Sunday, March 8, 2026
Sunday, March 8, 2026
Home Blog Page 373

Department of Kannada and Culture ಸಮಾಜ ಸುಧಾರಣೆಗೆ ತೊಡಗಿದ್ದ ಮಹಾಪುರುಷ , ಕೈವಾರ ತಾತಯ್ಯ- ಸಿ.ಎಸ್.ಚಂದ್ರಭೂಪಾಲ್

0

Department of Kannada and Culture ಬಳೆ ತೊಡೆಸುವುದು ಒಂದು ಸಂಸ್ಕೃತಿ. ಬಳೆ ಹೆಣ್ಣು ಮಕ್ಕಳ ದೊಡ್ಡ ಆಸ್ತಿ. ಬಳೆ ತೊಡೆಸುವ ಮಲಾರ ವೃತ್ತಿಯ ಜೊತೆ ಎಲ್ಲ ಹೆಣ್ಣು ಮಕ್ಕಳನ್ನು ತಾಯಂದಿರಂತೆ ಗೌರವಿಸಿದ, ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ಮಹಾನ್ ಪುರಷ ಕೈವಾರ ತಾತಯ್ಯ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ ಬಣ್ಣಿಸಿದರು.
ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈವಾರ ತಾತಯ್ಯ ನವರು ಅತ್ಯಂತ ಶ್ರೇಷ್ಠರು. ಅವರೊಬ್ಬ ಆದರ್ಶ ಪುರುಷ. ಮಹಾನ್ ವ್ಯಕ್ತಿ. ಅವರ ವೃತ್ತಿ ಬಳೆ ವ್ಯಾಪಾರ. ಕಷ್ಟದಿಂದಲೇ ಬದುಕಿದವರು. ಮನೆ ಮನೆಗೆ ಹೋಗಿ ಬಳೆ ತೊಡಿಸುವುದರೊಂದಿಗೆ ಎಲ್ಲರನ್ನೂ ಗೌರವಿಸುತ್ತಿದ್ದರು. ಇಂತಹ ವೃತ್ತಿಯಲ್ಲಿ ಬಂದಿರುವ ಬಲಿಜ ಸಮಾಜದವರು ಅತ್ಯಂತ ಪ್ರೀತಿ, ವಿಶ್ವಾಸಾರ್ಹ ಉಳ್ಳವರು.
ತಾತಯ್ಯನವರು ತಮ್ಮ ನುಡಿಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 110 ವರ್ಷ ಕಾಲ ಬದುಕಿದ್ದ ಇವರಿಗೆ ಜನರು ಋಣಾತ್ಮಕತೆ ಹೆಚ್ಚು ವಾಲುವುದರ ಬಗ್ಗೆ ಅಸಮಾಧಾನವಿತ್ತು. ದುಷ್ಟರನ್ನು ದೂರವಿಡಬೇಕೆಂದು ಹೇಳುತ್ತಾ, ತಾವೂ ನುಡಿದಂತೆ ನಡೆಯುತ್ತಿದ್ದರು. ಕೈವಾರ ತಾತಯ್ಯ ಸೇರಿದಂತೆ ಮಹನೀಯರು ಯಾವುದೇ ಜಾತಿಗೆ ಸೀಮಿತರಲ್ಲ. ಸಮಾನತೆಯನ್ನು ಪ್ರತಿಪಾದಿಸಿದ್ದಾರೆ.

ನಮ್ಮಲ್ಲಿ ಹಿಂದುಳಿದ ಸಮಾಜಗಳು ಸಾಕಷ್ಟಿವೆ. ಬಲಿಜ ಸಮಾಜ 2 ಎ ಪ್ರವರ್ಗಕ್ಕೆ ಸೇರಬೇಕು. ಅವಕಾಶ ಸಿಕ್ಕರೆ ತಾವೂ ಸಹ ನಾಯಕರ ಹತ್ತಿರ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದ ಅವರು ನಾವೆಲ್ಲರೂ ಶ್ರೇಷ್ಠರು. ಒಗ್ಗಾಟ್ಟಾಗಬೇಕು.ಆಗ ಅಭಿವೃದ್ಧಿ ಸಾಧ್ಯ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಛಾಯಾಕುಮಾರಿ.ಇ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಗುರುವಿದ್ದಲ್ಲಿ ಮೋಕ್ಷವಿದೆ. ಗುರುವಿಲ್ಲದೆ ಗೋವಿಂದನನ್ನೂ ಪಡೆಯಲು ಸಾಧ್ಯವಿಲ್ಲ. ಕೈವಾರ ತಾತಯ್ಯನವರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರೊಂದು ಅಗಾಧವಾದ ಸಮುದ್ರ. ತಾತಯ್ಯ ಎಂದರೆ ದೇವರು ಕುಣಿಸುವ ತಾಳಕ್ಕೆ ತಕ್ಕಂತೆ ಕುಣಿಯುವವನು ಎಂದರ್ಥ ಎಂದು ತಾತಯ್ಯ ನಂಬಿದ್ದರು. ಅವರು ದೈವಾಂಶ ಸಂಭೂತರು ಎಂದು ತಿಳಿಸಿದ ಅವರು ತಾತಯ್ಯನವರ ಬಾಲ್ಯ, ತಾರುಣ್ಯ ಸೇರಿದಂತೆ ಜೀವನದ ವಿವಿಧ ಘಟ್ಟಗಳನ್ನು ವಿವರಿಸಿದರು.
Department of Kannada and Culture ಸಾಮಾನ್ಯ ವ್ಯಕ್ತಿಯಾಗಿದ್ದ ತಾತಯ್ಯನವರು ಸಂಸಾರದ ಕ್ಲೇಷಗಳಿಂದ ಹೊರಬರಲು ಗುರುಗಳೋರ್ವರು, ಸಾಕಷ್ಟು ವಿದ್ಯೆ ಇಲ್ಲದ ತಾತಯ್ಯನವರಿಗೆ ಬೆಣಚು ಕಲ್ಲನ್ನು ನೀಡಿ, ಈ ಕಲ್ಲು ಕಲ್ಲು ಸಕ್ಕರೆಯಾಗಿ ಬಾಯಲ್ಲಿ ಕರಗುವ ತನಕ ಇದನ್ನು ಬಾಯಲ್ಲಿಟ್ಟುಕೊಂಡು ನಾರಾಯಣನ ಧ್ಯಾನ ಮಾಡುವಂತೆ ತಿಳಿಸುತ್ತಾರೆ. ಅದರಂತೆ ತಾತಯ್ಯನವರು ಓಂ ನಾರೇಯಣ ನಮಃ ಎಂದು ನಾರಾಯಣನ ಧ್ಯಾನದಲ್ಲಿ ತಲ್ಲೀನರಾದರು. ಸುಮಾರು 3 ವರ್ಷ ಕಳೆದ ನಂತರ ಗುರುಗಳು ನೀಡಿದ ಕಲ್ಲು, ಕಲ್ಲು ಸಕ್ಕರೆಯಾಗಿ ಕರಗಲು ಆರಂಭವಾಗುತ್ತದೆ. ಹೀಗೆ ಮುಂದೆ ಅವರು ಪವಾಡ ಪುರುಷರಾಗುತ್ತಾರೆ. ಮನುಷ್ಯನ ಅಹಂ ಎಂಬ ಅಂಧಕಾರ ಸಕ್ಕರೆಯಂತೆ ಕರಗಬೇಕು. ಜ್ಞಾನ ಜ್ಯೋತಿ ಬೆಳಗಬೇಕು ಎಂದು ಪ್ರತಿಪಾದಿಸುತ್ತಾರೆ. ಸಮಾಜ ಸುಧಾರಕನಾಗಿ ಬೆಳೆಯಬೇಕು, ಜನರನ್ನು ಮೌಢ್ಯದಿಂದ ಹೊರತರಬೇಕೆಂಬ ಉದ್ದೇಶದಿಂದ ಅವರು ಜನರನ್ನು ಪ್ರೇರೇಪಿಸಲು ಆರಂಭಿಸುತ್ತಾರೆAದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ ಸ್ನೇಹಾ ಹಾಗೂ ಕೆಯುಡಬ್ಲುö್ಯಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪುರಸ್ಕೃತೆ ಪತ್ರಕರ್ತೆ ಕವಿತಾ ಇವರನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು, ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷ ಜಿ. ರಾಘವೇಂದ್ರ, ಜಿಲ್ಲಾ ಬಲಿಜ ಸೇವಾ ಸಂಘದ ಕಾರ್ಯದರ್ಶಿ ಬಿ. ಆರ್. ಶಿವಕಯಮಾರ್, ಜಿಲ್ಲಾ ಬಲಿಜ ಸೌಹಾರ್ಧ ಪತ್ತಿನ ಸಹಕಾರ ಸಂಘದ ವೆಂಕಟೇಶ ನಾಯ್ಡು, ಆದಿಲಕ್ಷ್ಮಿ ಬಲಿಜ ಮಹಿಳಾ ಸಮಾಜದ ಸ್ಮಿತಾ ಶಿವಕುಮಾರ್, ತಹಶೀಲ್ದಾರ್ ಎಂ ಲಿಂಗರಾಜು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

