Wednesday, February 25, 2026
Wednesday, February 25, 2026
Home Blog Page 251

Food Civil Supplies and Consumer Affairs ರಾಜ್ಯ ಮಟ್ಟದ ಜಾಗೃತಿ ಸಮಿತಿಯ ಸದಸ್ಯರು ಕ್ಷೇತ್ರದಲ್ಲಿ ಸಮರ್ಪಕವಾಗಿ ತಮ್ಮ ಕೆಲಸ ಮಾಡಬೇಕು ಆಹಾರ : ಕೆ.ಹೆಚ್. ಮುನಿಯಪ್ಪ

0

Food Civil Supplies and Consumer Affairs ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ರವರ ನೇತೃತ್ವದಲ್ಲಿ ವಿಕಾಸ ಸೌಧದಲ್ಲಿ ರಾಜ್ಯ ಮಟ್ಟದ ಜಾಗೃತಿ ಸಭೆಯನ್ನು ನಡೆಸಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಕಾಯ್ದೆಯಡಿ ರಚಿಸಿರುವ – ಜಾಗೃತಿ ಸಮಿತಿ ಸಭೆಯ ಮಾಹಿತಿಗಳು

  • ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ – 2013ರ ರಾಜ್ಯ ಸರ್ಕಾರವು ಸಂಖ್ಯೆ: ಎಫ್.ಸಿ.ಎಸ್ 144 ಡಿ.ಆರ್.ಎ 2013 ದಿ: 30.05.2016 ಕರ್ನಾಟಕ ಜಾಗೃತಿ ಸಮಿತಿ ನಿರ್ದಿಷ್ಟ ಗುರುಯುಳ್ಳ ಸಾರ್ವಜನಿಕ ವಿತರಣಾ ಪದ್ದತಿ ನಿಯಮ -2016ರ ಅಧಿಸೂಚನೆಯನ್ನು ಹೊರಡಿಸಿ ರಾಜ್ಯದಲ್ಲಿ ಕೆಳಕಂಡ ನಾಲ್ಕು ಹಂತಗಳ ಜಾಗೃತಿ ಸಮಿತಿಗಳನ್ನು ರಚಿಸಿ ನಿಯಮಾವಳಿಗಳನ್ನು ರೂಪಿಸಲಾಗಿದೆ.
  1. ರಾಜ್ಯ ಮಟ್ಟದ ಜಾಗೃತಿ ಸಮಿತಿ
  2. ಜಿಲ್ಲಾ ಮಟ್ಟದ ಜಾಗೃತಿ ಸಮಿತಿ
  3. ತಾಲ್ಲೂಕು ಮಟ್ಟದ ಜಾಗೃತಿ ಸಮಿತಿ 4. ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿ.

ಇದರಂತೆ ರಾಜ್ಯ ಜಿಲ್ಲಾ ಹಾಗೂ ತಾಲ್ಲೂಕು ಹಂತಗಳಲ್ಲಿ ಜಾಗೃತಿ ಸಮಿತಿಗಳ ಅವಧಿಯು ಎರಡು ವರ್ಷಗಳಾಗಿದ್ದು ನ್ಯಾಯಬೆಲೆ ಅಂಗಡಿ ಹಂತದಲ್ಲಿ ನಿರಂತರವಾದ ಸಮಿತಿಯಾಗಿರುತ್ತದೆ.

Food Civil Supplies and Consumer Affairs ನ್ಯಾಯಬೆಲೆ ಅಂಗಡಿ ಹಂತದ ಸಮಿತಿಗಳು ಪ್ರತಿ ಮಾಹೆಯ 7ನೇ ದಿನಾಂಕದಂದು ಸಭೆಯನ್ನು ಹಾಗೂ ರಾಜ್ಯ ಜಿಲ್ಲಾ ತಾಲ್ಲೂಕು ಹಂತದ ಸಭೆಗಳು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಾಗಿರುತ್ತದೆ.

  • ನ್ಯಾಯಬೆಲೆ ಅಂಗಡಿ ಹಂತದ ಜಾಗೃತ ಸಮಿತಿಗಳನ್ನು ಆಹಾರ ಇಲಾಖೆಯ ತಂತ್ರಾಂಶದಿಂದ ಒಟ್ಟಾರೆಯಾಗಿ ಮೂರು ಮಹಿಳಾ ಕುಟುಂಬದ ಮುಖ್ಯಸ್ಥರಾಗಿರುವ ಪಡಿತರ ಚೀಟಿಗಳಿಂದ ಆಯ್ಕೆ ಮಾಡಲಾಗಿರುತ್ತದೆ.
    • *ಸದರಿ ಆದೇಶದಂತೆ ಎಲ್ಲಾ ಹಂತದ ಅಂದರೆ 20483 ನ್ಯಾಯಬೆಲೆ ಅಂಗಡಿಗಳ ಜಾಗೃತಿ ಸಮಿತಿ ಚಾಲ್ತಿಯಲ್ಲಿ ಇರುತ್ತದೆ.
  • 236 ತಾಲ್ಲೂಕುಗಳಲ್ಲಿ 31 ಜಿಲ್ಲೆಗಳ ಅವಧಿ ಮುಗಿದಿದ್ದು, ಪುನರ್ ರಚಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿ ಇದೆ.
  • * ರಾಜ್ಯ ಮಟ್ಟದ ಜಾಗೃತಿ ಸಮಿತಿಯು ದಿ: 09.01.2025ರಂದು ಪುನರ್ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ 31 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಿಂದ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಈ ಜಿಲ್ಲೆಗಳಾದ ಬಾಗಲಕೋಟೆ, ದಕ್ಷಿಣ ಕನ್ನಡ, ದಾವಣಗೆರೆ, ರಾಮನಗರ ಹಾಗೂ 85 ತಾಲ್ಲೂಕುಗಳಿಂದ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಎ.ಎಫ್.ಸಿ.ಎಸ್ 52ಡಿ.ಆರ್.ಎ 2012[5] ದಿ: 18.06.2016ರಲ್ಲಿ ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿಗಳ ಅಧಿಕಾರ ಮತ್ತು ಕಾರ್ಯ ಸೂಚಿಗಳನ್ನು ನೀಡಲಾಗಿರುತ್ತದೆ.
    ಸರ್ಕಾರದ ಆದೇಶ ಸಂಖ್ಯೆ: ಆನಾಸ/52 ಡಿ.ಆರ್.ಎ 2012 ಬೆಂಗಳೂರು ದಿ: 05.09.2013 ಡಿ.ಜಿ.ಆರ್.ಓ ಅಂತಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ / 93 ಡಿ.ಆರ್.ಎ 2023 ಬೆಂಗಳೂರು ದಿ: 09.01.2025 ಪ್ರಸ್ಥಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಜಾಗೃತ ಸಮಿತಿ ಉದ್ದೇಶಿತ ಸಾರ್ವಜನಿಕ ವಿತರಣಾ ಪದ್ದತಿ ನಿಯಮಗಳು 2016ರ ನಿಯಮ 7[4] ರನ್ವಯ ರಾಜ್ಯ ಮಟ್ಟದ ಜಾಗೃತಿ ಸಮಿತಿಗೆ ಈ ಕೆಳಕಂಡ ಸದಸ್ಯರನ್ನು ನೇಮಿಸಲಾಗಿದೆ.

