Sir.M. Visvesvaraya Engineering Trust ಬೆಂಗಳೂರಿನ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಕಾವ್ಯ ಸಮ್ಮೇಳನದಲ್ಲಿ ಶಿವಮೊಗ್ಗ ನಗರದ ಸಂಸ್ಕೃತ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ರೇಣುಕಾರಾಧ್ಯ ಅವರಿಗೆ ರಾಷ್ಟ್ರೀಯ ಕಾವ್ಯ ಭೂಷಣ ರಾಷ್ಟ್ರ ಪ್ರಶಸ್ತಿಯನ್ನು ರಾಜ್ಯ ನಿವೃತ್ತ ಲೋಕಾಯುಕ್ತ ಡಾ. ಸಂತೋಷ್ ಹೆಗಡೆಯವರಿಂದ ಸ್ವೀಕರಿಸಿದರು. Sir.M. Visvesvaraya Engineering Trust ಅಥಣಿ ತಾಲೂಕಿನ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಂಜಯ್ಯನ ಮಠ ಮತ್ತು ಇನ್ನಿತರರಿದ್ದರು.
S.N.Chennabasappa ಶಾಸಕ ಚನ್ನಬಸಪ್ಪ ಅವರಿಂದ ಶಿವಮೊಗ್ಗದ ಹೊನ್ನಾಳಿ ರಸ್ತೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ
S.N.Chennabasappa ಶಿವಮೊಗ್ಗ ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ಕಾಮಗಾರಿಯ ಪ್ರಗತಿಯ ಕುರಿತು ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಲಾಯಿತು.
ಮಾನ್ಯ ಲೋಕೋಪಯೋಗಿ ಸಚಿವರ ಬಳಿ ವಿಶೇಷ ಪ್ರಯತ್ನದ ಸಲುವಾಗಿ ಹಲವು ದಿನಗಳಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಅಪಾಯಕಾರಿಯಾಗಿದ್ದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ನೂತನ ರಸ್ತೆಯ ಕಾಮಗಾರಿಯು ಪ್ರಾರಂಭವಾಗಿದ್ದು, ಇಂದು PWD ಅಧಿಕಾರಿಗಳು, ಸಂಚಾರಿ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಬಿಜೆಪಿ ಪ್ರಮುಖರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿ ಹಾಗೆಯೇ ಹೊನ್ನಾಳಿ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಟೆಂಡರ್ ಪ್ರಕ್ರಿಯೆ ಮುಗಿದ್ದು, ಶೀಘ್ರದಲ್ಲಿಯೇ ಪ್ರಾರಂಭಿಸಲು ತಿಳಿಸಲಾಯಿತು.
ಒಟ್ಟು ₹3 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ರಸ್ತೆ ಕಾಮಗಾರಿಯಲ್ಲಿ 2 ಕೋಟಿ ರೂ ವೆಚ್ಚದ ಕಾಂಕ್ರೀಟ್ ರಸ್ತೆ, 1 ಕೋಟಿ ರೂ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆಯ ಕಾಮಗಾರಿ ಪೂರ್ಣಗೊಂಡ ನಂತರ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
S.N.Chennabasappa ಭೇಟಿಯ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟ, ವಾಹನಗಳ ಸುಗಮ ಸಂಚಾರ, ಸಂಚಾರ ವ್ಯತ್ಯಯ ಮತ್ತು ನಾಗರಿಕರಿಗೆ ಉಂಟಾಗುತ್ತಿರುವ ತಾತ್ಕಾಲಿಕ ಅಸೌಕರ್ಯಗಳ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಕೆಲಸವನ್ನು ನಿಗದಿತ ಅವಧಿಯಲ್ಲಿ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
Rotary English Medium School ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಉಂಟಾಗದಂತೆ ಪೋಷಕರು ಜಾಗ್ರತೆ ವಹಿಸಬೇಕು- ಡಾ.ಕೌಸ್ತುಭ ಅರುಣ್
Rotary English Medium School ಹದಿಹರೆಯದ ಮಕ್ಕಳಲ್ಲಿ ವಯೋಸಹಜವಾದ ಹಲವಾರು ಬದಲಾವಣೆಗೊಳಾಗುತ್ತಾರೆ ಅಂತಹ ಸಂರ್ಧಬದಲ್ಲಿ ಶಿಕ್ಷಕರು ಮತ್ತು ಷೋಷಕರು ಯಾವ ರೀತಿಯ ಪಾತ್ರವನ್ನು ವರ್ಣಿಸಬೇಕೆಂದು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ಮಕ್ಕಳು ತಮ್ಮ ಇಚ್ಛೆಯಂತೆ ಬದುಕಲು ಆಸೆ ಪಡುತ್ತಾರೆ ಕೆಲವರಿಗೆ ಓದುವುದರಲ್ಲಿ ಚಿತ್ರಕಲೆ , ನೃತ್ಯ, ನಟಿಸುವುದು. ಹೀಗೆ ಹಲವಾರು ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಅದನ್ನು ತಂದೆ-ತಾಯಿ ಅಣ್ಣ-ತಮ್ಮ ,ಗೆಳೆಯ-ಗೆಳತಿಯರು ಗುರುತಿಸಿ ಅವರನ್ನು ಪ್ರೊತ್ಸಾಹಿಸಬೇಕು ಇಲ್ಲವಾದಲ್ಲಿ ಹದಿಹರೆಯದ ವಯಸ್ಸಿನಲ್ಲಿ ಅವರು ಮಾನಸಿಕ ಕಿನ್ನತರೆ ಒಳಗಾಗುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ವೈದ್ಯರ ತಂಡವು ಕಿರು ನಾಟಕದ ಮೂಲಕ ಅಭಿನಯಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
Rotary East English Medium School ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಮಹಿಳಾ ಸಂಘದ ಅಧ್ಯಕ್ಷರಾದ ಡಾ ಕೌಸ್ತುಬ ಅರುಣ್, ಅವರು ವಹಿಸಿ ಹದಿಹರೆಯದ ಮಕ್ಕಳು ಮಾನಸಿಕ ಕಿನ್ನತೆಗೆ ಒಳಾಗಾಗದಂತೆ ಪೋಷಕರು ಮತ್ತು ಶಿಕ್ಷಕರು ಹೆಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದ ಉದಾಘನೆಯನ್ನು ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟ್ ನ ಅದ್ಯಕ್ಷಕಾರಾದ ಕೆ.ಬಿ ರವಿಶಂಕರ್ ಈ ಒಂದು ಕಾಯಕ್ರಮಮದಲ್ಲಿ ಟ್ರಸ್ಟಿನ ಕಾರ್ಯದರ್ಶಿ ರಾಮಚಂದ್ರ ಎಸ್, ಸಿ ಹಾಗೂ ಮಾಜಿ ಅಧ್ಯಕ್ಷರು ರೊ.ಚಂದ್ರಶೇಖರಯ್ಯ ಎಂ , ಹಾಗೂ ಭಾರತೀಯ ವೈದಕೀಯ ಸಂಘದ ಅಧ್ಯಕ್ಷರಾದ ಡಾ ಪ್ರವಿಶ್ ಕೆ,ಆರ್ ಡಾ ಪವಿತ್ರ ಉಪಾಧ್ಯಕ್ಷರದ ಡಾ ರಾಮಚಂದ್ರ ಬಾದಮಿ, ಕಾರ್ಯದರ್ಶಿಗಳಾದ ಡಾ ಶುಷ್ನತ, ಕೆ.ಎಸ್ ಡಾ ಶ್ವೇತ ಬಾದಮಿ ಮತ್ತು ರೋಟರಿ ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲರು ಆದ ಶ್ರೀ ಸರ್ಯನಾರಯಣ್ ಮತ್ತು ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಕೀರು ನಾಟಕದ ಪ್ರಾತ್ಯಕ್ಷಿಕೆೆಯಲ್ಲಿ ಡಾ ಪ್ರತೀಕ್ಷ , ಡಾ ಶಿವಾನಿ , ಡಾ ಅನುಷ್ಕ , ಡಾ ಚೈತ್ರ, ಡಾ ಮೇಗ ಶ್ರೀ, ಮುಂತಾದವರು ಭಾಗವಹಿಸಿದ್ದರು.
