Thursday, February 19, 2026
Thursday, February 19, 2026
Home Blog Page 190

Linganamakki Dam ನಳನಳಿಸುವ ಜೋಗ ಜಲಧಾರೆ

0

Linganamakki Dam ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಲಿಂಗನಮಕ್ಕಿ ಡ್ಯಾಮ್‌ ಎಲ್ಲ ಗೇಟ್‌ ಓಪನ್‌ ಮಾಡಲಾಗಿದ್ದು , ಜೋಗದ ಲುಕ್‌ ಬದಲಾಗಿದೆ.

ಶರಾವತಿ ನದಿಯಲ್ಲಿ ಪುನಃ ನೀರಿನ ಹರಿವು ಹೆಚ್ಚಾಗಿದ್ದು,
ಲಿಂಗನಮಕ್ಕಿ ಜಲಾಶಯಕ್ಕೆ 47,232 ಕ್ಯೂಸೆಕ್‌ ಒಳ ಹರಿವು ಬಂದಿದೆ.

ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಎಲ್ಲ ರೇಡಿಯಲ್‌ ಗೇಟುಗಳನ್ನು ಓಪನ್ ಮಾಡಲಾಗಿದೆ.

ಜೋಗದ ಎಲ್ಲ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿವೆ.
ಇದರಿಂದ ಜೋಗ ಜಲಪಾತದ ಚಹರೆ ಬದಲಾಗಿದೆ.

Linganamakki Dam ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ

District Consumer Disputes Redressal Commission ಓಲಾ ಸ್ಕೂಟರ್ ಸೇವಾ ನ್ಯೂನತೆ ಪರಿಗಣಿಸಿ, ದೂರುದಾರರ ಪರ ಗ್ರಾಹಕ ಆಯೋಗದ ತೀರ್ಪು

