Wednesday, February 18, 2026
Wednesday, February 18, 2026
Home Blog Page 178

Dr. P. Boregowda ಮೈಸೂರಿನಲ್ಲಿ ಡಾ.ಪಿ.ಬೋರೇಗೌಡರ ಕುರಿತ ಗ್ರಂಥ ಲೋಕಾರ್ಪಣಾ ಸಮಾರಂಭ

0

Dr. P. Boregowda ಡಾ. ಪಿ. ಬೋರೇಗೌಡ ಅವರ ಜೀವನಯಾನ, ಆಡಳಿತಾನುಭವ ಮತ್ತು ಕೃಷಿ-ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿದ ಮಹತ್ವದ ಸಾಧನೆಗಳನ್ನು ಒಳಗೊಂಡ ಪ್ರಮುಖ ಕೃತಿಗಳ ಮಹಾ ಬಿಡುಗಡೆ ಸಮಾರಂಭವು 2025ರ ಸೆಪ್ಟೆಂಬರ್ 13ರಂದು, ಶನಿವಾರ ಬೆಳಿಗ್ಗೆ 10.30ಕ್ಕೆ ಮೈಸೂರು ಕಲಾಮಂದಿರದಲ್ಲಿ ಜರುಗಲಿದೆ.

ಡಾ. ಬೋರೇಗೌಡ ಅವರು ತಮ್ಮ ಆಡಳಿತ ಸೇವೆಯಲ್ಲಿ ಅನುಷ್ಠಾನಗೊಳಿಸಿದ ಸುಧಾರಣಾ ಕ್ರಮಗಳು, ಆರೋಗ್ಯ ಕ್ಷೇತ್ರದಲ್ಲಿ ತರಲಾದ ನವೀನ ಪ್ರಯೋಗಗಳು, ನಿವೃತ್ತಿಯ ನಂತರ ಗ್ರಾಮೀಣ ನೆಲದಲ್ಲಿ ಕೈಗೊಂಡ ಕೃಷಿ ಪ್ರಯೋಗಗಳು ಹಾಗೂ ವ್ಯಕ್ತಿಗತ ಜೀವನದಲ್ಲಿ ಎದುರಿಸಿದ ಸಂಕಷ್ಟ-ಹೋರಾಟಗಳ ಕಥನಗಳನ್ನು ಈ ಕೃತಿಗಳು ಒಳಗೊಂಡಿವೆ.

ಇವು ಕೇವಲ ವ್ಯಕ್ತಿ ಜೀವನದ ನೆನಪಲ್ಲ. ಬದಲಾಗಿ ಆಡಳಿತ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಿಗೆ ದಾರಿ ತೋರಿಸುವ ದಾಖಲೆಗಳಾಗಿವೆ.
ಕರ್ನಾಟಕ ವಿಧಾನಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭಕ್ಕೆ ಶೋಭೆ ನೀಡಲಿದ್ದು, ಡಾ. ಎನ್.ಎಸ್. ರಾಮೇಗೌಡ, ಮಾಜಿ ಕುಲಪತಿ, ಕನ್ನಡ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ.

Dr. P. Boregowda ರಾಜ್ಯದ ಹಲವಾರು ಗಣ್ಯರು, ಸಾಹಿತ್ಯ-ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಹಾಗೂ ರೈತ-ಸಾಮಾನ್ಯರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

CM Siddaramaiah ಗಾಂಧಿ ಭಾರತ ಶತಮಾನೋತ್ಸವ ಸಮಾರೋಪ. ರಾಷ್ಟ್ರೀಯ ವಿಚಾರ ಸಂಕಿರಣ- ಸಿದ್ಧರಾಮಯ್ಯ.

