Wednesday, February 11, 2026
Wednesday, February 11, 2026
Home Blog Page 85

B.Y.Raghavendra ಭಗವದ್ಗೀತಾ ಅಭಿಯಾನದ ಪೂರ್ವಸಿದ್ಧತೆ ಚರ್ಚಿಸಿದ ಸಂಸದ ಬಿ.ವೈ.ರಾಘವೇಂದ್ರ

0

B.Y.Raghavendra ಶ್ರೀಭಗವದ್ಗೀತಾ ಅಭಿಯಾನ -2025.
ಸಮಿತಿಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನ ಭೇಟಿ ಮಾಡಿ
ಇದುವರೆಗೂ ಆಗಿರುವ ಸಿದ್ಧತೆಗಳ ಬಗ್ಗೆ ಸಂಸದರ ಗಮನಕ್ಕೆ ತರಲಾಯಿತು.
ಸಂಸದ ಬಿ.ವೈ.ರಾಘವೇಂದ್ರ ಅವರು ಗೀತಾಭಿಮಾನಿಗಳಿಗೆ ತುಂಬುಹೃದದಯದ ಸ್ವಾಗತ ಕೋರಿ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಭಗವದ್ಗೀತಾ ಮಹಾಸಮರ್ಪಣೆ ಕಾರ್ಯವು ಒಂದು ಭಾಗ್ಯ ಎಂದು ಹೇಳಿದರು.
B.Y.Raghavendra ಚರ್ಚೆಯಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಧ್ಯಕ್ಷ ಅಶೋಕ‌. ಜಿ .ಭಟ್, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ.
ಸ್ವಾಗತ ಸಮಿತಿಯ ಕ.ಜಿ.ಮಂಜುನಾಥ ಶರ್ಮ, ಮಾಧ್ಯಮ ಸಂವಹನ ಸಮಿತಿಯ ಡಾ.ಸುಧೀಂದ್ರ
ಉಪಸ್ಥಿತರಿದ್ದರು.

ಬಂದಗದ್ದೆಯಲ್ಲಿ ಉಚಿತ ನೇತ್ರ ತಪಾಸಣೆ. ಶಸ್ತ್ರಚಿಕಿತ್ಸೆಗೆ 56 ಮಂದಿಗೆ ಸಲಹೆ

0

ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಶಿಬಿರ ಸಾಗರದ ಬಂದಗದ್ದೆ ಗ್ರಾಮ, ಶಿವಮೊಗ್ಗ ಜಿಪಂ, ತಾಲ್ಲೂಕು ಪಂಚಾಯತ್, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಶಿವಮೊಗ್ಗ, ಲಯನ್ಸ್ ಕ್ಲಬ್ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಗರದ ಬಂದಗದ್ದೆ ಗ್ರಾಮದಲ್ಲಿ ನ. 20 ರಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಶಿಬಿರದಲ್ಲಿ ವಿವಿಧ ಗ್ರಾಮಗಳಿಂದ ಬಂದ ಸುಮಾರು 250 ಮಂದಿ ರೋಗಿಗಳು ನೇತ್ರ ತಪಾಸಣೆಗಾಗಿ ಭಾಗವಹಿಸಿದರು. ನೇತ್ರ ತಜ್ಞರಿಂದ ಸಮಗ್ರ ದೃಷ್ಟಿ ತಪಾಸಣೆ ನಡೆಯಿತು.

ಅದರಲ್ಲಿ 56 ಮಂದಿ ರೋಗಿಗಳು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು, ಮತ್ತು ಶೀಘ್ರದಲ್ಲೇ ಶಿವಮೊಗ್ಗ ಶಂಕರ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ 62 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು, ಒಟ್ಟು 260 ಜನ ನೇತ್ರ ತಪಾಸಣೆ ಮಾಡಿಸಿಕೊಂಡರು.