ತಾಯಿ ಸರಸ್ವತಿಯ ಕೃಪಾಕಟಾಕ್ಷ ಪರೀಕ್ಷಾರ್ಥಿ ಮಕ್ಕಳಿಗೆ ಸಿಗಲಿ- ಪೂಜಾ ನಾಗರಾಜ್ ಪರಿಸರ

0

ಶಿವಮೊಗ್ಗದ ವಿನೋಬ ನಗರದ ಸಮೀಪವಿರುವ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 2024 25 ನೇ ಸಾಲಿನ ಶೈಕ್ಷಣಿಕ ವರ್ಷದ ಅಂತಿಮ ಹಂತದಲ್ಲಿದ್ದು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಾಯಿ ಸರಸ್ವತಿ ಮಾತೆಯ ಕೃಪಾಶೀರ್ವಾದ ಪ್ರತಿಯೊಬ್ಬರಿಗೂ ಸಿಗಲೆಂದು ಹಾಗೂ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹಾಗೂ ಕೃಪಾ ಕಟಾಕ್ಷ ಸಿಗಲೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಮಾತನಾಡಿದರು. ನಂತರ ಗುರುಗಳಾದ ಶ್ರೀ ಕೆ. ಮಂಜುನಾಥ್ ಭಟ್ ರವರ ಸಮ್ಮುಖದಲ್ಲಿ ಸರಸ್ವತಿ ಮಾತಿಗೆ ಪೂಜೆಯನ್ನು ಸಲ್ಲಿಸಲಾಯಿತು. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಂದ ಹತ್ತನೇ ನೇ ತರಗತಿಯ ವಿದ್ಯಾರ್ಥಿಗಳು ಸರಸ್ವತಿ ಮಾತೆಯನ್ನು ಆರಾಧಿಸುತ್ತಾ ಭಕ್ತಿ ಪೂರ್ವಕ ಗೀತೆಗಳನ್ನು ಸರಸ್ವತಿ ಮಾತಿಗೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಹಾಗೂ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.

Bharat Scouts and Guides ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಯಲ್ಲಿ ರಾಷ್ಟ್ರದಲ್ಲೇ ಕರ್ನಾಟಕಕ್ಕೆ ಪ್ರಥಮ ಸ್ಥಾನ- ಪಿ.ಜಿ.ಆರ್.ಸಿಂಧಿಯಾ

0

Bharat Scouts and Guides ಶಿವಮೊಗ್ಗ ಜಿಲ್ಲಾ ಸ್ಕೌಟ್ ಗೈಡ್ ಸಂಸ್ಥೆ ಬದ್ಧತೆಯ ನಾಯಕರನ್ನು ಹೊಂದಿದೆ ಎಂದು ಪಿ.ಜಿ.ಆರ್ ಸಿಂಧ್ಯಾ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಇತಿಹಾಸದಲ್ಲಿ ಬದ್ಧತೆಯ ನಾಯಕರು ಕಟ್ಟಿ ಬೆಳೆಸಿರವ ಸಂಸ್ಥೆಯನ್ನು ಉಳಿಸಿಕೊಂಡು, ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಿಕೊಂಡು ಹೋಗುವಂತೆ, ಗಣತಿಯನ್ನು ಹೆಚ್ಚಿಸುವಂತೆ, ರಚನಾತ್ಮಕ ಚಟುವಟಿಕೆಯನ್ನು ಹಮ್ಮಿಕೊಳ್ಳುವಂತೆ, ಮುಂದಿನ ಬೇಸಿಗೆ ಶಿಬಿರಗಳನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳಿಗೆ ತಿಳಿಸಿದರು. ರಾಜ್ಯದ ಎಲ್ಲಾ ಜಿಲ್ಲಾ ಸಂಸ್ಥೆ ಸ್ಥಳೀಯ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ದೇಶದಲ್ಲೇ ನಮ್ಮ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರಥಮ ಸ್ಥಾನದಲ್ಲಿದೆ ಎಂದು ನುಡಿದರು.

ಅಂತರ ರಾಷ್ಟ್ರೀಯ ಉಪ ಆಯುಕ್ತರಾದ ಮಧುಸೂದನ್ ಮಾತನಾಡಿ, ಜಿಲ್ಲೆಯಲ್ಲಿ ಸ್ಕೌಟ್ ಗೈಡ್ ಚಳುವಳಿಯನ್ನು ವಿಸ್ತರಿಸಲು ವಿಫುಲ ಅವಕಾಶವಿದ್ದು, ಸರ್ವರೂ ಅದರ ಕಡೆ ಗಮನ ಹರಿಸಬೇಕೆಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ ಮಾತನಾಡಿ, ಶಿವಮೊಗ್ಗ ಜಿಲ್ಲೆಯೂ ರಾಜ್ಯದ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆ ಮತ್ತು ಮುಂದಿನ ಎಲ್ಲಾ ಕಾರ್ಯಗಳಿಗೂ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.

Bharat Scouts and Guides ಸಭೆಯಲ್ಲಿ ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ್ ಭಟ್, ಸ್ಕೌಟ್ ಮಾಜಿ ಜಿಲ್ಲಾ ಆಯುಕ್ತರಾದ ಎಸ್.ಉಮೇಶ್ ಶಾಸ್ತ್ರೀ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ.ವಿಜಯ್ ಕುಮಾರ್, ರಾಘವೇಂದ್ರ, ಜಿಲ್ಲಾ ಖಜಾಂಜಿ ಚೂಡಾಮಣಿ ಈ ಪವಾರ್, ಜಂಟಿ ಕಾರ್ಯದರ್ಶಿ ಲಕ್ಷ್ಮಿ ರವಿ, ಸಹ ಕಾರ್ಯದರ್ಶಿ ವೀರೇಶಪ್ಪ, ಜಿಲ್ಲಾ ತರಬೇತಿ ಆಯುಕ್ತರಾದ ಶಿವಶಂಕರ ಮತ್ತು ಗೀತಾ ಚಿಕ್ಮಟ್ಟ್, ಸಹಾಯಕ ಜಿಲ್ಲಾ ಆಯುಕ್ತ ಹೆಚ್.ಪರಮೇಶ್ವರ, ತರಬೇತಿ ನಾಯಕಿ ಕಾತ್ಯಾಯಿನಿ, ಹೇಮಲತಾ, ಮೀನಾಕ್ಷಮ್ಮ, ತರಬೇತಿ ನಾಯಕ ರಾಜೇಶ್ ಅವಲಕ್ಕಿ, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಕೌಟ್ ಜಿಲ್ಲಾ ಆಯುಕ್ತರಾದ ಎಸ್.ಜಿ.ಆನಂದ್ ಸ್ವಾಗತಿಸಿದರು, ರೋವರ್ ಜಿಲ್ಲಾ ಆಯುಕ್ತರಾದ ಕೆ.ರವಿ, ಕಳೆದ ಮೂರು ತಿಂಗಳಿನ ವರದಿ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ವಂದಿಸಿದರು.

