Friday, March 20, 2026
Friday, March 20, 2026
Home Blog Page 1464

ಸುಳ್ಳು ವರದಿ ಪ್ರಕಟಿಸಿದ ಸುದ್ದಿಗಾರರ ಮೇಲೆ ಕೇಸ್ ದಾಖಲು

0

ಆಂಬ್ಯುಲೆನ್ಸ್ ಇಲ್ಲದ ಸಂದರ್ಭದಲ್ಲಿ ಕುಟುಂಬವೊಂದು ವೃದ್ದನನ್ನು ಕೈಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಕಳಪೆ ಆರೋಗ್ಯ ಸೌಲಭ್ಯಗಳನ್ನು ಎತ್ತಿ ತೋರಿಸುವ ರೀತಿಯಲ್ಲಿ ತಪ್ಪು ಮಾಹಿತಿಯುಳ್ಳ ಸುದ್ದಿ ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧ ಮಧ್ಯಪ್ರದೇಶದ ಭಿಂದ್ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 420 (ನಕಲಿ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಫ್‌ಐಆರ್‌ನ ಪ್ರಕಾರ, 76 ವರ್ಷದ ಗಯಾ ಪ್ರಸಾದ್ ಅವರ ಕುಟುಂಬಕ್ಕೆ ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ, ಸರ್ಕಾರದ ಯೋಜನೆಗಲು ಲಭ್ಯವಾಗದ ಕಾರಣ ಅವರನ್ನು ಕೈಗಾಡಿಯಲ್ಲಿ ಕರೆದೊಯ್ಯಬೇಕಾಯಿತು ಎಂದು ಮೂವರು ಪತ್ರಕರ್ತರು ಆಗಸ್ಟ್ 15 ರಂದು ಸುದ್ದಿ ಪ್ರಕಟಿಸಿದ್ದರು ಎಂದು ದೂರುದಾರರು ತಿಳಿಸಿದರು.

ಗಯಾ ಪ್ರಸಾದ್ ಎಂಬುವವರ ಅವರ ಮಗ ಪುರಾನ್ ಸಿಂಗ್ ಅವರು ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿರಲಿಲ್ಲ ಮತ್ತು ತಂದೆ ಮತ್ತು ಕುಟುಂಬ ವೃದ್ಧಾಪ್ಯ ವೇತನದಂತಹ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದೆ ಎಂದು ಹೇಳಿದ್ದರಿಂದ ಸಮಿತಿಯು ಸುದ್ದಿ ವರದಿಯನ್ನು ಸುಳ್ಳು ಎಂದು ಕಂಡುಹಿಡಿದಿದೆ. ಅಲ್ಲದೆ, ಗಯಾ ಪ್ರಸಾದ್ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು ಮತ್ತು ಸರ್ಕಾರಿ ಆಸ್ಪತ್ರೆಗೆ ಅಲ್ಲ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.,

ಜಾಗ್ರತೆ! ಗೂಗಲ್ ಕ್ರೋಮ್ ಹ್ಯಾಕರ್ಸ್ದುರ್ಬಳಕೆ ಮಾಡುತ್ತಿದ್ದಾರೆ

0

ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕರ್ ಗಳು ದುರುಪಯೋಗಪಡಿಸಿಕೊಳ್ಳಬಹುದಾದ ದೌರ್ಬಲ್ಯದಿಂದ ಮತ್ತೆ ಅಪಾಯದಲ್ಲಿದ್ದಾರೆ ಎನ್ನಲಾಗಿದೆ.

ಐಟಿ ಸಚಿವಾಲಯದ ಭಾಗವಾಗಿರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್) ಮೂಲಕ ಗೂಗಲ್ ಕ್ರೋಮ್ ಬಳಕೆದಾರರಿಗೆ ಹೆಚ್ಚಿನ ತೀವ್ರತೆಯ ಎಚ್ಚರಿಕೆಯನ್ನು ನೀಡಲು ಇದು ಭಾರತ ಸರ್ಕಾರವನ್ನು ಒತ್ತಾಯಿಸಿದೆ.

