JCI Shimoga ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆರಾಧನಾ ಆರ್ಥೋಪೆಡಿಕ್ ಸೆಂಟರ್ನ ಕನ್ಸಲ್ಟೆಂಟ್ ಆರ್ಥೋಪೇಡಿಕ್ ಮತ್ತು ರೋಬೋಟಿಕ್ ನೀ ರಿಪ್ಲೇಸ್ಮೆಂಟ್ ಸರ್ಜನ್ ಡಾ. ಕೆ.ಗಿರೀಶ್ಕುಮಾರ್ ಅವರು ಸಿಗ್ನೇಚರ್ ಮೀಡಿಯಾ ಸಂಸ್ಥೆಯಿಂದ “ ಟ್ರಸ್ಟೆಡ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜನ್, ಕರ್ನಾಟಕ ಹೆಲ್ತ್ ಕೇರ್ ವೈದ್ಯ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು, ಜೆಸಿಐ ಶಿವಮೊಗ್ಗ ಸ್ಟಾರ್ಸ್ ಮತ್ತು ಪರಿಪೂರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
JCI Shimoga ಡಾ. ಗಿರೀಶ್ಕುಮಾರ್ ಅವರು 500ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದು, ಇವರ ಆರಾಧನಾ ಆರ್ಥೋಪೆಡಿಕ್ ಸೆಂಟರ್ನಲ್ಲಿ ರೋಬೋಟಿಕ್ ನೀ ಸರ್ಜರಿ ಸೌಲಭ್ಯ ಲಭ್ಯವಿದೆ. ಆರೋಗ್ಯ ಕ್ಷೇತ್ರದಲ್ಲಿ ಇವರ ಸೇವೆ ಗುರುತಿಸಿ ಪ್ರಶಸ್ತಿ ಲಭಿಸಿದೆ.
ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥಾಪಕ ಅಧ್ಯಕ್ಷೆ ಅಶ್ಚಿನಿ ಚಂದ್ರಶೇಖರ್, ಎಲ್ಲ ಪದಾಧಿಕಾರಿಗಳು ಹಾಗೂ ಪರಿಪೂರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಸತೀಶ್ಚಂದ್ರ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.
JCI Shimoga ವೈದ್ಯ ವಿಭೂಷಣ ಡಾ.ಗಿರೀಶ್ ಕುಮಾರ್ ಗೆ ಆತ್ಮೀಯ ಸನ್ಮಾನ
CM Siddharamaiah ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಎಲ್ಲಾ ಉದ್ದೇಶಗಳನ್ನ ಸಮರ್ಪಕ ಪೂರೈಸುತ್ತಿದೆ- ಸಿದ್ಧರಾಮಯ್ಯ
CM Siddharamaiah ಜಾತಿ, ಧರ್ಮಗಳ ಬೇಧವಿಲ್ಲದೆ ನಾಡಿನ ಸರ್ವರನ್ನೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ, ಆ ಮೂಲಕ ಸಶಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವ ಗುರಿ ನಮ್ಮದು. ನಾವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ನಮ್ಮೆಲ್ಲಾ ಉದ್ದೇಶಗಳನ್ನು ಸಮರ್ಪಕವಾಗಿ ಪೂರೈಸುತ್ತಿದೆ. 5 ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿದ್ದು, ರಾಜ್ಯಾದ್ಯಂತ ಶೇ.70 ರಿಂದ 95 ರಷ್ಟು ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದರು.
ಶಕ್ತಿ, ಗೃಹಜ್ಯೋತಿ ಉಳಿತಾಯದ ಹಣ ಮತ್ತು ಗೃಹಲಕ್ಷ್ಮಿ ಹಣವನ್ನು ಪ್ರಮುಖವಾಗಿ ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ ಶೇ.88 ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಿದ್ದಾರೆ. ಶೇ.83 ರಷ್ಟು ಮಹಿಳೆಯರು ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆ ವೆಚ್ಚ, ಪರೀಕ್ಷೆಗಳು ಮತ್ತು ಔಷಧಿಗಳ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿವೆ. ಈ ಅಂಶಗಳು ಲೋಕನೀತಿ – ಸಿಎಸ್ಡಿಎಸ್, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಇಂಡೆಸ್ ಆಕ್ಷನ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.
