Tuesday, February 17, 2026
Tuesday, February 17, 2026
Home Blog Page 168

Rotary Club Shimoga ಇಂಟರ್ಯಾಕ್ಟ್ ಕ್ಲಬ್ ನಿಂದ ಮಕ್ಕಳಿಗೆ ನಾಯಕತ್ವದ ಬಗ್ಗೆ ಮಾರ್ಗದರ್ಶನ-ಮುಸ್ತಾಕ್ ಅಲಿ ಷಾ

0

Rotary Club Shimoga ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಸಂವಹನ ಕೌಶಲ್ಯ ವೃದ್ಧಿಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ವೈಸ್ ಚೇರ್ಮನ್ ಮುಸ್ತಾಕ್ ಅಲಿ ಷಾ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆ ವತಿಯಿಂದ ವಿನೋಬನಗರದ ಡಿವಿಎಸ್ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಮಕ್ಕಳು ನಾಯಕರಾಗಿ ರೂಪುಗೊಳ್ಳುವಲ್ಲಿ ಅಗತ್ಯ ಮಾರ್ಗದರ್ಶನ ಇಂಟರಾಕ್ಟ್ ಕ್ಲಬ್‌ನಲ್ಲಿ ದೊರೆಯುತ್ತದೆ ಎಂದು ತಿಳಿಸಿದರು.

ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ, ಸಕರಾತ್ಮಕ ವ್ಯಕ್ತಿತ್ವವು ಜೀವನದಲ್ಲಿ ಯಶಸ್ವಿಯಾಗಲು ನೆರವಾಗುತ್ತದೆ. ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ರೋಟರಿ ಪಾತ್ರ ಮಹತ್ತರವಾದದ್ದು. ರೋಟರಿ ಸಂಸ್ಥೆಯ ಮೂಲ ಉದ್ದೇಶವೇ ಸೇವೆ. ನಾವು ಶಿಕ್ಷಣದ ಅಡಿಯಲ್ಲಿ ಅಪಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ಮತ್ತು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪರೀಕ್ಷೇ ಎದುರಿಸುವುದು ಹೇಗೆ, ರಸಪ್ರಶ್ನೆ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಪ್ರವಾಸ, ಪ್ರೌಢಾವಸ್ಥೆಯಲ್ಲಿ ಆಗುವ ದೈಹಿಕ ಬದಲಾವಣೆ, ಗುಡ್ ಟಚ್ ಬ್ಯಾಡ್ ಟಚ್, ಪರಿಸರ ಕಾಳಜಿ ಹಾಗೂ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

Rotary Club Shimoga ನೂತನ ಇಂಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಸಂಜನಾ ಮತ್ತು ಕಾರ್ಯದರ್ಶಿಯಾಗಿ ಭಾರ್ಗವ ಅವರ ತಂಡಕ್ಕೆ ಮುಸ್ತಾಕ್ ಅಲಿ ಷಾ ಪ್ರಮಾಣವಚನ ಬೋಧಿಸಿದರು. ಇಂಟರಾಕ್ಟ್ ಕ್ಲಬ್ ಚೇರ್ಮನ್ ಗೀತಾ ಜಗದೀಶ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಜಯಶೀಲ್ ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಧರ್ಮೇಂದ್ರ ಸಿಂಗ್, ಸಂತೋಷ್, ನಟರಾಜ್, ಚಂದ್ರು ಜೆಪಿ, ಬಲರಾಮ್, ಜಗದೀಶ್, ಜ್ಯೋತಿ ಶ್ರೀ ರಾಮ್, ಆನ್ಸ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ಬಸವರಾಜ್, ಮಧುರಾ ಧನಂಜಯ್, ರಾಜೇಶ್ವರಿ ಸಿಂಗ್, ಶಾಲೆ ಮುಖ್ಯೋಪಾಧ್ಯಾಯ ಲಕ್ಷ್ಮಣ್‌, ಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು.