0

CM Siddaramaiah ʻಗಾಂಧಿ ಭಾರತ ಶತಮಾನೋತ್ಸವʼ ಸಮಿತಿ ಸಭೆ ನಡೆಸಿ, ಕಾರ್ಯಕ್ರಮಗಳ ಆಯೋಜನೆ ಕುರಿತು ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದೆ.
ಈ ಸಭೆಯ ಮುಖ್ಯಾಂಶಗಳು ಹೀಗಿವೆ;

  • ಗಾಂಧಿ ಭಾರತ ಶತಮಾನೋತ್ಸವ ಅಂಗವಾಗಿ ಕಳೆದ ಡಿಸೆಂಬರ್ 26 ರಂದು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ಡಿಸೆಂಬರ್ 26, 2025 ರಂದು ಗಾಂಧಿ ಭಾರತ ಶತಮಾನೋತ್ಸವ ಕಾರ್ಯಕ್ರಮ ಸಮಾಪನೆಗೊಳ್ಳಲಿದೆ. ಈ ಅವಧಿಯಲ್ಲಿ ನಿರಂತರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
  • ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಡಿ ಮಹಾ ಪಂಚಾಯತ್ ಸಮ್ಮೇಳನವನ್ನು ನವೆಂಬರ್ 14ರಂದು ಆಯೋಜಿಸಲಾಗುವುದು. ಈ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಲು ಗ್ರಾಮ ಪಂಚಾಯತ್‌ಗಳ ಮಾಜಿ ಹಾಗೂ ಹಾಲಿ ಸದಸ್ಯರನ್ನು ಆಹ್ವಾನಿಸಬೇಕು.
  • ಡಿಸೆಂಬರ್ ತಿಂಗಳಲ್ಲಿ ಪಂಚಾಯತ್ ರಾಜ್ ಕಾಯ್ದೆ ಮತ್ತು ಗ್ರಾಮ ಸ್ವರಾಜ್ ಕುರಿತಾಗಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು.
  • ಗಾಂಧೀಜಿ ಅವರು ಭೇಟಿ ನೀಡಿರುವ ಸ್ಮರಣಾರ್ಥ ರಾಜ್ಯದ 120 ಸ್ಥಳಗಳಲ್ಲಿ ಸ್ತಂಭಗಳನ್ನು ನವೆಂಬರ್ ಕೊನೆಯ ಒಳಗಾಗಿ ನಿರ್ಮಿಸಲಾಗುವುದು.
  • ಗಾಂಧಿ ಭಾರತ ಅಂಗವಾಗಿ ರಾಜ್ಯಾದ್ಯಂತ ಜ್ಯೋತಿ ಯಾತ್ರೆಗಳನ್ನು ಆಯೋಜಿಸಲಾಗುವುದು. ಮಹಾತ್ಮ ಗಾಂಧೀಜಿ ಅವರ ಧ್ಯಾನಸ್ಥ ಭಂಗಿಯ ಭಾವಚಿತ್ರ ಹಾಗೂ ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳನ್ನು ಎಲ್ಲಾ ಶಾಲೆಗಳಲ್ಲಿ ಬರೆದು ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು.
  • ರಂಗಾಯಣದ ವತಿಯಿಂದ ಗಾಂಧಿ ವರ್ಸಸ್ ಗಾಂಧಿ, ಪಾಪು-ಬಾಪು ಹಾಗೂ ಮಹಾತ್ಮರ ಬರುವಿಗಾಗಿ ಎಂಬ ಮೂರು ನಾಟಕಗಳನ್ನು ನಿರ್ಮಿಸಿ ರಾಜ್ಯಾದ್ಯಂತ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ.
  • ರಾಜ್ಯದ 16 ಜಿಲ್ಲೆಗಳಲ್ಲಿ ಈಗಾಗಲೇ ಗಾಂಧಿ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನಿವೇಶನ ಇನ್ನೂ ಸಿಗದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ನಿರಂತರವಾಗಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಬೇಕು.

Shimoga News ಹಲ್ಮಿಡಿಗಿಂತ ಪೂರ್ವ ಕನ್ನಡ ಶಾಸನ ತಾಳಗುಂದದಲ್ಲಿದೆ- ಡಾ.ಸಾಮಕ.

