Monday, February 16, 2026
Monday, February 16, 2026
Home Blog Page 151

Bapuji Institute of Hi-Tech Education ಸಾಮಾನ್ಯ ಪದವಿ,ಡಿಪ್ಲೊಮಾದಾರರಿಗೂ ಉದ್ಯೋಗಾವಕಾಶ ಸಾಕಷ್ಟಿವೆ- ಡಾ.ಬಿ.ವೀರಪ್ಪ

0

ಮಾಹಿತಿ ತಂತ್ರಜ್ಞಾನ ಕಾರ್ಪೊರೇಟ್ ವಲಯಗಳಲ್ಲಿ ಕೇವಲ ತಾಂತ್ರಿಕ ಪದವೀಧರರಿಗಷ್ಟೇ ಅಲ್ಲ ಸಾಮಾನ್ಯ ಪದವಿ ಡಿಪ್ಲೋಮೋದಾರರಿಗೂ ಉದ್ಯೋಗ ಅವಕಾಶಗಳು ಸಾಕಷ್ಟಿವೆ ಎಂದು ಲೇಕ್ ವ್ಯೂ ನ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಬಿಸಿಎ ಪ್ರಾಂಶುಪಾಲ ಡಾ. ಬಿ ವೀರಪ್ಪ ಹೇಳಿದರು.

Bapuji Institute of Hi-Tech Education ಅವರು ಕಾಲೇಜಿನ ಆವರಣದಲ್ಲಿ ಮಹಾ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಉದ್ಯೋಗ ಅವಕಾಶಗಳು ಕೇವಲ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಎಲ್ಲಾ ಅರ್ಹರಿಗೂ ಲಭ್ಯವಾಗಲಿ ಎಂಬ ದೃಷ್ಟಿಯು ಬಾಪೂಜಿ ವಿದ್ಯಾ ಸಂಸ್ಥೆಯ ದಾಗಿದೆ. ಈ ಮೇಳದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದಲೂ ಬಂದಿರುವ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು 15ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈ ಕ್ಯಾಂಪಸ್ ಡ್ರೈವಿಗೆ ಆಗಮಿಸಿವೆ ಎಂದು ಹೇಳಿದರು.

ಇದರಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಂಪನಿಗಳ ಉದ್ಯೋಗ ಅವಕಾಶ, ಸ್ಪರ್ಧಾತ್ಮಕ ಅನುಭವ ದೊರೆತರೆ ಕಂಪನಿಗಳಿಗೆ ಸಮಯ ಮತ್ತು ಸಂಪನ್ಮೂಲದ ಉಳಿತಾಯವೂ ಆಗುತ್ತದೆ ಎಂದರು.

ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಹೆಚ್ ವಿ ವಿಶೇಷ ಆಹ್ವಾನಿತರಾಗಿದ್ದರು. ವರ್ಕ್ ಫಾಕ್ಸ್ ಟೆಕ್ ಕಂಪನಿಯ ಮೇನೇಜರ್ ಕಿರಣ್, ಶ್ರೀ ಸಾಯಿ ದೇವ್ ಎಂಪ್ಲಾಯರ್ಸ್ ಸಂಸ್ಥೆಯ ಮೆನೇಜರ್ ನಿಹಾಲ್ ಮಾತನಾಡಿ ಉದ್ಯೋಗ ಅವಕಾಶಗಳ ಬಗ್ಗೆ ವಿವರಿಸಿದರು.

-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು-

BMTC Bangalore ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶ್ರೀ ವಿ.ಎಸ್.ಆರಾಧ್ಯ, ಶ್ರೀನಿಕೇತ್ ರಾಜ್ ಮೌರ್ಯ ಉಪಾಧ್ಯಕ್ಷರಾಗಿ ನೇಮಕ

0

BMTC Bangalore ಶ್ರೀ ವಿ.ಎಸ್.ಆರಾಧ್ಯರವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ‌. ಶ್ರೀನಿಕೇತ್ ರಾಜ್ ಮೌರ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಧಿಕಾರ ವಹಿಸುವ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್. ಆರ್ (ಭಾ.ಆ.ಸೇ), ನಿರ್ದೇಶಕರು (ಮಾ.ತಂ) ಶ್ರೀಮತಿ ಶಿಲ್ಪಾ. ಎಂ (ಭಾ.ಆ.ಸೇ) ಹಾಗೂ ನಿರ್ದೇಶಕರು (ಭ&ಜಾ) ಶ್ರೀ ಅಬ್ದುಲ್ ಅಹದ್ (ಭಾ.ಪೊ.ಸೇ) ಉಪಸ್ಥಿತರಿದ್ದರು. BMTC Bangalore ಈ ಸಂದರ್ಭದಲ್ಲಿ, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊಸ ಅಧ್ಯಕ್ಷರನ್ನು ಸ್ವಾಗತಿಸಿದರು.