Agnipath Scheme ಶಿವಮೊಗ್ಗ ಸೇರಿದಂತೆ ಒಂಭತ್ತು ಜಿಲ್ಲೆಗಳ ಅವಿವಾಹಿತ ಅಭ್ಯರ್ಥಿಗಳಿಂದ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಅರ್ಜಿಸಲ್ಲಿಕೆಗೆ ಆಹ್ವಾನ

0

Agnipath Scheme ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆನ್‌ಲೈನ್ ನೋಂದಣಿಯು ಮಾರ್ಚ್ 12 ರಿಂದ ಏಪ್ರಿಲ್ 10 ರವರೆಗೆ ಇರುತ್ತದೆ. ನೋಂದಣಿ ಪೊರ್ಟಲ್- WWW.JOININDINARMY.NIC.IN ಹಾಗೂ ಆನ್‌ಲೈನ್ ಪರೀಕ್ಷೆಯು ಜೂನ್ 2025 ರಲ್ಲಿ ನಡೆಯುವ ಸಾಧ್ಯತೆಯಿದ್ದು, ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
ಭಾರತೀಯ ಸೇನೆಯಲ್ಲಿ ಆಯ್ಕೆ ‘ನ್ಯಾಯಯುತ ಮತ್ತು ಪಾರದರ್ಶಕ’ವಾಗಿದ್ದು, ಅರ್ಹತೆ ಮೇಲೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಯಲ್ಲಿ ಆಯ್ಕೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು ಹಾಗೂ ನೇಮಕಾತಿ ಏಜೆಂಟ್ ಗಳಂತೆ ನಟಿಸುವ, ಆಮಿಷ ಒಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂರವಾಣಿ ಸಂಖ್ಯೆ- 0824-2951279 ಹಾಗೂ ಇಮೇಲ್: aromangalore2021@gmail.com k ಸಂಪರ್ಕಿಸಬಹುದಾಗಿದೆ.

Klive Special Article ಸಿಹಿಮೊಗೆಯ ಸನಾತನ ಸಾರಥಿಗಳ ಸಾಲಿನಲ್ಲಿ ಕಂಗೊಳಿಸಿದ ವಿನಾಯಕ‌ ಬಾಯಿರಿ

0

ಡಾ.ಮೈತ್ರೇಯಿ‌ ಪ್ರಸಾದ್.ಶಿವಮೊಗ್ಗ

Klive Special Article ಒಂದು ವ್ಯವಸ್ಥೆಯನ್ನು ಒಬ್ಬರ ಕಾಲಾನಂತರ ಏನೂ ಕುಂದು ಬರದಂತೆ ಅಥವಾ ಅವರ ಇಲ್ಲದಿರುವಿಕೆಯ ಅರಿವೇ ಆಗದಂತೆ ಸಮರ್ಥವಾಗಿ ನಿಭಾಯಿಸುವುದು ತುಸು ಕಷ್ಟದ ಕೆಲಸವೇ ಸರಿ. ಆದರೆ ಆ ಕೆಲಸವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದು ನಮ್ಮ ವಿನಾಯಕ ಬಾಯರಿ ಅವರು. ಏಕೆಂದರೆ ಪುರೋಹಿತ ಬರಿ ದೇವಾಲಯಕ್ಕಾಗಿ ಅಷ್ಟೇ ಸೀಮಿತನಾಗದೆ ಪುರದ ಹಿತಕ್ಕಾಗಿ ಇರುವವನು ಮತ್ತು ದೇವಾಲಯವು ಬರಿಯ ಧಾರ್ಮಿಕ ಶ್ರದ್ಧಾ ಕೇಂದ್ರವಸ್ಥೆ ಅಲ್ಲ ಅದು ಸಮಾಜಮುಖಿಯಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಹ ತಾಣವೆಂಬ ವಿಚಾರದಲ್ಲಿ ಬಹು ಕೆಲಸಗಳನ್ನು ಮಾಡಿದ್ದ ಆ. ಪ. ರಾಮ ಭಟ್ಟರು ಎಲ್ಲರನ್ನೂ ಅಗಲಿದ ಸಂದರ್ಭದಲ್ಲಿ ಆ ಜಾಗಕ್ಕೆ ಒಬ್ಬ ಸಮರ್ಥ ವ್ಯಕ್ತಿಯಾಗಿ ನಿಂತು ತನ್ನ ಗುರು ಹಾಕಿಕೊಟ್ಟ ಹಾದಿಯಲ್ಲಿ ಬಂದು ನಿಂತು ಲೋಪ ಬಾರದಂತೆ ಅನೇಕರಿಗೆ ಆಯೋಜಿಸಿದ ಹಲವು ಕಾರ್ಯಕ್ರಮಗಳಲ್ಲಿ ರಾಮಭಟ್ಟರ ಅಗಲಿಕೆಯ ನೆನಪೇ ಬಾರದಂತೆ ಕಾರ್ಯಕ್ರಮದ ಸಿದ್ಧತೆ ಆಯೋಜನೆ ಆಗಿರುತ್ತಿತ್ತು ಎನ್ನುವಲ್ಲಿ ಸಂಶಯವೇ ಇಲ್ಲ. ರಾಮ ಭಟ್ಟರು ಅಗಲಿದಾಗ ಸತತ ಒಂದು ವರ್ಷಗಳ ಕಾಲ ಅವರ ಸಂಸ್ಮರಣೆಯ ಕಾರ್ಯಕ್ರಮ ಮಾಡಲೇಬೇಕೆಂದು ಮುಂಚೂಣಿಯಲ್ಲಿ ನಿಂತವರು ಶ್ರೀ ಬಾಯಿರವರು. ನಿಜಕ್ಕೂ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವೇ ಸರಿ.

ಜಾತಸ್ಯ ಹಿ ದ್ರೂ ಮೃತ್ಯುಃ ಎನ್ನುವುದು ಗೀತೆಯಲ್ಲಾದರೂ ಹುಟ್ಟಿದವನು ಖಂಡಿತವಾಗಿಯೂ ಮರಣ ಹೊಂದುತ್ತಾನೆ ಎನ್ನುವುದು ಸತ್ಯ. ಆ ಮರಣ ಇಷ್ಟು ಬೇಗ ಬಾಯರ್ ಅವರನ್ನ ಅರಸೀ ಬರಬಾರದಿತ್ತು ಎಂದೆನಿಸುವುದು ಸಹ ಅಷ್ಟೇ ಸತ್ಯ. ಆದರೆ ಅವರು ಬದುಕಿದ್ದು ಹೇಗೆಂದರೆ, ಹುಟ್ಟಿನಿಂದಲೇ ಜನ್ಮ ಸಾರ್ಥಕತೆ ಕಂಡು ಕೊಂಡವರು ಅವರು. ಅದನ್ನೇ ಸುಭಾಷಿತದಲ್ಲಿ “ಪರಿವರ್ತಿನಿ ಸಂಸಾರೆ ಮೃತಃ ಕೋ ವಾ ನ ಜಾಯತೆ। ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಮ್॥”
ಈ ಜಗತ್ತಿನಲ್ಲಿ, ಯಾರ ಜನ್ಮವು ಅವನ ವಂಶದ ಪ್ರಗತಿಗೆ ಕಾರಣವಾಗುತ್ತದೆಯೋ, ಅಂತಹ ವ್ಯಕ್ತಿಯ ಜನ್ಮವನ್ನು ತೆಗೆದುಕೊಳ್ಳುವುದು ಯೋಗ್ಯವಾಗಿದೆ. ಇಲ್ಲದಿದ್ದರೆ ಈ ಸದಾ ಬದಲಾಗುವ ಜಗತ್ತಿನಲ್ಲಿ ಯಾರು ಹುಟ್ಟಿಲ್ಲ ಮತ್ತು ಸತ್ತಿಲ್ಲ? ಎಂಬುದು ಬಾಯರ್ ಅವರಿಗೆ ಹೋಲುವ ಸತ್ಯವಾದ ಮಾತಾಗಿದೆ.