0

District Consumer Disputes Redressal Commission ಶಂಕರಯ್ಯ, ಶಿವಮೊಗ್ಗ ಇವರು ವ್ಯವಸ್ಥಾಪಕರು, ಓಲಾ ರ‍್ವೀಸ್ ಸೆಂಟರ್ ಶಿವಮೊಗ್ಗ, ಎಂ.ಡಿ ಓಲಾ ಎಲೆಕ್ಟಿçಕಲ್ ಟೆಕ್ನಾಲಾಜಿ ಪ್ರೈ..ಲಿ ಬೆಂಗಳೂರು ಹಾಗೂ ವ್ಯವಸ್ಥಾಪಕರು ಓಲಾ ಎಲೆಕ್ಟ್ರಿಕಲ್ ಟೆಕ್ನಾಲಾಜಿ ಪ್ರೈ.ಲಿ ಬೆಂಗಳೂರು ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಎದುರುದಾರರಿಗೆ ಆದೇಶಿಸಿದೆ.
ದೂರುದಾರರು ಆನ್‌ಲೈನ್ ಮೂಲಕ ರೂ.1,51,071 ಪಾವತಿಸಿ ದಿ:26/5/2022 ರಂದು ಒಂದು ಓಲಾ ಎಲೆಕ್ಟಿçಕ್ ಸ್ಕೂಟರನ್ನು ಬುಕ್ ಮಾಡಿದ್ದು, ದಿ:10/6/2022 ರಂದು ಪಡೆದುಕೊಂಡಿರುತ್ತಾರೆ. ಈ ಸ್ಕೂಟರ್ 8 ರ‍್ಷಗಳ ಬ್ಯಾಟರಿ ವಾರಂಟಿ ಮತ್ತು ಇತರೇ ಭಾಗಗಳಿಗೆ ಮೂರು ರ‍್ಷಗಳ ವಾರೆಂಟಿ ಹೊಂದಿರುತ್ತದೆ. ಸ್ಕೂಟರ್‌ನ್ನು ವಶಕ್ಕೆ ಪಡೆದ ನಂತರ ದಿ:10/07/2022 ರಂದು ಗಾಡಿ ಸ್ಟರ‍್ಟ್ ಆಗದಿರುವುದರಿಂದ ದಿ:12/7/2022 ರಂದು ರಿಪೇರಿಗಾಗಿ ಬಿಟ್ಟಿದ್ದು ಸಂಸ್ಥೆಯವರು ರಿಪೇರಿ ಮಾಡಿ ನೀಡಿರುತ್ತಾರೆ. ತದನಂತರ ದಿ:9/1/2025 ರಂದು ಪುನಃ ಸ್ಟಾರ್ಟ್ ಆಗದಿರುವುದರಿಂದ 1 ನೇ ಎದುರುದಾರರಿಗೆ ಈ ಬಗ್ಗೆ ತಿಳಿಸಿದ್ದು ಎದುರುದಾರರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ದಿ:18/1/2025 ರಂದು 1 ನೇ ಎದುರುದಾರರ ಬಳಿ ರಿಪೇರಿಗಾಗಿ ಬಿಟ್ಟು ಆನ್‌ಲೈನ್‌ನಲ್ಲಿ ದೂರನ್ನು ದಾಖಲಿಸಿದಾಗ, ದಿ:3/3/2025 ರಂದು ರಿಪೇರಿಗಾಗಿ ರೂ.90,000 ಗಳನ್ನು ಪಾವತಿಸಿದಲ್ಲಿ ರಿಪೇರಿ ಮಾಡುವುದಾಗಿ ತಿಳಿಸಿರುತ್ತಾರೆ.
ಓಲಾ ಸ್ಕೂಟರ್ ಇನ್ನೂ ವಾರಂಟಿ ಅವಧಿಯಲ್ಲಿದ್ದರೂ ರಿಪೇರಿ ಮಾಡದೇ, ಸ್ಕೂಟರ್‌ನ್ನು ತಮ್ಮ ಅಧೀನದಲ್ಲಿಯೇ ಇಟ್ಟುಕೊಂಡಿದ್ದು ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡು ಮೇಲ್ಕಂಡ ದೂರಿಗೆ ಆಕ್ಷೇಪಣೆಯನ್ನು ಸಲ್ಲಿಸಲು 1 ರಿಂದ 3 ರ ವರೆಗಿನ ಎದುರುದಾರರಿಗೆ ನೋಟಿಸ್ ನೀಡಿದ್ದು, ನೋಟಿಸ್ ಜಾರಿಯಾಗಿದ್ದರೂ ಎಲ್ಲಾ ಎದುರುದಾರರು ಗೈರು ಹಾಜರಾಗಿದ್ದರಿಂದ 1 ರಿಂದ 3 ನೇ ಎದುರುದಾರರನ್ನು ಏಕಪಕ್ಷೀಯ ಎಂದು ಪರಿಗಣಿಸಲಾಗಿದೆ.
District Consumer Disputes Redressal Commission ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ , ದಾಖಲಾತಿಗಳನ್ನು ಪರಿಶೀಲಿಸಿ ವಾದವನ್ನು ಆಲಿಸಿ ಎದುರುದಾರರು ಓಲಾ ಸ್ಕೂಟರ್ ವಾರಂಟಿ ಅವಧಿಯಲ್ಲಿದ್ದರೂ ಸಹ ರಿಪೇರಿ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತರ‍್ಮಾನಿಸಿ, 1 ರಿಂದ 3 ನೇ ಎದುರುದಾರರು ದೂರುದಾರರಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ರೂ.67,348 ಗಳಿಗೆ ದಿ:18/1/2025 ರಿಂದ ವರ‍್ಷಿಕ ಶೇ.10 ರ ಬಡ್ಡಿಯನ್ನು ಸೇರಿಸಿ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವರ‍್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪರ‍್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಮತ್ತು 1 ರಿಂದ 3 ನೇ ಎದುರುದಾರರು ರೂ.40,000 ಗಳನ್ನು ಮಾನಸಿಕ ವೇದನೆಗಾಗಿ ಪರಿಹಾರವಾಗಿ ಮತ್ತು ದೂರಿನ ರ‍್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವರ‍್ಷಿಕ ಶೇ.12 ರಂತೆ ಬಡ್ಡಿಯನ್ನು ಸೇರುಸಿ ಪರ‍್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಈ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠ ದಿ:19/8/2025 ರಂದು ಆದೇಶಿಸಿದೆ.

JCI Sahyadri Shivamogga ಜೆಸಿಐ ಮಾರ್ಗದರ್ಶನದಿಂದ ವೃತ್ತಿ ಬದುಕಿನಲ್ಲಿ ಶಿಸ್ತು ಬದ್ಧ ಜೀವನ ಶೈಲಿ- ಬಿ.ಮೋಹನ್

0

JCI Sahyadri Shivamogga ಮೌನವೀಯ ಮೌಲ್ಯಗಳ ಅರಿವು ಮೂಡಿಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಜೆಸಿಐ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಬಿ.ಮೋಹನ್ ಹೇಳಿದರು.

ಜೆಸಿಐ ಸಹ್ಯಾದ್ರಿ ಘಟಕದ ವತಿಯಿಂದ ಸರ್ವ ಪೋಷಕ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಉದ್ಯೋಗಿ ಹಾಗೂ ಶಿಬಿರಾರ್ಥಿಗಳಿಗೆ ಜೆಸಿಐ ಮಹತ್ವ ಕುರಿತು ಉಪನ್ಯಾಸ ನೀಡಿದ ಅವರು, ವೃತ್ತಿ ಹಾಗೂ ಬದುಕಿನಲ್ಲಿ ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಳ್ಳಲು ಜೆಸಿಐ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಜೆಸಿಐ ಸಂಸ್ಥೆ ತನ್ನದೇ ಆದ ವಿಶೇಷ ಮೌಲ್ಯಗಳೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದೆ. ಯುವಜನರಿಗೆ ಹಾಗೂ ಎಲ್ಲ ಕಾರ್ಯಕ್ಷೇತ್ರಗಳನ್ನು ವಿಶೇಷ ತರಬೇತಿಗಳನ್ನು ನೀಡುವುದರ ಮುಖಾಂತರ ಅವರನ್ನು ಜೆಸಿಐ ಸಂಸ್ಥೆಗೆ ಸೇರಿಸಿ ಉತ್ತಮ ಸೇವೆ ಸಲ್ಲಿಸಲು ವೇದಿಕೆ ಒದಗಿಸುತ್ತಿದೆ.