Dr. H.B Manjunath ಸ್ವಾವಲಂಬನೆಗೆ ಆತ್ಮಬಲದೊಂದಿಗೆ ಆರ್ಥಿಕ ಬಲವೂ ಮುಖ್ಯ- ಡಾ.ಹೆಚ್.ಬಿ.ಮಂಜುನಾಥ್‌

0

Dr. H.B Manjunath ಸ್ವಾವಲಂಬನೆ ಸಾಧಿಸಲು ಆತ್ಮಬಲ ಅವಶ್ಯ ಇದಕ್ಕಾಗಿ ಆರ್ಥಿಕ ಬಲವೂ ಬೇಕು, ಪೂರಕವಾಗಿ ದೈವ ಬಲವೂ ಒದಗಿಬರಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಅವರಿಂದು ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜೆಯ ಧಾರ್ಮಿಕ ಉಪನ್ಯಾಸ ನೀಡುತ್ತಾ ಧರ್ಮಸ್ಥಳ ಕ್ಷೇತ್ರವು ಕೇವಲ ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ರಾಜ್ಯಾದ್ಯಂತ ಸುಮಾರು ಆರು ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮುಖಾಂತರ 50 ಲಕ್ಷಕ್ಕೂ ಅಧಿಕ ಸದಸ್ಯರುಗಳ ಸ್ವಾವಲಂಬನೆಗಾಗಿ ಆರ್ಥಿಕ ನೆರವು ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕೆರೆಗಳ ಹೂಳೆತ್ತುವಿಕೆ, ಗ್ರಾಮಾಂತರ ಶಿಕ್ಷಣ, ಪರಿಸರ ಸಂರಕ್ಷಣ, ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಉತ್ತೇಜನ, ಜ್ಞಾನ ವಿಕಾಸ, ತಂತ್ರಜ್ಞಾನ ಅಭಿವೃದ್ದಿ, ಆರೋಗ್ಯ ರಕ್ಷೆ, ಜನಜಾಗ್ರತಿ, ಗ್ರಾಮ ನೈರ್ಮಲ್ಯ, ಸ್ತ್ರೀ ಸಬಲೀಕರಣ, ಸ್ವಗೃಹ ಯೋಜನೆ ಮುಂತಾದವುಗಳ ಪರಿಣಾಮಕಾರಿ ಅನುಷ್ಠಾನವಲ್ಲದೇ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ವ್ಯವಸ್ಥೆ ಮುಂತಾಗಿ ಜನಪರ ಕಾರ್ಯಕ್ರಮಗಳನ್ನು ಜಾತಿ ಮತ ಲಿಂಗ ಭೇದವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದ್ದು ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಸಾಮೂಹಿಕವಾಗಿ ಆಯೋಜಿಸುತ್ತಾ ಸಮಾಜದಲ್ಲಿ ಸೌಹಾರ್ದತೆ ಹಾಗೂ ಬಾಂಧವ್ಯ ವೃದ್ಧಿಗೂ ಕಾರಣವಾಗುತ್ತಿದೆ ಎಂದರಲ್ಲದೇ ಬಿಲ್ವಪತ್ರೆಯ ಆಯುರ್ವೇದ ಮಹತ್ವ ಹಾಗೂ ಬಿಲ್ವಾರ್ಚನೆಯ ಆಧ್ಯಾತ್ಮಿಕ ಮಹತ್ವವನ್ನೂ ಮಂಜುನಾಥ ವಿವರಿಸಿದರು.

