Rotary Jubilee Organization ಸ್ನೇಹ ಅತ್ಯಂತ ಪವಿತ್ರವಾಗಿರುವ ಒಂದು ಸಂಕೋಲೆ, ಬಲವಾದ ಸ್ನೇಹ ವ್ಯಕ್ತಿಯಲ್ಲಿ ಲವಲವಿಕೆಯನ್ನು ಮೂಡಿಸುತ್ತದೆ. ಮನೆಯವರಲ್ಲಿ ಹಂಚಿಕೊಳ್ಳದ ಅನೇಕ ವಿಷಯಗಳನ್ನು ನಾವು ಸ್ನೇಹಿತರೊಡನೆ ಹಂಚಿಕೊಳ್ಳುತ್ತೇವೆ ಎಂದು ಸಾಹಿತಿಗಳು ಮತ್ತು ಅಂಕಣಕಾರರಾಗಿರುವ ಎಂ.ಎನ್.ಸುಂದರ ರಾಜ್ ಹೇಳಿದ್ದಾರೆ. ಅವರು ರೋಟರಿ ಜ್ಯುಬಿಲಿ ಸಂಸ್ಥೆಯ ವಾರದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೆಳೆತನದ ರೋಚಕತೆಯ ಬಗ್ಗೆ ಉದಾಹರಣೆ ಸಹಿತವಾಗಿ ವಿವರಿಸಿದರು. ಅವರು ಮಾತನಾಡುತ್ತ ಕೃಷ್ಣ ಕುಚೇಲ ಮತ್ತು ಕರ್ಣ ದುರ್ಯೋಧನ ಇವರ ನಡುವಿನ ಸ್ನೇಹ ಪ್ರಖ್ಯಾತವಾದದ್ದು. ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ದುರ್ಯೋಧನ ಮತ್ತು ಕರ್ಣನ ಸ್ನೇಹದ ಬಗ್ಗೆ ಪ್ರಸ್ತಾಪ ಮಾಡುತ್ತಾ ಭಾರತವನ್ನು ಓದಬೇಕಾದರೆ ನೆನೆಯಬೇಕಾದರೆ ಕರ್ಣನನ್ನು ನೆನೆ ಎಂದು ಹೇಳಿದ್ದಾನೆ ಅದೇ ರೀತಿ ಪವಿತ್ರ ಬಂಧನದ ಗೆಳೆತನಕ್ಕೆ ಬಡವ ಬಲ್ಲಿದ ಮೇಲು-ಕೀಳು ಎಂಬ ಯಾವ ಭಾವನೆಯು ಕಂಡುಬರುವುದಿಲ್ಲ. ಏಕೆಂದರೆ ಸ್ನೇಹ ಅದೆಲ್ಲಕ್ಕಿಂತ ನೀಗಿಲಾದದ್ದು ಗಯಟೆಯ ಒಂದು ಮಾತು ನೀನು ನಿನ್ನ ಸ್ನೇಹಿತನನ್ನು ತೋರಿಸು ನಿನ್ನ ವ್ಯಕ್ತಿತ್ವವನ್ನು ನಾನು ಹೇಳುತ್ತೇನೆ ಎಂಬುದಾಗಿ ಹೇಳಿರುತ್ತಾನೆ. ಇದರಿಂದ ನಾವು ತಿಳಿಯುವುದೇನೆಂದರೆ ಸಜ್ಜನರ ಸಹವಾಸ ಮಾಡುವುದರಿಂದ ನಮ್ಮ ವ್ಯಕ್ತಿತ್ವವು ಬೆಳೆಯುತ್ತದೆ ಅದನ್ನೇ ಸರ್ವಜ್ಞ ಸಜ್ಜನರ ಸಹವಾಸ ಹೆಜ್ಜೆನು ಸವಿದಂತೆ ಎಂದು ಸ್ನೇಹದ ಹಿರಿಮೆಯನ್ನು ಹಾಡಿ ಹೊಗಳಿದ್ದಾನೆ. ಅನೇಕ ನಿದರ್ಶನಗಳು ಸಹ ಸ್ನೇಹದ ಹಿರಿಮೆಯನ್ನು ಕೊಂಡಾಡಿವೆ. ಜಪಾನಿನ ಇಬ್ಬರು ಮಿತ್ರರು 1936ರ ಒಲಂಪಿಕ್ಸ್ ನಲ್ಲಿ ಕ್ರಮವಾಗಿ ರಜತ ಮತ್ತು ಕಂಚಿನ ಪದಕವನ್ನು ಪಡೆದಾಗ ಅವೆರಡನ್ನು ಕತ್ತರಿಸಿ ರಜತ ಪದಕ ಮತ್ತು ಕಂಚಿನ ಪದಕವನ್ನು ಸೇರಿಸಿ ಧರಿಸಿಕೊಂಡು ಅದನ್ನು ಸ್ನೇಹದ ಪದಕ ಎಂದು ಕರೆದರು ಅಂದರೆ ಅವರ ಸ್ನೇಹ ಅಷ್ಟು ಗಾಢವಾಗಿದ್ದು ಯಾರೋ ಒಬ್ಬರು ಮೇಲು ಕೇಳು ಇಲ್ಲ ಎಂಬುದನ್ನು ಅದು ತೋರಿಸಿಕೊಡುತ್ತದೆ. Rotary Jubilee Organization ರೋಟರಿ ಸಂಸ್ಥೆ ಕೊಟ್ಟಿರುವುದೇ ಸ್ನೇಹ ಸಂವರ್ಧನೆಗಾಗಿ. ಇತ್ತೀಚೆಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಒಂದು ಸಮೀಕ್ಷೆಯನ್ನು ನಡೆಸಿತು ಅದರಲ್ಲಿ ನೀವೇಕೆ ರೋಟರಿಯನ್ನು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ ಶೇಕಡ 42ರಷ್ಟು ಜನ ಸದಸ್ಯರು ತಾವು ಸ್ನೇಹ ಸಂಪಾದನೆಗಾಗಿ ರೋಟರಿಯ ಸದಸ್ಯರಾಗಿದ್ದೇವೆ ಎಂಬುದನ್ನು ತಿಳಿಸಿದ್ದಾರ. ಹೀಗಾಗಿ ರೋಟರಿ ಸಂಸ್ಥೆಯು ಸ್ನೇಹಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಅನೇಕ ಉದ್ಯೋಗವನ್ನು ಹೊಂದಿರುವ ಸದಸ್ಯರು ಒಟ್ಟಾಗಿ ಸೇರಿ ತಮ್ಮ ಸ್ನೇಹ ಭಾಂದವ್ಯವನ್ನು ಬೆಳೆಸಿಕೊಳ್ಳುವ ಒಂದು ವೇದಿಕೆ ಈ ರೋಟರಿ ಸಂಸ್ಥೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯರು ತಮ್ಮ ಆತ್ಮೀಯ ಗೆಳೆಯನೊಬ್ಬನನ್ನು ವರ್ಷದಲ್ಲಿ ಒಮ್ಮೆ ರೋಟರಿ ಸದಸ್ಯನನ್ನಾಗಿ ಮಾಡಿದಲ್ಲಿ ರೋಟರಿಯು ಬೆಳೆಯುತ್ತದೆ ಸ್ನೇಹವೂ ವೃದ್ಧಿಯಾಗುತ್ತದೆ ಇದೇ ಸಂದರ್ಭದಲ್ಲಿ ವರಕವಿ ಬೇಂದ್ರೆಯವರ ಕುರಿತಾಗಿಯೂ ಸಹ ಮಾತನಾಡ ಮಾತನಾಡಿ ಬೇಂದ್ರೆ ಬಡತನದಲ್ಲಿ ಬೆಂದರೂ ಸಹ ತಮಗೆ ಬಡತನದ ಗರ್ವ ಇದೆ ಎಂದು ಹೇಳಿಕೊಳ್ಳುತ್ತಿದ್ದರು. ಅಪ್ರತಿಮ ರಾಷ್ಟ್ರ ಪ್ರೇಮಿಗಳಾಗಿದ್ದ ಬೇಂದ್ರೆಯವರು ಬ್ರಿಟಿಷರ ವಿರುದ್ಧ ಕವನವನ್ನು ರಚಿಸಿ ಜೈಲು ಶಿಕ್ಷೆ ಅನುಭವಿಸಿದರು ಸಹ ತಮ್ಮತನವನ್ನು ಬಿಡದ ಒಬ್ಬ ಮಹಾನ್ ಕವಿ ಎಂದು ತಿಳಿಸಿ ಬೇಂದ್ರೆಯವರ ಜೀವನದ ಕೆಲವು ಘಟನೆಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಿದರು. ರೋಟರಿ ಅಧ್ಯಕ್ಷ ಬಿಎಸ್ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ರೇವಣಸಿದ್ದಪ್ಪ ಸ್ವಾಗತಿಸಿ ಕೊನೆಗೆ ವಂದಿಸಿದರು ಈ ಕಾರ್ಯಕ್ರಮ ಅಂತರರಾಷ್ಟ್ರೀಯ ಸ್ನೇಹದ ದಿನಾಚರಣೆ ಅಂಗವಾಗಿ ರೋಟರಿ ಜ್ಯುಬಿಲಿ ಆಯೋಜಿಸಿದ ಕಾರ್ಯಕ್ರಮವಾಗಿದ್ದು