ಗೂಗಲ್ ಕ್ರೋಮ್ ಬ್ರೌಸರ್ನಲ್ಲಿ ಅನೇಕ ದೌರ್ಬಲ್ಯಗಳು ಅಸ್ತಿತ್ವದಲ್ಲಿವೆ ಎಂದು ಅದು ಬಹಿರಂಗಪಡಿಸಿದೆ, ಇದು ಹ್ಯಾಕರ್ಗಳಿಗೆ ತಮ್ಮ ಗ್ಯಾಜೆಟ್ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಗೂಗಲ್ ಕ್ರೋಮ್ ನಲ್ಲಿ ಅನೇಕ ದೌರ್ಬಲ್ಯಗಳು ವರದಿಯಾಗಿವೆ, ಇದನ್ನು ದುರುದ್ದೇಶಪೂರಿತ ದಾಳಿಕೋರರು ಬಳಸಿಕೊಳ್ಳಬಹುದು, ಇದು ಉದ್ದೇಶಿತ ಸಿಸ್ಟಮ್ ನಲ್ಲಿ ಎಲ್ಲಾ ಭದ್ರತಾ ತಪಾಸಣೆಗಳನ್ನು ಬೈಪಾಸ್ ಮಾಡಲು ಅವರಿಗೆ ಅನುಮತಿಸುತ್ತದೆ ಎನ್ನಲಾಗಿದೆ.

ಡೆಸ್ಕ್ಟಾಪ್ಗಾಗಿ ಗೂಗಲ್ ಕ್ರೋಮ್ನಲ್ಲಿ ದುರ್ಬಲತೆಯ ಟಿಪ್ಪಣಿಯ ಇತ್ತೀಚಿನ ಎಚ್ಚರಿಕೆಯಲ್ಲಿ, ಸಿಇಆರ್ಟಿ-ಇನ್, ‘ಫೆಡ್ಸಿಎಂ, ಸ್ವಿಫ್ಟ್ಶೇಡರ್, ಆಂಗಲ್, ಬ್ಲಿಂಕ್, ಸೈನ್-ಇನ್ ಫ್ಲೋ, ಕ್ರೋಮ್ ಒಎಸ್ ಶೆಲ್ನಲ್ಲಿ ಉಚಿತ ಬಳಕೆಯ ನಂತರ ಬಳಕೆಯಿಂದಾಗಿ ಗೂಗಲ್ ಕ್ರೋಮ್ನಲ್ಲಿ ಈ ದೌರ್ಬಲ್ಯಗಳು ಅಸ್ತಿತ್ವದಲ್ಲಿವೆ ಎನ್ನುತ ತಿಳಿಸುತ್ತದೆ. ರಿಮೋಟ್ ಹ್ಯಾಕರ್ ವಿಶೇಷವಾಗಿ ರಚಿಸಿದ ವಿನಂತಿಗಳನ್ನು ಉದ್ದೇಶಿತ ವ್ಯವಸ್ಥೆಗೆ ಕಳುಹಿಸುವ ಮೂಲಕ ದೌರ್ಬಲ್ಯಗಳನ್ನು ಬಳಸಿಕೊಳ್ಳಬಹುದು ಎಂದು ಅದು ಮತ್ತಷ್ಟು ವಿವರಿಸಿದೆ.