0

Shimoga News ಮಲೆನಾಡು ಇತಿಹಾಸ ಸಂಶೋಧನೆ & ಅಧ್ಯಯನ ವೇದಿಕೆಯ ಆಶ್ರಯದಲ್ಲಿ ಜಿಲ್ಲೆಯ
ನೂತನ ಸಂಶೋಧನಾ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ವೇದಿಕೆ ಅಧ್ಯಕ್ಷ ಡಾ.ಸಾಮಕ ಅವರು
ಈಗಾಗಲೇ ಕನ್ನಡದ ಮೊದಲ ಶಾಸನೆವೆಂದು
ಹಲ್ಮಿಡಿ ಶಾಸನ ಪ್ರಚಾರದಲ್ಲಿದೆ.
ಆದರೆ ಅದಕ್ಕಿಂತಲೂ ಪೂರ್ವದ ಶಾಸನ ತಾಳಗುಂದದ ಪ್ರಣವೇಶ್ವ ದೇವಾಲಯದ ಸಿಂಹ ಕಟಾಂಜನದಲ್ಲಿದೆ.
ಇದನ್ನ ಪ್ರಾಚ್ಯ ಸಂಶೋಧನಾ ಇಲಾಖೆ
ದಾಖಲೆ ಮಾಡಿದೆ ಎಂದು ಹೇಳಿದರು.
Shimoga News ವೇದಿಕೆ ಪ್ರಧಾನ ಕಾರ್ಯದರ್ಶಿ ದಿಲೀಪ್ ನಾಡಿಗ್ ಅವರು ಮಸತನಾಡಿ ” ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ
ಬೆಳಕಿಗೆ ಬಾರದ ಅನೇಕ ದೇಗುಲ, ಶಾಸನಗಳು ಹೇರಳ ಇವರ. ಅವುಗಳ ಬಗ್ಗೆ ಸೂಕ್ತ ಮಾಹಿತಿಯನ್ನ ಸ್ಥಳೀಯರಿಗೆ ತಿಳಿಯ ಹೇಳುವ ಕೆಲಸ ಆಗಬೇಕಿದೆ .ಈ ನಿಟ್ಟನಲ್ಲಿ ವೇದಿಕೆ ಐತಿಹಾಸಿಕ ಸ್ಥಳಗಳಿಗೆ
ಯುವ ಜನತೆಯನ್ನ ಪ್ರವಾಸ ಕರೆದೊಯ್ದು ಪರಿಚಯ ಮಾಡಿಕೊಡುವ
ಕಾರ್ಯ ಮಾಡುತ್ತಿದೆ ಎಂದು ವಿವರಿಸಿದರು.
ಹಿರಿಯ ಸಂಶೋದಕ
ರಮೇಶ್ ಹಿರೇಜಂಬೂರು ಮಾತನಾಡಿ” ಐತಿಹಾಸಿಕ ಸ್ಥಳ,ವಿಚಾರಗಳನ್ನು ಯುವ ಪೀಳಿಗೆಗೆ ಈಗ ಜನಪ್ರಿಯವಾಗಿರುವ
ಸಾಮಾಜಿಕ ಜಾಲತಾಣಗಳ ಮುಖಾಂತರ ತಲುಪಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಸಂಶೋಧನಾಸಕ್ತರಾದ ಸತ್ಯನಾರಾಯಣ ಗಣೇಶ್ ,ಸುಬ್ರಹ್ಮಣ್ಯ,
ಡಾ. ಚಂದ್ರು. ಆದಿತ್ಯ.ಆದಿತ್ಯ ಪ್ರಸಾದ್, ನಾಗರಾಜ್,
ರಾಂಗೋಪಾಲ್, ಮಾತನಾಡಿದರು.ಕೆಲೈವ್ ನ್ಯೂಸ್ ಪ್ರಧಾನ ಸಂಪಾದಕ
ಡಾ.ಸುಧೀಂದ್ರ ವಂದನೆ ಸಲ್ಲಿಸಿದರು.

