Thursday, May 7, 2026
Thursday, May 7, 2026
Home Blog Page 54

ಮಾರ್ಚ್ 17. ಶಿವಮೊಗ್ಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

0

ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ವಿನಾಯಕ ಸೇವಾ ಟ್ರಸ್ಟ್‌ನ ೨೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮಾ.17 ರ ಸಂಜೆ 7.30ಕ್ಕೆ ಶ್ರೀ ವಿನಾಯಕ ಪ್ರಾರ್ಥನೆ, ಪುಣ್ಯಾಹ, ಕುಂಭಾಧಿವಾಸ, ಸಪ್ತಶುದ್ಧಿ, ವಾಸ್ತುಮ ರಾಕ್ನೋಘ್ನ ಹೋಮ, ವಸ್ತು ಬಲಿ, ದಿಗ್ಬಲಿ, ಪೂರ್ಣಹುತಿ, ಮಹಾಮಂಗಳಾರತಿ ನಡೆಯಲಿದೆ.
ಮಾ.17ರ ಮಂಗಳವಾರ ಬೆಳಿಗ್ಗೆ 9ಕ್ಕೆ ದ್ವಾದಶ ನಾರಿಕೇಳ ಗಣಯಾಗ, ಪೂರ್ಣಹುತಿ, ಕುಂಭಾಭಿಷೇಕ, 12.10ಕ್ಕೆ ಬ್ರಹ್ಮ ಕುಂಭಾಷೇಕ 12.30ಕ್ಕೆ ಮಹಾಂಗಳಾರತಿ, ಮಧ್ಯಾಹ್ನ ೧ಕ್ಕೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ಮಾ.17ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ದೇವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಕಿದ ಪ್ರೀತಿಯ ಕುರಿ ಸಾವು: ಶ್ರದ್ಧಾಂಜಲಿ ವಿಶೇಷವಾಗಿ ಶಾಲಾಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

0

ಶಿವಮೊಗ್ಗ ನಗರದ ಸಿಗಹಟ್ಟಿ ಬಡಾವಣೆಯಲ್ಲಿ ಮಣಿ ಸಾಕಿದ್ದ ಫೈಟರ್ ಕುರಿ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಸಾಕುಪ್ರಾಣಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಮಣಿ ಹಾಗೂ ಅವರ ಸ್ನೇಹಿತರು ಆ ಕುರಿಯನ್ನು ಕುಟುಂಬ ಸದಸ್ಯನಂತೆ ನೋಡಿಕೊಂಡಿದ್ದರು.
ಕುರಿ ಮೃತಪಟ್ಟ ನಂತರ ಅದಕ್ಕೆ ಸಕಲ ವಿಧಿ ವಿಧಾನಗಳೊಂದಿಗೆ ಶವ ಸಂಸ್ಕಾರ ನೆರವೇರಿಸಲಾಯಿತು. ಬಳಿಕ ಅದರ ನೆನಪಿಗಾಗಿ ವಿಶೇಷವಾಗಿ ತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 60 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟ ವ್ಯವಸ್ಥೆ ಮಾಡಲಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಪೆನ್ನುಗಳು ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ಮಣಿ ಹಾಗೂ ಅವರ ಸ್ನೇಹಿತರು ಮಕ್ಕಳಿಗೆ ಆಹಾರ ನೀಡುವ ಮೂಲಕ ಮತ್ತು ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳನ್ನು ನೀಡುವ ಮೂಲಕ ಪ್ರೀತಿಯ ಕುರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Nidhi Apke Nikat ಮಾರ್ಚ್ 27. ಶಿವಮೊಗ್ಗ & ದಾವಣಗೆರೆ ಜಿಲ್ಲೆಗಳಲ್ಲಿ “ನಿಧಿ ಆಪ್ ಕೆ ನಿಕಟ್” ಕಾರ್ಯಕ್ರಮ ಆಯೋಜನೆ.

