Tuesday, August 4, 2026
Tuesday, August 4, 2026
Home Blog Page 2049

ಇಳಿಕೆಯಾಗದ ತರಕಾರಿ ಬೆಲೆ. ಗ್ರಾಹಕರ ಪರದಾಟ.

0

ಇಂಧನದ ದರ ಇಳಿಮುಖ ವಾಗುತ್ತಿದ್ದಂತೆ, ತರಕಾರಿ ಬೆಲೆ ಕೂಡ ಕಡಿಮೆಯಾಗಬಹುದು ಎಂದುಕೊಂಡಿದ್ದ ಗ್ರಾಹಕರಿಗೆ ನಿರಾಸೆ ಎದುರಾಗಿದೆ.

ಈ ಬಾರಿಯ ವರುಣನ ಆರ್ಭಟದಿಂದ ರೈತರ ಹೊಲದಲ್ಲಿರುವ ಬೆಳೆ ನಾಶವಾಗಿದೆ. ಅಲ್ಲದೆ, ತಾವು ಬೆಳೆದ ಎಲ್ಲಾ ತರಕಾರಿ, ಇತರೆ ಬೆಳೆಗಳು ನೀರುಪಾಲಾಗಿದೆ. ರೈತರು ಹೊಲದಲ್ಲಿ ಅಳಿದುಳಿದ ತರಕಾರಿಗಳನ್ನು ಮಾರುಕಟ್ಟೆಗೆ ತಂದರೂ ಸಹ , ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ಅದೇ ತರಕಾರಿ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರಿ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದ ರೈತರು ಹಾಗೂ ತರಕಾರಿ ಕೊಳ್ಳುವ ಗ್ರಾಹಕರಿಗೆ ಪ್ರಯೋಜನವಾಗುತ್ತಿಲ್ಲ.

‘ಕಳೆದ 15ದಿನಗಳಿಂದ ತರಕಾರಿ ದರ ಏರಿಕೆಯಾಗುತ್ತಲೇ ಇದೆ. ಗುಣಮಟ್ಟದಲ್ಲೂ ಕೊರತೆ ಇದೆ. ಹೀಗಾಗಿ, 1ಕೆಜಿ ಖರೀದಿಸುವ ಗ್ರಾಹಕರು ಅರ್ಧ ಕೆಜಿ ಕಾಲು ಕೆಜಿ ಖರೀದಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಟೊಮೋಟೊ ಕೆಜಿಗೆ 80 ರೂ. ಇತ್ತು. ಆದರೆ ಈಗ 65 ರೂಪಾಯಿಗಳಿಗೆ ಇಳಿದಿದೆ ಎಂದು ಶಿವಮೊಗ್ಗ ಪ್ರಮುಖ ತರಕಾರಿ ಮಾರಾಟಗಾರರು ತಿಳಿಸಿದ್ದಾರೆ.

ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನ ಕಷ್ಟವಾಗಿದೆ. ತರಕಾರಿ ಬೆಲೆ ಗಗನಕ್ಕೇರಿರುವುದರಿಂದ ಜನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ತರಕಾರಿ ಸ್ಟಾಲ್, ಅಂಗಡಿಗಳಲ್ಲಿ ಮುಂಚಿನಂತೆ ತಾಜಾ ತರಕಾರಿಗಳು ದೊರೆಯುತ್ತಿಲ್ಲ.

ಕೆ ಲೈವ್ ಸುದ್ದಿಸಾಲು.

0

ಬೆಂಗಳೂರಿಗೆ ಮತ್ತೆ ವರುಣನ ಕಾಟ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ.
ನವೆಂಬರ್ 26 ರಿಂದ ಡಿಸೆಂಬರ್ 1 ರವರೆಗೆ ಸಾಧಾರಣ ಮಳೆ ಬೀಳಲಿದೆ.

ಸದ್ಯ ರಾಜ್ಯದಲ್ಲಿ ಪ್ರವಾಹದಿಂದಾಗಿರುವ ಆಸ್ತಿ,ಜೀವ ಮತ್ತು ಪ್ರಾಕೃತಿಕ ಹಾನಿಗಳಿಗೆ ಹಣಕಾಸಿನ ಪರಿಹಾರ
ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.

ಕರ್ನಾಟಕದ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಮಾಡಿದೆ. ಕೃಷಿ ಬೆಳೆಗೆ ಬೆಂಬಲ ಬೆಲೆ ಪ್ರಕಟಿಸಬೇಕು ಎಪಿಎಂಸಿ ಮತ್ತು ಭೂಸುಧಾರಣಾ ಕಾಯಿದೆಗಳನ್ನು ರದ್ದುಗೊಳಿಸಲು
ಒತ್ತಾಯಿಸಿದೆ.