ರಾಜ್ಯ ಮಟ್ಟದ ಜಾಗೃತಿ ಸಮಿತಿಯ ಅಧ್ಯಕ್ಷರಾಗಿ
1 ಕೆ.ಹೆಚ್.ಮುನಿಯಪ್ಪ ಆ,ನಾಸ & ಗ್ರಾವ್ಯ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವರು.

ಸದಸ್ಯರಾಗಿ
2 1. ತುಕಾರಾಂ, ಲೋಕಸಭಾ ಸದಸ್ಯರು ಅಶೋಕ ಕಾಲೋನಿ, ಸಂಡೂರು, ಬಳ್ಳಾರಿ ಜಿಲ್ಲೆ

  1. ಇಕ್ಬಾಲ್ ಹುಸೇನ್, ವಿಧಾನ ಸಭಾ ಸದಸ್ಯರು, ರಾಮನಗರ
  2. ಹರೀಶ್ ಗೌಡ, ವಿಧಾನ ಸಭಾ ಸದಸ್ಯರು, ಹುಣಸೂರು ಕ್ಷೇತ್ರ.
  3. ಬಸವನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರು, ಸಿಂದನೂರು, ರಾಯಚೂರು ಜಿಲ್ಲೆ.
    5 ಎಂ.ನಾರಾಯಣಸ್ವಾಮಿ, ಸದಸ್ಯರು
    6.ಭೀಮಣ್ಣ ಸದಸ್ಯರು ಯಾದಗಿರಿ
    7.ವಾಣಿ ಆರ್.ಸಗರ್ ಕರ್ ಕಲಬುರ್ಗಿ.
    8 ರೇವತಿ ಅನಂತರಾಮು ದೊಡ್ಡಬಳ್ಳಾಪುರ,
    9 ಮೋಹನ್ ಕುಮಾರ್ ದಾನಪ್ಪ.
    10.ವಿದ್ಯಾಲಿಬರೇಷನ್ ಕಲ್ಚರಲ್ ಆಕ್ಷನ್ ಪ್ಲಾಟ್ ಗುಲ್ಬರ್ಗ 3ಸದಸ್ಯ ಕಾರ್ಯದರ್ಶಿ
    ಸರ್ಕಾರದ ಕಾರ್ಯದರ್ಶಿ, ಆ,ನಾಸ & ಗ್ರಾ.ವ್ಯ ಇಲಾಖೆ ಸದಸ್ಯ ಕಾರ್ಯದರ್ಶಿ

4 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾ.ಪಂ.ರಾಜ್
ಸದಸ್ಯರು

5 ಸರ್ಕಾರದ ಕಾರ್ಯದರ್ಶಿ. ಸಹಕಾರ ಇಲಾಖೆ, ಸದಸ್ಯರು

6 ಅಧ್ಯಕ್ಷರು, ಕ.ರಾ.ಆಹಾರ ಆಯೋಗ, ಮೈಸೂರು ಬ್ಯಾಂಕ್ ವೃತ್ತ, ಕೆ.ಜಿ. ರಸ್ತೆ, ಬೆಂಗಳೂರು ಸದಸ್ಯರು

7 ವ್ಯವಸ್ಥಾಪಕ ನಿರ್ದೇಶಕರು, ಕ.ರಾ.ಆ.ನಾ.ಸ.ನಿಗಮ, ವಸಂತನಗರ, ಬೆಂಗಳೂರು ಸದಸ್ಯರು

8 ಜಿಲ್ಲಾಧಿಕಾರಿಗಳು, ಬೆಂಗಳೂರು, ಮೈಸೂರು, ಬೆಳಗಾವಿ ಕಲಬುರ್ಗಿ ಸದಸ್ಯರು

9 ವಿದ್ಯಾ ಲಿಬರೇಷನ್ ಕಲ್ಚರಲ್ ಆಕ್ಷನ್, ಕೃಷ್ಣ ನಗರ ಗುಲ್ಬರ್ಗ ಸದಸ್ಯರು

ಈ ಮೇಲ್ಕಂಡ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ.

ಸಚಿವರು ಮಾತನಾಡಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಜಾಗೃತಿ ಸಭೆಯನ್ನು ನಡೆಸಿದ್ದು
ನಮ್ಮ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದು ಈ ಯೋಜನೆಯು ಬಡವರ ಹೊಟ್ಟೆ ತುಂಬಿಸುವ ಮಹತ್ವದ ಕಾರ್ಯ ಮಾಡುತ್ತಿದೆ
ರಾಜ್ಯ ಮಟ್ಟದ ಜಾಗೃತಿ ಸಮಿತಿ ರಚಿಸಿದ್ದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅವುಗಳ ಅನುಷ್ಠಾನವಾಗದ ಜಿಲ್ಲೆಗಳ ಪಟ್ಟಿ ನೀಡುವಂತೆ ಸೂಚಿಸಿದರು ಈಗಾಗಲೇ ರಚನೆಯಾಗಿರುವ ತಾಲೂಕು ಮಟ್ಟದ ಸಮಿತಿಗಳು ಹೆಚ್ಚು ಚುರುಕಾಗಿ ಕಾರ್ಯನಿರ್ವಹಿಸಬೇಕೆಂದರು.

ತಾವು ಜಾಗೃತಿ ಸಮಿತಿ ಸದಸ್ಯರಿದ್ದು ಕ್ಷೇತ್ರದ ಮಟ್ಟದಲ್ಲಿ ಹೆಚ್ಚಿನ ಕೆಲಸ ಮಾಡಿ ಇಲಾಖೆಯ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು

ಸರ್ಕಾರ ಬಡವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದು ಯೋಜನೆಯ ಅನುಷ್ಠಾನದಲ್ಲಿ ಜಾಗೃತಿ ಸಮಿತಿಯ ಸದಸ್ಯರು ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಗಮನದಲ್ಲಿಟ್ಟು, ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದರು

ಸರ್ಕಾರದ ಪ್ರಮುಖ ಯೋಜನೆಗಳ ಮಾಹಿತಿಗಳನ್ನು ನಾಗರಿಕರಿಗೆ ಮನವರಿಕೆ ಮಾಡುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದ್ದು

ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ತುಕಾರಾಂ, ವಿಧಾನ ಸಭಾ ಸದಸ್ಯರಾದ ಇಕ್ಬಾಲ್ ಹುಸೇನ್,ವಿಧಾನ ಪರಿಷತ್ತಿನ ಸದಸ್ಯರಾದ ಬಸವನಗೌಡ ಬಾದರ್ಲಿ, ಸದಸ್ಯರು ಹಾಗೂ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್,ಆಯುಕ್ತರಾದ ವಾಸಿರೆಡ್ಡಿ ವಿಜಯಜೋತ್ನಾ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

Rotary Shivamogga ವಿಶ್ವಾದ್ಯಂತ ರೋಟರಿ ಕ್ಲಬ್‌ಗಳಿಂದ ಸಮಾಜಮುಖಿ ಸೇವೆ : ಅಭಿನಂದನ್ ಎ ಶೆಟ್ಟಿ