ಇದರಿಂದ ಅವರಿಗೆ ಉತ್ತಮ ದೃಷ್ಟಿ ಪಡೆಯಲು ಸಹಾಯವಾಯಿತು. ಕನ್ನಡಕದ ವಿತರಣೆ ದಾನಿಗಳಾದ ಲಯನ್ಸ್ ಕ್ಲಬ್ ಪ್ರಥಮ ಉಪಾಧ್ಯಕ್ಷರಾದ ಪಿಎಂಜೆಎಫ್ ಲಯನ್ ನಾಗರಾಜ್.ಈ, ವಕೀಲರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ. ಟಿ ಇವರು ಉಪಸ್ತಿತರಿದ್ದರು. ಡಾ. ಪ್ರಜಕ್ತಾ, ಕಣ್ಣಿನ ತಜ್ಞರು, ಡಾ. ಭರತ್, ಸಹಾಯಕ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಬಂದಗದ್ದೆ , ಶ್ರೀ ಸಚಿನ್, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಶ್ರೀಮತಿ ಸವಿತಾ, ಹಿರಿಯ ಮೇಲ್ವಿಚಾರಕರು, ಉಪಸ್ತಿತರಿದ್ದರು.

ಈ ಶಿಬಿರದ ಯಶಸ್ವಿ ಸಂಯೋಜನೆಯನ್ನು ಲಯನ್ ನಂದೀಶ್ ಎನ್.ಟಿ. (ಜಿಲ್ಲಾ ಸಂಯೋಜಕ – ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ, ಜಿಲ್ಲೆ 317C) ಅವರು ಶಿವಮೊಗ್ಗ ಆಪ್ಟಿಕಲ್ಸ್ ಸಹಯೋಗದೊಂದಿಗೆ ನಿರ್ವಹಿಸಿದರು.

ನವೆಂಬರ್ 28.ಶಿವಮೊಗ್ಗ ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣೆ & ಚಿಕಿತ್ಸಾ ಶಿಬಿರ

0

ಶಿವಮೊಗ್ಗ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಶಿವಮೊಗ್ಗ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317ಸಿ ಶಿವಮೊಗ್ಗ ಇದರ ವತಿಯಿಂದ ಅಂಧತ್ವ ನಿವಾರಣ ವಿಭಾಗ ಶಿವಮೊಗ್ಗ ಇವರಿಂದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಚಿಕಿತ್ಸೆ ಶಿಬಿರವನ್ನು ತುಂಗನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನ.28ರ ಸೋಮವಾರ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:30ವರೆಗೆ ಏರ್ಪಡಿಸಲಾಗಿದೆ.

ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಲು ನಂದೀಶ್ 94481 49878 ಮತ್ತು ಕುಮಾರ್ ಜಿಎಸ್ 94484 17179 ಮತ್ತು ಶಿವರಾಂ 94491 35895 ಇವರಲ್ಲಿ ಸಂಪರ್ಕಿಸಿ