Actor Dr. Shivaraj Kumar ಸೆ.28. ಶಿವಮೊಗ್ಗ ದಸರಾ ಮೂಸಿಕಲ್ ನೈಟ್. ನಟ ಡಾ.ಶಿವರಾಜ್ ಕುಮಾರ್ ವಿಶೇಷ ಆಹ್ವಾನಿತರು

0

Actor Dr. Shivaraj Kumar ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ದಸರಾ ಅಂಗವಾಗಿ ಆಗಸ್ಟ್ 28ರ ಭಾನುವಾರ ಸಂಜೆ 5 ಗಂಟೆಗೆ ನಗರದ ಪ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಲಾಗಿರುವ ಮ್ಯೂಸಿಕಲ್ ನೈಟ್ ಅದ್ದೂರಿ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ, ಯುವಜನರ ಹೃದಯ ಸಾಮ್ರಾಟ, ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಈ ಮ್ಯೂಸಿಕಲ್ ನೈಟ್ ಅದ್ದೂರಿ ಕಾರ್ಯಕ್ರಮಕ್ಕೆ ನಾಡಿನ ಹೆಸರಾಂತ ಗಾಯಕರಾದ ಹೇಮಂತಕುಮಾರ್, ಖ್ಯಾತ ಗಾಯಕಿ ಅನುರಾಧ ಭಟ್ ಮತ್ತು ತಂಡದವರು ಆಗಮಿಸಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಆಗಮಿಸಲಿರುವರು.

ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರ್ ಮಂಜುನಾಥ್, ಮಾಜಿ ಶಾಸಕ ಹೆಚ್. ಎಂ. ಚಂದ್ರಶೇಖರಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Actor Dr. Shivaraj Kumar ನಗರದ ನಾಗರಿಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Karnataka Neeravari Nigam Ltd ಶಿವಮೊಗ್ಗ ಜೆ.ಹೆಚ್. ಪಟೇಲ್ ಬಡಾವಣೆಯ ಒಳಚರಂಡಿ ಕಾಮಗಾರಿ ಬಗ್ಗೆ “ಕರವೇ”ಯಿಂದ ಮನವಿ ಅರ್ಪಣೆ

0

Karnataka Neeravari Nigam Ltd ಶಿವಮೊಗ್ಗ ನಗರದ ಜೆ ಎಚ್ ಪಟೇಲ್ ಬಡಾವಣೆಯಲ್ಲಿನ ಹಾಲಿ ಚಾಲನೆಯಲ್ಲಿರುವ ಒಳಚರಂಡಿ ಕೊಳವೆ ಮಾರ್ಗಗಳನ್ನು ನಾರ್ಧನ್ ಔಟ್ ಪಾಲ್ ಗೆ ಲಿಂಕ್ ಮಾಡುವ ಕಾಮಗಾರಿಯನ್ನು ತರಾತುರಿಯಲ್ಲಿ ಪ್ರಾರಂಭ ಮಾಡಿದ್ದು ಅಂದಾಜು ವೆಚ್ಚ 83.70, ಲಕ್ಷದ ಕಾಮಗಾರಿಗೆ ನಿಯಮದ ಪ್ರಕಾರ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಅನುಮತಿಯನ್ನು ತೆಗೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಬೇಕಿತ್ತು. ಆದರೆ ತರಾತುರಿಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತುಂಗಾ ಮೇಲ್ದಂಡೆ ಯೋಜನಾ ವಿಭಾಗದಿಂದ ಮೇಲ್ಕಂಡ ಕಾಮಗಾರಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಪಡೆಯದೆ ಕಾಮಗಾರಿ ಮಾಡಿರುವುದು ಕರ್ತವ್ಯ ಲೋಪವಾಗಿದೆ. ಹಾಗೆಯೇ ತುಂಗಾ ಮೇಲ್ದಂಡೆ ಯೋಜನೆ ವಿಭಾಗದಿಂದ ಅನುಮತಿ ಪತ್ರ ಸಿಗುವ ಮುನ್ನವೇ ತಮ್ಮ ಇಲಾಖೆಯ ಅಧಿಕಾರಿಗಳು ಈ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಯ ಆದೇಶ ನೀಡಿದ್ದಾರೆ ಇದು ಕೂಡ ಕರ್ತವ್ಯ ಲೋಪವಾಗಿದೆ.
ಉದ್ದೇಶ ಒಳ್ಳೆಯದಾಗಿದ್ದರು ಕೂಡ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುವಾಗ ನಿಯಮಗಳನ್ನು ಪಾಲಿಸದೆ ಕಾಮಗಾರಿಯನ್ನು ಪ್ರಾರಂಭ ಮಾಡುವುದು ಕೂಡ ಕರ್ತವ್ಯ ಲೋಪವಾಗುತ್ತದೆ. ಹಾಗೆಯೇ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭ ಮಾಡುವುದು ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವುಗಳು ಸಂಬಂಧಿಸಿದ ಅನಧಿಕೃತ ಕಾಮಗಾರಿಗಳನ್ನು ತೆಗೆಸಬೇಕು ಅನುಮತಿ ಸಿಗುವವರೆಗೂ ಕೆಲಸ ಮಾಡದಂತೆ ನೋಡಿಕೊಳ್ಳಬೇಕು ತರಾತುರಿಯಲ್ಲಿ ಕಾರ್ಯ ಪ್ರಾರಂಭಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮಹಾನಗರ ಪಾಲಿಕೆ ಇಂಜಿನಿಯರ್ ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ಮಹಾನಗರ ಪಾಲಿಕೆಯ ಕಾರ್ಯ ಪಾಲಕ ಅಭಿಯಂತರದ ವಿರುದ್ಧ ದೂರು ದಾಖಲಿಸಿ ಕೊಂಡು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ತಮ್ಮಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಆಗ್ರಹಿಸುತ್ತದೆ. ತಾವು ಯಾವುದೇ ರೀತಿಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಮುಖಾಂತರ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ ಎಸ್ ತಿಳಿಸಿದ್ದಾರೆ. Karnataka Neeravari Nigam Ltd ಈ ಕರ್ತವ್ಯ ಲೋಪ ವಿರುದ್ಧವು ಸಹ ಕಾರ್ಯಪಾಲಕ ಅಭಿಯಂತರು ತುಂಗಾ ಮೇಲ್ದಂಡೆ ಯೋಜನೆಯ ವಿಭಾಗಕ್ಕೂ ಸಹ ತಮ್ಮ ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ ನಿರಕ್ಷೇಪಣಾ ಪತ್ರವನ್ನು ಪಡೆಯದೆ ಕಾರ್ಯನಿರ್ವಹಿಸಿದವರ ವಿರುದ್ಧ ಮಹಾನಗರ ಪಾಲಿಕೆಯ ಗುತ್ತಿಗೆದಾರ ಇಂಜಿನಿಯರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಮಹಾನಗರ ಪಾಲಿಕೆಯ ಕಾರ್ಯ ಪಾಲಕ ಅಭಿಯಂತರದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರಲ್ಲೂ ಸಹ ಒಂದು ಮನವಿಯನ್ನು ಸಲ್ಲಿಸಲಾಯಿತು. ಇಲ್ಲದಿದ್ದಲ್ಲಿ ಮುಂದಿನ ದಿನ ತುಂಗಾ ಮೇಲ್ದಂಡೆ ಯೋಜನೆಯ ಕಚೇರಿಗೆ ಮುತ್ತಿಗೆಯನ್ನು ಹಾಕಲಾಗುವುದು ಎಂದು ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಗರಾಧ್ಯಕ್ಷರಾದ ಜೀವನ ಮಹಮ್ಮದ್ ರಫಿ ಯುವ ಘಟಕ ಅಧ್ಯಕ್ಷರಾದ ಸಂತೋಷ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎನ್, ಮಾಲತೇಶ್, ಪ್ರವೀಣ್ ಕುಮಾರ್ ಗ್ರಾಮಾಂತರ ಅಧ್ಯಕ್ಷರಾದ ಮಂಜುನಾಥ್ ಹೆಚ್ ಎನ್ ನಾಗರಾಜ್ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