ಪ್ರಸ್ತುತ ವಿಧಾನ ಪರಿಷತ್ತಿಗೆ ಸ್ಪರ್ಧಿಸಿರುವ 121 ಅಭ್ಯರ್ಥಿಗಳಲ್ಲಿ
ಶ್ರೀಯೂಸುಫ್ ಶರೀಫ್ ಅವರು ಅತ್ಯಂತ ಶ್ರೀಮಂತ ವ್ಯಕ್ತಿ.
ಅವರು ಘೋಷಿಸಿರುವ ಸ್ವಂತ
ಆಸ್ತಿಯ ಮೊತ್ತ ರೂ 1,744 ಕೋಟಿ.

ಕೋವಿಡ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರನಟ ಕಮಲ ಹಾಸನ್ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.ಚನ್ನೈನ ಶ್ರೀರಾಮಚಂದ್ರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುಹಾಸ್ ಪ್ರಭಾಕರ್ ಅವರು ಆರೋಗ್ಯ ಮಾಹಿತಿ ಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡಿಗ ಸಾಗರ ಪುರಾಣಿಕ್ ಅವರ
ಕನ್ನಡ ಚಿತ್ರ ‘ಡೊಳ್ಳು’ ,ಪಣಜಿಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ
ಪ್ರದರ್ಶಿತವಾಗುತ್ತಿದೆ.

ಹತ್ತನೇ ತರಗತಿ ಸೂಕ್ತವಾಗಿ ಪಠ್ಯ ಕಡಿತ

0

ಈ ಬಾರಿಯ 10 ನೇ ತರಗತಿ ಪಠ್ಯಕ್ರಮವನ್ನು ಶೇ.20 ರಷ್ಟು ಕಡಿಮೆಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ವರ ಅಭಿಪ್ರಾಯ ಪಡೆದು, 10 ನೇ ತರಗತಿಯ ಎಲ್ಲಾ ವಿಷಯಗಳ ಶೇಕಡ 20ರಷ್ಟು ಪಠ್ಯ ಕಡಿತ ಗೊಳಿಸಲು ನಿರ್ಧರಿಸಲಾಗಿದೆ. ಒಂದೆರಡು ದಿನಗಳಲ್ಲಿ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ .ನಾಗೇಶ್ ಅವರು ತಿಳಿಸಿದರು.

ಕೊರೋನಾ ದಿಂದಾಗಿ ಶಾಲೆಗಳು ತಡವಾಗಿ ಆರಂಭಗೊಂಡಿದೆ. ಇದನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಬಾರಿಯ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಶೇ.100ರಷ್ಟು ಪಠ್ಯ ಕ್ರಮ ಬೋಧನೆ ಇದು ಕಷ್ಟಸಾಧ್ಯ ಇಂದು ಶಿಕ್ಷಕರ ವಲಯದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಪ್ರತಿವರ್ಷವೂ 240ಕ್ಕೂ ಹೆಚ್ಚು ಬೋಧನಾ ದಿನಗಳು ಲಭಿಸುತ್ತಿದ್ದವು. ಆದರೆ, ಈ ಬಾರಿ 180 ಬೋಧನಾ ದಿನಗಳು ಮಾತ್ರ ಲಭಿಸಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದರು.

ಪಠ್ಯ ಕಡಿತಗೊಳಿಸುವ ವಿವರಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸದ್ಯದಲ್ಲೇ ಪ್ರಕಟಿಸಲಿದೆ.

ಪಠ್ಯ ಕಡಿತಗೊಳಿಸುವ ನಿರ್ಧಾರ ಕೈಗೊಂಡಿರುವುದರಿಂದ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಎಸೆಸೆಲ್ಸಿ ಪರೀಕ್ಷೆಗಳು ನಡೆಯುವ ಸಾಧ್ಯತೆಗಳಿವೆ. ಇದರಿಂದ ಮೊದಲಿನಂತೆಯೇ ಶೈಕ್ಷಣಿಕ ವರ್ಷಗಳು ಆರಂಭವಾಗಲು ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂವಿಧಾನವನ್ನು ಎಲ್ಲರೂ ಗೌರವಿಸೋಣ