ಮೋದಿ ಆಡಳಿತದಲ್ಲಿ ಕಾರ್ಪೋರೇಟ್ ಗಿಂತ ಜನರ ಮೇಲೆ ತೆರಿಗೆ ಹೊರೆ- ರಾಹುಲ್

0

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಕಾರ್ಪೋರೇಟ್‌ಗಿಂತ ಜನ ಸಾಮಾನ್ಯರ ಮೇಲೆ ಜಾಸ್ತಿ ತೆರಿಗೆ ಹೇರಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೇಂದ್ರವನ್ನು ಲೂಟಿ ಸರ್ಕಾರ ಎಂದು ಟೀಕಿಸಿರುವ ರಾಹುಲ್, ಕಾರ್ಪೋರೇಟ್ ಮಿತ್ರರ ಪರವಾಗಿದೆ ಎಂದು ಆರೋಪಿಸಿದ್ದಾರೆ.
ಕಾರ್ಪೋರೇಟ್‌ಗಳಿಗೆ ತೆರಿಗೆ ಕಡಿತಗೊಳಿಸಿರುವ ಮೋದಿ ಸರ್ಕಾರವು, ಜನರಿಂದ ಜಾಸ್ತಿ ತೆರಿಗೆ ವಸೂಲಿ ಮಾಡುತ್ತಿದೆ ಎಂಬುದನ್ನುಇನ್ಪೋಗ್ರಾಫಿಕ್ಸ್ ಸಹಿತ ಮಾಹಿತಿ ಹಂಚಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನ ಸಾಮಾನ್ಯರು ಹಾಗೂ ಕಾರ್ಪೋರೇಟ್‌ಗಳಿಗೆ ವಿಧಿಸಲಾಗಿರುವ ತೆರಿಗೆಯಿಂದ ಸಂಗ್ರಹವಾದ ಶೇಕಡವಾರು ಆದಾಯವನ್ನು ಹೋಲಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರದ ಬಜೆಟ್ ದಾಖಲೆಯ ಆಧಾರದಲ್ಲಿ ರಾಹುಲ್ ಗಾಂಧಿ, ಈ ಮಾಹಿತಿ ಹಂಚಿದ್ದಾರೆ.
ಮೋದಿ ಆಡಳಿತದಲ್ಲಿ ಕಾರ್ಪೋರೇಟ್‌ಗಿಂತಲೂ ಹೆಚ್ಚು ತೆರಿಗೆಯನ್ನು ಜನರ ಮೇಲೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

2010ರಲ್ಲಿ ಕಾರ್ಪೋರೇಟ್‌ಗಳಿಂದ ಶೇ 40 ಮತ್ತು ಜನರ ಮೇಲಿನ ತೆರಿಗೆಯಿಂದ ಶೇ 24ರಷ್ಟು ಆದಾಯ ಸಂಗ್ರಹಿಸಲಾಗಿತ್ತು. 2021ರಲ್ಲಿ ಕಾರ್ಪೋರೇಟ್‌ಗಳ ಮೇಲಿನ ತೆರಿಗೆಯಿಂದ ಸಂಗ್ರಹಿಸಲಾದ ಆದಾಯವು ಶೇ 24ಕ್ಕೆ ಇಳಿಕೆಯಾಗಿದೆ. ಅದೇ ಹೊತ್ತಿಗೆ ಜನ ಸಾಮಾನ್ಯರ ಮೇಲಿನ ತೆರಿಯಿಂದ ಸಂಗ್ರಹಿಸಲಾದ ಆದಾಯವು ಶೇ 48ಕ್ಕೆ ಏರಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ

ಬ್ಯಾಂಕುಗಳ ಎಟಿಎಂ ನಿಯಮಗಳಲ್ಲಿ ಬದಲಾವಣೆ ಗಮನಿಸಿ

0

ಈ ವರ್ಷ ಆರ್ ಬಿಐ ಬ್ಯಾಂಕುಗಳ ಅನುಮತಿ ಶುಲ್ಕಗಳನ್ನು ಹೆಚ್ಚಿಸಿದೆ. ಹೀಗಾಗಿ ಅನೇಕ ಬ್ಯಾಂಕುಗಳು ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಿಸಿವೆ. ಎಟಿಎಂ ಬಳಕೆಗೆ ಶುಲ್ಕವನ್ನು ಅನೇಕ ಬ್ಯಾಂಕುಗಳಲ್ಲಿ ಬದಲಿಸಲಾಗಿದೆ. ಎಟಿಎಂ ಸೇವೆಗಳ ಬಳಕೆಗೆ ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕು.