Sahyadri Science College ಸಹ್ಯಾದ್ರಿ ಕಾಲೇಜಿನ ಎನ್.ಸಿ.ಸಿ‌.ವಿಭಾಗದಿಂದ ಸ್ವಚ್ಛತಾ ಚಟುವಟಿಕೆ

0

Sahyadri Science College ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಎನ್.ಸಿ.ಸಿ ವಿಭಾಗದಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಆಚರಿಸಲಾಯಿತು.

ಡಿಜೆಬಿ ಆವರಣ ಮತ್ತು ಎಂ ಆರ್ ಎಸ್ ಸರ್ಕಲ್ ನಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಮಾಡಿದರು. ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ಪರಿಸರ ಸ್ವಚ್ಛತೆಯ ಪ್ರಾಮುಖ್ಯತೆ, ಪ್ಲಾಸ್ಟಿಕ್ ನಿಂದ ಪರಿಸರದಲ್ಲಿ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು. ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ವಾಗಿದ್ದರೂ ಇನ್ನೂ ಉತ್ಪತ್ತಿ ನಿಂತಿಲ್ಲ ,ಪ್ಲಾಸ್ಟಿಕ್ ಉತ್ಪಾದನಾ ಘಟಕಗಳನ್ನು ನಿಲ್ಲಿಸುವ ತನಕ ಈ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮಗಳು ಹೆಚ್ಚುತ್ತಲೇ ಇರುತ್ತವೆ. ಸರ್ಕಾರ ಕೂಡಲೇ ಗಮನಹರಿಸಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳನ್ನು ನಿಲ್ಲಿಸಿದಲ್ಲಿ ಪರಿಸರದಲ್ಲಿ ಜೀವ ಜಂತುಗಳು ಉಳಿಯುವುವು ಎಂದು ತಿಳಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು.

Sahyadri Science College ಅಧಿಕಾರಿಗಳಾದ ಲೆಫ್ಟಿನೆಂಟ್ ವಿದ್ಯಾಶಂಕರ್, ಹವಾಲ್ದಾರ್ ಬಾನೆಶ್, ಉಸ್ತುವಾರಿ ಪ್ರಾಂಶುಪಾಲರಾದ ಡಾ. ರಮೇಶ್ ಬಾಬು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

FK CCI ಎಫ್ಕೆ ಸಿಸಿಐ ಅಧ್ಯಕ್ಷರಾಗಿ ಶ್ರೀಮತಿ‌ ಉಮಾರೆಡ್ಡಿ ಆಯ್ಕೆ

0

FK CCI ಎಫ್‌ಕೆಸಿಸಿಐ ಮೊದಲ ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಉಮಾ ರೆಡ್ಡಿ ಆಯ್ಕೆಯಾಗಿದ್ದಾರೆ.

