Youth Hostel Association ಶಿವಮೊಗ್ಗ ನಗರದ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಸ್ಥಾಪಕರಲ್ಲಿ ಒಬ್ಬರಾದ ಅ.ನಾ.ವಿಜಯೇಂದ್ರ ರಾವ್ ಹಾಗೂ ವೈ.ಹೆಚ್.ಏ.ಐ. ಸಾಗರ ಘಟಕದ ಸದಸ್ಯೆ ಎಮ್.ಕೆ.ಜ್ಯೋತಿ ನಂಜುಂಡ ಸ್ವಾಮಿಯವರು ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ದವರು ತಮ್ಮ ವಿದ್ಯಾಥಿಗಳಿಗೆ ಇದೇ ತಿಂಗಳು 26 ರಿಂದ ಹಿಮಾಲಯ ಚಾರಣವನ್ನು ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಘಟಕ, ವೈ.ಹೆಚ್.ಏ.ಐ. ತರುಣೋದಯ ಘಟಕ, ಗೀರ್ವಾಣಭಾರತಿ ಶ್ರೀ ಆದಿಚುಂಚನಗಿರಿ, ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದಲ್ಲಿ ಕುಲು ಮನಾಲಿ ಸಮೀಪದ ರೋಲಿಖೋಲಿ ಪರ್ವತದಲ್ಲಿ ಹಮ್ಮಿಕೊಳ್ಳಲಾಗಿದೆ.
Youth Hostel Association ಕೆಂದ್ರೀಯ ಸಂಸ್ಕೃತ ವಿದ್ಯಾಲಯ ದೇಶದಲ್ಲಿ ಇರುವ ತಮ್ಮ ವಿದ್ಯಾಶಾಖೆಯಿಂದ ಆಯ್ದ 50 ವಿದ್ಯಾಥಿಗಳಿಗೆ ಈ ಅವಕಾಶ ಮಾಡಿಕೊಡುತ್ತಿದೆ
ಇಂತಹ ತಂಡದ ನಾಯಕರಾಗಿ ಆಯ್ಕೆಯಾದ ಅ.ನಾ ವಿಜಯೇಂದ್ರ ರಾವ್ ಮತ್ತು ಎಮ್.ಕೆ ಜ್ಯೋತಿ ಯವರಿಗೆ ವೈ.ಹೆಚ್.ಏ.ಐ ತರುಣೋದಯ ಘಟಕದ ಅಧ್ಯಕ್ಷರಾದ ಎನ್.ಗೋಪಿನಾಥ್, ಕಾರ್ಯಾಧ್ಯಕ್ಷ ಎಸ್.ಎಸ್.ವಾಗೇಶ್, ತಸಂಸೇಸಂ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.