ಏಕೆಂದರೆ ಎಲ್ಲ ಬ್ಯಾಂಕುಗಳು ಅವುಗಳ ಬಳಕೆ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಎಲ್ಲ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುದಾರರಿಗೆ ತಿಂಗಳಲ್ಲಿ ಎಟಿಎಂ ಉಚಿತ ವಹಿವಾಟುಗಳಿಗೆ ನಿಗದಿತ ಮಿತಿ ವಿಧಿಸಲಾಗಿದ್ದು, ಅದಕ್ಕೂ ಮೀರಿದ ವಹಿವಾಟಿಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ನೀವು ಖಾತೆ ಹೊಂದಿರುವ ಬ್ಯಾಂಕ್ ಎಟಿಎಂನಲ್ಲಿ ತಿಂಗಳಿಗೆ ಆರಂಭಿಕ 5 ವಹಿವಾಟು ಉಚಿತವಾಗಿದೆ. ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ತಿಂಗಳಿಗೆ ಮೆಟ್ರೋ ನಗರಗಳಲ್ಲಿ 3 ಬಾರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ವಹಿವಾಟು ನಡೆಸಬಹುದು. ಇದ್ರಲ್ಲಿ ಹಣಕಾಸು ಹಾಗೂ ಹಣಕಾಸೇತರ ವ್ಯವಹಾರ ಎರಡೂ ಸೇರಿದೆ. ಈ ಮಿತಿಗಳನ್ನು ಮೀರಿದ್ರೆ ಪ್ರತಿ ಹೆಚ್ಚುವರಿ ವಹಿವಾಟಿನ ಮೇಲೆ ಪ್ರಸ್ತುತ 21ರೂ. ಶುಲ್ಕ ವಿಧಿಸಲಾಗುತ್ತಿದೆ. ಈ ಹಿಂದೆ ಈ ಶುಲ್ಕ 20ರೂ. ಇತ್ತು. ಆದ್ರೆ 2022ರ ಜನವರಿ 1ರಿಂದ ನಗದು ಹಾಗೂ ನಗದುರಹಿತ ಎಟಿಎಂ ವ್ಯವಹಾರಗಳು ನಿಗದಿತ ಮಾಸಿಕ ಮಿತಿಯನ್ನು ಮೀರಿದರೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಆರ್ ಬಿಐ ಅವಕಾಶ ನೀಡಿತ್ತು.

ಮಂಕಿಪಾಕ್ಸ್ ಜೊತೆಗೇ ಆತಂಕ ಹುಟ್ಟಿಸಿರುವ ಟೊಮಾಟೋ ಜ್ವರ

0

ಟೊಮೆಟೊ ಜ್ವರ ಎಂದೂ ಕರೆಯಲ್ಪಡುವ ಹ್ಯಾಂಡ್ ಫೂಟ್ ಮೌತ್ ಡಿಸೀಸ್ ಮಕ್ಕಳಲ್ಲಿ ವೇಗವಾಗಿ ಹರಡುವುದರಿಂದ ಆರೋಗ್ಯ ತಜ್ಞರಿಗೆ ಕಳವಳಕ್ಕೆ ಕಾರಣವಾಗಿದೆ. ಕೊರೋನಾ ವೈರಸ್ ಭಾರತೀಯ ನಾಗರಿಕರ ಮೇಲಿನ ತನ್ನ ಹಿಡಿತವನ್ನ ಸಡಿಲಿಸಿಲ್ಲ, ಈ ಸಮಯದಲ್ಲಿ ಮಂಕಿಪಾಕ್ಸ್ ಎಂಬ ಭಯಾನಕತೆಯೂ ತೂಗುಯ್ಯಾಲೆಯಲ್ಲಿದೆ.

ಈ ನಡುವೆ ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್‌ನಲ್ಲಿ ಶಿಕ್ಷೆಗೊಳಗಾದ ಅಧ್ಯಯನವು ಈಗ ಭಾರತದಲ್ಲಿ ಮಕ್ಕಳಲ್ಲಿ ಎಚ್‌ಎಫ್‌ಎಂಡಿ ಪ್ರಕರಣಗಳ ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಎಚ್ಚರಿಸಿದೆ.

ಭಾರತದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಟೊಮೆಟೊ ಜ್ವರದ ಪ್ರಕರಣಗಳ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್ ಪ್ರಕಾರ, ಮೇ 6ರಂದು ಕೇರಳದ ಕೊಲ್ಲಂನಲ್ಲಿ ಟೊಮೆಟೊ ಜ್ವರ’ದ ಮೊದಲ ಪ್ರಕರಣ ವರದಿಯಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 82 ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಕೊರೋನಾ 4ನೇ ಅಲೆಯ ಸಂಭಾವ್ಯ ಹೊರಹೊಮ್ಮುವಿಕೆಯೊಂದಿಗೆ ನಾವು ವ್ಯವಹರಿಸುತ್ತಿರುವಂತೆಯೇ, ಟೊಮ್ಯಾಟೋ ಫ್ಲೂ ಅಥವಾ ಟೊಮ್ಯಾಟೋ ಜ್ವರ ಎಂದು ಕರೆಯಲ್ಪಡುವ ಹೊಸ ವೈರಸ್ ಭಾರತದಲ್ಲಿ ಕೇರಳ ರಾಜ್ಯದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೊರಹೊಮ್ಮಿದೆ ಎಂದು ಲ್ಯಾನ್ಸೆಟ್ ತನ್ನ ವರದಿಯಲ್ಲಿ ತಿಳಿಸಿದೆ.