108 ವರ್ಷಗಳ ನಂತರ ಕರ್ನಾಟಕದ ಉದ್ಯಮ ಕ್ಷೇತ್ರದಲ್ಲಿ ಅಡೆತಡೆಗಳ ನಿವಾರಣೆಯಾಗಲಿವೆ.

ಸರ್ ಎಂ. ವಿಶ್ವೇಶ್ವರಯ್ಯನವರು ಸ್ಥಾಪಿಸಿದ 108 ವರ್ಷ ಹಳೆಯ ಸಂಸ್ಥೆಯಾಗಿದೆ.

ತನ್ನ 108 ವರ್ಷಗಳ ಪಯಣದಲ್ಲಿ, ಎಫ್‌ಕೆಸಿಸಿಐ ಈಗ ಹೊಸ ಪಾತ್ರವನ್ನು ಸ್ವೀಕರಿಸಿದೆ-ಮಹಿಳಾ ನಾಯಕತ್ವವು ಒಂದು ಅಪವಾದವಲ್ಲ ಬದಲಿಗೆ ಮುಖ್ಯವಾಹಿನಿಯ ಉದ್ಯಮದ ಭಾಗವಾಗಿದೆ.

ತಂತ್ರಜ್ಞಾನ ಉತ್ಪನ್ನಗಳ ತಯಾರಿಕೆಯಲ್ಲಿ ಉದ್ಯಮಿಯಾಗಿ ಮತ್ತು ಸಾಮಾಜಿಕ ಉದ್ಯಮಿಯಾಗಿ ನೀತಿ ವಕಾಲತ್ತು ವಹಿಸುವ ಪ್ರಪಂಚಗಳನ್ನು ದಾಟಿ ಹೋಗುವ ಸಾಮರ್ಥ್ಯ.
ತಂತ್ರಜ್ಞ ಮತ್ತು ಉದ್ಯಮಿ
ಶ್ರೀಮತಿ ಉಮಾ ರೆಡ್ಡಿ ಅವರು ಅಧ್ಯಕ್ಷ ಸ್ಥಾನಕ್ಕೆ ಬಲವಾದ ಬಲವಾದ ಎಂಜಿನಿಯರಿoಗ್ ಮತ್ತು ತಂತ್ರಜ್ಞಾನ ಹಿನ್ನೆಲೆಯನ್ನು ಹೊಂದಿದ್ದಾರೆ, ಅವರು ತಾಂತ್ರಿಕ ಪರಿಣತಿಯನ್ನು ಉದ್ಯಮಶೀಲತಾ ದೃಷ್ಟಿಕೋನದೊಂದಿಗೆ ಸರಾಗವಾಗಿ ಬೆರೆಸುವ ನಾಯಕಿಯಾಗಿ ಗುರುತಿಸಿಕೊಳ್ಳುತ್ತಾರೆ.

ಅವರು ಪವರ್ ಎಲೆಕ್ಟ್ರಾನಿಕ್ ಭಾಗಗಳ ಘಟಕಗಳಲ್ಲಿ ಪರಿಣತಿ ಹೊಂದಿರುವ ಮೆಸರ್ಸ್ ಹೈಟೆಕ್ ಮ್ಯಾಗ್ನೆಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಾರೆ-ಇದು ಮಹಿಳಾ ಪ್ರಾತಿನಿಧ್ಯ ಸೀಮಿತವಾಗಿರುವ ವಲಯವಾಗಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿರುವ ಶ್ರೀಮತಿ ಉಮಾ ರೆಡ್ಡಿ ನಾವೀನ್ಯತೆ, ಮಹಿಳಾ ಉದ್ಯಮಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಸಬಲೀಕರಣಕ್ಕೆ ದೃಢವಾದ ಬೆಂಬಲ ನೀಡುತ್ತಾರೆ. ಅವರು ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕೈಗಾರಿಕಾ ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ, ಮಹಿಳಾ ನೇತೃತ್ವದ ಉದ್ಯಮಗಳಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡಿದ್ದಾರೆ. ಅವರ ಸಹೋದ್ಯೋಗಿಗಳು ಅವರನ್ನು ಡಿಜಿಟಲ್ ರೂಪಾಂತರ ಮತ್ತು ನವೀಕರಿಸಬಹುದಾದ ಇಂಧನದಿಂದ ಹಿಡಿದು ಜಾಗತಿಕವಾಗಿ ಸ್ಪರ್ಧಿಸುವಾಗ MSMEಗಳು ಎದುರಿಸುವ ಸವಾಲುಗಳವರೆಗೆ ಉದ್ಯಮ ಬದಲಾವಣೆಗಳನ್ನು ನಿರೀಕ್ಷಿಸುವ ಸಾಮರ್ಥ್ಯ ಹೊಂದಿರುವ ಪ್ರಾಯೋಗಿಕ ತಂತ್ರಜ್ಞ ಎಂದು ಬಣ್ಣಿಸುತ್ತಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (FKCCI) ಇತಿಹಾಸ ನಿರ್ಮಿಸಿದೆ. ಶ್ರೀಮತಿ ಉಮಾ ರೆಡ್ಡಿ ಅವರು 108ವರ್ಷಗಳಷ್ಟು ಹಳೆಯದಾದ ಅತ್ಯುನ್ನತ ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಇದು ಕರ್ನಾಟಕದ ಉದ್ಯಮ ಭೂದೃಶ್ಯದಲ್ಲಿ ಮಹಿಳೆಯರಿಗೆ ನಾಯಕತ್ವದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ.