ಕೆ.ರಂಗನಾಥ್ ಗೆ “ಜಿಲ್ಲಾ ಉತ್ತಮ ಸಹಕಾರಿ” ಪ್ರಶಸ್ತಿ ಪ್ರದಾನ

0

ಕೆ ರಂಗನಾಥ್ ಗೆ ಜಿಲ್ಲಾ ಉತ್ತಮ ಸಹಕಾರಿ ಪ್ರಶಸ್ತಿ ಪ್ರಧಾನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ., ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿ., ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ನಿಯಮಿತ, ಹಾಗೂ ಸಹಕಾರ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ಹೊಸನಗರ ತಾಲೂಕು ರಿಪ್ಪಿನ್ ಪೇಟೆಯಲ್ಲಿ ನಡೆದ ’72ನೇ ಸಹಕಾರ ಸಪ್ತಾಹ ‘ ಸಮಾರೋಪ ಸಮಾರಂಭದಲ್ಲಿ ಸಹಕಾರಿ ಕ್ಷೇತ್ರಗಳ ಬೆಳವಣಿಗೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿ ಸೊಸೈಟಿಯ ಖಜಾಂಚಿಗಳು ಹಾಗೂ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ಕೆ.ರಂಗನಾಥ್ ರವರಿಗೆ “ಜಿಲ್ಲಾ ಉತ್ತಮ ಸಹಕಾರಿ” ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ಮಲೆನಾಡು ಪ್ರಾಧಿಕಾರ ಅಧ್ಯಕ್ಷರು ‘ಸಹಕಾರಿ ಕ್ಷೇತ್ರದ ಭೀಷ್ಮ’ ಆರ್. ಎಂ ಮಂಜುನಾಥಗೌಡ, ರವರಿಗೂ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ‘ಸಹಕಾರಿ ರತ್ನ ‘ಎಸ್ ಕೆ ಮರಿಯಪ್ಪ, ನವರಿಗೂ , ಶಿಮುಲ್ ಅಧ್ಯಕ್ಷರಾದ ವಿದ್ಯಾಧರ್, ರವರಿಗೂ ಡಿಸಿಸಿ ಬ್ಯಾಂಕ್ ನ ಹಿರಿಯ ನಿರ್ದೇಶಕರಾದ ಜಿ.ಎನ್ ಸುಧೀರ್ ರವರಿಗೂ ಹಾಗೂ ಜಿಲ್ಲೆಯ ಎಲ್ಲಾ ಸಹಕಾರಿ ಬಾಂಧವರಿಗೆ ಕೆ ರಂಗನಾಥ್ ರವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ಮಾಹಿತಿ ಸರಣಿ – ಬೆಳಗುತ್ತಿಯ ಅರಸರು

0

ಭಾಗ -1

Klive Special Article ಕರ್ನಾಟಕದಲ್ಲಿ ಆಳಿದ ಅಜ್ಞಾತ ಅರಸೊತ್ತಿಗೆಯಲ್ಲಿ ಹೊನ್ನಾಳಿ ತಾಲೂಕಿನ ಬೆಳಗುತ್ತಿಯೂ ಒಂದು ಗ್ರಾಮವಾಗಿದ್ದು ಶತಮಾನಗಳ ಹಿಂದೆ ಸುಪ್ರಸಿದ್ಧ ರಾಜಧಾನಿಯಾಗಿತ್ತು, ಈ ಬೆಳಗುತ್ತಿಯನ್ನು ಎರಡು ಅರಸುಮನೆತನಗಳು ಆಳ್ವಿಕೆ ನಡೆಸಿವೆ. ಇವರ ಕಾಲದಲ್ಲಿ ಕಟ್ಟಿಸಿದ ದೇವಾಲಯಗಳು, ಕೋಟೆಗಳ, ಅರಮನೆಗಳ‌ ಅವಶೇಷಗಳು ಅನಾಥವಾಗಿವೆ.

ಪ್ರಾಚೀನ ಇತಿಹಾಸ ಕಾಲದಲ್ಲಿ ಬೆಳಗುತ್ತಿ, ತೀರ್ಥ ರಾಮೇಶ್ವರ, ಕಲುಬಿಗಿರಿ ಲಕ್ಷ್ಮೀರಂಗನಾಥ ದೇವಾಲಯಗಳು ಪ್ರಾಚೀನ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಬೆಳಗುತ್ತಿಗೆ ಶಾಸನಗಳಲ್ಲಿ ಆವಂತಿ, ಬೆಳಗವರ್ತಿ, ಬೆಳಗವತ್ತಿ, ಬೆಳಗುತ್ತಿ ಎಂದು ಉಲ್ಲೇಖವಾಗಿದೆ. ಬೆಳಗುತ್ತಿ ಯಲ್ಲಿ ಮೊದಲು ಆಳಿದ ಅರಸರು ಸಿಂಧರು. ಸಿಂಧರು ಉತ್ತರ ಭಾರತದ ರಾಜವಂಶದವರೆಂದು ತಿಳಿದುಬರುತ್ತದೆ. ಇವರು ಮೊದಲು ಮಹಾರಾಷ್ಟ್ರದ ಇರಂಬರಗೆಯಲ್ಲಿ ಆಳುತ್ತಿದ್ದ .‌ಕ್ರಿ.ಶ. 400 ರಲ್ಲಿ ದೊರೆಯಾಗಿದ್ದ ನಿಡದೋಳ ಸಿಂಧ್ ವಂಶದ ಮೂಲಪುರುಷನೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಸಿಂಧ್ ವಂಶವು ಹಲವು ಶಾಖೆಗಳಾಗಿ ಇವರ ವಂಶೀಕರು ಯಲಬುರ್ಗ, ಕುರುಗೋಡು, ಮತ್ತು ಬೆಳಗುತ್ತಿ ಯಲ್ಲಿ ಆಡಳಿತ ನಡೆಸಿದರು. ಕ್ರಿ.ಶ.‌1312ರಲ್ಲಿ ಬೆಳಗುತ್ತಿ ಯಲ್ಲಿ ಆಳುತ್ತಿದ್ದ ಕಾಮಯ್ಯನೇ ಸಿಂಧ್ ವಂಶದ ಕೊನೆಯ ದೊರೆ. ಇವನು ದೇವಗಿರಿಯ ಸಾಮಂತನಾಗಿದ್ದನು. ಬೆಳಗುತ್ತಿ ಇತಿಹಾಸದ ಕಥೆಯನ್ನು ಸುಮಾರು 30ಶಾಸನಗಳು ಕಲ್ಲಿನ ರೂಪದಲ್ಲಿ ನಿಂತು ಸಾರುತ್ತಿವೆ. ಸಿಂಧ್ ನಂತರ ವಿಜಯನಗರದ ಆಡಳಿತವು ಆರಂಭವಾಯಿತು.