ದೇಶದಲ್ಲಿ ಚಿನ್ನದ ಬೇಡಿಕೆ ಶೇ 43 ರಷ್ಟು ಹೆಚ್ಚಳ

0

ಆಪತ್ತಿನ ಕಾಲದಲ್ಲಿ ಬಂಗಾರ ನಮಗೆ ನೆರವಾಗುತ್ತದೆ. ಈ ಕಾರಣಕ್ಕೆ ಭಾರತೀಯರು ಚಿನ್ನ ಖರೀದಿಸಿಸಲು ಮುಂದಾಗುತ್ತಾರೆ. ಆದರೆ, ಕೊರೋನಾ ಲಾಕ್ ಡೌನ್ ಕಾರಣಕ್ಕೆ ಆರ್ಥಿಕವಾಗಿ ತೀವ್ರ ಪೆಟ್ಟು ಬಿದ್ದ ಪರಿಣಾಮ ಬಂಗಾರದ ಖರೀದಿ ಇಳಿಮುಖವಾಗಿತ್ತು.

ಆದರೆ, ಈಗ ಆರ್ಥಿಕತೆ ಮತ್ತೆ ಹಳಿಗೆ ಮರಳಿದೆ. ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲಾರಂಬಿಸಿದ್ದಾರೆ.

ಇದಕ್ಕೆ ಪುರಾವೆ ಎಂಬಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಏಪ್ರಿಲ್ ನಿಂದ ಜೂನ್ ಅವಧಿಯ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯಲ್ಲಿ ಶೇ. 43 ರಷ್ಟು ಹೆಚ್ಚಳವಾಗಿದೆ.

2022ನೇ ಸಾಲಿನ 2ನೇ ತ್ರೈಮಾಸಿಕದಲ್ಲಿ ಚಿನ್ನಾಭರಣದ ಬೇಡಿಕೆಯಲ್ಲಿ ಶೇಕಡ 49 ರಷ್ಟು ಹೆಚ್ಚಳವಾಗಿದೆ. ಬರೋಬ್ಬರಿ 140.3 ಟನ್ ಚಿನ್ನ ಮಾರಾಟವಾಗಿದೆ. ಆದರೆ, ಕಳೆದ ವರ್ಷದ ಇದೆ ಅವಧಿಯಲ್ಲಿ ಕೇವಲ 94 ಟನ್ ಚಿನ್ನ ಮಾರಾಟವಾಗಿತ್ತು ಎಂದು ಮೂಲಗಳು ತಿಳಿಸಿವೆ.

ತಾಂಡಾ ಮತ್ತು ಹಟ್ಟಿ ಗಳಿಗೆ ಕಂದಾಯ ಗ್ರಾಮವಾಗಿ ಮಾನ್ಯತೆ- ಅಶೋಕ್

0

ರಾಜ್ಯದಲ್ಲಿ ಲಂಬಾಣಿ ಸಮುದಾಯ ವಾಸಿಸುವ ತಾಂಡಾ ಹಾಗೂ ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯಿಂದಲೆ ಇದಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಅರ್.ಅಶೋಕ ಅವರು ಘೋಷಿಸಿದ್ದಾರೆ.

ಶನಿವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಆಯೋಜಿಸಿದ ಗ್ರಾಮ ವಾಸ್ತವ್ಯ ಮತ್ತು ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯ 453 ತಾಂಡಾಗಳನ್ನು ಪೈಲೇಟ್ ಯೋಜನೆಯಡಿ ಕೈಗೆತ್ತಿಕೊಂಡು ಕಂದಾಯ ಗ್ರಾಮಗಳನ್ನಾಗಿ ಮುಂದಿನ ಎರಡು ತಿಂಗಳಲ್ಲಿ ಮಾಡಲಾಗುತ್ತದೆ. ಇದಲ್ಲದೆ ಪ್ರಸ್ತುತ ತಾಂಡಾ, ಹಟ್ಟಿಯಲ್ಲಿ ಅನಧಿಕೃತವಾಗಿ ವಾಸಿಸುವರನ್ನು ಅಧಿಕೃತಗೊಳಿಸಿ ಎಷ್ಟು ವಿಸ್ತೀರ್ಣದಲ್ಲಿ ಇದ್ದಾರೆ ಅಷ್ಟು ಜಾಗದ ನಿವೇಶನ, ಮನೆ ಅವರ ಹೆಸರಿಗೆ ನೋಂದಣಿ ಮಾಡಿಸಿ ಮನೆ ಕಟ್ಟಲು ಆರ್ಥಿಕ ಸಹಾಯಧನ ನೀಡಲಾಗುತ್ತದೆ. ರಾಜ್ಯದಲ್ಲಿ ಏಕಕಾಲದಲ್ಲಿ 30 ಸಾವಿರ ಜನರಿಗೆ ಹಕ್ಕು ಪತ್ರ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.