0

Rotary Shivamogga ರೋಟರಿ ಸಂಸ್ಥೆಯು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ ಎಂದು ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಎ ಶೆಟ್ಟಿ ಹೇಳಿದರು.
ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ಶಾಂತಿಯನ್ನು ಉತ್ತೇಜಿಸುವುದು, ರೋಗಗಳ ವಿರುದ್ಧ ಹೋರಾಡುವುದು, ಶುದ್ಧ ನೀರು, ತಾಯಂದಿರು ಮತ್ತು ಮಕ್ಕಳನ್ನು ಅಪೌಷ್ಠಿಕತೆ ಮತ್ತು ಇತರ ಕಾಯಿಲೆಗಳಿಂದ ರಕ್ಷಿಸುವುದು, ಶುದ್ಧ ನೀರು ಹಾಗೂ ಸಾಕ್ಷರತೆ, ಸ್ಥಳೀಯ ಆರ್ಥಿಕತೆಯನ್ನು ಬೆಳೆಸುವುದು ಮತ್ತು ಪರಿಸರ ರಕ್ಷಿಸುವಲ್ಲಿ ರೋಟರಿ ಕ್ಲಬ್‌ಗಳು ತೊಡಗಿಸಿಕೊಂಡಿವೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಬಸವರಾಜ್ ಬಿ ರವರಿಗೆ ಪದವಿ ಪ್ರಧಾನ ಮಾಡಿದರು. ಕಾರ್ಯದರ್ಶಿಯಾಗಿ ಜಯಶೀಲ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಜಿ ಅವರ ಸೇವಾ ಕಾರ್ಯಗಳ ಬಗ್ಗೆ ಹಾಗೂ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
Rotary Shivamogga ವಲಯ 11 ರ ಸಹಾಯಕ ಗವರ್ನರ್ ಲಕ್ಷ್ಮಣ್‌ಗೌಡ ಎಂ ಬಿ, ಜೋನಲ್ ಲೆಫ್ಟಿನೆಂಟ್ ಕಿರಣ್ ಕುಮಾರ್ ಜಿ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಈಶ್ವರ ಬಿವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನ್ಸ್ ಕ್ಲಬ್ ಪದವಿ ಪ್ರಧಾನ ಮಾಡಲು ಡಾ. ರಾಜನಂದಿನಿ ಕಾಗೋಡು ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ವಲಯ 10 ಮತ್ತು 11 ರ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು, ಪಿಡಿಜಿಗಳು ಫಾಸ್ಟ್ ಅಸಿಸ್ಟೆಂಟ್ ಗೌರ್ನರ್ ಉಪಸಿತರಿದ್ದರು.

Vivek Vidya Nidhi “ವಿವೇಕ ವಿದ್ಯಾನಿಧಿ” ಸಾರ್ಜಜನಿಕರಿಗೆ ಮುಖ್ಯ ಮಾಹಿತಿ

0

Vivek Vidya Nidhi ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಾನ ಮನಸ್ಕರ ತಂಡವಾಗಿರುವ “ಅನವರತ” ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ನಾಲ್ಕನೇ ಆಯಮದ ತಯಾರಿಯಲ್ಲಿ ತೊಡಗಿದೆ.

  • ಅನವರತ ತಂಡವು ಯುವ ಪೀಳಿಗೆಯು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂಬ ಉದ್ದೇಶದೊಂದಿಗೆ ನಗರದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕಿರು ಸಹಾಯವನ್ನು ನೀಡಲು ಸಂಕಲ್ಪ ಮಾಡಿಕೊಂಡಿದೆ.

“ವಿವೇಕ ವಿದ್ಯಾ ನಿಧಿ”

  • ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮಹಾನ್ ರಾಯಭಾರಿ ಶ್ರೀ ಸ್ವಾಮಿ ವಿವೇಕಾನಂದರ ಆದರ್ಶಗಳು, ಅವರ ದೃಷ್ಟಿಕೋನವು ಯುವಜನರು ಉನ್ನತ ಶಿಕ್ಷಣವನ್ನು ಪಡೆದು, ಅದರೊಂದಿಗೆ ಬಲವಾದ ರಾಷ್ಟ್ರೀಯ ಚಿಂತನೆ ಮತ್ತು ರಾಷ್ಟ್ರೀಯತೆಯ ಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿತ್ತು. ಅವರ ಆಶಯದಂತೆ ಈ ಮಹಾನ್ ಕಾರ್ಯಕ್ಕೆ ಅನವರತ ತಂಡವು “ವಿವೇಕ ವಿದ್ಯಾ ನಿಧಿ” ಎಂಬ ಹೆಸರನ್ನಿಡುವ ಮೂಲಕ ಈ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಲು ಮುಂದಾಗಿದೆ.

ಏನಿದು ವಿವೇಕ ವಿದ್ಯಾ ನಿಧಿ?

  • ಪ್ರಸಕ್ತ ಸಾಲಿನಲ್ಲಿ ಓದುತ್ತಿರುವಂತಹ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಕಳೆದ ಸಾಲಿನಲ್ಲಿ ಶೇಕಡ 50% ರಿಂದ 75% ವರೆಗೆ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ಪ್ರಸಕ್ತ ಸಾಲಿನಲ್ಲಿ ಇನ್ನು ಹೆಚ್ಚು ಅಂಕ ಪಡೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಆರ್ಥಿಕ ನೆರವು ನೀಡುವುದು.
  • ಸಮಾಜದಲ್ಲಿನ ಅನೇಕ ಕೊಡುಗೈ ದಾನಿಗಳನ್ನು ಈ ಶ್ರೇಷ್ಠ ಕಾರ್ಯದಲ್ಲಿ ಜೋಡಿಸಿಕೊಂಡು ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಸಮಾಜದ ಪಾತ್ರವನ್ನು ನೆನಪಿಸುವುದರ ಜೊತೆಗೆ ಈ ವಿದ್ಯಾನಿಧಿಯು ಅವರ ಉನ್ನತ ಶಿಕ್ಷಣದ ಕನಸಿಗೆ ಒಂದು ಸಣ್ಣ ಬೆಂಬಲವಾಗಲಿದೆ .
  • ಒಟ್ಟಾರೆ, ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ 5000/- ರೂಗಳ ವಿದ್ಯಾರ್ಥಿ ವೇತನ ಒದಗಿಸುವುದು.

“ವಿವೇಕ ವಿದ್ಯಾ ನಿಧಿಗೆ ಯಾರು ಅರ್ಹರು?”

  • ಪ್ರಸ್ತುತ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು.
  • ಹಿಂದಿನ ವರ್ಷ ಅಂದರೆ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳಲ್ಲಿ ಶೇಕಡ 50 ರಿಂದ 75% ಹೊಂದಿರಬೇಕು.
  • ಪೋಷಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. (ಅವರ ಆದಾಯವು 1,80,000 ರೂ ಗಿಂತ ಕಡಿಮೆ ಇರಬೇಕು.)
  • ⁠ವಾರ್ಷಿಕ ವರ್ಷದಲ್ಲಿ ಓದುತ್ತಿರುವ ಶಾಲೆ/ಕಾಲೇಜಿನ ಶುಲ್ಕವು 30,000/- ರೂಪಾಯಿ ಮೀರಿರಬಾರದು.
  • ಪೋಷಕರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು.