Klive Special Article ವಿಜಯನಗರದ ಅರಸ ಬುಕ್ಕರಾಯನ ಆಳ್ವಿಕೆ ಕಾಲದಲ್ಲಿ ಮಲೆನಾಡಿನಲ್ಲಿ ಬೇಡರ ಕನ್ಯಾನಾಯಕ ಎಂಬುವನು ಬೆದರಕೋಟೆ ಮತ್ತು ಚಂದ್ರಗುತ್ತಿಯಲ್ಲಿ ಕೋಟೆಯನ್ನು ಕಟ್ಟಿಸಿ 80ಸಾವಿರ ಯೋಧರ ಪಡೆಯನ್ನು ಕಟ್ಟಿ ಬೆಳಗುತ್ತಿ ಸೇರಿದಂತೆ ಹಲವು ಪ್ರದೇಶವನ್ನು ವಶಪಡಿಸಿಕೊಂಡಿದ್ದ. ಆಗ ಬೆಳಗುತ್ತಿಯಲ್ಲಿ ವೆಂಕಟಾದ್ರಿ ಎಂಬುವವನು ಆಳ್ವಿಕೆ ನಡೆಸುತ್ತಿದ್ದ.
ಬುಕ್ಕರಾಯನ ಮೊಮ್ಮಗನೂ, ದೇವರಾಯನ ಮಗನೆಂದೂ ಕರೆಯಲ್ಪಡುವ ಚಲುವರಂಗಪ್ಪನು ಆನೆಗೊಂದಿಯ ನರಪತಿಯ ಬಿರುದುಗಳೊಂದಿಗೆ ಕ್ರಿ.ಶ.1358 ರಲ್ಲಿ ಹೊನ್ನಾಳಿ ತಾಲ್ಲೂಕಿನ ದಿಡಗೂರಿಗೆ ಬಂದು ಆಳ್ವಿಕೆ ನಡೆಸಿದ. ಆದರೆ ಬುಕ್ಕರಾಯನ ಸೇನಾಪತಿ ವೀರಭದ್ರ ನಾಯಕನು ಬೆಳಗುತ್ತಿಯ ಕನ್ಯಾನಾಯಕನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ‌ಕ್ರಿ.ಶ.‌ 1361 ರಲ್ಲಿ ಚೆಲುವರಂಗಪ್ಪನು ಕನ್ಯಾನಾಯಕನನ್ನು ಸೋಲಿಸಿ ಸೆರೆಹಿಡಿದು ಇವನಿಂದ ಬೆವುಲೆ ಎಂಬ ಬಿರುದನ್ನು ಹಳದಿ ಧ್ವಜವನ್ನು ಪಡೆದನೆಂದು ತಿಳಿಯುತ್ತದೆ. ಆದರೆ ಇದೇ ಪ್ರಾಂತದ ಅಭ್ರಮಾಧವನ ಮಗನಾದ ವೆಂಕಟಾದ್ರಿ ಯು ಕನ್ಯಾನಾಯಕನನ್ನು ಸೋಲಿಸಿ ಬೆವುಲೆ ಎಂಬ ಬಿರುದನ್ನು ಪಢದನೆಂದು ಕುದುರೆ ರಾಯರ ವೃತ್ತಾಂತದಲ್ಲಿ ಉಲ್ಲೇಖವಾಗಿದೆ.

