Department of Youth Empowerment and Sports ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ 2025-26 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.02 ಮತ್ತು 3 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್, ವಾಲಿಬಾಲ್, ಫುಟ್ಬಾಲ್, ಖೋಖೋ, ಕಬಡ್ಡಿ, ಬಾಸ್ಕೆಟ್ಬಾಲ್, ಕುಸ್ತಿ, ಷಟಲ್ ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ ಮತ್ತು ಆಯ್ಕೆಯ ಕ್ರೀಡೆಗಳು ಟೆನ್ನಿಸ್, ನೆಟ್ಬಾಲ್, ಈಜು ಕ್ರೀಡೆಗಳನ್ನು ಆಯೋಜಿಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯುಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವೀತಿಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದವರು ಮಾತ್ರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.
Department of Youth Empowerment and Sports ಅರ್ಹತೆ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ವೆಬ್ಸೈಟ್ https://dasaracmcup-2025.etrpindia.com/KA-sports/ ಮೂಲಕ ಸೆ.01 ರೊಳಗಾಗಿ ಕಡ್ಡಾಯವಾಗಿ ಹೆಸರನ್ನು ನೋಂದಾಯಿಸಿಕೊಳ್ಳುವುದು. ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣಭತ್ಯೆ ಮತ್ತು ದಿನಭತ್ಯೆ ಪಡೆಯಲು ನೆಹರೂ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಾಲೂಕುಗಳಿಂದ ಭಾಗವಹಿಸುವ ವಿಜೇತ ಕ್ರೀಡಾಪಟುಗಳಿಗೆ ಶಿವಮೊಗ್ಗಕ್ಕೆ ಬಂದುಹೋಗುವ ಸಾಮಾನ್ಯ ಪ್ರಯಾಣಭತ್ಯೆ ನೀಡಲಿದ್ದು ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಟೆನ್ನಿಸ್, ನೆಟ್ಬಾಲ್ ಮತ್ತು ಈಜು ಕ್ರೀಡೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಸ್ಪರ್ಧೆಯಾಗಿ ಸಂಘಟಿಸಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಹಿತಿಗಾಗಿ ಇಲಾಖೆಯ ದೂ.ಸಂ.: 08182-223328 ನ್ನು ಸಂಪರ್ಕಿಸುವುದು
Department of Youth Empowerment and Sports ಸೆಪ್ಟೆಂಬರ್ 1 & 2. ರಂದು ನೆಹರೂ ಕ್ರೀಡಾಂಗಣದಲ್ಲಿ 2025-26 ನೇ ಸಾಲಿನ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ
Ganesh festival ಆಗಸ್ಟ್ 27. ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ & ಮಾಂಸ ಮಾರಾಟ ನಿಷೇಧ
Ganesh festival ಆ.27 ರಂದು ಗಣೇಶ ಹಬ್ಬದ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.
Ganesh festival ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಆ.27 ರಂದು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.
Shivamogga City Corporation ಸೆಪ್ಟೆಂಬರ್ 1, ಶಿವಮೊಗ್ಗ ನಗರ ಪಾಲಿಕೆ ‘ಮಹಿಳಾ ದಸರಾ ‘ಬಗ್ಗೆ ಪೂರ್ವಭಾವಿ ಸಭೆ
Shivamogga City Corporation ಮಹಾನಗರಪಾಲಿಕೆ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ-2025 ರ ಅಂಗವಾಗಿ ಸಾಂಸ್ಕೃತಿ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳು ಹಾಗೂ ಸ್ಥಳಿಯ ಸಂಸ್ಥೆಗಳಿAದ ಸೆ.1 ರಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
ಸೆ.24 ರಂದು ಕುವೆಂಪು ರಂಗಮಂದಿರಲ್ಲಿ ಮಹಿಳಾ ದಸರಾದ ಸಮಾರೋಪ ಸಮಾರಂಭ ಹಾಗೂ ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳು ಹಾಗೂ ಸ್ಥಳಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.