ವಿವೇಕ ವಿದ್ಯಾನಿಧಿ ಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

  • Vivek Vidya Nidhi ವಿವೇಕ ವಿದ್ಯಾನಿಧಿ ಅರ್ಜಿಗಳನ್ನು ಶಾಸಕರ ಕಛೇರಿ ಕರ್ತವ್ಯ ಭವನದಲ್ಲಿ ಮಾತ್ರ ನೀಡಲಾಗುವುದು.
  • ವಿವೇಕ ವಿದ್ಯಾನಿಧಿ ಅರ್ಜಿಗಳನ್ನು ಜುಲೈ 11 ರಿಂದ ಆಗಸ್ಟ್ 15 ರವರೆಗೆ ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ನೀಡಲಾಗುವುದು.
  • ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 31ರ ಒಳಗಾಗಿ ಕರ್ತವ್ಯ ಭವನಕ್ಕೆ ನೀಡಬೇಕು.

ಆಯ್ಕೆ ಮಾಡಲಾದ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾನಿಧಿ ಅನ್ನು ಅಕ್ಟೋಬರ್ / ನವಂಬರ್ ತಿಂಗಳಿನಲ್ಲಿ ಕಾರ್ಯಕ್ರಮದ ಮೂಲಕ ನೀಡಲಾಗುವುದು.

Klive Special Article ಕಲಿಸಿದ ಚೇತನಕ್ಕೆ ಶಿರಬಾಗುವ ದಿನ ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

0

Klive Special Article ಪ್ರತಿವರ್ಷವೂ ನಾವು ತಂದೆಯ ದಿನ,ತಾಯಿಯದಿನ,ಮಕ್ಕಳದಿನ,ಹೀಗೆ ಒಂದೊಂದು ದಿನದ ಹೆಸರಿನಲ್ಲಿ ದಿನಾಚರಣೆಯನ್ನು ಆಚರಿಸುತ್ತೇವೆ.
ಹಾಗೆಯೇ ಗುರುಪೂರ್ಣಿಮೆಯೂ ಬಹಳ ಮುಖ್ಯವಾದ ದಿನವಾಗಿರುತ್ತೆ.
ನಮಗೆ ಮೊದಲಗುರುಗಳು ತಾಯಿ ತಂದೆ,ನಂತರ ಆಚಾರ್ಯರು,ವಿದ್ಯೆಕಲಿಸಿದ ಗುರುಗಳು.ಇಂದಿನ ದಿವಸ ನಾವು ನಮ್ಮ ಗೌರವದ ಕೃತಜ್ಞತೆಗಳನ್ನು ಗುರುಗಳಿಗೆ ಅರ್ಪಿಸಬೇಕಾದ ದಿನ.
ಗುರುಗಳ ಜವಾಬ್ದಾರಿಯೂ ಬಹಳ ದೊಡ್ಡದಿದೆ. ಪಾಠಮಾಡುವುದರ ಜೊತೆಗೆ ಸೂಕ್ತ ಮಾರ್ಗದರ್ಶನವನ್ನು ಕೊಡುವ ಜವಾಬ್ದಾರಿ ಇದೆ ಗುರುವಿಗೆ.
Klive Special Article ದಾಸರು ತಮ್ಮ ಬುದ್ಧಿಮಾತಿನ ಪದದಲ್ಲಿ”ಗುರುವಿನ
ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”
ಎಷ್ಟು ಸುಂದರವಾದ ವಾಕ್ಯ.ಎಂದರೆ ಗುರುವಿನ ಗುಲಾಮಗಿರಿ ಮಾಡು ಎಂದರ್ಥವಲ್ಲ.ಗುರುಗಳ ಮನಸ್ಸನ್ನು ಗೆದ್ದು ಅವರಿಂದ ಭೇಷ್ ಎಂದು ಶಹಬ್ಬಾಷ್ ಗಿರಿಪಡೆದು ಅವರ ಪ್ರೀತಿಯನ್ನು ಸಂಪಾದಿಸಿ ವಿದ್ಯಾರ್ಥಿಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು.
ಒಮ್ಮೆ ಗುರುವಿನ ಪ್ರೀತಿ ಸಂಪಾದಿಸಿದಿವೆಂದರೆ ಮುಂದೆ
ಜೀವನದ ದಾರಿಯಲ್ಲಿಯೂ ಯಾವುದೇ ಅಡೆತಡೆಯಿಲ್ಲದೆ ಸಾಗಬಹುದು.ಗುರುಗಳ ಕೃಪೆ ಪಡೆದ
ನಿದರ್ಶನಗಳನ್ನು ನಾವು ಇಂದಿರೇಶವಿಠಲಾಂಕಿತರಾದ
ಶ್ರೀಪಾಂಡುರಂಗಿ ಹುಚ್ಚಾಚಾರ್ಯರಿಂದ ಕಾಣಬಹುದು.
ಬಹಳಷ್ಟು ಜನ ಶಿಷ್ಯರು ಇವರನ್ನು ಗುರುಗಳಾಗಿ ಸ್ವೀಕರಿಸಿ ,ಅವರಲ್ಲಿ ಶಿಷ್ಯರಾಗಿ ಅವರ ಅನುಗ್ರಹ ಪಡೆದು
ತಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಿದವರಿದ್ದಾರೆ.
ಗುರುಪೂರ್ಣೀಮೆಯ ಶುಭದಿನದಂದು ನಾವೂ ಎಲ್ಲ
ಗುರುಗಳಿಗೂ ಮತ್ತು ಗುರುವೃಂದಕ್ಕೂ ನಮನಗಳನ್ನು ಅರ್ಪಿಸೋಣ.


Narayana Health Insurance Company ಒಂದು ಕೋಟಿ ರೂ‌, ವಿಮಾ ಮೌಲ್ಯದ “ನಾರಾಯಣ ಅದಿತಿ ಆರೋಗ್ಯ ವಿಮಾ ಯೋಜನೆ” ಬಿಡುಗಡೆ

0

Narayana Health Insurance Company ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆಯು ಶಿವಮೊಗ್ಗದಲ್ಲಿ ನಾರಾಯಣ ಆದಿತಿ ಎಂಬ ಕೈಗೆಟಕುವ ಬೆಲೆಯ ವಿನೂತನ ಆರೋಗ್ಯ ವಿಮಾ ಯೋಜನೆಯನ್ನು ಪ್ರಾರಂಭಿಸಿದೆ. ನಾರಾಯಣ ಆದಿತಿ ವಿಮಾ ಯೋಜನೆಯು ನಾಲ್ಕು ಜನರ ಕುಟುಂಬಕ್ಕೆ ಕೇವಲ ದಿನಕ್ಕೆ ₹29 ಬೆಲೆಯಲ್ಲಿ ₹1 ಕೋಟಿವರೆಗಿನ ಕವರೇಜ್ ಒದಗಿಸುವ ಮಹತ್ವದ ಆರೋಗ್ಯ ವಿಮೆಯಾಗಿದ್ದು, ಈ ಪ್ರದೇಶದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ, ಸಮಗ್ರ ಮತ್ತು ಅತ್ಯುತ್ತಮ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ.