1916 ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದಾಗಿನಿಂದ, FKCCI ನ್ನು ಸಾಂಪ್ರದಾಯಿಕವಾಗಿ ಪುರುಷರು ಮುನ್ನಡೆಸುತ್ತಿದ್ದಾರೆ, ಇದು ಶ್ರೀಮತಿ ಉಮಾ ರೆಡ್ಡಿ ಅವರ ಆಯ್ಕೆಯನ್ನು ಒಂದು ಹೆಗ್ಗುರುತು ಸಾಧನೆಯನ್ನಾಗಿ ಮಾಡಿದೆ.

FK CCI ನಾಯಕತ್ವದಲ್ಲಿ ಮಹಿಳೆಯರಿಗೆ ಐತಿಹಾಸಿಕ ಮೈಲಿಗಲ್ಲು
ಶ್ರೀಮತಿ ಉಮಾ ರೆಡ್ಡಿ ಅವರ ಆಯ್ಕೆಯು ಎಫ್‌ಕೆಸಿಸಿಐ ಕೇವಲ ಒಂದು ಮೈಲಿಗಲ್ಲು ಮಾತ್ರವಲ್ಲದೆ ನಾಯಕತ್ವದಲ್ಲಿ ಲಿಂಗ ಸಮಾನತೆಗೆ ಸಾಂಕೇತಿಕ ವಿಜಯವಾಗಿದೆ.

ಈ ಐತಿಹಾಸಿಕ ಕ್ಷಣವು ಭಾರತದ ವ್ಯಾಪಾರ ಸಮುದಾಯದ ವಿಕಸನಗೊಳ್ಳುತ್ತಿರುವ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಅಲ್ಲಿ ಒಳಗೊಳ್ಳುವಿಕೆ ಅಗತ್ಯವೆಂದು ಹೆಚ್ಚು ಗುರುತಿಸಲ್ಪಟ್ಟಿದೆ. ಅವರ ನಾಯಕತ್ವವು ಭಾರತದಾದ್ಯಂತದ ಇತರ ವಾಣಿಜ್ಯ ಮಂಡಳಿಗಳಿಗೆ ಪ್ರೇರಣೆ ನೀಡುವ ನಿರೀಕ್ಷೆಯಿದೆ, ವಿಶೇಷವಾಗಿ ಕರ್ನಾಟಕದಲ್ಲಿ, ಎಂಜಿನಿಯರಿoಗ್, ಐಟಿ ಸೇವೆಗಳು, ಉಡುಪುಗಳು, ಆಹಾರ ಸಂಸ್ಕರಣೆ ಮತ್ತು ಕರಕುಶಲ ವಸ್ತುಗಳಂತಹ ಕ್ಷೇತ್ರಗಳಲ್ಲಿ ಮಹಿಳಾ ಉದ್ಯಮಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.

ನಿರ್ಣಾಯಕ ಹಂತದಲ್ಲಿ ಕರ್ನಾಟಕದ ಬೆಳವಣಿಗೆ ಮುಂಚೂಣಿಯಲ್ಲಿ
ಕರ್ನಾಟಕದ ಆರ್ಥಿಕತೆಯು ನಿರ್ಣಾಯಕ ಬದಲಾವಣೆಯ ಹಂತದಲ್ಲಿರುವಾಗ, ಭಾರತದ ಜಿಡಿಪಿಯ 8-9% ಕೊಡುಗೆ ನೀಡುತ್ತಿರುವುದರಿಂದ, 400 ಕ್ಕೂ ಹೆಚ್ಚು ಫಾರ್ಚೂನ್ 500 ಕಂಪನಿಗಳಿಗೆ ಆತಿಥ್ಯ ವಹಿಸುತ್ತಿರುವುದರಿಂದ ಮತ್ತು ಐಟಿ,, ಬಯೋಟೆಕ್, ಬಾಹ್ಯಾಕಾಶ ಸಂಶೋಧನೆ ಮತ್ತು ಏರೋಸ್ಪೇಸ್ ಉತ್ಪಾದನೆಗೆ ಕೇಂದ್ರವಾಗಿ ಮಾರ್ಪಟ್ಟಿರುವ ಸಂದರ್ಭದಲ್ಲಿ ಶ್ರೀಮತಿ ಉಮಾ ರೆಡ್ಡಿ ಅವರು ನಾಯಕಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಹೆಚ್ಚುತ್ತಿರುವ ವೆಚ್ಚಗಳು, ಜಾಗತಿಕ ಸ್ಪರ್ಧೆ ಮತ್ತು ಎಂಎಸ್‌ಎoಇಗಳಿಗೆ ಹಣಕಾಸಿನ ಸಮಸ್ಯೆಗಳು ಸೇರಿದಂತೆ ಸವಾಲುಗಳು ಮುಂದುವರೆದಿವೆ. ಅವರ ಅಧ್ಯಕ್ಷತೆಯು ಅಂತರ್ಗತ, ನವೀನ ಮತ್ತು ಸುಸ್ಥಿರ ಬೆಳವಣಿಗೆಯನ್ನು ಬೆಳೆಸುವಲ್ಲಿ ಎಫ್‌ಕೆಸಿಸಿಐ ಪಾತ್ರವನ್ನು ಮರು ವ್ಯಾಖ್ಯಾನಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಫ್‌ಕೆಸಿಸಿಐಯ ಪರಂಪರೆ ಮತ್ತು ಪ್ರಗತಿಶೀಲ ಬದಲಾವಣೆ
1916 ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಎಫ್‌ಕೆಸಿಸಿಐ, ಭಾರತದ ಅತ್ಯಂತ ಪ್ರತಿಷ್ಠಿತ ಚೇಂಬರ್‌ಗಳಲ್ಲಿ ಒಂದಾಗಿ ಬೆಳೆದಿದೆ, 5,000 ಕ್ಕೂ ಹೆಚ್ಚು ನೇರ ಸದಸ್ಯರು ಮತ್ತು 20,000 ಕ್ಕೂ ಹೆಚ್ಚು ಪರೋಕ್ಷ ಸದಸ್ಯರನ್ನು ಅದರ ಸುಮಾರು 200 ವ್ಯಾಪಾರ ಮತ್ತು ಕೈಗಾರಿಕಾ ಸಂಘಗಳೊoದಿಗೆ ಪ್ರತಿನಿಧಿಸುತ್ತದೆ. ಹಾಗೂ 2 ಲಕ್ಷಕ್ಕೂ ಹೆಚ್ಚಿನ ಪರೋಕ್ಷವಾಗಿ ಸದಸ್ಯರಿದ್ದಾರೆ.