ರೈತ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಿದೆ. ಕೃಷಿ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣ ಪಡೆಯಬೇಕು ಎಂಬ ನಿಟ್ಟಿನಲ್ಲಿ ಇಂಜಿನೀಯರಿಂಗ್, ವೈದ್ಯಕೀಯ, ಶಿಕ್ಷಣ, ವಕೀಲ ವೃತ್ತಿಯ ಉನ್ನತ ಶಿಕ್ಷಣ ಪಡೆಯಲು ಅವರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸವಿತಾ, ಕುಂಬಾರ, ಬಡಿಗೇರ್ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 50 ಸಾವಿರ ರೂ. ಉದ್ಯೋಗ ನಿಧಿ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಮನೆ‌, ಮನೆಗೆ ಕಂದಾಯ ದಾಖಲೆಗಳು ಅಭಿಯಾನದಲ್ಲಿ 50 ಸಾವಿರ ಜನರಿಗೆ ಜಾತಿ, ಆದಾಯ, ಅಟ್ಲಾಸ್, ಪಹಣಿ ಪತ್ರಗಳನ್ನು ನೀಡಲಾಗಿದೆ.

ಕಳೆದ 10 ಗ್ರಾಮ ವಾಸ್ತವ್ಯದಲ್ಲಿ ಇಂದಿಲ್ಲಿ ದಾಖಲೆ ಪ್ರಮಾಣದಲ್ಲಿ 28,900 ಜನರಿಗೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದ ಅವರು ಇದು ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ ಪ್ರತಿಫಲ ಎಂದು ಹೇಳಿದ್ದಾರೆ.

ಭಾರತದಿಂದ ನಾವು ಶಾಂತಿ ಬಯಸುತ್ತೇವೆ -ಪಾಕ್ ಪ್ರಧಾನಿ

0

ಯುದ್ದದಿಂದ ಕಾಶ್ಮೀರ ಸಮಸ್ಯೆ ಪರಿಹಾರವಾಗದರು. ಮಾತುಕತೆ ಮೂಲಕ ಪರಿಹರಿಸಿಕೊಂಡು ಭಾರತದೊಂದಿಗೆ ಪಾಕಿಸ್ತಾನ ಶಾಶ್ವತ ಶಾಂತಿಯನ್ನು ಬಯಸುವುದಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿಗಳ ಗುಂಪಿನೊಂದಿಗೆ ಮಾತನಾಡಿದ ಅವರು, ಸೌಹಾರ್ದಯುತ ಮಾತುಕತೆಗಳು ನಡೆದರೆ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ.
ಕಾಶ್ಮೀರ ಕುರಿತಾದ ಸಮಸ್ಯೆಯೂ ಇದೇ ರೀತಿಯದ್ದಾಗಿದ್ದು, ಭಾರತದೊಂದಿಗೆ ಈ ಕುರಿತು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಯುದ್ದದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.

ಸ್ವಾತಂತ್ರ್ಯ ಬಂದ ಬಳಿಕ ಉಭಯ ದೇಶಗಳ ನಡುವೆ ಕಾಶ್ಮೀರ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಇತ್ತೀಚೆಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಕಾಶ್ಮೀರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಆದಾಗ್ಯೂ ಅಲ್ಲಿನ ಪರಿಸ್ಥಿತಿಯಲ್ಲಿ ಬದಲಾವಣೆಗಳೇನೂ ನಡೆದಿಲ್ಲ. ಆಗಾಗ ಒಳನುಸುಳುವಿಕೆ, ದಾಳಿಗಳು ಪಾಕಿಸ್ತಾನದ ಕಡೆಯಿಂದ ಇಲ್ಲಿ ನಡೆಯುತ್ತಲೇ ಇವೆ.