0

ನಮ್ಮ ನೆಲದ ಕಾನೂನಾದ ಸಂವಿಧಾನವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಹಾಗೂ ಗೌರವಿಸಬೇಕು. ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎ. ಮುಸ್ತಫಾ ಹುಸೇನ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ವಕೀಲರ ಭವನದಲ್ಲಿ ಏರ್ಪಡಿಸಲಾಗಿದ್ದ ‘ಸಂವಿಧಾನ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳೆಲ್ಲರೂ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಹಾಗೂ ಸಂವಿಧಾನ ತಿಳಿದವರು ಇತರರಲ್ಲೂ ಇದರ ಅರಿವು ಮೂಡಿಸಬೇಕು. ಇದು ನಮ್ಮ ನೆಲದ ಮೂಲಭೂತ ಕಾನೂನಾಗಿದ್ದು, ಮುಖ್ಯವಾಗಿ ವಕೀಲರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಂಗಕ್ಕೆ ಸಂವಿಧಾನ ಒಂದು ಮುಖ್ಯ ಅಂಶವಾಗಿದ್ದು ಕಾನೂನು ವ್ಯವಹರಿಸುವ ನಮಗೆ ಇದು ಬಹು ಮಹತ್ವದ್ದಾಗಿದೆ ಎಂದರು.
ನಾವು ಐಚ್ಚಿಕವಾಗಿ ಸಂವಿಧಾನ ಓದಿದಲ್ಲಿ ನಮಗೆ ಸಂವಿಧಾನ ರಚನೆ ಹಿಂದೆ ಇರುವ ಮಹನೀಯರ ಪರಿಶ್ರಮ ಮತ್ತು ಆಶಯಗಳು ಅರ್ಥವಾಗುತ್ತವೆ. ಇದರ ರಚನೆ ಹಿಂದೆ ಬಹಳ ಶ್ರಮ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೂಡ ಡ್ರಾಫ್ಟಿಂಗ್ ಕೆಲಸ ಕಷ್ಟ. ಇದಕ್ಕೆ ಉತ್ತಮ ಕೌಶಲ್ಯದ ಅಗತ್ಯವಿದೆ ಎಂದರು.
ಇಷ್ಟೊಂದು ದೊಡ್ಡ ಸಂವಿಧಾನ ನೀಡಿದ ಮಹನೀಯರು ಸಂವಿಧಾನ ರಚನೆ ಸಲುವಾಗಿ ಬಹು ಚರ್ಚೆಗಳು, ಸಭೆಗಳು, ಅಧ್ಯಯನ ನಡೆಸಿದ್ದಾರೆ. 1946 ರ ಡಿ.9 ರಂದು ಮೊದಲ ಸಂವಿಧಾನ ರಚನೆ ಪರಿಷತ್ ಸಭೆ ನಡೆಯಿತು. ನಂತರ 17 ಉಪ ಸಮಿತಿಗಳ ರಚನೆಯಾಗಿ 117 ಸಭೆಗಳು ನಡೆದು 1949 ರ ನವೆಂಬರ್ 26 ರಂದು ಸಂವಿಧಾನ ಅನುಮೋದನೆಗೊಂಡು 1950 ರ ಜನವರಿ 26 ರಿಂದ ಜಾರಿಗೊಂಡಿತು. ಬಹು ಸಂಸ್ಕøತಿಯ ನಮ್ಮ ದೇಶಕ್ಕೆ ಅನ್ವಯವಾಗುವಂತಹ ಬಹುದೊಡ್ಡ ಸಂವಿಧಾನವನ್ನು ನೀಡಿದ ಮಹನೀಯರನ್ನು ಸ್ಮರಿಸುವ ದಿನ ಇದಾಗಿದೆ. ಸಂವಿಧಾನ ರಚನಾ ಪೂರ್ವದ ಚರ್ಚೆಗಳನ್ನು ವಕೀಲರು ಸೇರಿದಂತೆ ಎಲ್ಲರೂ ತಿಳಿದುಕೊಳ್ಳಬೇಕು. ಸಂವಿಧಾನ ನ್ಯಾಯಾಲಯಕ್ಕೆ ವಿಶೇಷ ಅಧಿಕಾರ ನೀಡಿದ್ದು, ಸಂವಿಧಾನ ಕಾನೂನು ಮತ್ತು ಅದರ ಬೆಳವಣಿಗೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಬಹಳಷ್ಟು ಜನರಿಗೆ ಸಂವಿಧಾನದ ಅರಿವು ಇನ್ನೂ ಇಲ್ಲ. ಈ ನಿಟ್ಟಿನಲ್ಲಿ ಸಂವಿಧಾನ ಕುರಿತು ಅರಿವು ಕಾರ್ಯಕ್ರಮಗಳು ಹೆಚ್ಚಾಗಾಗಬೇಕು. ಆಗ ಎಲ್ಲರಿಗೂ ತಮ್ಮ ಹಕ್ಕು, ಕರ್ತವ್ಯಗಳು ಅರ್ಥವಾಗಿ ಜವಾಬ್ದಾರಿ ಹೆಚ್ಚುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಒತ್ತಾಸೆಯಾಗಿ ನಿಂತಿದ್ದು ನಮ್ಮ ಸಂವಿಧಾನ. ವೈವಿಧ್ಯಮಯವಾದ ನಮ್ಮ ದೇಶದಲ್ಲಿ ಯಾವುದೇ ಬೇಧ ಭಾವವಿಲ್ಲದೆ ಎಲ್ಲರನ್ನೂ ಸಮಾನರಾಗಿ ಕಾಣುವ ಮತ್ತು ದೇಶದ ಒಗ್ಗಟ್ಟಿನ ಮೂಲಭೂತ ತತ್ವ ನಮ್ಮ ಸಂವಿಧಾನ. ಇಂತಹ ನಮ್ಮ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು.
ಸಂವಿಧಾನ ರಚನೆ ಒಂದು ಬಹುದೊಡ್ಡ ಕಾರ್ಯವಾಗಿದ್ದು ಶಿವಮೊಗ್ಗದ ಹಿರಿಯರಾದ ಕೃಷ್ಣಮೂರ್ತಿಯವರು ಸಹ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರೆಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಎಲ್ಲ ವಕೀಲರು ಸಂವಿಧಾನದ ಆಶಯಗಳನ್ನು ಅರಿತು ಅದೇ ಪಥದಲ್ಲಿ ಸಾಗಬೇಕೆಂದು ಆಶಿಸಿದರು.
ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್. ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂತ್‍ರಾಜ್ ಕೆ.ಆರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ನ್ಯಾಯವಾದಿಗಳು, ಸಂಘದ ಸದಸ್ಯರು, ಪ್ಯಾನೆಲ್ ವಕೀಲರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಆರೋಗ್ಯಕ್ಕೆ ಉತ್ತಮ ಆಹಾರ- ಯೋಗ ಮುಖ್ಯ