Shimoga Rotary Club ಕ್ಯಾಟರಿಂಗ್ ಕ್ಷೇತ್ರದ ಹಿರಿಯ ಅನುಭವಿ, ಪ್ರಕಾಶ್ ಪ್ರಭು ಅವರಿಗೆ ಸನ್ಮಾನ
Shimoga Rotary Club ವೃತ್ತಿಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಕರ್ತವ್ಯ ಎಂದು ರೋಟರಿ ಕ್ಲಬ್ ರಿವರ್ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.
ಶಿವಮೊಗ್ಗ ರೋಟರಿ ಕ್ಲಬ್ ರಿವರ್ಸೈಡ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಪ್ರಕಾಶ್ ಪ್ರಭು ಅವರಿಗೆ ವೃತ್ತಿಪರ ಸೇವಾ ಗೌರವ ನೀಡಿ ಸನ್ಮಾನಿಸಿ ಮಾತನಾಡಿದರು.
ರೋಟರಿ ಸಂಸ್ಥೆಯಿಂದ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ವೃತ್ತಿಕ್ಷೇತ್ರದ ಸಾಧಕರನ್ನು ಗುರುತಿಸಿ ವೃತ್ತಿ ಸೇವಾ ಗೌರವ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ ಎಂದು ತಿಳಿಸಿದರು.
Shimoga Rotary Club ಪ್ರಕಾಶ್ ಪ್ರಭು ಅವರು ಸೇವೆಯ ಅರ್ಥವನ್ನು ನೈಜವಾಗಿ ಬದುಕುಳಿಸಿದ್ದಾರೆ. ಹಣಕ್ಕಿಂತ ಮನಸ್ಸಿಗೆ ಆದ್ಯತೆ ನೀಡುವವರೇ ನಿಜವಾದ ವೃತ್ತಿಪರರು. ಅವರಂತಹ ವ್ಯಕ್ತಿತ್ವವನ್ನು ರೋಟರಿ ಇಂದು ಗುರುತಿಸುವುದು ನಮ್ಮ ಕ್ಲಬ್ನ ಭಾಗ್ಯ ಎಂದು ಹೇಳಿದರು.
ವೃತ್ತಿ ಸೇವಾ ಗೌರವ ಪ್ರಶಸ್ತಿ ಪಡೆದ ಪ್ರಕಾಶ್ ಪ್ರಭು ಅವರು ಮನೆಯಲ್ಲಿಯೇ ಕ್ಯಾಟರಿಂಗ್ ವ್ಯವಸ್ಥೆ ಆರಂಭಿಸಿ, ಮದುವೆ, ಧಾರ್ಮಿಕ ಹಾಗೂ ಸಾಮಾಜಿಕ ಸಮಾರಂಭಗಳಿಗೆ ಶುದ್ಧ, ರುಚಿಕರ ಊಟ ಬಡಿಸುತ್ತ ಅನೇಕ ದಶಕಗಳಿಂದ ಜನರ ಪ್ರೀತಿ ಗಳಿಸಿದ್ದಾರೆ.
ರೋಟರಿ ಕ್ಲಬ್ ರಿವರ್ಸೈಡ್ ಕಾರ್ಯದರ್ಶಿ ನಿತಿನ್ ಯಾದವ್, ನಿಯೋಜಿತ ಅಧ್ಯಕ್ಷ ಎಂ.ಎಂ.ರವಿ, ಮಾಜಿ ಅಧ್ಯಕ್ಷರಾದ ಬಿ.ಜಿ.ಧನರಾಜ್, ಸಿ.ಎನ್.ಮಲ್ಲೇಶ್, ಬಸವರಾಜ, ರಾಜೇಶ್ ಶ್ಯಾಮ್, ಮಂಜುನಾಥ್, ಜೈಪ್ರಕಾಶ್, ಸಂತೋಷ್ ಶೆಟ್ಟಿ, ರೋಟರಿ ಕ್ಲಬ್ ರಿವರ್ಸೈಡ್ ಪದಾಧಿಕಾರಿಗಳು, ಇನ್ನರ್ವ್ಹೀಲ್ ಸದಸ್ಯರು, ಮಾಜಿ ಅಧ್ಯಕ್ಷರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು.
