Monday, February 23, 2026
Monday, February 23, 2026
Home Blog Page 236

Rotary Club Shivamogga ಇಂಟರ್ಯಾಕ್ಟ್‌ ಕ್ಕಬ್ ಯುವಜನರಲ್ಲಿ ಆತ್ಮ ವಿಶ್ವಾಸ ಬೆಳೆಸುತ್ತದೆ- ಸೂರ್ಯನಾರಾಯಣ ಉಡುಪ

0

Rotary Club Shivamogga ಇಂಟರ‍್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಯಲ್ಲಿ ಸಂವಹನ ಕೌಶಲ್ಯ ಕಲಿಕೆಗೆ ನೆರವಾಗುತ್ತದೆ ಎಂದು ವಲಯ 10ರ ಇಂಟರ‍್ಯಾಕ್ಟ್ ಜೋನಲ್ ಕೋಆರ್ಡಿನೇಟರ್ ಸೂರ್ಯನಾರಾಯಣ ಉಡುಪ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಶ್ರೀ ಶಾರದಾದೇವಿ ಅಂಧರ ವಿಕಾಸ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಮಾತನಾಡಿ, ಇಂಟರ‍್ಯಾಕ್ಟ್ ಕ್ಲಬ್ ಉತ್ತಮ ವಿದ್ಯಾರ್ಥಿ ನಾಯಕರನ್ನು ತಯಾರು ಮಾಡುವಲ್ಲಿ ಸಫಲವಾಗಿದೆ. ನಮ್ಮ ರೋಟರಿ ಸಂಸ್ಥೆ ಸದಾ ನಿಮ್ಮೊಂದಿಗೆ ಇದೆ. ಮುಂದಿನ ದಿನಗಳಲ್ಲಿ ನಿಮ್ಮ ಕುಂದು ಕೊರತೆಗಳನ್ನು ಪರಿಹರಿಸುವುದರಲ್ಲಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದರು.
Rotary Club Shivamogga ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ, ಇಂಟರ‍್ಯಾಕ್ಟ್ ಕ್ಲಬ್ 1962ರಲ್ಲಿ ಪ್ರಾರಂಭವಾಗಿ ಇಂದಿಗೂ ಉತ್ತಮ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿ ನಾಯಕರನ್ನು ಸಮಾಜಕ್ಕೆ ನೀಡಿದೆ ಎಂದು ತಿಳಿಸಿದರು.
ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೀರ್ತನಾ ಮತ್ತು ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ ಅವರಿಗೆ ಪದಗ್ರಹಣ ಮಾಡಿ ಶುಭಾಶಯ ತಿಳಿಸಿದರು. ಶಾರದಾ ದೇವಿ ಅಂಧರ ವಿಕಾಸ ಶಾಲೆಯ ಟ್ರಸ್ಟಿ ಅನಿತಾ ಮಾತನಾಡಿ, ರೋಟರಿ ಸಂಸ್ಥೆಯ ಸಹಕಾರವನ್ನು ಶ್ಲಾಘಿಸಿದರು.

ಶಾರದಾ ದೇವಿ ಅಂಧರ ವಿಕಾಸ ಶಾಲೆಯ ಮುಖ್ಯಶಿಕ್ಷಕ ಸುರೇಶ್, ಅಧ್ಯಕ್ಷೆ ರಾಜಶ್ರೀ ಬಸವರಾಜ್ ಹಾಗೂ ಕಾರ್ಯದರ್ಶಿ ಮಥುರಾ ಧನಂಜಯ್, ಇಂಟರ‍್ಯಾಕ್ಟ್ ಚೇರ್ಮನ್ ಗೀತಾ ಜಗದೀಶ್, ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ಜಯಶೀಲ್ ಶೆಟ್ಟಿ, ಮಾಜಿ ಸಹಾಯಕ ಗವವರ್ನರ್ ರವಿ ಕೋಟೋಜಿ, ರಮೇಶ, ಸುರೇಖಾ ಮುರಳಿಧರ್, ಗಿರೀಶ್, ಧರ್ಮೇಂದ್ರ ಸಿಂಗ್, ಬಲರಾಮ್, ಜ್ಯೋತಿ, ಶ್ರೀರಾಮ್, ಲಕ್ಷ್ಮೀ ರವಿ, ದೀಪಾ ಶೆಟ್ಟಿ, ಗುರುರಾಜ್, ಈಶ್ವರ, ಮುರುಳಿ, ಅನಿತಾ ಹಾಗೂ ಚೈತ್ರ ಹೊಳ್ಳ ಉಪಸ್ಥಿತರಿದ್ದರು.

Karnataka Innerwear Association ಇನ್ನರ್ ವೇರ್ ಉದ್ಯಮಕ್ಕೆ ರಾಜ್ಯದ ಯಾವುದೇ ಭಾಗದಲ್ಲಿ ನಿಗದಿಯಾದಂತೆ ಭೂಮಿ ನೀಡಲಾಗುವುದು- ಸಚಿವ ಶಿವಾನಂದ ಪಾಟೀಲ್

0

Karnataka Innerwear Association ರಾಜ್ಯದ ಯಾವುದೇ ಭಾಗದಲ್ಲಿ ಇನ್ನರ್‌ ವೇರ್‌ ಉದ್ಯಮ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ 15ರಿಂದ 20 ಎಕರೆ ಭೂಮಿ ಒದಗಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಕರ್ನಾಟಕ ಇನ್ನರ್‌ವೇರ್‌ ಅಸೋಸಿಯೇಷನ್‌ (ಕೆಐಎ) ಇಲ್ಲಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ಇನ್ನರ್‌ ಸ್ಟೋರಿ ಇನ್ನರ್‌ವೇರ್‌ ಟ್ರೇಡ್‌ ಶೋನ 4ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಐಎ ರಾಜ್ಯದ ಯಾವುದೇ ಪ್ರದೇಶದಲ್ಲಿ ಬಯಸಿದ ಕಡೆ ಭೂಮಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಗಾರ್ಮೆಂಟ್ಸ್‌ ಉದ್ಯಮಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಾಯ ಸಹಕಾರ ನೀಡುತ್ತಿದ್ದು, 3500 ಕೋಟಿ ರೂ. ಸಬ್ಸಿಡಿ ನೀಡಿದೆ. ಸಿದ್ದ ಉಡುಪು ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ದೇಶದ ಒಟ್ಟು ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಪ್ರತಿಶತ 20ರಷ್ಟಿದೆ ಎಂದರು.

ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಕರ್ನಟಕ, ಮಹಾರಾಷ್ಟ್ರ ಕಡೆ ಸ್ಥಳಾಂತರವಾಗುತ್ತಿದ್ದು, ರಾಜ್ಯ ಈ ಪರಿಸ್ಥಿತಿ ಬಳಸಿಕೊಂಡು ಜವಳಿ ಉದ್ಯಮಿಗಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದರು.

ಜವಳಿ ಕ್ಷೇತ್ರ, ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜನೆಗೆ ಉದ್ಯಮಸ್ನೇಹಿ ನೂತನ ಜವಳಿ ನೀತಿ 2025-30 ರೂಪಿಸುವ ಸಿದ್ದತೆ ನಡೆದಿದ್ದು, ಈ ಸಮಿತಿಯಲ್ಲಿ ಕರ್ನಾಟಕ ಇನ್ನರ್‌ವೇರ್‌ ಅಸೋಸಿಯೇಷನ್‌ನ ಪ್ರತಿನಿಧಿಯೊಬ್ಬರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಇನ್ನರ್‌ವೇರ್‌ ಅಸೋಸಿಯೇಷನ್‌ಗೆ ಬೆಂಗಳೂರಿನಲ್ಲಿ ಕಚೇರಿಗೆ ಸ್ಥಳಾವಕಾಶ ಕಲ್ಪಿಸಬೇಕು, ಜವಳಿ ನೀತಿಯಲ್ಲಿ ಅಸೋಸಿಯೇನಷ್‌ ಪ್ರತಿನಿಧಿ ಸೇರ್ಪಡೆ ಮಾಡಬೇಕು ಎಂದು ಪದಾಧಿಕಾರಿಗಳು ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು. ಸೌಥ್‌ ವೆಸ್ಟ್ರನ್‌ ರೈಲ್ವೆ ಝಡ್‌ಆರ್‌ಯುಸಿಸಿ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ಬೆಂಗಳೂರಿನಲ್ಲಿ ಸತತವಾಗಿ ನಾಲ್ಕನೇ ಬಾರಿ ಟ್ರೇಡ್‌ ಶೋ ಆಯೋಜನೆ ಮಾಡಲಾಗುತ್ತಿದ್ದು, ಇದು ಒಂದು ರೀತಿ ಹೂಡಿಕೆದಾರರ ಸಮಾವೇಶವಾಗಿದೆ ಎಂದರು.

Karnataka Innerwear Association ಟೆಸ್ಸೂಟಿ ಇಂಡಸ್ಟ್ರೀಸ್‌ನ ಸಂಸ್ಥಾಪಕ ರಮೇಶ ಕೊಠಾರಿ, ಕೆಇಎ ಅಧ್ಯಕ್ಷ ದಿಲೀಪ್‌ಕುಮಾರ್‌ ಜೈನ್‌, ಉಪಾಧ್ಯಕ್ಷ ಅಶ್ವಿನ್‌ ಸೆಮ್ಲಾನಿ, ಮಹಾವೀರಚಂದ್‌ ಮೆಹ್ತಾ, ಕಾರ್ಯದರ್ಶಿ ರವೀಂದ್ರ ಬಂಬೋಲಿ, ಖಜಾಂಚಿ ಪ್ರಕಾಶ್‌ ಎಚ್‌. ಜೈನ್‌ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಮೂರು ದಿನಗಳ ಕಾಲ ನಡೆಯಲಿರುವ ಟ್ರೇಡ್‌ ಶೋನಲ್ಲಿ ಇನ್ನರ್‌ ವೇರ್‌ ಉತ್ಪಾದಕರು, ಹೋಲ್‌ಸೇಲ್‌ ಮತ್ತು ರೀಟೇಲ್‌ ಮಾರಾಟಗಾರರು ಸೇರಿದಂತೆ ಎರಡು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಇನ್ನರ್‌ವೇರ್‌ ಅಸೋಸಿಯೇಷನ್‌ ತಿಳಿಸಿದೆ.

Ministry of Tribal Affairs ಧರ್ತಿ ಆಬಾಜನ್ ಜಾತೀಯ ಉತ್ಕರ್ಷ ಅಭಿಯಾನಕ್ಕೆ ಮುದ್ದಿನಕೊಪ್ಪ ಗ್ರಾಮ ಪಂಚಾಯತಿಯ ಕೆಲವು ಗ್ರಾಮಗಳ ಆಯ್ಕೆ

0

Ministry of Tribal Affairs ಧರ್ತಿ ಆಬಾ ಜನ್ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರದ ಸಚಿವಾಲಯದ ಧರ್ತಿ ಆಬಾ ಜನ್ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಮದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ವಿರೂಪಿನಕೊಪ್ಪ ಹಾಗೂ ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿಯ ಸದಾಶಿವಪುರ ಗ್ರಾಮಗಳನ್ನು ಗುರುತಿಸಲಾಗಿದೆ.