ಸೆ.10 ರಂದು ನಗರದ ವೀರಶೈವ ಕಲ್ಯಾಣ ಮಂದಿರ ಮತ್ತು ನಿಜಲಿಂಗಪ್ಪ ಸಭಾಭವನ ಆವರಣದಲ್ಲಿ ಮಹಿಳೆಯರಿಗಾಗಿ ವೈಕ್ತಿಕಕ ಸ್ಪರ್ಧೆಗಳಾದ ಕಡ್ಡಿಯಲ್ಲಿ ಬಳೆತೆಗೆದು ಹಾಕುವುದು, ಬೆಂಕಿ ಪೊಟ್ಟಣದ ಕಡ್ಡಿಯಲ್ಲಿ ಎಬಿಸಿಡಿ ಜೋಡಿಸುವುದು, ಹೇರ್ಸ್ಟೆöÊಲ್ ಸ್ಪರ್ಧೆ, ಉರಗ ನಡಿಗೆ ಸ್ಪರ್ಧೆ, ಗುಂಪು ಸ್ಪರ್ಧೆಗಳಾದ ದುರ್ಗಾದೇವಿ ಅಲಂಕಾರ, ಬಾಲ್ಪಾಸ್ ಮಾಡುವುದು, ಅಂತ್ಯಾಕ್ಷರಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
Shivamogga City Corporation ಅ.16 ರಂದು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಮಿಷನ್ ಸುರಕ್ಷಾ ಅಡಿಯಲ್ಲಿ ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳಿAದ ಬೃಹತ್ ಮಹಿಳಾ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಾಥಾದಲ್ಲಿ ವಿಶೇಷ ತೊಡುಗೆ ತೊಟ್ಟು ಬಂದಲ್ಲಿ ವಿಶೇಷ ಬಹುಮಾನ ನೀಡಲಾಗುತ್ತದೆ. ಹಾಗೂ ಸಂ ಫ್ರಂ ಸ್ವ (ಸಂಸಾರವೇ ಸ್ವರ್ಗ) ಎಂಬ ಕುಟುಂಬದ ಐದು ಜನ ಸದಸ್ಯರನ್ನೊಳಗೊಂಡ ವಿಶೇಷ ಸ್ವರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಮುದಾಯ ವ್ಯವಹಾರಿಕ ಅಧಿಕಾರಿ ಹಾಗೂ ಮಹಿಳಾ ದಸರಾ ಸಮಿತಿ-2025 ರ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
Bharat Career Connect Solutions ಪ.ಜಾ/ಪ.ಪಂಗಡಗಳ ಅಭ್ಯರ್ಥಿಗಳಿಗೆ ಉಚಿತ ಜನರಲ್ ಡ್ಯೂಟಿ ಅಸಿಸ್ಟೆಂಟ್ ತರಬೇತಿ
Bharat Career Connect Solutions ಭಾರತ್ ಕೆರಿಯರ್ ಕನೆಕ್ಟ್ ಸೊಲ್ಯೂಶನ್ಸ್ ಸಹಯೋಗದಲ್ಲಿ ಅಪೋಲೊ ಮೆಡ್ ಸ್ಕಿಲ್ಸ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 6 ತಿಂಗಳು ಉಚಿತ ಜನರಲ್ ಡ್ಯೂಟಿ ಅಸಿಸ್ಟೆಂಟ್ ತರಬೇತಿಯನ್ನು ಬೆಂಗಳೂರಿನಲ್ಲಿ ನೀಡಲಾಗುತ್ತದೆ.
ತರಬೇತಿ ಪಡೆಯಲು 18 ರಿಂದ 30 ವರ್ಷದ ವಯಸ್ಸಿನವರಾಗಿಬೇಕು. ಹಾಗೂ ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರಬೇಕು.
ತರಬೇತಿ ನಂತರ ಆಸ್ಪತ್ರೆ ಹಾಗೂ ಆರೈಕೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲಸಗಳನ್ನೊಳಗೊಂಡ ಆಸ್ಪತ್ರೆ, ವೃದ್ದಾಶ್ರಮ ಹಾಗೂ ಹಿರಿಯರ ಆರೈಕೆ ಕೇಂದ್ರಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ.