Breaking News ಶಿವಮೊಗ್ಗ ದಲ್ಲಿ ಏಳುಕಡೆ ಲೋಕಾಯುಕ್ತ ದಾಳಿ
Breaking News ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ 7 ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ7 ಲೋಕಾಯುಕ್ತ ತಂಡಗಳಿಂದ ದಾಳಿ ಶಿವಮೊಗ್ಗದ ಆರ್ ಎಂಸಿ ಬಳಿ ಇರುವ ಸಬ್ ರಜಿಸ್ಟರ್ ಕಚೇರಿಯಲ್ಲಿ ಭ್ರಷ್ಟಾಚಾರ ದೂರು ಹಿನ್ನಲೆಯಲ್ಲಿ
ಏಕಕಾಲಕ್ಕೆ ದಾಳಿ ಮಾಡಿರುವ ಅಧಿಕಾರಿಗಳ ಕಚೇರಿಯ ಎಲ್ಲ ದಾಖಲೆ ಮತ್ತು ಇಂದಿನ ಹಣಕಾಸಿನ ವ್ಯವಹಾರ ಪರಿಶೀಲನೆಯನ್ನು ಮಾಡಲಾಗಿದೆ
Thawar Chand Gehlot ರಾಜ್ಯ ಮಾಹಿತಿ ಆಯುಕ್ತರಾಗಿ ಮೂವರಿಂದ ಪ್ರಮಾಣ ವಚನ ಸ್ವೀಕಾರ
Thawar Chand Gehlot ನೂತನವಾಗಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕವಾಗಿರುವ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಬಿ. ವೆಂಕಟ್ ಸಿಂಗ್ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ರಾಜಭವನದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನವಾಗಿ ನೇಮಕವಾಗಿರುವ ಗೌರವಾನ್ವಿತ
ರಾಜ್ಯ ಮಾಹಿತಿ ಆಯುಕ್ತರುಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
Thawar Chand Gehlot ಬೆಂಗಳೂರು ಪೀಠಕ್ಕೆ ನೂತನವಾಗಿ ನೇಮಕವಾಗಿರುವ ರಾಜ್ಯ ಮಾಹಿತಿ ಅಯುಕ್ತರುಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ದೇವರ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರೆ, ಕಲಬುರಗಿ ಪೀಠಕ್ಕೆ ನೇಮಕವಾಗಿರುವ ಬಿ. ವೆಂಕಟ್ ಸಿಂಗ್ ಅವರು ದೇವರು ಮತ್ತು ಸಂವಿಧಾನದ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಅಶಿತ್ ಮೋಹನ್ ಪ್ರಸಾದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನಿಶ್, ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರುಗಳು ಹಾಗೂ ಮಾಹಿತಿ ಆಯೋಗದ ನಿವೃತ್ತ ಮಾಹಿತಿ ಆಯುಕ್ತರು ಸೇರಿದಂತೆ ಇತರೆ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Shimoga News ಶಿವಮೊಗ್ಗದ ಸಾಂಸ್ಕೃತಿಕ ಸೇವಾಕ್ಷೇತ್ರದ ಮಹಿಳೆ ಶಾಂತಾಶೆಟ್ಟಿಗೆ ಕದಂಬ ಕಲಾರಾಧಕ ಪ್ರಶಸ್ತಿ
Shimoga News ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಗುರುತಿಸಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಜಿಲ್ಲಾಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಅವರಿಗೆ ಕದಂಬ ಕಲಾರಾಧಕ ಪ್ರಶಸ್ತಿ ಲಭಿಸಿದೆ.