ಜೆಸಿಐ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮಲ್ಲಿನ ಕಾರ್ಯಕ್ಷಮತೆ ಮತ್ತಷ್ಟು ವೃದ್ಧಿಸುತ್ತದೆ ಎಂದು ಹೇಳಿದರು.

ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ.ವಿ.ಗಣೇಶ್ ಮಾತನಾಡಿ, ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯುವಜನರನ್ನು ಜೆಸಿಐ ಸಂಸ್ಥೆಗೆ ಸೇರಿಸುವ ಉದ್ದೇಶವಿದ್ದು, ಈ ವರ್ಷ 1 ಲಕ್ಷ ಸದಸ್ಯರನ್ನು ಜೆಸಿಐ ಸಂಸ್ಥೆಗೆ ಸೇರಿಸುವ ಗುರಿಯನ್ನು ಜೆಸಿಐ ಅಂತರಾಷ್ಟ್ರೀಯ ಅಧ್ಯಕ್ಷರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಪಂಚಾದ್ಯಂತ ಅಭಿಯಾನ ನಡೆಯುತ್ತಿದೆ ಎಂದರು.

JCI Sahyadri Shivamogga ಜೆಸಿಐ ಸಂಸ್ಥೆಗೆ ಸೇರುವುದರ ಮುಖಾಂತರ ಹೊಸ ಸಂಚಲನ ಮೂಡುವವರ ಜೊತೆಗೆ ಬೇರೆ ಬೇರೆ ವೃತ್ತಿಪರರ ಸಂಪರ್ಕ ಹಾಗೂ ಅವರ ಪ್ರತಿಭೆ, ಸೇವಾ ಗುಣಗಳು ಮತ್ತು ಮಾನವೀಯ ಮೌಲ್ಯಗಳ ಪರಿಚಯವಾಗುತ್ತದೆ. ಎಲ್ಲ ಶಿಬಿರಾರ್ಥಿಗಳು ಜೆಸಿಐ ಸಂಸ್ಥೆ ಸೇರಬೇಕು ಎಂದು ತಿಳಿಸಿದರು.
ಜೆಸಿಐ ಸಂಸ್ಥೆ ಸಲ್ಲಿಸುತ್ತಿರುವ ಸೇವೆಗಳ ಬಗ್ಗೆ ಹಾಗೂ ತರಬೇತಿಗಳ ಬಗ್ಗೆ ಮಾಹಿತಿ ನೀಡಲಾಯಿತು.

ಸರ್ವ ಪೋಷಕ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಸುನೀಲ್ ನಲ್ಲೂರು ಹಾಗೂ ಉದ್ಯೋಗಿಗಳು ಉಪಸ್ಥಿತರಿದ್ದರು.

Karnataka Science and Technology ನೀವು ವಿಜ್ಞಾ‌ನ & ತಂತ್ರಜ್ಞಾನದ ವಸ್ತುವುಳ್ಳ ಪುಸ್ತಕ ಪ್ರಕಟಿಸಿದ್ದೀರ? ಈ ಮಾಹಿತಿ ಓದಿ

0

Karnataka Science and Technology ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ವಿಜ್ಞಾನ ವಿಷಯಗಳ ಬರವಣಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳ ಮೇಲೆ ಕನ್ನಡದಲ್ಲಿ ಜನವರಿ – 2023 ರಿಂದ ಡಿಸೆಂಬರ್ 2025ರೊಳಗೆ ಪ್ರಕಟವಾಗುವ ಪುಸ್ತಕಗಳ ಲೇಖಕರಿಂದ “ಶ್ರೇಷ್ಠ ಪುಸ್ತಕ ಪ್ರಶಸ್ತಿ” ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Karnataka Science and Technology ಅರ್ಜಿಗಳನ್ನು ದಿ: 05/01/2026ರೊಳಗಾಗಿ ಅಕಾಡೆಮಿಯ ವಿಳಾಸಕ್ಕೆ ಸಲ್ಲಿಸಬಹುದಾಗಿದ್ದು, ಅರ್ಜಿ ನಮೂನೆ ಮತ್ತು ಮಾರ್ಗಸೂಚಿಗಳನ್ನು ಅಕಾಡೆಮಿಯ ಜಾಲತಾಣ https://kstacademy.in ದಲ್ಲಿ ಪಡೆಯಬಹುದಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್. ತಿಳಿಸಿದ್ದಾರೆ.