ಈ ನಡುವೆ ಪಾಕಿಸ್ತಾನವು ಭಯೋತ್ಪಾದನೆಗೆ ಅಂತ್ಯ ಹಾಡಿದರೆ ಮಾತುಕತೆಗೆ ಸಿದ್ದ ಎಂದು ಭಾರತ ಆಗ್ರಹಿಸುತ್ತಲೇ ಬಂದಿದ್ದರೂ, ಇದಕ್ಕೆ ಪಾಕಿಸ್ತಾನ ಒಪ್ಪಿಗೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

ಆ್ಯಸಿಡ್ ಸಂತ್ರಸ್ತರಿಗೆ ಸರ್ಕಾರದಿಂದ ಸೈಟ್ ಹಾಗೂ ಮನೆ ನಿರ್ಮಾಣಕ್ಕೆ ಅನುವು- ಅಶೋಕ್

0

ರಾಜ್ಯ ಸರ್ಕಾರವು ಆ್ಯಸಿಡ್ ಸಂತ್ರಸ್ತರಿಗೆ 10 ಸಾವಿರ ರೂ. ಪಿಂಚಣಿ ನೀಡಲಾಗುತ್ತಿದ್ದು, ಅವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಉಚಿತ ಸೈಟ್ ನೀಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಆಯೋಜಿಸಿದ ಗ್ರಾಮ ವಾಸ್ತವ್ಯ ಮತ್ತು ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂತ್ರಸ್ತರಿಗೆ ಈ ಹಿಂದೆ 3 ಸಾವಿರ ರೂ. ಪಿಂಚಣಿ ಕೊಡಲಾಗುತಿತ್ತು, ಅದನ್ನು ಈಗ 10 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಿದೆ. ಇದಲ್ಲದೆ ಅವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಉಚಿತ ಸೈಟ್ ನೀಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಸ್ವಯಂ ಉದ್ಯೋಗ ಮಾಡಲು ಸಂತ್ರಸ್ತರು ಮುಂದೇ ಬಂದಲ್ಲಿ 5 ಲಕ್ಷ ರೂ. ವರೆಗೆ ಧನಸಹಾಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಂದಾಯ ಸಚಿವರು ಹೇಳಿದರು.

ಸಿಇಟಿ 22 ರ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಆರಂಭ

ಸಿಇಟಿ-2022ರ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆಯು ಇಂದಿನಿಂದ (ಆ.22) ಆರಂಭವಾಗಲಿದೆ. ಮೊದಲ ದಿನ ರ್‍ಯಾಂಕ್‌ 1ರಿಂದ 5 ಸಾವಿರ ವರೆಗೆ ಆನ್‌ಲೈನ್‌ ಮೂಲಕ ನಡೆಸಲಿದೆ.
ಮೀಸಲಾತಿ ಪಡೆಯುವ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಬೇಕಿದೆ.

ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿಯ ಪ್ರಮಾಣ ಪತ್ರವನ್ನು ಪರಿಶೀಲನೆಗೆ ಒಳಪಡಿಸಬೇಕು. ಆ ನಂತರ ಬಿಇಒ ಇದನ್ನು ದೃಢೀಕರಿಸಿ ಕೆಇಎಗೆ ಅಪ್‌ಲೋಡ್‌ ಮಾಡಲಿದ್ದಾರೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ತಿಳಿಸಿದೆ.

ಸೆ.7ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಇಎ ಕಚೇರಿಯಲ್ಲೇ ಪರಿಶೀಲನೆಗೆ ಅವಕಾಶ ನೀಡಿದೆ.
ವಿದ್ಯಾರ್ಥಿಗಳು ನೇರವಾಗಿ ಇಲ್ಲಿ ಬಂದು ಪರಿಶೀಲನೆಗೆ ಒಳಪಡಬಹುದಾಗಿದೆ. ಬೆಂಗಳೂರಿನಲ್ಲಿಯೇ ಸುಮಾರು 40 ಸಾವಿರ ವಿದ್ಯಾರ್ಥಿಗಳಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.