Shimoga News ಸೆ.8. ನಗರದಲ್ಲಿ ಅರೆ/ ಪೂರ್ಣ ಕಾಲಿಕ ಉದ್ಯೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ

0

Shimoga News ಅರೆಕಾಲಿಕ, ಪೂರ್ಣ ಕಾಲಿಕ ಉದ್ಯೋಗ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ Sept 8 ರ ಬೆಳಗ್ಗೆ 10.30ರಿಂದ ನಗರದ ಹೋಟೆಲ್ ಮಧುರಾ ಸೆಂಟ್ರಲ್ ಬಿ ಎಚ್ ರೋಡ್ ಶಿವಮೊಗ್ಗ ಸಭಾಂಗಣದಲ್ಲಿ ಪ್ರತಿಷ್ಟಿತ ಬ್ಯಾಂಕಿನ ವತಿಯಿಂದ ಏರ್ಪಡಿಸಲಾಗಿದೆ.
ನಿವೃತ್ತರು, ಸ್ವಯಂ ನಿವೃತ್ತಿ ಪಡೆದವರು, ಕನಿಷ್ಠ ಎಸ್ಸೆಸ್ಸೆಲ್ಸಿ ಹಾಗೂ ಅದರ ಮೇಲ್ಪಟ್ಟು ಶಿಕ್ಷಣ ಹೊಂದಿದವರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ನೋಂದಣಿ ಆರಂಭವಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಮೊ. 7019979646ರಲ್ಲಿ ಸಂಪರ್ಕಿಸಿ

Backward Classes Welfare Department – Army-training ಭಾರತೀಯ ಸೇನೆ ಸೇವಾ ಉಚಿತವೃತ್ತಿ ಮಾರ್ಗದರ್ಶನ & ತರಬೇತಿಗೆ ಅರ್ಜಿ ಆಹ್ವಾನ

0

Backward Classes Welfare Department – Army-training ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26 ನೇ ಸಾಲಿನಲ್ಲಿ ಕಲಬುರಗಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಯ್ಕೆ ಪೂರ್ವ ಸಿದ್ದತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ ತರಬೇತಿ ಶಾಲೆಗೆ https://dk.nic.in ಹಾಗೂ ಉಡುಪಿ ಜಿಲ್ಲೆಯ ತರಬೇತಿ ಶಾಲೆಗೆ https://udupi.nic.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಲಬುರಗಿ ಜಿಲ್ಲೆಯ ಆಯಾ ಜಿಲ್ಲಾ/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಖುದ್ದಾಗಿ ಕಲ್ಯಾಣಾಧಿಕಾರಿಗೆ ಅಥವಾ ನೊಂದಾಯಿತ ಅಂಚೆಯ ಮೂಲಕ ಸಲ್ಲಿಸಬಹುದು. ಕಲಬುರಗಿ ಜಿಲ್ಲೆಗೆ ಸೆ.10, ಉಡುಪಿ ಜಿಲ್ಲೆಗೆ ಸೆ.26 ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅ.3 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
Backward Classes Welfare Department – Army-training ಅರ್ಜಿ ಸಲ್ಲಿಸಲು ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಟ ವಾರ್ಷಿಕ ಆದಾಯ ಮಿತಿ ಪ್ರವರ್ಗ-1ಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಗಳಿಗೆ ರೂ. 1 ಲಕ್ಷ ಒಳಗೊಂಡಿರಬೇಕು. ಅಭ್ಯರ್ಥಿಯು 10 ನೇ ತರಗತಿಯನ್ನು ಉತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಟ 33 ಅಂಕಗಳು ಮತ್ತು ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡAತೆ ಸಮಾನವಾದ ಗ್ರೇಡ್ ಪಡೆದಿರಬೇಕು. ಜನ್ಮ ದಿನಾಂಕ ಮತ್ತು ವಯಸ್ಸು 3/10/2025ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು 3/9/2005 ರಿಂದ 3/10/2008 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು. ಅಭ್ಯರ್ಥಿಗಳು ಯಾವ ಜಿಲ್ಲೆಯಲ್ಲಿ ತರಬೇತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೋ ಆ ಜಿಲ್ಲೆಯ ತರಬೇತಿ ಶಾಲೆಗೆ ಮಾತ್ರ ಅವಕಾಶ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ ದಕ್ಷಿಣ ಕನ್ನಡ ಜಿಲ್ಲೆ-0824- 2225078, ಕಲಬುರಗಿ ಜಿಲ್ಲೆ-8105085410/ 9148489157, ಉಡುಪಿ ಜಿಲ್ಲೆ-0820- 2574881 ಗೆ ಸಂಪಕಿರ್ಸಬಹುದೆAದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Saugor railway station ಸಾಗರ- ತಾಳಗುಪ್ಪ ರೈಲುಮಾರ್ಗ ಪರಿಶೀಲನೆ: ವಾಹನಗಳ ಸಂಚಾರಕ್ಕೆತಾತ್ಕಾಲಿಕ ಬದಲಿಮಾರ್ಗ