0

ಮೈಸೂರಿನ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ರಾಷ್ಟೀಯ ಆಯುರ್ವೇದ ದಿನವನ್ನು ಆಚರಿಸಲಾಯಿತು. ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇತರೆ ಸಂಸ್ಥೆಗಳು ಸೇರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಿಎಫ್ ಟಿಆರ್ ಮಾಜಿ ನಿರ್ದೇಶಕ ಪ್ರಕಾಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

‘ ಜಡ ಜೀವನಶೈಲಿಯನ್ನು ಬದಲಾಯಿಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ನಮ್ಮ ಆರೋಗ್ಯವನ್ನು ರಕ್ಷಿಸಲು ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ಆಯುರ್ವೇದದಲ್ಲಿ 16 ಗುಣಲಕ್ಷಣಗಳನ್ನು ವಿವರಿಸಲಾಗಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಇದನ್ನು ಅನುಸರಿಸಬೇಕು. ನಾವು ಆರೋಗ್ಯಕರ ಜೀವನ ನಡೆಸಲು ಉತ್ತಮ ಆಹಾರ ಮತ್ತು ಯೋಗ ಪ್ರಮುಖವಾಗಿದೆ ಎಂದು ಪ್ರಕಾಶ್ ಅವರು ಹೇಳಿದ್ದಾರೆ.