Bharat Career Connect Solutions ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂ.ಸಂ: 953560288, 6362902311, 6362902311, 6362902335 ಗೆ ಸಂಪರ್ಕಿಸಬಹುದು ಎಂದು ಭಾರತ್ ಕೆರಿಯರ್ ಕನೆಕ್ಟ್ ಸೊಲ್ಯೂಶನ್ಸ್ ತಿಳಿಸಿದೆ.
Shimoga District Horticulture ಹಾಫ್ ಕಾಮ್ಸ್ ಚುನಾವಣಾ ಕರಡು ಮತದಾರರ ಪಟ್ಟಿ ಪ್ರಕಟ. ಆಕ್ಷೇಪಣೆ ಸಲ್ಲಿಸಲು ಅವಕಾಶ
Shimoga District Horticulture ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿ., (ಹಾಪ್ಕಾಮ್ಸ್)ದ ಚುನಾವಣೆಯು ಅಕ್ಟೋಬರ್ 26 ರಂದು ನಡೆಯಲಿದ್ದು, ಕರಡು ಮತದಾರರ ಪಟ್ಟಿಯನ್ನು ಕಚೇರಿಯ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಲಾಗಿದೆ. ಈ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಅ.03 ರ ಸಂಜೆ 4.30 ರೊಳಗೆ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ದೂರಿನ ಮೂಲಕ ಸಲ್ಲಿಸಬಹುದೆಂದು ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ
Gauri Festival ಗಾಂಧಿ ಬಜಾರಿನ ಬಸವೇಶ್ವರ ದೇಗುಲದಲ್ಲಿ ಶ್ರದ್ಧಾಭಕ್ತಿಯಿಂದಗೌರಿ ಪೂಜೆ
Gauri Festival ಗೌರಿ ಹಬ್ಬದ ಅಂಗವಾಗಿ ಗಾಂಧಿ ಬಜಾರ್ ನ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವೀರಶೈವ ಲಿಂಗಾಯತ ಸೇವಾ ಸಮಾಜದಿಂದ ಗೌರಿ ಹಬ್ಬ ವನ್ನು ಗೌರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರು ಹಾಗೂ ನಿಕಟಪೋರ್ವ ಕಾರ್ಪೊರೇಟರ್ ಆದ ಅನಿತಾ ರವಿಶಂಕರ್. ಮುರುಳೇಶ್.. ಉಪಾಧ್ಯಕ್ಷರಾದ ಶಾಂತ ಆನಂದ್. ನಿರ್ದೇಶಕರಾದ ರತ್ನಮ್ಮ ಜೆ. ಸುಜಾಲ ಅವಿನಾಶ್. ಸುರೇಖಾ ಮುರುಳೇಶ್ ಉಮಾ. ಪುಟ್ಟ ಮಯ. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಜಿ ವಿಜಯಕುಮಾರ್.. ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷ. ಎಲ್ಎಂ ಮೋಹನ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
Major Dhyan Chand ಮೇ.ಧ್ಯಾನ್ ಚಂದ್ ಸ್ಮರಣಾರ್ಥ ಆಗಸ್ಟ್ 29 ರಿಂದ 31 ವರೆಗೆ ಕ್ರೀಡಾಕೂಟ
Major Dhyan Chand ಮೇಜರ್ ಧ್ಯಾನ್ಚಂದ್ರವರ ಜನ್ಮ ದಿನಾಚರಣೆ ಪ್ರಯುಕ್ತ ಹಾಗೂ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆ.29 ರಿಂದ 31 ರವರೆಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಆ.29 ರಂದು ನೆಹರು ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ಹಾಕಿ ಪೆನಾಲ್ಟಿ ಶೂಟೌಟ್ ಹಾಗೂ ಸಂಜೆ 4.30 ಕ್ಕೆ ಹಗ್ಗಜಗ್ಗಾಟ ಕ್ರೀಡೆ ನಡೆಯಲಿದೆ. ಪುರುಷರು ಮತ್ತು ಮಹಿಳೆಯರು ಒಳಗೊಂಡಂತೆ ಹಾಕಿ ಪೆನಾಲ್ಟಿ ಶೂಟೌಟ್ಗೆ 6 ಮಂದಿ ಹಾಗೂ ಹಗ್ಗಜಗ್ಗಾಟಕ್ಕೆ 8 ಮಂದಿ ಸ್ಪರ್ಧಿಗಳು ಭಾಗವಹಿಸಬಹುದು.