ಒಂದೊಳ್ಳೆ ಉದ್ದೇಶದೊಂದಿಗೆ ನಾವು ಜಾರಿಗೊಳಿಸಿದ ಯೋಜನೆಗಳು ನಿರೀಕ್ಷೆಗೂ ಮೀರಿ ಅರ್ಹರನ್ನು ತಲುಪಿರುವುದು ನನ್ನಲ್ಲಿ ಸಾರ್ಥಕತೆಯ ಭಾವನೆ ಮೂಡಿಸಿದೆ ಎಂದು ಹೇಳಿದರು.
ನಾವು ಸಾಧಿಸಿದ್ದಕ್ಕಿಂತ, ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ ಎಂಬ ಅರಿವು ನಮಗಿದೆ. ನಮ್ಮ ಅಧಿಕಾರಾವಧಿಯಲ್ಲಿ ಮತ್ತಷ್ಟು ಮಗದಷ್ಟು ಕರ್ನಾಟಕ ಪ್ರಗತಿ ಕಾಣುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದರು.
Klive Special Article ನವರಾತ್ರಿಯ ಎಂಟನೇ ದಿನ, ದೇವಿಯ ಮಹಾಗೌರಿ ರೂಪಾರಾಧನೆ. “ಮಹಾಗೌರಿ ಶುಭಂ ದದ್ಯಾತ್”
ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
Klive Special Article ನವರಾತ್ರಿ(ಎಂಟನೆಯದಿನ)
ಶ್ರೀಮಹಾಗೌರಿ ಮಾತೆಯ ಆರಾಧನೆಯ ದಿನ….
ಇಂದು ಸಪ್ತಮಿಯಂದು ಆಹ್ವಾನಿಸಿದ ಶ್ರೀಸರಸ್ವತಿದೇವಿಯನ್ನು ಪೂಜಿಸುವ ದಿನವೂ ಆಗಿದೆ.
“”*
“ಶ್ವೇತೆ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ/
ಮಹಾಗೌರೀ ಶುಭಂ ದದ್ಯಾತ್ ಮಹಾದೇವ
ಪ್ರಮೋದದಾ//
ಇಂದು ನವರಾತ್ರಿಯ ಎಂಟನೆಯ ದಿವಸ.
ಇಂದು ದೇವಿಯ ಎಂಟನೆಯ ರೂಪವಾದ ಮಹಾ
ಗೌರಿಯ ಆರಾಧನೆಯ ದಿನ.
ಸರ್ವ ಸನ್ಮಂಗಳ ಕಾರಿಣಿಯಾದ ದೇವಿಯ ರೂಪ
ಮಹಾಗೌರಿಯ ಅವತಾರ ರೂಪ.
ಶ್ವೇತ ವರ್ಣದಿಂದ ಕಂಗೊಳಿಸುವ ಮಾತೆಯ ದೇಹವೆಲ್ಲಾಪ್ರಭೆಯಿಂದಹೊಳೆಯುವುದು.ನಂದಿವಾಹನರೂಢಳಾದ ದೇವಿಯು ಶಾಂತಿ ಮತ್ತು ಸಂತೋಷದ ಪ್ರತೀಕ.
ನಾಲ್ಕು ಭುಜಗಳನ್ನು ಹೊಂದಿರುವ ಮಾತೆ,ಅಭಯ ಹಸ್ತದಿಂದ ಭಕ್ತರನ್ನು ಹರಸುತ್ತಿದ್ದಾಳೆ.ಒಂದು ಕೈಯಲ್ಲಿ
ದುಷ್ಟಶಕ್ತಿಗಳನ್ನು ನಿಗ್ರಹಿಸಲು ತ್ರಿಶೂಲವನ್ನು ಹಿಡಿದಿರು
ತ್ತಾಳೆ.ಪಾರ್ವತೀದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು.ಶಿವನನ್ನು ಪಡೆಮಾಡುತ್ತಾಯುವುದು ಅವಳ ಗುರಿಯಾಗಿರುತ್ತದೆ.ನಾರದ ಮಹರ್ಷಿಗಳ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಮಾಡುವರು.ಸುದೀರ್ಘತಪಸ್ಸನ್ನು ನೀರು ಆಹಾರವನ್ನೂ ತ್ಯಜಿಸುತ್ತಾಳೆ.