0

Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮಾ. 27 ರಂದು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಆಧಿಶಕ್ತಿ ಕಾರ್ಸ್ ಪ್ರೆ, ಲಿ., ಅವರಗೆರೆ, ಓಲ್ಡ್ ಪಿಬಿ ರಸ್ತೆ, ದಾವಣಗೆರೆ ಇಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ.
ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದ್ದು, ಉದ್ಯೋಗದಾತರು ಮತ್ತು ಉದ್ಯೋಗಿಗಳು ಮತ್ತು ಪಿಂಚಣಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಕಚೇರಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

Klive Special Article ಯುಗಾದಿ…ಒಂದಿಷ್ಟು ಮಾಹಿತಿ- ಡಾ.ಹೆಚ್.ಪದ್ಮನಾಭ ಅಡಿಗ. ಶಿವಮೊಗ್ಗ

0

Klive Special Article ಬ್ರಹ್ಮನ ಸೃಷ್ಟಿಯ ಪ್ರಾರಂಭದದಿನ, ಬ್ರಹ್ಮನ ಪೂಜೆಯೇ ವಿಶೇಷ.ಈ ದಿನ ಯುಗಗಳ ಪ್ರಾರಂಭದ ದಿನವಾಗಿ ಯುಗಾದಿ. ಭಾರತದ ದಕ್ಷಿಣ ರಾಜ್ಯಗಳಲ್ಲಿ ಹೊಸ ಸಂವತ್ಸರ ಪರಾಭವದ ಪ್ರಥಮ ದಿನ. ಶಾಲಿವಾಹನ ಶಕದಂತೆ 1949 ನೇ ವರ್ಷದ ಪ್ರಾರಂಭದ ದಿನ. ಏಳನೇ ವೈವಸ್ವತ ಮನ್ವಂತರದಲ್ಲಿ 28 ನೇ ಚತುರ್ ಯುಗದಲ್ಲಿ ಕೃತ ತ್ರೇತಾ ದ್ವಾಪರ ಕಳೆದು ಕಲಿಯುಗದಲ್ಲಿ 5127 ವರ್ಷಗಳು ಕಳೆದಿವೆ.
ಹೊಸವರ್ಷಕ್ಕೆ ಗುರುವೇ ರಾಜ, ಕುಜನೇ ಮಂತ್ರಿ. ಪರಾಭವಾಬ್ದೇ ರಾಜ್ಞ: ಸ್ಯಾತ್ ಸಮರಮ್ ಸಹಶತ್ರುಭಿ:. ರಾಜರು ರಾಜರೊಳಗೆ ನಿತ್ಯ ಯುದ್ಧ. ಅದರಲ್ಲಿ ಪರಾಭವ ಎಲ್ಲರಿಗೂ.
ಕಾಲವನ್ನು ಅಳೆಯಲು ವಿಶ್ವದಲ್ಲಿ ಅನೇಕ ರೀತಿಯ ಪದ್ಧತಿಗಳನ್ನು ಮಾಡಿಕೊಂಡಿದ್ದಾರೆ. ಭಾರತದಲ್ಲಿ ವರ್ಷ ಅಯನ, ಋತು , ಮಾಸ, ಪಕ್ಷ, ದಿನ ಎಂದು ಆರು ವಿಧವಾಗಿ ವಿಂಗಡಿಸಿದ್ದಾರೆ. ಭಾರತೀಯರಿಗೆ ಆಕಾಶವೇ ಪಂಚಾಂಗ. ಪ್ರಾಚೀನಕಾಲದಲ್ಲಿ ಅನೇಕ ರೀತಿಯ ವರ್ಷಾಚರಣೆಯಿತ್ತು . ಸಾವನವರ್ಷ, ಸೌರವರ್ಷ, ಚಾಂದ್ರ ವರ್ಷ, ನಾಕ್ಷತ್ರ ವರ್ಷ ಮತ್ತು ಬಾರ್ಹಸ್ಪತ್ಯ ವರ್ಷ ಎಂದು ಐದು ಪ್ರಕಾರದ ವರ್ಷಾಚರಣೆಗಳು ಬಳಕೆಯಲ್ಲಿದ್ದವು. ಇವುಗಳಲ್ಲಿ ಸೌರವರ್ಷವು ಮೇಷ ಮಾಸ, ವೃಷಭ ಮಾಸ ಇತ್ಯಾದಿಯಾಗಿ ಸಂಕ್ರಾಂತಿಗೆ ಅನುಗುಣವಾಗಿ ಎಣಿಸಲಾಗುತ್ತದೆ. ಇದು ಸೌರಯುಗಾದಿಯಿಂದ ಅಂದರೆ ಮುಂದಿನ ಏಪ್ರೀಲ್ 14 ನೇ ದಿನಾಂಕದಿಂದ ಹೊಸವರ್ಷ ಆರಂಭವಾಗುತ್ತದೆ.