Dr. H.B Manjunath ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಮಾನಸ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ ಸಿ ಲಿಂಗರಾಜ್ ಸಮಾಜದ ಎಲ್ಲ ಸ್ಥರಗಳ ಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಿಗೆ ಪ್ರೇರೇಪಿಸುವುದು ಸುಲಭ ಸಾಧ್ಯವಲ್ಲ ಇಂತಹ ಸತ್ಕಾರ್ಯ ಮಾಡುವ ಕ್ಷೇತ್ರದ ತೇಜೋವಧೆ ಮಾಡುವವರಿಗೆ ಯಾರೂ ಬೆಂಬಲ ನೀಡಬಾರದು ಎಂದರು. ಪ್ರಾಸ್ತಾವಿಕ ನುಡಿಗಳ ನಾಡುತ್ತಾ ಟ್ರಸ್ಟಿನ ಹಿರಿಯ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ಸಂಘದ ಸದಸ್ಯರಲ್ಲಿ ನಿರ್ದಿಷ್ಟ ಗುರಿ ಇರಬೇಕು, ಹಣವಿಲ್ಲದವ ಬಡವನಲ್ಲ ಗುರಿ ಇಲ್ಲದವ ಬಡವನಾಗುತ್ತಾನೆ ಎಂದರಲ್ಲದೆ ಸಂಸ್ಥೆಯ ಯೋಜನೆಗಳ ಬಗ್ಗೆ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾಕರ ಉಪಾಧ್ಯಕ್ಷ ಸೈಯದ್ ಅರೀಫ್ ಲಾಲ್ ಕರಾರುವಾಕ್ಕಾಗಿ ನಡೆಯುವ ಈ ಸಂಸ್ಥೆಯು ಕ್ಷೇತ್ರಕ್ಕೆ ಭಕ್ತರು ಕೊಡುವುದನ್ನೆಲ್ಲ ಭಕ್ತರಿಗೇ ಪ್ರಾಮಾಣಿಕವಾಗಿ ತಲುಪಿಸುತ್ತಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್ ಕೆ ಚಂದ್ರಶೇಖರ್ ಮಾತನಾಡಿ ಸಮಾಜಮುಖಿ ಯೋಜನೆಗಳನ್ನು ಸರ್ಕಾರಗಳಿಗಿಂತ ಪರಿಣಾಮಕಾರಿಯಾಗಿ ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ ಎಂದರು. ವೇದಿಕೆಯ ಉಪಾಧ್ಯಕ್ಷ ದಾನಿ ಅಣಬೇರು ಮಂಜಣ್ಣ ಮಾತನಾಡಿ ರಾಜ್ಯ ಸುಭೀಕ್ಷವಾಗಲು ಅಬಲೆಯರ ಸಬಲೀಕರಣ ಹಾಗೂ ಶಿಕ್ಷಣ ಮುಂತಾದವನ್ನು ಸಂಸ್ಥೆ ಮಾಡುತ್ತಿದೆ ಎಂದರು. ಕರ್ನಾಟಕ ಏಕಾಂತ ವೇದಿಕೆ ರಾಜ್ಯಾಧ್ಯಕ್ಷ ಎನ್ ಹೆಚ್ ಹಾಲೇಶ್ ಮಾತನಾಡಿ ಪವಿತ್ರ ಕ್ಷೇತ್ರ ಹಾಗೂ ಅತ್ಯುತ್ತಮ ಸಂಸ್ಥೆಗೆ ಯಾರೂ ಕಿರುಕುಳ ಕೊಡಲು ಅವಕಾಶ ಮಾಡಿಕೊಡಬಾರದು ಎಂದರು. ಎಲೆ ಬೇತೂರಿನ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಎಂ ಷಡಾಕ್ಷರಪ್ಪ ಮಾತನಾಡಿ ಧಾರ್ಮಿಕ ಆಚರಣೆಗಳ ಮೇಲೆ ನಮ್ಮ ದೇಶದ ಪವಿತ್ರತೆ ಉಳಿದಿದೆ, ಮಹಿಳೆಯರ ಸ್ವಾವಲಂಬನೆ ಮೂಲಕ ಸಮಾನತೆಯು ಸಾಧ್ಯ ಎಂದರು. ಮಂಡಕ್ಕಿ ಬಟ್ಟಿ ಬಡಾವಣೆಯ ಸಮಾಜ ಸೇವಕ ಮಹಮ್ಮದ್ ಸುಹೀಲ್ ಮಾತನಾಡಿ ಗುರುಗಳಿಗೆ ಗೌರವ ಕೊಡುತ್ತಾ ಜ್ಞಾನಿಗಳಾಗಬೇಕು, ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರು.