ಕದಂಬ ಕಲಾ ಸಾಂಸ್ಕೃತಿಕ ಪರಿಷತ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಉತ್ತರ ಕನ್ನಡ ಜಿಲ್ಲಾ ಸಹಭಾಗಿತ್ವದಲ್ಲಿ ಶಿರಸಿಯಲ್ಲಿ ಆಯೋಜಿಸಿದ್ದ ಕಾವೆಂಶ್ರೀ ಕಾವ್ಯಯಾನ ಭಾವಗಾನ 1, ಶತಕಂಠ ಗಾಯನ ಮತ್ತು ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕದಂಬ ಕಲಾರಾಧಕ 2025 ರಾಜ್ಯಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Shimoga News ಕದಂಬ ರತ್ನಾಕರರ ಹೊನ್ನುಡಿ ಕವನ ಸಂಕಲನ ಬಿಡುಗಡೆಯಾಯಿತು. ಕದಂಬ ಕಲಾರಾಧಕ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕದಂಬ ರತ್ನಾಕರ, ಬಿ.ಎನ್.ವಾಸರೆ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಶಾಂತಾ ಶೆಟ್ಟಿ ಅವರ ಸಾಂಸ್ಕೃತಿಕ ಸೇವೆಯನ್ನ ಪರಿಗಣಿಸಿ ಕದಂಬ ಕಲಾರಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ಡಾ. ಕಾವೆಂಶ್ರೀ ಗೀತೆಗಳು ಶತಕಂಠದನಿಯಲ್ಲಿ ಝೇಂಕರಿಸಿತು. ಬೇರೆ ಬೇರೆ ಜಿಲ್ಲೆಯಿಂದ ಬಂದಿದ್ದ ಗಾಯಕರು ಹಾಡಿ ಮೋಡಿ ಮಾಡಿದರು. ವೇದಿಕೆಯಲ್ಲಿ ಶಿಕ್ಷಣ ತಜ್ಞ ಕೆ.ಎನ್.ಹೊಸ್ಮನಿ, ಡಾ. ವೆಂಕಟೇಶ ನಾಯ್ಕ, ಭೀಮಾಶಂಕರ್ ಕುಲಕರ್ಣಿ, ದಿವ್ಯಾ ಶೇಟ್ ಕದಂಬ ಹಾಗೂ ಜ್ಯೋತಿ ರತ್ನಾಕರ ಮುಂತಾದವರಿದ್ದರು.
Himalayan Rider ಹಿಮಾಲಯದತ್ತ ಬೈಕ್ ಪ್ರಯಾಣ ವಿಶೇಷ ಅನುಭವ ನೀಡಿದೆ- ನಿತಿನ್ ಯಾದವ್
Himalayan Rider ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಪ್ರದೇಶದವರೆಗೂ 2,200 ಕಿ.ಮೀ. ದೂರದ 18 ದಿನದ ಸಾಹಸ ಬೈಕ್ಯಾತ್ರೆಯನ್ನು ಶಿವಮೊಗ್ಗ ನಗರದ ರೋಟರಿ ರಿವರ್ ಸೈಡ್ ಶಿವಮೊಗ್ಗ ಕ್ಲಬ್ ಕಾರ್ಯದರ್ಶಿ, ಫೆಲೋಶಿಪ್ ಬೈಕ್ ರೈಡ್ ಅಧ್ಯಕ್ಷ ನಿತಿನ್ ಯಾದವ್ ಹಾಗೂ ಇನ್ನರ್ವ್ಹೀಲ್ ಸದಸ್ಯೆ ಅಂಬಿಕಾ ನಿತಿನ್ ಯಾದವ್ ಯಶಸ್ವಿಯಾಗಿ ಪೂರೈಸಿದ್ದಾರೆ.
2200 ಕಿ.ಮೀ. ದೀರ್ಘದ ಹಾದಿ ಲಡಾಕ್, ಕಾಶ್ಮೀರ ಹಾಗೂ ಜಗತ್ತಿನ ಅತ್ಯಂತ ಎತ್ತರದ ವಾಹನ ದಾರಿ “ಉಮ್ಲಿಂಗ್ ಲಾ ಪಾಸ್” (19,024 ಅಡಿ) ತಲುಪಿದೆ. ಈ ಮಾರ್ಗದಲ್ಲಿ ಮನಾಲಿ, ಬಾರ್ ಲಚ್ ಲಾ ಪಾಸ್, ಲೇಹ್, ನುಬ್ರಾ ವ್ಯಾಲಿ, ಪಾಂಗೊಂಗ್ ಲೇಕ್, ಹನ್ಲೆ ಅಟಲ್ ಟನಲ್, ರೋಟಂಗ್ ಪಾಸ್, ಕಾರ್ಗಿಲ್ ಯುದ್ಧ ಸ್ಮಾರಕ, ಪಹಲ್ಗಾಮ್, ಗುಲ್ಮಾರ್ಗ, ಶ್ರೀನಗರ ಎಂಬ ಹಿಮಾಲಯದ ಪ್ರೇರಣಾದಾಯಕ ನಿಲ್ದಾಣಗಳು ಸೇರಿವೆ.