ಸ್ನೇಹ ಅತ್ಯಂತ ಪವಿತ್ರವಾಗಿರುವ ಒಂದು ಸಂಕೋಲೆ, ಬಲವಾದ ಸ್ನೇಹ ವ್ಯಕ್ತಿಯಲ್ಲಿ ಲವಲವಿಕೆಯನ್ನು ಮೂಡಿಸುತ್ತದೆ. ಮನೆಯವರಲ್ಲಿ ಹಂಚಿಕೊಳ್ಳದ ಅನೇಕ ವಿಷಯಗಳನ್ನು ನಾವು ಸ್ನೇಹಿತರೊಡನೆ ಹಂಚಿಕೊಳ್ಳುತ್ತೇವೆ ಎಂದು ಸಾಹಿತಿಗಳು ಮತ್ತು ಅಂಕಣಕಾರರಾಗಿರುವ ಎಂ.ಎನ್.ಸುಂದರ ರಾಜ್ ಹೇಳಿದ್ದಾರೆ. ಅವರು ರೋಟರಿ ಜ್ಯುಬಿಲಿ ಸಂಸ್ಥೆಯ ವಾರದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೆಳೆತನದ ರೋಚಕತೆಯ ಬಗ್ಗೆ ಉದಾಹರಣೆ ಸಹಿತವಾಗಿ ವಿವರಿಸಿದರು. ಅವರು ಮಾತನಾಡುತ್ತ ಕೃಷ್ಣ ಕುಚೇಲ ಮತ್ತು ಕರ್ಣ ದುರ್ಯೋಧನ ಇವರ ನಡುವಿನ ಸ್ನೇಹ ಪ್ರಖ್ಯಾತವಾದದ್ದು. ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ದುರ್ಯೋಧನ ಮತ್ತು ಕರ್ಣನ ಸ್ನೇಹದ ಬಗ್ಗೆ ಪ್ರಸ್ತಾಪ ಮಾಡುತ್ತಾ ಭಾರತವನ್ನು ಓದಬೇಕಾದರೆ ನೆನೆಯಬೇಕಾದರೆ ಕರ್ಣನನ್ನು ನೆನೆ ಎಂದು ಹೇಳಿದ್ದಾನೆ. ಅದೇ ರೀತಿ ಪವಿತ್ರ ಬಂಧನದ ಗೆಳೆತನಕ್ಕೆ ಬಡವ ಬಲ್ಲಿದ ಮೇಲು-ಕೀಳು ಎಂಬ ಯಾವ ಭಾವನೆಯು ಕಂಡುಬರುವುದಿಲ್ಲ. ಏಕೆಂದರೆ ಸ್ನೇಹ ಅದೆಲ್ಲಕ್ಕಿಂತ ನೀಗಿಲಾದದ್ದು ಗಯಟೆಯ ಒಂದು ಮಾತು ನೀನು ನಿನ್ನ ಸ್ನೇಹಿತನನ್ನು ತೋರಿಸು ನಿನ್ನ ವ್ಯಕ್ತಿತ್ವವನ್ನು ನಾನು ಹೇಳುತ್ತೇನೆ ಎಂಬುದಾಗಿ ಹೇಳಿರುತ್ತಾನೆ. ಇದರಿಂದ ನಾವು ತಿಳಿಯುವುದೇನೆಂದರೆ ಸಜ್ಜನರ ಸಹವಾಸ ಮಾಡುವುದರಿಂದ ನಮ್ಮ ವ್ಯಕ್ತಿತ್ವವು ಬೆಳೆಯುತ್ತದೆ ಅದನ್ನೇ ಸರ್ವಜ್ಞ ಸಜ್ಜನರ ಸಹವಾಸ ಹೆಜ್ಜೆನು ಸವಿದಂತೆ ಎಂದು ಸ್ನೇಹದ ಹಿರಿಮೆಯನ್ನು ಹಾಡಿ ಹೊಗಳಿದ್ದಾನೆ. ಅನೇಕ ನಿದರ್ಶನಗಳು ಸಹ ಸ್ನೇಹದ ಹಿರಿಮೆಯನ್ನು ಕೊಂಡಾಡಿವೆ. ಜಪಾನಿನ ಇಬ್ಬರು ಮಿತ್ರರು 1936ರ ಒಲಂಪಿಕ್ಸ್ ನಲ್ಲಿ ಕ್ರಮವಾಗಿ ರಜತ ಮತ್ತು ಕಂಚಿನ ಪದಕವನ್ನು ಪಡೆದಾಗ ಅವೆರಡನ್ನು ಕತ್ತರಿಸಿ ರಜತ ಪದಕ ಮತ್ತು ಕಂಚಿನ ಪದಕವನ್ನು ಸೇರಿಸಿ ಧರಿಸಿಕೊಂಡು ಅದನ್ನು ಸ್ನೇಹದ ಪದಕ ಎಂದು ಕರೆದರು ಅಂದರೆ ಅವರ ಸ್ನೇಹ ಅಷ್ಟು ಗಾಢವಾಗಿದ್ದು ಯಾರೋ ಒಬ್ಬರು ಮೇಲು ಕೇಳು ಇಲ್ಲ ಎಂಬುದನ್ನು ಅದು ತೋರಿಸಿಕೊಡುತ್ತದೆ. ರೋಟರಿ ಸಂಸ್ಥೆ ಕೊಟ್ಟಿರುವುದೇ ಸ್ನೇಹ ಸಂವರ್ಧನೆಗಾಗಿ. ಇತ್ತೀಚೆಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಒಂದು ಸಮೀಕ್ಷೆಯನ್ನು ನಡೆಸಿತು ಅದರಲ್ಲಿ ನೀವೇಕೆ ರೋಟರಿಯನ್ನು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ ಶೇಕಡ 42ರಷ್ಟು ಜನ ಸದಸ್ಯರು ತಾವು ಸ್ನೇಹ ಸಂಪಾದನೆಗಾಗಿ ರೋಟರಿಯ ಸದಸ್ಯರಾಗಿದ್ದೇವೆ ಎಂಬುದನ್ನು ತಿಳಿಸಿದ್ದಾರ. ಹೀಗಾಗಿ ರೋಟರಿ ಸಂಸ್ಥೆಯು ಸ್ನೇಹಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಅನೇಕ ಉದ್ಯೋಗವನ್ನು ಹೊಂದಿರುವ ಸದಸ್ಯರು ಒಟ್ಟಾಗಿ ಸೇರಿ ತಮ್ಮ ಸ್ನೇಹ ಭಾಂದವ್ಯವನ್ನು ಬೆಳೆಸಿಕೊಳ್ಳುವ ಒಂದು ವೇದಿಕೆ ಈ ರೋಟರಿ ಸಂಸ್ಥೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯರು ತಮ್ಮ ಆತ್ಮೀಯ ಗೆಳೆಯನೊಬ್ಬನನ್ನು ವರ್ಷದಲ್ಲಿ ಒಮ್ಮೆ ರೋಟರಿ ಸದಸ್ಯನನ್ನಾಗಿ ಮಾಡಿದಲ್ಲಿ ರೋಟರಿಯು ಬೆಳೆಯುತ್ತದೆ ಸ್ನೇಹವೂ ವೃದ್ಧಿಯಾಗುತ್ತದೆ. ಇದೇ ಸಂದರ್ಭದಲ್ಲಿ ವರಕವಿ ಬೇಂದ್ರೆಯವರ ಕುರಿತಾಗಿಯೂ ಸಹ ಮಾತನಾಡ ಮಾತನಾಡಿ ಬೇಂದ್ರೆ ಬಡತನದಲ್ಲಿ ಬೆಂದರೂ ಸಹ ತಮಗೆ ಬಡತನದ ಗರ್ವ ಇದೆ ಎಂದು ಹೇಳಿಕೊಳ್ಳುತ್ತಿದ್ದರು. ಅಪ್ರತಿಮ ರಾಷ್ಟ್ರ ಪ್ರೇಮಿಗಳಾಗಿದ್ದ ಬೇಂದ್ರೆಯವರು ಬ್ರಿಟಿಷರ ವಿರುದ್ಧ ಕವನವನ್ನು ರಚಿಸಿ ಜೈಲು ಶಿಕ್ಷೆ ಅನುಭವಿಸಿದರು. ಸಹ ತಮ್ಮತನವನ್ನು ಬಿಡದ ಒಬ್ಬ ಮಹಾನ್ ಕವಿ ಎಂದು ತಿಳಿಸಿ ಬೇಂದ್ರೆಯವರ ಜೀವನದ ಕೆಲವು ಘಟನೆಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಿದರು. ರೋಟರಿ ಅಧ್ಯಕ್ಷ ಬಿಎಸ್ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ರೇವಣಸಿದ್ದಪ್ಪ ಸ್ವಾಗತಿಸಿ ಕೊನೆಗೆ ಹೊಂದಿಸಿದರು ಈ ಕಾರ್ಯಕ್ರಮ ಅಂತರರಾಷ್ಟ್ರೀಯ ಸ್ನೇಹದ ದಿನಾಚರಣೆ ಅಂಗವಾಗಿ ರೋಟರಿ ಜುಗಲಿ ಆಯೋಜಿಸಿದ ಕಾರ್ಯಕ್ರಮವಾಗಿದ್ದು ಭಾರದ್ವಾಜ್, ಲಕ್ಷ್ಮೀನಾರಾಯಣ್, ವೆಂಕಟೇಶ್ ನಾಯಕ್, ನಾಗರಾಜ್, ವಾಗೇಶ್ ಮುಂತಾದವರು ಇದ್ದರು.
Rotary Jubilee Organization ಗೆಳೆತನಕ್ಕೆ ಬಡವ-ಬಲ್ಲಿದ, ಮೇಲು- ಕೀಳು ಭಾವನೆಗಳು ಅಡ್ಡಬಾರವು- ಎಂ.ಎನ್. ಸುಂದರ ರಾಜ್
Keladi Shivappa Nayaka University ಶಿವಪ್ಪನಾಯಕ ಕೃಷಿ ವಿವಿ ಯಿಂದ ಉತ್ತಮ ರೈತ/ ರೈತಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
Keladi Shivappa Nayaka University ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಪ್ರತಿ ವರ್ಷದಂತೆ ಈ ವರ್ಷವೂ ಪ್ರಗತಿಪರ ರೈತ/ರೈತ ಮಹಿಳೆ ಪ್ರಶಸ್ತಿಯನ್ನು ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ನೀಡಿ ಸನ್ಮಾನಿಸಲು ತೀರ್ಮಾನಿಸಲಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಏಳು ಜಿಲ್ಲೆಗಳಾದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಪ್ರಗತಿ ಪರ ರೈತ/ರೈತ ಮಹಿಳೆಯರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಿದ ರೈತ/ರೈತ ಮಹಿಳೆಯರಲ್ಲಿ ಪ್ರತಿ ಜಿಲ್ಲೆಯಿಂದ ಒಬ್ಬ ರೈತ ಮತ್ತು ಒಬ್ಬ ರೈತ ಮಹಿಳೆಯನ್ನು ಆಯ್ಕೆ ಮಾಡಿ, ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು, ಈ ಪ್ರಶಸ್ತಿಯನ್ನು ಅಕ್ಟೋಬರ್-2025 ರಲ್ಲಿ ಜರುಗುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಪ್ರಧಾನ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಯಶಸ್ವಿ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ಕೃಷಿ ವಿಜ್ಞಾನ ಕೇಂದ್ರಗಳು ಅಥವಾ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ಅರ್ಜಿ ಪಡೆಯಬಹುದು ಅಥವಾ https://www.uahs.edu.in/ ನಲ್ಲಿ ಲಭ್ಯವಿರುವ ಅರ್ಜಿ ತೆಗೆದುಕೊಂಡು ಭರ್ತಿ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 15ನೇ ಸೆಪ್ಟೆಂಬರ್ 2025 ರ ಒಳಗೆ ತಲುಪುವಂತೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.
Keladi Shivappa Nayaka University ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಜಂಟಿ ನಿರ್ದೇಶಕರು ಅಥವಾ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರುಗಳು, ಕೃಷಿ ವಿಜ್ಞಾನ ಕೇಂದ್ರ ಇವರನ್ನು ಸಂಪರ್ಕಿಸಬೇಕಾದ ಸಂಖ್ಯೆಗಳು: ಶಿವಮೊಗ್ಗ- 9480838976, 8277932600, ದಾವಣಗೆರೆ-9480838209, ಚಿಕ್ಕಮಗಳೂರು- 9480838203, 8277930890,
ಉಡುಪಿ-9480838202, 8277932500, ಚಿತ್ರದುರ್ಗ-9480838201, ದಕ್ಷಿಣ ಕನ್ನಡ- 8794706468, 8277931060, ಮಡಿಕೇರಿ- 9480838210, 7259005540
Santosh S. Lad ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಕಲ್ಪಿಸುವ ಅನೇಕ ಯೋಜನೆಗಳು ಅನುಷ್ಟಾನವಾಗಿವೆ- ಸಂತೋಷ್ ಲಾಡ್
Santosh S. Lad ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಹಿನ್ನೆಲೆಯಲ್ಲಿ ಸರ್ಕಾರವು ಈಗಾಗಲೇ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು, ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ಎಸ್.ಲಾಡ್ ಅವರು ಹೇಳಿದರು. ಅವರು ಭದ್ರಾವತಿ ನಗರದ ಹೊರವಲಯದಲ್ಲಿರುವ ಉಜ್ಜನಿಪುರದಲ್ಲಿ ಕರ್ನಾಟಕ ಕಾರ್ಮಿಕ ಮಂಡಳಿ ವತಿಯಿಂದ ನಿರ್ಮಿಸಲಾದ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಆಡಳಿತಾರೂಢ ಘನ ಸರ್ಕಾರವು ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38ವರ್ಗಗಳು ಹಾಗೂ ಹಿಂದುಳಿದ ವರ್ಗ ಮತ್ತಿತರ ವರ್ಗಗಳ ಕುಲಕಸುಬಿನಲ್ಲಿ ತೊಡಗಿರುವ ಕಾರ್ಮಿಕರು ಸೇರಿದಂತೆ ಒಟ್ಟು 91ವರ್ಗಗಳ ಕಾರ್ಮಿಕರನ್ನು ನೋಂದಾಯಿಸಿಕೊಂಡು ಹಲವು ವಿಶೇಷ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ಕಾರ್ಡ್ನೀಡಲಾಗುತ್ತಿದೆ ಎಂದರು. ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಕಾರ್ಮಿಕರ ಆಕಸ್ಮಿಕ ಮರಣ ಹೊಂದಿದ್ದಲ್ಲಿ ಅವರ ನಾಮನಿರ್ದೇಶಿತರಿಗೆ 1ಲಕ್ಷ ರೂ.ಗಳ ಪರಿಹಾರಧ ನೀಡಲಾಗುತ್ತಿದೆ. ಕಾರ್ಮಿಕರ ಸಹಜ ಮರಣ ಹೊಂದಿದ್ದಲ್ಲಿ ಪರಿಹಾರ ಮತ್ತು ಅಂತ್ಯಕ್ರಿಯೆಗಾಗಿ 10,000/-ರೂ.ಗಳ ಸಹಾಯಧನ ನೀಡಲಾಗುತ್ತಿದೆ ಎಂದ ಅವರು, ಇಂತಹ ಅನೇಕ ಸೌಲಭ್ಯಗಳಿಗಾಗಿ ಹೆಚ್ಚು ಸಂಖ್ಯೆಯ ಕಾರ್ಮಿಕರು ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಖಾಸಗಿ ಮತ್ತು ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ 40ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮಾಹಿತಿ ಇದ್ದು, ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಕ್ಷೇಮಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ. ಈ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡ ಫಲಾನುಭವಿಗಳಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಅಲ್ಲದೆ ಅವರ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಹಂತಹಂತವಾಗಿ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಅಲ್ಲದೇ ಫಲಾನುಭವಿಗೆ ಹೆರಿಗೆ ಭತ್ಯೆಯೂ ಸಹ ದೊರೆಯಲಿದೆ ಎಂದರು. ಕಾರ್ಮಿಕ ಇಲಾಖೆಯು ಖಾಸಗಿ ವಲಯದ ಉದ್ಯೋಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟರನ್ನು ನೇಮಿಸಿಕೊಳ್ಳಲು ಮಾಲೀಕರು ಅಥವಾ ಉದ್ಯೋಗದಾತರನ್ನು ಉತ್ತೇಜಿಸಲು ಮಹತ್ವಾಕಾಂಕ್ಷಿ ಆಶಾದೀಪ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಯಡಿ ಕಾರ್ಮಿಕರಿಗೆ ಮಾಲೀಕರು ಪಾವತಿಸುವ ವೇತನದಲ್ಲಿ ಶೇ.50ರಷ್ಟು ಮೊತ್ತವನ್ನು, ಮಾಸಿಕವಾಗಿ ರೂ.7000/- ಮಿತಿಯೊಳಗೆ ಎರಡು ವರ್ಷಗಳ ಅವಧಿಗೆ ಸರ್ಕಾರದ ವತಿಯಿಂದ ನೀಡಲಾಗುವುದು ಎಂದವರು ನುಡಿದರು.