0

Saugor railway station ಶಿವಮೊಗ್ಗ ಜಿಲ್ಲೆ ಸಾಗರ-ತಾಳಗುಪ್ಪ ನಡುವೆ ಬರುವ ಎಲ್‌ಸಿ.ನಂ: 133,134,147,152 ಗಳನ್ನು ಮುಚ್ಚಲು ಅದಕ್ಕಾಗಿ ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಸೆ.07 ರಿಂದ ಸೆ.14ರವರೆಗೆ ವಿವಿಧ ದಿನಗಳಂದು ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿರುತ್ತಾರೆ.
ಎಲ್‌ಸಿ 133- ಶ್ರೀನಗರ ರಸ್ತೆ ರೈಲು ನಿಲ್ದಾಣ ಸೆ. 07 ಮತ್ತು 08 ರಂದು ಸಾಗರ ಟೌನ್-ಭಗವತಿ ದೇವಸ್ಥಾನ ರಸ್ತೆ-ಅಬಕಾರಿ ಇಲಾಖೆ ಕಚೇರಿ-ಶ್ರೀನಗರ.
Saugor railway station ಎಲ್‌ಸಿ 134-ಶಿರವಾಳ ರಸ್ತೆ ರೈ.ನಿ.-ಸೆ.09 ಮತ್ತು 10 ರಂದು ಸಾಗರ ಟೌನ್-ಶಿರವಾಳದಿಂದ ಅಣಲೇಕೊಪ್ಪ.
ಎಲ್‌ಸಿ 152-ಗದ್ದೆಮನೆ ರಸ್ತೆ ರೈ.ನಿ.-ಸೆ.13 ಮತ್ತು 14 ರಂದು ಸಾಗರದ ಕಡೆಯಿಂದ ಹೋಗುವ ವಾಹನಗಳು ಕಾನ್ಲೆ ಕ್ರಾಸ್‌ನಿಂದ ರೈಲ್ವೇ ಗೇಟ್ 148 ಪಡವಗೋಡು-ಹೊಂಕೇರಿ-ತಾಳಗುಪ್ಪ ವಾರ್ಗವಾಗಿ ಸಿದ್ದಾಪುರ/ಹೊನ್ನಾವರ. ಸಾಗರದಿಂದ ಸಿದ್ದಾಪುರ ಎಲ್.ಸಿ.130 ಮುಖಾಂತರ ಕಾಗೋಡುನಿಂದ ಸೈದೂರು ಕ್ರಾಸ್ (ಸಾಗರದಿಂದ ಕೆಳದಿ ರಸ್ತೆ-ಕಾಗೋಡು-ತಾಳಗುಪ್ಪ/ಸಿದ್ದಾಪುರ).
ಎಲ್‌ಸಿ 14-ಗದ್ದೆಮನೆ ರಸ್ತೆ ರೈ.ನಿ.-ಸೆ.13 ಮತ್ತು 14 ರಂದು ಎಲ್‌ಸಿ 148 ಪಡವಗೋಡು-ಹೊಂಕೇರಿ ಮೂಲಕ ತಾಳಗುಪ್ಪ/ಸಿದ್ದಾಪುರ.
ಈ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯಿಂದ ಸಹಕರಿಸುವಂತೆ ಕೋರಿದೆ.