Himalayan Rider ನಿತಿನ್ ಮತ್ತು ಅಂಬಿಕಾ ದಂಪತಿ ರೋಟರಿ ಕ್ಲಬ್ ಆಫ್ ಎಕೋ ಪ್ರಿಸರ್ವೇಶನ್ ಕಾಶ್ಮೀರ ಜತೆ ( ಆರ್ಐಡಿ 3070) ಜೊತೆ ನಡೆದ ಫ್ಲಾಗ್ ವಿನಿಮಯವು ಈ ಯಾತ್ರೆಯ ಮಹತ್ವ ಹೆಚ್ಚಿಸಿತು.
ರೋಟರಿ ರಿವರ್ ಸೈಡ್ ಶಿವಮೊಗ್ಗ ಕ್ಲಬ್ ಕಾರ್ಯದರ್ಶಿ ನಿತಿನ್ ಯಾದವ್ ಮಾತನಾಡಿ, ಹಿಮಾಲಯದ ಪ್ರಯಾಣ ವಿಶೇಷ ಅನುಭವ ನೀಡಿದ್ದು, ಪ್ರಯಾಣ ಅತ್ಯಂತ ಸಂತಸದಾಯಕವಾಗಿತ್ತು. ಈ ಸಾಹಸದಲ್ಲಿ ಪ್ರತಿಯೊಂದು ಕ್ಷಣವೂ ಬದುಕಿನ ಪಾಠವಾಗಿತ್ತು ಸಹನೆ, ಸಹಕಾರ, ಧೈರ್ಯ ಮತ್ತು ಬಾಂಧವ್ಯದ ಸಂಯೋಜನೆಯಾಗಿತ್ತು ಎಂದು ತಿಳಿಸಿದರು. ರೋಟರಿ ಕ್ಲಬ್ ಆಫ್ ಎಕೋ ಪ್ರಿಸರ್ವೇಶನ್ ಕಾಶ್ಮೀರದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
Quiz Competition ಜಿಲ್ಲಾಮಟ್ಟದ “ಕ್ವಿಜ್”ಕಾರ್ತೀಕ್ & ದೀಕ್ಷಿತ್ ದ್ವಿತೀಯ ಸ್ಥಾನ
Quiz Competition ಕರ್ನಾಟಕ ಅರಣ್ಯ ಇಲಾಖೆ, ಶಿವಮೊಗ್ಗ ವನ್ಯಜೀವಿ ವಿಭಾಗ ಮತ್ತು ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಶರಾವತಿನಗರ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ, ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಸುಮಾರು 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 6 ಸುತ್ತುಗಳ ಮುಖಾಂತರ ಸೆಮಿಪೈನಲ್ ಗೆ 100 ತಂಡಗಳು ಆಯ್ಕೆಯಾಗಿದ್ದು, ಆದರಲ್ಲಿ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ದೀಕ್ಷಿತ್ ಎಂ ಎನ್.ಮತ್ತು ಕಾರ್ತಿಕ್ ಪಿ. ಈ ಪ್ರತಿಭಾನ್ವಿತರು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೂ ಉತ್ತಮ ಚಾಣಾಕ್ಷತೆ, ಬುದ್ದಿವಂತಿಕೆಯಿಂದ ಭಾಗವಹಿಸಿ, ದ್ವಿತೀಯ ಸ್ಥಾನ,15,000 ಸಾವಿರ ನಗದು ಬಹುಮಾನ,ಪ್ರಶಸ್ತಿ Quiz Competition ಪತ್ರ ಮತ್ತು ಅತ್ಯಾಕರ್ಷಕ ಟ್ರೋಪಿಯನ್ನು ತಮ್ಮದಾಗಿಸಿ ಕೊಂಡಿರುತ್ತಾರೆ. ಹಾಗೂ ಸಾನ್ವಿ ವಿ. ಭಾರದ್ವಾಜ್ ಮತ್ತು ತಿಷಾರಾಜ್ ಪುರೋಹಿತ್ ಇವರು 5ನೇ ಸ್ಥಾನ ಪಡೆಯುವುದರ ಮೂಲಕ ಸಂಸ್ಥೆಗೂ ಹಾಗೂ ಜಿಲ್ಲೆಗೂ ಕೀರ್ತಿ ತಂದುಕೊಟ್ಟಿರುತ್ತಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮುಂದಿನ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು,ಪೂಜ್ಯ ಶ್ರೀಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ದಿವ್ಯ ಕರಣಮ್ ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