ಇಂಡೋನೇಷ್ಯ ಓಪನ್ ಬ್ಯಾಡ್ಮಿಂಟನ್ : ಸಿಂಧು ಎರಡನೇ ಸುತ್ತಿಗೆ

0

ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಟನ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ.ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೊದಲ ಗೇಮ್ನಲ್ಲಿ ಸಿಂಧು ಎದುರಾಳಿಗೆ ಹೆಚ್ಚು ಅವಕಾಶಗಳನ್ನು ಕೊಡದಂತೆ ಪಾರಮ್ಯ ಮೆರೆದರು. ಆರಂಭದಲ್ಲಿಯೇ ಸಿಂಧು ಚುರುಕಿನ ರಿಟರ್ನ್ ಮತ್ತು ನಿಖರ ಸರ್ವ್ ಗಳಲ್ಲಿ ಸತತ ಏಳು ಪಾಯಿಂಟ್ಗಳನ್ನು ಕಲೆಹಾಕಿದ ಸಿಂಧು ಮುನ್ನಡೆಯುತ್ತ ದಾಪುಗಾಲಿಟ್ಟು ಜರ್ಮನಿಯ ಆಟಗಾರ್ತಿಯನ್ನು ಮಂಕಾಗಿಸಿದರು.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾಗಿರುವ ಸಿಂಧು ಈಗಷ್ಟೇ ಇಂಡೋನೇಷಿಯಾ ಸೂಪರ್ 750 ಬ್ಯಾಡ್ಮಿಂಟನ್ ನಲ್ಲಿ ಸಿಂಧು ಸೋತಿದ್ದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಣಿಯ ಸಿಂಧು 21-12, 21-18 ರಿಂದ ಜರ್ಮನಿಯ 26ನೇ ಶ್ರೇಣಿಯ ಯವೊನೆ ಲೀ ವಿರುದ್ಧ ಜಯಿಸಿದರು. ಹಾಲಿ ವಿಶ್ವಕಪ್ ಚಾಂಪಿಯನ್ ಆಗಿರುವ ಸಿಂಧು 37 ನಿಮಿಷಗಳ ಪಂದ್ಯದಲ್ಲಿ ಮೇಲ್ಮೈ ಸಾಧಿಸಿದರು.

ಆದರೆ ಎರಡನೇ ಗೇಮ್ಸ್ ನಲ್ಲಿ ಯವೊನೆ ಲೀ ತುಸು ಪ್ರತಿರೋಧ ಒಡ್ಡಿದ್ದರು. ಆದರೆ ಜಯ ಒಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಸಿಂಧು ಜಯದತ್ತ ಮುನ್ನಡೆದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಕಾಲಿಕ ಮಳೆಗೆ ಕಾಫಿ ಬೆಳೆ ಆಹುತಿ!

0

ಸಕಲೇಶಪುರ ಪ್ರದೇಶದಲ್ಲಿನ ಅಕಾಲಿಕ ಮಳೆಯು ಕಾಫಿ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಏಕೆಂದರೆ ತೋಟಗಾರರು ಕಾಫಿ ಬೀಜಗಳನ್ನು ಒಣಗಿಸಲು ಕಷ್ಟಪಡುತ್ತಿದ್ದಾರೆ. ಈ ಪ್ರದೇಶವು ಭಾರೀ ಮಳೆಗೆ ಹೊಸದೇನಲ್ಲ. ತುಂಬಾ ದಿನಗಳಿಂದ ಸೂರ್ಯನನ್ನು ನೋಡಿಲ್ಲ. ಇದು ಕಾಫಿ ಬೆಳೆಗಾರರನ್ನು ಚಿಂತೆಗೀಡು ಮಾಡಿದ್ದು, ಕಾಫಿ ಬೀಜಗಳನ್ನು ಒಣಗಿಸಲು ಕಷ್ಟವಾಗುತ್ತಿದೆ. ನಿರಂತರ ಮಳೆಯು ಮೆಣಸು ಮತ್ತು ಶುಂಠಿ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಹವಾಮಾನದಲ್ಲಿನ ವಿಪರೀತ ತೇವಾಂಶದಿಂದಾಗಿ ಅವು ಕೊಳೆಯುತ್ತಿವೆ. ಅರೇಬಿಕಾ ಕಾಫಿಯನ್ನು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಕೊಯ್ಲು, ಸಂಸ್ಕರಿಸಿ ಮತ್ತು ಒಣಗಿಸಲಾಗುತ್ತದೆ. ಆದರೆ ಈ ವರ್ಷ ಅಕಾಲಿಕ ಮಳೆಯಿಂದಾಗಿ ಕಾಫಿ ಹಣ್ಣುಗಳು ಬೀಳುತ್ತಿವೆ ಮತ್ತು ಕಾಫಿ ಬೀಜಗಳು ಕೊಳೆಯುತ್ತಿವೆ. ಕೆಲವು ಬೆಳೆಗಾರರು ಕಾಫಿ ಹಣ್ಣುಗಳನ್ನು ಒಣಗಿಸಲು ತಮ್ಮ ಮನೆಗಳ ಕೊಠಡಿಗಳಲ್ಲಿ, ವಾಹನಗಳ ಪಾರ್ಕಿಂಗ್ ಸ್ಥಳಗಳಲ್ಲಿ, ಬಾಲ್ಕನಿಗಳಲ್ಲಿ, ಸಾಂಪ್ರದಾಯಿಕ ಓವನ್‌ಗಳ ಮೇಲೆ ಇರಿಸಲಾದ ಟ್ರೇಗಳಲ್ಲಿ ಬೀಜಗಳನ್ನು ಹರಡಿದ್ದಾರೆ. ಪಶ್ಚಿಮ ಘಟ್ಟದ ​​ಅಂಚಿನಲ್ಲಿರುವ ದೇವಲದಕೆರೆ ಗ್ರಾಮದಲ್ಲಿ ಈ ವರ್ಷ ಸುಮಾರು 4200 ಮಿ.ಮೀ ಮಳೆಯಾಗಿದೆ. ಈ ಬಾರಿ ಒಂದೇ ಒಂದು ಕಾಫಿ ಬೀಜವನ್ನು ಮನೆಗೆ ತೆಗೆದುಕೊಂಡು ಹೋಗಲು ನಮಗೆ ಸಾಧ್ಯವಾಗುತ್ತಿಲ್ಲ. ಈ ರೀತಿಯ ಪರಿಸ್ಥಿತಿ ಹಿಂದೆಂದೂ ಕಂಡಿರಲಿಲ್ಲ” ಎಂದು ಕಾಫಿ ತೋಟಗಾರ ಮಲ್ಲಪ ಹೇಳಿದರು.
“ನಮ್ಮಲ್ಲಿ 80% ಕ್ಕಿಂತ ಹೆಚ್ಚು ಸಣ್ಣ ಬೆಳೆಗಾರರು ಇದ್ದೆವೆ. ದುಬಾರಿ ಡ್ರೈಯರ್‌ಗಳನ್ನು ಖರೀದಿಸಲು ಆರ್ಥಿಕವಾಗಿ ಯೋಗ್ಯರಿಲ್ಲ. ಪ್ರವಾಹ ಮತ್ತು ಬೆಲೆ ಕುಸಿತದಿಂದ ಐದು ವರ್ಷಗಳಿಂದ ನಷ್ಟದಲ್ಲಿ ತತ್ತರಿಸುತ್ತಿದ್ದೆವೆ. ದೊಡ್ಡ ತೋಟಗಾರರು ಸಹ ನಷ್ಟವನ್ನು ಎದುರಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಕಾಫಿಯನ್ನೇ ನಂಬಿ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ’ ಎಂದು ಹಾಸನ ಕಾಫಿ ತೋಟಗಾರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದರು.
ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ಸುರಿದ ಮಳೆಗೆ ಕಾಫಿ, ಕಾಳುಮೆಣಸು ಬೆಳೆ ಹಾನಿಯಾಗಿದೆ.ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಕಾಫಿ ಮಂಡಳಿ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ತುರ್ತು ಸ್ಪಂದನಾ ತಂಡವನ್ನು ರಚಿಸಿದ್ದು, ಬೆಳೆ ಮತ್ತು ಆಸ್ತಿ ಕಾನೂನುಗಳ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಸಕಲೇಶಪುರ ಎಸಿ ಪ್ರತೀಕ್ ಬಯಲ್ ಹೇಳಿದರು.

