರು ಪೌತಿಯಾದ ವಾರಸುದಾರರ ಹೆಸರನ್ನು ಕೈಬಿಟ್ಟು ವಂಶವೃಕ್ಷ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದೆ.

ಈಗಾಗಲೇ ವಾರಸುದಾರರ ಹೆಸರನ್ನು ಕೈಬಿಟ್ಟು ವಂಶವೃಕ್ಷ ಕೋರಿ ಸಲ್ಲಿಸಿರುವ ಅರ್ಜಿದಾರರ ವಿರುದ್ಧ ಭಾರತೀಯ ನಾಗರೀಕ ಸುರಕ್ಷ ಸಂಹಿತ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿರುತ್ತದೆ.

ಇನ್ನು ಮುಂದೆ ಯಾರಾದರೂ ಪೌತಿ ವಾರಸುದಾರರ ಹೆಸರನ್ನು ಕೈಬಿಟ್ಟು ವಂಶವೃಕ್ಷಕ್ಕೆ ಅರ್ಜಿಯನ್ನು ಸಲ್ಲಿಸಿರುವುದು ಹಾಗೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ದಾಖಲಾತಿಯನ್ನು ಪಡೆಯುವುದು ಕಂಡುಬಂದಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ ಕಾಯ್ದೆಯ ಹಾಗೂ ಚಾಲ್ತಿಯಲ್ಲಿರುವ ಇತರೆ ಅಧಿನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ತಾಲೂಕು ತಹಶೀಲ್ದಾರ್ ರಾಜೀವ್ ವಿ.ಎಸ್. ತಿಳಿಸಿದ್ದಾರೆ

Department of Social Welfare ಇಗ್ನೈಟ್ ಮೈಂಡ್ & ಇಗ್ನೆಂಟ್ ಪಾಸಿಟಿವಿಟಿ- ಆನ್ ಲೈನ್ ಪಾಡ್ ಕಾಸ್ಟ್ ಯಶಸ್ವಿ ಕಾರ್ಯಕ್ರಮ

0

Department of Social Welfare ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ನ.14 ರಂದು ಇನ್‌ಸ್ಪೈರ್ ಎಂಬ ವಿನೂತನ ಕಾರ್ಯಕ್ರಮದಡಿ ಇಗ್ನೆಂಟ್ ಮೈಂಡ್ & ಇಗ್ನೆಂಟ್ ಪಾಸಿಟಿವಿಟಿ ಎಂಬ ಘೋಷವಾಕ್ಯದೊಂದಿಗೆ ಆನ್‌ಲೈನ್ ಪಾಡ್‌ಕಾಸ್ಟ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ 32 ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು 150 ವಿದ್ಯಾರ್ಥಿ ನಿಲಯಗಳ 5 ನೇ ತರಗತಿಯಿಂದ ಪದವಿ/ಇಂಜಿನಿಯರಿಂಗ್/ಸ್ನಾತಕೋತ್ತರ ಓದುತ್ತಿರುವ ಸುಮಾರು 20 ರಿಂದ 22 ಸಾವಿರ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಶ್ರೀನಾಥ ರತ್ನಕುಮಾರ್‌ರವರು ಉಪಗ್ರಹದ ಉಪಯೋಗಗಳು, ಬಾಹ್ಯಾಕಾಶ ಕಲ್ಪನೆ ಮತ್ತು ವಿಸ್ತಾರ, ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಏನೆಲ್ಲಾ ಬೇಕು, ರಾಕೆಟ್ ವಿಜ್ಞಾನದ ಇತಿಹಾಸ, ಬಾಹ್ಯಾಕಾಶ ಉಡುಪುಗಳು ಮತ್ತು ಅಪಘಾತಗಳು, ದೇಹದ ಮೇಲೆ ಉಂಟಾಗುವ ಪರಿಣಾಮಗಳು, ಅಂತಿಕ್ಷ ಯಾನದ ಆಹಾರ, ಅಂತರಿಕ್ಷದ ಕೃಷಿ, ಯಾನದ ತರಬೇತಿ, ನೌಕೆಗಳ ಅಭಿವೃದ್ದಿ, ರಾಕೆಟ್‌ಗಳ ಮರುಬಳಕೆ, ಬಾಹ್ಯಾಕಾಶ ತಂತ್ರಜ್ಞಾನ ಬೆಳೆದು ಬಂದ ದಾರಿ, ಇಸ್ರೋ, ನಾಸಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿವರಣೆ ನೀಡಿದರು.