ಚಾಂದ್ರವರ್ಷವನ್ನು ಪ್ರಭವ ವಿಭವ ಮೊದಲಾದ 60 ಸಂವತ್ಸರದ ಕ್ರಮದಲ್ಲಿ ಹೇಳುತ್ತಾರೆ. ಈ ಹೊಸವರ್ಷ ಪರಾಭವ ಎಂಬ ಹೆಸರಿನ ವರ್ಷವಾಗಿದೆ. ಎರಡು ಮಾಸಗಳಿಗೆ ಒಂದು ಸೌರ ಋತು, ಮೂರು ಸೌರ ಋತುಗಳಿಗೆ ಒಂದು ಅಯನ. ಇವು ಉತ್ತರ ಅಯನ ಮತ್ತು ದಕ್ಷಿಣ ಅಯನ ಎಂದು ಎರಡು ಇವೆ. ಕರ್ಕ ಸಂಕ್ರಾಂತಿಯಿಂದ ದಕ್ಷಿಣಾಯನ, ಮಕರ ಸಂಕ್ರಾಂತಿಯಿಂದ ಉತ್ತರಾಯಣ ಪ್ರಾರಂಭವಾಗುತ್ತವೆ. ದಕ್ಷಿಣಾಯನ,ಮಳೆಗಾಲವಾಗಿ ಕೃಷಿ ಮೊದಲಾದ ಕಾರ್ಯಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಗೃಹಪ್ರವೇಶ, ದೇವಾಲಯ ನಿರ್ಮಾಣ ವಿವಾಹ ಮೊದಲಾದವುಗಳಿಗೆ ಉತ್ತರಾಯಣವೇ ಶ್ರೇಷ್ಠ ಎಂದು ಪರಿಗಣಿಸಿದ್ದಾರೆ. ಚಾಂದ್ರ ಮಾಸಗಳನ್ನು ಹುಣ್ಣಿಮೆಯಂದು ಇರುವ ನಕ್ಷತ್ರದ ಹೆಸರಿನಲ್ಲಿ ಹೇಳುತ್ತಾರೆ. ಹುಣ್ಣಿಮೆಯು ಕೃತಿಕಾ ನಕ್ಷತ್ರದಲ್ಲಿ ಬಂದರೆ ಆ ಮಾಸ ಕಾರ್ತಿಕ, ಚಿತ್ರಾ ನಕ್ಷತ್ರದಲ್ಲಿ ಬಂದರೆ ಚೈತ್ರ, ವಿಶಾಖಾ ನಕ್ಷತ್ರದ ದಿನ ಹುಣ್ಣಿಮೆಯಾದರೆ ಆ ಮಾಶಸ ವೈಶಾಖ ಹೀಗೆ ಚಾಂದ್ರಮಾನದ ಮಾಸಗಳು ಚಂದ್ರನ ಗತಿಯನ್ನು ಅವಲಂಬಿಸಿವೆ.
Klive Special Article ಯುಗಾದಿಯಂದು ತೈಲಾಭ್ಯಂಜನ ಹೊಸಬಟ್ಟೆ ಧರಿಸುವುದು ,ಜೋಕಾಲಿ ,ದೇವೀ ಆರಾಧನೆ ,ಪಂಚಾಂಗಶ್ರವಣ , ಮುಂತಾದ ಆಚರಣೆಗಳು ರೂಢಿಯಲ್ಲಿದೆ. ಹೊಸವರ್ಷದ ಮೊದಲ ದಿನವೇ ಊರವರೆಲ್ಲ ಸೇರಿ, ಹೊಸ ಸಂವತ್ಸರದಲ್ಲಿ ವಾರ್ಷಿಕ ಕಾರ್ಯಕ್ರಮಗಳ ಆದ್ಯತೆಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ . ಮಳೆ ಎಷ್ಟು ಪ್ರಮಾಣದಲ್ಲಿ ಆಗಬಹುದು,ರೋಗರುಜಿನಗಳ ಬಾಧೆ ಬರಬಹುದೇ, ಯಾವ ಯಾವ ವಸ್ತುಗಳು, ಆಹಾರಪದಾರ್ಥಗಳು ತುಟ್ಟಿಯಾಗುತ್ತವೆ ಅಥವಾ ಅಗ್ಗವಾಗುತ್ತವೆ, ಯಾವುದನ್ನು ಬೆಳೆಯುವುದು ಉತ್ತಮ ಇತ್ಯಾದಿಯಾಗಿ ಇಡೀ ವರ್ಷದ ಉತ್ಪನ್ನಗಳ ಬಗ್ಗೆ ಚರ್ಚಿಸುತ್ತಾರೆ. ಹೊಸ ಹುಮ್ಮಸ್ಸಿನೊಂದಿಗೆ, ಹೊಸ ಸಂಕಲ್ಪ ದಿಂದ, ಮುಂದಿನ ದಿನಗಳಲ್ಲಿ ಮಾಡಬೇಕಾದ ಕಾರ್ಯಗಳ ರೂಪುರೇಖೆಗಳನ್ನು ನಿರ್ಧರಿಸುತ್ತಾರೆ.
ಈ ಪರಾಭವ ಸಂವತ್ಸರವು ನಮ್ಮ ನಮ್ಮ ಋಣಾತ್ಮಕ ವಿಚಾರಗಳಿಗೆ ಪರಾಭವವೂ ಧನಾತ್ಮಕ ವಿಚಾರಗಳಿಗೆ ವಿಜಯವೂ ಆಗಲೆಂದು ಪ್ರಾರ್ಥಿಸೋಣ.

