Tuesday, February 17, 2026
Tuesday, February 17, 2026
Home Blog Page 166

Rotary Club Shimoga ಬೈಕ್ ಚಾಲನೆಯಲ್ಲಿ ಹೆಲ್ಮೆಟ್, ಕಾರಿನ ಚಾಲನೆಯಲ್ಲಿ ಸೀಟ್ ಬೆಲ್ಟ್ ಧರಿಸಲು ಮರೆಯಬೇಡಿ – ರವಿ ಕೋಟೋಜಿ

0

Rotary Club Shimoga ಸಾರ್ವಜನಿಕರು ರಸ್ತೆ ಸಂಚಾರ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು ಎಂದು ರೋಟರಿ
ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ರೋಟರಿ ಕ್ಲಬ್ ತರೀಕೆರೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದರಿಂದ ಅನೇಕ ಕಡೆಗಳಲ್ಲಿ ಅಪಘಾತ ಸಂಭವಿಸಿರುವುದನ್ನು ನೋಡಬಹುದಾಗಿದೆ. ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಂಡಿರುವುದು ತುಂಬಾ ಒಳ್ಳೆಯ ಕೆಲಸ. ಈ ರೀತಿ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಮಾತನಾಡಿ, ಜಂಟಿ ಸಭೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಸ್ಪರ ಹಂಚಿಕೊಂಡು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಸೇವಾ ಕಾರ್ಯ ಹಮ್ಮಿಕೊಳ್ಳೋಣ, ಜಂಟಿ ಸಭೆಯಿಂದ ಸದಸ್ಯರಲ್ಲಿ ಪರಸ್ಪರ ಸ್ನೇಹ ಸಂಬಂಧಗಳು ಬೆಳೆಯುತ್ತವೆ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಅನ್ನು ಧರಿಸಬೇಕು ಎಂದರು.

ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ, ಎರಡು ಕ್ಲಬ್‌ನ ನಡುವೆ ಉತ್ತಮ ಬಾಂಧವ್ಯ ಇದ್ದು, ಇದು ಎರಡನೇ ಜಂಟಿ ಸಭೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜಂಟಿ ಸಭೆಗಳನ್ನು ಮಾಡೋಣ ಎಂದರು. ಮಾಜಿ ಸಹಾಯಕ ಗವರ್ನರ್ ಡಾ. ಶರತ್ ಮಾತನಾಡಿ, ಸಂಚಾರ ನಿಯಮವನ್ನು ಪಾಲಿಸಿ, ಜೀವವನ್ನು ಉಳಿಸಿ ಎಂದರು.

Rotary Club Shimoga ತರೀಕೆರೆ ರೋಟರಿ ಕ್ಲಬ್ ಸದಸ್ಯರು ಹಮ್ಮಿಕೊಂಡಿದ್ದ ತರೀಕೆರೆಯಿಂದ ಕೊಡಚಾದ್ರಿ ತನಕ ಬೈಕ್ ರಸ್ತೆ ಸುರಕ್ಷತಾ ಅಭಿಯಾನದಲ್ಲಿ 25 ಸದಸ್ಯರು ಭಾಗವಹಿಸಿದ್ದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ಗೆ ಭೇಟಿ ನೀಡಿ ಪರಸ್ಪರ ಧ್ವಜವನ್ನು ವಿನಿಮಯ ಮಾಡಿಕೊಂಡರು.

ರೋಟರಿ ಕ್ಲಬ್ ತರೀಕೆರೆ ಅಧ್ಯಕ್ಷ ರವಿಕುಮಾರ್ ಮತ್ತು ಕಾರ್ಯದರ್ಶಿ ಪ್ರವೀಣ್ ತಂಬಿ, ವಲಯ ಸೇನಾನಿ ಕಿರಣ್ ಕುಮಾರ್ ಜಿ, ಸಹ ಕಾರ್ಯದರ್ಶಿ ಮೋಹನ್ ಕುಮಾರ್, ಮಾಜಿ ಸಹಾಯಕ ಗವರ್ನರ್ ಗೋವರ್ಧನ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸದಸ್ಯರಾದ ಜಗದೀಶ್, ಬಲರಾಮ್, ಈಶ್ವರ ಬಿವಿ ಹಾಗೂ ಎರಡು ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

Chamber Of Commerce Shivamogga ಫೌಂಡ್ರಿ ಉದ್ಯಮ ಬೆಳೆಯಲು ಟಿ.ವಿ.ನಾರಾಯಣ ಶಾಸ್ತ್ರಿಗಳ ಶ್ರಮ,ಮಾರ್ಗದರ್ಶನ ಸಹಕಾರಿಯಾಗಿದೆ- ರುದ್ರೇಗೌಡ

0

Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಕೈಗಾರಿಕೆ ಪಿತಾಮಹ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಜನ್ಮಶತಾಬ್ದಿ ಆಚರಣೆ ಪ್ರಯುಕ್ತ ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರವೇಶದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.

ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡ ಶೆಟ್ಟಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿಗೆ ಮೂಲ ಕಾರಣಕರ್ತರು ಟಿ.ವಿ.ನಾರಾಯಣಶಾಸ್ತ್ರಿ ಎಂದರು. ಕೈಗಾರಿಕೋದ್ಯಮಿ ಎಸ್.ರುದ್ರೆಗೌಡ ಮಾತನಾಡಿ, ಶಿವಮೊಗ್ಗದಲ್ಲಿ ಫೌಂಡ್ರಿ ಕೈಗಾರಿಕೆಗಳು ಬೆಳೆಯಲು ಅವರ ಶ್ರಮ ಮತ್ತು ಮಾರ್ಗದರ್ಶನ ಸಹಕಾರಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ ಮಾತನಾಡಿ, ನಿಜವಾದ ಕೈಗಾರಿಕಾ ಕ್ರಾಂತಿಯನ್ನು ಟಿ.ವಿ.ನಾರಾಯಣ ಶಾಸ್ತ್ರಿ ಅವರು ಪ್ರಾರಂಭಿಸಿದರು.

Chamber Of Commerce Shivamogga ಅವರು ಅನೇಕ ಯುವಕರನ್ನು ಸಾಮಾನ್ಯ ಇಂಜಿನಿಯರಿಂಗ್, ಆಟೋ ಸರ್ವಿಸ್, ಕೃಷಿ ಉಪಕರಣಗಳು, ಟೈರ್ ರಿಟ್ರೇಡಿಂಗ್, ಟ್ರ‍್ಯಾಕ್ಟರ್ ಟ್ರೈಲರ್ ನಿರ್ಮಾಣ, ಆಟೋ ಘಟಕಗಳು, ಫೌಂಡ್ರಿ ಘಟಕಗಳನ್ನು ಪ್ರಾರಂಭಿಸಲು ಪ್ರೇರೇಪಿಸಿದರು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಗಣೇಶ ಎಂ.ಅಂಗಡಿ, ಜಿ.ವಿ.ಕಿರಣ ಕುಮಾರ್ , ಕೆ.ಬಿ.ಶಿವಕುಮಾರ್, ರವಿ ಪ್ರಕಾಶ್ ಜೆನ್ನಿ, ಸಾಗರ ಕೈಗಾರಿಕಾ ವಸಾಹತು ಪ್ರದೇಶದ ಅಧ್ಯಕ್ಷ ಉಮೇಶ್ ಶಾಸ್ತ್ರಿ, ಕೈಗಾರಿಕಾ ಉದ್ಯಮಿ ಭೂಪಾಳಂ ಸತ್ಯನಾರಾಯಣ, ಮಾಜಿ ಅಧ್ಯಕ್ಷ ಡಿ.ಎಂ.ಶಂಕ್ರಪ್ಪ, ರಮೇಶ್ ಹೆಗ್ಡೆ, ಜೋಯಿಸ್ ರಾಮಾಚಾರ್, ಅನೇಕ ಕೈಗಾರಿಕೋದ್ಯಮಗಳು ಉಪಸ್ಥಿತರಿದ್ದರು.

Department of School Education ಪಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕುಂಸಿ ಉರ್ದು ಶಾಲೆಗೆ ಸಮಗ್ರ ಪ್ರಶಸ್ತಿ

0

Department of School Education ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕುಂಸಿ, ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕುಂಸಿ ಬಾಲಕ, ಬಾಲಕಿಯರು ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ, ಬಾಲಕರ ವಿಭಾಗದಲ್ಲಿ ಖೋ-ಖೋ ಮತ್ತು ಕಬ್ಬಡಿ ಯಲ್ಲಿ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿಯೂ ಸಹ ಖೋ-ಖೋ ಮತ್ತು ಕಬಡ್ಡಿಯಲ್ಲಿ ಉತ್ತಮ ದಾಳಿ ಅಷ್ಟೇ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿ, ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ತಂದು ಕೊಟ್ಟಿರುತ್ತಾರೆ.

ದೈಹಿಕ ಶಿಕ್ಷಣ ಶಿಕ್ಷಕರಾದ ರವಿಕುಮಾರ್ ಡಿ. ಪಿ.ಅವರಲ್ಲಿ ತರಬೇತಿಯನ್ನು ಪಡೆಯುತ್ತಿರುವುದು ಮತ್ತೊಂದು ವಿಶೇಷ.