ಇದು ಮೂಲಸೌಕರ್ಯ, ತೆರಿಗೆ, ಎಂಎಸ್ ಎಂಇಗಳು, ರಫ್ತು ಮತ್ತು ಹೂಡಿಕೆ ಪ್ರಚಾರದ ನೀತಿಗಳ ಮೇಲೆ ಪ್ರಭಾವ ಬೀರಿದೆ, ಕರ್ನಾಟಕವನ್ನು ಆರ್ಥಿಕ ಶಕ್ತಿ ಕೇಂದ್ರವಾಗಿ ಪ್ರತಿಪಾದಿಸುತ್ತಿದೆ.
ಕಾರ್ಪೊರೇಟ್ ಮತ್ತು ಉದ್ಯಮಶೀಲ ಕ್ಷೇತ್ರಗಳಲ್ಲಿ ಮಹಿಳೆಯರು ಸ್ಥಿರವಾಗಿ ಮುನ್ನಡೆಯುತ್ತಿದ್ದರೂ, ವ್ಯಾಪಾರ ಕ್ಷೇತ್ರದಲ್ಲಿ ನಾಯಕತ್ವವು ಹೆಚ್ಚಾಗಿ ಪುರುಷ ಪ್ರಾಬಲ್ಯದಿಂದ ಉಳಿದಿದೆ. ಶ್ರೀಮತಿ ಉಮಾ ರೆಡ್ಡಿ ಅವರ ಆಯ್ಕೆಯು ಪ್ರಗತಿಪರ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು FKCCI ಸದಸ್ಯರಿಗೆ ಹೊಸ ದೃಷ್ಟಿಕೋನಗಳದ ಭರವಸೆ ನೀಡುತ್ತದೆ. ಅವರ ನಾಯಕತ್ವದಲ್ಲಿ, ಎಫ್‌ಕೆಸಿಸಿಐ ಈ ಕೆಳಗಿನವುಗಳಿಗೆ ಆದ್ಯತೆ ನೀಡುವ ನಿರೀಕ್ಷೆಯಿದೆ:

ಎಂಎಸ್‌ಎoಇ ಮತ್ತು ಅಂತರ್ಗತ ಉದ್ಯಮ ಬೆಳವಣಿಗೆಗೆ ನೀತಿ ವಕಾಲತ್ತು

  • ಸ್ಟಾರ್ಟ್ ಅಪ್ ಸಂಸ್ಥೆಗಳನ್ನು ಬಲಪಡಿಸುವುದು – ಉದ್ಯಮ ಸಂಪರ್ಕಗಳು
  • ತಂತ್ರಜ್ಞಾನ ಅಪ್ಲಿಕೇಶನ್‌ನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ-ಎಐ, ರೊಬೊಟಿಕ್ಸ್ ಇತ್ಯಾದಿ
  • ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಮತ್ತು ಸುಸ್ಥಿರತೆಯ ಮೇಲೆ ಗಮನಹರಿಸುವುದು
  • ಕೃಷಿ ತಂತ್ರಜ್ಞಾನ ಇತ್ಯಾದಿಗಳಿಗೆ ಅನ್ವಯಿಕ ತಂತ್ರಜ್ಞಾನಗಳು
    ಶ್ರೀಮತಿ ಉಮಾ ರೆಡ್ಡಿ ಅವರ ಅಧ್ಯಕ್ಷತೆಯು ಸಾಂಕೇತಿಕಕ್ಕಿoತ ಹೆಚ್ಚಿನದಾಗಿದೆ-ಇದು ಕರ್ನಾಟಕದ ಉದ್ಯಮ ಮತ್ತು ಕೈಗಾರಿಕಾ ಸಮುದಾಯಕ್ಕೆ ಪರಂಪರೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಸಂಯೋಜಿಸುವ ಪರಿವರ್ತನಾತ್ಮಕ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ.