ಡಾ. ಪದ್ಮನಾಭ ಅಡಿಗ. ಹೆಚ್.
ನಿವೃತ ಉಪನ್ಯಾಸಕರು,
94819 88755

ಶಿಕ್ಷಣ ಹಾಗೂ ದಾಸೋಹ ವ್ಯವಸ್ಥೆಯಿರುವ ಮಠಗಳಿಗೆ ಆದ್ಯತೆ ಮೇರೆಗೆ ಗ್ಯಾಸ್ ಸಿಲಿಂಡರ್ ಒದಗಿಸಲು ಮನವಿ

0

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಆಶ್ರಯ, ಶಿಕ್ಷಣ ಹಾಗೂ ದಾಸೋಹದ ವ್ಯವಸ್ಥೆಯನ್ನು ಮಾಡುತ್ತಿರುವ ಮಠಗಳಿಗೆ ಮೊದಲ ಆದ್ಯತೆ ಮೇರೆಗೆ ಅಡುಗೆ ಅನಿಲ ಪೂರೈಕೆ ಮಾಡಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶತಮಾನಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಜಾತಿ, ಮತಗಳ ಭೇದವಿಲ್ಲದೆ ಜ್ಞಾನವನ್ನು ನೀಡುತ್ತಿರುವ ಮಠಗಳ ಮೇಲೆಯೂ ಕೊಲ್ಲಿ ರಾಷ್ಟçಗಳ ಯದ್ಧದ ಪರಿಣಾಮ ಎದುರಾಗಿದೆ. ಸಮರ್ಪಕವಾಗಿ ಅಡುಗೆ ಅನಿಲ ದೊರೆಯದೇ ದಾಸೋಹಕ್ಕೆ ತೊಂದರೆಯಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಮಠಗಳು ಸೌದೆಗೆ ಮೊರೆ ಹೋಗಿದ್ದು, ಇತ್ತ ಸೌದೆಯೂ ಅವಶ್ಯಕತೆಗೆ ತಕ್ಕಷ್ಟು ದೊರೆಯುತ್ತಿಲ್ಲ. ಮಠಗಳಿಗೆ ದುಸ್ಥಿತಿ ಎದುರಾಗಿದೆ ಎಂದಿದ್ದಾರೆ.
ಮಠಗಳು ಹಾಗೂ ಕೆಲ ಸಂಸ್ಥೆಗಳು ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರವನ್ನೂ ಕಲಿಸುತ್ತಿವೆ. ತ್ರಿವಿಧ ದಾಸೋಹ ಪದ್ಧತಿಯು ಶಿಕ್ಷಣದ ಸಮಾನತೆಗೆ ನಾಂದಿ ಹಾಡಿದೆ. ಇಂತಹ ಮಠಗಳಲ್ಲಿ ಆಹಾರ ತಯಾರಿಸಲು ಸಮರ್ಪಕವಾಗಿ ಅಡುಗೆ ಅನಿಲ ಪೂರೈಕೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರಗಳು ಮಾಡುವ ಕೆಲಸವನ್ನು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಮಠಗಳು ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದ ತ್ರಿವಿಧ ದಾಸೋಹದಲ್ಲಿ ತೊಡಗಿದ ಮಠಗಳಿಗೆ ಮೊದಲ ಆದ್ಯತೆ ಮೇರೆಗೆ ಅಡುಗೆ ಅನಿಲ ಪೂರೈಕೆ ಮಾಡಿದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದ ಶ್ರೀಮತಿ ಶಾಂತಾ ಶೆಟ್ಟಿ ಅವರಿಗೆ “ವೀರವನಿತೆ” ಪ್ರಶಸ್ತಿ