Department of School Education ಮಕ್ಕಳ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಎಸ್.ಡಿ.ಎಂ. ಸಿ.ಅಧ್ಯಕ್ಷರು, ಮತ್ತು ಸದಸ್ಯರುಗಳು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು,ಊರಿನ ಗ್ರಾಮಸ್ಥರು ಶುಭ ಹಾರಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಎಲ್ಲ ರಂಗದಲ್ಲೂ ಮುಂದುವರೆದಿದೆ- ಡಾ.ಪಿ.ರಂಗನಾಥ್

0

ಸಣ್ಣ ಸಣ್ಣ ಸಮುದಾಯಗಳಿಗೆ ಸಂಘಟನೆಯೇ ಬಲ. ಆದ್ದರಿಂದ ಸಮಾಜದವರೆಲ್ಲ ಸೇರಿ ಸಂಘಟನೆಯನ್ನು ಬಲಗೊಳಿಸಬೇಕು. ನಾವೇಕೆ ಹಿಂದುಳಿದಿದ್ದೇವೆ ಎನ್ನುವುದನ್ನು ಅರಿತುಕೊಂಡು ನಾವು ಏಕೆ ಬದಲಾಗುತ್ತಿಲ್ಲ ಎಂಬ ಬಗ್ಗೆ ಆತ್ಮಅವಲೋಕನ ಮಾಡಿಕೊಳ್ಳಬೇಕೆಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ ಹೇಳಿದರು.
ಟ್ರಸ್ಟ್ ಪತ್ರಿಕಾ ಭವನದಲ್ಲಿಶ್ರೀ ಭಗೀರಥ ಸಹಕಾರ ಸಂಘದ 3ನೆಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರನ್ನು ಗೌರವಿಸಿ ಮಾತನಾಡಿದ ಅವರು
ಶಿವಮೊಗ್ಗ ಜಿಲ್ಲೆ ಎಲ್ಲ ರಂಗದಲ್ಲೂ ಮುಂದುವರೆದಿದೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿದ್ದಾರೆ. ಇಲ್ಲಿ ನಮ್ಮದೇ ಸಮಾಜದ ಜಿಲ್ಲಾಮಟ್ಟದ ಸಹಕಾರ ಸಂಘ ಸ್ಥಾಪಿಸಿ ಸಮಾಜದ ಏಳಿಗೆಗೆ ಅದು ಕಂಕಣಬದ್ಧವಾಗಿದೆ.

ಜಿಲ್ಲೆಯಲ್ಲಿನ ಪ್ರತಿಯೊಬ್ಬ ಸಮಾಜ ಬಾಂಧವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಸಹಕಾರ ಸಂಘದ ಷೇರನ್ನು ಪಡೆದು ಸಮಾಜದ ಏಳಿಗೆಗೆ ಕೈಜೋಡಿಸಬೇಕು ಎಂದರು. ಸಂಘದಿಂದ ಸಾಲ ಪಡೆದು ವಿವಿಧ ಚಟುವಟಿಕೆಗಳಲ್ಲಿ ಅದನ್ನು ತೊಡಗಿಸಿ ಉನ್ನತಿಯಾಗಬೇಕು. ಮತ್ತು ಕಾಲಕಾಲಕ್ಕೆ ಮರು ಪಾವತಿ ಮಾಡಬೇಕು. ಆ ಮೂಲಕ ಸಮಾಜಕ್ಕೆ ನಮ್ಮ ಋಣ ತೀರಿಸಬೇಕು. ನಾವು ಸಮಾಜದಿಂದ ಏನನ್ನು ಪಡೆದಿದ್ದೇವೆಯೋ ಅದನ್ನು ಮರಳಿ ಸಮಾಜಕ್ಕೆ ಕೊಡಬೇಕು.ಇನ್ನೊಬ್ಬರು ಮೇಲೆ ಬರಲು ನಾವು ನೆರವಾಗಬೇಕು ಎಂದರು.
ಸಮಾಜದಲ್ಲಿನ ಭಿನ್ನಮತವನ್ನು ತೊಡೆದುಹಾಕಿ ಒಳಿತಿಗಾಗಿ ಎಲ್ಲರೂ ಮುನ್ನಡೆಯಬೇಕು. ಸಂಘದ ಅಭಿವೃದ್ಧಿಗೆ ಯಾರು ಹೆಚ್ಚು ಕಾರಣಕರ್ತರಾಗುತ್ತಾರೋ ಅಂತಹವರು ಅಧಿಕಾರ ವಹಿಸಿಕೊಂಡು ಎಲ್ಲರನ್ನೂ ಒಳಗೊಂಡು, ಯುವಕರನ್ನು ಸೇರಿಸಿಕೊಂಡು ಸಮಾಜಕ್ಕಾಗಿ ದುಡಿಯಬೇಕು ಎಂದು ಕರೆ ನೀಡಿದರು.
ಸಂಘದ ನಿರ್ದೇಶಕ ಎಂ ಜಿ ಕೆ ಹನುಮಂತಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವವರು ಶಿಕ್ಷಣವಂತರಾಗಬೇಕು. ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಸೌಲಭ್ಯ ಕಲ್ಪಿಸಬೇಕು. ಮಕ್ಕಳು ಪ್ರತಿಭಾನ್ವಿತರಾಗಬೇಕು. ಅವರ ಮೂಲಕ ಸಮಾಜ ಸೇವೆ ಮಾಡಬೇಕು. ಇಂದು ವಿದ್ಯೆ ಕಲಿತರಷ್ಟೇ ಮುನ್ನಡೆಯಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳನ್ನು ಮತ್ತು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ಮಂಜುನಾಥ ಮಾತನಾಡಿ, ಸಮಾಜದ ಬಾಂಧವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಆ ಮೂಲಕ ಸಮಾಜದಲ್ಲಿನ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿ ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಉನ್ನತ್ತಿ ಪಡೆಯಲು ಸಾಧ್ಯ ಎಂದರಲ್ಲದೇ, ಜಿಲ್ಲೆಯಲ್ಲಿನ ಸಮಾಜ ಬಾಂಧವರು ಭಗೀರಥ ಸಹಕಾರ ಸಂಘದ ಷೇರುದಾರರಾಗುವ ಮೂಲಕ ಮಾದರಿ ಸಹಕಾರ ಸಂಘ ಎಂದು ಹೆಸರುಗಳಿಸಲು ಸಂಕಲ್ಪ ಮಾಡಬೇಕಾಗಿದೆ ಎಂದರು.
ಉಪಾಧ್ಯಕ್ಷ ವಸಂತ ಹೋಬಳಿದಾರ್, ನಿರ್ದೇಶಕರಾದ ಎಲ್. ಮಂಜುನಾಥ, ಎಚ್. ರವಿ,ಯು ಕೆ ವೆಂಕಟೇಶ್, ಯು ಕೆ ರಮೇಶ್, ಜಿ ಚಿದಾನಂದ, ಕೆ ಶ್ರೀನಿವಾಸ, ಎಸ್ ಪಿ ಸುಧಾಕರ,ವೈ ಬಿ ಲೋಕೇಶ್ ,ಎಲ್. ಚಂದ್ರಶೇಖರ್,ಅರ್ಚನಾ, ಕೆ. ಟಿ. ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.