ಈ ಗ್ರಾಮಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಂಸ್ಟೇ ನಿರ್ಮಿಸಲು ರೂ. 5.00 ಲಕ್ಷ ಹಾಗೂ ನವೀಕರಿಸಲು ರೂ. 3.00 ಲಕ್ಷಗಳ ಸಹಾಯಧನ ನೀಡುವ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಯು ಅನುಷ್ಠಾನಗೊಳಿಸುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

Ministry of Tribal Affairs ಈ ಯೋಜನೆಯನ್ನು ಉಪಯೋಗಿಸಿಕೊಳ್ಳಲು ಆಸಕ್ತರಾಗಿರುವ ಅರ್ಹ ವ್ಯಕ್ತಿ/ ಕುಟುಂಬದವರು ನಿಗಧಿತ ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ, ಮನೆಯ ದಾಖಲೆ, ಮನೆಯ ಪೋಟೋ, ಡಿಕ್ಷರೇಷನ್ ಫಾರಂ, ಗ್ರಾ.ಪಂ. ಎನ್‌ಓಸಿ ದಾಖಲೆಗಳ ಜೇರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಆಗಸ್ಟ್ 11 ರೊಳಗಾಗಿ ಸಲ್ಲಿಸುವಂತ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರೂ ಆಗಿರುವ ಗುರುದತ್ತ ಹೆಗಡೆರವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251444/7026296510 ಗಳನ್ನು ಸಂಪರ್ಕಿಸುವುದು.

Jagdeep Dhankar ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜಿನಾಮೆ!

0

Jagdeep Dhankar ಸಂಸತ್ತಿನ ಮಳೆಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ.
ವಿಪಕ್ಷಗಳ ಚರ್ಚೆ, ವಿವಾದಗಳ ಬಿರುಗಾಳಿಯೊಂದಿಗೆ ಮತ್ತೊಂದು ಸುದ್ದಿ ಸೇರಿದೆ.
ಉಪಾಧ್ಯಕ್ಷ ಜಗದೀಪ್ ಧನ್‌ಕರ್ ಅವರು ಸೋಮವಾರದಂದು ವೈದ್ಯಕೀಯ ಸಲಹೆ ಮತ್ತು ಅವರ ಆರೋಗ್ಯಕ್ಕೆ ಆದ್ಯತೆ ನೀಡುವ ಅಗತ್ಯವನ್ನು ಉಲ್ಲೇಖಿಸಿ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ವಿರೋಧ ಪಕ್ಷಗಳನ್ನು ಸಹ ಅಚ್ಚರಿಗೊಳಿಸಿರುವ ಈ ಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ, “ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಯ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ.”
ಧನ್ ಕರ್ ಅವರು ಆಗಸ್ಟ್ 2022 ರಿಂದ ಭಾರತದ 14 ನೇ ಉಪಾಧ್ಯಕ್ಷರಾಗಿ ಸೇವೆಗೆ ಸೇರ್ಪಡೆಯಾಗಿದ್ದರು.
Jagdeep Dhankar ರಾಜ್ಯಸಭೆಯ ಅಧ್ಯಕ್ಷರಾಗಿ ಶ್ರೀಯುತ ಧನ‌ಕರ್ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ವೈಖರಿ ಮನೋಜ್ಣಷ ಮತ್ತು ಹಿರಿತನ, ಮತ್ತು ಮುತ್ಸದ್ದಿತನಕ್ಕೆ ಹಿಡಿದ ಕನ್ನಡಿಯಾಗಿತ್ತು.
ಸದನದ ಸದಸ್ಯರಿಗೆ ಹೇಳುತ್ತಿದ್ದ ಬುದ್ಧಿಮಾತು, ಹಿತವಚನ ಎಂಥವರ ಮನಸ್ಸನ್ನೂ ಆಕರ್ಷಿಸುವಂತಿತ್ತು.