0


ಹಲವಾರು ಸಂಘ ಸಂಸ್ಥೆಯಲ್ಲೇ ನಿಸ್ವಾರ್ಥವಾಗಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕಲಾವಿದೆ ನಿರೂಪಕಿ ಹಾಗೂ ಚಿರಂತನ ಯೋಗ ಹಾಗು ಸಂಗೀತ ಟ್ರಸ್ಟ್ ಸಂಸ್ಥಾಪಕ ರಾದ. ಶ್ರೀಮತಿ ಶಾಂತಾ ಶೆಟ್ಟಿಯವರಿಗೆ ಬೆಂಗಳೂರಿನ ಹೈದರ್ ಪಾರ್ಕ್ ಹೋಟೆಲ್ ನಲ್ಲಿ ಪ್ರತಿಷ್ಠಿತ ಚಿತ್ರಸಂತೆ ಸಂಸ್ಥೆವತಿಯಿಂದ ಸಾಮಾಜಿಕ ಸೇವೆಗಾಗಿ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಿ
ಪಾರಿ ತೋಷಕ ಹಾಗೂ ಪ್ರಶಸ್ತಿ ಪತ್ರ ವನ್ನು ಖ್ಯಾತ ಚಲನಚಿತ್ರ ನಟಿ ತಾರಾ ಅವರು ಹಾಗೂ ಗಿರೀಶ್ ಗೌಡ ಮತ್ತು ಚಿತ್ರಸಂತೆ ತಂಡದವರು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಚಿತ್ರನಟಿ ತಾರಾ ಅವರು ಇವರ ಸೇವೆಯನ್ನು ಸ್ಮರಿಸಿದರು.

Madhu Bangarappa ಚಿತ್ರಟ್ಟೆಹಳ್ಳಿ ಕ್ರಾಸ್ ಭಾಗದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿವೃಂದಕ್ಕೆ ಬಸ್ ನಿಲ್ದಾಣ ಸಹಕಾರಿಯಾಗಲಿದೆ- ಮಧು ಬಂಗಾರಪ್ಪ

0

Madhu Bangarappa ಸೊರಬ ತಾಲೂಕಿನ ಚಿತ್ರಟ್ಟೆಹಳ್ಳಿ ಕ್ರಾಸ್ ಬಳಿ ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತದ (KSMCL) ಸಿ.ಎಸ್.ಆರ್ (CSR) ಅನುದಾನದಡಿ ಸುಮಾರು 20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಾಮೀಣ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು.

ಗ್ರಾಮೀಣ ಭಾಗದ ಸಾರಿಗೆ ಸೌಕರ್ಯಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಚಿತ್ರಟ್ಟೆಹಳ್ಳಿ ಕ್ರಾಸ್ ಭಾಗದ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗುತ್ತಿದ್ದು, ವಿಶೇಷವಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Madhu Bangarappa ಈ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಕೆ.ಎಸ್.ಎಂ.ಸಿ.ಎಲ್ ನಿಗಮದ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Inner Wheel Shivamogga ಮಹಿಳಾ ದಿನಾಚರಣೆ: ಶಿವಮೊಗ್ಗದ ಸಾಧಕಿಯರಿಗೆ ಸನ್ಮಾನ

