Monday, March 23, 2026
Monday, March 23, 2026
Home Blog Page 483

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

0

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಿವಮೊಗ್ಗದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಆಗಸ್ಟ್-2024ರಲ್ಲಿ ಪ್ರಕಟಣೆ ನೀಡಲಾಗಿದ್ದು, ನಿವೇಶನ ಹಂಚಿಕೆಯ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ನ.25 ರಿಂದ ದಿ:05/12/2024ರವರೆಗೆ ವಿಸ್ತರಿಸಲಾಗಿದೆ ಎಂದು ಶಿ-ಭ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

Shivamogga City Corporation ಒಂದು ತಿಂಗಳಲ್ಲಿ ಏಕರೀತಿಯ ಕರವಸೂಲಾತಿ ಹೊಸ ಕಾಯ್ದೆ ಜಾರಿ- ಸಚಿವ ರಹೀಂ ಖಾನ್

0

Shivamogga City Corporation ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರಪಾಲಿಕೆಯ ಮಾದರಿಯಲ್ಲಿ ಎಲ್ಲಾ ಆಸ್ತಿಗಳನ್ನು ಎ ಮತ್ತು ಬಿ ಖಾತಾಗಳನ್ನಾಗಿ ವಿಂಗಡಿಸಿ, ರಾಜ್ಯದಾದ್ಯಂತ ಏಕರೀತಿಯ ಕರವಸೂಲಾತಿಗೆ ಹೊಸ ಕಾಯ್ದೆಯೊಂದನ್ನು ಮುಂದಿನ ಒಂದು ತಿಂಗಳೊಳಗಾಗಿ ಜಾರಿಗೊಳಿಸಲಾಗುವುದು ಎಂದು ಮಾನ್ಯ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್ ಅವರು ಹೇಳಿದರು.
ಶಿವಮೊಗ್ಗ ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಜ್ಯದ ಬಹುತೇಕ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇತ್ತೀಚಿನ ಕೆಲವು ದಶಕಗಳಿಂದೀಚೆಗೆ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಅಧಿಕೃತವಾಗಿ ಹಾಗೂ ಇನ್ನೂ ಕೆಲವು ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಎಲ್ಲಾ ಕಟ್ಟಡಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳಿಗೆ ಸಂದಾಯವಾಗಬೇಕಾದ ಭಾರೀ ಪ್ರಮಾಣದ ಕರ ವಸೂಲಾಗದೇ ಬಾಕಿ ಉಳಿಯುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುವುದಾಗಿ ಅವರು ನುಡಿದರು.
ಜಿಲ್ಲೆಯ ಮಹಾನಗರಪಾಲಿಕೆಯಲ್ಲಿ ಕೊರತೆಯಿರುವ ಹುದ್ದೆಗಳಲ್ಲಿ ಕೆಲವು ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಅಲ್ಲದೇ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ನೇರಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ೩೮ ಪೌರಕಾರ್ಮಿಕರ ನೇರನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಅವರು ಸಂಬಂಧಿಸಿದ ಮುಖ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಕರವಸೂಲಾತಿಗೆ ಸಂಬಂಧಿಸಿದಂತೆ ಸಿಬ್ಬಂಧಿಗಳ ಕೊರತೆ ಇರುವ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸ್ವಯ ಸಹಾಯ ಗುಂಪುಗಳ ಪ್ರತಿನಿಧಿಗಳ ನೆರವನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿದ ವಿಶಾಲವಾದ ಸ್ವತ್ತುಗಳಿದ್ದು, ವಾಣಿಜ್ಯ ಸಂಕೀರ್ಣ ನಿರ್ಮಿಸಿ, ನಿರ್ವಹಿಸಲು ಉತ್ಸುಕರಿದ್ದು, ಕ್ರಿಯಾಯೋಜನೆ ತಯಾರಿಸಿ, ಪ್ರಸ್ತಾವನೆ ಸಲ್ಲಿಸಿದಲ್ಲಿ ಸರ್ಕಾರದಿಂದ ಅಗತ್ಯ ಹಣಕಾಸಿನ ನೆರವನ್ನು ಒದಗಿಸಲಾಗುವುದು ಎಂದರು.
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ೧೮೦ಇಂದಿರಾ ಕ್ಯಾಂಟೀನ್‌ಗಳನ್ನು ಮಂಜೂರು ಮಾಡಿ, ಜನಸಾಮಾನ್ಯರ ಹಸಿವು ಇಂಗಿಸುವ ಕಾರ್ಯ ಮಾಡಿದ್ದರು. ಪ್ರಸ್ತುತ ಸಂದರ್ಭದಲ್ಲಿಯೂ ಪುನಃ ೧೮೦ಇಂದಿರಾ ಕ್ಯಾಂಟೀನುಗಳನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿವೆ ಎಂದ ಅವರು, ಕೆಲವು ಕ್ಯಾಂಟೀನುಗಳಲ್ಲಿ ನಿರ್ವಹಣೆ ಸರಿಯಾಗಿ ಆಗದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿವೆ. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಮಾನ್ಯ ಮುಖ್ಯಮಂತ್ರಿಗಳ ಕನಸಿನ ಯೋಜನೆಯ ಅನುಷ್ಠಾನದಲ್ಲಿ ವ್ಯತ್ಯಯಗಳು ಕಂಡುಬAದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದರು.
Shivamogga City Corporation ಆಹಾರ ವಿತರಣೆಯಲ್ಲಿಯೂ ತಪ್ಪು ದಾಖಲಾತಿಗಳ ನಿರ್ವಹಣೆ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇಲ್ಲಿಯೂ ದೂರುಗಳ ಕೇಳಿ ಬಂದಲ್ಲಿ ಕ್ಯಾಂಟೀನ್ ನಿರ್ವಹಣಾ ಗುತ್ತಿಗೆ ಸಂಸ್ಥೆಗಳಿಗೆ ನೀಡಿರುವ ಪರವಾನಿಗೆಯನ್ನು ಹಿಂಪಡೆಯಲಾಗುವುದಲ್ಲದೇ ಸಂಬAಧಿಸಿದ ಇಲಾಖಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಉದ್ಧೇಶಿತ ಯೋಜನೆಗಳಿಗೆ ಬಳಸಿಕೊಂಡು ಗುಣಮಟ್ಟದ ಕಾಮಗಾರಿಗಳನ್ನು ನಿಗಧಿತ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಅನುದಾನ ಸರ್ಕಾರಕ್ಕೆ ಹಿಂದಿರುಗಿ ಹೋಗುವ ಸಾಧ್ಯತೆ ಇದೆ ಎಂದವರು ನುಡಿದರು.
ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಘಟಕಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ಸಕಾಲದಲ್ಲಿ ಬಳಸುವಂತೆ ಕಳೆದ ಆರು ತಿಂಗಳ ಹಿಂದೆಯೇ ಸೂಚನೆ ನೀಡಲಾಗಿದೆ. ಆದಾಗ್ಯೂ ಅನುದಾನ ಬಳಸದೇ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ಕೂಡಲೇ ಹಣ ಬಳಕೆ ಮಾಡಿ ವರದಿ ನೀಡುವಂತೆ ಸಚಿವರು ಸೂಚಿಸಿದರು.
ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಎಲ್ಲಾ ಶಾಲೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು ಅವರು ಮಾತನಾಡಿ, ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ನದಿಗೆ ಕಲುಷಿತ ನೀರು ಸೇರುತ್ತಿದೆ. ಅದರ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಅಲ್ಲದೇ ನಗರವಾಸಿಗಳಿಗೆ ಸರಬರಾಜು ಮಾಡಲಾಗುತ್ತಿರುವ ನೀರನ್ನು ಶುದ್ಧೀಕರಿಸಿ ಪೂರೈಸಲು ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ರಾಜ್ಯ ಪೌರಾಡಳಿತ ನಿರ್ದೇಶನಾಲಯದ ವ್ಯವಸ್ಥಾಪಕ ಪ್ರುಭುಲಿಂಗ ಕವಳೀಕಟ್ಟಿ, ಬೋವಿ ನಿಗಮದ ರಾಜ್ಯಾಧ್ಯಕ್ಷ ರವಿಕುಮಾರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಧ್ಯಕ್ಷರು ಉಪಸ್ಥಿತರಿದ್ದರು.