Dr. Yashoda Kashi ಡಾ.ಯಶೋದಾ ಕಾಶಿ ಸಮಾಜಕ್ಕೆ ನೀಡಿದ ಸೇವೆ ಸ್ಮರಣೀಯ- ಶಂಕರ ಐತಾಳ್

0

Dr. Yashoda Kashi ಸಾಮಾಜಿಕ ಕಾಳಜಿಯುಳ್ಳ ಗೀತಾ ಹೆಚ್ ಎಸ್ ಎನ್ ಪ್ರತಿಷ್ಠಾನವು ಅಮಾಸೆಬೈಲ್ ನಲ್ಲಿನ ಸರ್ಕಾರಿ ಶಾಲೆಗೆ ಎರಡೂವರೆ ಕೋಟಿ ರೂ ನೀಡಿ ಅಭಿವೃದ್ಧಿಪಡಿಸಿದೆ. ಶಾಲೆಗಳಲ್ಲಿ ಕುಡಿಯುವ ನೀರು, ಶಾಲಾಮಕ್ಕಳಿಗೆ ಸಮವಸ್ತ್ರ , ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಟ್ರಸ್ಟಿ ಮಸ್ತಾಕ್ ಅಹಮದ್ ಮೊದಲಿಗೆ ತಿಳಿಸಿದರು.
ಶಂಕರ ಐತಾಳರು, ಅಮಾಸೆ ಬೈಲ್ ಕುಗ್ರಾಮವಾಗಿದೆ. ಅಲ್ಲಿ ದೀಪದ ವ್ಯವಸ್ಥೆಗಾಗಿ ಸೌರ ದೀಪಗಳನ್ನು ಟ್ರಸ್ಟಿನ ವತಿಯಿಂದ ಸ್ಥಾಪಿಸಲಾಗಿದೆ ಎಂದರು.
ಫೌಂಡೇಶನ್ ಸ್ಥಾಪನೆಯಾಗಿ ಏಳು ಸಂವತ್ಸರ ಪೂರೈಸುತ್ತಿದೆ. ಇದರ ಸ್ಮರಣಾರ್ಥವಾಗಿ ಸಮಾಜದ ಏಳು ಮಂದಿ
ಸಾಧಕರಿಗೆ ಮನೆಗೇ ತೆರಳಿ ಪುರಸ್ಕಾರ ನೀಡುವ ” ಸಪ್ತ ಸಂಭ್ರಮ” ಯೋಜನೆ ಆರಂಭಿಸಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ
ಶಿವಮೊಗ್ಗದ ಖ್ಯಾತ ಚರ್ಮರೋಗ ತಜ್ಞೆ ಡಾ.ಯಶೋದಾ ಕಾಶಿ ಅವರಿಗೆ ಮುಖತಃ ಟ್ರಸ್ಟಿನ ವತಿಯಿಂದ ಎಲ್ಲರೂ ಡಾ.ಯಶೊಇದಾ ಅವರ ಸ್ವಗೃಹದಲ್ಲಿ ಸಂಭ್ರಮ ಆಚರಿಸುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಟ್ರಸ್ಟಿನ ಖಜಾಂಚಿ ಶ್ರೀನಿವಾಸ ಅಡಿಗ ಮಾತನಾಡಿ, ದುರ್ಬಲರಿಗೆ ಮನೆ ನಿರ್ಮಿಸಲು,ಮನೆ ರಿಪೇರಿಗೆ, ವಿದ್ಯಾರ್ಥಿಗಳಿಗೆ ಅಧ್ಯಯನ ಮುಂದುವರೆಸಲು ಟ್ರಸ್ಟ್ ನೆರವು ನೀಡುತ್ತಿದೆ ಎಂದು ಏಳು ವರ್ಷಗಳಲ್ಲಿ ಕೈಗೊಂಡ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಸವಿವರ ಮಾಹಿತಿ ನೀಡಿದರು. ಟ್ರಸ್ಟಿನ ಶ್ರೀಧರ ಹೆಗಡೆ ಸನ್ಮಾನ ಪತ್ರ ವಾಚನ ಮಾಡಿದರು.
Dr. Yashoda Kashi ಕೆಲೈವ್ ನ್ಯೂಸ್ ಪೋರ್ಟಲ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ ಅವರು ” ಡಾ. ಯಶೋದಾ ಕಾಶಿ ಅವರು ತಮ್ಮೆಲ್ಲಾ ದೈಹಿಕ ಸಮಸ್ಯೆಗಳನ್ನ ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಯಶ ಸಾಧಿಸಿದ್ದಾರೆ. ಚರ್ಮರೋಗ ವಿಷಯವು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲಾಗದ ಅಂದಿನ ಸಂದರ್ಭದಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಆರಿಸಿಕೊಂಡರು. ತಮ್ಮ ಸೇವಾವಧಿಯಲ್ಲಿ ಕುಷ್ಠರೋಗಿಗಳನ್ನೂ ಉಪಚರಿಸಿರುವುದು ಅವರ ಸೇವಾ ಮನೋಭಾವಕ್ಕೆ ಉದಾಹರಣೆ. ಇಂದು ಶಿವಮೊಗ್ಗ ಪ್ರದೇಶದ ಕೆಲವೇ ಚರ್ಮರೋಗ ಚಿಕಿತ್ಸಾ ಪರಿಣಿತರಲ್ಲಿ ಓರ್ವರಾಗಿ ಹೆಸರು ಪಡೆದಿದ್ದಾರೆ. ಅವರ ಈ ಸಾಧನೆ ಯುಜನರಿಗೆ ಒಂದು ಮಾದರಿ “ಎಂದು ಶ್ಲಾಘಿಸಿದರು.

ಡಾ.ಯಶೋದಾ ಕಾಶಿ ಅವರಿಗೆ ಟ್ರಸ್ಟಿನ ವತಿಯಿಂದ ಸ್ಮರಣಿಕೆ, ಪುಷ್ಪಗುಚ್ಛ, ಸಾಂಪ್ರದಾಯಿಕ ಪೇಟ, ಶಾಲು ಹೊದಿಸಿ ಹಾರ್ದಿಕವಾಗಿ ಸನ್ಮಾನಿಸಲಾಯಿತು. ತಮ್ಮ ಸಾಧನೆ ಏನಿದ್ದರೂ ಅದು ಸಮಾಜಕ್ಕೆ ತೀರಿಸಿದ ಋಣ. ಕುಟುಂಬದವರ ಸಹಕಾರದಿಂದ ಇಷ್ಟೆಲ್ಲ ಸೇವೆ ಸಲ್ಲಿಸುವಂತಾಗಿದೆ ಎಂದು ಕೃತಜ್ಞತೆ ಅರ್ಪಿಸಿದರು.

India Scouts and Guides ರಾಜ್ಯ ಪುರಸ್ಕಾರ ತರಬೇತಿ ಶಿಬಿರ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟ- ಶಕುಂತಲಾ ಚಂದ್ರಶೇಖರ್

0

India Scouts and Guides ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ಮತ್ತು ಸಾಮಾನ್ಯ ಜ್ಞಾನ ವೃದ್ಧಿಸುವ ರಾಜ್ಯ ಪುರಸ್ಕಾರ ತರಬೇತಿ ಶಿಬಿರ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರು ಅಭಿಮತ ವ್ಯಕ್ತಪಡಿಸಿದರು.

ಅವರು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಪರೀಕ್ಷಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು ರಾಜ್ಯ ಸಂಸ್ಥೆಯ ಆದೇಶದ ಮೇರೆಗೆ ಎಲ್ಲಾ ಜಿಲ್ಲೆಗಳಲ್ಲೂ ಸಹ ಈ ರಾಜ್ಯ ಪುರಸ್ಕಾರ ಪೂರ್ವಭಾವಿ ಶಿಬಿರಗಳು ನಡೆಯುತ್ತಿವೆ. ಇದರಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಇನ್ನು ಉನ್ನತವಾದ ರಾಷ್ಟ್ರಪತಿ ಅವಾರ್ಡ. ನಲ್ಲು ಸಹ ಭಾಗವಹಿಸಬಹುದಾಗಿದೆ ಎಂದು ನುಡಿದರು.

ಶಿಬಿರದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ವಿದ್ಯಾಭ್ಯಾಸದಲ್ಲಿ ಇರುವ ವಿಷಯಗಳನ್ನು ಬಿಟ್ಟು ಅವರಲ್ಲಿ ಆತ್ಮವಿಶ್ವಾಸ ಹಾಗೂ ಜೀವನದ ಕಲೆ ಸಂಕಷ್ಟದಲ್ಲಿ ಎದುರಾದಾಗ ವಿವಿಧ ರೀತಿಯ ಬುದ್ಧಿಗೆ ಕಸರತ್ತು ನೀಡುವ ಪರೀಕ್ಷೆಗಳು ಎಲ್ಲವನ್ನು ಈ ಪೂರ್ವಭಾವಿ ಪರೀಕ್ಷಾ ತರಬೇತಿಯಲ್ಲಿ ಕಲಿಸಲಾಗುವುದು ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗಪಡಿಸಿಕೊಂಡು ಮುಂದಿನ ಹಂತಕ್ಕೆ ಹೋದಾಗ ಯಶಸ್ಸು ಸಿಗುತ್ತದೆ ಎಂದು ನುಡಿದರು .

ಶಿಬಿರದ ಮುಖ್ಯಸ್ಥರು ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ರಾಜೇಶ್ ಅವಲಕ್ಕಿ ಅವರು ಶಿಬಿರಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ತರಬೇತಿಗಳನ್ನು ನೀಡಿ ಜೊತೆಗೆ ಸ್ಕೌಟ್ಸ್ ಅಂಡ್ ಗೈಡ್ಸ್ ನಿಯಮಗಳನ್ನು ಹಾಗೂ ಅನೇಕ ತರಹದ ಸ್ಪರ್ಧಾತ್ಮಕ ವಿಷಯಗಳನ್ನು ತಿಳಿಸಿದರು. ಮತ್ತೋರ್ವ ತರಬೇತಿ ಆಯುಕ್ತರಾದ ಶಿವಶಂಕರ ಅವರು ಈ ಪರೀಕ್ಷೆಯಲ್ಲಿ ಅಗತ್ಯವಾಗಿ ಬೇಕಾದ ಮೂಲಭೂತ ವಿಷಯಗಳು ಹಾಗೂ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು. ಹಾಗೂ ರಸ್ತೆ ಸುರಕ್ಷತೆ ಪ್ರಥಮ ಚಿಕಿತ್ಸೆ ಎಂಬುದರ ಬಗ್ಗೆ ಸಮಗ್ರವಾದ ವಿವರವನ್ನು ನೀಡಿದರು.

India Scouts and Guides ವಿವಿಧ ತಾಲೂಕುಗಳಿಂದ ಆಗಮಿಸಿದ ಶಿಬಿರಾರ್ತಿಗಳು. ಆಸಕ್ತಿಯಿಂದ ಭಾಗವಹಿಸಿ ಎಲ್ಲಾ ವಿಷಯಗಳಲ್ಲೂ ತರಬೇತಿ ಪಡೆದರು. ಸ್ಕೌಟ್ ಆಯುಕ್ತರಾದ ಆನಂದ್ ಎಸ್ ಜಿ. ಚುಡಮಣಿ ಈ ಪವಾರ್. ಲಕ್ಷ್ಮಿ ಕೆ ರವಿ. ವೈ ಆರ್ ವೀರೇಶಪ್ಪ. ಮಲ್ಲಿಕಾರ್ಜುನ್ ಕಾನೂರ್. ಎನ್ ಆರ್ ಚಂದ್ರಶೇಖರ್. ಪರಮೇಶ್ವರಯ್ಯ. ಸುಮನ್ ಶೇಖರ್. ರೇಣುಕಾ. ಅಶ್ವಿನಿ. ಜ್ಯೋತಿ. ಪರಿಮಳ. ಅಕ್ಷತಾ. ಡಾಕ್ಟರ್ ಅಶ್ವಿನಿ ಬಿದರಹಳ್ಳಿ ಗಿರಿಜಮ್ಮ. ಕೃಷ್ಣಸ್ವಾಮಿ. ವಿಜಯಲಕ್ಷ್ಮಿ. ಗಿರಿಜಮ್ಮ ಹಾಗೂ ತರಬೇತುದಾರರು ಉಪಸ್ಥಿತರಿದ್ದರು.

Adichunchanagiri Mutt ಟೀವಿ,ಮೊಬೈಲ್ ಗಳಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಅಭಿಪ್ರಾಯ ಬದಲಿಸಬೇಕು- ಶ್ರೀನಾದಮಾಯಾನಂದ ನಾಥಶ್ರೀ