Teacher’s Day ಮಕ್ಕಳ ಭವಿಷ್ಯ ರೂಪಿಸಿ ಉನ್ನತ ಸಾಧನೆಗೆ ಪ್ರೇರಣೆ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ.- ಕೆ.ಎಸ್.ವಿಶ್ವನಾಥ‌ ನಾಯಕ್

0

Teacher’s Day ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಕೃಷಿ ನಗರದಲ್ಲಿರುವ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ವತಿಯಿಂದ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ವಸತಿ ಶಾಲೆಯ ನಾಲ್ವರು ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಮಾತನಾಡಿದರು. ಮಕ್ಕಳ ಭವಿಷ್ಯ ರೂಪಿಸಿ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವವರು ಶಿಕ್ಷಕರು ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಯಲ್ಲಿ ವಿವಿಧ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಜೋನಲ್ ಲೆಫ್ಟಿನೆಂಟ್ ಶಂಕರ್ ಎಸ್.ಪಿ. ಮಾತನಾಡಿ, ಗುರು ದೇವರ ಸಮಾನ. ಮೌನದಲ್ಲೂ ಬೆಳಕು ಹಚ್ಚುವ ಗುರುಗಳು ನಿಜವಾದ ದೈವಸಮಾನರು ಎಂದು ಶ್ಲಾಘಿಸಿದರು. ರೋಟರಿ ಸಂಸ್ಥೆಯ ಜಯಪ್ರಕಾಶ್ ಮಾತನಾಡಿ, ಸೇವಾಭಾವದಿಂದ ತುಂಬಿದ ಕಾರ್ಯದಿಂದ ನಾವು ಪ್ರೇರಣೆಯನ್ನು ಪಡೆಯಬೇಕು. ಶಿಕ್ಷಕರ ಸೇವೆ ಶಾಶ್ವತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರಿಗೆ ಕಿರು ಕಾಣಿಕೆ ನೀಡಿದರು.
ಶಾಲೆಯ ರಾಘವೇಂದ್ರ ವಿ. ಪಾಟೀಲ್, ಮಾಧವಮೂರ್ತಿ, ಟಿ.ಜಯರಾಮ ಭೋವಿ ಹಾಗೂ ಪ್ರಭಾವತಿ ಎಸ್. ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರ ಪರಿಶ್ರಮವನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸ ತಂದಿದೆ ಎಂದು ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.
Teacher’s Day ಎಂ ಆರ್ ಬಸರಾಜ್, ರಾಜೇಶ್, ಧನರಾಜ್, ಶಂಕರ್, ನಿತಿನ್, ಮಲ್ಲೇಶ್, ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

MESCOM ಸೆ.19. ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

0

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲಿ ಸೆ. 19 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ;9448289520.