ವಿನಾಯಕ ಬಾಯಿರಿಯವರ ಸ್ವಭಾವ ಹೇಗೆಂದರೆ ಯಾರು ಯಾವ ವಿಷಯವನ್ನೇ ಕೇಳಿಕೊಂಡು ಬಂದರೂ ಅವರಿಗೆ ಬೇಕಾದಂತಹ ಸಮಾಧಾನವನ್ನು ನೀಡುವಂತಹವರಾಗಿದ್ದರು. ಮತ್ತೆ ನಮ್ಮ ಸಂಸ್ಕೃತಿ, ಸಂಸ್ಕಾರ ಇವುಗಳ ವಿಷಯದಲ್ಲಿ ಅಪಾರ ಶ್ರದ್ಧೆ ಉಳ್ಳವರಾಗಿದ್ದರು. ದೇವಸ್ಥಾನದಲ್ಲಿ ಆಯೋಜಿತವಾಗುವ ಎಲ್ಲ ಕಾರ್ಯಕ್ರಮಗಳಲ್ಲೂ ಸಹ ಹಿಂದೂ ಸನಾತನ ಸಂಸ್ಕೃತಿಯ ಮಹತ್ವವನ್ನು ಹೇಳದೇ ಇರುತ್ತಿರಲಿಲ್ಲ. ನವರಾತ್ರಿಯ ಮೊದಲುಗೊಂಡು ಎಲ್ಲ ಕಾರ್ಯಕ್ರಮಗಳು ಅದ್ಭುತವಾಗಿಯೇ ಆಯೋಜಿಸಲಾಗುತ್ತಿತ್ತು. ಅಧಿಕ ಮಾಸದ ಸಂದರ್ಭದಲ್ಲಂತೂ ಅಧಿಕ ಫಲವೆಂಬ ಹೆಸರಿನಡಿಯಲ್ಲಿ ಭಜನೆ, ಆರೋಗ್ಯ, ಸದ್ವಿಚಾರ ಇತ್ಯಾದಿಗಳ ಕುರಿತಾಗಿ ಬರೋಬ್ಬರಿ ಒಂದು ತಿಂಗಳು ಕಾರ್ಯಕ್ರಮ ಮಾಡಿ ಯಶಸ್ವಿಯಾಗಲು ಇವರ ಪಾಲು ಹೆಚ್ಚಿದೆ. ಪ್ರತಿ ಸಂದರ್ಭದಲ್ಲಿ ನಗುನಗುತ್ತಲೇ ಎದುರುಗೊಳ್ಳುವ ಇವರ ಮಾತೇ ಬಲು ಚಂದ. ಸದಾ ನಗುಮೊಗದ ಬಾಯರವರು ಇನ್ನಿಲ್ಲ ಎನ್ನುವುದನ್ನು ಯಾರೂ ನಂಬಲಾರದ ಸ್ಥಿತಿಯಲ್ಲಿದ್ದೇವೆ.

Klive Special Article ಸಂಸ್ಕೃತೋತ್ಸವದ ಸಂದರ್ಭದಲ್ಲಿ ಒಂದು ವಾರಗಳ ಕಾಲ ಅದ್ಭುತವಾದಂತಹ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ, ಅಲ್ಲಿಗೆ ಬಂದಂತಹ ಮಕ್ಕಳು ಮತ್ತು ಪೋಷಕರನ್ನ ಸಂಸ್ಕೃತ ಭಾಷೆಯ ಆಕರ್ಷಣೆಗೆ ಒಳಗಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ ಹಿಮಾಲಯದ ಚಾರಣದ ಸಂದರ್ಭದಲ್ಲಿ ದಂಪತಿಗಳು ಇರ್ವರು ನನ್ನ ಮಗನಿಗೆ ಜೊತೆಯಾಗಿ ನಿಂತಿದ್ದರು. ಮೊನ್ನೆಮೊನ್ನೆಯಷ್ಟೇ ಪ್ರಯಾಗ್ರಾಜ್ ನಿಂದ ಬಂದಂತಹ ಅವರನ್ನು ಎದುರುಗೊಂಡ ಸಂದರ್ಭ ಸದಾ ಕಣ್ಣಲ್ಲಿ ಹಸಿರಾಗಿದೆ.
ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುವಲ್ಲಿ ಮುಂದಿರುತ್ತಿದ್ದ ಅವರದು ಒಂಥರ ನಾಯಕತ್ವದ ಸ್ವಭಾವ. ವಿನಾಯಕ ನಾಯಕನಾಗಿ ಎಲ್ಲವನ್ನೂ ಸಾಂಗವಾಗಿ ಮುನ್ನಡೆಸುತ್ತಿರುವಾಗಲೇ ವಿಧಿ ಸೆಳೆದೊಯ್ದದ್ದು ನಮ್ಮ ಶಿವಮೊಗ್ಗದ ಪಾಲಿಗೆ ದುರ್ವಿಧಿಯೇ ಸರಿ. ಅದು ಹೇಗೆಂದರೆ, ಜವರಾಯ ಬಂದರೆ ಬರಿ ಕೈಗೈಲಿ ಬರಲಿಲ್ಲ ,
ಕುಡುಗೊಲು ಕೊಡಲ್ಯೊಂದು ಹೆಗಲೇರಿ ಜವರಾಯ ಒಳ್ಳೊಳ್ಳೆ ಮರನ ಕಡಿ ಬಂದ ,
ಫಲ ಬಿಟ್ಟ ಮರನ ಕಡಿ ಬಂದ – ಎಂಬ ಜನಪದ ಗೀತೆಯ ಸಾಲಿನಂತೆ ಕಾಡಿನಲ್ಲಿರುವ ನೇರವಾದ ಗಟ್ಟಿಮುಟ್ಟಾದ ಮರವನ್ನೇ ಪೀಠೋಪಕರಣಗಳಿಗೆಂದು ಆಯ್ದು ತರುವಂತೆ, ಜವರಾಯನೂ ಸಹ ಸಮಾಜಕ್ಕೆ ಅಗತ್ಯವಾದ ಕುಟುಂಬದ ಜವಾಬ್ದಾರಿ ಹೊತ್ತ ಸ್ನೇಹಮಯಿ ವ್ಯಕ್ತಿಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬಂತೆ ಆಗಿ ಹೋಗಿದೆ.

ಏನೇ ಆಗಲಿ ಕಡೆಯಲ್ಲಿ ಹೇಳುವುದಿಷ್ಟೇ ಮನುಷ್ಯ ಹುಟ್ಟಿದ ಮೇಲೆ ಸಾವು ನಿಶ್ಚಿತ. ಅಂತಹ ಸಾವು ಸುಖಮರಣವಾಗಿ ವಿನಾಯಕ ಬಾಯರಿ ಅವರನ್ನು ಕೊಂಡೊಯ್ದಿದೆ. ಆದರೆ ಈಗ ಅವರು ಹಾಕಿಕೊಟ್ಟ ಹಾದಿಯನ್ನು ಅವರ ಅಭಿಮಾನಿಗಳು, ಜೊತೆಗಾರರಾದ ನಾವು ಮುನ್ನಡೆಸಬೇಕಾಗಿದೆ. ಅಲ್ಲದೆ ಯಾರೇ ಕಷ್ಟ ಬಂದರೂ ಸಹಾಯ ಹಸ್ತ ಚಾಚುತ್ತಿದ್ದ ವಿನಾಯಕ ಬಾಯಿರಿಯವರು ತಮ್ಮ ಕುಟುಂಬವನ್ನು ಅನಾಥವಾಗಿಸಿ ಹೋಗಿದ್ದಾರೆ. ಈಗ ನಾವೆಲ್ಲ ಅವರ ಕುಟುಂಬದ ಜೊತೆ ನಿಲ್ಲಬೇಕಾದ ಅಗತ್ಯ ಇದೆ. ವಿಶ್ವಾಸದೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾಯಕ ಮಾಡಬೇಕಿದೆ.