ಈ ಕ್ರೀಡೆಗೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ.
ಆ.30 ರಂದು ಸಂಜೆ 10.30ಕ್ಕೆ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಚರ್ಚಾ ಸ್ಪರ್ಧೆ ಆಯೋಜಿಸಿದ್ದು, 16 ವರ್ಷ ಮೇಲ್ಪಟ್ಟ ಯುವಕ/ಯುವತಿಯರು ಭಾಗವಹಿಸಬಹುದು.
ಆ.31 ರಂದು ಬೆಳಿಗ್ಗೆ 6.30ಕ್ಕೆ ನೆಹರು ಕ್ರೀಡಾಂಗಣದಲ್ಲಿ ಸೈಕ್ಲೋಥಾನ್ ಹಾಗೂ ಬೆಳಗ್ಗೆ 10.30 ಕ್ಕೆ ಕ್ರೀಡಾ ಸಂಕೀರ್ಣ ಗೋಪಾಳದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಟೇಬಲ್ ಟೆನ್ನಿಸ್ ಆಯೋಜಿಸಲಾಗಿದೆ.
Major Dhyan Chand ಸೈಕ್ಲೋಥಾನ್ಗೆ 16 ವರ್ಷ ಮೇಲ್ಪಟ್ಟ ಯುವಕ/ಯುವತಿಯರು ಭಾಗವಹಿಸಲು ಅವಕಾಶವಿದೆ. ಹಾಗೂ ಪುರುಷ ಮತ್ತು ಮಹಿಳೆಯರಿಗೆ ಟೇಬಲ್ ಟೆನ್ನಿಸ್ನಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಯಾವುದೇ ವಯಸ್ಸಿನ ನಿರ್ಬಂಧವಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:9845863549, 7619638472 ಗೆ ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Klive Special Article ಹೃನ್ಮನಗಳಿಗೆ ರಸದೌತಣ ನೀಡಿದ ” ನಾಟ್ಯಾರಾಧನೆ “
ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.
Klive Special Article ವಿಸ್ಮಯ ಲೋಕಕ್ಕೆ ಕೊಂಡೊಯ್ದ ನಾಟ್ಯಾರಾಧನೆ
ನಾಟ್ಯಾರಾಧನಾ-14 ಸಹೃದಯರ ಮನದಲ್ಲಿ ಸದಾ ಉಳಿಯುವಂತೆ ಮೂರು ದಿನದ ಕಾರ್ಯಕ್ರಮವೂ ಸಹ ಬಹಳ ವಿಶೇಷವಾಗಿ ಆಯೋಜನೆಯಾಗಿತ್ತು. ಹೃನ್ಮನಗಳಿಗೆ ರಸದೌತಣ ನೀಡಿದ ಈ ಆಯೋಜನೆ ಶಿವಮೊಗ್ಗದ ಜನತೆಗೆ ಒದಗಿದ ಮಹಾಭಾಗ್ಯವೇ ಸರಿ.