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು?….ಮಾಹಿತಿ ಸರಣಿ

0

ಭಾಗ –5

ಮುಂದುವರೆದ ಭಾಗ

ಕೆಳದಿ ಸಂಕಣ್ಣನಾಯಕರು ದೆಹಲಿಯ ಜಟ್ಟಿ ಅಂಕುಶಖಾನನನ್ನು ಕಣ್ಣು ಮುಚ್ಚಿ ಬಿಡುವುದರೊಳಗೆ ದೇಹವನ್ನು ಎರಡು ಸೀಳಾಗಿಸಿ ಕಾಳಗದಲ್ಲಿ ಗೆದ್ದು ಬೀಗಿದ್ದು, ಇದನ್ನು ನೋಡಿದ ಬಾದಷಹಃನು ಬಹಳ ಸಂತೋಷದಿಂದ ಸಂಕಣ್ಣನಾಯಕರ ಹಿನ್ನೆಲೆ ತಿಳಿದು ಬಿರುದು, ರತ್ನಾವಳಿಗಳನ್ನು ನೀಡಿ ಸನ್ಮಾನಿಸಿದನು. ಅದಕ್ಕೆ ಸಂಕಣ್ಣನಾಯಕರು ” ಈಶ್ವರ ಅನುಗ್ರಹದಿಂದ ಬಿರುದು, ಬಾವುಲಿಗಳು ಬೇಕಾದಷ್ಟು ಇವೆ, ಆದರೆ ನನ್ನ ಮನಸ್ಸು ಆಧ್ಯಾತ್ಮಿಕ ದ ಕಡೆ ಇದ್ದು ಕಾಶೀಕ್ಷೇತ್ರಕ್ಕೆ ಹೊರಡಬೇಕೆಂದಿದ್ದು ಅದಕ್ಕೆ ತಮ್ಮ ಸಹಕಾರದ ಅಗತ್ಯವಿದೆಯೆಂದು ತಿಳಿಸಿದರು.‌ ಈ ಮಾತಿನಿಂದ ಸಂತೋಷಗೊಂಡ ಬಾದಷಹಃ ಸಂಕಣ್ಣನಾಯಕರಿಗೆ ತೀರ್ಥ ಯಾತ್ರೆ ಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಾ ಆಯಾ ಸ್ಥಾನಿಕ ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿ ಸಂಕಣ್ಣನಾಯಕರಿಗೆ ಹನ್ನೆರಡು ಸಾವಿರ ಹೊನ್ನುಗಳನ್ನು ನೀಡಿ ಸಂತೋಷದಿಂದ ಬೀಳ್ಕೊಟ್ಟನು.‌ಅಲ್ಲಿಂದ ಹೊರಟ ನಾಯಕರು ದಿಲ್ಲಿಯ “ಚಾವಲಿಕೆ ಮಂಡೈ” ಎಂಬಲ್ಲಿ ಜಂಗಮಮಠವನ್ನು ಸ್ಥಾಪಿಸಿದ್ದಲ್ಲದೆ ಆಗ್ರಾದಲ್ಲಿಯೂ, ಮಾಣಿಕ್ಯಪುರಿಯಲ್ಲಿಯೂ, ಪ್ರಯಾಗ, ತ್ರಿವೇಣಿಸಂಗಮ ಕ್ಷೇತ್ರದಲ್ಲಿಯೂ ಜಂಗಮಮಠವನ್ನು ಸ್ಥಾಪಿಸಿ ಅಲ್ಲೆಲ್ಲಾ ಭೂದಾನವನ್ನು ಮಾಡಿ ಕಾಶಿಗೆ ತೆರಳಿ ವಿಶ್ವೇಶ್ವರನ ದರ್ಶನ ಪಡೆದು “ಜಂಗಮವಾಡಿ” ಮಠವನ್ನು ಸ್ಥಾಪಿಸಿ ವಿಶ್ವೇಶ್ವರ ನ ಪೂಜೆಗೆ, ಭಕ್ತರ ದಾಸೋಹಕ್ಕೆ ದಾನಗಳನ್ನು ನೀಡಿದ್ದು ಅಲ್ಲಿದ್ದ ಕಪಿಲಾತೀರ್ಥ, ಮಾನಸಸರೋವರ, ಗಂಧರ್ವಸಾಗರವೆಂಬ ತೀರ್ಥ ಗಳನ್ನು ಜೀರ್ಣೋದ್ಧಾರ ಮಾಡಿ ಐಯ್ಯಪ್ಪನೆಂಬ ಶಾನುಭೋಗನ ಮುಖಾಂತರ ನರ್ಮದೇಶ್ವರ, ಕರ್ದಮೇಶ್ವರ, ಭೀಮಚಂದ್ರಿಕೆ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿ ತನ್ನ ಪುತ್ರ ವೆಂಕಟಪ್ಪನಾಯಕರ ಹೆಸರಲ್ಲಿ ಶಾಸನ ಬರೆಸಿದರು. Klive Special Article ನಂತರ ಕೇದಾರ, ಗಯ, ಹರಿದ್ವಾರ, ನೇಪಾಳ, ಕಾಶ್ಮೀರ, ಕುರುಕ್ಷೇತ್ರ ಮುಂತಾದ ಕಡೆ ಸಂಚರಿಸಿ ಅಲ್ಲೆಲ್ಲಾ ದಾನ ಮಾಡಿ ಕೆಳದಿಯ ಹೆಸರನ್ನು ಅಚಂದ್ರಾರ್ಕವಾಗಿರುವಂತೆ ಮಾಡಿದ್ದಲ್ಲದೆ ಪೈಠಣಕ್ಕೆ ಬಂದು ಮೂವತ್ತೆರೆಡು ಕರಕಮಲಗಳಿಂದ ಕಂಗೊಳಿಸುತ್ತಿದ್ದ ಅಘೋರ ಮೂರ್ತಿಯನ್ನು ಕಂಡು ಅದರ ಯಥಾ ನಕಲನ್ನು ಚಿತ್ರಿಸಿಕೊಂಡು, ನಂತರ ಅಲ್ಲಿಂದ‌ ಪಂಪಾಕ್ಷೇತ್ರದ‌ ಮೂಲಕ ಮಾಸೂರು ಸೀಮೆಯ ಆಲವಳ್ಳಿಗೆ ಬಂದು ಅಲ್ಲಿ ದೊರೆತ ಸುಂದರ ವೀರಭದ್ರ ಮೂರ್ತಿಯೊಂದಿಗೆ ಕೆಳದಿಗೆ ಬಂದನು.ಕೆಳದಿಯ ರಾಮೇಶ್ವರ ಲಿಂಗದ ದಕ್ಷಿಣ ಭಾಗದಲ್ಲಿ ವೀರಭದ್ರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಿಲಾಮಯ ಗರ್ಭಗುಡಿಯನ್ನು ನಿರ್ಮಿಸಿ.‌ಅದರ ಪೂಜೆಗಾಗಿ ಭೂದಾನ ನೀಡಿದರು. ಪೈಠಣದಿಂದ ಚಿತ್ರಿಸಿ ತಂದಿದ್ದ ಅಘೋರೇಶ್ವರನ ವಿನ್ಯಾಸಕ್ಕೆ ಅನುಗುಣವಾಗಿ ಶ್ರೀ ಅಘೋರೇಶ್ವರನ ಮೂರ್ತಿ ನಿರ್ಮಿಸಿ ಅದನ್ನು ಇಕ್ಕೇರಿ ಯಲ್ಲಿ ಪ್ರತಿಷ್ಠಾಪಿಸಿ, ಭವ್ಯ ದೇವಾಲಯವನ್ನು, ಕೊಳವನ್ನು, ಹೂದೋಟವನ್ನೂ ನಿರ್ಮಿಸಿದನು. ಮುಂದುವರೆಯುವುದು.