ಡಾ. ಮೈತ್ರೇಯಿ ಹೆಚ್. ಎಲ್ .
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ

Radio Shivamogga ರೇಡಿಯೊ ಶಿವಮೊಗ್ಗದಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬಾನುಲಿ ಪಾಠ ಸರಣಿ

0

Radio Shivamogga ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿವಮೊಗ್ಗ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಆರ್ಯ ವಿಜ್ಞಾನ ಕಾಲೇಜು, LBS ನಗರ ಶಿವಮೊಗ್ಗ ಇವರ ಸಹಯೋಗದಲ್ಲಿ, ರೇಡಿಯೋ ಪಾಠಗಳು ನಡೆಯುತ್ತಿದೆ. ಇದು ರೇಡಿಯೋ ಶಿವಮೊಗ್ಗ 90.8 ಎಫ್.ಎಂ. ನಲ್ಲಿ ಮಾರ್ಚ್ 14ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 11 ಗಂಟೆಗೆ ಹಾಗೂ ಸಂಜೆ 8 ಗಂಟೆ 10 ನಿಮಿಷಕ್ಕೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದ ಸದುಪಯೋಗವನ್ನು ರಾಜ್ಯದಲ್ಲಿ ಎಸ್.ಎಸ್. ಎಲ್. ಸಿ. ವ್ಯಾಸಂಗ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳೂ ಪಡೆಯಬಹುದಾಗಿದೆ.

ಪ್ರಸಾರ ವೇಳಾಪಟ್ಟಿ ಹೀಗಿದೆ. ದಿನಾಂಕ 14-03-2025 ರಂದು ಕನ್ನಡ, 15 ರಂದು ಗಣಿತ, 17 ರಂದು ಇಂಗ್ಲೀಷ್ 18 ರಂದು ಸಮಾಜ ವಿಜ್ಞಾನ 19 ರಂದು ವಿಜ್ಞಾನ 20 ರಂದು ಹಿಂದಿ, ಪಾಠಗಳು ಪ್ರಸಾರವಾಗಲಿದೆ.

Radio Shivamogga ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ ನಲ್ಲಿರುವ ಇನ್ ಬಿಲ್ಟ್ ಎಫ್ ಎಂ ಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಸ್ವಂತದ್ದೇ ಆಪ್ ಸಹಾ ಹೊಂದಿದ್ದು, ಅದನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಅದರ ಕೊಂಡಿ ಹೀಗಿದೆ.

https://play.google.com/store/apps/details?id=com.atclabs.radioshivmogga

ಹೆಚ್ಚಿನ ಮಾಹಿತಿಗೆ ( ಮೊ: 72591 76279) ಸಂಪರ್ಕಿಸಬಹುದು.

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

0

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಗುಣವನ್ನು ಕೆ.ಎಚ್.ಪಾಟೀಲ ಅವರು ಹೊಂದಿದ್ದು ಬೆಂಗಳೂರಿನ `ಕೆ.ಎಚ್.ಪಾಟೀಲ್ ಸ್ಕೂಲ್ ಆಫ್ ಲಾ’ ಉದ್ಘಾಟಿಸಲು ನನಗೆ ನಿಜಕ್ಕೂ ಸಂತೋಷ ಎನಿಸುತ್ತಿದೆ. ಈ ಕಾಲೇಜಿನಲ್ಲಿ ಇಡೀ ರಾಷ್ಟ್ರವೇ ಮೆಚ್ಚುವಂತಹ ಗುಣಮಟ್ಟದ ಕಾನೂನು ಶಿಕ್ಷಣ ದೊರೆಯುವಂತಾಗಲಿ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲ ಅಭಿಮಾನಿ ಬಳಗ, ಬೆಂಗಳೂರು ನಗರದ ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಇವರು ಹಮ್ಮಿಕೊಂಡಿದ್ದ ಕೆ.ಎಚ್.ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಕೆ.ಎಚ್.ಪಾಟೀಲ ಸ್ಕೂಲ್ ಆಫ್ ಲಾ ಬೆಂಗಳೂರು ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ ಮತ್ತು ಸಂಪಾದನೆ ಯಾರು ಬೇಕಾದರೂ ಸಂಪಾದಿಸಬಹುದು. ವಿದ್ಯಾರ್ಥಿಗಳು ಇದಕ್ಕಿಂತ ಮುಖ್ಯವಾಗಿ ಅತ್ಯುನ್ನತ ಧ್ಯೇಯಗಳೊಂದಿಗೆ ಗುಣಮಟ್ಟದ ಶಿಕ್ಷಣ ಹೊಂದಬೇಕೆಂದರು.

ಶಿಸ್ತು, ಸಂಯಮದೊಂದಿಗೆ ಇಂದಿನ ದಿನಗಳಲ್ಲಿ ಶಿಕ್ಷಣ ಪಡೆಯುವುದು ಅತಿ ಮುಖ್ಯ. ಕೆ.ಎಚ್.ಪಾಟೀಲರು ಅತ್ಯಂತ ಸ್ಫೂರ್ತಿ ದಾಯಕ ವ್ಯಕ್ತಿತ್ವ ಹೊಂದಿದ್ದರು. ಅವರ ಹೆಸರಿನ ಕಾನೂನು ಶಾಲೆ ಉದ್ಘಾಟಿಸುತ್ತಿರುವುದು ನನ್ನ ಸುಯೋಗ. ವ್ಯಕ್ತಿತ್ವದಲ್ಲಿ ವೈಶಿಷ್ಟ್ಯತೆ ರೂಢಿಸಿಕೊಂಡಿದ್ದ ಪಾಟೀಲರು ಸರ್ಕಾರ ಮಾಡದೇ ಇರುವಷ್ಟು ಅಭಿವೃದ್ಧಿ ಕೆಲಸಗಳನ್ನು ಹುಲಕೋಟಿಯಲ್ಲಿ ಮಾಡಿದ್ದಾರೆ. ಆಸ್ಪತ್ರೆ, ಶಿಕ್ಷಣ, ಇಂಜಿನಿಯರಿಂಗ್ ಕಾಲೇಜು, ಕೌಶಲ್ಯಾಧಾರಿತ ಕೇಂದ್ರಗಳನ್ನು ತೆರೆದಿದ್ದಾರೆ. ಸಾಮಾಜಿಕ, ಆರ್ಥಿಕವಾಗಿ ಸಾರ್ವಜಿಕರಿಗೆ ಅತಿದೊಡ್ಡ ಕೊಡುಗೆ ನೀಡಿರುವ ಅವರು ಒಂದು ಶಕ್ತಿಯಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಲಾ ಶಾಲೆಯ ಲಾಂಛನ ಉದ್ಘಾಟಿಸಿ ಮಾತನಾಡಿ, ಸದನದಲ್ಲಿ ಸಹೋದ್ಯೋಗಿಗಳ ಟೇಬಲ್ ಮೇಲಿನ ಸಿಹಿ ಕಬಳಿಸಿ ತಿನ್ನುವ ಕ.ಎಚ್.ಪಾಟೀಲ್ ಅವರ ಗುಣವನ್ನು ಹಾಸ್ಯದೊಂದಿಗೆ ಸ್ಮರಿಸುತ್ತಾ, ಕೆ.ಎಚ್.ಪಾಟೀಲ ಸ್ನೇಹಶೀಲರು. ಶ್ರೇಷ್ಠ ಇಚ್ಛಾಶಕ್ತಿ ಹೊಂದಿದ್ದ ಧೀಮಂತ ನಾಯಕರಾಗಿದ್ದರು.