Sankara Eye Hospital ಸೈಲ್- ವಿಐಎಸ್ಎಲ್ ಘಟಕದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣೆ
Sankara Eye Hospital ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಮತ್ತು ಗಿISಐ ಆಸ್ಪತ್ರೆಯರ ಸಹಯೋಗದೊಂದಿಗೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ದಿನಾಂಕ ೧೫ನೇ ಅಕ್ಟೋಬರ್, ೨೦೨೫ ರಂದು ಆಯೋಜಿಸಲಾಗಿತ್ತು ೧೪೩ ಕ್ಕೂ ಹೆಚ್ಚು ಸಂಖ್ಯೆಯ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಈ ಶಿಬಿರದ ಸೌಲಭ್ಯವನ್ನು ಪಡೆದರು. ಈ ಶಿಬಿರದಲ್ಲಿ ರಕ್ತದೊತ್ತಡ (ಬಿಪಿ) ತಪಾಸಣೆ, ಉಖಃS (ಮಧುಮೇಹ) ತಪಾಸಣೆ, ಟಿಟ್ಮಸ್ ಕಣ್ಣಿನ ತಪಾಸಣೆ (ಸಮೀಪ ದೃಷ್ಠಿ, ದೂರ ದೃಷ್ಠಿ, ಬಣ್ಣ ದೃಷ್ಠಿ, ಬೈನಾಕುಲರ್ ಮೌಲ್ಯಮಾಪನ ಮತ್ತು ಟ್ರಯಲ್ ಸೆಟ್/ ವಕ್ರೀಭವನ ತಪಾಸಣೆ ಸೇರಿದಂತೆ) ಅನೇಕ ತಪಾಸಣೆಗಳನ್ನು ಮಾಡಲಾಯಿತು. ಡಾ|| ಮೇಘನ, ನೇತ್ರ ತಜ್ಞರು, ಶಂಕರ ಕಣ್ಣಿನ ಆಸ್ಪತ್ರೆ ತಜ್ಞ ವೈಧ್ಯೆ ಸಲಹೆ ನೀಡಿದರು.
Sankara Eye Hospital ಈ ಶಿಬಿರದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಸಹಾಯಕರಾದ ಶ್ರೀ ಹರ್ಷ, ಶ್ರೀ ಸೋಮೇಶ್ ಮತ್ತು ಚೇತನ, ವಿಐಎಸ್ಎಲ್ನಿಂದ ಶ್ರಿ ಅಲೆನ್ ಪಿಂಟೋ, ಶ್ರೀಮತಿ ಪುಷ್ಪಲತಾ, ಶ್ರೀ ಮೋಹನ್, ಶ್ರೀ ನವೀನ್, ಶ್ರೀ ಉಮೇಶ್, ಶ್ರೀ ರಮೇಶ್ ಮತ್ತು ಶ್ರೀ ಎಮ್.ಎಲ್. ಯೋಗೀಶ್, ಕಿರಿಯ ಅಧಿಕಾರಿ (ಮಾನವ ಸಂಪನ್ಮೂಲ) ಸಹಕಾರ ನೀಡಿದರು. ವಿಐಎಸ್ಎಲ್ನ ಮಾನವ ಸಂಪನ್ಮೂಲ ಇಲಾಖೆ, ಆಸ್ಪತ್ರೆ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಈ ಶಿಬಿರವನ್ನು ಸಂಯೋಜಿಸಿದ್ದವು. ಈ ಕಾರ್ಯಕ್ರಮದ ಆಯೋಜನೆಯ ಮೇಲುಸ್ತುವಾರಿಯನ್ನು ವಿಐಎಸ್ ಎಲ್ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿ ಡಾ|| ಸುಜೀತ್ ಕುಮಾರ್ ಮತ್ತು ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಹೆಚ್. ಆರ್ ಮತ್ತು ಸಾರ್ವಜನಿಕ ಸಂಪರ್ಕ) ವಹಿಸಿದ್ದರು.