ಬಿಸಿಲಿನಿಂದ ಆಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುವುದು ಮತ್ತು ದೀರ್ಘಕಾಲ ತಪಸ್ಸನ್ನು ಮಾಡುತ್ತಾ ಕುಳಿತ ಕಾರಣ ಆಕೆಯ ಮುಂಬೈಗೆ ಧೂಳು ಮೆತ್ತಿಕೊಳ್ಳುತ್ತದೆ.
ಇವಳ ತಪಸ್ಸಿಗೆ ಸಂತುಷ್ಟನಾದ ಶಿವನು ಪಾರ್ವತಿಯ ಮೈಮೇಲಿನ ಕಪ್ಪುಬಣ್ಣ ಮತ್ತು ಇಷ್ಟು ದಿನಗಳ ಕಷ್ಟಗಳಪರಿಹಾರಕ್ಕಾಗಿ ಗಂಗಾಜಲವನ್ನು ಮೈಮೇಲೆ ಹರಿಸಿದ್ದರಿಂದ ಮೈಯೆಲ್ಲಾ ಕಾಂತಿಯಿಂದ ಹೊಳೆಯ
ತೊಡಗಿತು.
Klive Special Article ಆಕೆಯುಮಹಾಗೌರಿಯಾಗಿಹೊಸಜನ್ಮಎತ್ತಿದಳು.ಶಿವನು ಆಕೆಯ ಭಕ್ತಿಗೆ ಮೆಚ್ಚಿ ಅವಳ ಇಷ್ಟದ ಪ್ರಕಾರ ಆಕೆಯನ್ನು ವರಿಸಿದ.
ಆಶ್ವಯುಜ ಮಾಸದ ಶುಕ್ಲಪಕ್ಷದ ಸಪ್ತಮಿಯಂದು
ವಿದ್ಯಾಪ್ರದಾಯಿಕೆಯಾದ ಶ್ರೀಸರಸ್ವತೀಮಾತೆಯನ್ನು
ಆಹ್ವಾನಿಸುವ ದಿನ.ಶ್ರೀಸರಸ್ವತಿ ಮಾತೆಯನ್ನು ಅಷ್ಟಮಿಯಂದು ಪೂಜಿಸಲಾಗುತ್ತದೆ.ಈ ದಿನವನ್ನು ದುರ್ಗಾಷ್ಟಮಿ ಎಂದು ಕರೆಯಲಾಗುತ್ತದೆ.
ಭಕ್ತರಿಗೆ ಶಾಂತಿ ಮತ್ತು ಸಂತೋಷವನ್ನುಕೊಟ್ಟು
ಅನುಗ್ರಹಿಸುವ ಮಹಾಗೌರಿಮಾತೆಗೆ ಭಕ್ತಿಯ ನಮನಗಳನ್ನು ಅರ್ಪಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗೋಣ
Youth Hostels Association of India ಶ್ರೀಲಂಕಾ ಪ್ರವಾಸ, 30 ಮಂದಿಗೆ ಅವಕಾಶ.ವಿವರಗಳ ಮಾಹಿತಿ
Youth Hostels Association of India ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಹಾಗೂ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ 20.11.2025 ರಿಂದ 26.11.2025 ರವರೆಗೆ ಶ್ರೀಲಂಕಾ ಪ್ರವಾಸ ಏರ್ಪಡಿಸಿದೆ. 30 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೊಂದಾಯಿಸಿದವರಿಗೆ ಆಧ್ಯತೆ ನೀಡಲಾಗುವುದು.
ಶುಲ್ಕ ರೂ. 54600.00 (Bangalore air port to Bangalore Air Port)
ಹೆಚ್ಚಿನ ಮಾಹಿತಿಗಾಗಿ
ಎಸ್ ಎಸ್ ವಾಗೀಶ್ ದೂರವಾಣಿ 7892548980 ಇವರನ್ನು ಸಂಪರ್ಕಿಸಬಹುದು.