CM Siddharamaiah ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯನ್ನು ಕಟ್ಟು ನಿಟ್ಟು ಜಾರಿಗೆ ತರಬೇಕು- ಸಿದ್ಧರಾಮಯ್ಯ

0

CM Siddharamaiah ಪರಿಶಿಷ್ಟ ಜಾತಿ/ಪಂಗಡಗಳ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ನಡೆಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಕಳೆದ ಆರು ತಿಂಗಳಲ್ಲಿ ಶೇ.84 ರಷ್ಟು ಮಾತ್ರ ಪ್ರಕರಣಗಳಲ್ಲಿ ನಿಗದಿತ ಅವಧಿಯ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಶೇ.100 ಪ್ರಕರಣಗಳಲ್ಲಿ 60ದಿನಗಳ ಒಳಗಾಗಿ ಕಡ್ಡಾಯವಾಗಿ ಆರೋಪ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು.

“ಪೊಲೀಸರು ಇದರಲ್ಲಿ ಯಾವುದೇ ನೆಪ ಹೇಳಬಾರದು. ನ್ಯಾಯಾಲಯದಲ್ಲಿ 56 ಪ್ರಕರಣಗಳಲ್ಲಿ ತಡೆಯಾಜ್ಞೆ ಇದ್ದು, ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

  • ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 11ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರಕರಣಗಳ ಸರಿಯಾದ ವಿಚಾರಣೆ ನಡೆಸಿ, ತ್ವರಿತವಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಶಿಕ್ಷೆಯ ಪ್ರಮಾಣ ಶೇ.10ರಷ್ಟಿದ್ದು, ಇದು ಹೆಚ್ಚಾಗಬೇಕು. ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
  • ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.
  • ದೌರ್ಜ್ಯನ್ಯ ಪ್ರಕರಣಗಳಲ್ಲಿ ಅಂಗವೈಕಲ್ಯತೆ ಉಂಟಾದಲ್ಲಿ ನೀಡಲಾಗುವ ವೈದ್ಯಕೀಯ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲನೆ ಮಾಡಲಾಗುವುದು.
  • 2023ರಿಂದ ಕಳೆದ ಮೂರು ವರ್ಷಗಳಲ್ಲಿ ಒಟ್ಟು 6,635 ಪ್ರಕರಣಗಳು ದಾಖಲಾಗಿವೆ. 4912 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. 60 ದಿನಗಳ ಒಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು 4,149 ಪ್ರಕರಣಗಳಲ್ಲಿ ಮಾತ್ರ. ನೋಂದಣಿಯಾದ ಒಟ್ಟು ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ 63% ಪ್ರಕರಣಗಳಲ್ಲಿ ಮಾತ್ರ ದೋಷಾರೋಪಣೆ ಪಟ್ಟಿ ಸಲ್ಲಿಕೆ ಯಾಗಿರುತ್ತದೆ. ಶಿಕ್ಷೆಯಾದ ಪ್ರಕರಣಗಳು ಕೇವಲ 36. ತನಿಖಾ ಹಂತದಲ್ಲಿ ಸುಮಾರು 679 ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು.
  • ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಾಲಯಗಳಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳ ಕುರಿತು ತೀರ್ಪು ಬಂದರೂ, ತೀರ್ಪು ಜಾರಿಗೆ ಯಾಕೆ ಬಾಕಿ ಇದೆ. ಪ್ರಸ್ತುತ ಸುಳ್ಳು ಜಾತಿ ಪ್ರಮಾಣ ಪತ್ರ ಸಾಬೀತಾಗಿರುವ 170 ಪ್ರಕರಣಗಳಲ್ಲಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆದಿರುವುದು ಸಾಬೀತಾದರೆ ಅದನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವಿದ್ದು, ಸಮಗ್ರ ವರದಿಯನ್ನು ಸಲ್ಲಿಸಬೇಕು.
  • CM Siddharamaiah ರಾಜ್ಯದಲ್ಲಿ 33 ಡಿಸಿಆರ್‌ಇ ಪೊಲೀಸ್‌ ಠಾಣೆಗಳನ್ನು ತೆರೆಯಲಾಗಿದ್ದು, ಇಲ್ಲಿ ಸಿಬ್ಬಂದಿ ಕೊರತೆಯಿದ್ದರೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು.
  • ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿ ದೂರು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದೂರಿನಲ್ಲಿ ಸತ್ಯಾಂಶವಿದ್ದರೆ ಮಾತ್ರ ಎಫ್‌ಐಆರ್‌ ದಾಖಲಿಸಬೇಕು.
  • ರಾಜ್ಯಾದ್ಯಂತ ದೇವದಾಸಿಯರ ಸಮೀಕ್ಷೆ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ದೇವದಾಸಿಯರ ಪುನರ್ವಸತಿಗೆ ಹಾಗೂ ಈ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸಲು ಯೋಜನೆ ಜಾರಿಗೊಳಿಸಲಾಗುವುದು. ವಿಶೇಷ ಅನುದಾನ ನೀಡುವ ಬಗ್ಗೆಯೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