ರಾಜ್ಯದ ಹಲವು ಜಿಲ್ಲೆ: ಜಲಜೀವನ್ ಅಭಿಯಾನ.

0

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವಂತೆ ಸಂಪುಟ ಸಭೆ ನಡೆಸಲಾಯಿತು. ಈ ಯೋಜನೆಗಾಗಿ 1,577 ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ಯಾದಗಿರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ನೀರನ್ನು ಒದಗಿಸಲಾಗುತ್ತದೆ. 1,358.62 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾಗಿದೆ. ಇದಕ್ಕೆಆಡಳಿತ ಅನುಮತಿ ಸಹ ದೊರಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಮೂಡುಬಿದರೆ ತಾ. 39 ಹಳ್ಳಿಗಳಿಗೆ 145.48ಕೋಟಿ ಬಂಟ್ವಾಳ ಮತ್ತು ಮಂಗಳೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಅಲ್ಲದೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆ ಗೆ 990 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಾಸನದಲ್ಲಿ ವಾಣಿಜ್ಯಮಳಿಗೆ; ಸಿಸಿಟಿವಿ ಹೊಂದಿರಬೇಕು.

0

ಹಾಸನದ ಹೊರವಲಯದಲ್ಲಿರುವ ಗ್ರಾನೈಟ್ ಉದ್ಯಮಿಗಳ ಮನೆಯಲ್ಲಿ 2 ಕೋಟಿ ರೂ.ಗಳ ಕಳ್ಳತನ ನಡೆದಿದದೆ. ಅಪರಾಧ ತಡೆಯಲು ವಾಣಿಜ್ಯ ಸಂಸ್ಥೆಗಳ ಆವರಣದಲ್ಲಿ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳನ್ನು ಅಳವಡಿಸುವಂತೆ ಜಿಲ್ಲಾ ಪೊಲೀಸರು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಸೂಚಿಸಿದ್ದಾರೆ.
ನಿರ್ಲಕ್ಷ್ಯ ವಹಿಸುವ ಮಾಲೀಕರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ. ಪೊಲೀಸ್ ಸುರಕ್ಷತಾ (ಕ್ರಮಗಳು) ಜಾರಿ ಕಾಯಿದೆಯಡಿ, ಹಾಸನ ಪೊಲೀಸರು ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್‌ಗಳನ್ನು ಅಳವಡಿಸುವಂತೆ ಚಿನ್ನಾಭರಣ ಅಂಗಡಿಗಳು / ಶೋ ರೂಂಗಳು ಮತ್ತು ಹೋಟೆಲ್‌ಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ನೊಟೀಸ್ ನೀಡಿದ್ದಾರೆ. ಇಲ್ಲದಿದ್ದರೆ ಅವರು ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ನಾಗರಿಕರ ರಕ್ಷಣೆ ಪೋಲಿಸ್ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ಪ್ರತಿ ಅಂಗಡಿಗೆ ಭದ್ರತೆಯನ್ನು ಒದಗಿಸುವುದು ಅಸಾಧ್ಯ. ಪೊಲೀಸರು ಸಾಕಷ್ಟು ಜಾಗರೂಕರಾಗಿದ್ದರರೂ, ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸುತ್ತದೆ.