ಅ.ನಾ.ವಿಜಯೇಂದ್ರ ರಾವ್
Samanvaya Trust ನಿವೃತ್ತ ಹಿರಿಯರು ಸಮಾಜದ ಉತ್ತಮ ಕಾರ್ಯಗಳಲ್ಲಿ ಕೈಜೋಡಿಸಿ ಮಾರ್ಗದರ್ಶನ ನೀಡಿರಿ- ಪ್ರೊ.ಎಚ್.ಕೇಶವ
Samanvaya Trust ಜೀವನದಲ್ಲಿ ಉನ್ನತ ಸಾಧನೆ ಮಾಡಲು ನಿರಂತರ ಪರಿಶ್ರಮ ವಹಿಸುವುದು ಅತ್ಯಂತ ಅವಶ್ಯಕ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಜ್ಞಾನ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಹಂತದಲ್ಲೇ ದೊಡ್ಡ ಕನಸುಗಳನ್ನು ಕಾಣಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಬೇಕು. ಪೂರಕವಾಗಿ ಅಗತ್ಯವಿರುವ ತರಬೇತಿ ಮತ್ತು ಕೌಶಲಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಎಂತಹ ಕಷ್ಟದ ಪರಿಸ್ಥಿತಿ ಇದ್ದರೂ ಕನಸು ಸಾಧಿಸಲು ಅಡ್ಡಿ ಆಗಬಾರದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಬೆಳಗಿನ ಜಾವದ ಕಲಿಕೆ ಹೆಚ್ಚು ನೆರವಾಗುತ್ತದೆ. ಓದು, ಮನನ ಹಾಗೂ ಮತ್ತೆ ಮತ್ತೆ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಮಾಹಿತಿ ಹೆಚ್ಚಾಗಿ ಸಿಗುತ್ತಿದ್ದರೂ ಸದ್ಭಳಕೆ ಮಾಡಿಕೊಳ್ಳುವಲ್ಲಿ ಯುವಜನರು ವಿಫಲರಾಗುತ್ತಿದ್ದಾರೆ. ಮಾಹಿತಿಯ ಸತ್ಯಾಸತ್ಯತೆ ಕೂಡ ಪರಿಶೀಲಿಸದೆ ತಕ್ಷಣಕ್ಕೆ ಪ್ರತಿಕ್ರಿಯಿಸಿ ಸಮಸ್ಯೆ ಮಾಡಿಕೊಳ್ಳುತ್ತಿದ್ದಾರೆ. ಸುಳ್ಳು ಮಾಹಿತಿ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮೌಲ್ಯ ಇಲ್ಲದ ಶಿಕ್ಷಣ ವ್ಯರ್ಥ ಆಗಿದ್ದು, ಜೀವನದಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಗುರಿ ಸಾಧನೆಗೆ ಶ್ರದ್ಧೆ, ಛಲ ಹಾಗೂ ನಿರಂತರತೆ ಬಹಳ ಮುಖ್ಯ ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಇಪ್ಪತ್ತು ವರ್ಷಗಳಿಂದ ಸಮನ್ವಯ ಸಮಾಜಮುಖಿ ಕೆಲಸ ಮಾಡುತ್ತಿದ್ದು, ಪರಿಸರ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪರಿಸರ ಕುಟುಂಬ ಪ್ರಶಸ್ತಿ ನೀಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಯುವ ಜನರಿಗೆ ತರಬೇತಿ ನೀಡುತ್ತಿದೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸೇವೆ ನಡೆಸುತ್ತಿದೆ ಎಂದು ಹೇಳಿದರು.
Samanvaya Trust ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಧಕರ ಜೀವನದಿಂದ ಪ್ರೇರಣೆ ಪಡೆಯಬೇಕು. ನಿಮ್ಮ ಇಷ್ಟದ ಕ್ಷೇತ್ರವನ್ನು ಶಿಕ್ಷಣ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಹಿರೋಗಳಾಗಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಲೈಫ್ ಇಸ್ ಬ್ಯೂಟಿಫುಲ್ ವಿಷಯ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ದುರ್ಗಪ್ಪ ಅಂಗಡಿ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ , ಕಲಾ ದಸರಾ ಕಾರ್ಯದರ್ಶಿ ಕೆ.ಪಿ.ವಸಂತಕುಮಾರಿ , ಅಂತರಾಷ್ಟ್ರೀಯ ಈಜುಪಟು ಧ್ಯಾನ್ ಕಶ್ಯಪ್, ಉದ್ಯಮಿ ಸುಜಿತ್ ನಾಡಿಗ್, ಅಜಯ್ ಗೋಪಿ, ನಂದಿನಿ ಸಾಗರ, ಸಮನ್ವಯ ಸ್ವಯಂ ಸೇವಕರು ಹಾಜರಿದ್ದರು.