0

Inner Wheel Shivamogga ಇನ್ನರ್ ವ್ಹೀಲ್ ಶಿವಮೊಗ್ಗ ನಾರ್ಥ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶನಿವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಸಾಧನೆ ಗೈದ ಹಾಗೂ ನಿಸ್ವಾರ್ಥ ಸೇವೆ ಗೈದ ಸ್ತ್ರೀ ರೋಗ ತಜ್ಞೆಯಾದ ಡಾ. ವಿಮಲಾ ಬಾಯಿ, ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡಿದ ಶ್ರೀಮತಿ ಶಿವಲೀಲಾ ಮತ್ತು ಕುಟುಂಬವು ಆರ್ಥಿಕವಾಗಿ ಕುಸಿದಾಗ ತಮ್ಮ ಅಡುಗೆಯ ದುಡಿಮೆಯಿಂದ ಕುಟುಂಬಕ್ಕೆ ಆಸರೆಯಾದ ಶ್ರೀಮತಿ ಆಶಾ ಎ ಕಿಣಿ ಈ ಮೂವರು ಮಹಿಳೆಯರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಫ್ಯಾಷನ್ ಶೋ ಮತ್ತು ಸಾಂಪ್ರದಾಯಿಕ ಧಿರಿಸು ಧರಿಸುವ ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಅನೇಕ ವಿನೋದದ ಆಟಗಳನ್ನು ಆಡಿಸಿ, ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

Inner Wheel Shivamogga ಗಣೇಶನ ವಂದನೆಯೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮವು ಆಕರ್ಷಕ ಶ್ರೀ ಕೃಷ್ಣ ನೃತ್ಯ ರೂಪಕದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Department of Youth Empowerment and Sports ಯುವಜನತೆ ಶಿಸ್ತು ಮತ್ತು ನಾಯಕತ್ವ ಗುಣಗಳನ್ನ ಮೈಗೂಡಿಸಿಕೊಳ್ಳಬೇಕು- ಡಾ.ಮಾಲೇಗೌಡ

0

Department of Youth Empowerment and Sports ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ (ಎನ್ ಎಸ್ ಎಸ್) 2025 – 26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಮಾರ್ಚ್ 9 ರಿಂದ 15 ರವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ ನ ಎನ್‌ ಎಸ್‌ ಎಸ್ ಭವನದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ, ನಾಯಕತ್ವದ ಗುಣಗಳು ಹಾಗೂ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ‘ಯುವಜನತೆ ಮತ್ತು ನಾಯಕತ್ವದ ಗುಣಗಳು’ ಎಂಬ ವಿಷಯವನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ರಾಜ್ಯ ನೌಕರರ ವಿಮಾ ಆಸ್ಪತ್ರೆಯ ವೈದ್ಯರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಮಾಲೇಗೌಡರವರು “ಈಗಿನ ಯುವಜನತೆ ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ಹೊಣೆಗಾರಿಕೆಯನ್ನು ಅರಿತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ” ಎಂದರು. ಇದೆ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀ ಯುತ ಪರಮೇಶ್ವರಪ್ಪ.ಬಿ.ಎಂ ರವರು ಈ ವಿಷಯದ ಮೇಲೆ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಪ್ರಮುಖ ಅಂಗವಾಗಿ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮ್ಹಾನ್ಸ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಯುವ ಸ್ಪಂದನ ಯೋಜನೆಯಡಿಯಲ್ಲಿ ಜೀವನ ಕೌಶಲ್ಯಗಳ ಕುರಿತು ವಿಶೇಷ ತರಬೇತಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಕ್ಷೇತ್ರ ಸಂಪರ್ಕಾಧಿಕಾರಿಗಳಾದ ಕು.ಪೂಜಾ ಸಿದ್ದಿ ಹಾಗೂ ಶ್ರೀ ಅನಿಲ್ ರಾಜ್ ರವರು ಈ ಅಧಿವೇಶನವನ್ನು ನಡೆಸಿಕೊಟ್ಟರು.
ಅಧಿವೇಶನದಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಉದ್ದೇಶ, ಅದರ ಸೇವೆಗಳು ಹಾಗೂ ಯುವಜನರ ಮಾನಸಿಕ ಆರೋಗ್ಯದಲ್ಲಿ ಯುವ ಸ್ಪಂದನದ ಪಾತ್ರದ ಕುರಿತು ವಿವರವಾಗಿ ತಿಳಿಸಲಾಯಿತು. ಜೊತೆಗೆ ಯುವಜನರು ಜೀವನದಲ್ಲಿ ಎದುರಿಸುವ ಭಾವನಾತ್ಮಕ ಸಮಸ್ಯೆಗಳು, ಒತ್ತಡ ಮತ್ತು ಗೊಂದಲಗಳನ್ನು ಸಮರ್ಥವಾಗಿ ಎದುರಿಸಲು ಜೀವನ ಕೌಶಲ್ಯಗಳ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು.
ಸ್ವ-ಅರಿವು, ಭಾವನೆಗಳನ್ನು ಸಮರ್ಥವಾಗಿ ನಿರ್ವಹಿಸುವುದು, ಒತ್ತಡದ ನಿರ್ವಹಣೆ, ಉತ್ತಮ ಸಂವಹನ ಕೌಶಲ್ಯ, ಸೃಜನಾತ್ಮಕ ಚಿಂತನೆ ಹಾಗೂ ಸಹಾನುಭೂತಿ…. ಹೀಗೆ ಮೊದಲಾದ ಜೀವನ ಕೌಶಲ್ಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಿಸಲಾಯಿತು. ಚರ್ಚೆಗಳು, ಉದಾಹರಣೆಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ವಿಷಯವನ್ನು ಸರಳವಾಗಿ ಪರಿಚಯಿಸಲಾಯಿತು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಯುವಜನರಲ್ಲಿ ಸಮಾಜದತ್ತ ಇರುವ ಹೊಣೆಗಾರಿಕೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಯಿತು ಎಂದು ಕಾರ್ಯಕ್ರಮದ ಆಯೋಜಕರು ಮೆಚ್ಚುಗೆ ವ್ಯಕ್ತಪಡಿಸಿದರು.