ಸಾರ್ವಜನಿಕರು ರಾತ್ರಿ ಸಮಯದಲ್ಲಿ ತಮ್ಮ ಮನೆಗಳಲ್ಲಿ ಲೈಟ್‌ಗಳನ್ನು ಆನ್ ಮಾಡುವಂತೆ ಪೊಲೀಸರು ವಿನಂತಿಸಿದ್ದಾರೆ. ಗೇಟ್‌ಗಳಿಗೆ ಬೀಗ ಹಾಕುವಿಕೆಯು ಮನೆಯೊಳಗೆ ಯಾರೂ ಇಲ್ಲದಿರುವ ಬಗ್ಗೆ ದುಷ್ಕರ್ಮಿಗಳಿಗೆ ಸುಳಿವು ನೀಡುವುದರಿಂದ, ವಿಶ್ವಾಸಾರ್ಹ ವ್ಯಕ್ತಿಯನ್ನು (ಸಂಬಂಧಿ ಅಥವಾ ಸ್ನೇಹಿತ) ಅಲ್ಲಿಯೇ ಇರಲು ಕೇಳುವುದು ಉತ್ತಮ ಎಂದು ಅವರು ಹೇಳಿದ್ದಾರೆ. ಒಂದೇ ಮಾಲೀಕತ್ವ ಹೊಂದಿರುವ ಅಂಗಡಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಸಮಿತಿ ಅಥವಾ ಗುಂಪುಗಳು ನಿರ್ವಹಿಸುವ ಸ್ಥಳಗಳಲ್ಲಿ CCTV ಇರುವುದಿಲ್ಲ. ಡಿಜಿಟಲ್ ವೀಡಿಯೋ ರೆಕಾರ್ಡರ್‌ಗಳ (ಡಿವಿಡಿ) ಮೊತ್ತವು ನಗರದಲ್ಲಿನ 32 ಚಾನೆಲ್‌ಗಳಿಂದ (ಕ್ಯಾಮರಾಗಳು) ಫೀಡ್‌ಗಳನ್ನು ಪಡೆಯುತ್ತವೆ.
ಕಳ್ಳತನ ಪ್ರಕರಣದ ಸಂಬಂಧ ಹಾಸನ ಉಪವಿಭಾಗ 106ರಲ್ಲಿ ವಾಣಿಜ್ಯ ಮಳಿಗೆಗಳನ್ನು ಗುರುತಿಸಲಾಗಿದ್ದು, ಅವು ನಗರ ಠಾಣೆ, ವಿಸ್ತರಣಾ ಠಾಣೆ ಹಾಗೂ ಪಿಂಚಣಿ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಹಾಸನ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ.ವಿ. ಉದಯಭಾಸ್ಕರ್ ಅವರು ತಿಳಿಸಿದರು. “ಕ್ಯಾಮೆರಾಗಳನ್ನು ಅಳವಡಿಸಲು ನಾವು ಈ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ. ಅವರಲ್ಲಿ ಐದು ಮಂದಿ ಸಮಯ ಕೇಳುತ್ತಿದ್ದಾರೆ ಮತ್ತು ಅವರಿಗೆ ನೋಟೀಸ್ ಅನ್ನು ಎರಡು ಬಾರಿ ಸಲ್ಲಿಸಿದ್ದೆವೆ. ಅವರು ನಮ್ಮ ಮೂರನೇ ನೋಟಿಸ್‌ಗೆ ಪ್ರತಿಕ್ರಿಯಿಸಲು ವಿಫಲವಾದರೆ ಅವರಿಗೆ 5,000 ರೂಪಾಯಿ ದಂಡ ವಿಧಿಸಲಾಗುವುದು., ಅದರ ನಂತರ ಪ್ರತಿಕ್ರಿಯೆ ನೀಡದಿದ್ದರೆ 10 ಸಾವಿರ ರೂಪಾಯಿ ದಂಡ ಹಾಗೂ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ ಎಂದು ಡಿಸಿಪಿ ಹೇಳಿದರು‌. ನಗರದಲ್ಲಿ ಅಂಗಡಿ ಹಾಗೂ ಮನೆಗಳಿಗೆ ಕ್ಯಾಮೆರಾಗಳನ್ನು ಅಳವಡಿಸುವಂತೆ ನಾವು ಮನವೊಲಿಸುತ್ತಿದ್ದೆವೆ. ಇಂದಿನಂತೆ ನಗರ ವ್ಯಾಪ್ತಿಯಲ್ಲಿ 333 ಕ್ಯಾಮೆರಾಗಳಿವೆ ಎಂದು ಅವರು ವಿವರಿಸಿದರು.
ಕೆಲವು ಸಂದರ್ಭಗಳಲ್ಲಿ ಕಳ್ಳರು ಡಿವಿಆರ್‌ಗಳೊಂದಿಗೆ ಪರಾರಿಯಾಗಿದ್ದಾರೆ. ಕನಿಷ್ಠ ಮೂರು ತಿಂಗಳ ಕಾಲ ಕ್ಲೌಡ್‌ನಲ್ಲಿ ಡೇಟಾವನ್ನು ಉಳಿಸಲು ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ ಎಂದು ” ಎಸ್‌ಪಿ ಆರ್. ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಜ್ಯೂನಿಯರ್ ವಿಶ್ವಕಪ್ ಹಾಕಿ : ಭಾರತ ಜಯದ ಹೆಜ್ಜೆ