Bhadra Achukattu Area Development Shimoga ಭದ್ರಾ ಎಡದಂಡೆ ನಾಲೆ ಕಾಮಗಾರಿ ಪೂರೈಸಿದ ಸಿಬ್ಬಂದಿಗೆ ಸನ್ಮಾನ

0

Bhadra Achukattu Area Development Shimoga ಮಾನ್ಯ ಅಧ್ಯಕ್ಷರು ಡಾ|| ಕೆ.ಪಿ. ಅಂಶುಮಂತ್ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಶಿವಮೊಗ್ಗ ರವರು ಭದ್ರಾ ಡ್ಯಾಮ್ ಗೆ ಭೇಟಿ ನೀಡಿ ಭದ್ರಾ ಡ್ಯಾಮ್ ನಲ್ಲಿ ಇತ್ತೀಚೆಗೆ ಪೂರ್ಣಗೊಂಡಿರುವ ಎಡದಂಡೆ ನಾಲೆಯ ಗೇಟ್ ರಿಪೇರಿ ಕಾಮಗಾರಿಯನ್ನು ವೀಕ್ಷಣೆ ಮಾಡಿ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಿದ ಅಧಿಕಾರಿ/ಸಿಬ್ಬಂದಿ/ಕಾರ್ಮಿಕರಿಗೆ ಸನ್ಮಾನಿಸಲಾಯಿತು. Bhadra Achukattu Area Development Shimoga ಈ ಸಂದರ್ಭದಲ್ಲಿ ಭದ್ರಾ ಕಾಡಾ ಆಡಳಿತಾಧಿಕಾರಿಗಳು ಸತೀಶ್ ಆರ್. ಭೂ ಅಭಿವೃದ್ದಿ ಅಧಿಕಾರಿ (ತಾಂತ್ರಿಕ) ಪ್ರಶಾಂತ್ ಕೆ ಅಧೀಕ್ಷಕ ಇಂಜಿನಿಯರ್ ಬಿ.ಆರ್. ಪ್ರಾಜೆಕ್ಟ್ ರವಿಚಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್ ಮತ್ತು ಇನ್ನಿತರೆ ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.

Klive Special Article ನವರಾತ್ರಿ ಆರನೇ ದಿನ, ಶ್ರಿದೇವಿಯ ಕಾತ್ಯಾಯಿನಿ ರೂಪದ ಆರಾಧನೆ, “ಶ್ರೀ‌ಕಾತ್ಯಾಯಿನಿ ಶುಭಂ”

0

ಲೇ; ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

ನವರಾತ್ರಿ(ಆರನೆಯ ದಿನ) ಕಾತ್ಯಾಯಿನಿದೇವಿ


Klive Special Article “ಚಂದ್ರಹಾಸೋ ಜ್ವಲಕರಾ
ಶಾರ್ದೂಲ ವರ ವಾಹನಾ/
ಕಾತ್ಯಾಯನೀ ಶುಭಂ ದದ್ಯಾತ್
ದೇವಿ ದಾನವಘಾತಿನೀ//

ಇಂದು ನವರಾತ್ರಿ ಹಬ್ಬದ ಆರನೆಯ ದಿನ.
ನವದುರ್ಗೆಯರ ರೂಪವಾದ “ಕಾತ್ಯಾಯನಿ ದೇವಿ”
ಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಕಾತ್ಯಾಯನ ಎನ್ನುವ ಮುನಿಯು ಪಾರ್ವತೀದೇವಿಯಂತಹ ಮಗಳನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಾನೆ. ಈ ಋಷಿ
ಮುನಿಯ ತಪಸ್ಸಿಗೆ ಮೆಚ್ಚಿ ದುರ್ಗಾಮಾತೆಯು
ಮಗಳನ್ನು ಕರುಣಿಸುತ್ತಾಳೆ.ಅದರಂತೆ ಈ ಮಗುವಿಗೆ
ಕಾತ್ಯಾಯನಿ ಎಂದು ಹೆಸರಿಡಲಾಗುತ್ತದೆ.
Klive Special Article ಕಾತ್ಯಾಯನಿ ದೇವಿಯ ಸ್ವರೂಪವು ಉಗ್ರವಾಗಿರುತ್ತದೆ. ರಾಕ್ಷಸನ ಸಂಹಾರಕ್ಕೆ ಸಿದ್ಧವಾಗಿರು
ವಂತೆ ಕಾಣುವಳು.ಸಿಂಹ ವಾಹಿನಿಯಾದ ಈ ದೇವಿಯು ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿ ಮತ್ತು
ಮಾತೃ ಸ್ವರೂಪಿಣಿಯೂ ಆಗಿದ್ದಾಳೆ.ದುಷ್ಟಶಕ್ತಿಗಳನ್ನು
ದಮನಮಾಡುವ ದುರ್ಗಾಮಾತೆಯಾಗಿದ್ದಾಳೆ.
ಇಂತಹ ಮಾತೃಸ್ವರೂಪಿಣಿಯಾದ ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸಿ ದೇವಿಯ
ಅನುಗ್ರಹ ಪಡೆಯೋಣ.