Bharat Scouts and Guides ಮಕ್ಕಳಿಗೆ ಮಾರ್ಗದರ್ಶನ ನೀಡುವಲ್ಲಿ ಸ್ಕೌಟ್ಸ್ & ಗೈಡ್ಸ್ ಶಿಕ್ಷಕರ ಪಾತ್ರ ಅನನ್ಯ,- ಶಕುಂತಲಾ ಚಂದ್ರಶೇಖರ್

0

Bharat Scouts and Guides ಮಕ್ಕಳಿಗೆ ಮಾರ್ಗದರ್ಶನ ನೀಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರ ಸೇವೆ ಅನನ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಮಕ್ಕಳು ಉನ್ನತ ಸಾಧನೆ ಮಾಡುವಲ್ಲಿ ಪ್ರೋತ್ಸಾಹಿಸುತ್ತಾರೆ. ಅಂತಹ ಶಿಕ್ಷಕರ ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಮತ್ತು ಸ್ಕೌಟ್ ಶಿಕ್ಷಕರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತರಾದ ಎಸ್.ಎಂ.ವೀರಭದ್ರಗೌಡ ಅವರನ್ನು ಸನ್ಮಾನಿಸಲಾಯಿತು.

ವೀರಭದ್ರಗೌಡರು ದೈಹಿಕ ಶಿಕ್ಷಕರಾಗಿ ರಾಜ್ಯ, ರಾಷ್ಟ್ರ ಮಟ್ಟದ ವಾಲಿಬಾಲ್, ಖೋಖೋ, ಕಬಡ್ಡಿ ಮುಂತಾದ ಸ್ಪರ್ಧೆಗಳ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಶಾಲೆಯಲ್ಲಿ ಸ್ಕೌಟ್ ಮಕ್ಕಳಿಗೆ ಕವಾಯತು ತರಬೇತಿ, ಜಿಲ್ಲಾ ಪುರಸ್ಕಾರ ತರಬೇತಿ ನೀಡಿ ಮಕ್ಕಳ ಸರ್ವಾಂಗೀಣ ಬೆಳೆವಣಿಗೆಗೆ ಮಾರ್ಗದರ್ಶಕರಾಗಿದ್ದರು.

2024ರಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ಕೌಟ್ ತಂಡಕ್ಕೆ ದ್ವಿತೀಯ ಸ್ಥಾನ ಬರುವಲ್ಲಿ ವೀರಭದ್ರಗೌಡ ಅವರ ಕೊಡುಗೆ ಅಪಾರವಾಗಿದೆ.

ನೂತನ ಜಿಲ್ಲಾ ಗೈಡ್ ಆಯುಕ್ತೆಯಾಗಿ ರಾಜ್ಯ ಸಂಸ್ಥೆ ವತಿಯಿಂದ ನಿಯುಕ್ತಿಗೊಂಡಿರುವ ಲಕ್ಷ್ಮೀ ರವಿ ಅವರನ್ನು ಅಭಿನಂದಿಸಲಾಯಿತು. ಹಿರಿಯ ಸ್ಕೌಟರ್ ವೈ.ಆರ್.ವೀರೇಶಪ್ಪ ಅಧ್ಯಕ್ಷತೆ ವಹಿಸಿದ್ದರು.

Bharat Scouts and Guides ಜಿಲ್ಲಾ ರೋವರ್ ಆಯುಕ್ತ ಕೆ.ರವಿ, ಜಿಲ್ಲಾ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಸಹಾಯಕ ಜಿಲ್ಲಾ ಆಯುಕ್ತ ಹೆಚ್.ಪರಮೇಶ್ವರ, ಶ್ರೀನಿವಾಸ್ ವರ್ಮಾ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಘನಶ್ಯಾಮ್ ಗಿರಿಮಾಜಿ, ಅಶ್ವಿನಿ ದೊರೈ, ದೊರೈ, ನಗರದ ವಿವಿಧ ಶಾಲಾ ಕಾಲೇಜಿನ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ, ಯುವ ಸಮಿತಿ ಸದಸ್ಯರು ಭಾಗವಹಿಸಿದ್ದರು.

S.N. Channabasappa ವಕ್ಫ್ ಕಾಯಿದೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ- ಎಸ್.ಎನ್.ಚನ್ನಬಸಪ್ಪ

0

S.N. Channabasappa ವಕ್ಫ್ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ.. ಸಂಪೂರ್ಣ ಕಾಯ್ದೆಗೆ ತಡೆ ನೀಡುವುದನ್ನು ನಿರಾಕರಿಸಿ, ಕೆಲ ನಿಬಂಧನೆಗಳಿಗೆ ಮಾತ್ರ ತಾತ್ಕಾಲಿಕ ತಡೆ ನೀಡಿರುವುದು ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕರಾದ ಎಸ್.ಎನ್. ಚೆನ್ನಬಸಪ್ಪ

ಹಿಂದೂಗಳ ದೇವಾಲಯಗಳು, ಧಾರ್ಮಿಕ ಆಸ್ತಿಗಳು ಮತ್ತು ಸಾಂಸ್ಕೃತಿಕ ಪರಂಪರೆಗಳ ಮೇಲೆ ಅತಿಕ್ರಮಣವಾಗದಂತೆ ಕಾಯುವ ಹಕ್ಕು ನಮ್ಮ ಪ್ರತಿಯೊಬ್ಬರಿಗೂ ಇದೆ. ಈ ತೀರ್ಪು ಆ ಹಕ್ಕನ್ನು ಗೌರವಿಸುವ ಮಹತ್ವದ ಹೆಜ್ಜೆಯಾಗಿದೆ. ಶತಮಾನಗಳಿಂದ ಹಿಂದೂಗಳು ಕಟ್ಟಿಕೊಂಡು ಬಂದ ಪವಿತ್ರ ತಾಣಗಳು, ಧಾರ್ಮಿಕ ಆಸ್ತಿಗಳು ಮತ್ತು ಸಂಸ್ಕೃತಿಯ ಸಂರಕ್ಷಣೆಯ ಜೊತೆಗೆ ರೈತರ ಜಮೀನುಗಳ ಹಿತದೃಷ್ಟಿಯಲ್ಲಿಯೂ ನ್ಯಾಯಾಂಗ ನೀಡಿದ ಭರವಸೆ ಇದಾಗಿದೆ ಎಂದು ಹೇಳಿದ್ದಾರೆ.