0

ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಕೆನಡಾ ತಂಡಗಳ ನಡುವೆ ಪಂದ್ಯ ನಡೆಯಿತು.

ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ ಭಾರತ ತಂಡವು 13-1ರಲ್ಲಿ ಭರ್ಜರಿ ಜಯ ದಾಖಲಿಸಿತು.

ಮೊದಲ ಪಂದ್ಯದಲ್ಲಿ ನೀರಸ ಆಟವಾಡಿ ಸೋಲಿಗೆ ಶರಣಾಗಿದ್ದ ಭಾರತ ತಂಡ FIH ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ನಾಯಕ ವಿವೇಕ್ ಪ್ರಸಾದ್ ಸಾಗರ್, ಮಣಿಂದರ್ ಸಿಂಗ್, ಶಾರದಾನಂದ ತಿವಾರಿ, ಹುಂಡಾಲ ಅರಿಜೀತ್ ಸಿಂಗ್ ಮತ್ತು ಅಭಿಷೇಕ್ ಲಕ್ರಾ ಅವರು ಗೋಲು ಬಾರಿಸಿದರು. ಸಂಜಯ್ ಮತ್ತು ಮುಂದಾಲ ಹರಿಜೀತ್ ಸಿಂಗ್ ಗಳಿಸಿದ ಹ್ಯಾಟ್ರಿಕ್ ಗೋಲು ಹಾಗೂ ಉತ್ತಮ ಸಿಂಗ್ ಗಳಿಸಿದ ಎರಡು ಗೋಲುಗಳಿಂದ ಭಾರತ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಪಂದ್ಯದ ಆರನೇ ನಿಮಿಷದಲ್ಲಿಯೇ ಗೋಲು ಬಾರಿಸುವ ಮೂಲಕ ಖಾತೆ ತೆರೆದ ಭಾರತ ತಂಡ ಕೆನಡಾ ತಂಡದ ದುರ್ಬಲ ರಕ್ಷಣಾ ಪಡೆಗೆ ಯಾವುದೇ ಅವಕಾಶ ನೀಡದಂತೆ ಗೋಲುಗಳ ಸುರಿಮಳೆ ಸುರಿಸುವ ಮೂಲಕ ಭಾರತದ ಆಟಗಾರರು ಮೇಲುಗೈ ಸಾಧಿಸಿದರು.