•ಬಾಕಿಯಿರುವ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ವಿಷಯದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ. ಸರ್ಕಾರ ದಲಿತರ ಪರವಾಗಿದ್ದು, ದಲಿತರಿಗೆ ಸೂಕ್ತ ನ್ಯಾಯ ಒದಗಿಸಲು ಅಡ್ಡಗಾಲು ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ವಿವರಣೆ: ದಿಲೀಪ್ ನಾಡಿಗ್. ಶಿವಮೊಗ್ಗ

0

ಭಾಗ 3. ಕೆಳದಿ ಮಲೆನಾಡಿನ ಪುಟ್ಟ ಸಂಸ್ಥಾನವೊಂದು ಸಾಮ್ರಾಜ್ಯವಾಗಿ ದೂರದ ದೆಹಲಿ ಸುಲ್ತಾನನಿಗೂ ತೊಡೆನಡುಗುವಂತೆ ಮಾಡಿದ ಕೀರ್ತಿ ಕೆಳದಿ ಅರಸರದ್ದು. ವಿಜಯನಗರ ಪತನಾನಂತರ ಸ್ವತಂತ್ರ ಆಳ್ವಿಕೆಯೊಂದಿಗೆ ಪ್ರವರ್ಧಮಾನಕ್ಕೆ ಬಂದ ಸಂಸ್ಥಾನವೆಂದರೆ ಕೆಳದಿ. ಇನ್ನೂರ ಅರವತ್ತು ವರ್ಷಗಳ ಕಾಲ ಅಸ್ತಿತ್ವ ದಲ್ಲಿದ್ದ ಸಾಮ್ರಾಜ್ಯ ಸಾಹಿತ್ಯ, ಕಲೆ, ಧರ್ಮ, ವಾಣಿಜ್ಯದ ಬೆಳವಣಿಗೆಗೆ ಅಭೂತಪೂರ್ವ ಕೊಡುಗೆ ನೀಡಿತ್ತು. ಕೆಳದಿ ವಂಶದ ಅರಸರಲ್ಲಿ ಅತಿ ಹೆಚ್ಚು ಪ್ರಸಿದ್ದನಾದವನೇ ದೊಡ್ಡಸಂಕಣ್ಣನಾಯಕ. ಸದಾಶಿವನಾಯಕನ (ಸದಾಶಿವ ಸಾಗರ, ಇಂದಿನ ಸಾಗರ ಪಟ್ಟಣದ ನಿರ್ಮಾತೃ) ಮೊದಲನೇ ಪುತ್ರರಾಗಿ ದೊಡ್ಡಸಂಕಣ್ಣನಾಯಕರು ಕ್ರಿ.ಶ. 1546 ರ ಮೇ 5 ರಂದು ಇಕ್ಕೇರಿ ಅರಮನೆಯಲ್ಲಿ ಪಟ್ಟಾಭಿಷಿಕ್ತರಾಗಿ ಅಧಿಕಾರಕ್ಕೆ ಬಂದಂತಹ ಸಂಕಣ್ಣನಾಯಕರು ಮಹಾ ಯೋಧರೂ, ಪರಾಕ್ರಮಿಯೂ, ಆಗಿದ್ದು ಭೋಗ, ತ್ಯಾಗ, ಯೋಗಗಳನ್ನು ಕಂಡವನಾಗಿದ್ದು ಇದರೊಂದಿಗೆ ದಂಡಯಾತ್ರೆ ಕೈಗೊಂಡು ಜಂಬೂರಿನ‌ ಪಾಳೆಯಗಾರ ವಿರೂಪಣ್ಣ ಒಡೆಯರ್ ನನ್ನು ಸೋಲಿಸಿ ಜಂಬೂರನ್ನು, ಉಡುಗಣಿ ಕೋಟೆಯನ್ನು ವಶಪಡಿಸಿಕೊಂಡನು, ಆದರೆ ವಿಜಯನಗರದ ಮಹಾಪರಾಕ್ರಮಿ, ಸಾಮ್ರಾಟ ಅಳಿಯ ರಾಮರಾಯನ ಆದೇಶದಂತೆ ಜಂಬೂರನ್ನು, ಉಡುಗಣಿ ಕೋಟೆಯನ್ನು ವಿರೂಪಣ್ಣ ಒಡೆಯರಿಗೆ ಮತ್ತೆ ಬಿಟ್ಟುಕೊಡಬೇಕಾಯಿತು. Klive Special Article ವಿಜಯನಗರದ ಸಾಮ್ರಾಜ್ಯದ ರಕ್ಷಣೆಗಾಗಿ ದೊಡ್ಡ ಸಂಕಣ್ಣನಾಯಕರು ನೀಡಿದ ನೆರವನ್ನು ‌ ಗುಣವನ್ನು ಮೆಚ್ಚಿ ಸಂಕಣ್ಣನಾಯಕರ ಮಕ್ಕಳಾದ ರಾಮರಾಜ ಮತ್ತು ಕಿರಿಯ ವೆಂಕಟಪ್ಪನಾಯಕರ ಯೋಗಕ್ಷೇಮಕ್ಕಾಗಿ, ಅಳಿಯ ರಾಮರಾಯನು ಹೊಳೆಹೊನ್ನೂರು, ಮಾಸೂರು, ಮಲ್ಲೂರೂ, ಪ್ರದೇಶಗಳನ್ನು ಉಂಬಳಿಯಾಗಿ ನೀಡಿದನು.