MESCOM ನವೆಂಬರ್ 27. ಪಿಳ್ಳಂಗಿರಿ ಎನ್ ಜೆ ವೈ & ಜಾವಳ್ಳಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದ ಪಿಳ್ಳಂಗಿರಿ ಎನ್‌ಜೆವೈ ಮತ್ತು ಜಾವಳ್ಳಿ ಐ ಪಿ ಮಾರ್ಗಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ನ.27 ರಂದು ಬೆಳಗ್ಗೆ 9.00 ರಿಂದ ಸಂಜೆ 5.00ರವರೆಗೆ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, MESCOM ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ

Department for the Empowerment of Differently Abled ವಿಶೇಷ ಚೇತನ ಮಕ್ಕಳಿಗೆ & ವಯಸ್ಕರಿಗೆ ವಿಪತ್ತು ನಿರ್ವಹಣೆ ತರಬೇತಿ

0

Department for the Empowerment of Differently Abled ದಿನಾಂಕ 22-11-2024 ರಂದು ಹಾನಗಲ್ ಶ್ರೀ ಕುಮಾರ ಮಹಾಸ್ವಾಮಿಗಳ ಸಭಾಭವನ ಶಿವಮೊಗ್ಗ ಇಲ್ಲಿ ಅಂಗವಿಕಲ ಮಕ್ಕಳಿಗೆ ಮತ್ತು ವಯಸ್ಕರಿಗೆ ವಿಪತ್ತು ನಿರ್ವಹಣಾ ತರಬೇತಿಯನ್ನು ಏರ್ಪಡಿಸಲಾಗಿತ್ತು.

ಈ ತರಬೇತಿಯನ್ನು ಎನ್ ಡಿ ಆರ್ ಎಫ್ ತಂಡದ ಇನ್ಸೆಕ್ಟರ್ ಆದ ಶಾಂತಿ ಲಾಲ್ ಜಾಟಿಯ ಅವರು ನಡೆಸಿಕೊಟ್ಟರು.

Department for the Empowerment of Differently Abled ಶಿವಮೊಗ್ಗ, ಭದ್ರಾವತಿ ತಾಲೂಕು ತಾಲ್ಲೂಕು ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಗೋಪಿನಾಥ ಹಾಗೂ ಅಂಗವಿಕಲ ಕಲ್ಯಾಣ ಅಧಿಕಾರಿಗಳ ಕಚೇರಿ ಸಿಬ್ಬಂದಿಗಳು ಹಾಗೂ ಸುಮಾರು ನೂರು ಜನ ಶಿಬಿರಾರ್ಥಿಗಳು ಹಾಜರಿದ್ದರು.

Dandavati Yojana ದಂಡಾವತಿ ಯೋಜನೆ ಬದಲಾಗಿದೆ. ಹೆಚ್ಚುವರಿ ಅನುದಾನದಿಂದ ಬ್ಯಾರೇಜ್ ನಿರ್ಮಾಣ- ಮಧು ಬಂಗಾರಪ್ಪ

0

Dandavati Yojana ರೈತರ, ಜಮೀನುಗಳಿಗೆ ತೊಂದರೆಯಾಗದೆ ದಂಡಾವತಿ ಯೋಜನೆಗೆ ಪರ್ಯಾಯವಾಗಿ ನೀರಾವರಿ ಯೋಜನೆ ಕೈಗೊಳ್ಳಲು ಚಿಂತಿಸಲಾದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಸೊರಬ ಪಟ್ಟಣದ ಶಿರಾಳಕೊಪ್ಪ ರಸ್ತೆಯ ಕೆಇಬಿ ಕಚೇರಿ ಮುಂಭಾಗ ಪಿಡಬ್ಲ್ಯುಡಿ ಇಲಾಖೆಯಿಂದ ಕುಮಟ, ಕಡಮಡಗಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ 25 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಾಶ್ವತ ಕುಡಿಯುವ ನೀರಿಗಾಗಿ 650 ಕೋಟಿ ರೂ., ವೆಚ್ಚದಲ್ಲಿ 355 ಗ್ರಾಮಗಳಿಗೆ ಶರಾವತಿ ನದಿಯಿಂದ ಪೂರೈಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಪ್ರತಿ ಗ್ರಾಮಗಳಿಗೆ 92 ಯೋಜನೆಗಳ ಅಡಿಯಲ್ಲಿ 250ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು.