ಮುಂದುವರೆಯುತ್ತದೆ.

ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ‌ಅಧ್ಯಯನ ವೇದಿಕೆ(ನೋಂ), ಶಿವಮೊಗ್ಗ.

Yakshagana ವೈದ್ಯರಾಗಿ ಐವತ್ತು ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಡಾ.ಯಶೋದ ಕಾಶಿ ಅವರಿಗೆ ಆತ್ಮೀಯ ಸನ್ಮಾನ

0

Yakshagana ಯಕ್ಷಗಾನ ತಾಳ ಮದ್ದಲೆಯ ಖ್ಯಾತ ಅರ್ಥದಾರಿಗಳು ಹಿರಿಯ ಚಿಂತಗರು ಪ್ರಸಿದ್ಧ ಮಾತುಗಾರರು ಹಾಗೂ ಮಂಗಳೂರಿನ ಕಾಲೇಜು ಪ್ರಿನ್ಸಿಪಾಲರಾಗಿ ನಿವೃತ್ತಿರಾದ ಡಾಕ್ಟರ್ ಪ್ರಭಾಕರ ಜೋಶಿ ಅವರು ಈ ದಿನ ಶಿವಮೊಗ್ಗಕ್ಕೆ ಡಾಕ್ಟರ್ ಯಶೋಧ ಕಾಶಿ ಅವರಿಗೆ ಅವರ ಐವತ್ತು ವರ್ಷದ ವೈದ್ಯ ಸೇವೆಯನ್ನು ಗುರುತಿಸಿ ಅವರ ಮನೆಯಲ್ಲಿ ಗೌರವಿಸಿದರು ಹಾಗೂ ಡಾಕ್ಟರ್ ಯಶೋಧ ಅವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಶುಭ ಹಾರೈಸಿದರು.

Shivamogga Police ವಾರಸುದಾರರಿಲ್ಲದ ನಿರುಪಯುಕ್ತ ವಾಹನಗಳ ವಿಲೇವಾರಿ, ಜಿಲ್ಲಾ ಪೊಲೀಸ್ ಪ್ರಕಟಣೆ

0

Shivamogga Police ಶಿವಮೊಗ್ಗ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ವಾರಸುದಾರಿಲ್ಲದ 21 ವಿವಿಧ ಮಾದರಿಯ ನಿರುಪಯುಕ್ತ ವಾಹನಗಳನ್ನು ಡಿ.01 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ವಿಲೇವಾರಿ ಮಾಡಲು ಉದ್ದೇಶಿಸಿದ್ದು, ಬಹಿರಂಗ ಹರಾಜು ಹಾಕಲಾಗುವುದು. ಆಸಕ್ತರು ನಿಗದಿತ ಸಮಯದಲ್ಲಿ ಭಾಗವಹಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಿಎಸ್‌ಪಿ ಡಿಎಆರ್ ಶಿವಮೊಗ್ಗ ದೂ.ಸಂ.: 08182-261412 ನ್ನು ಸಂಪರ್ಕಿಸುವುದು.