Shimoga News ಕುಂಚೇನಹಳ್ಳಿ ಪ್ರಾಥಮಿಕ ಶಾಲೆಗೆ “ಬಿ”ವಲಯ ಮಟ್ಟದ ಕ್ರೀಡಾಕೂಟದಸಮಗ್ರ ಪ್ರಶಸ್ತಿ

0

Shimoga News ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ನಡೆದ ಹೊಳಲೂರು `ಬಿ’ವಲಯಮಟ್ಟದ ಕ್ರೀಡಾಕೂಟದಲ್ಲಿ ಕುಂಚೇನಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಅತೀಹೆಚ್ಚಿನ ಬಹುಮಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದ ವಿವಿಧ ಸ್ಫರ್ಧೆಗಳಲ್ಲಿ ದಕ್ಷಿತ, ದೀಪ್ತಿ, ಹೇಮಾವತಿ, ಅನುಷಾ, ವೈಷ್ಣವಿ, ಮೇನಕ, ಚೈತನ್ಯ, ವರ್ಷಿತಾ, ನೇಹಾ ಹಾಗೂ ಖೋ ಖೋದಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದಿದ್ದು, ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
Shimoga News ಬಾಲಕರ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಚಂದನ್, ಅಜಯ್, ಸಂದೀಪ, ನಿತೀನ್, ಉಲ್ಲಾಸ್, ನಿರಂಜನ್ ಬಹುಮಾನ ಪಡೆದುಕೊಂಡಿದ್ದಾರೆ. ಯೋಗಾಸನದಲ್ಲಿ 5 ಮಕ್ಕಳು ಪ್ರಥಮ, ಬಾಲಕರ ಖೋ ಖೋ, ವಾಲಿಬಾಲ್‌ನಲ್ಲಿ ಪ್ರಥಮ, ಕಬ್ಬಡ್ಡಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಚಂದನ್ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

State Government Employees Friendly Cooperative Society ಸೆ.21. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

0

State Government Employees’ Friendly Cooperative Society ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ, ಶಿವಮೊಗ್ಗ ಇದರ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು
ಸೆ.21 ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ‘’ದ್ವಾರಕ ಕನ್ವೆನ್ಷನ್ ಹಾಲ್’’ ನಲ್ಲಿ ಆಯೋಜಿಸಲಾಗಿದೆ.

State Government Employees’ Friendly Cooperative Society ಈ ಕಾರ್ಯಕ್ರಮದ ಹಿನ್ನೆಲೆ ಸಂಘದ ಸದಸ್ಯರು ಸೌಹಾರ್ದ ಸಹಕಾರಿಯ ಸಭೆಗೆ ಹಾಜರಾಗಿ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಸಂಬಂಧಪಟ್ಟಂತ ಸಲಹೆ ಸೂಚನೆಗಳನ್ನು ನೀಡಬಹುದೆಂದು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಆರ್. ಮೋಹನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Department of Empowerment of the Disabled and Senior Citizens ಅಕ್ಟೋಬರ್ 1 ರ ವಿಶ್ವಹಿರಿಯ ನಾಗರಿಕರ ದಿನಾಚರಣೆ ವಿಶೇಷ ಸ್ಪರ್ಧೆಗಳ ಮಾಹಿತಿ

0

Department of Empowerment of the Disabled and Senior Citizens ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅ. 1 ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೆ. 15 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗೆ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಈ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು 60 ವರ್ಷ ಮೇಲ್ಪಟ್ಟವರಾಗಿದ್ದು, ಆಧಾರ್ ಕಾರ್ಡ್ ಮತ್ತು ಹಿರಿಯ ನಾಗರೀಕರ ಗುರುತಿನ ಚೀಟಿಯೊಂದಿಗೆ ಸೆ.12 ರೊಳಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಡಿ.ವೈ.ಎಸ್.ಪಿ. ಕಚೇರಿ ಆವರಣ, ಶಿವಮೊಗ್ಗ ಇಲ್ಲಿ ನೋಂದಣಿ ಮಾಡಿಸಿಕೊಳ್ಳುವುದು. ನೊಂದಣಿಗಾಗಿ ರವೀಂದ್ರ-9164444370, ಕಚೇರಿ ದೂ.ಸಂ.: 08182-221188/280424 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Department of Undergraduate School Education ಸುಸ್ಥಿರ ಆರ್ಥಿಕತೆಗೆ ಅರ್ಥಶಾಸ್ತ್ರದ ಅಧ್ಯಯನ ಅಗತ್ಯ- ಡಾ.ಹೆಚ್.ಬಿ.ಮಂಜುನಾಥ್

0

ಸುಸ್ಥಿರ ಆರ್ಥಿಕತೆಯು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯವಶ್ಯವಾಗಿದ್ದು ಪ್ರಾಚೀನ ಭಾರತದ ಅರ್ಥಶಾಸ್ತ್ರಗಳಲ್ಲಿ ಇದಕ್ಕೆ ಪೂರಕವಾದ ಅನೇಕ ಮೌಲ್ಯಯುತ ಅಂಶಗಳಿವೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು.