ಅಧ್ಯಕ್ಷೀಯ ನುಡಿಗಳ ನಾಡಿದ ಹಿರಿಯ ನ್ಯಾಯವಾದಿ ಶ್ರೀಮತಿ ಅನಿತಾ ದೇಶ ಸೇವೆಯೇ ಈಶ ಸೇವೆ ಎಂಬ ತತ್ವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರದು, ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಜನರ ಕಲ್ಯಾಣ ಯೋಜನೆಗಳಿಗೆ ಸಂಸ್ಥೆಯು ವಿನಿಯೋಗಿಸುತ್ತಾ ನಿಜವಾದ ಅರ್ಥದಲ್ಲಿ ಮಹಿಳಾ ಸಬಲೀಕರಣವನ್ನು ಮಾಡುತ್ತಿದೆ ಎಂದರು.

ಟ್ರಸ್ಟಿನ ಯೋಜನಾಧಿಕಾರಿ ಶ್ರೀಮತಿ ಯಶೋಧ ರೇಂಜಾಳ ಉಪಸ್ಥಿತರಿದ್ದರು. ಕೊಟ್ರೇಶ್ ಹಾಗೂ ಮಂಜುನಾಥ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಶ್ರೀಮತಿ ದ್ಯಾಮಕ್ಕ ವಂದನೆ ಸಲ್ಲಿಸಿದರು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ವೇದ ಮೂರ್ತಿ ವಿಜಯಕುಮಾರ್, ಚೇತನ್, ಮಂಜುನಾಥ ಜೋಯಿಸ್ ಬಿಲ್ವಾರ್ಚನೆ ನಿರ್ವಹಿಸಿದರೆ ಒಕ್ಕೂಟದ ನಾಗರತ್ನಮ್ಮ, ಮಂಜುಳಾ ಜಿ ಎಸ್, ನೇತ್ರಾ, ನಿಷಾದ್ ಬಾನು, ಎ ಮಂಜುಳಾ, ಅಂಜುಮ್ ಬಾನು, ಮುಕ್ತಾಯಮ್ಮ, ಮೊಸರನ್ನ ಬಾನು, ಶ್ರುತಿ ಬಸಾಪುರ,ಬಸಮ್ಮ, ದರ್ಶನಾ ಮುಂತಾದವರು ಭಾಗವಹಿಸಿದ್ದರು.

Shobha Karandlaje ಕೇಂದ್ರ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರಿಗೆ ಭವ್ಯ ಸ್ವಾಗತ ಕೋರಿದ ಸಂಸದ ರಾಘವೇಂದ್ರ.

0

Shobha Karandlaje ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಸವರು ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ 100 ಹಾಸಿಗೆ ESIC ಆಸ್ಪತ್ರೆಯ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಹಾಗೂ ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ವಲಯಕ್ಕೆ ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರೊಂದಿಗೆ ಭೇಟಿ ನೀಡಿದರು.

CM Siddaramaiah ಸಮಾಜದಲ್ಲಿ ಜಾತಿ ಧರ್ಮಗಳನ್ನು ಒಡೆಯುವುದು.ಜನರನ್ನ ಎತ್ತಿಕಟ್ಟುವುದು ವಿಪಕ್ಷಗಳ ಕೆಲಸ- ಸಿದ್ಧರಾಮಯ್ಯ.

0

CM Siddaramaiah ವಿರೋಧ ಪಕ್ಷದವರ ಸುಳ್ಳು ಪ್ರಚಾರದಲ್ಲಿ, ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲ, ಸುಳ್ಳು ಸುದ್ದಿಗಳನ್ನು ಹೇಳಿ ಜನರನ್ನು ಪ್ರಚೋದಿಸಿ ಸಮಾಜದಲ್ಲಿ ಶಾಂತಿಯನ್ನು ಕದಡುವುದೇ ಅವರ ಕೆಲಸ. ಜನರು ಇದಕ್ಕೆ ಅವಕಾಶ ನೀಡದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು.