B.Y.Raghavendra ಸೀಎಂ ಕುರ್ಚಿ ಹಗ್ಗ ಜಗ್ಗಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಸಿದಿದೆ. ಸಂಸದ ರಾಘವೇಂದ್ರ ಮಾತಿನ ಚಾಟಿ

0

B.Y.Raghavendra ಶಿವಮೊಗ್ಗದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಸಾರ್ವಜನಿಕರಿಗೆ ಒಂದು ಸಂದೇಶ ಕೊಡಬೇಕಿದೆ.
ಡಿಸಿಎಂ ಹೇಳ್ತಾರೆ ಹಿಂದೆ ಸಿಎಂ ಬದಲಾವಣೆ ಒಪ್ಪಂದ ಆಗಿದೆ ಅಂತ.ಆದರೆ ನಾನೇ ಐದು ವರ್ಷ ಸಿಎಂ ಅಂತ ಸಿದ್ದರಾಮಯ್ಯನವರು ಹೇಳ್ತಾರೆ.ಯಾರು ಎಷ್ಟೇ ವರ್ಷ ಇರಲಿ ಆದರೆ ನಿಮ್ಮ ಚರ್ಚೆಯಲ್ಲಿ ಅಭಿವೃದ್ದಿ ವಿಚಾರ ಪ್ರಸ್ತಾಪ ಆಗ್ತಿಲ್ಲ ಎಂದರು.

ನಿಮ್ಮ ಕುರ್ಚಿಯ ಹಗ್ಗಾಜಗ್ಗಾಟದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ.ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಆಗದೆ ರೈತರು ಬೀದಿಗೆ ಬಿದ್ದಿದ್ದಾರೆ.ಬೆಳೆಹಾನಿ ಪರಿಹಾರ ನೀಡಿಲ್ಲ, ರಸ್ತೆ ಗುಂಡಿಗಳು ಮುಚ್ಚುವ ಕೆಲಸ ಆಗಿಲ್ಲ.
ರಾಜ್ಯದ ಜನರು ನಿಮ್ಮನ್ನ ನೋಡಿ ನಗ್ತಾ ಇದ್ದಾರೆ ಎಂದು ಹೇಳಿದರು.

B.Y.Raghavendra ಏನೇ ಮಾಡಿಕೊಂಡರು ನಾಲ್ಕು ಗೋಡೆ ಮಧ್ಯೆ ಮಾತಾಡಿಕೊಂಡು ಆಡಳಿತದ ಕಡೆ ಗಮನ ನೀಡಿ.
ನೂರಕ್ಕೆ ನೂರು ಸಿಎಂ ಬದಲಾವಣೆ ಆಗುತ್ತೆ.
ಈಗ ಮತ್ತೆ ಮಾಧ್ಯಮದಲ್ಲಿ ಸಂಕ್ರಾತಿ ನಂತರ ಅಂತಾ ಬರ್ತಿದೆ.
ನಮಗೇನು ಯಾರು ಸಿಎಂ ಆದರೂ ರಾಜ್ಯಕ್ಕೆ ಉತ್ತಮ ಆಡಳಿತ ಕೊಡಲಿ ಅಂತ ಒತ್ತಾಯ ಮಾಡ್ತೇನೆ.
ರಾಜ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.
ವಿಜಯೇಂದ್ರ ಅವರು ತಮ್ಮ ಪೂರ್ಣ ಅವಧಿವರೆಗೆ ಮುಂದುವರಿಯುತ್ತಾರೆ ಎಂದು ಹೇಳಿದರು.

Lok Adalats 1991-92 ರಿಂದ 2019-20 ವರ್ಷದೊಳಗೆ ದಾಖಲಾಗಿರುವ ಸಂಚಾರಿ ವಾಹನ ದಂಡ ಬಾಕಿ ಪಾವ್ತಿ.ಶೇ.50 ರಿಯಾಯಿತಿ. ಡಿಸೆಂಬರ್12ಕೊನೇ ದಿನಾಂಕ