Santosh S. Lad ದೇಶದಲ್ಲಿಯೇ ಮೊದಲ ಬಾರಿಗೆ ಸರಕಾರವು ರಾಜ್ಯದಲ್ಲಿನ ಕಾರ್ಮಿಕರಿಗಾಗಿ ವಿಶಿಷ್ಟವಾದ ಗಿಗ್ವಿಮಾ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಫುಡ್ಡಿಲವರಿ ಮಾಡುವ ಹಾಗೂ ಎಲ್ಲಾ ವಲಯಗಳ ಅಸಂಘಟಿತ ಕಾರ್ಮಿಕರು ಮರಣ ಹೊಂದಿದ್ದಲ್ಲಿ ರೂ.4.00ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ. ಅಲ್ಲದೇ ದಿನಪತ್ರಿಕೆ ವಿತರಣೆ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಅವರ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಆರ್ಥಿಕ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದ ಅವರು, ಡಿಲೆವರಿ ಬಾಯ್ಸ್ಮತ್ತು ಪತ್ರಿಕೆ ಹಾಕುವ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ಧರಿಸುವಂತೆ ಹಾಗೂ ಸಾರಿಗೆ ನಿಯಮಗಳನ್ನು ಪಾಲಿಸುವಂತೆಯೂ ಅವರು ಕರೆನೀಡಿದ ಅವರು, ಸಿನಿಮಾ ಕ್ಷೇತ್ರದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಹಾಗೂ ಸಾರಿಗೆ ವಲಯಗಳಲ್ಲಿ ಕಾರ್ಯನಿರ್ವಹಿಸುವವರಿಗಾಗಿಯೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ ಎಂದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ತರಬೇತಿ ನೀಡುವುದಲ್ಲದೇ ವಿಶ್ವಮಾನ್ಯ ಪ್ರಮಾಣಪತ್ರ ನೀಡಲು ಉದ್ದೇಶಿಸಲಾಗಿದೆ. ಜನಪ್ರಿಯ ಹಾಗೂ ಜನಸಾಮಾನ್ಯರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಅಸಂಖ್ಯಾತ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಸಿಂಹಪಾಲು ಕರ್ನಾಟಕ ಸರ್ಕಾರದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ. ಸಂಗಮೇಶ್ಅವರು ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಇ.ಎಸ್.ಐ.ಸೌಲಭ್ಯ, ಕೌಶಲ್ಯ ಕಿಟ್ಗಳಲ್ಲಿ ಆಧುನಿಕ ಹಾಗೂ ಗುಣಮಟ್ಟದ ಯಂತ್ರೋಪಕರಣಗಳನ್ನು ನೀಡುವುದು, ಅಪಘಾತ ವಿಮೆ, ವಿದ್ಯಾರ್ಥಿವೇತನ, ನಿವೇಶನ, ವಸತಿ ದುರಸ್ತಿಗೆ ಸಹಾಯಧನ, ಶವಸಂಸ್ಕಾರ ವೆಚ್ಚ, ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು, ಉಚಿತ ಬಸ್ಪಾಸ್, ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳ ಚೆಕ್ಕನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ., ರಾಜ್ಯ ಬೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ಜೆ.ಸಿ.ಗೀತಾರಾಜ್ಕುಮಾರ್, ಕಾರ್ಮಿಕ ಆಯುಕ್ತ ಡಾ|| ಗೋಪಾಲಕೃಷ್ಣ, ಸಿ.ಇ.ಓ. ಶ್ರೀಮತಿ ಭಾರತಿ ಡಿ., ಜಿ.ಪಂ. ಸಿ.ಇ.ಓ. ಹೇಮಂತ್ಎನ್., ಜಂಟಿ ಕಾರ್ಮಿಕ ಆಯುಕ್ತ ಡಾ|| ಎಸ್.ಬಿ.ರವಿಕುಮಾರ್, ಕಲ್ಯಾಣ ಆಯುಕ್ತ ಆಂಜನೇಯ ಟಿ., ಉಪಕಾರ್ಮಿಕ ಆಯುಕ್ತ ಹೆಚ್.ಎಲ್.ಗುರುಪ್ರಸಾದ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವೇಣುಗೋಪಾಲ್ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
Department of Post ಶಿವಮೊಗ್ಗದಲ್ಲಿ ಆಗಸ್ಟ್ 8 ರಂದು ” ಡಾಕ್ ಅದಾಲತ್”
Department of Post ಶಿವಮೊಗ್ಗ ಅಂಚೆ ವಿಭಾಗದ ತ್ರೈಮಾಸಿಕ ‘ಡಾಕ್ ಅದಾಲತ್’ ಕಾರ್ಯಕ್ರಮವನ್ನು ದಿ: 08-08-2025 ರ ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಚೇರಿ, ಶಿವಮೊಗ್ಗ ಅಂಚೆ ವಿಭಾಗ, ಕೋಟೆ ರಸ್ತೆ, ಶಿವಮೊಗ್ಗ ಇಲ್ಲಿ ಹಮ್ಮಿಕೊಳ್ಳಲಾಗಿದೆ.
Department of Post ಸಾರ್ವಜನಿಕರು ಅಂಚೆ ಇಲಾಖೆಯ ಕುರಿತು ಯಾವುದೇ ರೀತಿಯ ಕುಂದು ಕೊರತೆಗಳು ಅಥವಾ ಸಲಹೆಗಳು ಇದ್ದಲ್ಲಿ ಈ ವಿಳಾಸಕ್ಕೆ ಆ. 07 ರ ಒಳಗೆ ಕಳುಹಿಸಿಕೊಡಬೇಕೆಂದು ಹಾಗೂ ಡಾಕ್ ಅದಾಲತ್ನಲ್ಲಿ ಭಾಗವಹಿಸಬೇಕೆಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಜಿ.ರವರು ತಿಳಿಸಿದ್ದಾರೆ.
kannada university ಶ್ರೀಮತಿ ರೋಜಾ ಚೇತನ್ ಅವರಿಗೆ ಹಂಪಿ ವಿವಿ ಪಿಎಚ್ ಡಿ ಪದವಿ
kannada university ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾ. ಹಿರೇಜಂಬೂರ ನಿವಾಸಿ ನಂದಿಹಳ್ಳಿ ಆನಂದಪ್ಪರವರ ಪುತ್ರಿ ಶ್ರೀಮತಿ ಎ ರೋಜಾ ಚೇತನ್ ಇವರು “ಕನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಮಹಿಳಾ ಪ್ರಶ್ನೆಗಳು” (21ನೇ ಶತಮಾನವನ್ನು ಅನುಲಕ್ಷಿಸಿ ) ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಕನ್ನಡ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.