ಸಮಾಜದಲ್ಲಿ ಜಾತಿ, ಧರ್ಮಗಳನ್ನು ಒಡೆಯುವುದು, ಜನರನ್ನು ಎತ್ತಿ ಕಟ್ಟುವುದು ವಿರೋಧಪಕ್ಷದ ಕೆಲಸ. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ನಾವೆಲ್ಲರೂ ಮನುಷ್ಯರಾಗಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಹಾಗೂ ಸಮಾಜ ಒಡೆಯುವ ಶಕ್ತಿಗಳಿಂದ ದೂರ ಇರಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಮಂಡ್ಯದ ಶಿವನಸಮುದ್ರದಲ್ಲಿ ಆಯೋಜಿಸಿದ್ದ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು

CM Siddaramaiah ಕಳೆದ ಲೋಕಸಭಾ ಚುನಾವಣೆಯಿಂದ ಜೆಡಿಎಸ್ ಪಕ್ಷವು, ಬಿಜೆಪಿಯೊಂದಿಗೆ ಸೇರಿ ಬಿಟ್ಟಿದೆ. ಮುಂದೆ ಅದೇ ಪಕ್ಷದೊಂದಿಗೆ ವಿಲೀನವಾದರೂ ಆಶ್ಚರ್ಯವಿಲ್ಲ. ಕೇವಲ ನಮ್ಮ ಸರ್ಕಾರ ಮಾತ್ರ ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು, ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸೌಹಾರ್ದತೆಯನ್ನು ಪ್ರತಿಪಾದಿಸುತ್ತಿದೆ.

ದ್ವೇಷ ಸಮಾಜವನ್ನು ಒಡೆಯುತ್ತದೆ, ಪ್ರೀತಿ ಮನಸುಗಳನ್ನು ಬೆಸೆಯುತ್ತದೆ. ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಲು ಸಾಧ್ಯ ಎಂದು ಸಿದ್ಧರಾಮಯ್ಯ ಈ ಸಂದರ್ಭದಲ್ಲಿ ನುಡಿದರು.

Dept of women & child development ಶಿವಮೊಗ್ಗ ತಾಲ್ಲೂಕಿನಲ್ಲಿ ‌ಪೋಕ್ಸೋ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಮಿಷನ್ ಸುರಕ್ಷಾ ಅಭಿಯಾನ

0

Dept of women & child development 18 ವರ್ಷದೊಳಗಿನ ಮಕ್ಕಳ ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಶಿವಮೊಗ್ಗ ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಮಿಷನ್ ಸುರಕ್ಷಾ” ಅಭಿಯಾನದ ಮೂಲಕ ತಾಲ್ಲೂಕಿನಾದ್ಯಂತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿ ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಮತ್ತು ಪೋಕ್ಸೋ ಕಾಯ್ದೆ 2012 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ವಯೋಮಾನವನ್ನು Dept of women & child development ವಿವಾಹಕ್ಕೆ ನಿಗದಿಪಡಿಸಿದ್ದು ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ, ಬಾಲಗರ್ಭಿಣಿ ಹಾಗೂ ಪೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ 1098 ಮಕ್ಕಳ ಸಹಾಯವಾಣಿ ಅಥವಾ ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಪಿ.ಡಿ.ಓ, ಶಾಲಾ ಮುಖ್ಯೋಪಾದ್ಯಾಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ.

Dr M C Sandhyarani ಕಾಣದ ಮರ್ಯಾದೆ ಬಗ್ಗೆ ಯೋಚಿಸುವುದಕ್ಕಿಂತ ಕಾಣುವ ಮನುಷ್ಯನನ್ನು ಪ್ರೀತಿಸುವ ಮನಸ್ಸು ನಮ್ಮದಾಗಲಿ- ಡಾ.ಎಂ.ಸಿ.ಸಂಧ್ಯಾರಾಣಿ.

0

Dr M C Sandhyarani ಕಾಣದ ಮರ್ಯಾದೆ ಬಗ್ಗೆ ಯೋಚಿಸುವುದಕ್ಕಿಂತ ಕಾಣುವ ಮನುಷ್ಯನನ್ನು ಪ್ರೀತಿಸುವ ಮನಸುಗಳು ನಮ್ಮದಾಗಬೇಕೆಂದು ಮೈಸೂರಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ತರಬೇತಿ ಸಂಯೋಜಕರಾದ ಡಾಕ್ಟರ್ ಎಂ ಸಿ ಸಂದ್ಯಾರಾಣಿ ನುಡಿದರು ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಅರಿವು ಕಾರ್ಯಕ್ರಮದ ತರಬೇತಿಯಲ್ಲಿ ಮಾತನಾಡಿದರು

Drinking water supply ಸೆ.16 & 17 ರಂದು ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ.