0

Lok Adalats ದಿನಾಂಕ 13-12-2025 ರಂದು ಈ ವರ್ಷದ ನಾಲ್ಕನೇ ರಾಷ್ಟ್ರೀಯ ಲೋಕ ಅದಾಲತನ್ನು ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಏರ್ಪಡಿಸಲಾಗಿದ್ದು ಅದರ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರವನ್ನು ಉದ್ದೇಶಿಸಿ ದಿನಾಂಕ 18-10-2025 ರಂದು ಪತ್ರದ ಮುಖೇನ ಕರ್ನಾಟಕ ರಾಜ್ಯದಲ್ಲಿ ಬಾಕಿ ಉಳಿದಿರುವ ಟ್ರಾಫಿಕ್ ಈ ಚಲನ ಪ್ರಕರಣಗಳ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿಯನ್ನು ನಿಗದಿಪಡಿಸುವುದಕ್ಕೆ ಕೋರಿಕೊಂಡ ಮೇರೆಗೆ ಕರ್ನಾಟಕ ಸರ್ಕಾರವು ಆ ಪತ್ರವನ್ನು ಪರಿಶೀಲಿಸಿ ದಂಡದ ಮೊತ್ತ ಪಾವತಿ ಬಾಕಿ ಇರುವ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ಪೊಲೀಸ್ ಇಲಾಖೆಯ ಸಂಚಾರಿ ಈ ಚಲನ್ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ಅವಧಿಯಲ್ಲಿ ದಾಖಲಾಗಿ, ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ದಿನಾಂಕ 21-11-2025 ರಿಂದ ದಿನಾಂಕ 12-12-2025 ರವರೆಗೆ ಕಾಲಾವಕಾಶ ನೀಡಿ ಸಾರಿಗೆ ಇಲಾಖೆಯಿಂದ ಆದೇಶವನ್ನು ಹೊರಡಿಸಿ ಅದಕ್ಕೆ ಆರ್ಥಿಕ ಇಲಾಖೆಯ ಸಹಮತಿಯನ್ನು ಸಹ ಸೂಚಿಸಿ ಅಧಿಸೂಚನೆಯನ್ನು ಹೊರಡಿಸಿದೆ.

ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ ಚಲನ್ ನಲ್ಲಿ ದಾಖಲಾದ ದಂಡದ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2019 ಅವಧಿಯಲ್ಲಿ ದಾಖಲಾಗಿರುವ ಮತ್ತು ಪಾವತಿಗೆ ಬಾಕಿ ಇರುವ ಪ್ರಕರಣಗಳಲ್ಲಿ ದಂಡದ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ಹೊರಡಿಸಲಾದ ಆದೇಶದ ಸದುಪಯೋಗವನ್ನು ಮತ್ತು ಅಧಿಕ ಲಾಭವನ್ನು ಅಂತಹ ದಂಡದ ಮೊತ್ತವನ್ನು ದಿನಾಂಕ 12.12.2025ರ ಒಳಗೆ ಸಂಬಂಧಪಟ್ಟ ಇಲಾಖೆ ಕಛೇರಿಯಲ್ಲಿ ಪಾವತಿಸಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆದೇಶದ ಲಾಭವನ್ನು ಪಡೆಯಬೇಕೆಂದು ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಶ್ರೀ ಸಂತೋಷ್ ಎಂ. ಎಸ್., ರವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.

Indian Medical Association ಸಂಬಂಧಗಳ ನಿರ್ವಹಣೆ ಮಾಡಿ.ಮೊಬೈಲ್- ಇಂಟರ್ನೆಟ್ ಗಳಿಂದ ದೂರವಿರಿ- ಮನೋವೈದ್ಯ ಡಾ.ಎಸ್.ಟಿ.ಅರವಿಂದ್.

0

Indian Medical Association ಜೀವನದಲ್ಲಿ ಗುರಿ ಸಾಧಿಸಲು ನಿರಂತರ ಪರಿಶ್ರಮ ವಹಿಸುವುದು ಅತ್ಯಂತ ಅವಶ್ಯಕ ಎಂದು ಮನೋವೈದ್ಯ ಡಾ. ಎಸ್.ಟಿ.ಅರವಿಂದ ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆ ರಾಜ್ಯಾಧ್ಯಕ್ಷ ಡಾ. ವೀರಭದ್ರಯ್ಯ.ಟಿ.ಎ ಅವರ ಮುಂದಾಳತ್ವದಲ್ಲಿ ಶಿವಮೊಗ್ಗ ಘಟಕದಿಂದ ಗಾಡಿಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ “ಐಎಂಎ ನಡಿಗೆ, ಶಾಲೆಯ ಕಡೆಗೆ” ಕಾರ್ಯಕ್ರಮದಲ್ಲಿ ಹದಿಹರೆಯದ ವಯಸ್ಸಿನ ಮಾನಸಿಕ ತುಮುಲಗಳ ಬಗ್ಗೆ ಮಾತನಾಡಿದರು.