ಈ ತೀರ್ಪು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ನಿಲುವಿಗೆ ಬೆಂಬಲ ನೀಡಿದಂತೆಯೇ, ಹಿಂದು ಸಮಾಜದ ಆತಂಕ ಮತ್ತು ಹಕ್ಕುಗಳಿಗೆ ತೃಪ್ತಿ ನೀಡಿದೆ. ಇದರಿಂದ ಜನರ ಧ್ವನಿಗೆ ಗೌರವ ಸಿಕ್ಕಿದೆ, ನ್ಯಾಯಾಂಗದ ಮೇಲೆ ವಿಶ್ವಾಸ ಇನ್ನಷ್ಟು ಬಲವಂತವಾಗಿದೆ. ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಎ.ಜಿ. ಮಸೀಹ್ ಅವರ ಪೀಠ ನೀಡಿದ ಈ ತೀರ್ಪು ನ್ಯಾಯಾಂಗದ ತಟಸ್ಥತೆ, ಸಮತೋಲನ ಮತ್ತು ದೂರದೃಷ್ಟಿಯ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.

S.N. Channabasappa ನ್ಯಾಯಾಂಗದ ಈ ತೀರ್ಪು, ಕಾನೂನು ಪ್ರಕ್ರಿಯೆಯ ಮೇಲೆ ನಾಗರಿಕರ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಮುಂದಿನ ದಿನಗಳಲ್ಲಿ ಈ ಕಾಯ್ದೆಗೆ ಸಂಬಂಧಿಸಿದಂತೆ ನಡೆಯಲಿರುವ ವಿಚಾರಣೆಯಲ್ಲಿ, ನ್ಯಾಯಾಂಗವು ದೇಶದ ಸಂವಿಧಾನಬದ್ಧ ಮೌಲ್ಯಗಳಿಗೆ ಅನುಗುಣವಾಗಿ ತೀರ್ಪು ನೀಡಲಿದೆ ಎಂಬ ವಿಶ್ವಾಸ ನಮ್ಮದಲ್ಲಿದೆ ಎಂದು ಹೇಳಿದ್ದಾರೆ..

Multispeciality Hospital | Narayana Hospital ಕೇಂದ್ರದ “ಸ್ವಸ್ಥನಾರಿ,ಸಶಕ್ತ ಕುಟುಂಬ ಅಭಿಯಾನಕ್ಕೆ ಬೆಂಬಲ, ಶಿವಮೊಗ್ಗ ಎನ್, ಹೆಚ್, ಆಸ್ಪತ್ರೆಯಿಂದ ಉಚಿತ ಇಸಿಜಿ ತಪಾಸಣಾ ಶಿಬಿರ

0

Multispeciality Hospital | Narayana Hospital ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಕುವೆಂಪು ರಸ್ತೆಯಲ್ಲಿರುವ ನಾರಾಯಣ ಸೂಪರ್‌ ಸ್ಪೇಷಾಲಿಟಿ ಕ್ಲಿನಿಕ್‌ನಲ್ಲಿ ಸೆಪ್ಟೆಂಬರ್ 17, 2025ರಂದು ಬೆಳಿಗ್ಗೆ 8 ಗಂಟೆಯಿಂದ 4 ಗಂಟೆ ಯವರೆಗೆ ಮಹಿಳೆಯರಿಗೆ ಉಚಿತ ಇಸಿಜಿ ತಪಾಸಣೆಯನ್ನು ನಡೆಸಲಿದೆ.

ಭಾರತದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ನಾರಾಯಣ ಹೆಲ್ತ್, ಸರ್ಕಾರದ ‘ಸ್ವಸ್ಥ ನಾರಿ, ಸಶಕ್ತ ಕುಟುಂಬ ಅಭಿಯಾನ’ಕ್ಕೆ ಬೆಂಬಲವಾಗಿ ಮಹಿಳೆಯರಿಗಾಗಿ ಉಚಿತ ಇಸಿಜಿ ತಪಾಸಣಾ ಶಿಬಿರಗಳನ್ನು ಆಯೋಜಿಸಿದೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್‌ ಪಿ ಜಾನ್‌ ಅವರು ಮಹಿಳೆಯರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ.

Multispeciality Hospital | Narayana Hospital ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 98864-13131ಅಥವಾ ಭೇಟಿ ನೀಡಿ: https://www.narayanahealth.org/

ಮಾಧ್ಯಮ ಸಂಪರ್ಕ: nh@brandcompr.com