0

Drinking water supply ಮೆಸ್ಕಾಂ ಇಲಾಖೆಯಿಂದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ವ್ಯತ್ಯಯವಾಗುತ್ತಿದ್ದು, ಸೆ. 16 ಮತ್ತು 17 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊAದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

D S Arun ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳ ಹೆಚ್ವಳ ಆತಂಕಕಾರಿ ಬೆಳವಣಿಗೆ,- ಶಾಸಕ ಡಿ.ಎಸ್.ಅರುಣ್.

0

D S Arun ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ,ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದೇ ಸಮಸ್ಯೆ ವೇಗವಾಗಿ ವ್ಯಾಪಿಸುತ್ತಿದೆ. ಇದು ಸಮಾಜದ ಆರೋಗ್ಯ, ಭದ್ರತೆ ಮತ್ತು ನೈತಿಕತೆಗೆ ಗಂಭೀರ ಸವಾಲು ಎಬ್ಬಿಸಿದೆ ಎಂದು ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ತಿಳಿಸಿದ್ದಾರೆ.

ಅವರು ರಾಜ್ಯ ಸರ್ಕಾರದ ಗಮನಕ್ಕೆ ತಂದಿರುವ ಬೇಡಿಕೆಗಳು:

1.ಸರ್ಕಾರ ಕೈಗೊಂಡಿರುವ ಸುರಕ್ಷಿತ ಅಸುರಕ್ಷಿತ ಸ್ಪರ್ಶ ಜಾಗೃತಿ ಕಾರ್ಯಕ್ರಮದಲ್ಲಿ, ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕ ಬೋಧನೆ ನೀಡಲು ಮನೋವೈದ್ಯರು, ಮಕ್ಕಳವೈದ್ಯರು ಹಾಗೂ ಸ್ತ್ರೀರೋಗ ತಜ್ಞರ ಸಹಭಾಗಿತ್ವ ಇರಬೇಕು.
2.ಪ್ರತಿಯೊಂದು ಜಿಲ್ಲೆಯಲ್ಲಿ ತುರ್ತು ಆಧಾರದ ಮೇಲೆ ಪ್ರತ್ಯೇಕ ಪರಿಶೀಲನಾ ಸಮಿತಿ ರಚನೆ

  1. ನೆಲಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತಿಯರಿಗೆ ಹೆಚ್ಚಿನ ಪ್ರೋತ್ಸಾಹ
    4.ಶಾಲೆ-ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮಗಳು ಕಡ್ಡಾಯ
  2. ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ತಪ್ಪಿಸ್ತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
    6.ಪೀಡಿತ ಬಾಲಕಿಯರಿಗೆ ಆರೋಗ್ಯ ಮತ್ತು ಮನೋವೈದ್ಯಕೀಯ ನೆರವು

D S Arun ರಾಜ್ಯದ ಭವಿಷ್ಯವಾಗಿರುವ ಅಪ್ರಾಪ್ತ ಬಾಲಕಿಯರ ಬದುಕು ಹಾಳಾಗದಂತೆ ತಕ್ಷಣ ಸರ್ಕಾರ ನಿರ್ಧಾರಾತ್ಮಕ ಹೆಜ್ಜೆ ಇಡುವುದು ಅತ್ಯಗತ್ಯ. ಸಮಾಜದ ಹಿತಕ್ಕಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೆ ಮೌನವಾಗುವುದಿಲ್ಲ ಎಂದು ಡಿ.ಎಸ್. ಅರುಣ್ ಸ್ಪಷ್ಟ ಸಂದೇಶ ನೀಡಿದರು.

Lions Club Shivamogga Sahyadri ಬಡವರ ಕಣ್ಣುಗಳಿಗೆ ಬೆಳಕು ನೀಡುವುದು ನಮ್ಮ ಕರ್ತವ್ಯ- ಡಾ.ಬಿರಾದಾರ್.