ಮೊದಲ ದಿನ ದಾಸರ ಪದಗಳನ್ನು ನಾಟ್ಯಾಲಯದ ವಿದ್ಯಾರ್ಥಿಗಳು ಬಹು ಸುಂದರವಾಗಿ ಪ್ರದರ್ಶನ ನೀಡಿ ಗಮನ ಸೆಳೆದರು. ಅಂದಿನ ಆಯ್ಕೆಯ ಪ್ರತಿಯೊಂದು ಗೀತೆಯೂ ಸಹ ಅಷ್ಟೇ ಸೊಗಸಾಗಿತ್ತು. ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೂ ಇದ್ದ ನಾಟ್ಯಾಲಯದ ವಿದ್ಯಾರ್ಥಿಗಳು ಎಲ್ಲರಿಗೂ ಮನಸ್ಸಿಗೆ ಮುದ ತರುವಂತೆ ನೃತ್ಯ ಮಾಡಿ ಭಕ್ತಿ ಸುಧಾರಸದ ಔತಣ ನೀಡಿದರು. ಅಂದಿನ ವೈಶಿಷ್ಟ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಕದನ ಕುತೂಹಲ ರಾಗದಲ್ಲಿದ್ದ ತಿಲ್ಲಾನದ ನೃತ್ಯ. ವಿಶೇಷವಾಗಿ ಈ ರಾಗವೇ ಒಂದು ಸಂತೋಷದ ಸಂಕೇತ ಎಲ್ಲರ ಮನಸ್ಸಿಗೂ ನಾಟುವಂತಹದ್ದು ಆಕರ್ಷಕ ಸ್ವರ ಸಂಚಾರ ಹೊಂದಿ ತೀವ್ರ ಚುರುಕು ಹರ್ಷಭರಿತ ಮತ್ತು ಆನಂದ ತುಂಬಿದ ರಾಗಕ್ಕೆ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ರಮಣೀಯವಾಗಿ ನರ್ತಿಸಿದರು.
ಎರಡನೆಯ ದಿನ ಆರಂಭದ ನೃತ್ಯ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್ ಅವರ ಏಕವ್ಯಕ್ತಿ ನೃತ್ಯ ಪ್ರಸ್ತುತಿಯಾದ ರಾಧಾ ಮಾಧವ ವಿಲಾಸ. ಇದನ್ನು ಜಯದೇವನ ಅಷ್ಟಪದಿಯ ಶೃಂಗಾರಮಾಲೆಯಿಂದ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸಹನಾ ಅಂದು ಸುಮಾರು ಅರ್ಧ ಗಂಟೆಗಳ ನೃತ್ಯ ಮಾಡಿದರೆ ಅವರ ಭಾವ, ಅಭಿನಯ ನೃತ್ಯ ಎಲ್ಲವೂ ಎಲ್ಲರನ್ನೂ ಸೆಳೆದು ಸಮಯದ ಪರಿವೆಯೇ ಇಲ್ಲದಂತೆ ಮಾಡಿತೆಂದರೆ ತಪ್ಪಾಗಲಾರದು. ಜಯದೇವ ವಿರಚಿತ ಗೀತ ಗೋವಿಂದದಲ್ಲಿ ಬರುವ ಪ್ರಸಿದ್ಧ ಅಷ್ಟಪದಿಗಳಲ್ಲಿ ಒಂದಾದ ಕೃತಿ ಯಾಹಿ ಮಾಧವ ಯಾಹಿ ಕೇಶವದಲ್ಲಿ ರಾಧೆಯ ಮನೋಭಾವವನ್ನು ಜಯದೇವನು ಬಹಳ ಸೂಕ್ಷ್ಮವಾಗಿ ವರ್ಣಿಸಿದರೆ ಅದನ್ನು ಸಹನಾ ಅವರು ಅಷ್ಟೇ ಚೆನ್ನಾಗಿ ಅಭಿನಯಿಸಿದರು. ಇಲ್ಲಿ ಹೇಗೆ ಜೀವಾತ್ಮ ಸ್ವರೂಪಿಯಾದ ರಾಧೆ ಪರಮಾತ್ಮ ಸ್ವರೂಪಿಯಾದ ಕೃಷ್ಣ ತನ್ನಲ್ಲಿ ಸದಾ ನೆಲೆಸಬೇಕೆಂದು ಬಯಸುವಂತೆ ನಮಗೂ ಇನ್ನಷ್ಟು ಸಮಯ ಅವರ ನೃತ್ಯ ಬೇಕೆಂದು ಬಯಸುವಂತೆ ಮಾಡಿದ್ದಂತೂ ಸುಳ್ಳಲ್ಲ.
