ಗೃಹ ಸಚಿವರಿಂದ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಪರಿಶೀಲನೆ
ಗುಡ್ಡೇಕೊಪ್ಪದಿಂದ ಬೆಜ್ಜವಳ್ಳಿ ಹೋಗುತ್ತಿರುವಾಗ ಮಾರ್ಗ ಮಧ್ಯೆ ಬಿಳುವೆಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದ ಗ್ರಾಮಸ್ಥರನ್ನು ಮಾತನಾಡಿಸಿ ಕಾಮಗಾರಿ ವೀಕ್ಷಿಸಿದ ಗೃಹ ಸಚಿವರು
ಸಕ್ರೆಬೈಲ್ನಲ್ಲಿ ಆನೆಗಳು ಲಾರಿ ಏರಲು ಹಿಂದೇಟು ಹಾಕಿದ್ದು, ಬಳಿಕ ನಡೆದುಕೊಂಡೇ ಶಿವಮೊಗ್ಗ ತಲುಪಿವೆ. ನಗರ ತಲುಪಿದ ಆನೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಪೂಜೆ ಸಲ್ಲಿಸಿ, ಸ್ವಾಗತ ಕೋರಲಾಯಿತು.
ವಾಸವಿ ಶಾಲೆಯ ಬಳಿ ವಾಸ್ತವ್ಯ ಹೂಡಿರುವ ಆನೆಗಳು ಇಂದಿನಿಂದ ಎರಡು ದಿನ ನಡೆಯಲಿರುವ ದಸರಾದಲ್ಲಿ ಭಾಗಿಯಾಗಲಿವೆ. ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಆಯುಕ್ತ ಚಿದಾನಂದ ವಾಟರೆ ಸೇರಿ ಸಿಬ್ಬಂದಿ ಹಾಜರಿದ್ದರು.
ಕೊರೊನಾ ಮಹಾಮಾರಿ ಕಡಿಮೆಯಾದ ನಂತರ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಸಲಗಕ್ಕೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಹಾಗೂ ಭಾರತ್ ಸಿನಿಮಾಸ್ ನಲ್ಲಿ ಸಲಗ ಚಿತ್ರ ತೇರೆ ಕಂಡಿದೆ .ಹಾಗಾಗಿ ದುನಿಯಾ ವಿಜಯ್ ಅಭಿಮಾನಿಗಳು ಸಲಗ ಚಿತ್ರ ನೋಡಿ ಚಿತ್ರದ ನಿರ್ದೇಶನಕ್ಕೆ ಬಹುಪರಾಕ್ ಹೇಳಿದ್ದಾರೆ.
ಚಿತ್ರ ಮಂದಿರದ ಬಳಿ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಚಿತ್ರ ವಿಕ್ಷೀಸಿದ್ದಾರೆ.ಬೆಳಗ್ಗೆ ಶೋ ಮತ್ತು ಮತ್ತು ಮಧ್ಯಾಹ್ನದ ಶೋ ಕೂಡ ಹೌಸ್ ಪುಲ್ ಆಗಿದ್ದು ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಿಸಿರುವ ಚಿತ್ರಕ್ಕೆ ಶಿವಮೊಗ್ಗದ ಜನ ಚಿತ್ರ ನೋಡಿ ಹಾರೈಸಿದ್ದಾರೆ.
ಒಟ್ಟಾರೆ ಕಳೆದೆರೆಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ಯಾಗದೇ ವರ್ಷಗಳೆ ಕಳೆದೊಗಿತ್ತು ಇಂದು ತೇರೆ ಕಂಡಿರುವ ಚಿತ್ರ ಸಲಗಕ್ಕೆ ಶಿವಮೊಗ್ಗ ದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಿನಿ ರಸಿಕರು ಚಿತ್ರ ನೋಡಿ ಏಂಜಾಯ್ ಮಾಡಿದ್ದಾರೆ.