0

Lions Club Shivamogga Sahyadri ಸಮಾಜ ಸೇವೆ ಯಲ್ಲಿ ಸದಾ ಮುಂಚೂಣಿಯ ಲ್ಲಿರುವ ಲಯನ್ಸ್ ಕ್ಲಬ್‌ನಿಂದ ಜಿಲ್ಲೆಯ ನವಲೆ ಗ್ರಾಮದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬಡ ಮತ್ತು ಫಲಾನುಭವಿಗಳಿಗೆ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಡಾ. ಬಿರಾದಾರ್ ಅವರು ಮಾತನಾಡಿ, ಸಮಾಜದಿಂದ ನಾವು ಪಡೆದಿರುವುದನ್ನು ಸಮಾಜಕ್ಕೆ ಹಿಂದಿರುಗಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಮ್ಮ ಉದ್ದೇಶವಾ ಗಿದೆ. ಬಡವರ ಕಣ್ಣುಗಳಿಗೆ ಬೆಳಕು ನೀಡುವುದು ನಮ್ಮ ಕರ್ತವ್ಯ. ಇಂತಹ ಸೇವಾ ಕಾರ್ಯ ಕ್ರಮಗಳು ಮುಂದು ವರಿಯಲಿವೆ ಎಂದರು.
ನುರಿತ ವೈದ್ಯಕೀಯ ತಂಡವು ಪ್ರತಿಯೊಬ್ಬರಿಗೂ ನೇತ್ರ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಿತು. ದೃಷ್ಟಿ ದೋಷದಿಂದ ಬಳಲುತ್ತಿದ್ದವರನ್ನು ಗುರುತಿಸಿ, ಅವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಶಸ್ತçಚಿಕಿತ್ಸೆಗೆ ಆಯ್ಕೆಯಾದ ಫಲಾನುಭ ವಿಗಳಿಗೆ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಜರಾಗಲು ಸೂಚಿಸಲಾಯಿತು.
Lions Club Shivamogga Sahyadri ಹಿರಿಯ ಅಧಿಕಾರಿಗಳಾದ ಡಾ. ಕಿರಣ್ ಡಿ.ಬಿ.ಸಿ.ಎಸ್., ಕ್ಲಬ್‌ನ ಡಿಸ್ಟಿçಕ್ಟ್ ಕೋ ಆರ್ಡಿನೇಟರ್ ವಿ.ಟಿ. ರತ್ನಾಕರ್, ರೀಜನ್ ಚೇರ್‌ಮನ್ ಗಿರೀಶ್ ನಾಯಕ್, ಡಿಸ್ಟಿçಕ್ಟ್ ಕೋಆರ್ಡಿನೇಟರ್ ನಂದೀಶ ಎನ್.ಟಿ, ಕಾರ್ಯದರ್ಶಿ ಕುಮಾರ್, ಡಾ. ಪರಮೇಶ್ವರಪ್ಪ, ಅಪ್ಪು÷ಕುಟ್ಟಿ, ತಜಮ್ಮುಲ್ ಹುಸೇನ್, ರಾಜಮೋಹನ್ ಹೆಗ್ಡೆ, ಪೌಲ್ ಗೋವ್ಸ್, ಸುಖಿಲ್ ಎನ್ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತ ರಿದ್ದರು. ಶಿಬಿರ ಮತ್ತು ಕನ್ನಡಕ ವಿತರಣೆಯ ಜಿಲ್ಲಾ ಸಂಯೋಜಕ ಶಿವಮೊಗ್ಗ ಆಪ್ಟಿಕಲ್‌ನ ನಂದೀಶ್ ಎನ್.ಟಿ. ಕನ್ನಡಕ ವಿತರಿಸಿದರು. ನೂರಾರು ಜನರು ಇದರ ಸದುಪಯೋಗ ಪಡೆದರು.

Shimoga News ಉದ್ಯೋಗದಲ್ಲಿ ಯಶ ಸಾಧಿಸಲು ಕೌಶಲ್ಯಗಳ ಕಲಿಕೆ ಬಹಳ ಮುಖ್ಯ- ಬಿ.ಗೋಪಿನಾಥ್.