Dandavati Yojana ದಂಡಾವತಿ ಯೋಜನೆ ಬದಲಾಗಿದೆ. 190 ಕೋಟಿ ರೂ., ಮೀಸಲಾಗಿದದು, ಹೆಚ್ಚುವರಿ ಅನುದಾನ ತಂದು ಬ್ಯಾರೇಜ್ ನಿರ್ಮಾಣಕ್ಕೆ ಮುಂದಾಗಲಾಗುವುದು. ತಾಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ೪೪ ಗ್ರಾಮಗಳ 3 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ಕಲ್ಪಿಸಲು 53 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆದಿರುವುದಕ್ಕೆ ಸಾಕ್ಷಿಯಾಗಿದೆ. ಬಿಪಿಎಲ್ ಕಾರ್ಡ್ದಾರರಿಗೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ತಡೆಹಿಡಿಯುವುದಿಲ್ಲ. ಸರ್ಕಾರದ ಯೋಜನೆಯನ್ನು ಎಲ್ಲಾ ವರ್ಗದ ಜನರು ಪಕ್ಷ ಬೇಧ ಮರೆತು ಒಪ್ಪಿಕೊಂಡಿರುವುದರಿಂದ ಮುಂದುವರೆಸಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಮಂಜುಳಾ ಹೆಗಡಾಳ್, ಇಒ ಡಾ. ಎನ್.ಆರ್. ಪ್ರದೀಪ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ, ಮುಖಂಡರಾದ ತಬಲಿ ಬಂಗಾರಪ್ಪ, ಡಿ.ಬಿ. ಅಣ್ಣಪ್ಪ, ಎಂ.ಡಿ. ಶೇಖರ್, ಸದಾನಂದಗೌಡ ಬಿಳಗಲಿ, ಕೆ.ಪಿ. ಗೌಡ, ಎಲ್.ಜಿ. ರಾಜಶೇಖರ್, ವಿಶಾಲಕ್ಷಮ್ಮ, ಅತಿಕ್, ಕಲ್ಲಂಬಿ ಹಿರಿಯಣ್ಣ, ನೆಹರೂ ಕೊಡಕಣಿ, ನಾಗರಾಜ್ ಚಿಕ್ಕಸವಿ, ಪುರಸಭೆ ಸದಸ್ಯರಾದ ಶ್ರೀರಂಜನಿ ಪ್ರವೀಣ್ ಕುಮಾರ್, ಪ್ರೇಮಾಟೋಕಪ್ಪ, ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಪಿಡಬ್ಲ್ಯುಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ. ಯಶೋಧರ್, ಇಂಜಿನಿಯರ್‌ಗಳಾದ ಜಿ.ಬಿ. ಕಿರಣ್‌ಕುಮಾರ್, ಎಂ.ಆರ್. ಮನೋಜ್, ಇ. ಶಿವಮೂರ್ತಿ, ಟಿ. ವಿನಾಯಕ ಸೇರಿದಂತೆ ಮತ್ತಿತರರಿದ್ದರು.

ಕೋಟೆಗಂಗೂರು ‘ ‘ಗ್ರಾಪಂ’ ಉಪಚುನಾವಣೆ ಡಿ.ಎಲ್.ರಮೇಶ್ ಜಯಭೇರಿ

0

ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಗ್ರಾಮ ಪಂಚಾಯಿತಿಯ ದೇವಕಾತಿಕೊಪ್ಪದಲ್ಲಿ ತೆರವಾಗಿದ್ದ ಗ್ರಾ.ಪಂ ಸದಸ್ಯರ ಖಾಲಿ ಸ್ಥಾನಕ್ಕೆ ಮೊನ್ನೆ ನಡೆದಿದ್ದ ಉಪಚುನಾವಣೆಯಲ್ಲಿನ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ನಡೆದಿದ್ದು, ಅಭ್ಯರ್ಥಿ ದೇವಕಾತಿಕೊಪ್ಪದ ಡಿ.ಎಲ್. ರಮೇಶ್ ಭಾರಿ ಬಹುಮತದ ಅಂತರದಿಂದ ಜಯಗಳಿಸಿದ್ದಾರೆ.

ಒಟ್ಟು ಚಲಾವಣೆಯಾದ 738 ಮತಗಳಲ್ಲಿ 15 ಮತಗಳು ತಿರಸ್ಕೃತಗೊಂಡಿದ್ದು, 608 ಮತಗಳನ್ನು ಡಿ.ಎಲ್. ರಮೇಶ್ ಪಡೆದಿದ್ದಾರೆ. ಪ್ರತಿಸ್ಪರ್ಧಿ ಸುರೇಶ್ ಅವರಿಗೆ 115 ಮತಗಳು ಸಿಕ್ಕಿದ್ದು, ಪರಭವಗೊಂಡಿದ್ದಾರೆ.
ನೂತನ ಸದಸ್ಯ ಡಿ.ಎಲ್. ರಮೇಶ್ ಅವರಿಗೆ ದೇವಕಾತಿಕೊಪ್ಪದ ಗ್ರಾಮಸ್ಥರು ಹಾಗೂ ಕೋಟೆಗಂಗೂರು ಗ್ರಾಮ ಪಂಚಾಯಿತಿ ಅಭಿನಂದಿಸಿದೆ.

Rashtrotthana Sahitya  “ಅಜೇಯ” ಶ್ರೀನಿವಾಸನ್ ಅವರ ” ನನ್ನ ಕೃಷ್ಣ” ಪುಸ್ತಕ ಬಿಡುಗಡೆ

0

Rashtrotthana Sahitya  ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ನ. 23ರಂದು ಅಜೇಯ ಪತ್ರಿಕೆ ಸಂಪಾದಕ ಎಂ. ಶ್ರೀನಿವಾಸನ್ ಅವರ ಹೊಸ ಪುಸ್ತಕ ‘ನನ್ನ ಕೃಷ್ಣ’ ಬಿಡುಗಡೆಯಾಯಿತು.

Rashtrotthana Sahitya  ಶತಾವಧಾನಿ ಡಾ.ಆರ್. ಗಣೇಶ್ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಲೇಖಕರಾದ ದಿವಾಕರ ಹೆಗಡೆ, ಡಾ. ಹೆಚ್.ಆರ್. ವಿಶ್ವಾಸ, ಪ್ರೊ. ಎಂ.ಜಿ. ವೇದವ್ಯಾಸ್, ಹರಿ ರವಿಕುಮಾರ್ ಹಾಗೂ ಉತ್ಥಾನ ಪತ್ರಿಕೆಯ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ, ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಮುಖರಾದ ವಿಘ್ನೇಶ್ವರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.

Lok Sabha ಸಂಸದರ ಹಾಜರಿ ಪುಸ್ತಕಕ್ಕೆ ಈಗ ಡಿಜಿಟಲ್ ರೂಪ

0

Lok Sabha ಲೋಕಸಭೆಯಲ್ಲಿ ನವೀನ ಮತ್ತು ತಾಂತ್ರಿಕ ಪ್ರಗತಿಗಳು. ಇಂದು 18ನೇ ಲೋಕಸಭೆಯ ಮೂರನೇ ಅಧಿವೇಶನದ ಆರಂಭದಲ್ಲಿ ಸಂಸದರು ತಮ್ಮ ಡಿಜಿಟಲ್ ಹಾಜರಾತಿಯನ್ನು ಆನ್‌ಲೈನ್‌ನಲ್ಲಿ ಗುರುತಿಸಿದ್ದಾರೆ.

Lok Sabha ಹಾಜರಾತಿಯನ್ನು ಈಗ ಸ್ಟೈಲಸ್ ಮತ್ತು ಡಿಜಿಟಲ್ ಟ್ಯಾಬ್‌ನಿಂದ ಗುರುತಿಸಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಈ ಉಪಕ್ರಮವನ್ನು ಲೋಕಸಭಾ ಸದಸ್ಯರು ಸ್ವಾಗತಿಸಿದ್ದಾರೆ, ಇದನ್ನು ಸರಳ, ಅನುಕೂಲಕರ ಮತ್ತು ಸ್ನೇಹಪರ ಎಂದು ವಿವರಿಸಿದ್ದಾರೆ.