Department of Social Welfare ಈ ಆನ್‌ಲೈನ್ ಪಾಡ್‌ಕಾಸ್ಟ್ ವಿಡಿಯೋ ಸಂವಾದದಲ್ಲಿ ಜಿ.ಪಂ ಸಿಇಓ ಹೇಮಂತ್ ಎನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರೀತಿ ಭಾಗವಹಿಸಿದ್ದರು.

Bapuji Institute of Hi-Tech Education ವಾಸ್ತವಿಕ ಅರಿವು ಭವಿಷ್ಯದ ನಿರೀಕ್ಷೆ ವಾಣಿಜ್ಯ ಕ್ಷೇತ್ರದವರಿಗೆ ಅವಶ್ಯ,- ಪ್ರೊ.ಎಂ.ಪಿ.ರೂಪಶ್ರೀ

0

Bapuji Institute of Hi-Tech Education ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವವರಿಗೆ ಔದ್ಯಮಿಕ ಕ್ಷೇತ್ರದ ವಸ್ತುಸ್ಥಿತಿ ಹೇಗಿದೆ ಭವಿಷ್ಯದಲ್ಲಿ ಏನಾಗಬಹುದು ಎಂಬ ಅರಿವು ಅವಶ್ಯ ಇದಕ್ಕಾಗಿ ವಾಣಿಜ್ಯೋತ್ಸವಗಳು ಪೂರಕ ಎಂದು ಧ ರಾ ಮ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ರೂಪಶ್ರೀ ಎಂ ಪಿ ಅಭಿಪ್ರಾಯ ಪಟ್ಟರು.

ಲೇಕ್ ವ್ಯೂ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಕಾಮರ್ಸ್ ವಿಭಾಗದ ವತಿಯಿಂದ ಏರ್ಪಾಡಾಗಿದ್ದ ರಾಜ್ಯಮಟ್ಟದ 7ನೇ ವಾಣಿಜ್ಯೋತ್ಸವ ಉದ್ಘಾಟಿಸಿ ಮಾತನಾಡುತ್ತಾ ಒಂದೇ ಸ್ಥಿತಿಯನ್ನು ವಿಜ್ಞಾನ ರಂಗದವರು ಗಮನಿಸುವುದಕ್ಕೂ ವಾಣಿಜ್ಯ ರಂಗದವರು ಗಮನಿಸುವುದಕ್ಕೂ ವ್ಯತ್ಯಾಸವಿದ್ದು ವಾಣಿಜ್ಯೋದ್ಯಮದ ಭವಿಷ್ಯದ ಚಿಂತನೆಗಳನ್ನು ಮಾದರಿಗಳ ಮೂಲಕ ಪ್ರದರ್ಶಿಸುತ್ತಿರುವುದು ಉಪಯುಕ್ತವಾಗಿದೆ. ಸ್ವತಹ ಮಾಡಬೇಕೆಂಬ ಉತ್ಕಟತೆಗೆ ಮಾದರಿಗಳ ನಿರ್ಮಾಣ ಹಾಗೂ ಭಿತ್ತಿಪತ್ರಗಳ ರಚನೆ ಸ್ಪೂರ್ತಿ ದಾಯಕವಾಗಿದ್ದು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬರೀ ಪದವಿ ಸಾಲದು ಪ್ರತಿಭೆಯೂ ಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿ ಶ್ರೀಮತಿ ನೀಲು ಸಿದ್ಧಾರ್ಥ ಮಾತನಾಡಿ ಉತ್ಪಾದನಾ ಕ್ಷೇತ್ರಕ್ಕೆ ವಿಜ್ಞಾನ ತಂತ್ರಜ್ಞಾನ ಬೇಕಾದರೆ ಅವುಗಳ ಮಾರುಕಟ್ಟೆಗೆ ವಾಣಿಜ್ಯ ಕ್ಷೇತ್ರ ಬೇಕು ಎರಡಕ್ಕೂ ನಿರ್ವಹಣಾ ಜ್ಞಾನ ಅವಶ್ಯ, ಸಾಧನೆಗಾಗಿ ವ್ಯಕ್ತಿತ್ವ ಗಟ್ಟಿಗೊಳಿಸಿಕೊಳ್ಳಲು ಸ್ವಾಮಿ ವಿವೇಕಾನಂದರಂತವರ ಸಂದೇಶಗಳನ್ನು ಅಳವಡಿಸಿಕೊಂಡು ಸ್ಪಷ್ಟ ಗುರಿಯೊಂದಿಗೆ ಸೂಕ್ತ ಮಾರ್ಗದಲ್ಲಿ ಸಾಗಬೇಕು ಎಂದರಲ್ಲದೆ ತ್ಯಾಜ್ಯಗಳ ಪುನರ್ಬಳಕೆ ಬಗ್ಗೆ ವಿನೂತನ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.

ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ನುಡಿಗಳನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಪ್ರಸಕ್ತ ವಾಣಿಜ್ಯೋತ್ಸವದಲ್ಲಿ ಹಿಂದಿನ ಆಚರಣೆಗಳನ್ನು ಪರಾಮರ್ಶಿಸಿ ಹೊಸದನ್ನು ಅಳವಡಿಸಿ ಮಾಡಲಾಗುತ್ತಿದ್ದು ಹಳೆಯ ವಿದ್ಯಾರ್ಥಿಗಳನ್ನು ಹೊಸಬರಿಗೆ ಮಾರ್ಗದರ್ಶಕರಾಗಿ ತೀರ್ಪುಗಾರರಾಗಿ ಆಹ್ವಾನಿ ಸಲಾಗಿದೆ ಎಂದರು.

ಅಧ್ಯಕ್ಷೀಯ ನುಡಿಗಳನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ ವೀರಪ್ಪನವರು ಮಹಾನಗರಗಳ ಪ್ರತಿಷ್ಠಿತ ವಾಣಿಜ್ಯ ಕಾಲೇಜುಗಳಲ್ಲೂ ಈ ರೀತಿಯ ವಾಣಿಜ್ಯ ಮಾದರಿಗಳ ಮೇಳ ನಡೆಯುತ್ತಿಲ್ಲ ಎಂದರಲ್ಲದೆ ವಾಣಿಜ್ಯೋದ್ಯಮ ಕ್ಷೇತ್ರದ ಬೆಳವಣಿಗೆಗಳ ಜ್ಞಾನಕ್ಕಾಗಿ ಮೊಬೈಲ್ ಮುಂತಾದ ತಂತ್ರಜ್ಞಾನ ಬಳಸುವುದರೊಂದಿಗೆ ಗ್ರಂಥಾಲಯ ಹಾಗೂ ವೃತ್ತ ಪತ್ರಿಕೆಗಳ ಓದನ್ನೂ ಬಳಸಿಕೊಳ್ಳಬೇಕು ಎಂದರು.