ನಂತರ ನಾಟ್ಯಾಲಯದ ವಿದ್ಯಾರ್ಥಿಗಳು ಅಭಂಗ್ ನೃತ್ಯ ಮಾಧುರ್ಯವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟರು. ಅದಕ್ಕೂ ಪ್ರಮುಖವಾಗಿ ಅಂದಿನ ಹಾಡುಗಳ ಆಯ್ಕೆ ವಿಶೇಷವಾಗಿತ್ತು ಅದರಲ್ಲೂ ಕನ್ನಡದ ಗೀತೆಯಾದ ಟೊಂಕದ ಮೇಲೆ ಕೈ ಇಟ್ಟು….ಎನ್ನುವುದಂತು ಅತ್ಯಾಪ್ತವಾಗಿತ್ತು. ಮಕ್ಕಳಂತೂ ಚಂದದ ಪ್ರಸ್ತುತಿ ನೀಡಿ ಮನಸೆಳೆದರು.
Klive Special Article ಬಹು ಮುಖ್ಯವಾಗಿ ಹೇಳಲೇಬೇಕಾದದ್ದು ರಾಷ್ಟ್ರೀಯ ನೃತ್ಯ ಮಹೋತ್ಸವದ ಕೇಂದ್ರವಾಗಿ ಆಯೋಜನೆಯಾದ ಒಡಿಸ್ಸಿ ಮತ್ತು ಬಿಹು ನೃತ್ಯದ ಕುರಿತಾಗಿ. ಒರಿಸ್ಸಾದ ರುದ್ರಾಕ್ಷ ಫೌಂಡೇಶನ್ ಅವರು ಭಾರತದ ಎಂಟು ಶ್ರೇಷ್ಠ ಶಾಸ್ತ್ರೀಯ ನೃತ್ಯಗಳಲ್ಲಿ ಪ್ರಸಿದ್ಧವಾದ ನೃತ್ಯ ಶೈಲಿಯನ್ನು ನಮ್ಮೆದುರಿಗೆ ಅಭಿನಯಿಸುತ್ತಿದ್ದರೆ ಅದರಲ್ಲಿ ನಾವೇ ಲೀನವಾದ ಭಾವ ಉಂಟಾಗಿ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು. ಆ ಸೊಬಗು, ಆ ಒನಪು, ಒಯ್ಯಾರ, ಲಯಬದ್ಧತೆ, ಲಾಸ್ಯ, ಭಾವ ಪ್ರಧಾನವಾದ ಶೈಲಿ ಇವುಗಳನ್ನು ಅಭಿನಯಿಸಿದ ರೀತಿಯಂತೂ ಮನಮೋಹಕವಾಗಿತ್ತು. ಸ್ತ್ರೀ ಪುರುಷರಿಬ್ಬರ ಅಭಿನಯ ನೃತ್ಯ ಲಾಲಿತ್ಯ, ಶೃಂಗಾರ ಎಲ್ಲವೂ ಮೈ ನವಿರೇಳಿಸುವಂತಿತ್ತು. ಒಬ್ಬರಿಗೊಬ್ಬರು ಒಂದಿನಿತು ಸ್ಪರ್ಧಿಸದೆ ಮೂಡಿಸಿದ ಶೃಂಗಾರ ಭಾವ ರೋಮಾಂಚನ ತಂದಿತ್ತು. ಸೂರ್ಯ ನಮಸ್ಕಾರವೇ ಮೊದಲಾಗಿ, ಕಾಳಿಯ ನೃತ್ಯದವರೆಗೂ ಎಲ್ಲವೂ ನಮ್ಮನ್ನ ಕಣ್ಣೆವೆ ಇಕ್ಕದೆ ನೋಡುವಂತೆ ಮಾಡಿತ್ತು. ಎಲ್ಲರೂ ಚಂದದ ನೃತ್ಯ ಮಾಡುವವರೇ, ಯಾರನ್ನು ನೋಡುವುದು ಯಾರನ್ನು ಬಿಡುವುದೆಂದು ತಿಳಿಯಲಿಲ್ಲ. ನಿಜಕ್ಕೂ ತ್ರಿಭಂಗಿಯ ಭಂಗಿ, ಶೈಲಿಯ ಲಲಿತತೆ ಮತ್ತು ಭಕ್ತಿ ಭಾವನೆಗಳಿಂದ ತುಂಬಿ ನಮ್ಮೆಲ್ಲರನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ದ ಅದ್ಭುತ ಶಾಸ್ತ್ರೀಯ ನೃತ್ಯವಾಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.