ನಾರಾಯಣ ಆದಿತಿ ವಿಮಾ ಯೋಜನೆಯು ವೈದ್ಯಕೀಯ ಚಿಕಿತ್ಸೆಗೆ ₹5 ಲಕ್ಷದವರೆಗಿನ ವಿಮಾ ಮೊತ್ತವನ್ನು ಮತ್ತು ಶಸ್ತ್ರಚಿಕಿತ್ಸೆಗೆ ₹1 ಕೋಟಿವರೆಗಿನ ವಿಮೆಯನ್ನು ಒದಗಿಸುತ್ತದೆ. ವಿಶೇಷವಾಗಿ ನಾರಾಯಣ ಹೆಲ್ತ್ ಆಸ್ಪತ್ರೆ ಜಾಲದಲ್ಲಿ ಒಳರೋಗಿಗಳ ಚಿಕಿತ್ಸೆಗೆ ಮತ್ತು ಕಾರ್ಯವಿಧಾನಗಳಿಗೆ ಕ್ಯಾಶ್ ಲೆಸ್ (ನಗದುರಹಿತ) ಸೌಲಭ್ಯವನ್ನು ಒದಗಿಸುತ್ತದೆ. ನಾರಾಯಣ ಆದಿತಿಯ ಮತ್ತೊಂದು ವಿಶೇಷ ಲಕ್ಷಣವೆಂದರೆ ಗ್ರಾಹಕರು ಆರೋಗ್ಯ ತಪಾಸಣೆ ಮಾಡಿಸಿ, ಮೊದಲೇ ನಿಗದಿಪಡಿಸಿದ ಕೆಲವು ಷರತ್ತುಗಳನ್ನು ಪೂರೈಸಿದರೆ ಯಾವುದೇ ಕಾಯುವ ಅವಧಿ ಇರುವುದಿಲ್ಲ. ಈ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವ ಮೊದಲಿನ ಮತ್ತು ನಂತರದ ವೆಚ್ಚಗಳು, ಆಂಬ್ಯುಲೆನ್ಸ್ ಸೇವೆಗಳು, ಡೇ ಕೇರ್ ಪ್ರಕ್ರಿಯೆಗಳಿಗೆ ರಿಯಾಯಿತಿ ಮತ್ತು ಆಧುನಿಕ ಹಾಗೂ ಪರ್ಯಾಯ ಚಿಕಿತ್ಸೆಗಳಿಗೆ ಕವರೇಜ್ ಒದಗಿಸುತ್ತದೆ.

ಬೆಂಗಳೂರು ಮತ್ತು ಮೈಸೂರಿನಂತಹ ಪ್ರಮುಖ ನಗರಗಳಲ್ಲಿ ನಾರಾಯಣ ಆದಿತಿ ವಿಮಾ ಯೋಜನೆ ಈಗಾಗಲೇ ಲಭ್ಯವಿದ್ದು, ಮುಂದೆ ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ. ಆ ಮೂಲಕ ಭಾರತದಾದ್ಯಂತ ಇನ್ನಷ್ಟು ಕುಟುಂಬಗಳಿಗೆ ಸೇವೆ ಸಲ್ಲಿಸುವ ಉದ್ದೇಶ ಸಂಸ್ಥೆಗಿದೆ.

ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಲಭ್ಯವಿರುವ ನಾರಾಯಣ ಆದಿತಿ ವಿಮಾ ಯೋಜನೆಯು ನಗರ ಮತ್ತು ಸಣ್ಣ ಪಟ್ಟಣಗಳಲ್ಲಿರುವ ಕುಟುಂಬಗಳಿಗೆ ಅತ್ಯುತ್ತಮ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡುತ್ತದೆ. ಕೈಗೆಟುಕುವ ದರ, ಸುಲಭ ಲಭ್ಯತೆ ಮತ್ತು ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಾರಾಯಣ ಆದಿತಿ ವಿಮಾ ಯೋಜನೆಯು ಕರ್ನಾಟಕದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲಿದೆ.

Narayana Health Insurance Company ಈ ಕುರಿತು ಮಾತನಾಡಿರುವ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್‌ ನ ಸಿಇಓ ಶೀಲಾ ಅನಂತ್ ಅವರು, “ನಾರಾಯಣ ಆದಿತಿ ಪ್ರಾರಂಭಿಸುವ ಮೂಲಕ ನಾವು ಆರೋಗ್ಯ ವಿಮಾ ವಿಭಾಗದಲ್ಲಿ ಸಂಚಲನ ಉಂಟು ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಕೈಗೆಟುಕುವ ದರ ಮಾತ್ರವೇ ಅಲ್ಲ, ವಿಶ್ವಾಸಾರ್ಹ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶವೂ ಇದರ ಹಿಂದಿದೆ. ಶಿವಮೊಗ್ಗವು ನಮ್ಮ ಈ ಪಯಣದಲ್ಲಿ ಒಂದು ಪ್ರಮುಖ ಸ್ಥಳವಾಗಿದ್ದು, ಇಲ್ಲಿನ ಜನರಿಗೆ ಈ ಆರೋಗ್ಯ ವಿಮೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.

ನಾರಾಯಣ ಹೆಲ್ತ್ ಇನ್ಶೂರೆನ್ಸ್‌ ನ ನಿರ್ದೇಶಕರಾದ ಶ್ರೀ ರವಿ ವಿಶ್ವನಾಥ್ ಅವರು, “ನಾರಾಯಣ ಆದಿತಿಯು ಕರ್ನಾಟಕದ ಆರೋಗ್ಯ ವಿಮಾ ವಿಭಾಗದಲ್ಲಿ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ಇದು ಕೇವಲ ಆರೋಗ್ಯ ವಿಮಾ ಉತ್ಪನ್ನ ಮಾತ್ರವೇ ಅಲ್ಲ, ವೈದ್ಯಕೀಯ ಸೇವೆಯಲ್ಲಿ ಸಮಾನತೆ ಕಡೆಗಿನ ಮಹತ್ವದ ಹೆಜ್ಜೆಯಾಗಿದೆ. ವಿಶೇಷವಾಗಿ ಇದು ಬಹಳ ಸಮಯದಿಂದ ಸಾಂಪ್ರದಾಯಿಕ ಆರೋಗ್ಯ ವಿಮಾ ಯೋಜನೆಗಳಿಂದ ವಂಚಿತರಾಗಿದ್ದ ಕುಟುಂಬಗಳಿಗಾಗಿ ರೂಪಿಸಲಾದ ವಿಮಾ ಪರಿಹಾರವಾಗಿದೆ. ನಾರಾಯಣ ಆದಿತಿ ಮೂಲಕ ನಾವು ಪ್ರತೀ ಕುಟುಂಬಕ್ಕೂ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ಗುರಿ ಹೊಂದಿದ್ದೇವೆ” ಎಂದರು.

ಕೋಲ್ಕತ್ತಾ ಮತ್ತು ರಾಯಪುರ ಸೇರಿದಂತೆ ಏಕಕಾಲದಲ್ಲಿ 18 ಪ್ರದೇಶಗಳಲ್ಲಿ ಈ ಯೋಜನೆಯನ್ನು ಆರಂಭಿಸಿರುವುದು ವಿಶೇಷವಾಗಿದೆ.

ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಕುರಿತು
ನಾರಾಯಣ ಹೆಲ್ತ್‌ ನ ಅಂಗಸಂಸ್ಥೆಯಾಗಿರುವ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಒಂದು ಸ್ವತಂತ್ರ ಆರೋಗ್ಯ ವಿಮಾ ಕಂಪನಿಯಾಗಿದೆ. ವೈದ್ಯಕೀಯ ಸೇವೆ ಒದಗಿಸುವ ಭಾರತದ ಎರಡನೇ ಅತಿದೊಡ್ಡ ಸಂಸ್ಥೆಯಾಗಿರುವ ನಾರಾಯಣ ಹೆಲ್ತ್ ಆಸ್ಪತ್ರೆಯು ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ಸೂಪರ್-ಸ್ಪೆಷಾಲಿಟಿ ಚಿಕಿತ್ಸೆಗಳ ಸಮಗ್ರ ಶ್ರೇಣಿಯನ್ನು ಒದಗಿಸುತ್ತದೆ. ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಅತ್ಯುತ್ತಮ ಆರೋಗ್ಯ ಕೇಂದ್ರಗಳು, 18,822 ವೃತ್ತಿಪರರ ತಂಡ, 3,868 ಕೌಶಲ್ಯಪೂರ್ಣ ವೈದ್ಯರು ಮತ್ತು ತಜ್ಞರನ್ನು ಒಳಗೊಂಡಂತೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ಸಂಸ್ಥೆಯು ಹೊಂದಿದೆ. ಭಾರತದಲ್ಲಿ ಮಹತ್ವದ ವೈದ್ಯಕೀಯ ಸೇವಾ ಸಂಸ್ಥೆಯಾಗಿರುವ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು www.narayanahealth.insurance ಗೆ ಭೇಟಿ ನೀಡಿ.

CM Siddaramaiah ನವದೆಹಲಿಯಲ್ಲಿ”ಸಿಎಂ”ಸಿದ್ಧರಾಮಯ್ಯ ಅವರಿಂದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಭೇಟಿ

0

CM Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಇಂದು ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ‌ ಪ್ರದರ್ಶನ ಆಯೋಜಿಸುವ ಕುರಿತು ಚರ್ಚೆ ನಡೆಸಿದರು. ಬೆಂಗಳೂರಿನಲ್ಲಿ ಡಿಫೆನ್ಸ್ ಕಾರಿಡಾರ್, ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಕುರಿತು ಸಮಾಲೋಚನೆ ನಡೆಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ದೆಹಲಿ ಪ್ರತಿನಿಧಿ ಜಯಚಂದ್ರ ಹಾಜರಿದ್ದರು.

Rotary Club ರೋಟರಿ ಕ್ಲಬ್ ರಿವರ್ ಸೈಡ್ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಸನ್ಮಾನ

0

Rotary Club 24 ವರ್ಷಗಳಿಂದ ನಿರಂತರವಾಗಿ ಮನುಕುಲದ ಸೇವೆಯಲ್ಲಿ ಹಾಗೂ ಸಮಾಜಮುಖಿ ಸೇವೆಯಲ್ಲಿ ತನ್ನದೇ ಆದ ಚಾಪು ಮೂಡಿಸಿದ. ನಗರದ ಪ್ರತಿಷ್ಠಿತ ಅಂತರಾಷ್ಟ್ರೀಯ ರೋಟರಿ ಸಂಸ್ಥೆಗಳಲ್ಲಿ ಒಂದಾದ ರಿವರ್ ಸೈಡ್ ಕ್ಲಬ್ಬಿನ. 24ನೇ ಅಧ್ಯಕ್ಷರಾಗಿ ವಕೀಲರಾದ ವಿಶ್ವನಾಥ್ ನಾಯಕ್ ಹಾಗೂ ಕಾರ್ಯದರ್ಶಿ ನಿತಿನ್ ಯಾದವ್ ತಮ್ಮ ತಂಡದೊಂದಿಗೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರೋಟರಿ ಜಿಲ್ಲೆ 31 82ರ ನಿಯೋಜಿತ ಜಿಲ್ಲಾ ಗವರ್ನರ್. ವಸಂತ ಹೋಬಳಿದಾರ್. ಮತ್ತು ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಅರುಣ್ ದೀಕ್ಷಿತ್ ಅವರು ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಿದರು ಕಾರ್ಯಕ್ರಮದಲ್ಲಿ ವಲಯ 11 ಮಾಜಿ ಸಹಾಯಕ ಗೌರ್ನರ್ಜಿ ವಿಜಯಕುಮಾರ್. ರೋಟರಿ ಶಿವಮೊಗ್ಗ ಪೂರ್ವದ ನಿಯೋಜಿತ ಅಧ್ಯಕ್ಷ. ನೆಪ್ಚೂನ್ ಕಿಶೋರ್. ಕಾರ್ಯದರ್ಶಿ ಡಾಕ್ಟರ್ ಧನಂಜಯ್ ರಾಂಪುರ. ಸಿ ಕೆ ವಿಜಯಕುಮಾರ್. ಲಕ್ಷ್ಮಣ್ ಬಾಬು. ರಿವರ್ ಸೈಡ್ ಕ್ಲಬಿನ ಸದಾನಂದ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Sitaramchandra Temple ಭಗವದ್ಗೀತೆಯ ಜ್ಞಾನದಿಂದ ಸಮಾಜದಲ್ಲಿ ಶಾಂತಿ & ಮಾನವೀಯತೆ ಸ್ಥಾಪನೆ- ಅಶೋಕ ಭಟ್