ಇದೇ ಸಂಧರ್ಭದಲ್ಲಿ ಅಳಿಯ ರಾಮರಾಯನು ಗೋವೆಯ ಪೋರ್ಚುಗೀಸರೊಂದಿಗೆ ಯುದ್ದ ಘೋಷಿಸಿದಾಗ ಸಂಕಣ್ಣನಾಯಕರು ರಾಮರಾಯನ ಸಹೋದರ ವಿಠಲರಾಯನೊಂದಿಗೆ ಸೇರಿ ಪೋರ್ಚುಗೀಸ್ ರನ್ನು ಸೋಲಿಸಿ ಗೋವೆಯನ್ನು ವಶಪಡಿಸಿಕೊಂಡನು.‌ಇದರಿಂದ ಸಂತೋಷ ಗೊಂಡ ರಾಮರಾಯನು ಸಂಕಣ್ಣನಾಯಕರಿಗೆ ಮಾಳೇನಹಳ್ಳಿ ಹೋಬಳಿಯನ್ನು ಉಂಬಳಿಯನ್ನಾಗಿ ನೀಡಿದ್ದಲ್ಲದೆ ಬೆಲೆ ಬಾಳುವ ರತ್ನಾಭರಣಗಳನ್ನು “ಭುಜಕೀರ್ತಿ” ಎಂಬ ಬಿರುದನ್ನೂ ನೀಡಿ ಸನ್ಮಾನಿಸಿ ಇಕ್ಕೇರಿಗೆ ಬೀಳ್ಕೊಟ್ಟನು.‌ ಇದುವರೆಗೂ ದಂಡಯಾತ್ರೆ ಕೈಗೊಂಡ ದೊಡ್ಡ ಸಂಕಣ್ಣನಾಯಕರಿಗೆ ವೈರಾಗ್ಯ ಬಂದು ತೀರ್ಥ ಯಾತ್ರೆ ಯ ಕಡೆಗೆ ಮನಸ್ಸು ತಿರುಗಿತು.‌ಐಹಿಕ ಭೋಗವಿಲಾಸಗಳಲ್ಲಿ ವಿರಕ್ತಿ ಉಂಟಾಯಿತು. ತೀರ್ಥಯಾತ್ರೆ ಯನ್ನು ಕೈಗೊಂಡ ಸಂಕಣ್ಣನಾಯಕ ದಕ್ಷಿಣ ಭಾರತ, ಉತ್ತರ ಭಾರತದಲ್ಲಿನ ಪುಣ್ಯಕ್ಷೇತ್ರ ಗಳಿಗೆ ಹೊರಟು ನಿಂತು ರಾಜ್ಯಭಾರವನ್ನೆಲ್ಲಾ ತನ್ನ ಸಹೋದರ ಚಿಕ್ಕಸಂಕಣ್ಣನಾಯಕರಿಗೆ ವಹಿಸಿ ಭಸ್ಮ, ರುದ್ರಾಕ್ಷಿಗಳನ್ನು ಧರಿಸಿ ಕಾವಿಯನ್ನುಟ್ಟು ನಾಗಮುರಿ ಖಡ್ಗವನ್ನು ತೆಗೆದುಕೊಂಡು ನಾಲ್ಕುಜನ ಸಹಾಯಕರೊಂದಿಗೆ ನೆಚ್ಚಿನ ಕುದುರೆ ಏರಿ ಯಾತ್ರೆ ಹೊರಟನು. (ನಾಗಮುರಿ ಖಡ್ಗವನ್ನು ಕರ್ನಾಟಕದ ಇತಿಹಾಸದಲ್ಲಿ ರಣಧೀರ ಕಂಠೀರವ, ದೊಡ್ಡಸಂಕಣ್ಣನಾಯಕ, ಶ್ರೀಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ಹೀಗೆ ಕಲವೇ ಮಂದಿ ಬಳಸಿದ ಅಪರೂಪದ ಆಯುಧ. ಇದು ಇಂದಿನ ಬೆಲ್ಟ್ ರೀತಿ ಇದ್ದು ಅದನ್ನು ಸೊಂಟಕ್ಕೆ ಕಟ್ಟಿಕೊಳ್ಳಬಹುದಾಗಿದ್ದು ಎರಡೂ ಭಾಗ ಅಲಗು ಬಹು ಸೂಕ್ಷ್ಮವಾಗಿ ರುತ್ತದೆ. ಈ ಆಯುಧ ಬಳಸುವ ಯೋಧರು ಬಹಳ ತೀಕ್ಷ್ಣ ಮತಿ ಯಾಗಿರಬೇಕಾಗುತ್ತದೆ.) ಮುಂದುವರೆಯುವುದು. ದಿಲೀಪ್ ನಾಡಿಗ್ 6361124316