ನಂತರ ಅಸ್ಸಾಂನ ರಂಗಧಾಲಿ ಡ್ಯಾನ್ಸ್ ರಾಜ್ಯದ ಸಾಂಸ್ಕೃತಿಕ ಹಾಗೂ ಜಾನಪದ ಶೈಲಿಯನ್ನು ಹೊಂದಿದ ನೃತ್ಯವನ್ನು ಮಾಡಿದರು. ಅದು ಸಹ ಹರ್ಷೋಲ್ಲಾಸಗಳಿಂದ ಕೂಡಿದ್ದೇ ಅಲ್ಲದೆ ವೇಗದ ಹೆಜ್ಜೆ ಕಮರು ಮತ್ತು ಕತ್ತಿನ ನಾಜೂಕಿನ ಚಲನೆ ಚಪ್ಪಾಳೆಗಳಿಂದ ಕೂಡಿದ ನೃತ್ಯ ಜನಮನಾಕರ್ಷಿಸಿತು.
ಒಟ್ಟಿನಲ್ಲಿ ಮೂರು ದಿನಗಳ ಸಾಂಸ್ಕೃತಿಕ ಹಬ್ಬ ಯಶಸ್ವಿಯಾಗಿ ಸುಸಂಪನ್ನವಾಯಿತು. ಇದು ಕಲೆಯ ಮೂಲಕ ದೇವರತ್ತ ಸಾಗುವ ಸುಂದರ ಮಾರ್ಗವಾಯಿತು. ಹೀಗಾಗಿ ನಾಟ್ಯಾರಾಧನೆ ಎಂದರೆ ಜೀವನವನ್ನು ಕಲೆಗೊಳಿಸಿ, ಕಲೆಗೆ ದೇವರ ರೂಪ ನೀಡುವ ಶ್ರೇಷ್ಠ ಸಾಧನವಾಗಿರುವುದಂತೂ ಸತ್ಯ ಹಾಗಾಗಿ ಇದರ ಆಯೋಜಕರಿಗೊಂದು ಅನಂತಾನಂತ ವಂದನೆಗಳು ಸಲ್ಲಲೇ ಬೇಕು.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು, ಪೇಸ್ ಕಾಲೇಜ್
ಶಿವಮೊಗ್ಗ.
ಚಿತ್ರಕೃಪೆ: ಆದಿತ್ಯ ಪ್ರಸಾದ್ ಎಮ್.
Linganamakki Dam ಜಲಾಶಯದ ನೀರನ್ನ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತದೆ- ಮಧು ಬಂಗಾರಪ್ಪ
Linganamakki Dam ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು , ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಹಾಗೂ ಇತರೆ ಮುಖಂಡರು ಭಾನುವಾರ ಲಿಂಗನಮಕ್ಕಿ ಜಲಾಶಯದ ಗೇಟ್ ಗಳನ್ನು
ತೆರೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗೇಟ್ ಗಳನ್ನು ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು ಮಾತನಾಡಿ, 5 ಗೇಟ್ ಗಳ ಮೂಲಕ ಸುಮಾರು 3.5 ಕ್ಯೂಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಗಿದೆ.
ಜಲಾಶಯದ ನೀರನ್ನು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಸಾಗರ, ಸೊರಬ ತಾಲ್ಲೂಕುಗಳ ಗ್ರಾಮಗಳು, ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಬಳಕೆ ಮಾಡಲಾಗುವುದು. ಹಾಗೂ ಶಿರಸಿ ,ಸಿದ್ದಾಪುರಗಳಿಗೂ ನೀರನ್ನು ಕೇಳಲಾಗುತ್ತಿದೆ.