0

Adichunchanagiri Mutt ಹೆಸರೇ ಹೇಳುವಂತೆ ಇದು ಮಾತುಕತೆಯ ವೇದಿಕೆ. ಹರಟೆ ಎಂದರೆ ಹಾಸ್ಯ ಮಾತ್ರವಲ್ಲ ಅದರಲ್ಲಿ ಜೀವನಕ್ಕೆ ಬೇಕಾದ ಸಂದೇಶವು ಇದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠ,ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶರಾವತಿ ನಗರದ ಬಿಜಿಎಸ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಮೂಹ ಮಾಧ್ಯಮಗಳು ಇಂದಿನ ಶೈಕ್ಷಣಿಕ ಪ್ರಗತಿಗೆ ಮಾರಕವೂ, ಪೂರಕವೋ ಎಂಬ ವಿಷಯದ ಬಗ್ಗೆ ಬಿಜಿಎಸ್ ವಸತಿ ಶಾಲೆಯ ಮಕ್ಕಳಿಂದ ಹರಟೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಟಿ.ವಿ., ಮೊಬೈಲ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಆತಂಕ ಬಹುತೇಕ ಹೆತ್ತವರಲ್ಲಿ, ಶಿಕ್ಷಕರಲ್ಲಿದೆ, ಇದನ್ನು ಬಿಟ್ಟು ಅವರು ಸರಿಯಾಗಿ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಟಿ.ವಿ, ರೇಡಿಯೋ ಮೂಲಕ ಪಠ್ಯಗಳ ಬೋಧನೆಯ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸುವಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆದರೆ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸುವುದರೊಂದಿಗೆ ಪರೀಕ್ಷೆ ತಯಾರಿಯಲ್ಲಿ ಸುಲಭವಾಗುವುದು.
ವಿದ್ಯಾರ್ಥಿಗಳು ಯಾವ ಕಾರ್ಯಕ್ರಮಗಳನ್ನು ಕೇಳುವುದು ಹಾಗೂ ನೋಡುವುದರಿಂದ ತಮ್ಮ ವಿಷಯಗಳಿಗೆ ಪೂರಕ, ಮಾರಕ ಎಂಬುದಾಗಿ ಶಿಕ್ಷೆಕರು ಮಾಹಿತಿ ನೀಡಬೇಕು ಎಂದರು.
Adichunchanagiri Mutt ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಕವಿತಾ ಸುಧೀಂದ್ರ ರವರು ಕವನದ ಮೂಲಕ ತಮ್ಮ ಮಾತನ್ನು ಆರಂಭಿಸಿ ವಿದ್ಯಾರ್ಥಿಗಳ ಮಾತಿನ ಶೈಲಿ, ತಂದೆ ತಾಯರಿಗೆ ಕೊಡುವ ಗೌರವ ಇವೆಲ್ಲವನ್ನು ಕಲಿಯುತ್ತಿರುವ ವಸತಿ ಶಾಲೆಯ ಮಕ್ಕಳು ಪುಣ್ಯವಂತರು ಎಂದು ತಿಳಿಸುತ್ತಾ ತಮ್ಮ ಮಾತಿನ ಶೈಲಿಯಿಂದ ಎಲ್ಲರನ್ನು ನಗಿಸುತ್ತ ಎಲ್ಲರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಹಿರಿಯಣ್ಣ ಹೆಗಡೆ, ವಸತಿ ಶಾಲೆಯ ಪ್ರಾಂಶುಪಾಲರಾದ ಗಿರೀಶ್ ಬಿ. ಎನ್, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಸುಜಾತಾ, ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ನಟರಾಜ, ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಮತ್ತು ಪೋಷಕ ವೃಂದದವರು ಉಪಸ್ಥಿತರಿದ್ದರು

Klive Special Article ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಕವಿತೆಗಳನ್ನ ಗುನುಗಿಸುವಂತೆ ಮಾಡಿದ “ಭಾವ ನಮನ”

0

ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್, ಶಿವಮೊಗ್ಗ

Klive Special Article ಕರ್ನಾಟಕ ಸಂಘ ಈಚೆಗೆ ಕೆಲವು ವರ್ಷಗಳಿಂದ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದೆ. ಈ ರೀತಿಯ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಅಂತಹ ಎಷ್ಟೋ ಕಾರ್ಯಕ್ರಮಗಳಲ್ಲಿ ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಗೆ ಹೊಸ ಭಾಷೆ ಬರೆದ ಸಾಹಿತಿಗಳಲ್ಲಿ ಅಗ್ರಗಣ್ಯರಾದ ಕವಿ ಶ್ರೀ ಹೆಚ್ ಎಸ್ ವಿ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಆ ಮಹಾನ್ ಚೇತನವನ್ನು ಸ್ಮರಿಸುವ ಸಲುವಾಗಿ ಆಯೋಜಿಸಿದ ಕಾರ್ಯಕ್ರಮ ಭಾವಾಂಜಲಿಯು ನನ್ನಲ್ಲಿ ಬರೆಯುವ ಭಾವ ಮೂಡಿಸಿತು.

ಕೇವಲ ಭಾವಗೀತೆಯ ಕವಿಯಾಗಿಯೇ ಅಲ್ಲ ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಕವಿ, ಭಾವಗೀತೆಗಳ ಸರದಾರ ಎಂದೇ ಕರೆಸಿಕೊಂಡವರು ಶ್ರೀಯುತ ಹೆಚ್. ಎಸ್ ವೆಂಕಟೇಶ್ ಮೂರ್ತಿಯವರು. ಉತ್ತಮೋತ್ತಮ ಕವಿಯಾಗಿ ಅಷ್ಟೇ ಅಲ್ಲ, ಕಥೆಗಾರರು, ಕಾದಂಬರಿಕಾರರು, ರಂಗಭೂಮಿಯಲ್ಲಿಯೂ ಶ್ರೇಷ್ಠ ಎನಿಸುವಂತಹ ನಾಟಕಗಳನ್ನು ನೀಡಿದವರು. HSV ನಾಡು ಕಂಡಂತಹ ವಿಶೇಷ ಕವಿ. ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಮಹಾನ್ ಸಾಹಿತಿ. ಇವರು ಆನಂದದ ಚಿಲುಮೆ. ಅದರಂತೆ ಇವರ ಸಾಹಿತ್ಯದ ಮೂಲಕ ಭಾವಗೀತೆ ಹಾಗೂ ಸುಗಮ ಸಂಗೀತ ಕ್ಷೇತ್ರಗಳು ಅತ್ಯಂತ ಶ್ರೀಮಂಗೊಂಡಿವೆ. ಆ ಸಮಯದಲ್ಲಿ ಜನ ಇವರನ್ನು ಕ್ಯಾಸೆಟ್ ಕವಿಗಳು ಎಂದು ಕರೆದರೆ ಜೋಗಿಯವರು ಇವರನ್ನು ಅಸೆಟ್ ಕವಿ ಎಂದಿದ್ದಾರೆ. HSV ಯವರು ಅಂದಿನ ಹಾಗೂ ಇಂದಿನ ಪೀಳಿಗೆಯನ್ನು ಕೊಂಡಿಯಂತೆ ಬೆಸೆದವರು.ಇವರ ಸಾಹಿತ್ಯ ಮನಸ್ಸಿಗೆ ಅಷ್ಟೇ ಅಲ್ಲ ಆತ್ಮಕ್ಕೆ ಹೊಂದುವಂತದ್ದು.

