Thursday, September 17, 2026
Thursday, September 17, 2026

D S Arun ಶಿವಮೊಗ್ಗ ಹಾಸನ& ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ವಿವಿಧ ವಯೋಮಾನ ವಿಭಾಗಗಳಲ್ಲಿ ಕೆಎಸ್ಸಿಎ ವಲಯ ಆಯ್ಕೆ ಪ್ರಕ್ರಿಯೆ- ಡಿ.ಎಸ್.ಅರುಣ್

Date:

D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ.), ಶಿವಮೊಗ್ಗ ವಲಯದ ವತಿಯಿಂದ 2026–27ನೇ ಸಾಲಿನ ಅಕಾಡೆಮಿ ಆಯ್ಕೆ ಪ್ರಕ್ರಿಯೆಗಳು (ಪುರುಷರು ಹಾಗೂ ಮಹಿಳೆಯರಿಗೆ) ಆಯೋಜಿಸಲಾಗುತ್ತಿದೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ.
ಈ ಆಯ್ಕೆ ಪ್ರಕ್ರಿಯೆಗಳು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿವಿಧ ವಯೋಮಾನದ ವಿಭಾಗಗಳಲ್ಲಿ ನಡೆಯಲಿದ್ದು, ದಿನಾಂಕ 20 ಮಾರ್ಚ್ 2026 ರಂದು ಪ್ರಕಟಿಸಿದ ಅಧಿಕೃತ ವೇಳಾಪಟ್ಟಿಯಂತೆ ಆಯೋಜಿಸಲಾಗುತ್ತಿದೆ.
ಈ ಪ್ರಕ್ರಿಯೆಗಳ ಮೂಲಕ ಅಂಡರ್-14, ಅಂಡರ್-16, ಅಂಡರ್-19 (ಬಾಲಕರು) ಹಾಗೂ ಅಂಡರ್-15, ಅಂಡರ್-19 (ಮಹಿಳೆಯರು) ವಿಭಾಗಗಳಲ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ, ಮುಂದಿನ ಹಂತದಲ್ಲಿ ಕೆ.ಎಸ್.ಸಿ.ಎ. ಅಕಾಡೆಮಿ ತರಬೇತಿ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ, ಕೆ.ಎಸ್.ಸಿ.ಎ. ಶಿವಮೊಗ್ಗ ವಲಯದ ಕನ್ವೀನರ್ ಶ್ರೀ ಡಿ. ಎಸ್. ಅರುಣ್ ಅವರು ಸ್ಥಳದಲ್ಲಿ ಹಾಜರಿದ್ದು, ಆಯ್ಕೆ ಪ್ರಕ್ರಿಯೆಯು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಹಾಗೂ ಸುಗಮವಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸುತ್ತಿದಾರೆ.
ಈ ಮಹತ್ವದ ಕ್ರೀಡಾ ಚಟುವಟಿಕೆಯನ್ನು ನಿಮ್ಮ ಪ್ರತಿಷ್ಠಿತ ಮಾಧ್ಯಮಗಳ ಮೂಲಕ ಪ್ರಸಾರ / ಪ್ರಕಟಣೆ ಮಾಡುವಂತೆ ವಿನಂತಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕೆ.ಎಸ್.ಸಿ.ಎ. ಶಿವಮೊಗ್ಗ ವಲಯ: ಕೆ.ಎಸ್.ಸಿ.ಎ. ನವಲೆ ಕ್ರೀಡಾಂಗಣ, ಶಿವಮೊಗ್ಗ
ಇಮೇಲ್: shivamogga@ksca.co.in
ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ,
ಡಿ. ಎಸ್. ಅರುಣ್
ವಲಯ ಕನ್ವೀನರ್
KSCA ಶಿವಮೊಗ್ಗ ವಲಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...