Swachh Bharat 2.0 ಸಮುದಾಯ ಸಂಚಾಲಕರ ಆಯ್ಕೆಗೆ ಅರ್ಜಿ ಆಹ್ವಾನ

0

Swachh Bharat 2.0 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಡೇ-ನಲ್ಮ್ ನಲ್ಲಿ ಎಂಪಾನೇಲ್ಡ್ ಸ್ವ-ಸ್ವಹಾಯ ಗುಂಪುಗಳ ಮೂಲಕ ಸ್ವಚ್ಛ ಭಾರತ್ 2.0 ಯೋಜನೆಯಡಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು 7 ಸಮುದಾಯ ಸಂಚಾಲಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಸೆ.2 ರ ಸಂಜೆ 5 ಗಂಟೆಯೊಳಗೆ ಮಹಾನಗರಪಾಲಿಕೆ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು ಅಥವಾ ಅಧಿಕೃತವಾಗಿ healthcitycorporation@gmail.com
ಗೆ ಕಳುಹಿಸಬಹುದು. ಅರ್ಜಿಯನ್ನು ಸಲ್ಲಿಸುವಾಗ ಮತದಾರರ ಗುರುತಿನ ಕಾರ್ಡ್, ಆಧಾರ್ ಕಾರ್ಡ್, ಎಂಪಾನೇಲ್ಡ್ ದಾಖಲೆಗಳು, ಶೈಕ್ಷಣಿಕ ಅರ್ಹತೆ(ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ), ಡೆ-ನಲ್ಮ್ ಅನುಮೋದನೆ ಪಡೆದ ನಮೂನೆ ಸಲ್ಲಿಸಬೇಕು. ಸೇವಾ ಕಾಮಗಾರಿ ದಸ್ತಾವೇಜಿನ TorRಮತ್ತು SLA https://shivamoggacity.mrc.gov.in
ವೆಬ್‌ಸೈಟ್ ನಲ್ಲಿ ಲಭ್ಯವಿದೆ.
Swachh Bharat 2.0 ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಆಯೋಜಿಸಿ ವಿಷಯದ ತಿಳುವಳಿಕೆ ಸಾಮರ್ಥ್ಯದ ಆಧಾರದ ಮೇರೆಗೆ ಆಯ್ಕೆ ಮಾಡಲಾಗುವುದು ಹಾಗೂ ಸಂದರ್ಶನದ ದಿನಾಂಕವನ್ನು ಪತ್ರದ ಮೂಲಕ ತಿಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:8618215311 ಗೆ ಸಂಪರ್ಕಿಸಬಹುದೆಂದು ಪಾಲಿಕೆ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

Department of Industrial Training and Employment ಆಗಸ್ಟ್ 28 , ಜಿಲ್ಲಾಮಟ್ಟದ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ

0

Department of Industrial Training and Employment ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಆ.28 ರ ಬೆಳಿಗ್ಗೆ 10.30ಕ್ಕೆ ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ-2025 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Department of Industrial Training and Employment ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ವೈಜಗೋಂಡ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸುವರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕಾಳಿದಾಸ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದು, ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆಯ ಆಯುಕ್ತರಾದ ಡಾ.ರಾಗಪ್ರಿಯಾ ಆರ್, ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆಯ ನಿರ್ದೇಶಕರಾದ ಎನ್.ಎಸ್.ಚಿದಾನಂದ ಇವರ ಘನ ಉಪಸ್ಥಿತಿ ಇರಲಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