Bapuji Institute of Hi-Tech Education ವಿದ್ಯಾರ್ಥಿಗಳಾದ ತರುಣ್ ಹಾಗೂ ಪ್ರಶಾಂತ್ ವಾಣಿಜ್ಯೋತ್ಸವ ಕುರಿತಾಗಿ ನಿರ್ಮಿಸಿದ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಯಿತು. ಎಂಬಿಎ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ನಿರೂಪಣೆಯನ್ನು ಭೂಮಿಕಾ ಜಿ ಎನ್, ಸಿಂಚನಾ ವಿ ಮಾಡಿದರೆ ಪ್ರಾರ್ಥನೆಯನ್ನು ದೀಕ್ಷಾ ಮತ್ತು ತಂಡದವರು ಹಾಡಿದರು. ಅತಿಥಿಗಳ ಪರಿಚಯವನ್ನು ಕೆ ಜ್ಯೋತಿ, ಸ್ಪೂರ್ತಿ ಎಸ್, ರಾಘವ ಜಿ ಎನ್ ಮಾಡಿದರು. ಪ್ರೊ. ನಾಗರಾಜ್ ಎಂ ಎಸ್ ವಂದನೆಗಳನ್ನು ಸಲ್ಲಿಸಿದರು. ರಾಜ್ಯದ ವಿವಿದೆಡೆಗಳಿಂದ 200 ಕ್ಕೂ ಹೆಚ್ಚು ವಾಣಿಜ್ಯ ವಿದ್ಯಾರ್ಥಿಗಳು ಭಾಗವಹಿಸಿ ವಿನೂತನ ವಾಣಿಜ್ಯ ಮಾದರಿಗಳನ್ನು ಪ್ರದರ್ಶಿಸಿದರು.

ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ,ಹಿರಿಯ ಪತ್ರಕರ್ತರು-

MESCOM ಸಾಗರ ಮೆಸ್ಕಾಂ ಉಪ ಕಛೇರಿಯಲ್ಲಿ ನವೆಂಬರ್ 20 ರಂದು ಜನಸಂಪರ್ಕ ಸಭೆ

0

MESCOM ಸಾಗರ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ನ 20 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9448289516.

Shivamogga Skating Association ರಾಷ್ಟ್ರೀಯ ಸಿಬಿಎಸ್ಸಿ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಈರ್ವರು ಪದಕ ವಿಜೇತರು

0

Shivamogga Skating Association ನವದೆಹಲಿಯಲ್ಲಿ ನಡೆಯುತ್ತಿರುವ ಸಿಬಿಎಸ್‌ಸಿ ಸ್ಕೇಟಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ಸ್ಕೇಟಿಂಗ್ ಅಸೋಸಿಯೇಷನ್ ನ ಇಬ್ಬರು ಕ್ರೀಡಾಪಟುಗಳು ಬೆಳ್ಳಿ ಹಾಗೂ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿ, ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆಯ ಅದ್ವಿಕಾ ನಾಯರ್ ಅವರು 1000 ಮೀಟರ್_ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದಿದ್ದಾರೆ.

ಅದ್ವಿಕಾ ಅವರು ಆರ್ ಎಲ್ ರಂಜಿತ್ ಹಾಗೂ ಗಾಯತ್ರಿ ಅವರ ಪುತ್ರಿ.
ಅಂತೆಯೇ ವೇದಾಂಶ್ ಗಣೇಂದ್ರ ಪರಡಿ ಅವರು ಒನ್ ಲ್ಯಾಪ್ ರೋಡ್ ರೇಸ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ವೇಧಾಂಶವು ಅವರು ಗಣೇಂದ್ರ ಪರಡಿ ಹಾಗೂ ಶಾಲಿನಿ ಪರಡಿ ಅವರ ಪುತ್ರ.
ಇಬ್ಬರೂ ಕ್ರೀಡಾಪಟುಗಳು ತರಬೇತುದಾರರಾದ ವಿಶ್ವಾಸ್ ಹಾಗೂ ಆತೀಶ್ ಗರಡಿಯಲ್ಲಿ ಕಲಿಯುತ್ತಿದ್ದಾರೆ.

Shivamogga Skating Association ಈ ಕ್ರೀಡಾಪಟುಗಳು ಶಿವಮೊಗ್ಗದ ಪೋದಾರ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ.
ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಪದಾಧಿಕಾರಿಗಳಾದ ಎಂ ರವಿ, ಗಜೇಂದ್ರ ಸ್ವಾಮಿ, ಕೆ. ನಾಗರಾಜ ನಾಯ್ಡು ಹಾಗೂ ಇತರರು ಅಭಿನಂದಿಸಿದ್ದಾ