ಲಿಂಗನಮಕ್ಕಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್ಟ್ ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕವಾಗಿದ್ದು ವಿದ್ಯುತ್ ಅಭಾವವನ್ನು ನೀಗಿಸಿದೆ ಎಂದರು.
Linganamakki Dam ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಮಾತನಾಡಿ ಜಲಾಶಯ ಆರಂಭ ೧೯೬೪ ಯಿಂದ ಇಲ್ಲಿಯವರೆಗೆ ೨೧ ಬಾರಿ ನೀರನ್ನು ನದಿಗೆ ಬಿಡಲಾಗಿದೆ. ಈ ನೀರನ್ನು ಜಿಲ್ಲೆಯ ಕುಡಿಯುವ ನೀರಿಗೆ ಹೊರತಾಗಿ ನೀರಾವರಿ ಸೇರಿದಂತೆ ಬೇರೆ ಯಾವ ಯೋಜನೆಗೂ ಬಳಸಿಕೊಳ್ಳಲಾಗುವುದಿಲ್ಲ ಎಂದರು.
5 ಗೇಟ್ ಗಳನ್ನು ತೆರೆದು 3500 ಕ್ಯುಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಯಿತು.
Open University Mysore ಆಗಸ್ಟ್ 28. ಮೈಸೂರಿನಲ್ಲಿ 5 ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನಕ್ಕೆ ಬನ್ನಿ- ಎನ್.ಮಾಲತೇಶ್
Open University Mysore ಆಗಸ್ಟ್ 28 ಮುಂಜಾನೆ 8 ಗಂಟೆಗೆ ಮುಕ್ತ ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಕುವೆಂಪು ಅವರ ಪುತ್ತಳಿಗೆ ಮಾಲಾರ್ಪಣೆ ನಡೆಯಲಿದೆ. 9 ಗಂಟೆಗೆ ಉಪಹಾರ 9:30ರಿಂದ ನೋಂದಣಿ ಕಾರ್ಯಕ್ರಮ ನಡೆಯಲಿದೆ. 11:30ಕ್ಕೆ ಉದ್ಘಾಟನೆ, 1 ಗಂಟೆಗೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಿರಿಯರಿಗೆ ಗೌರವ ಸಮರ್ಪಣೆ 2:30 ಕ್ಕೆ ಭೋಜನ 3:00ಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಲಿದೆ.
ಎಲ್ಲಾ ಪತ್ರಿಕಾ ಸಂಸ್ಥೆಗಳ ಮಾಲೀಕರಿಗೂ , ಸಂಪಾದಕರಿಗೂ, ಪ್ರಸಾರಂಗ ವಿಭಾಗ ಅಧಿಕಾರಿಗಳಿಗೂ, ರಾಜಕೀಯ ಗಣ್ಯರಿಗೂ ಹಾಗೂ ನಗರ ಜಿಲ್ಲಾ ತಾಲೂಕು ಸಂಘಟನೆಗಳಿಗೆ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ದಿನಪತ್ರಿಕ ವಿತರಕರಿಗೆ ಏಜೆಂಟರಿಗೆ ಪತ್ರಿಕೆ ಹಂಚುವ ಹುಡುಗರಿಗೆ ಸ್ವಾಗತಿಸಲಾಗಿದೆ. Open University Mysore ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು, ಜಿ , ಹರ್ಷ, ಅಜಿದ್ ಉಲ್ಲಾ, ಯುವರಾಜ್, ಉಮೇಶ್, ಮಂಜುನಾಥ್, ಯೋಗೇಶ್, ಶ್ರೀಧರ್, ಮೂಲ ಸಾಬ್, ದುರ್ಗೋಜಿ, ಪ್ರಾಣೇಶ್, ಜಗದೀಶ್, ಪ್ರವೀಣ್, ಸುರೇಶ್, ಗಣೇಶ್, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲೆಂದು ಹಾರೈಸಿದ್ದಾರೆ.
ಸ್ಥಳ ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನ ಹುಣಸೂರು ರಸ್ತೆ , ಮೈಸೂರು