Veerabhadreshwara Jayanti ಶಿವಮೊಗ್ಗದಲ್ಲಿ ಶ್ರೀವೀರಭದ್ರೇಶ್ವರ ಅಡ್ಡ ಪಲ್ಲಕ್ಕಿ ಉತ್ಸವ

0

Veerabhadreshwara Jayanti ಶಿವಮೊಗ್ಗದಲ್ಲಿ ಶ್ರೀವೀರಭದ್ರೇಶ್ವರ ಅಡ್ಡ ಪಲ್ಲಕ್ಕಿ ಉತ್ಸವ ನಗರದ ಚೌಕಿ ಮಠ ದಲ್ಲಿ ವೀರಭದ್ರೇಶ್ವರ ಸ್ವಾಮಿಯ ಜಯಂತೋತ್ಸವ
ಇಂದು ಬಾದ್ರಪದ ಮಾಸದ ಮೆಾದಲನೇ ಮಂಗಳವಾರ ಶ್ರೀ ವೀರಭದ್ರೇಶ್ವರ ಜಯಂತಿಯು ಶಿವಮೆಾಗ್ಗ ನಗರದ ವೀರಶೈವಕಲ್ಯಾಣ ಮಂಟಪದ ಹಿಂಬಾಗ ಇರುವ ಚೌಕಿಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಹಾಗುಾ ಶ್ರೀ ವೀರಭದ್ರ ದೇವರ ಉತ್ಸವ ಮುಾರ್ತಿಯ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಬಣೆಯಿಂದ ನೆರವೇರಿತು.
ಹಾಗುಾ ಭದ್ರಕಾಳಿ ಅಮ್ಮನವರಿಗೆ ಮಡಿಲಕ್ಕಿ ಸೇವೆ ಹಾಗುಾ ಪುಾಜಾ ಕೈಂಕರ್ಯಗಳು ಜರುಗಿದವು.
ಈ ಸಂದರ್ಭದಲ್ಲಿ ಶಿವಮೆಾಗ್ಗ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ವೈಧ್ಯ ಘಟಕದ ಅದ್ಯಕ್ಷರು ಹಾಗುಾ ವಿದಾನಪರಿಷತ್ ಸದಸ್ಯರು ಆಗಿರುವ ಧನಂಜಯ ಸರ್ಜಿಯವರು ಮಾತನಾಡಿ ನಮ್ಮ ಸಂಘಟನಾ ವೇದಿಕೆಯಿಂದ ಬರುವ ಸೆಪ್ಟಂಬರ್ 9 ನೆೇ ತಾರೀಕು ಮಂಗಳವಾರ ಚೌಕಿಮಠದ ಆವರಣದಲ್ಲಿ ಬೆಳಿಗ್ಗೆ 7.30 ಕ್ಕೆ ಕಾಶಿ ಜಗದ್ಗುರುಗಳವರಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾಪುಾಜೆ ಹಾಗುಾ 11.30 ಕ್ಕೆ ಧರ್ಮಸಭೆ ನಂತರ ಮಾಹಾಪ್ರಸಾದ ವಿನಿಯೆಾೕಗ ಇರುತ್ತದೆ ಆದ್ದರಿಂದ ಭಕ್ತಾದಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವಿನಂತಿಸಿದರು ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳು ಹಾಗುಾ ವೀರಶೈವ ಮುಖಂಡರು ಆದ ಶ್ರೀಯುತ ಯಡಿಯುಾರಪ್ಪರವರು ಆಗಮಿಸಲಿದ್ದಾರೆಂದು ತಿಳಿಸಿದರು.
Veerabhadreshwara Jayanti ಇಂದು ನಡೆದ ಪುಾಜಾ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಉಪಾಧ್ಯಕ್ಷರಾದ ಉಮೇಶ್ ಹಿರೇಮಠ್, ರಮೇಶ್, ಉಮೇಶ್ ಶಿವಮೆಾಗ್ಗ ತಾಲ್ಲುಾಕು ಅಧ್ಯಕ್ಷರಾದ ಬಿ ಜಿ ಧನರಾಜ್ ಕಾರ್ಯದರ್ಶಿಗಳಾದ ಪ್ರಶಾಂತ್, ರಾಜಶೇಖರ್, ಗಂಗಾಧರ್ ಹುಂಬಿ ಹಾಗುಾ ಅನಿತಾ ರವಿಶಂಕರ್ ಮತ್ತು ವೀರಶೈವ ಮುಖಂಡರಾದ ಜಿ ವಿಜಯ್ ಕುಮಾರ್ ಉಪಸ್ಥಿತರಿದ್ದರು.

Department of Youth Empowerment and Sports ಸೈಕ್ಲೋಥಾನ್ ಸ್ಪರ್ಧೆಗೆ ನೋಂದಣಿಗೆ ಆಗಸ್ಟ್ 28‌ ಕೊನೇಯ ದಿನಾಂಕ

0

Department of Youth Empowerment and Sports ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆ.31 ರಂದು ಬೆಳಿಗ್ಗೆ 6.30 ಕ್ಕೆ ನೆಹರು ಕ್ರೀಡಾಂಗಣದಲ್ಲಿ ಸೈಕ್ಲೋಥಾನ್ ಸ್ಪರ್ಧೆ ಆಯೋಜಿಲಾಗಿದೆ.
ಸ್ಪರ್ಧೆಯು ನೆಹರು ಕ್ರೀಡಾಂಗಣದಿಂದ ಆರಂಭವಾಗಿ ಸರ್ಕೀಟ್ ಹೌಸ್, ಬಸ್ ನಿಲ್ದಾಣ, ಹಮೀರ್ ಅಹಮದ್ ಸರ್ಕಲ್, ಹೊಳೆ ಬಸ್ ನಿಲ್ದಾಣ, ಕೆಇಬಿ ಸರ್ಕಲ್, ಮಹಾವೀರ ಸರ್ಕಲ್ ಮಾರ್ಗವಾಗಿ ಸಾಗಿ ನೆಹರು ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಆಸಕ್ತ ಸ್ಪರ್ಧಿಗಳು ಆ.28 ರ ಸಂಜೆಯೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ನೆಹರು ಕ್ರೀಡಾಂಗಣ ಶಿವಮೊಗ್ಗ ಇಲ್ಲಿ ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು.
Department of Youth Empowerment and Sports ಹೆಚ್ಚಿನ ಮಾಹಿತಿಗಾಗಿ ದೂ.ಸಂ:9845863549, 7619638472 ಗೆ ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.