Abacus Training Center ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಸಾಲಿಮಠ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ
Abacus Training Center ಚಿತ್ರದುರ್ಗದ ಶ್ರೀ ರಾಮ ಕಲ್ಯಾಣ ಮಂದಿರದಲ್ಲಿ ನಡೆದ 7ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಹೆಸರಾಂತ ಸಾಲಿಮಠ್ ಅಬಾಕಸ್ ತರಬೇತಿ ಕೇಂದ್ರದಿಂದ ಒಟ್ಟು 12 ವಿದ್ಯಾರ್ಥಿ ಗಳು ಭಾಗವಹಿಸಿ ವಿವಿಧ ವಿಭಾಗ ಗಳಲ್ಲಿ ಛಾಂಪಯನ್ಶಿಪ್ ಮತ್ತು ಬಹುಮಾನಗಳನ್ನು ಪಡೆದಿದ್ದಾರೆ.
ವಂಶಿ ಕೃಷ್ಣ ಚಾಂಪಿಯನ್, ಪ್ರಣತಿ ಎಸ್. ರನ್ನರ್ ಅಪ್-1, ದಿಯಾ ಡಿ. ಮೂರ್ತಿ ರನ್ನರ್ ಅಪ್-2, ಪ್ರೀತಮ್ ಎಸ್. ರನ್ನರ್ ಅಪ್-೫, ಅನ್ಮೋಲ್, ಚಿರಾಗ್. ಆರ್, ವಿಖ್ಯಾತ್ ಎಸ್. ಅವರುಗಳು ವೆಲ್ ಪರ್ಫಾರ್ಮ್ ಹಾಗೂ ಜೇಷ್ಠಾ ಎಸ್. ಆಚಾರ್ಯ, ರೋಷಿತ್. ಸಿ. ಎಸ್, ಅಶ್ವಿಕಾ ಭಗತ್ ಗೌಡ, ಪ್ರಯಾನ್ ಎಸ್.ವಿ. ಅವರು ಕಾನ್ಸೋಲೇಶನ್ ಬಹುಮಾನಗಳನ್ನು ಪಡೆದು ಜಿಲ್ಲೆಗೆ ಸೆಂಟರ್ಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. Abacus Training Center ಇವರ ಸಾಧನೆಗೆ ಸೆಂಟರ್ ಮುಖ್ಯಸ್ಥೆ ಆಶಾ ಹಿರೇಮಠ್ ಅಭಿನಂದಿಸಿದ್ದಾರೆ.
DC Shivamogga ಗಮನಿಸಿ, ಶಿವಮೊಗ್ಗ ಇಂದಿರಾಗಾಂಧಿ ರಸ್ತೆಯಲ್ಲಿ ಏಕಮುಖ ಸಂಚಾರ ಆದೇಶ
DC Shivamogga ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಇಂದಿರಾ ಗಾಂಧಿ ರಸ್ತೆಯಲ್ಲಿ ಬಾಲರಾಜ್ ಅರಸ್ ರಸ್ತೆ ಕಡೆಯಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಡೆಗೆ ಸಂಚರಿಸಲು (ENTRY) ಅವಕಾಶವನ್ನು ನೀಡಿ, ಇಂದಿರಾ ಗಾಂಧಿ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಡೆಯಿಂದ ಬಾಲರಾಜ್ ಅರಸ್ ರಸ್ತೆ ಕಡೆಗೆ ಸಂಚಾರ ನಿಷೇಧಿಸಿ (NO ENTRY) ಏಕಮುಖ ಸಂಚಾರ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.