0

Shimoga News ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜತೆಯಲ್ಲಿ ಕೌಶಲ್ಯ ತುಂಬಾ ಮುಖ್ಯ. ಎಲ್ಲ ಕ್ಷೇತ್ರಗಳಲ್ಲೂ ಕೌಶಲ್ಯ ಅಗತ್ಯವಿದ್ದು, ಉದ್ಯೋಗದಲ್ಲಿ ಯಶಸ್ಸು ಗಳಿಸಲು ಹೆಚ್ಚು ಕೌಶಲ್ಯಗಳನ್ನು ಕಲಿಯಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡ್ವಾನ್ಸ್ಡ್‌ ಸ್ಕಿಲ್ ಡೆವಲಪ್‌ಮೆಂಟ್ ಮತ್ತು ಬಾಷ್ ಕಂಪನಿಯ ಸಹಯೋಗದಲ್ಲಿ ಆಯೋಜಿಸಿದ್ದ 30 ದಿನಗಳ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಂದರ್ಶನ ಸಮಯದಲ್ಲಿ ಎದುರಿಸುವ ಸವಾಲುಗಳಿಗೆ ತರಬೇತಿ ನೀಡುವ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಡ್ವಾನ್ಸ್ಡ್‌ ಸ್ಕಿಲ್ ಅಕಾಡೆಮಿ ತರಬೇತಿ ಕಾರ್ಯಗಾರವು ಮೂರನೇ ಬ್ಯಾಚ್‌ನಲ್ಲಿ ನಡೆಯುತ್ತಿದ್ದು, ಇದರಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ಸಿಕ್ಕಿರುವುದು ತುಂಬಾ ಹೆಮ್ಮೆಯ ವಿಷಯ. ಇಂತಹ ತರಬೇತಿ ಶಿಬಿರಗಳು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತವೆ ಎಂದು ತಿಳಿಸಿದರು.

Shimoga News ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್ ಮಾತನಾಡಿ, ಪ್ರತಿಯೊಂದು ಸಣ್ಣ ಸಣ್ಣ ವೃತ್ತಿಗೂ ಕೌಶಲ್ಯ ತುಂಬಾ ಮುಖ್ಯವಾಗಿದೆ. ಕೌಶಲ್ಯ ವೃತ್ತಿಯ ಅವಿಭಾಜ್ಯ ಅಂಗವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೌಶಲ್ಯವನ್ನು ಚೆನ್ನಾಗಿ ಕಲಿತು ಯಶಸ್ವಿಯಾಗಬೇಕು. ಬಾಸ್ ಕಂಪನಿಯ ಸಹಯೋಗದಲ್ಲಿ ನೀಡುತ್ತಿರುವ ತರಬೇತಿ ಶಿಬಿರಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾಭಾಸದ ಜೊತೆಗೆ ಸ್ಕಿಲ್ ಸಹ ತುಂಬಾ ಮುಖ್ಯ. ಸ್ಕಿಲ್ ಇಲ್ಲದವರು ಉದ್ಯೋಗದ ಅವಕಾಶದಿಂದ ವಂಚಿತರಾಗುತ್ತಾರೆ. ಪ್ರತಿಯೊಬ್ಬರಿಗೂ ಸ್ಕಿಲ್ ತುಂಬಾ ಮುಖ್ಯ ಎಂದು ತಿಳಿಸಿದರು.

ಬಾಷ್ ಕಂಪನಿಯ ವತಿಯಿಂದ ಶಿಬಿರಾರ್ಥಿಗಳಿಗೆ ಶೈಕ್ಷಣಿಕ ಕಿಟ್ ನೀಡಲಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್ ಮನೋಹರ್, ನಿರ್ದೇಶಕರಾದ ಗಣೇಶ್ ಎಂ ಅಂಗಡಿ, ಸ್ಕಿಲ್ ಅಕಾಡೆಮಿ ಮ್ಯಾನೇಜರ್ ಕುಮಾರ್ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.