Department of Youth Empowerment and Sports ಕಾರ್ಯಕ್ರಮದಲ್ಲಿ ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರೀಶ್.ಎಂ, ಎನ್ ಎಸ್ ಎಸ್ ಘಟಕ – 1 ರ ಕಾರ್ಯಾಕ್ರಮಾಧಿಕಾರಿಗಳು ಹಾಗೂ ಶಿಬಿರಾಧಿಕಾರಿಗಳಾದ ಶ್ರೀ ಮಧುಸೂದನ.ಎಸ್.ಎಂ, ಗೌರವ ಶಿಬಿರಾಧಿಕಾರಿಗಳು ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀ ಜಗದೀಶಯ್ಯ, ಸ್ವ – ಆರ್ಥಿಕ ಘಟಕದ ಶಿಬಿರಾಧಿಕಾರಿಗಳು ಹಾಗೂ ಕಾರ್ಯಾಕ್ರಮಾಧಿಕಾರಿಗಳಾದ ಶ್ರೀಮತಿ ಚಂದನ ವಾಗ್ಲೆ.ಆರ್.ಜೆ, ನಿವೃತ್ತ ಕೆ ಎ ಎಸ್ ಅಧಿಕಾರಿಗಳಾದ ಶ್ರೀ ಚಂದ್ರಪ್ಪ, ಬಸವೇಶ್ವರನಗರದ ಪೊಲೀಸ್ ನಿರೀಕ್ಷಕರಾದ ಶ್ರೀ ಚಿಕ್ಕಸ್ವಾಮಿ ಹಾಗೂ ಎಲೆಕ್ಟ್ರಿಕಲ್ ವಿಭಾಗದ ವಿಭಾಗಾಧಿಕಾರಿಗಳಾದ ಶ್ರೀ ಆನಂದ್ ರವರು ಉಪಸ್ಥಿತರಿದ್ದರು.