Nalanda Chess Academy ಅಕ್ಟೋಬರ್ 1 ರಿಂದ ನಳಂದ ಚೆಸ್ ಅಕಾಡೆಮಿಯಿಂದ ಚೆಸ್ ತರಬೇತಿ ಶಿಬಿರ
Nalanda Chess Academy ನಳಂದ ಚೆಸ್ ಅಕಾಡೆಮಿಯಿಂದ ದಸರಾ ರಜೆ ನಿಮಿತ್ತ ಚೆಸ್ ಅ. 1ರಿಂದ ಅ. 7ರವರೆಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಪ್ರಾಥಮಿಕ ತರಗತಿಯು ಪ್ರತಿದಿನ ಬೆಳಿಗ್ಗೆ 9:30 ರಿಂದ 11ರವರೆಗೆ ಹಾಗೂ ಉನ್ನತ ತರಗತಿಯು ಪ್ರತಿದಿನ ಬೆಳಿಗ್ಗೆ 11ರಿಂದ 12:30ರವರೆಗೆ ನಳಂದ ಚೆಸ್ ಅಕಾಡೆಮಿಯ ಕಚೇರಿ,ಮೊದಲನೇ ಕ್ರಾಸ್, ಹೊಸಮನೆ ಎಕ್ಸಟೆಂಷನ್, ಶಿವಮೊಗ್ಗ ಇಲ್ಲಿ ನಡೆಯಲಿದೆ. ಹೆಸರು ನೊಂದಾಯಿಸಲು ಶ್ರೀಕೃಷ್ಣ ಉಡುಪ ಮೊ. 9844436276,99169 10411 ಅಥವಾ 99458 09662 ರಲ್ಲಿ ಸಂಪರ್ಕಿಸಲು ಕೋರಿದೆ.
Sahyadri College of Commerce & Management ಸಹ್ಯಾದ್ರಿ ವಾಣಿಜ್ಯ & ನಿರ್ವಹಣಾ ಕಾಲೇಜಿನಲ್ಲಿ ನೂತನ ಶೌಚಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ
Sahyadri College of Commerce & Management ವಿಧಾನಪರಿಷತ್ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ (MLC Lads) ಶಿವಮೊಗ್ಗ ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ನೂತನ ಶೌಚಾಲಯ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರು ಮಾಡಲಾಗಿದೆ.
ಸದರಿ ಕಾಮಗಾರಿಗೆ ಭೂಮಿ ಪೂಜೆಯನ್ನ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಅರ್ಜಿ ನೆರವೇರಿಸಿದರು.
ನೆರವೇರಿಸಲಾಯಿತು.
Sahyadri College of Commerce & Management ಪ್ರಾಂಶುಪಾಲರಾದ ಅವಿನಾಶ್ ಅವರು, ಪ್ರಮುಖರಾದ ಗಿರೀಶ್ ಕಾರಂತ್ ಅವರು, ಅನಿಲ್ ಕುಮಾರ್ ಯವರು ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿ ಅಕ್ಟೋಬರ್ 4 ರಿಂದ ಬಾಳಗಾರು ಮಠದ ಶ್ರಿ ರಾಮಪ್ರಿಯತೀರ್ಥರಿಂದ ಜ್ಞಾನಪ್ರಸರಣ ಸಪ್ತಾಹ
ಶ್ರೀಶ್ರೀಅಕ್ಷೋಭ್ಯರಾಮಪ್ರಿಯತೀರ್ಥ ಶ್ರೀಪಾದಂಗಳವರು,ಬಾಳಗಾರು ಕ್ಷೇತ್ರ.
(ಶಿವಮೊಗ್ಗ ಭಕ್ತಮಂಡಳಿಯಿಂದ ನುಡಿ ನಮನಗಳು)
ಪವಿತ್ರ ತುಂಗೆಯ ದಡದಲ್ಲಿರುವುದು ಬಾಳಗಾರು. ಇಲ್ಲಿರುವುದು ಶ್ರೀಬಾಳಗಾರು ಅಕ್ಷೋಭ್ಯತೀರ್ಥ ಮಠ. ಇಲ್ಲಿ ನೆಲೆಯೂರಿ ನಿಂತಿರುವರು ಶ್ರೀ ನರಸಿಂಹ ದೇವರು.
ನರಸಿಂಹ ದೇವರ ಅಂತರಂಗ ಭಕ್ತರಾದ ರಾಯರೂ ಇಲ್ಲಿನೆಲೆಸಿರುವರು. ಶ್ರೀ ನರಸಿಂಹ ದೇವರ ಅರ್ಚನೆಗೆ ಸೇವಾರತರಾದವರು
ಶ್ರೀಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥರು. ಶ್ರೀರಘುಭೂಷಣ ತೀರ್ಥರ ಕರ ಕಮಲ ಸಂಜಾತರು.