Akhil Bharath Sahitya Parishad ರಾಜ್ಯೋತ್ಸವಗಳಿಗೆ ಅರ್ಥಬರುವುದು ಮುಂದಿನ ಪೀಳಿಗೆಯವರು ಮಾತೃಭಾಷೆಯಲ್ಲಿ ಅವಲೋಕಿಸುವಂತೆ ಮಾಡಿದಾಗ ಮಾತ್ರ : ಲಕ್ಷ್ಮೀನಾರಾಯಣ ಕಾಶಿ

0

Akhil Bharath Sahitya Parishad ಶಿವಮೊಗ್ಗದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು.ರಾಜ್ಯೋತ್ಸವ ಕವಿಗೋಷ್ಠಿ ಯನ್ನ ಏರ್ಪಡಿಸಿತ್ತು.
ತಾ.23-11-24 ರ ಶನಿವಾರ ವಿನೊಬಾ ನಗರದ ಪೊಲೀಸ್ ಚೌಕಿಯ ಸನಿಹವಿರುವ ವಿಕಾಸ ಪ್ರಾಥಮಿಕ ಶಾಲೆಯ ಸಭಾಗೃಹದಲ್ಲಿ ಕವಿ ,ಕವಿಯಿತ್ರಿಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಮಂಜುನಾಥ್ ಬುಳ್ಳಾಪುರ,‌ ತಿಮ್ಮೇಶಪ್ಪ, ರುದ್ರೇಶ್, ಶಾಲಿನಿ, ಶುಭಾ ಕುಸ್ಕೂರು, ಪೂರ್ಣಿಮಾ ಪ್ರಸನ್ನ, ಪದ್ಮಾದಿವಾಕರ್, ಚೇತನ್ ಅಜ್ಜಿಹಳ್ಳಿ, ಸಂತೋಷ್ ಬಿದರಗದ್ದೆ, ಶಾರದಾ ಉಳುವೆ, ಮನೋರಮಾ, ರಮೇಶ್ ಭದ್ರಾವತಿ,
ಮಮತಾ ಹೆಗ್ಡೆ, ಅಂಜುಂ, ಮುಂತಾದವರು ತಾವು ರಚಿಸಿದ ಕನ್ನಡ ಪ್ರೀತಿ, ದೇಶಾಭಿಮಾನದ ವಸ್ತುವುಳ್ಳ ಕವಿತೆಗಳನ್ನ ವಾಚಿಸಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಶಿವಮೊಗ್ಗದ ಹಿರಿಯ ಚಿಂತಕ‌ ಹಾಗೂ ಲೇಖಕ ಶ್ರೀಲಕ್ಷ್ಮೀನಾರಾಯಣ ಕಾಶಿ ಉದ್ಘಾಟಿಸಿದರು.
ಕನ್ನಡ ಭಾಷೆಯನ್ನ ಮಕ್ಕಳ ಹಂತದಿಂದಲೇ ಪೋಷಿಸಬೇಕು. ಇಂಗ್ಲೀಷ್ ವ್ಯಾಮೋಹದಿಂದ ಇಂದಿನ ಪೋಷಕರು ಮನೆ ಮಾತಿನಲ್ಲಿ ಆಲೋಚಿಸುವುದನ್ನ ಬಿಟ್ಟು ಇಂಗ್ಲೀಷ್ ಮೂಲಕವೇ ಮನಸ್ಸಿನಲ್ಲಿ ಪ್ರತಿಮೆಗಳನ್ನ ಕಟ್ಟಿಕೊಳ್ಳುವಲ್ಲಿ ಸೂಕ್ತ ಪದಸಂಪದ ಕೊರತೆಗೊಳಗಾಗುತ್ತಿದ್ದಾರೆ. ಭಾಷೆ ಬೆಳೆಯುವುದಾದರೂ ಹೇಗೆ? ಅದನ್ನ ಬಳಸುತ್ತಲೇ ಬೆಳೆಸಬೇಕು ಎಂದು ಲೇಖಕ ಕಾಶಿ ಕರೆಕೊಟ್ಟರು.
ರಾಜ್ಯೋತ್ಸವ ಮತ್ತು ಕವಿತೆಗಳ ಬಗ್ಗೆ ಲಕ್ಷ್ಮೀನಾರಾಯಣ ಕಾಶಿ ಅವರು ಮಾತನಾಡಿ” ರಾಜ್ಯೋತ್ಸವಗಳಿಗೆ ಅರ್ಥ ಬರುವುದು ನಾವು ನಮ್ಮ ಮುಂದಿನ ಪೀಳಿಗೆಯವರು ಮಾತೃಭಾಷೆಯಲ್ಲಿಅವಲೋಕಿಸುವಂತೆ ಮಾಡಿದಾಗ ಮಾತ್ರ. ಎಂದರು.
ಕವಿಗಳೂ ಕೂಡ ತಾವು ಬಳಸುವ ಭಾಷೆಯಲ್ಲಿ ಆರ್ದ್ರತೆ ತುಂಬಿದಾಗ ಮಾತ್ರ. ಅದು ಸಹೃದಯರನ್ನ ಸಶಕ್ತವಾಗಿ ಸ್ಪಂದಿಸುವಂತೆ ಮಾಡುತ್ತದೆ. ಇಲ್ಲದಿದ್ದರೆ ಕವಿಯ ಭಾವನೆಗಳು ಸಂವಹನವಾಗದೇ ಕವಿತೆ ಸೋಲುತ್ತದೆ ಎಂದರು.
ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಭಾಸಾಪ ಜಿಲ್ಲಾಧ್ಯಕ್ಷ ಡಾ.ಸುಧೀಂದ್ರ ವಹಿಸಿದ್ದರು.
ಕನ್ನಡದ ಬಗ್ಗೆ ಪ್ರೀತಿ,ಅಭಿಮಾನ ಕುರಿತೇ ಕವಿತೆಗಳನ್ನ ಕವಿಗಳಿಂದ ಬರೆಯಲು ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಅದರಂತೆ ಕವಿತೆಗಳನ್ನ ಕಳಿಸಿದರು. ಹೆಸರು ಮಾಡದ ಕವಿಗಳಿಗೆ ಇದು ಆರಂಭದ ವೇದಿಕೆ.