JCI Shivamogga ಸ್ವಂತ ಉದ್ಯಮದಿಂದ ಅನೇಕರಿಗೆ ಕೆಲಸ ನೀಡಬಹುದು- ಚಂದ್ರಶೇಖರ್

0

JCI Shivamogga ಸ್ವಯಂ ಉದ್ಯೋಗಿಗಳಾಗಲು ಹಾಗೂ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೌಶಲ್ಯಯುತ ಶಿಕ್ಷಣ ಹಾಗೂ ಜ್ಞಾನ ಅವಶ್ಯಕವಾಗಿದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.

ಜೆಸಿಐ ಸಪ್ತಾಹದ ಅಂಗವಾಗಿ ಹೊಳಲೂರಿನ ಕೆನರಾ ಬ್ಯಾಂಕ್ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಕೌಶಲ್ಯ ತುಂಬಾ ಮುಖ್ಯ. ಅರ್ಜಿ ಬರೆಯುವುದು, ಆನ್‌ಲೈನ್ ವಹಿವಾಟು ನಡೆಸುವುದು, ಮಾರುಕಟ್ಟೆ ಜ್ಞಾನ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಅರಿವು ಹೊಂದಿರಬೇಕು. ಇಂತಹ ತರಬೇತಿ ಕಾರ್ಯಾಗಾರಗಳು ತುಂಬಾ ಅನುಕೂಲ ಒದಗಿಸುತ್ತವೆ ಎಂದು ತಿಳಿಸಿದರು.

ಜೆಸಿಐ ನಿಯೋಜಿತ ರಾಷ್ಟ್ರೀಯ ತರಬೇತುದಾರ ಚಂದ್ರಶೇಖರ್ ಮಾತನಾಡಿ, ಸ್ವಂತ ಉದ್ಯಮದಿಂದ ಉತ್ತಮವಾಗಿ ಹಣವನ್ನು ಗಳಿಸುವ ಜತೆಯಲ್ಲಿ ಅನೇಕ ಜನರಿಗೆ ಕೆಲಸ ನೀಡಬಹುದಾಗಿದೆ. ಸ್ವಉದ್ಯಮವನ್ನು ಆರಂಭಿಸಲು ಬೇಕಾಗುವಂತಹ ವಿದ್ಯಾರ್ಹತೆ, ನೈಪುಣ್ಯತೆ, ತಾಳ್ಮೆ, ಆತ್ಮವಿಶ್ವಾಸ ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಹೇಗೆ ಮಾರುಕಟ್ಟೆ ಮಾಡಿಕೊಳ್ಳಬೇಕು. ಅದಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಅವಶ್ಯಕ ಎಂದರು.

ಮುದ್ರಾ ಮೂಲಕ 20 ಲಕ್ಷ ರೂ.ವರೆಗೆ ಸ್ವಉದ್ಯೋಗ ಮಾಡಲು ಸರ್ಕಾರ ನೆರವು ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಂಡು ಸ್ವಂತ ಉದ್ಯಮ ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು.

JCI Shivamogga ಜೆಸಿಐ ಸಂಸ್ಥೆಯು ಮಾನವೀಯ ಸೇವೆಗಳ ಜತೆಯಲ್ಲಿ ಉದ್ಯೋಗ ತರಬೇತಿ ಹಾಗೂ ಅಗತ್ಯ ಕೌಶಲ್ಯಗಳ ಕಲಿಕೆ ಕುರಿತು ಮಾರ್ಗದರ್ಶನ ನೀಡುತ್ತಿದೆ ಎಂದರು. ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಕೆನರಾ ಬ್ಯಾಂಕ್ ಅಧಿಕಾರಿ ಕಾಂತೇಶ್, ಜೆಸಿಐ ಸಹ್ಯಾದ್ರಿ ಘಟಕದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

S.N.Chennabasappa ರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸುರೇಶ್ ಶೆಟ್ಟಿಗೆ ಪ್ರಥಮ ಸ್ಥಾನ

0

S.N.Chennabasappa ರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸುರೇಶ್ ಶೆಟ್ಟಿಗೆ ಪ್ರಥಮ ಸ್ಥಾನ ರಾಜ್ಯ ಹಿರಿಯರ ಕ್ರೀಡಾ ಕೂಟದ ಎತ್ತರ ಜಿಗಿತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಅವರು ಪ್ರಥಮ ಸ್ಥಾನ ಪಡೆದ ಈ ಸಂದರ್ಭದಲ್ಲಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಚನ್ನಬಸಪ್ಪ ಹಾಗೂ ಎಂಎಲ್‌ಸಿ ಶಾಸಕ ಸರ್ಜಿ ಅವರು ಸನ್ಮಾನಿಸಿದರು. ಇವರ ಸಾಧನೆಗೆ ಕಾಯಕಯೋಗಿ ಚನ್ನಬಸಪ್ಪ ಪತ್ರಕರ್ತ ಅಭಿನಂದನ್, ಪರಶುರಾಮ್, ಪ್ರವೀಣ್, ಬಾಬು, ಶ್ರೀನಿವಾಸ್ ಹಾಗೂ ಇನ್ನಿತರರು ಅಭಿನಂದಿಸಿದ್ದಾರೆ.