ನಗುಮುಖದ ಸ್ವಾಮಿಗಳಿವರು.
ಶ್ರೇಷ್ಠ “ಮಾನಕರಿ”ಮನೆತನದಲ್ಲಿ ಹುಟ್ಟಿದವರು. ಮಾನಕರಿ ಹುಲಿಕುಂಠಾಚಾರ್ಯ ಮತ್ತು ಸಾವಿತ್ರಮ್ಮ ಇವರಪೂರ್ವಾಶ್ರಮದ ತಂದೆತಾಯಿಯರು . ತಂದೆತಾಯಿಯರು ಮಾನಕರಿ ಶ್ರೀನಿವಾಸಾಚಾರ್ಯರು ಎಂದು ಕರೆದರು.
ಪದವಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದು ಚಿನ್ನದ ಪದಕ ಗಳಿಸಿದವರು.
ಮಾತೃಭಾಷೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ತಮ್ಮ ವಿದ್ಯಾ ಪ್ರೌಢಿಮೆಯಿಂದ ಹಲವಾರು ಪ್ರತಿಷ್ಠಿತ ಪದಕ ಗೌರವಗಳನ್ನು ಪಡೆದವರು. ಹಲವಾರು ಧಾರ್ಮಿಕ ಪುಸ್ತಕಗಳನ್ನು ಬರೆದಿರುವರು. ಹಂಪಿ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯ ಗೌರವ ಪಡೆದವರು.
ಬಾಲ್ಯದಿಂದಲೂ ಧಾರ್ಮಿಕ ವಿಷಯದಲ್ಲಿ ಆಸಕ್ತಿ ಹೊಂದಿದವರು. ಶ್ರೀರಾಯರ ಪರಮ ಭಕ್ತರು.ಬಾಳಗಾರು ಮಠದ ಪೀಠಕ್ಕೆಶ್ರೀಮೂಲರಾಮನ ಸೂಚನೆ ಮತ್ತು ರಾಯರ ಅನುಗ್ರಹದಿಂದಆಯ್ಕೆಯಾದವರು.
ತಮ್ಮೆಲ್ಲ ಸಾಂಸಾರಿಕ ಬಂಧನವನ್ನು ಕಳಚಿ ಶ್ರೀರಘುಭೂಷಣತೀರ್ಥರಿಂದ ಪ್ರಣವ ಮಂತ್ರ ಉಪದೇಶ ಪಡೆದು ಶ್ರೀಮಠದ ಸರ್ವಜ್ಞ ಪೀಠವನ್ನಲಂಕರಿಸಿದರು.
ಶ್ರೀಗಳವರು ಜ್ಞಾನ ದಾಸೋಹಕ್ಕೆ ಆದ್ಯತೆ ಕೊಟ್ಟಿರುವರು. ಯುವ ಪಡೆಯ ಉನ್ನತಿಗೆ ಗುರಿ ಹೊಂದಿರುವರು.
ಮಠಕ್ಕೆ ಹೋದ ಭಕ್ತರಿಗೆ ಹೊಟ್ಟೆತುಂಬ ಅನ್ನ ಪ್ರಸಾದ ನೀಡುವರು.
ತಲೆಯ ತುಂಬಾ ಜ್ಞಾನ ಪ್ರಕಾಶ ತುಂಬಿಸುವರು. ನಮ್ಮ ಶಿವಮೊಗ್ಗೆಯ ಭಕ್ತರು ಭಾಗ್ಯವಂತರು. ಎಲ್ಲರನ್ನೂ ಹರಸಲು ಬಂದಿರುವರು ಶ್ರೀಬಾಳಗಾರು ಶ್ರೀಗಳವರು. ಇಂತಹ ಶ್ರೀಗಳನ್ನು ಪಡೆದ ನಾವೇ ಧನ್ಯರು ಧನ್ಯರು. ನಮ್ಮ ಶಿವಮೊಗ್ಗೆಯ ಭಕ್ತರು ಶ್ರೀಗಳವರ ಚರಣಾರ
ವಿಂದಗಳಲ್ಲಿ ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುತ್ತಿರುವೆವು.