ಪಂಚಾಯ್ತಿ ಅಧ್ಯಕ್ಷರಾಗಿ ಸಾಕಷ್ಟು ಸಾಧನೆ ಮಾಡಿದ್ದ ಅವರು, ಇಡೀ ಗದುಗಿನ ವಾತಾವರಣವನ್ನೇ ಬದಲಾಯಿಸಿದ್ದರು. ದಾರ್ಶನಿಕ, ನಿಷ್ಠುರವಾದಿಯಾಗಿದ್ದರು. ಇಂಥ ರಾಜಕಾರಣಿಗಳು ಸಿಗುವುದು ಅಪರೂಪ. ಅವರೊಬ್ಬ ಆಕಾಶದಂತಿದ್ದರು. ಪರ್ವತಕ್ಕೆ ಪರ್ವತವೇ ಸಾಟಿ ಎನ್ನುವ ವ್ಯಕ್ತಿತ್ವವುಳ್ಳ ಅವರು ನಿಷ್ಠುರವಾದಿಗಳಾಗದಿದ್ದರೆ ಮುಖ್ಯಮಂತ್ರಿಗಳಾಗಬಹುದಿತ್ತು. ಇಂದಿನ ರಾಜಕಾರಣದಲ್ಲಿ ನಿಷ್ಠುರವಾದಿಗಳು, ಇಚ್ಛಾಶಕ್ತಿ ಇರುವವರು ಬೇಕು. ಅವರ ಆಕಾಂಕ್ಷೆಯಂತೆ ಆರಂಭವಾಗಿರುವ ಲಾ ಸ್ಕೂಲ್ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲಿ. ಶಿಕ್ಷಣದಲ್ಲಿ ಆಧುನಿತ ತಂತ್ರಜ್ಞಾನ ಅಳವಡಿಸಿ ಹೊಸ ಕಾನೂನು ಕೋರ್ಸ್ಗಳು ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ರೂಪಿತವಾಗಲಿ. ಎಸ್.ಸಿ., ಎಸ್.ಟಿ., ಮತ್ತು ಓಬಿಸಿ ಹಾಗೂ ಮಹಿಳಾ ನ್ಯಾಯಾಧೀಶರು ಕಾನೂನು ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಾಗ ಮಾತ್ರ ಸಾಮಾಜಿಕ ನ್ಯಾಯ ಲಭಿಸಲು ಸಾಧ್ಯ ಎಂದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, 1969ರಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ನನಗೆ ಕೆ.ಎಚ್.ಪಾಟೀಲರು ದೊಡ್ಡ ನಾಯಕರಾಗಿ ಗೊತ್ತು. ವೀರೇಂದ್ರ ಪಾಟೀಲರು ಮತ್ತು ಎಸ್.ಬಂಗಾರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದವರು. ಇಂದಿರಾಗಾಂಧಿ ಅವರು ಹಾಕಿಕೊಟ್ಟ ಕಾರ್ಯಕ್ರಮಗಳಿಂದ ನನ್ನಂಥವನು ಮಂತ್ರಿಯಾಗಿ ಬೆಳೆಯಲು ಸಾಧ್ಯವಾಗಿದೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಹಾದಿಯಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೋವಿಡ್ ವೇಳೆ ಜನರು ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದರು. ಈಗ ಚೇತರಿಸಿಕೊಳ್ಳುವಂತಾಗಿದೆ ಎಂದರು.

ಮಾಜಿ ಸಚಿವ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಎಪಿಎಂಸಿ ಅಧ್ಯಕ್ಷನಾಗುವ ನನ್ನ ಕನಸಿಗೆ ವಿರುದ್ಧವಾಗಿ ನನ್ನ ಜಿಲ್ಲೆಯ ಐವರು ಶಾಸಕರು ಕೆ.ಎಚ್.ಪಾಟೀಲರ ಬಳಿ ದೂರು ನೀಡಿದ್ದರು. ಆಗ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ಕೆ.ಎಚ್.ಪಾಟೀಲರು ನನ್ನನ್ನು ಹುರಿದುಂಬಿಸಿದ್ದರು. ಅಧ್ಯಕ್ಷನಾಗಿ ರಾಜಕೀಯವಾಗಿ ಬೆಳೆಯಲು ಕಾರಣರಾಗಿದ್ದರು. ಜವಾರಿ ಭಾಷೆಯಲ್ಲಿ ಮಾತನಾಡುವ ಅವರ ಕಣ್ಣಲ್ಲಿ ಪ್ರೀತಿ ಇತ್ತು. ಒಳ್ಳೆ ಗುರುಗಳು ಇದ್ದರೆ ಏನು ಬೇಕಾದರೂ ಆಗಬಹುದು. ಅವರಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇವತ್ತಿನ ವಾತಾವರಣ ಬಹಳ ಕಲುಷಿತಗೊಂಡಿದೆ. ಬೇಗ ಅಧಿಕಾರ ಹಿಡಿಯಬೇಕು, ಬೇಗ ಸಂಪಾದಿಸಬೇಕು ಎನ್ನುವ ಆಲೋಚನೆ ಬಿಡಬೇಕು. ಸಮಾಜದಲ್ಲಿ ಒಳ್ಳೆಯ ಮುಖಂಡರು ಹಾಗೂ ಕಾರ್ಯಕರ್ತರ ಕೊರತೆ ಇದೆ. ಎಚ್.ಕೆ.ಪಾಟೀಲರು ತಮ್ಮ ತಂದೆಯ ಹಾದಿಯಲ್ಲಿ ಆದರ್ಶವಾಗಿ ಸಾಗಿದ್ದಾರೆ. ಅವರ ರಾಜಕೀಯ ಚಾರಿತ್ರ್ಯಕ್ಕೆ ಹೆಚ್ಚುಗಾರಿಕೆ ಇದೆ ಎಂದರು.

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಎಸ್.ಹೊರಟ್ಟಿ ಮಾತನಾಡಿ, ಕೆ.ಎಚ್.ಪಾಟೀಲರ ಮಾರ್ಗದರ್ಶನದಲ್ಲಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಾರಣಾಂತರಗಳಿಂದ ರಾಜಕೀಯಕ್ಕೆ ಬಂದ ನನಗೆ ಪಾಟೀಲರು ತಂದೆ ಸಮಾನರಾಗಿದ್ದರು. ಒಬ್ಬ ಸರಪಂಚ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದದ್ದು ದಾಖಲೆ. ಅವರಿಂದಾಗಿ ರಾಷ್ಟçಪತಿ ಅಬ್ದುಲ್ ಕಲಾಂ, ಇಂದಿರಾಗಾಂಧಿಯಂಥವರು ಹುಲಕೋಟಿಗೆ ಬರಬೇಕಾಯಿತು. ಅವರಿಗೆ ಜಾತಿ ಇರಲಿಲ್ಲ. ಎಂದಿಗೂ ಮುಖವಾಡ ಧರಿಸಲಿಲ್ಲ. ಆರ್.ಗುಂಡೂರಾಯರಿಗೆ ವೇದಿಕೆಯಲ್ಲೇ ಇಂಜಿನಿಯರಿಂಗ್ ಕಾಲೇಜು ಒದಗಿಸಿಕೊಡಿ ಎಂದು ಕೇಳಿ ಪಡೆದ ಧೀಮಂತ. ಸ್ವಂತ ಹೋರಾಟ, ಛಲದ ಮೇಲೆ ಅವರು ನಿಂತಿದ್ದರು. ನಾಡು ಕಂಡ ಶ್ರೇಷ್ಠ ರಾಜಕಾರಣಿಯಾದ ಅವರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕೆಂದರು.

ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಮಾತನಾಡಿ, ನಾವು ಹುಟ್ಟುವಾಗ ಹೆಸರು ಇರಲ್ಲ. ಸಾಯುವಾಗ ಹೆಸರು ಇರುತ್ತದೆ. ಕೆ.ಎಚ್.ಪಾಟೀಲರು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಇಂತಹ ಕಾರ್ಯಕ್ರಮ ಒಂದು ದಿನದ ಮಟ್ಟಿಗೆ ಸೀಮಿತವಾಗಬಾರದು. ಯುವ ಜನತೆಗೆ ಪಾಟೀಲರ ಜನ್ಮ, ಬಾಲ್ಯ, ಹಳ್ಳಿ ಜೀವನ, ಸಾಮಾಜಿಕ ಬದುಕು, ರಾಜಕೀಯವಾಗಿ ಹಂತ ಹಂತವಾಗಿ ಅವರು ಧೀಮಂತರಾಗಿ ಬೆಳೆದ ಬಗೆ ಎಲ್ಲವನ್ನು ತಿಳಿ ಹೇಳುವ ಕೆಲಸ ಆಗಬೇಕು. ಯುವ ಜನಾಂಗ ಸಮಾಜಗಳನ್ನು ಒಂದುಗೂಡಿಸುವತ್ತ ಗಮನ ಹರಿಸಬೇಕು. ಉತ್ತಮ ವೈದ್ಯ, ಇಂಜಿನಿಯರ್, ಲಾಯರ್, ಪೊಲೀಸ್ ಅಧಿಕಾರಿ ಆಗಬೇಕೆಂದರೆ ಅದಕ್ಕೆ ಕಾಲೇಜುಗಳಿವೆ. ಉತ್ತಮ ರಾಜಕಾರಣಿಗಳಾಗಬೇಕಾದರೆ ತರಬೇತಿ ನೀಡುವ ಕಾಲೇಜುಗಳಿಲ್ಲ. ಕೆ.ಎಚ್.ಪಾಟೀಲರ ಜೀವನ ದರ್ಶನವನ್ನು ಯುವಕರು ಅಧ್ಯಯನ ಮಾಡಿ, ಅವರನ್ನು ಅನುಸರಿಸಿದಲ್ಲಿ ಉತ್ತಮ ರಾಜಕಾರಣಿಗಳಾಗಬಹುದು. ಯಾರು ಬೇಕಾದರೂ ಶ್ರೀಮಂತರಾಗಬಹುದು, ರಾಜಕಾರಣಿಗಳಾಗಬಹುದು. ಕೆ.ಎಚ್.ಪಾಟೀಲ ಮತ್ತು ಎಂ.ಎನ್.ವೆಂಕಟಾಚಲಯ್ಯ ಅವರಂತೆ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಎಚ್.ಕೆ.ಪಾಟೀಲರು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಇಂದಿನ ಲೆಕ್ಕಾಚಾರದ ರಾಜಕಾರಣದಲ್ಲಿ ದೇಶ, ರಾಜ್ಯಗಳು ನಲುಗುತ್ತಿರುವುದು ನೋವಿನ ಸಂಗತಿ. ಇದನ್ನು ಹೊರತುಪಡಿಸಿ ಕೆ.ಎಚ್.ಪಾಟೀಲರು ಇದ್ದರು. ಅಂಜಿಕೆ ಎನ್ನುವುದು ಅವರಿಗಿರಲಿಲ್ಲ. ಅವರು ಸ್ವಂತ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಬೇರೆಯವರ ಮುಲಾಜಿಗೆ ಬೀಳುತ್ತಿರಲಿಲ್ಲ. ದೇವರಾಜ ಅರಸು ಸಿಎಂ ಆಗಿದ್ದ ವೇಳೆ ಇವರು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದರು. ಸಿಎಂ ಅವರನ್ನೇ ಒಂದೆರಡು ನಿಮಿಷ ಕಾಯುವಂತೆ ಮಾಡಿದ್ದ ಧೀಮಂತರು ಕೆ.ಎಚ್.ಪಾಟೀಲರು ಎಂದ ಪರಮೇಶ್ವರ್, ಕರ್ನಾಟಕ ಎನ್ನುವ ಹೆಸರು ಬರಲು ಗದುಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಇವರು ಪ್ರಸ್ತಾಪಿಸಿದ್ದ ಕರ್ನಾಟಕವೇ ಇಂದು ಹೊಸತನದಿಂದ ಕೂಡಿದೆ ಎಂದರು. ಸಮಾನತೆ, ಭ್ರಾತೃತ್ವ, ಸಹೋದರತೆ ಸ್ವಾತಂತ್ರ್ಯ ಕಳೆದು 75 ವರ್ಷವಾದರೂ ಲಭಿಸುತ್ತಿಲ್ಲ. ಸಮಾನತೆ ಬರಬೇಕಾದರೆ ಪ್ರತಿಯೊಬ್ಬ ಭಾರತೀಯ ಕಾನೂನು ಓದಬೇಕು. ಕೆ.ಎಚ್.ಪಾಟೀಲ ಲಾ ಶಾಲೆ ರಾಷ್ಟ್ರಕ್ಕೆ ಮಾದರಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ಶರಣಗೌಡ ಪಾಟೀಲ, 5ನೇ ಹಣಕಾಸು ಆಯೋಗದ ಅಧ್ಕಕ್ಷ ಡಾ.ಸಿ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ತಿಮ್ಮಾಪುರ, ರುದ್ರಪ್ಪ ಲಮಾಣಿ, ಶಾಸಕ ರಿಜ್ವಾನ್ ಹರ್ಷದ್ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ಹಲವಾರು ಶಾಸಕರು, ಸಹಕಾರಿ ಸಂಘಗಳ ಧುರೀಣರು, ಪಾಟೀಲರ ಅಭಿಮಾನಿಗಳು ಮತ್ತಿತರರು ಇದ್ದರು.

ಇದಕ್ಕೂ ಮುನ್ನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ತಂಡದವರಿಂದ ಕೆ.ಎಚ್.ಪಾಟೀಲ ಲಾವಣಿ ಪ್ರಸ್ತುತ ಪಡಿಸಿದರೆ, ರೇವತಿ ಕುಮಾರ್ ಪತ್ತಾರ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಂಕರ್ ಪ್ರಕಾಶ್ ನಿರೂಪಿಸಿದರು. 

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

0

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ ರಿಲಯನ್ಸ್ ರಿಟೇಲ್ ಲಿ., ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇವರ ವಿರುದ್ದ ರೆಫ್ರಿಜರೇಟರ್‌ಗೆ ಸಂಬಂಧಿಸಿದಂತೆ ಸೇವಾನ್ಯೂನತೆ ಕುರಿತು ಸಲ್ಲಿಸಿದ್ದ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.

ಅರ್ಜಿದಾರರಾದ ಎಸ್ ವಿ ಲೋಹಿತಾಶ್ವ ಇವರು ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇಲ್ಲಿ ರೆಫ್ರಿಜರೇಟರ್‌ನ್ನು ಕೊಂಡಿದ್ದು 02 ವರ್ಷಗಳ ವಾರಂಟಿ ನೀಡಿರುತ್ತಾರೆ. ಸದರಿ ರೆಫ್ರಿಜರೇಟರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಹಾಗೂ ಕೂಲ್ ಆಗುತ್ತಿಲ್ಲವೆಂದು ಎದುರುದಾರರಿಗೆ ಹಲವಾರು ಬಾರಿ ದೂರಿತ್ತರೂ ಹಾಗೂ ರೆಫ್ರಿಜರೇಟರ್ ವಾರಂಟಿ ಅವಧಿಯೊಳಗಿದ್ದರೂ ಎದುರುದಾರರು ರೆಫ್ರಿಜರೇಟರ್‌ನ್ನು ರಿಪೇರಿ ಮಾಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.

ಆಯೋಗದ ನೋಟಿಸ್‌ಗೂ ಹಾಜರಾಗದ ಕಾರಣ ಎದುರುದಾರರನ್ನು ಏಕ ಪಕ್ಷೀಯವೆಂದು ಮಾಡಿ, ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ದೂರುದಾರ ವಕೀಲರ ವಾದವನ್ನು ಆಲಿಸಿದ ಆಯೋಗವು, ದೂರುದಾರರು ಹಲವಾರು ಬಾರಿ ರೆಫ್ರಿಜರೇಟರನ್ನು ರಿಪೇರಿ ಮಾಡಿಕೊಡಲು ವಿನಂತಿಸಿರುವುದು ದಾಖಲೆಗಳಿಂದ ಸಾಬೀತಾಗಿರುವುದಾಗಿ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳನ್ನಾಗಲಿ ಅಥವಾ ದೂರುದಾರರು ಮಾಡಿರುವ ಆರೋಪವನ್ನಾಗಲಿ ಅಲ್ಲಗಳೆಯಲು ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಿರುವುದಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಲಾಗಿದೆ.