0

Sitaramchandra Temple ಭಗವದ್ಗೀತಾ ಜ್ಞಾನವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸರ್ವರೂ ಸಮಾನರಾಗಿ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಶ್ರೀ ಭಗವದ್ಗೀತಾ ಅಭಿಯಾನದ ಜಿಲ್ಲಾ ಕಾರ್ಯಧ್ಯಕ್ಷ ಹಾಗೂ ವಕೀಲ ಅಶೋಕ್ ಭಟ್ ಹೇಳಿದರು.
ಪಟ್ಟಣದ ಮುಖ್ಯರಸ್ತೆಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ೨೦೨೫ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಅನೇಕ ವಿಕಾರಗಳಿಗೆ ಜನತೆ ಬಲಿಯಾಗುತ್ತಿದ್ದಾರೆ ಜೊತೆಗೆ ವಿಕೃತವಾದ ಮನಸ್ಸು ಅಡ್ಡದಾರಿಯನ್ನು ಹಿಡಿಯುತ್ತಿದೆ. ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಸುಲಿಗೆ, ಮಾದಕ ವಸ್ತುಗಳ ಸೇವನೆ, ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿದೆ. ಇದಕ್ಕೆಲ್ಲಾ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಭಗವದ್ಗಿತೆಯ ಮೂಲಕ ಸಮಾಜದಲ್ಲಿ ಸುಖ ಮತ್ತು ಶಾಂತಿ ನೆಲೆಸುವಂತೆ ಪ್ರತಿಯೊಬ್ಬರನ್ನು ಸುಸಂಸ್ಕೃತರನ್ನಾಗಿಸುವ ನಿಟ್ಟಿನಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ೨೦೦೭ರಿಂದ ಭಗವದ್ಗೀತಾ ಅಭಿಯಾನ ಆರಂಭಿಸಿದ್ದಾರೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರವಂತರನ್ನಾಗಿಸುವ ಉದ್ದೇಶದಿಂದ ಗೀತ ಜ್ಞಾನವನ್ನು ನೀಡಲಾಗುತ್ತಿದೆ ಎಂದರು.
ಭಗವದ್ಗೀತಾ ಅಭಿಯಾನದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್ ಮಾತನಾಡಿ, ಭಗವದ್ಗೀತೆಯು ಜ್ಞಾನ, ಧರ್ಮ ಹಾಗೂ ಸಂಸ್ಕೃತಿಯಾಗಿದೆ. ಶುಭ ಜೀವನದ ಹೊತ್ತಿಗೆಯಾಗಿದೆ. ಭಗವದ್ಗಿತೆಯನ್ನು ಅಧ್ಯಯನ ಮಾಡುವುದರಿಂದ ಒತ್ತಡ ಮುಕ್ತವಾದ ಜೀವನದನ್ನು ನಡೆಸಲು ಸಾಧ್ಯವಾಗುತ್ತದೆ. Sitaramchandra Temple ಸರ್ವ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಶ್ರೀ ಭಗವದ್ಗಿತೆಯ ಕುರಿತಾದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಜಾಗೃತರನ್ನಾಗಿಸಲಾಗುವುದು ಎಂದ ಅವರು, ತಮ್ಮನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಜೊತೆಗೆ, ಇಂತಹ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ. ಪ್ರತಿಯೊಬ್ಬರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗೌರವ ಅಧ್ಯಕ್ಷರಾಗಿ ಪಾಣಿ ರಾಜಪ್ಪ, ಉಪಾಧ್ಯಕ್ಷರಾಗಿ ಎಂ.ಎನ್. ಗುರುಮೂರ್ತಿ, ನಾಗರಾಜ ಗುತ್ತಿ. ಸತೀಶ್ ಜಾಣ್ಮನೆ ನಿಸರಾಣಿ, ಸರಸ್ವತಿ ನಾವುಡ. ಪ್ರಧಾನ ಸಂಚಾಲಕರಾಗಿ ದಿನಕರ ಭಟ್ ಭಾವೆ, ಕಾರ್ಯದರ್ಶಿ ಎಂ.ಎಸ್. ಕಾಳಿಂಗರಾಜ್, ಸಂಚಾಲಕರಾಗಿ ಪುರಸಭೆ ಸದಸ್ಯ ಡಿ.ಎಸ್. ಪ್ರಸನ್ನ ಕುಮಾರ್ ದೊಡ್ಮನೆ, ಪ್ರಶಾಂತ ಕೆ. ಸಾಗರ ಶ್ಯಾಡಲಕೊಪ್ಪ, ಕೇಶವಮೂರ್ತಿ ಪೇಟ್ಕರ್, ವಾಸುದೇವ ಉಡುಪ, ಗಾಯತ್ರಿ ಜೊಯ್ಸ್, ರೂಪದರ್ಶಿನಿ ಮಧುಕೇಶ್ವರ, ಸಹ ಸಂಚಾಲಕರಾಗಿ ರಾಘವೇಂದ್ರ ಆಚಾರ್, ನಾಗರಾಜ ಆಚಾರಿ, ಲೋಕೇಶ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ಪಿ.ಪಿ. ಹೆಗಡೆ, ಲಕ್ಷಿನಾರಾಯಣ,ಖಜಾಂಚಿ ದತ್ತಾತ್ರೇಯ ಹೆಗಡೆ, ವಿಭಾಗ ಸಂಚಾಲಕರಾದ ಮಾ.ಸ.ನಂಜುಂಡಸ್ವಾಮಿ, ವಿವಿಧ ಸಮುದಾಯ ಮುಖಂಡರು ಹಾಗೂ ಸಂಘ-ಸಂಸ್ಥೆಯವರು ಇದ್ದರು

Congress Karnataka ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಇ.ಎನ್.ರಮೇಶ್

0

Congress Karnataka ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ ಅನುಮೋದನೆ ಮೇರೆಗೆ ಇ.ಎನ್. ರಮೇಶ್ ರವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುತ್ತಾರೆ.