ಇವರಿಗೆ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಎ ಬಿ ಉಮೇಶ್ ಇವರು ಮಾರ್ಗದರ್ಶನ ನೀಡಿರುತ್ತಾರೆ.
S.N. Channabasappa ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಯೋಜನೆ ಒಂದು ನಂಬಿಕೆದಾಯಕ ಹೆಜ್ಜೆ- ಶಾಸಕ ಚನ್ನಬಸಪ್ಪ
S.N. Channabasappa ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಇಂದು ಶಿವಮೊಗ್ಗದ ಲಗಾನ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯ’ ಭವನದ ಲೋಕಾರ್ಪಣೆ ಹಾಗೂ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ ಮತ್ತು ಅರಿವು ಜಾಗೃತಿಯ ಸಭೆಯಲ್ಲಿ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿ, ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, “ಕಾರ್ಮಿಕರು ನಮ್ಮ ಸಮಾಜದ ಆಧಾರ ಶಕ್ತಿಯಾಗಿದ್ದಾರೆ. ಅವರ ಬದುಕು ಸುಧಾರಿಸಲು ಹಲವು ಜವಾಬ್ದಾರಿತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇಂದಿನ ವಸತಿ ಯೋಜನೆಯು ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸಲು ನಂಬಿಕೆಯದಾಯಕ ಹೆಜ್ಜೆಯಾಗಲಿದೆ” ಎಂಬ ಆಶಯ ವ್ಯಕ್ತಪಡಿಸಿದರು.
S.N. Channabasappa ಈ ಸಂದರ್ಭದಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್, ಸಂಸದರಾದ ಬಿ ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿಎಸ್ ಅರುಣ್, ಡಾ. ಧನಂಜಯ್ ಸರ್ಜಿ, ಶಿವಮೊಗ್ಗ ಗ್ರಾಮಾಂತರ ಶಾಸಕಿಯಾದ ಶ್ರೀಮತಿ.ಶಾರದಾ ಪೂರ್ಯ ನಾಯಕ್, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಶ್ರೀಮತಿ ಪಲ್ಲವಿ ಜಿ. ಜಿಲ್ಲಾ ಆಡಳಿತದ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.
Sahyadri Narayana Multispeciality Hospital ಅವಧಿಗೆ ಮುನ್ನ ಜನಿಸಿದ ‘ಅವಳಿ ಮಕ್ಕಳ ‘ಜೀವವುಳಿಸಿದ ‘ಎನ್ ಹೆಚ್ ಆಸ್ಪತ್ರೆ’ ತಜ್ಞವೈದ್ಯರ ತಂಡ
Sahyadri Narayana Multispeciality Hospital ಮಧ್ಯ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಹೆಸರಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು, ಕೇವಲ 27 ವಾರಗಳ ಗರ್ಭಾವಸ್ಥೆಯಲ್ಲಿ, ತಲಾ 900 ಗ್ರಾಂ ಗಿಂತ ಕಡಿಮೆ ತೂಕವಿದ್ದ ಅವಧಿಗೆ ಮುಂಚಿತವಾಗಿ ಜನಿಸಿದ ಅವಳಿ ಶಿಶುಗಳ ಜೀವವನ್ನು ಯಶಸ್ವಿಯಾಗಿ ಉಳಿಸಿದ್ದಾರೆ.
ಒಂದು ಮಗು 800 ಗ್ರಾಂ ಮತ್ತು ಇನ್ನೊಂದು ಮಗು 850 ಗ್ರಾಂ ತೂಕವಿದ್ದು, 10 ವರ್ಷಗಳಿಗೂ ಹೆಚ್ಚು ಕಾಲ ಬಂಜೆತನದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಈ ಅವಳಿ ಮಕ್ಕಳು ಜನಿಸಿದರು. ಮೂರು ವರ್ಷಗಳ ಬಂಜೆತನ ಚಿಕಿತ್ಸೆಯ ನಂತರ, ಅವರು ಗರ್ಭ ಧರಿಸಿದ್ದರು.
ಆದರೆ, ಹೆರಿಗೆ ಪ್ರಾರಂಭವಾಗುವ ಮೊದಲೇ ಭ್ರೂಣವನ್ನು ಆವರಿಸಿರುವ ಪೊರೆಗಳು ಒಡೆದು, ಆಮ್ನಿಯೋಟಿಕ್ ದ್ರಾವಣ ಸೋರಿಕೆಯಾದ ಕಾರಣ, ಅವರಿಗೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಹೆರಿಗೆ ಮಾಡಿಸಬೇಕಾಯಿತು.
ಸ್ತ್ರೀರೋಗ ತಜ್ಞರಾದ ಡಾ. ರಾಘವೇಂದ್ರ ಭಟ್ ಅವರು ಈ ಹೆಚ್ಚು ಅಪಾಯಕಾರಿ ಗರ್ಭಧಾರಣೆಯನ್ನು (High risk pregnancy) ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿದರು. ಭ್ರೂಣದ ಶ್ವಾಸಕೋಶದ ಬೆಳವಣಿಗೆಗೆ ಸಹಾಯ ಮಾಡಲು ತಾಯಿಗೆ ಸಮಯಕ್ಕೆ ಸರಿಯಾಗಿ ಸ್ಟೀರಾಯ್ಡ್ ಚುಚ್ಚುಮದ್ದುಗಳನ್ನು ಮತ್ತು ಸೋಂಕುಗಳನ್ನು ತಡೆಯಲು IV ಆಂಟಿಬಯಾಟಿಕ್ಗಳನ್ನು ನೀಡಲಾಯಿತು.
ಈ ನಿರ್ಣಾಯಕ ಹಂತಗಳು ಶಿಶುಗಳ ಬದುಕುಳಿಯುವಿಕೆಗೆ ಅಪಾರ ಸಹಾಯ ಮಾಡಿದವು.
ಹೆರಿಗೆಯ ನಂತರ, ಎರಡೂ ನವಜಾತ ಶಿಶುಗಳು ಉಸಿರಾಟದ ತೊಂದರೆಗಳು, ಕಾಮಾಲೆ, ತೀವ್ರ ರಕ್ತದ ಸೋಂಕುಗಳು ಮತ್ತು ರಕ್ತಹೀನತೆ ಸೇರಿದಂತೆ ಜೀವಕ್ಕೆ ಅಪಾಯಕಾರಿಯಾದ ಸವಾಲುಗಳನ್ನು ಎದುರಿಸಿದವು.ಇವೆಲ್ಲವೂ ಅತಿ ಅವಧಿಗೆ ಮುಂಚಿತವಾಗಿ ಜನಿಸಿದ ಶಿಶುಗಳಲ್ಲಿ ಸಾಮಾನ್ಯವಾಗಿ ಕಂಡುಬಂದರೂ, ಬಹಳ ಅಪಾಯಕಾರಿ ಪರಿಸ್ಥಿತಿಗಳಾಗಿವೆ.
Sahyadri Narayana Multispeciality Hospital ಈ ಎಲ್ಲಾ ಅಡೆತಡೆಗಳ ನಡುವೆಯೂ, ಡಾ. ಅಪ್ರಮೇಯ ಎಚ್.ಎಸ್. ಮತ್ತು ಡಾ. ಭರತ್ ವಿ. ನಾಡಿಗ್ ನೇತೃತ್ವದ ಮಕ್ಕಳ ವೈದ್ಯಕೀಯ ತಂಡವು ಈ ಶಿಶುಗಳ ಜೀವ ಉಳಿಸುವಲ್ಲಿ ಯಶಸ್ವಿಯಾಯಿತು.