ಮುಂದೆ ಅವರೆಲ್ಲ‌ ಹೆಸರು ಮಾಡಲಿಯೆಂಬ ಹೆಬ್ಬಯಕೆ ” ನಮ್ಮದಾಗಿದೆ. ಕನ್ನಡ ಪ್ರೀತಿಯನ್ನು ಕವಿ/ಕವಿಯತ್ರಿಯರು
ಸೊಗಸಾಗಿ‌ ತಮ್ಮ ಕವಿತೆಗಳಲ್ಲಿ ನಿವೇದಿಸಿದ್ದಾರೆ. ಬರೆಯುವ ಭರದಲ್ಲಿ ವ್ಯಾಕರಣ,ಪದ ಸಂಪತ್ತಿ, ಕಾವ್ಯಾಂಶಗಳಿಗೆ ಗಮನ ಕೊಡಿ. ರಾಷ್ಟ್ರಕವಿ ಕುವೆಂಪು ಅವರು ಕವಿಯ ಕೆಲಸ ಏನು ಎಂಬುದನ್ನ “ಬಾರಿಸು ಕನ್ನಡ ಡಿಂಡಿಮವ”ಎಂಬಲ್ಲಿ
ಸ್ಪಷ್ಟ ಪಡಿಸಿದ್ದಾರೆ.
ಸತ್ತಂತಿಹರನು ಬಡಿದೆಚ್ಚರಿಸು..
ಸಮಾಜದಲ್ಲಿ ಸುತ್ತಮುತ್ತಲೇನು ನಡೆದರೂ ಮೂಕ ಶವಗಳಿಂತಿರುವ ಜನವನ್ನ, ಶವನಿದ್ರೆಯಿಂದ ಎಚ್ಚರಿಸು.ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಜಾಗೃತಿ ಮೂಡಿಸು.
ಮುಂದೆ..
Akhil Bharath Sahitya Parishad ಕಚ್ಚಾಡುವವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು.
ಒಟ್ಟಿಗೆ ಬಾಳುವ ತೆರದಲಿ ಹರಸು.
ಈ ಸಮಾಜದಲ್ಲಿನ ಜಾತಿ ಮತ ಭೇದ, ಬಡವ ಬಲ್ಲಿದ, ಶ್ರೀಮಂತ ಬಡವ, ಧನಬಲ, ತೋಳ್ಬಲಗಳೇ ಪರಸ್ಪರ ಕಚ್ಚಾಟ ನಡಸಿವೆ. ಅಂತಹ ಮನಸ್ಸುಗಳನ್ನ ಕೂಡಿಸುವ, ಒಂದಾಗುವಂತೆ ಒಲಿಸುವ ಕಾವ್ಯ ಬರೆ.
ಹೊಟ್ಟೆಯ ಕಿಚ್ಚು ಆರಿಸಲಾಗದೇ ಹಣಗುವವರ ಬಗ್ಗೆ
ಪಶ್ಚಾತ್ತಾಪದ ಕಣ್ಣೀರು‌, ಅನುಕಂಪ ನಿನ್ನ ಕಾವ್ಯದಲ್ಲಿರಲಿ.
ಇಷ್ಟೆಲ್ಲಾ ಆದರೂ ಸುಮ್ಮನಿರ ಬೇಡ.ನಿನ್ನ ಕಾವ್ಯದ ಗುರಿ ಏನೆಂದರೆ’ ಒಟ್ಟಿಗೆ ಬಾಳುವ ತೆರೆದಲ್ಲಿ ಇರಲು, ಬಾಳುವೆ ಮಾಡಲು ನಿನ್ನ ಕಾವ್ಯದ ಮೂಲಕ ಹಾರೈಸು ಎಂದಿದ್ದಾರೆ.
ಅಂತಹ ಪಾರಂಪರಿಕ‌ ಕವಿಗಳು ಕನ್ನಡದ ಹಿರಿಮೆ. ಅಂತಹವರ
ಬರಹಗಳನ್ನ ಓದಬೇಕು ಎಂದು ಕವಿಗಳಿಗೆ ಮನಗಾಣಿಸುವಂತೆ ಮಾತನಾಡಿದರು.
ಶ್ರೀಮತಿ ಮಾಲಾ ಮಂಜುನಾಥ್ ಅವರು ಜಗನ್ನಾಥ ದಾಸರ ” ದಯಮಾಡು ವಾಗ್ದೇವಿಯೆ” ಕೃತಿಯ ಮೂಲಕ ಪ್ರಾರ್ಥಿಸಿದರು.
ಅಭಾಸಾಪದ ವಿಭಾಗೀಯ ಸಂಚಾಲಕ ಶ್ರೀಹರ್ಷ ಅವರು ” ಈ ಮುಂಚೆ ಇಂಗ್ಲೀಷ್ ಓದಿಕೊಂಡು ಬಂದ ಕನ್ನಡದ ಲೇಖಕರು
ಕನ್ನಡದಲ್ಲಿ ಸಮಕಾಲೀನ ಬರವಣಿಗೆ ಇಲ್ಲ. ಇಂಗ್ಲೀಷ್ ಸಾಹಿತ್ಯವೇ ಶ್ರೇಷ್ಠ ,ಕನ್ನಡ ಕನಿಷ್ಠ ಎಂಬ ಧೋರಣೆಯಿಂದ ಬರೆಯುತ್ತಿದ್ದ ಸಂದರ್ಭದಲ್ಲಿ ಅಭಾಸಾಪ ಕನ್ನಡದಲ್ಲಿ ಎಲ್ಲವೂ ಇದೆ ಎಂಬ ಧ್ಯೇಯದಿಂದ ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳಲು ಅಭಾಸಾಪ ಆರಂಭಿಸಿತು “ಎಂದರು.
ಸಮಾರಂಭವನ್ನ ಜ್ಯೋತಿ ಬೆಳಗುವ ಮೂಲಕ ಲೇಖಕ ಶ್ರೀಲಕ್ಷ್ಮೀನಾರಾಯಣ ಕಾಶಿ ಉದ್ಘಾಟಿಸಿದರು.
ಕವಿಯತ್ರಿ ಹಾಗೂ ಕೆ ಲೈವ್ ಉಪಸಂಪಾದಕಿ ಕು.ಅಂಜುಂ ಸೊಗಸಾಗಿ ಕಾರ್ಯಕ್ರಮ ನಿರೂಪಿಸಿದರು.
ಅಭಾಸಾಪ ದ ಸಂಪರ್ಕ ಪ್ರಮುಖ ಸತ್ಯನಾರಾಯಣ ವಂದಿಸಿದರು.