Klive Special Article ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ನಾಟಕ, ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ, ಅಂಕಣ ಬರಹ, ಚಲನಚಿತ್ರ, ಭಾವಗೀತೆ, ಶಿಶುಗೀತೆ, ನಟ, ನಿರ್ದೇಶಕ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿ ಕನ್ನಡ ಸಾಹಿತ್ಯ ಲೋಕವನ್ನು ಅಚ್ಚರಿಗೊಳಿಸಿ, ನನ್ನದೇನು ಅಲ್ಲ ಹಿರಿಯರು ಬಿಟ್ಟ ಸ್ಥಳವನ್ನು ನಾನು ತುಂಬಿದೆ ಎನ್ನುವ ನಮ್ರ ಕವಿ. ಅಗ್ನಿವರ್ಣ, ಊರ್ಮಿಳಾ, ಮಂಥರಾ, ಚಿತ್ರಪಟ ಹೀಗೆ ಅನೇಕ ನಾಟಕಗಳನ್ನು ರಚಿಸಿದ ಕವಿಯ, ಅಂತರಾಳ ಅವರು ಸ್ತ್ರೀಯರನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ರೀತಿ, ಕಲಾ ನೈಪುಣ್ಯತೆ, ಅವರು ತಮ್ಮ ಕಾವ್ಯ ಮತ್ತು ಕೃತಿಗಳಲ್ಲಿ ವ್ಯಕ್ತಿಗಳನ್ನು ಪಾತ್ರಗಳನ್ನು ಕಟ್ಟಿಕೊಡುವ ರೀತಿ, ಬರೆದ ಸಾಲಿನಲ್ಲೇ ಮೂಡುವ ವಿಶೇಷತೆ, ಸಾಹಿತ್ಯದ ಅನೇಕ ಬೆರಗಿನ ಮಜಲುಗಳಲ್ಲಿ HSV ಅವರ ಛಾಪು ಮತ್ತು ಅದರ ವೈಶಿಷ್ಟ್ಯ ಈ ಎಲ್ಲವುಗಳನ್ನು ತಾನು ಕೇವಲ ಎ. ಕೆ. ರಾಮಾನುಜನ್ ಅವರ ಕಾವ್ಯವಾದ ಅಂಗುಲದ ಹುಳದಂತೆ ಎಂದು ವಿನಮ್ರವಾಗಿ ಹೇಳುತ್ತಲೇ ತಮ್ಮ ಮಾತುಗಳಲ್ಲಿ ನಮ್ಮೆಲ್ಲರನ್ನು ಮೆಸ್ಮರೈಜ್ ಮಾಡಿದ್ದು ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ವಾಗ್ಝರಿ. ಒಮ್ಮೊಮ್ಮೆ ವಿವರಣೆ ಒಮ್ಮೊಮ್ಮೆ ಹಾಡು ಒಮ್ಮೊಮ್ಮೆ ತಾವೇ ಆ ಪಾತ್ರವೇನೋ ಎನ್ನುವಷ್ಟು ಏಕಾತ್ಮತೆಯಿಂದ ಸಹೃದಯ ಪ್ರೇಕ್ಷಕರಿಗೆ ಅವರ ಬಗ್ಗೆ ಇವರು ಇನ್ನಷ್ಟು ಹೇಳಿದರೂ ಕೇಳಿಬಿಡೋಣ ಎಂದೆನಿಸುವಂತೆ ಹೇಳಿದ್ದಂತೂ ಸತ್ಯ. ಸಮಯ ಕಳೆದದ್ದೇ ಅರಿವಿಗೆ ಬಾರದಂತೆ ನಮ್ಮನ್ನೆಲ್ಲ ಹೆಚ್ಚೆಸ್ವಿಯವರ ಲೋಕಕ್ಕೆ ಕೊಂಡೊಯ್ದು ನಿಜವಾದ ಭಾವಾನಂದದಲಿ ಸಮರ್ಪಿಸಿ ದರೆಂದರೆ ಅದು ಹೆಚ್ಚುಗಾರಿಕೆಯಲ್ಲ.

ಇನ್ನು ನಾದ ನಮನದಲ್ಲಿ ಸದಾ ನಮ್ಮ ಕಿವಿಯಲ್ಲಿ ಅನುರಣಿಸುವ HSV ಅವರ ಗೀತೆಗಳನ್ನು ಅದರ ಸೊಗಸಾದ ವಿವರಣೆಯೊಂದಿಗೆ ನಮ್ಮನ್ನು ಬೇರೊಂದು ಲೋಕದ ಭಾವ ಲಹರಿಗೆ ಕೊಂಡೊಯ್ಯುವಂತೆ ಮಾಡಿದ್ದು ಒಂದು ವಿನಯ್ ಶಿವಮೊಗ್ಗ ಅವರ ಸಾಹಿತ್ಯ ವಾದರೆ ಇನ್ನೊಂದು ಶಿವಮೊಗ್ಗದ ಹೆಮ್ಮೆಯ ಗಾಯಕರಾದ ಶ್ರೀ ಪಾರ್ಥ ಚಿರಂತನ್ ಹಾಗೂ ಕು. ಸಂಜನಾ ಕೆ ರಾವ್ ಹಾಗೂ ಇವರಿಗೆ ಸಾತ್ ನೀಡಿದ ತಬಲಾ, ರಿದಮ್ ಪ್ಯಾಡ್ ಹಾಗು ಕೀಬೋರ್ಡ್ ನ ಎಲ್ಲ ವಾದಕರು ನಮ್ಮನ್ನು ನಾದಲೋಕದಲ್ಲಿ ಕೊಂಡೊಯ್ದು ಬಾವಲೋಕದಲ್ಲಿ ಮಿಂದೇಳುವಂತೆ ಮಾಡಿದವರು. ಎಷ್ಟು ಬಾರಿ ಕೇಳಿದರೂ ಬೇಸರವೇ ಆಗದ ಹೆಚ್ಚೆಸ್ವಿ ಹಾಡುಗಳಾದ ಅಮ್ಮ ನಾನು ದೇವರಾಣೆ, ಲೋಕದ ಕಣ್ಣಿಗೆ ರಾಧೆಯು ಕೂಡ,ಹುಚ್ಚು ಖೋಡಿ ಮನಸ್ಸು, ತೂಗು ಮಂಚದಲ್ಲಿ, ಮ್ಯಾಲೆ ಕವ್ಕೌಕೊಂಡ ಮುಂಗಾರು ಮೋಡ, ಇಷ್ಟು ಕಾಲ ಒಟ್ಟಿಗಿದ್ದು, ಸಂಜೆಯಾಗುತ್ತಿದೆ ನಡೆ ನಡೆ ಗೆಳೆಯ ಅಲ್ಲದೆ ಭಾವಗೀತೆಯಷ್ಟೇ ಪ್ರಸಿದ್ಧಿ ಪಡೆದ ಮುಕ್ತ ಧಾರವಾಹಿಯ ಶೀರ್ಷಿಕೆ ಗೀತೆ ನಮ್ಮೆಲ್ಲರನ್ನ ಭಾವ ಲಹರಿಯಲ್ಲಿ ತೇಲಿಸಿದವು.