District Consumer Disputes Redressal Commission ಎದುರುದಾರರು ಈ ಆದೇಶವಾದ 45 ದಿನಗಳ ಒಳಗಾಗಿ ರೆಫ್ರಿಜರೇಟರ್‌ನ್ನು ರಿಪೇರಿ ಮಾಡಿ ನೀಡಬೇಕು ಹಾಗೂ ಒಂದು ವೇಳೆ ರಿಪೇರಿ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ, ದೂರುದಾರರು ರೆಫ್ರಿಜರೇಟರ್‌ನ್ನು ಒಂದೂವರೆ ವರ್ಷಗಳ ಕಾಲ ಉಪಯೋಗಿಸುವುದರಿಂದ ಖರೀದಿ ಬೆಲೆಗೆ ಶೇ.10 ಸವಕಳಿಯನ್ನು ಹಾಗೂ ಜಿಎಸ್‌ಟಿಯನ್ನು ಕಳೆದು ರೂ.27,312 ನ್ನು ದೂರುದಾರರಿಂದ ರೆಫ್ರಿಜರೇಟರ್ ಹಿಂಪಡೆದು ನೀಡಲು ಹಾಗೂ ರೂ.5,000/- ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ, ಸದಸ್ಯರಾದ ಬಿ.ಡಿಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಮಾ.11 ರಂದು ಆದೇಶಿಸಿದೆ

Child Labour ಬಾಲಕಾರ್ಮಿಕರನ್ನ ನೇಮಿಸಿಕೊಂಡರೆ ಮಾಲೀಕರಿಗೆ ₹50.000 ದಂಡ & 2 ವರ್ಷ ಜೈಲು

0

Child Labour 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಮತ್ತು 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ನೇಮಿಸಿಕೊಂಡ ಮಾಲೀಕರಿಗೆ ರೂ.50,000 ವರೆಗೆ ದಂಡ ಹಾಗೂ 2 ವರ್ಷದವರೆಗಿನ ಸೆರೆಮನೆ ವಾಸದ ಶಿಕ್ಷೆ ಇದ್ದು ತಪ್ಪಿತಸ್ಥ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು. ಹಾಗೂ ಕೆಲಸಕ್ಕೆ ಸೇರಿಸಿದ ಪಾಲಕರ ಮೇಲೆಯೂ ದಂಡ ವಿಧಿಸಲಾಗುವುದು. ಇಂತಹ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರು ಜಿಲ್ಲೆಯಲ್ಲಿ ಎಲ್ಲಿಯಾದರೂ ಕಂಡು ಬಂದರೆ ಮಕ್ಕಳ ಸಹಾಯವಾಣಿ 1098/112 ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬಹುದು.

ಜಿಲ್ಲೆಯಾದ್ಯಂತ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಅನ್ವಯ ಇತ್ತೀಚೆಗೆ ಶಿವಮೊಗ್ಗದ ಪ್ರತಿಷ್ಟಿತ ಹೋಟೆಲ್ ಹಾಗೂ ಶಿಕಾರಿಪುರ ತಾಲ್ಲೂಕಿನ ಆಟೋಮೊಬೈಲ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕರನ್ನು ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಬಾಲಕರನ್ನು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಬಾಲಕರನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿರುತ್ತಾರೆ.

ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಮಕ್ಕಳು ಹಾಗೂ ಪೋಷಕರನ್ನು ವಿಚಾರಣೆ ಮಾಡಲಾಗಿ ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದುದನ್ನು ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಮಾಲೀಕರ ವಿರುದ್ದ ಬಾಲಕಾರ್ಮಿಕ/ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ 2016)ರಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕಾರ್ಮಿಕ ಇಲಾಖೆಗೆ ನಿರ್ದೇಶನ ನೀಡಿದ್ದು, ಇದರನ್ವಯ ಇಲಾಖೆಯಿಂದ ಮಾಲೀಕರ ವಿರುದ್ದ ಪ್ರಕರಣ ದಾಖಲಾಗಿದ್ದು ಮಕ್ಕಳ ಪುನರ್ವಸತಿಗಾಗಿ ಮಾಲೀಕರಿಂದ ರೂ.20,000 ಕಾರ್ಪಸ್ ನಿಧಿಯನ್ನು ವಸೂಲಿ ಮಾಡಲಾಗಿರುತ್ತದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ತಿಳಿಸಿದ್ದಾರೆ.

Annabhagya Yojana ಇನ್ನುಮುಂದೆ ಫಲಾನುಭವಿಗಳಿಗೆ ನಗದು ಬದಲಾಗಿ ಹೆಚ್ಚುವರಿ 5 ಕೆಜಿ ವಿತರಣೆ

0

Annabhagya Yojana ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಅಂತ್ಯೋದಯ ಅನ್ನಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಚೀಟಿಯ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಅಕ್ಕಿ ಹಣವನ್ನು ವರ್ಗಾಯಿಸುವ ಪ್ರಕ್ರಿಯೆ ಬದಲಾಗಿ 2025 ರ ಫೆಬ್ರವರಿ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಣೆ ಮಾಡಲು ಆದೇಶಿಸಲಾಗಿದೆ.

ವಿತರಣೆ ಪ್ರಮಾಣ : ಅಂತ್ಯೋದಯ ಪಡಿತರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ. ಅಕ್ಕಿ. 4 ಸದಸ್ಯರಿರುವ ಕಾರ್ಡಿಗೆ 45 ಕೆ.ಜಿ. ಅಕ್ಕಿ, 5 ಸದಸ್ಯರರಿರುವ ಕಾರ್ಡಿಗೆ 65 ಕೆ.ಜಿ. ಅಕ್ಕಿ, 6 ಸದಸ್ಯರಿರುವ ಕಾರ್ಡಿಗೆ 85 ಕೆ.ಜಿ. ಅಕ್ಕಿ, 7 ಸದಸ್ಯರಿರುವ ಕಾರ್ಡುದಾರರಿಗೆ 105 ಕೆ.ಜಿ ಅಕ್ಕಿ ,8 ಸದಸ್ಯರಿರುವ ಕಾರ್ಡಿಗೆ 125 ಕೆ.ಜಿ. ಅಕ್ಕಿ, 9 ಸದಸ್ಯರಿರುವ ಕಾರ್ಡಿಗೆ 145 ಕೆ.ಜಿ. ಅಕ್ಕಿ, 10 ಸದಸ್ಯರಿರುವ ಕಾರ್ಡಿಗೆ 165 ಕೆ.ಜಿ. ಅಕ್ಕಿ, 11 ಸದಸ್ಯರಿರುವ ಕಾರ್ಡಿಗೆ 185 ಕೆ.ಜಿ. ಅಕ್ಕಿ, 12 ಸದಸ್ಯರಿರುವ ಕಾರ್ಡಿಗೆ 205 ಕೆಜಿ. ಅಕ್ಕಿಯನ್ನು ಹಾಗೂ ಆದ್ಯತಾ ಪಡಿತರ(ಪಿಪಿಹೆಚ್/ಬಿಪಿಎಲ್) ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರಿಗೆ 15 ಕೆ.ಜಿ. ಅಕ್ಕಿಯನ್ನು ಕೊಡಲಾಗುತ್ತದೆ.
ಪಡಿತರ ಚೀಟಿದಾರರು ಮಾರ್ಚ್ ತಿಂಗಳ ಅಂತ್ಯದವರೆಗೆ ತಮ್ಮ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಕೊಟ್ಟು ರಶೀದಿ ಪಡೆದು ಉಚಿತವಾಗಿ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿದೆ.

Annabhagya Yojana ಒಂದು ವೇಳೆ ನ್ಯಾಯ ಬೆಲೆ ಅಂಗಡಿಯವರು ಕಡಿಮೆ ಪ್ರಮಾಣದಲ್ಲಿ ಅಕ್ಕಿಯನ್ನು ವಿತರಿಸಿದಲ್ಲಿ. ಟೋಲ್‌ಫ್ರೀ ಸಂ.1967, ಆಹಾರ ನಿರೀಕ್ಷಕರ ಮೊ.ಸಂ. 9611195920 ಗೆ ದೂರು ಸಲ್ಲಿಸಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ ಭದ್ರಾವತಿಯ ಸಹಾಯಕ ನಿರ್ದೇಶಕರು(ಪ್ರ) ತಿಳಿಸಿದ್ದಾರೆ.