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

0

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು ದೀಪ, ಸಾಧನೆಯ ಸವಿಗೊಂದು ದೀಪ, ಭರವಸೆಯ ಬದುಕಿಗೊಂದು ದೀಪ, ಅಧ್ಯಯನಶೀಲತೆಗೊಂದು ದೀಪ, ಎಲ್ಲರೊಳಗೆ ಪ್ರೀತಿಯ ಮಳೆ ಸುರಿಸಿ, ಸಂಭ್ರಮ ಹೆಚ್ಚಿಸುವ ದೀಪ ಒಟ್ಟಾಗಿ ಬೆಳಗೋಣ. ಮಹಿಳೆಯಲ್ಲಿ ಕೌಶಲ್ಯ, ಕಲೆ, ಶ್ರದ್ಧೆ, ದಕ್ಷತೆ, ಮೇಧಾವಿತನ ಸಹಜವಾಗಿ ಇರುವಂತದ್ದು. ಇವುಗಳನ್ನು ಮತ್ತಷ್ಟು ಹೊಳಪು ಮಾಡಿಕೊಳ್ಳುವ ಕಾರ್ಯ ನಮ್ಮಿಂದಲೇ ಆಗಬೇಕು. ಭಾರತದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಲ್ಲಿ ಬಹುತೇಕ ಮಹಿಳೆಯರು ಈ ಸಾಮರ್ಥ್ಯ ಗುರುತಿಸಿಕೊಳ್ಳಲಾಗದೆ, ಬಳಸಿಕೊಳ್ಳಲಾಗದೆ, ಪ್ರಚುರಪಡಿಸಲಾಗದೆ ಸುಮ್ಮನಿದ್ದುಬಿಡುತ್ತಾರೆ. ತಮ್ಮ ಸಾಮರ್ಥ್ಯವನ್ನು ವಿವಿಧ ಆಯಾಮಗಳಲ್ಲಿ ಗುರುತಿಸಿಕೊಳ್ಳುವ ಕಾರ್ಯ ಮಹಿಳೆಯಿಂದಲೇ ಆಗಬೇಕು ಎಂದು ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದಿಂದ, ಕಾಸ್ಮೋ ಶುಭಾಗಂಣದಲ್ಲಿ ಹಮ್ಮಿಕೊಂಡಿದ್ದ ಮಹಿಳೆ: ಚಿಂತನ – ಮಂಥನ ಕಾರ್ಯಕ್ರಮದಲ್ಲಿ ಮಿತ್ರೆ ಕಾಸ್ಮೋ ಮಹಿಳಾ ಬಳಗದ ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ರಿಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ನುಡಿದರು. ಇಂದಿನ ಮಹಿಳಾ ಮಂಥನದ ವಿಚಾರ ಸ್ವಾವಲಂಬನೆ, ಕೌಶಲ್ಯ, ಕ್ರೀಡೆ, ಆರೋಗ್ಯ, ಕಾನೂನು, ಯೋಗಾಭ್ಯಾಸ ಇವೆಲ್ಲವೂ ಪ್ರತಿಯೊಬ್ಬ ಮಹಿಳೆಯ ಮನೋ, ದೈಹಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ ಎಂದೇ ಅಯೋಜಿಸಲಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಕಾಲಿಟ್ಟ ರಂಗಗಳಲ್ಲಿ ತನ್ನ ದೃಢ, ದಕ್ಷ, ಪ್ರಾಮಾಣಿಕ ನಿಲುವುಗಳಿಂದ ಕಷ್ಟಸಹಿಷ್ಣುತೆಯಿಂದ COSMO Club Shivamogga ಮುನ್ನಡೆಯನ್ನು ಸಾಧಿಸಿದ್ದಾಳೆ. ಹೀಗೆ ಮುನ್ನಡೆಯುತ್ತಿರುವ ಮಹಿಳೆಯನ್ನು ಕಾಲೆಳೆಯುವ ಮನಸ್ಥಿತಿಯವರೂ ಇದ್ದಾರೆ. ಮಹಿಳೆಯ ಸಮರ್ಥ ಯೋಜನೆ, ದೃಢ ಭಾವವನ್ನು ನೆಲಸಮ ಮಾಡುವವರೂ ಇದ್ದಾರೆ. ಆದರೆ ಎದೆ ಗುಂದದೆ ಸಾಧನೆಯತ್ತ ಮುನ್ನಡಬೇಕು. ಬಹು ಮುಖ್ಯವಾಗಿ ಮಹಿಳೆ ತನ್ನ ಬಾಹ್ಯ ಸೌಂದರ್ಯ, ಸಂತೋಷ, ಪ್ರವಾಸ, ವಿಲಾಸಗಳಿಗಷ್ಟೇ ಮನಸ್ಸು ನೀಡದೆ ಅಧ್ಯಯನ ಶೀಲ ಮನಸ್ಸನನ್ನು ಬೆಳೆಸಿಕೊಂಡು, ಸಮಾಜಮುಖಿ ಚಿಂತನೆಯತ್ತ ಮೊಗ ಮಾಡಿರುವುದರಿಂದಲೇ ಸಮಾಜ ಸುಭಿಕ್ಷವಾಗಿರುವುದು ಮರೆಯಬಾರದು. ನಮ್ಮ ಸಂತೋಷಕ್ಕಾಗೆ ಹಲವು ಕಾರ್ಯಕ್ರಮ ಮಾಡಿರುವ ನಾವು, ಇದೀಗ ಅಧ್ಯಯನ ಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣವೆಂದರು.

ಮೇಧಾ ತಂಡದ ನಾಯಕಿಯಾದ ಶ್ರೀಮತಿ. ಪ್ರಜ್ಞಾ ಕಿರಣ್‌ರವರು ಪ್ರಾಸ್ಥವಿಕ ನುಡಿಗಳನ್ನಾಡಿ ಚಿಂತನ ಮಂಥನಗಳು ಸದಾ ಬದುಕಿಗೆ ದಾರಿದೀಪ. ನಾವು ನಡೆದ ಹಾದಿಯ ಅವಲೋಕನದೊಂದಿಗೆ ಮುಂದಿಡಬಹುದಾದ ಹೆಜ್ಜೆಯನ್ನು ಹೊಳಪುಮಾಡುತ್ತದೆ. ನಮ್ಮೊಳಗೆ ಜ್ಙಾನವೆಂಬ ಅರಿವಿನ ದೀಪ ಹಚ್ಚಲು ಇಂತಹ ವಿಚಾರ ಸಂಕಿರಣಗಳು ಸಹಕಾರಿ. ಈ ದಿಸೆಯಲ್ಲಿ ಹಮ್ಮಿಕೊಂಡಿರುವ ಮಹಿಳಾ ಮಂಥನಕ್ಕೆ ತಾವೆಲ್ಲರೂ ಆಗಮಿಸಿದ್ದು ಸಂತೋಷ ಎಂದು ಶುಭ ನುಡಿದರು.