ಶಿಶುಗಳನ್ನು ಆಸ್ಪತ್ರೆಯ ಸುಧಾರಿತ ಲೆವೆಲ್-3 ನಿಯೋನಾಟಲ್ ಇಂಟೆನ್ಸಿವ್ ಕೇರ್ ಯೂನಿಟ್ (NICU) ನಲ್ಲಿ ಇರಿಸಲಾಯಿತು, ಅಲ್ಲಿ ಅವರಿಗೆ ನಿರಂತರ ಮೇಲ್ವಿಚಾರಣೆ ಮತ್ತು ವಿಶೇಷ ಆರೈಕೆ ನೀಡಲಾಯಿತು.ಚಿಕಿತ್ಸೆಯ ಅವಧಿಯಲ್ಲಿ ಈ ಕೆಳಗಿನ ಪ್ರಮುಖ ಕಾರ್ಯವಿಧಾನಗಳನ್ನು ನಡೆಸಲಾಯಿತು: ಶಿಶುಗಳು 50 ದಿನಗಳ ಕಾಲ NICU ನಲ್ಲಿ ಮತ್ತು ಹೆಚ್ಚುವರಿ 10 ದಿನಗಳ ಕಾಲ ಮಕ್ಕಳ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಯಿತು.
ಈ ಅವಳಿ ಶಿಶುಗಳು ರೆಟಿನೋಪತಿ ಆಫ್ ಪ್ರಿಮೆಚ್ಯುರಿಟಿ (ROP) ಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರು.ಅವರಿಗೆ 21 ದಿನಗಳ ಕಾಲ IV ಆಂಟಿಬಯಾಟಿಕ್ಗಳನ್ನು ನೀಡಲಾಯಿತು ಮತ್ತು ಸುಮಾರು ಒಂದು ತಿಂಗಳ ಕಾಲ ಆಮ್ಲಜನಕದ ಬೆಂಬಲದೊಂದಿಗೆ ಚಿಕಿತ್ಸೆ ಒದಗಿಸಲಾಯಿತು.
ಎರಡೂ ಶಿಶುಗಳ ಯಶಸ್ವಿ ಚೇತರಿಕೆಯ ಬಗ್ಗೆ ಮಾತನಾಡಿದ ಡಾ. ಅಪ್ರಮೇಯ, “ಇಂತಹ ನಿರ್ಣಾಯಕ ಪ್ರಕರಣಗಳನ್ನು ನಿರ್ವಹಿಸಲು ಕೇವಲ ವೈದ್ಯಕೀಯ ಪರಿಣತಿ ಮಾತ್ರವಲ್ಲ, ವಿವಿಧ ವಿಶೇಷತೆಗಳ ನಡುವೆ ಸುಗಮ ತಂಡದ ಕೆಲಸವೂ ಅಗತ್ಯ. ನಮ್ಮ ಸಂಘಟಿತ ಪ್ರಯತ್ನವು ಈ ಅವಳಿ ಮಕ್ಕಳ ಜೀವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಹೇಳಿದರು.
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ ಜಾನ್ ಅವರು, “ಇಂತಹ ನಿರ್ಣಾಯಕ ಸಂದರ್ಭಗಳಲ್ಲಿ ಅವಧಿಗೆ ಮುಂಚಿತವಾಗಿ ಜನಿಸಿದ ಅವಳಿ ಮಕ್ಕಳನ್ನು ಬದುಕುಳಿಸಿರುವುದು ನಿಜಕ್ಕೂ ಅದ್ಭುತ. ಇದು ನಮ್ಮ ವೈದ್ಯಕೀಯ ತಂಡದ ಬದ್ಧತೆ, ಸಮರ್ಥ ತಂಡದ ಕೆಲಸ ಮತ್ತು ಸುಧಾರಿತ ನವಜಾತ ಶಿಶು ಆರೈಕೆಯಿಂದ ಮಾತ್ರ ಸಾಧ್ಯವಾಗಿದೆ” ಎಂದು ಹೆಮ್ಮೆಯಿಂದ ನುಡಿದರು.
IAS Baba Academy ನಾಗರಿಕ ಸೇವಾ ಅಧಿಕಾರಿಗಳಾಗಿವುದು ಹಣ ಮಾಡಲಿಕ್ಕಲ್ಲ. ಸಾಮಾಜಿಕ ಮೌಲ್ಯ , ನೈತಿಕತೆ ಎತ್ತಿಹಿಡಿಯಬೇಕು- ಡಾ.ಶಾಲಿನಿ ರಜನೀಶ್
IAS Baba Academy ನಾಗರಿಕ ಸೇವಾ ಅಧಿಕಾರಿಗಳಾಗುವುದು ಆಸ್ತಿ, ಹಣ ಸಂಪಾದನೆ ಮಾಡುವುದಕ್ಕಲ್ಲ ಸಾಂವಿಧಾನಿಕ ಜವಾಬ್ದಾರಿ ನಿರ್ವಹಣೆ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದು ನೈತಿಕತೆ ಕಾಪಾಡಿಕೊಳ್ಳುವುದಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ತಿಳಿಸಿದರು.
ಎಸ್.ಎಸ್.ಕೇರ್ ಟ್ರಸ್ಟ್, ದಾವಣಗೆರೆ ವಿವಿ, ಐಎಎಸ್ ಬಾಬಾ ಅಕಾಡೆಮಿ ಸಹಯೋಗದಲ್ಲಿ ಬಿಐಇಟಿ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಐಎಎಸ್ ಹುದ್ದೆ ಸಾಂವಿಧಾನಿಕ ಸೇವೆಯಾಗಿದೆ. ಜನರು ಹಲವು ತರಹದ ಸೇವೆ ಮಾಡುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಕ್ಷೇತ್ರದ ಕೊಡುಗೆ ಬಹಳ ಮುಖ್ಯವಾಗುತ್ತದೆ. ರೈತ ಆಹಾರ ಉತ್ಪಾದನೆ ಮಾಡಲಿಲ್ಲ ಎಂದರೆ ಜನರ ಗತಿ ಏನಾಗುತ್ತದೆ. ಇದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮಹತ್ವತೆ ಇರುತ್ತದೆ.
IAS Baba Academy ಐಎಎಸ್ ಎನ್ನುವುದು ಒಂದು ಯೂನಿಕ್ ವರ್ಡ್. ಅದಕ್ಕೆ ಸೇರ ಹೊರಟಿರುವ, ಬಯಸುವ ಆಕಾಂಕ್ಷಿಗಳು ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯ, ಸಕರಾತ್ಮಕ ಚಿಂತನೆ ಹೊಂದಿರಬೇಕು. ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸತತ ಅಧ್ಯಯನ, ತಿಳಿದುಕೊಂಡಿರುವುದನ್ನು ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸುವುದು ಬಹಳ ಕೌಶಲ್ಯಯುತವಾದದು. ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನದ ಜೊತೆಗೆ ದೃಢ ಸಂಕಲ್ಪದೊಂದಿಗೆ ನಿರಂತರ, ಆಳವಾದ ಅಧ್ಯಯನ ರೂಢಿಸಿಕೊಂಡಾಗ ಮಾತ್ರ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು. ಕೇವಲ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸಿದರೆ ಸಾಲದು ಅದನ್ನು ಪ್ರತಿ ದಿನ ಮನನ ಮಾಡಿಕೊಳ್ಳುವ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅರಿತ ವಿಷಯವನ್ನು ವ್ಯಕ್ತಪಡಿಸುವ ಕೌಶಲ್ಯ, ಸಮಯ ಪ್ರಜ್ಞೆಯನ್ನು ಸಹ ರೂಢಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಅದರಲ್ಲೂ ವಿಶೇಷವಾಗಿ ದಾವಣಗೆರೆ ಜಿಲ್ಲೆಯಿಂದ ಯುಪಿಎಸ್ಸಿ ಆಕಾಂಕ್ಷಿಗಳು ಬರಬೇಕು ಎಂದು ಆಶಯ ವ್ಯಕ್ರಪಡಿಸಿದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಬಡವರ, ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿ ಎಂದು ಸಂಕಲ್ಪ ಉಚಿತ ತರಬೇತಿಯನ್ನು ಎಸ್.ಎಸ್.ಕೇರ್ ಟ್ರಸ್ಟ್ , ದಾ.ವಿ.ವಿ ನಿಂದ ಆರಂಭಿಸಲಾಗಿದೆ. ಇದು ಉತ್ಸಾಹಿ ಅಧಿಕಾರಿಗಳಿದ್ದಾಗ ನಡೆದು ನಿಲ್ಲಬಾರದು, ಪಕ್ಷಾತೀತವಾಗಿ ನಿರಂತರವಾಗಿ ನಡೆಯಬೇಕು ಎಂದರು.