Scouts-Guides ಗೌರವ ಡಾಕ್ಟರೇಟ್ ಪಡೆದ ಪಿ‌.ಜಿ.ಆರ್.ಸಿಂಧ್ಯಾ ಅವರಿಗೆ ಸನ್ಮಾನ

0

Scouts-Guides ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನಡೆದ ಜಿಲ್ಲಾ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಶಿಬಿರ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಲಬುರ್ಗಿ ಕೇಂದ್ರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸ್ಕೌಟ್ಸ್-ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್.ಸಿಂದ್ಯ ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಗಜಾನನ ಮನ್ನಿಕೇರಿ ಇರ್ವರನ್ನೂ ಸವದತ್ತಿಯ ಬಿಇಒ ಕಚೇರಿ ಹಾಗೂ ತಾಲೂಕಾ ಸಂಸ್ಥೆಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವು ದೇಶದ ಮುಖ್ಯ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದ್ದು, ಈ ಕ್ಷೇತ್ರದಲ್ಲಿ ಸ್ಕೌಟ್ಸ್‌-ಗೈಡ್ಸ್ ನ ರೋವರ್ಸ್ ಮತ್ತು ರೇಜರ್ಸ್ ಗಳ ಶಿಬಿರ ಹಮ್ಮಿಕೊಂಡು ಸ್ವಚ್ಛತಾ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು. ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನನ ಮನ್ನಿಕೇರಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆ ಅಬಲೆಯಲ್ಲ, ಅವಳು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ ಎಂದರು. ಸವದತ್ತಿ ಬಿಇಒ ಎ.ಎ.ಖಾಜಿ ಮಾತನಾಡಿ ಮಕ್ಕಳಲ್ಲಿ ಶಿಸ್ತು ಸಂಯಮ ಬೆಳೆಸಲು ಸ್ಕೌಟ್ಸ್‌-ಗೈಡ್ಸ್ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎರಡೂ ಶೈಕ್ಷಣಿಕ ಜಿಲ್ಲೆಯ ಮಹಿಳಾ ಅಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠ DDPI , ಶ್ರೀಮತಿ ಮಹದೇವಿ ನಾಯಕ BEO ನಿಪ್ಪಾಣಿ, ಶ್ರೀಮತಿ ಪಿ ಬಿ ಪಾಟೀಲ BEO ಹುಕ್ಕೇರಿ, ಶ್ರೀಮತಿ ಉಮಾದೇವಿ ಹಿರೇಮಠ DYPC ಬೆಳಗಾವಿ, ಶ್ರೀಮತಿ ಸುರೇಖಾ ಮಿರ್ಜಿ ಖಾನಾಪುರ PEO, ಶ್ರೀಮತಿ ಸಾಧನಾ ಎಂ ಭದ್ರಿ PEO ಬೆಳಗಾವಿ ಗ್ರಾಮೀಣ, ಶ್ರೀಮತಿ ಜಾಹಿರಾ ಪಟೇಲ್ PEO ಬೆಳಗಾವಿ ನಗರ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ಟ್ರಸ್ಟ್ ಉಪ ಕಾರ್ಯದರ್ಶಿಗಳಾದ ಶ್ರೀಮತಿ ನಾಗರತ್ನ ಚೋಳನ, ಶ್ರೀಮತಿ ಪಲ್ಲವಿ ನಾಡಕರ್ಣಿ ಜೈನ ಶಿಕ್ಷಣ ಸಂಸ್ಥೆ ಬೆಳಗಾವಿ, ಶ್ರೀಮತಿ ಅಪರ್ಣ ದೇಶಪಾಂಡೆ ಫೀನಿಕ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ ಹೊಣಗ, ಶ್ರೀಮತಿ ಚೇತನ ಪಾಟೀಲ್ ಕೆಎಲ್ಇ ಇಂಗ್ಲಿಷ್ ಮಾಧ್ಯಮ ಶಾಲೆ ಗೋಕಾಕ್, ಶ್ರೀಮತಿ ಭಾರತಿ ತೂಗಶೆಟ್ಟಿ ಅಡುಗೆ ಸಹಾಯಕರು ಇವರುಗಳನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯವಾಗಿ “ಶ್ರೇಷ್ಠ ಸೇವಾ ಪ್ರಶಸ್ತಿ” ಯನ್ನು ನೀಡಿ, ಗೌರವಿಸಿ ಸತ್ಕರಿಸಲಾಯಿತು.

Scouts-Guides ಶಿಬೀರದಲ್ಲಿ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ಪದವಿ ಮಹಾವಿದ್ಯಾಲಯಗಳ 300 ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳು, ನಾಲ್ಕು ದಿನದವರೆಗೆ ಯಲ್ಲಮ್ಮ ದೇವಸ್ಥಾನದ ಪ್ರಾಂಗಣದ ಸ್ವಚ್ಛತೆ ಮತ್ತು ಜಾತ್ರಾ ನಿಮಿತ್ಯ ಎಲ್ಲಮ್ಮ ದೇವಸ್ಥಾನದ ಹುಂಡಿಯ ಹಣ ಎಣಿಕೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ತಾಲೂಕುಗಳ ಸ್ಕೌಟ್ ಕಾರ್ಯದರ್ಶಿಗಳು ಹಿರಿಯ ದಳ ನಾಯಕರುಗಳು, ಜಿಲ್ಲೆಯ ರೋವರ್ಸ್ ರೆಂಜರ್ಸ್ ವಿದ್ಯಾರ್ಥಿಗಳು ರೋವರ್ ರೇಂಜರ್ ನಾಯಕರುಗಳು ಹಾಗೂ ಸಿ.ಆರ್.ಪಿಗಳು ಉಪಸ್ಥಿತರಿದ್ದರು.