“ಮಹಿಳೆ ಮತ್ತು ಸ್ವಾವಲಂಬನೆ” ಕುರಿತು ಶ್ರೀಮತಿ. ಚಂದ್ರಕಲಾ ಎಸ್.ವಿ. ಅಧ್ಯಕ್ಷರು, ಸ್ನೇಹವಾಹಿನಿ ಸಹಕಾರ ಸಂಘ ಇವರು ಸ್ವಾವಲಂಬನೆಯತ್ತ ಹೊರಟ ಮಹಿಳೆಯ ಯೋಜನೆ ಬೇರೆ ಇದ್ದರೂ ಸಂಪನ್ಮೂಲ ಕ್ರೂಢೀಕರಣದ ಭಾವಶುದ್ಧಿ ಒಂದೇ ಇರುತ್ತದೆ. ಹಸು ಸಾಗಾಣಿಕೆ, ಸಾಂಬಾರ ಪದಾರ್ಥಗಳ ಮಾರಾಟ, ಕೃಷಿ ಉತ್ಪನ್ನಗಳ ಬೆಳವಣಿಗೆ, ಗೃಹ ಕೈಗಾರಿಕೆಗಲ್ಲಿ ತೊಡಗಿಕೊಳ್ಳುವಿಕೆ, ಸಾಂಸ್ಕೃತಿಕ, ಸೌಂದರ್ಯ, ಕಲೆ, ವಿಜ್ಞಾನ ಇತ್ಯಾದಿ ರಂಗಗಳಲ್ಲಿ ಪರಿಣಿತಿ ಪಡೆದು ಮತ್ತೊಬ್ಬರಿಗೆ ತರಬೇತಿ ನೀಡಿ ಆದಾಯಗಳಿಕೆಯತ್ತ ಮೊಗ ಮಾಡುವ ಚಟುವಟಿಕೆಗಳು ಅನೇಕವಿದೆ. ಈ ಬಗ್ಗೆ ಅರಿವನ್ನು ಪಡೆಯೋಣ ಎಂದರು.

“ಮಹಿಳೆ ಮತ್ತು ಆರೋಗ್ಯ” ಕುರಿತು ಡಾ: ವಿನಯಾ ಶ್ರೀನಿವಾಸ್, ಕಾರ್ಯದರ್ಶಿಗಳು ಐ.ಎಂ.ಎ. ಇವರು ಹೆಣ್ಣು ಸಂಸಾರದ ಕಣ್ಣು. ಆದರೆ ಸ್ವತಹಃ ಅವಳ ಆರೋಗ್ಯದ ಬಗ್ಗೆ ಅವಳ ಕಾಳಜಿ ಇಂದಿಗೂ ಕಡಿಮೆಯೆ. ರಕ್ತಹೀನತೆ, ಮಲಬದ್ಧತೆ, ಒಬೆಸಿಟಿ, ಋತುಚಕ್ರದ ತೊಂದರೆ, ಸ್ವಸ್ಥ ಮನಸ್ಸು ಇತ್ಯಾದಿಗಳತ್ತ ಅವಳು ಗಮನ ಕೊಡುವುದರಲ್ಲಿ ಹಿಂದಿರುತ್ತಾಳೆ. ಈ ಬಗ್ಗೆ ಜಾಗೃತಿ ಅಗತ್ಯವೆಂದರು.

“ಮಹಿಳೆ ಮತ್ತು ಕೌಶಲ್ಯ” ಕುರಿತು ಶ್ರೀಮತಿ. ಉಮಾವೆಂಕಟೇಶ್, ಮಹಿಳೆಗೆ ಕೌಶಲ್ಯ ಸಹಜವಾಗಿರುವಂತದ್ದು, ಅದನ್ನು ಒರೆಗೆ ಹಚ್ಚಿ, ಹೊಳಪು ಮಾಡಿಕೊಳ್ಳವ ಜಾಣ್ಮೆ ಮಹಿಳೆಗೆ ಇರಬೇಕು. ಅವಕಾಶಗಳು ವಿಪುಲವಾಗಿವೆ ಬಳಸಿಕೊಳ್ಳವ ಕೌಶಲ್ಯ ಹೊಂದಬೇಕು. ಸೀರೆ ಕುಚ್ಚು, ವಿವಿಧ ಪ್ರಕಾರದ ರವಿಕೆಹೊಲಿಯುವಿಕೆ, ಅದಕ್ಕೆ ಚಿತ್ತಾರ ಹಾಕಿ ಅಲಂಕಾರ, ಮೆಹೆಂದಿ ಕಲೆ, ವಿವಿಧ ವೇಷಭೂಷಣಗಳ ವಿನ್ಯಾಸದ ಕೌಶಲ್ಯ ಇತ್ಯಾದಿ ರೂಡಿಸಿಕೊಳ್ಳಿ. ಈ ಕೌಶಲ್ಯಕ್ಕೆ ಮೆರಗುಬರುವುದು ಅವಳ ಶ್ರಮ ಸಿದ್ದಧಾಮತ ಮತ್ತು ಆತ್ಮೀಯ ನಡವಳಿಕೆಗಳು ಎಂದರು.

“ಮಹಿಳೆ ಮತ್ತು ಕ್ರೀಡೆ” ಕುರಿತು ಶ್ರೀಮತಿ ಶಶಿಕಲಾರವರು ಇವತ್ತಿಗೂ ಕ್ರೀಡಾ ರಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕೊರತೆ ಇದೆ. ಕಾರಣ ಸಂಕೋಚ ಸ್ವಭಾವ. ರಾಜ್ಯ, ರಾಷ್ಟçಮಟ್ಟದ ಹಂತ ತಲುಪಲು ನಿರಂತರ ಅಭ್ಯಾಸ, ಸಮಯ ಮೀಸಲು ಇಡುವುದು ಅಗತ್ಯ. ಕ್ರೀಡಾ ರಂಗದಲ್ಲಿ ಹೆಜ್ಜೆ ಹಿಂದಿಡದೆ ಮುನ್ನಡೆದ ಬಹುತೇಕರಿಗೆ ಜಯ ಲಭಿಸಿದೆ ಮತ್ತಷ್ಟು ಮಹಿಳಾ ಕ್ರೀಡಾಪಟುಗಳ ಸಂಖ್ಯೆ ವೃದ್ಧಿಸಲಿ ಎಂದರು.

“ಮಹಿಳೆ ಮತ್ತು ಕಾನೂನು” ಶ್ರೀಮತಿ. ಪ್ರೇಮಾ ಇ. ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದ ಸದಸ್ಯರು, ಚಿ.ಮಗಳೂರು ಇವರು ಸಮಾಜದ ಪ್ರತಿಯೊಬ್ಬರೂ ಆರೋಗ್ಯ ಮತ್ತು ಕಾನೂನು ಇದರ ಅರಿವಿನಿಂದ ದೂರ ಇರೋಣ ಎಂದೇ ಬಯಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಇದರ ತಿಳುವಳಿಕೆ ಇದ್ದರೆ ಎಂತಹ ಕಷ್ಟದ ಸಮಯದಲ್ಲು ಹೇಗೆ ಸಹಕಾರಿ ಆಗುತ್ತದೆ ಎಂದು ಹಲವು ಉದಾಹರಣೆಗಳ ಸಹಿತ ವಿವರಿಸಿದರು. ವ್ಯವಹಾರಿಕ ಜಗತ್ತಿನಲ್ಲಿ ಕಾನೂನಿನ ಅರಿವು ಇಲ್ಲದಾಗ ಗೊಂದಲ, ಗಲಭೆ, ಕ್ಷೆÆÃಭೆಗಳಿಗೆ ಒಲಗಾಗುವ ಹಲವು ಮಜಲುಗಳನ್ನು ತೆರೆದಿಟ್ಟರು.