ಬಡವರಿಗೆ ಆರೋಗ್ಯ ರಕ್ಷಣೆಗಾಗಿ ಆರಂಭವಾದ ಎಸ್.ಎಸ್.ಕೇರ್ ಟ್ರಸ್ಟ್ ಸೇವೆ ಸ್ಪರ್ಧಾತ್ಮಕ ಪರೀಕ್ಷಾ ಕ್ಷೇತ್ರಕ್ಕೂ ವಿಸ್ತರಿಸಲಾಗಿದೆ. ತರಬೇತಿಗೆ ಆಗಮಿಸುವ ದೂರದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಗಾಗಿ ಕಟ್ಟಡ ಒದಗಿಸಲಾಗುತ್ತದೆ, ಡಿವೈಡಿಂಗ್ ಪಾವತಿ ವ್ಯವಸ್ಥೆಯಲ್ಲಿ ನಿರ್ವಹಣೆ ಮಾಡಲು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕುಂದುವಾಡ ಅಂಡರ್ ಪಾಸ್ ಅನ್ನು ಏಳು ಮೀಟರ್ ಗಿಂತಲೂ ಹೆಚ್ಚು ವಿಸ್ತಾರವಾಗಿ ನಿರ್ಮಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿತ್ತು. ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಾಗ ಎನ್.ಹೆಚ್.ಎ.ಐ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗಿದೆ. ಯುವ ಜನರ ಉದ್ಯೋಗಾವಕೋಶಗಳನ್ನು ಹೆಚ್ಚಿಸಲು ದಾವಣಗೆರೆ-ಹರಿಹರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಲಾಗುತ್ತಿದೆ ಎಂದರು.
ಸಂಸದರಾದ ಡಾ: ಪ್ರಭಾ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ ಮ್ಯಾಂಚೆಸ್ಟರ್” ಎಂದೇ ಪ್ರಸಿದ್ಧಿಯಾಗಿದ್ದ ದಾವಣಗೆರೆಯನ್ನು “ಶಿಕ್ಷಣ ಕಾಶಿ”ಯಾಗಿ ರೂಪಿಸಿ, ಪ್ರಗತಿಯ ದಾರಿ ತೋರಿದವರು ಹಿರಿಯ ನಾಯಕ ಡಾ. ಶಾಮನೂರು ಶಿವಶಂಕರಪ್ಪಾಜಿಯವರಿಗೆ ಸಲ್ಲಬೇಕು. ಅವರ ದೂರದೃಷ್ಟಿ ಮತ್ತು ಸಮಾಜಪರ ಸೇವೆಯೇ ದಾವಣಗೆರೆಯನ್ನು ಇಂದು ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸಲು ಕಾರಣವಾಗಿದೆ.
ದಾವಣಗೆರೆಯ ಅಭಿವೃದ್ಧಿಗೆ ಸತತ ಶ್ರಮಿಸುತ್ತಿರುವ ಡಾ.ಶಾಮನೂರು ಶಿವಶಂಕರಪ್ಪಾಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಇಂದು ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪ್ರಾರಂಭವಾಗುತ್ತಿದೆ. 2019 ರಲ್ಲಿ ಪ್ರಾರಂಭವಾದ ಎಸ್ ಎಸ್ ಕೇರ್ ಟ್ರಸ್ಟ್ ದಾವಣಗೆರೆ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಉಚಿತ ಮೂರು ಆರೋಗ್ಯ ಸೇವೆ ಒದಗಿಸುತ್ತಿದೆ.
ಇದೀಗ ಮಹತ್ವದ ಹೆಜ್ಜೆಯಾಗಿ ಸಂಕಲ್ಪ ಯೋಜನೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಆಕಾಂಕ್ಷಿಗಳಿಗೆ ಉಚಿತ ತರಬೇತಿಗೆ ಮುನ್ನುಡಿ ಹಾಕಲಾಗಿದೆ. ಎಸ್.ಎಸ್. ಕೇರ್ ಟ್ರಸ್ಟ್, ಐಎಎಸ್ ಬಾಬಾ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ವಿ.ವಿ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಸಂಕಲ್ಪ ತರಬೇತಿ ಕೇಂದ್ರ ಕಾರ್ಯನಿರ್ವಹಿಸಲಿದೆ. ದಾವಣಗೆರೆಯ ಯುವಜನತೆ ಇದೀಗ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ ದೂರದ ಊರಿಗೆ ಹೋಗಬೇಕಾದ ಅಗತ್ಯವಿಲ್ಲ.
ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಆಯ್ಕೆ ಮಾಡಲು ಜುಲೈ 27 ರಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಹರಪನಹಳ್ಳಿಯ ಟಿ.ಎಂ.ಎ.ಇ. ಶಿಕ್ಷಣ ಮಹಾವಿದ್ಯಾಲಯದ(ತೆಗ್ಗಿನಮಠ) ಕಾಲೇಜುಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ 1800 ಆಕಾಂಕ್ಷಿಗಳು ಹೆಸರು ನೊಂದಾಯಿಸಿದ್ದರು. ಇದರಲ್ಲಿ 850 ಮಂದಿ ಪ್ರವೇಶ ಪರೀಕ್ಷೆ ಬರೆದಿದ್ದು 300 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.
ಆಯ್ಕೆಯಾದವರಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಉಚಿತ ತರಬೇತಿ ನೀಡಲಾಗುವುದು. ಇದು ನಿಮ್ಮೆಲ್ಲರ ಶ್ರದ್ಧೆಗೆ ನಮ್ಮ ಸಂಕಲ್ಪವಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಗೆ “ಐಟಿಹಬ್” ತರುವ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ ಎಂದು ಹೇಳಲು ಇಚ್ಚಿಸುತ್ತೇನೆ. ಸಾವಿರ ಮೈಲಿಗೊಳಗಿನ ಪಯಣ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ. ಅದಕ್ಕೆ ನೀವು ಆ ಮೊದಲ ಹೆಜ್ಜೆ ಇಡುತ್ತಿದ್ದೀರಿ. ನಿಮ್ಮ ಮುಂದಿನ ಪಯಣ ಉತ್ತಮವಾಗಿರಲಿ, ಸಂತೋಷದಾಯಕವಾಗಿರಲಿ ಎಂದು ತರಬೇತಿ ಅಭ್ಯರ್ಥಿಗಳ ಕುರಿತು ಮಾತನಾಡಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸ್ವಾಗತಿಸಿದರು. ಜಿ.ಪಂ. ಸಿಇಓ ಗಿತ್ತೆ ಮಾಧವ ವಿಠ್ಠಲ ರಾವ್ ವಂದಿಸಿದರು. ಈ ವೇಳೆ ಐಎಎಸ್ ಬಾಬಾ ಸಂಸ್ಥಾಪಕ ಮೋಹನ್ ಕುಮಾರ್, ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
E-Pauti ಇ-ಪೌತಿ ಆಂದೋಲನದ ಮೂಲಕ ಉಚಿತವಾಗಿ ಪಹಣಿ ಪಡೆಯಿರಿ- ತಹಶೀಲ್ದಾರ್ ವಿ.ಎಸ್.ರಾಜೀವ್
E-Pautiಕೃಷಿ ಜಮೀನುಗಳ ಮಾಲೀಕರು ಮೃತರಾದಲ್ಲಿ ಸದರಿ ಜಮೀನನ್ನು ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರಸ್ತುತ ಸರಕಾರದಿಂದ ಇ-ಪೌತಿ ಆಂದೋಲನದ ಮೂಲಕ ಶಿವಮೊಗ್ಗ ತಾಲ್ಲೂಕಿನ ಜಮೀನುಗಳನ್ನು ಉಚಿತವಾಗಿ ವಾರಸತ್ವದ ವಂಶಾವಳಿ ಪ್ರಕಾರ ಪಹಣಿ ಪತ್ರಿಕೆ ಮಾಡಿಕೊಡಲಾಗುತ್ತಿದೆ.
ಈ ರೀತಿಯ ಜಮೀನುಗಳನ್ನು ವಾರಸುದಾರರು ಕೂಡಲೇ ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ವಾರಸುದಾರರ ಆಧಾರ್ ಕಾರ್ಡ್ ಇತ್ಯಾದಿ ಪೂರಕ ಎಲ್ಲಾ ದಾಖಲೆಗಳನ್ನು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿಗಳ ಹತ್ತಿರ ಸಲ್ಲಿಸಿ ಭೂ ಮಾಲೀಕರು ಮೃತರಾಗಿರುವ ಜಮೀನುಗಳ ವಾರಸುದಾರರಿಗೆ ಖಾತೆಯನ್ನು ಉಚಿತವಾಗಿ ಇ-ಪೌತಿ ಆಂದೋಲನದ ಮೂಲಕ ಪಹಣಿ ಮಾಡಿಸಿಕೊಳ್ಳಬಹುದಾಗಿರುತ್ತದೆ.
E-Pauti ಸಾರ್ವಜನಿಕರು ಈ ಬಗ್ಗೆ ಮದ್ಯವರ್ತಿಗಳಿಗೆ ಅವಕಾಶ ಕೊಡದೇ ನೇರವಾಗಿ ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳನ್ನು ಹಾಗೂ ರಾಜಸ್ವ ನಿರೀಕ್ಷಕರನ್ನು ಭೇಟಿ ಮಾಡಿ ಉಚಿತವಾಗಿ ನಿಮ್ಮ ಜಮೀನಿನ ಖಾತೆಯನ್ನು ಬದಲಾಯಿಸಿಕೊಳ್ಳಲು ತಿಳಿಸಿದೆ. ಇ-ಪೌತಿ ಆಂದೋಲನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಇ-ಪೌತಿ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರಾಜೀವ್ ವಿ ಎಸ್ ತಿಳಿಸಿದ್ದಾರೆ.
Dr. H. B. Manjunatha ಆರ್ಥಿಕವಾಗಿ ಬೃಹತ್ ಶಕ್ತಿಯಾಗುವ ಭರದಲ್ಲಿ ಆಧ್ಯಾತ್ಮಿಕತೆ ಮರೆಯಬಾರದು ಡಾ.ಎಚ್.ಬಿ.ಮಂಜುನಾಥ್
Dr. H. B. Manjunatha ದೇಶವು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗುವ ಭರದಲ್ಲಿ ಮೂಲದ ಆಧ್ಯಾತ್ಮಿಕ ಶಕ್ತಿಯನ್ನು ಮರೆಯಬಾರದು ಎಂದು ಹಿರಿಯ ಪತ್ರಕರ್ತ ಡಾ ಎಚ್. ಬಿ. ಮಂಜುನಾಥ ಹೇಳಿದರು.
ಅವರು ಮಲಾಡಿಹಳ್ಳಿ ಅನಾಥ ಸೇವಾಶ್ರಮದ ಪರಮಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಶ್ರೀ ಸೂರುದಾಸ್ ಜಿ ಯವರ ಪುಣ್ಯಾರಾಧನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೂಜ್ಯ ದ್ವಯರಿಗೆ ನುಡಿ ನಮನ ಸಲ್ಲಿಸುತ್ತಾ ಅಧ್ಯಾತ್ಮ ಎಂದರೆ ಪೂಜೆ ಪುನಸ್ಕಾರಗಳು, ಹೋಮ ಹವನಾದಿಗಳು, ಧ್ಯಾನ ಭಜನಾದಿಗಳ ಮೌಢ್ಯವೆಂದು ಭಾವಿಸಬಾರದು. ಅಧ್ಯಾತ್ಮವೆಂದರೆ ತನ್ನನ್ನು ತಾನು ಅರ್ಥ ಮಾಡಿಕೊಂಡು ತನ್ನಂತೆಯೇ ಪರರು ಎಂದು ಭಾವಿಸಿ ಇತರರಿಗೆ ಉಪಕಾರ ಮಾಡುವುದೇ ಅಧ್ಯಾತ್ಮ. ಈ ಸೇವಾ ಕೈಂಕರ್ಯವನ್ನು ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಚಾರ ಬಯಸದೆ ಮಾಡಿದವರು ರಾಘವೇಂದ್ರ ಸ್ವಾಮಿಗಳು ಹಾಗೂ ಸೂರು ದಾಸ್ ರವರು. ಕುಗ್ರಾಮವಾಗಿದ್ದ ಮಲ್ಲಾಡಿಹಳ್ಳಿಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಲ್ಲದೆ ಅನಾಥರಿಗೆ ಆಶ್ರಯ, ದೀನದುರ್ಬಲರಿಗೆ ಶಿಕ್ಷಣ, ರೋಗಿಗಳಿಗೆ ಚಿಕಿತ್ಸೆ, ಕಲೆ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ಕೊಟ್ಟವರು ಶ್ರೀ ರಾಘವೇಂದ್ರ ಸ್ವಾಮಿಯವರು. ಅವರ ಆದರ್ಶಗಳನ್ನು ಕಿಂಚಿತ್ತಾದರೂ ಪಾಲಿಸುವುದೇ ನಿಜವಾಗಿಯೂ ಅವರ ಆತ್ಮಕ್ಕೆ ಸಲ್ಲಿಸುವ ಪರಮ ಗೌರವವಾಗಿದೆ ಎಂದು ಡಾ. ಎಚ್.ಬಿ.ಮಂಜುನಾಥ ಹೇಳಿದರು.
Dr. H. B. Manjunatha ಅನಾಥ ಸೇವಾಶ್ರಮದ ಕಾರ್ಯದರ್ಶಿ ಎಸ್ ಕೆ ಬಸವರಾಜನ್ ಅಧ್ಯಕ್ಷತೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಘವೇಂದ್ರ ಸ್ವಾಮೀಜಿ ಜೀವನ ಚರಿತ್ರೆ ಆಧಾರಿತ ತಿರುಕ ಯಾನ ಕೃತಿಯ ಕರ್ತೃ ಡಾ ಜಿ ಎನ್ ಮಲ್ಲಿಕಾರ್ಜುನಪ್ಪ ಹಾಗೂ ಹಿರಿಯ ಪತ್ರಕರ್ತ ಉಜ್ಜಿನಪ್ಪ ಮಾತನಾಡಿದರು. ಕೃತಿಯ ಅವಲೋಕನವನ್ನು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ ಎಂ ಎಚ್ ರುದ್ರಮುನಿ ಮಾಡಿದರು. ವಿಶ್ವಸ್ಥರುಗಳಾದ ಎಲ್ಎಸ್ ಶಿವರಾಮಯ್ಯ ಕೆ ಡಿ ಬಡಿಗೇರ್ ಮುಂತಾದವರ ಉಪಸ್ಥಿತಿಯಲ್ಲಿ ಶ್ರೀ ರಾಘವೇಂದ್ರ ಜ್ಞಾನ ಮಂಟಪದಲ್ಲಿ ನೆರವೇರಿದ ಕಾರ್ಯಕ್ರಮದ ಪ್ರಾರ್ಥನೆಯನ್ನು ಸಂಗೀತ ಶಿಕ್ಷಕಿ ಸುಮಾ ಹಾಡಿದರೆ ಆಡಳಿತಾಧಿಕಾರಿ ಡಾ. ಜಿ ಪಾಂಡುರಂಗ ಮೂರ್ತಿ ಸ್ವಾಗತ ಕೋರಿದರು. ವಚನ ಗೀತೆಯನ್ನು ಮಧುವಂತಿ ಹಿರೇಮಠ ಹಾಡಿದರು. ಜಿ ಚಂದ್ರಪ್ಪ, ನವೀನ್ ಮಸ್ಕಲ್, ಎಸ್ ಆರ್ ಸಂತೋಷ್ ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಿ ಪಿ ದಕ್ಷಿಣ ಮೂರ್ತಿ ವಂದನೆ ಸಲ್ಲಿಸಿದರು.