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ, ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ವಿಷಯದ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರದ ಪ್ರೇರಣಾತ್ಮಕ ಉಪನ್ಯಾಸ ನೀಡುತ್ತಾ ಪ್ರಾಚೀನ ಭಾರತದ ಕೌಟಿಲ್ಯಾದಿ ಅರ್ಥಶಾಸ್ತ್ರಜ್ಞರ ಚಿಂತನೆಯಲ್ಲಿ ಅರ್ಥ ಕಾಮಗಳು ಅಂದರೆ ಸಂಪನ್ಮೂಲ ಮತ್ತು ಬೇಡಿಕೆಗಳು ಧರ್ಮ ಮತ್ತು ಮೋಕ್ಷಗಳ ನಡುವೆ ಇದ್ದು ಆರ್ಥಿಕ ವ್ಯವಹಾರ ವಿಚಾರಗಳೆಲ್ಲ ಧರ್ಮಾಧಾರಿತ ಅಂದರೆ ನೀತಿಯುಕ್ತ ಮಾರ್ಗದಲ್ಲಿರಬೇಕು, ಕಾಮ ಅಂದರೆ ಬಯಕೆ ಬೇಡಿಕೆಗಳು ಮೋಕ್ಷ ಅಂದರೆ ತ್ಯಾಗ ಗುರಿಯನ್ನು ಹೊಂದಿರಬೇಕು. Department of Undergraduate School Education ತೆರಿಗೆ ಸಂಗ್ರಹಗಳು ಪ್ರಜೆಗಳಿಗೆ ಹೊರೆಯಾಗದಂತೆ ಹೂವುಗಳಿಂದ ದುಂಬಿಯು ಮಕರಂದ ಹೀರುವಂತಿರಬೇಕು, ಕಟ್ಟ ಕಡೆಯ ವ್ಯಕ್ತಿಯೂ ಸಹಾ ಸಂತೃಪ್ತನಾಗಿರುವಂತೆ ನೋಡಿಕೊಳ್ಳುವುದು ಆಡಳಿತ ಮಾಡುವವರ ಆರ್ಥಿಕ ಕರ್ತವ್ಯ ಎಂಬುದನ್ನು ಹೇಳಿರುವ ನಮ್ಮ ಪ್ರಾಚೀನ ಅರ್ಥಶಾಸ್ತ್ರಜ್ಞರ ವಿಚಾರಗಳನ್ನು ಮನನ ಮಾಡಿಕೊಂಡು ಉಪನ್ಯಾಸಕರುಗಳು ವಿದ್ಯಾರ್ಥಿಗಳಿಗೆ ಪಠ್ಯೇತರವಾಗಿ ಹೇಳಬೇಕು ಎಂದು ಮಂಜುನಾಥ್ ನಿದರ್ಶನಗಳ ಸಹಿತ ವಿವರಿಸಿದರು.

ಜಿಲ್ಲಾ ಅರ್ಥಶಾಸ್ತ್ರ ವೇದಿಕೆ ಅಧ್ಯಕ್ಷರು ಪ್ರಾಚಾರ್ಯರೂ ಆದ ಬಿ ನಾಗರಾಜಪ್ಪ, ನಿಕಟಪೂರ್ವ ಅಧ್ಯಕ್ಷರು ಪ್ರಾಚಾರ್ಯರೂ ಆದ ಎಸ್ ಪ್ರದೀಪ್ ಕುಮಾರ್ ಮುಂತಾಗಿ ಜಿಲ್ಲೆಯಿಂದ ಆಗಮಿಸಿದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರಗಳು ಉಪಸ್ಥಿತರಿದ್ದು ಡಾ.ಎಚ್ ಬಿ ಮಂಜುನಾಥರನ್ನು ಸನ್ಮಾನಿಸಿದರು.