ರೈತರಿಗೆ ಮಾಹಿತಿ. ಅಡಿಕೆ ಗಿಡಗಳಿಗೆ ಬೇರು ಹುಳುಗಳ ಕಾಟ & ನಿಯಂತ್ರಣ

0

ಬೇರು ಹುಳುಗಳು ತೇವಾಂಶವಿರುವ ಮಣ್ಣಿನ ಪದರದಲ್ಲಿ ಗೋಡು ಮಣ್ಣಿನಿಂದ ಕೂಡಿದ ಹಳ್ಳದ ಪಕ್ಕದ ಮತ್ತು ಗದ್ದೆ ಜಮೀನಿನಲ್ಲಿ ಮಾಡಿದ ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹುಳುಗಳು ಭೂಮಿಯೊಳಗಿದ್ದು, ಅಡಿಕೆ ಬೇರುಗಳನ್ನು ಕತ್ತರಿಸಿ ತಿನ್ನುವುದರಿಂದ ಗಿಡಗಳು ರೋಗಗ್ರಸ್ತವಾದಂತೆ ಕಂಡುಬರುತ್ತವೆ. ಬಾಧೆಗೀಡಾದ ಮರಗಳಲ್ಲಿ ಎಲೆಗಳು ಹಳದಿಯಾಗಿ, ಗರಿ ಮತ್ತು ಗೆಣ್ಣುಗಳು ಗಿಡ್ಡವಾಗಿ, ಕಾಂಡದ ತುದಿ ಮೊನಚಾಗುತ್ತದೆ. ಇಳುವರಿ ಕಡಿಮೆಯಾಗುತ್ತಾ ನಂತರದ ದಿನಗಳಲ್ಲಿ ಮರಗಳು ಸಾಯುತ್ತವೆ.
ಲ್ಯೂಕೋಫೋಲಿಸ್ ಕೋನಿಯೋಫೋರಾ ದುಂಬಿಗಳು ಮೇ ಮತ್ತು ಜೂನ್ ತಿಂಗಳಲ್ಲಿ ಎರಡು ಮಳೆಗಳಾದ ನಂತರ ಹೊರಬರುತ್ತವೆ. ಲ್ಯೂಕೋಫೋಲಿಸ್ ಬರ್ಮಿಸ್ಟೆರಿ ದುಂಬಿಗಳು ಜೂನ್ ತಿಂಗಳಲ್ಲಿ ಹೊರಬರುತ್ತವೆ. ಲ್ಯೂಕೋಫೋಲಿಸ್ ಲೆಪಿಡೋಫೋರಾ ಜುಲೈ ತಿಂಗಳಿನ ಕೊನೆಯಲ್ಲಿ ಅಥವಾ ಆಗಸ್ಟ್ ತಿಂಗಳಿನ ಪ್ರಾರಂಭದಲ್ಲಿ ಹೊರಬರುತ್ತವೆ. ಈ ದುಂಬಿಗಳು ಸಂಜೆಯ ಸುಮಾರು ೬.೩೦ ರಿಂದ ೭.೩೦ರ ವೇಳೆಯಲ್ಲಿ ಮಣ್ಣಿನಿಂದ ಹೊರಬರುತ್ತವೆ.
ಆಳದಲ್ಲಿ ಮಣ್ಣಿನ ಗೂಡಿನೊಳಗೆ ಕೋಶಗಳು ಇಡುವುದರಿಂದ ಮಣ್ಣಿನಿಂದ ಹೊರಗೆ ಬರಲು ಮಳೆ ಅತ್ಯಾವಶ್ಯಕ, ಮೊದಲ ಮಳೆ ಬರುತ್ತಿದ್ದಂತೆಯೇ ಮೇ ಅಥವಾ ಜೂನ್ ತಿಂಗಳಿನಲ್ಲಿ ದುಂಬಿಗಳು ಮಣ್ಣಿನ ಗೂಡಿನೊಳಗಿಂದ ಗುಂಪುಗಳಲ್ಲಿ ಹೊರ ಬರುತ್ತವೆ. ಮಳೆಗಾಲವು ಹುಳುಗಳು ಹೊರಗೆ ಬರಲು ಉತ್ತೇಜಿಸುತ್ತದೆ. ಲ್ಯೂಕೋಫೋಲಿಸ್ ಕೋನಿಯೋಫೋರ್ ಒಂದು ವರ್ಷದಲ್ಲಿ ಜೀವನ ಚಕ್ರವನ್ನು ಮುಗಿಸಿದರೆ, ಲ್ಯೂಕೋಫೋಲಿಸ್ ಬರ್ಮಿಸ್ಟೆರಿ ಮತ್ತು ಲ್ಯೂಕೋಫೋಲಿಸ್ ಲೆಪಿಡೋಫೋರಾ ಎರಡು ವರ್ಷಗಳಲ್ಲಿ ತಮ್ಮ ಜೀವನ ಚಕ್ರವನ್ನು ಮುಗಿಸುತ್ತವೆ. ರೈತರಿಗೆ ಇವುಗಳ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ಇವರು ತಿಳಿಸಿರುತ್ತಾರೆ.
ಹತೋಟಿ ಕ್ರಮಗಳು
ಮುಂಗಾರಿನಲ್ಲಿ ಒಂದೆರಡು ಹದ ಮಳೆ ಆದ ನಂತರ ಮುಸ್ಸಂಜೆಯಲ್ಲಿ ಭೂಮಿಯಿಂದ ಹೊರಬರುವ ದುಂಬಿಗಳನ್ನು ಹಿಡಿದು ನಾಶಪಡಿಸುವುದರಿಂದ ಸಂತತಿಯನ್ನು ಕಡಿಮೆ ಮಾಡಬಹುದು.
ಆಗಸ್ಟ್ ಮೊದಲನೆ ವಾರದಲ್ಲಿ ೨-೩ ನೇ ಹಂತದ ಬೇರು ಹುಳುಗಳು ಹೆಚ್ಚಾಗಿರುವಾಗ ಕ್ಲೋರಪೈರಿಫಾಸ್ ೨೦ ಇ.ಸಿಯನ್ನು ಎಕರೆಗೆ ೨ ಲೀ ನಂತೆ (೨೦೦ ಲೀಟರ್ ನೀರಿಗೆ ೪೦೦ ಮಿ.ಲೀ ಔಷಧಿ ಕರಗಿಸಿ) ಪ್ರತಿ ಮರಕ್ಕೆ ೩-೫ ಲೀ. ಪ್ರಮಾಣದಲ್ಲಿ ಮರದ ಸುತ್ತ ಸುರಿಯಬೇಕು.
ಸೆಪ್ಟೆಂಬರ್ ತಿಂಗಳಲ್ಲಿ ಸಾಧ್ಯವಿರುವ ಕಡೆ ಬಸಿಗಾಲುವೆಗಳಲ್ಲಿ ೩-೪ ದಿನ ಕಂಠ ಮಟ್ಟ ನೀರು ನಿಲ್ಲಿಸಿದರೆ ಹುಳುಗಳು ಭೂಮಿಯ ಮೇಲ್ಪದರಕ್ಕೆ ಬರುತ್ತದೆ. ಬಸಿಗಾಲುವೆಗಳ ಮಧ್ಯದ ಪಟದಲ್ಲಿ ಅಗೆತ ಮಾಡಿ ಹುಳುಗಳನ್ನು ಹೆಕ್ಕಿ ನಾಶಪಡಿಸಬೇಕು. ನಂತರ ಇದೇ ತಿಂಗಳ ಮೂರನೇ ವಾರದಲ್ಲಿ ಕ್ಲೋರಫೈರಿಪಾಸ್ ೨೦ ಇ.ಸಿಯನ್ನು ಎಕರೆಗೆ ೨ ಲೀ. (೨೦೦ ಲೀಟರ್ ನೀರಿಗೆ ೪೦೦ ಮಿ.ಲೀ. ಔಷಧಿ ಕರಗಿಸಿ) ದ್ರಾವಣ ಅಥವಾ ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್ ಅನ್ನು ಎಕರೆಗೆ ೭೦೦ ಮಿ.ಲೀ. ಪ್ರಮಾಣದಲ್ಲಿ (೨೦೦ ಲೀಟರ್ ನೀರಿಗೆ ೨೦೦ ಮಿ.ಲೀ. ಔಷಧಿ ಕರಗಿಸಿ) ಪ್ರತಿ ಮರಕ್ಕೆ ೩-೫ ಲೀಟರ್ ನಂತೆ ದ್ರಾವಣ ರೂಪದಲ್ಲಿ ಸೇರಿಸ ಬೇಕು.
ಮೆಟಾರೈಜಿಯಂ ಅನಿಸೋಪ್ಲಿಯೆ ಅಥವಾ ಹೆಟರೋರಾಬ್ಟಿಸ್ ಜಂತುಹುಳು ೨೦ ಗ್ರಾಂ ಪುಡಿಯನ್ನು ೧ ಲೀ. ನೀರಿನಲ್ಲಿ ಬೆರೆಸಿ ಗಿಡದ ಬುಡ ಭಾಗಕ್ಕೆ ಹಾಕಬೇಕು ಹಾಗೆಯೇ ಮರವೊಂದಕ್ಕೆ ೨೫೦ ಗ್ರಾಂ ಬೇವಿನ ಹಿಂಡಿಯನ್ನು ಹಾಕಬೇಕು.
ಇದಲ್ಲದೆ ತೋಟಗಳಿಗೆ ಕಲ್ಲುಗೊಚ್ಚು ಮಣ್ಣನ್ನು ಲಭ್ಯವಿರುವೆಡೆ ಹಾಕಬೇಕು. ಬೇರುಹುಳುಗಳ ಸಂಪೂರ್ಣ ನಿಯಂತ್ರಣ ಕಷ್ಟ ಸಾಧ್ಯವಾದರೂ ಸಮಗ್ರ ಹತೋಟಿ ಕ್ರಮಗಳನ್ನು ೩-೪ ವರ್ಷ ನಿರಂತರವಾಗಿ ಅನುಸರಿಸಿದರೆ ಹಾನಿಯನ್ನು ಕಡಿಮೆ ಮಾಡಿ, ಇಳುವರಿ ಹೆಚ್ಚಿಸಿಕೊಳ್ಳಬಹುದು.