ಇನ್ನೊಂದು ವಿಶೇಷ ಅಂದರೆ ಕಾರ್ಯಕ್ರಮದಲ್ಲಿ ಎಚ್ಎಸ್ ವಿ ಕುಟುಂಬ ವರ್ಗ ಉಪಸ್ಥಿತರಿದ್ದು ಅವರ ಮಗನಾದ ಶ್ರೀ ಸುಧೀರ್ ಅವರು ತಮ್ಮ ತಂದೆಯವರೇ ಹೇಳುತ್ತಿದ್ದ ಮಾತಾದ ಸತ್ತವರನ್ನು ಮರೆತರೆ ಮತ್ತೆ ಅವರನ್ನು ಸಾಯಿಸಿದಂತೆ ಎಂದು ಹೇಳಿ 47 ಕಾರ್ಯಕ್ರಮಗಳು ತಮ್ಮ ತಂದೆಯವರ ಸ್ಮರಣೆಯಲ್ಲಿ ಆಗಿದೆ ಎನ್ನುವುದೇ ವಿಶೇಷವಾದ ಸಂಗತಿ ಎಂದರು. ನಾಡಿನ ಉದ್ದಗಲಕ್ಕೂ ಇತ್ತೀಚಿನ ದಿನಗಳಲ್ಲಿ ನುಡಿ ನಮನ ಸಲ್ಲಿಸಿಕೊಂಡ ವಿಶೇಷ ವ್ಯಕ್ತಿ HSV ಎಂದರೆ ಅದು ಅತಿಶೋಕ್ತಿ ಅಲ್ಲ.

ಈ ರೀತಿಯ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮಕ್ಕೆ ನಮ್ಮೆಲ್ಲರನ್ನೂ ಸಾಕ್ಷಿಯಾಗುವಂತೆ ಮಾಡಿದ ಕರ್ನಾಟಕ ಸಂಘದ ಈಗಿನ ಅಧ್ಯಕ್ಷರಾದ ಪ್ರೊ. ಹೆಚ್ ಆರ್ ಶಂಕರನಾರಾಯಣ ಶಾಸ್ತ್ರಿ ಹಾಗೂ ಕಾರ್ಯದರ್ಶಿಗಳಾದ ಶ್ರೀ ವಿನಯ್ ಶಿವಮೊಗ್ಗ ಹಾಗೂ ಅವರ ತಂಡದ ಸರ್ವರಿಗೂ ನಗರದ ಎಲ್ಲ ಜನತೆಯ ಪರವಾಗಿ ಅನಂತಾನಂತ ಧನ್ಯವಾದಗಳು.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು
ಪೇಸ್ ಪಿ ಯು ಕಾಲೇಜು, ಶಿವಮೊಗ್ಗ

MESCOM ಜುಲೈ 23. ಹೊನ್ನವಿಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ಎಂಸಿಎಫ್-17 ಮತ್ತು 18ರ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು. 23 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹೊನ್ನವಿಲೆ, ನವುಲೆಬಸವಾಪುರ, ಅಮರಾವತಿ ಕ್ಯಾಂಪ್, ಹಳೆ ಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಪದ್ಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Kuvempu University ಕುವೆಂಪು ವಿವಿಯ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಅರ್ಜಿ ಆಹ್ವಾನ

0

Kuvempu University ಕುವೆಂಪು ವಿಶ್ವವಿದ್ಯಾಲಯದ 2025-26 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಯುಯುಸಿಎಂಎಸ್ ಪೋರ್ಟಲ್ ಮೂಲಕ ಆಹ್ವಾನಿಸಿದ ಅರ್ಜಿಯ ಅವಧಿಯನ್ನು ವಿಸ್ತರಿಸಲಾಗಿದೆ.

Kuvempu University ಅರ್ಜಿ ಸಲ್ಲಿಸಲು ಆ.8 ಕೊನೆಯ ದಿನಾಂಕವಾಗಿದೆ. ಆ.18 ರಂದು ಮೆರಿಟ್ ಆಧಾರಿತ ಪಟ್ಟಿ ಬಿಡುಗಡೆ ಮಾಡಲಾಗುವುದು. ಆ. 20 ರಂದು ಪ್ರವೇಶಾತಿ ಕೌನ್ಸಿಲಿಂಗ್ ಮತ್ತು ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿ, ಆ.21 ರಂದು ಮೆರಿಟ್ ಕಮ್ ಪೇಮೆಂಟ್ ಹಾಗೂ ಆ.22 ರಂದು ವರ್ಗಾವಣೆ ಗೆ ಕೊನೆಯ ದಿನಾಂಕ ವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಉಪ ಕುಲಸಚಿವರು ತಿಳಿಸಿದ್ದಾರೆ.