ವೃತ್ತಿಕ್ಷೇತ್ರದಲ್ಲಿ ಮುನ್ನಡೆಯುವಾಗ ಅನೇಕ ರೀತಿ ಸಮಯ ವ್ಯರ್ಥ ಆಗುವ ಆಕರ್ಷಣೆಗಳಿಗೆ ಒಳಗಾಗುತ್ತೇವೆ. ಚಂಚಲ ಮನಸ್ಥಿತಿ ಎದುರಿಸಬೇಕಾಗುತ್ತದೆ. ಸಮಯ ವ್ಯರ್ಥವಾಗುವ ಆಕರ್ಷಣೆಗಳಿಂದ ದೂರ ಇರಬೇಕು. ಕೋಪ ನಿಯಂತ್ರಣ ಸಾಧಿಸಬೇಕು. ಸಂಬಂಧಗಳ ನಿರ್ವಹಣೆ ಸರಿಯಾಗಿರಬೇಕು. ಮೊಬೈಲ್, ಇಂಟರ್‌ನೆಟ್ ಗೀಳಿನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಐಎಂಎ ಶಿವಮೊಗ್ಗ ಕಾರ್ಯದರ್ಶಿ, ಮನೋವೈದ್ಯೆ ಡಾ. ಕೆ ಎಸ್ ಶುಭ್ರತಾ ಅವರು ಹದಿಹರೆಯದ ಮಾನಸಿಕ ಆರೋಗ್ಯದ ಕುರಿತು ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಎದುರಿಸುವಂತಹ ಭಾವನಾತ್ಮಕ ಬದಲಾವಣೆಗಳು, ತನ್ನತನದ ಹುಡುಕಾಟ, ಸಮಾಜದ ಒತ್ತಡಗಳನ್ನ ಎದುರಿಸುವುದು, ಇವೆಲ್ಲದರ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದಬೇಕು ಎಂದು ತಿಳಿಸಿದರು.

ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಮಾತನಾಡಿ, ಐಎಂಎ ನಡಿಗೆ, ಶಾಲೆಯ ಕಡೆಗೆ ಘೋಷವಾಕ್ಯದೊಂದಿಗೆ ವಿವಿಧ ಶಾಲೆಗಳಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಐಎಂಎ ಶಿವಮೊಗ್ಗ ಈಗಾಗಲೇ ಎರಡು ಸರ್ಕಾರಿ ಶಾಲೆಗಳಲ್ಲಿ ಆರೋಗ್ಯದ ಅರಿವು ಕಾರ್ಯಕ್ರಮ ನಡೆಸಿದೆ ಎಂದು ತಿಳಿಸಿದರು.

Indian Medical Association ಶಿವಮೊಗ್ಗ ನಗರದ ಯಾವುದೇ ಸರ್ಕಾರಿ ಶಾಲೆ ಅಥವಾ ಖಾಸಗಿ ಶಾಲೆಗಳಿಗೆ ನುರಿತ ವೈದ್ಯರಿಂದ ಅರಿವಿನ ಕಾರ್ಯಕ್ರಮಗಳ ಅಗತ್ಯ ಇದ್ದರೆ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಸದಾ ಸಿದ್ಧವಿದೆ ಎಂದರು.

ಗಾಡಿಕೊಪ್ಪದ ಸರ್ಕಾರಿ ಪ್ರೌಢಶಾಲೆ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ಮತ್ತು ಇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಬಿಳಕಿಯ ಬಸಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮುಖ್ಯೋಪಾಧ್ಯಾಯ ಕಿಶೋರ್ ಕುಮಾರ್ ಮತ್ತು ಇತರ ಉಪಾಧ್ಯಾಯರು ಉಪಸ್ಥಿತರಿದ್ದರು.