“ಮಹಿಳೆ ಮತ್ತು ಯೋಗ” ಶ್ರೀಮತಿ. ಅರುಣಾ ಪ್ರಕಾಶ್, ಯೋಗ ಶಿಕ್ಷಕಿ ಇವರು, ಪುರುಷರಿಗಿಂತ ಮಹಿಳೆಯರಿಗೆ ಒತ್ತಡ ಜಾಸ್ತಿ. ಜವಾಬ್ದಾರಿ ಹೆಚ್ಚಿರುವ ಕಡೆ ಒತ್ತಡ ಸಹಜವಾದದ್ದು. ಮಹಿಳೆಯ ಮಲಬದ್ಧತೆ, ಮುಟ್ಟು, ಬಂಜೆತನ, ಬೆನ್ನು, ಕುತ್ತಿಗೆ, ಸೊಂಟದ ನೋವು, ಪ್ರಸವಪೂರ್ವ, ಪ್ರಸವದ ನಂತರ, ಮಧ್ಯವಯಸ್ಸು, ವೃದ್ಧಾಪ್ಯ ಹೀಗೆ ವಿವಿಧ ನೆಲೆಯಲ್ಲಿ ಆಗುವ ತೊಂದರೆಗಳು ಅದರ ಪರಿಹಾರದ ಬಗ್ಗೆ ಯೋಗಾಭ್ಯಾಸ ಹೇಗೆ ಉಪಯುಕ್ತ ಎಂದು ತಿಳಿಸಿದರು.

ನಿರ್ವಾಕರಾಗಿ ಆಗಮಿಸಿದ್ದ ಪ್ರೊ: ಕಿರಣ್ ದೇಸಾಯಿ, ಖ್ಯಾತ ವಾಗ್ಮಿ, ಚಿಂತಕಿ ಇವರು ಅರಿವಿನ ಜ್ಞಾನ ಒರೆಗೆ ಹಚ್ಚುವ, ಚಿಂತನೆಯ ಹೊತ್ತಿಗೆ ತೆರೆದಿಡುವ ವಿಷಯಗಳನ್ನು ಇಂದು ಮಿತ್ರೆ ಕಾಸ್ಮೋ ಕ್ಲಬ್‌ನ ಅಧ್ಯಕ್ಷರು ಮತ್ತವರ ಬಳಗ ಏರ್ಪಡಿಸಿರುವುದು ಶ್ಲಾಘನೀಯ. ವಿಚಾರ ಮಂಥನಗಳೇ ಬದುಕಿಗೆ ಶಕ್ತಿ ನೀಡುವುದು. ಕ್ರಿಯಾಶೀಲತೆ, ಕ್ರೀಡೆ, ಕೌಶಲ್ಯ, ಕಲೆಗಳು ಸ್ವಾವಲಂಭಿ ಬದುಕಿಗೆ ಸಹಕಾರಿ ಎಂಬುದಕ್ಕೆ ಲಕ್ಷಾಂತರ ಉದಾಹರಣೆಗಳು ನಮ್ಮ ಮುಂದೆ ಇವೆ. ಸಾಧನೆಯ ಪ್ರೇರಣೆಗೆ ಇಚ್ಚಾಶಕ್ತಿಯೇ ಕಾರಣ. ಇಚ್ಚೆ, ಕ್ರಿಯೆ, ಜ್ಞಾನ ಸಮ್ಮಿಳಿತಗೊಂಡಾಗ ಸ್ವತಹಃ ಅವಳು ಸಂಪನ್ಮೂಲ ಭರಿತಳಾಗುತ್ತಾಳೆ ಎಂದು ಹಲವು ವಿಚಾರಗಳ ತಿಳಿಸಿ, ಹಾಸ್ಯ ರಸಧಾರೆಯ ಮೂಲಕ ಮಹಿಳಾ ಮಂಥನದ ವಿಚಾರಗೋಷ್ಠಿಯನ್ನು ಸಂಪನ್ನಗೊಳಿಸಿದರು.

ಕಾರ್ಯಕ್ರಮದಲ್ಲಿ ಮಿತ್ರೆಯ ಕಾರ್ಯದರ್ಶಿ ದೀಪಾ ಶ್ರೀನಿವಾಸ್, ಖಜಾಂಚಿ ವೀಣಾ ಹರ್ಷ ಉಪಸ್ಥಿತಿ ಇದ್ದರು. ಮೇಧಾ ತಂಡದ ಸದಸ್ಯರಾದ ಸುಮಾರಾಣಿ ಕಾರ್ಯಕ್ರಮ ನಿರೂಪಿಸಿ, ಶೋಭಾರಾಣಿ ಸ್ವಾಗತಿಸಿ, ವೀಣಾಹರ್ಷ ಅತಿಥಿಗಳನ್ನು ಪರಿಚಯಿಸಿ, ಸ್ಮಿತಾ ಸಾತ್ವಿಕ್ ಮೇಧಾ ಎಂಬ ಋಷಿಕೆಯ ಬಗ್ಗೆ ಪರಿಚಯಿಸಿ, ವಿನಯಾ ಇಂದಿರೇಶ್ ಮತ್ತು ತಂಡ ಪ್ರಾರ್ಥಿಸಿದರು. ಇನ್ನುಳಿದ ಮೇಧಾ ತಂಡದ ವನಿತಾ ನಾಯಕ್, ಸಂಧ್ಯಾ ಉಮೇಶ್, ಗೌರಿ ರಂಗಧೋಳ್, ಕ್ಷಮಾ, ಶಾಲಿನಿ ಜಾದವ್, ಶ್ರೀಲತಾ ಪ್ರಭುರವರು ಪ್ರತಿಯೊಂದನ್ನು ಸಜ್ಜುಗೊಳಿಸಿದರು.

ಸಂಪನ್ಮೂಲ ವ್ಯಕ್ತಿಗಳನ್ನು ಮಿತ್ರೆ ಬಳಗದಿಂದ ಹರಿದ್ರಾ ಕುಂಕುಮ ನೀಡಿ ಗೌರವಿಸಲಾಯಿತು.

ಮೇಧಾ ತಂಡದಿಂದ ನೃತ್ಯ ವೈಭವ, ಕನ್ನಡ ನಾಡು ನುಡಿ ಸಂಬAಧಿತ ರಸಪ್ರಶ್ನೆ, ಅದೃಷ್ಠವಂತ ಕನ್ನಡತಿ ಬಹುಮಾನ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.