Friday, April 10, 2026
Friday, April 10, 2026
Home Blog Page 1270

World record in T-20: ಚಾರ್ಲ್ಸ್ 39 ಎಸೆತಗಳಲ್ಲಿ ಶತಕವನ್ನು ಕಳೆದರು: ಆಫ್ರಿಕಾಕ್ಕಾಗಿ T-20 ಅನ್ವೇಷಣೆಯಲ್ಲಿ ವಿಶ್ವ ದಾಖಲೆ!

0

World record in T-20: ಕ್ವಿಂಟನ್ ಡಿ ಕಾಕ್ ಮತ್ತು ರೆಜಾ ಹೆಂಡ್ರಿಕ್ಸ್ ನಡುವಿನ ಆರಂಭಿಕ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಆರು ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು, T20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ವಿಶ್ವ ದಾಖಲೆಯನ್ನು ನಿರ್ಮಿಸಿತು.

ಸೆಂಚುರಿಯನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲ ಸ್ಥಾನ ಪಡೆದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 18.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚೇಸಿಂಗ್ ದಾಖಲೆ ನಿರ್ಮಿಸಿದೆ. ಆದ್ದರಿಂದ, 500 ಅಂಕಗಳು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯವಾಗಿ ಮತ್ತೊಂದು ದಾಖಲೆಯನ್ನು ಸ್ಥಾಪಿಸಲಾಯಿತು.

ಕ್ವಿಂಟನ್ ಡಿ ಕಾಕ್ ಮತ್ತು ರೆಜಾ ಹೆಂಡ್ರಿಕ್ಸ್ ಮೊದಲ ವಿಕೆಟ್‌ಗೆ 152 ರನ್‌ಗಳ ಜೊತೆಯಾಟದೊಂದಿಗೆ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಕೋಚ್ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 100 ರನ್ ಗಳಿಸಿದರೆ, ಹೆಂಡ್ರಿಕ್ಸ್ 28 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 68 ರನ್ ಗಳಿಸಿದರು. ಕೊನೆಯಲ್ಲಿ ನಾಯಕ ಐದೀನ್ ಮಾಲ್ಕಮ್ 21 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ ಅಜೇಯ 38 ರನ್ ಸಿಡಿಸಿ ದಾಖಲೆ ನಿರ್ಮಿಸಿದರು.

ಜಾನ್ಸನ್ ಅವರ ಶತಕ ವ್ಯರ್ಥವಾಯಿತು

World record in T-20 ಇದಕ್ಕೂ ಮುನ್ನ ವೆಸ್ಟ್ ಇಂಡಿಯಾ ಬ್ಯಾಟ್ಸ್‌ಮನ್ ಜಾನ್ಸನ್-ಚಾರ್ಲ್ಸ್ ಅಬ್ಬರದ ಶತಕ ಸಿಡಿಸಿ ಬೃಹತ್ ಮೊತ್ತದತ್ತ ಮುನ್ನಡೆಸಿದ್ದರು. ಚಾರ್ಲ್ಸ್ 39 ಸ್ಥಾನಗಳಲ್ಲಿ ಶತಕ ಪೂರೈಸಿದರು. ಅವರು 46 ಎಸೆತಗಳಲ್ಲಿ ಹತ್ತು ಬೌಂಡರಿ ಮತ್ತು ಹನ್ನೊಂದು ಸಿಕ್ಸರ್ ಸೇರಿದಂತೆ 118 ಕ್ಯಾರಿಗಳನ್ನು ಹೊಡೆದರು.

ಚಾರ್ಲ್ಸ್ ಮತ್ತು ಕೈಲಿ ಮೈಯರ್ಸ್ ಎರಡನೇ ವಿಕೆಟ್‌ಗೆ 135 ರನ್‌ಗಳ ಜೊತೆಯಾಟ ನಡೆಸಿದರು. ಮೈಯರ್ಸ್ 27 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 51 ರನ್ ಗಳಿಸಿದರು. ರೊಮಾರಿಯೊ ಶೆಫರ್ಡ್ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 41 ರನ್ ಗಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮುಂಬೈ ಇಂಡಿಯನ್ಸ್ 1 ನೇ ಮಹಿಳಾ ಪ್ರೀಮಿಯರ್ ಲೀಗ್ ಚಾಂಪಿಯನ್!

0

ಪಂದ್ಯಾವಳಿಯ ಸಮಯದಲ್ಲಿ ಅತ್ಯುತ್ತಮ ಪ್ರದರ್ಶನದ ನಂತರ, ಮುಂಬೈ ಇಂಡಿಯನ್ಸ್ ಏಳು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ ಮಹಿಳಾ ಪ್ರೀಮಿಯರ್ ಲೀಗ್ T-20 ಕ್ರಿಕೆಟ್ ಟೂರ್ನಮೆಂಟ್‌ನ ಉದ್ಘಾಟನಾ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಮುನ್ನಡೆ ಸಾಧಿಸಿದ ಡೆರ್ರಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 131 ರನ್ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

ಮುಂಬೈ ಇಂಡಿಯನ್ಸ್ 23 ರನ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತವನ್ನು ಅನುಭವಿಸಿತು, ಆದರೆ ನಟ್ಸೆವರ್ ಬ್ಲೌಂಟ್ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ 72 ರನ್‌ಗಳ ಎರಡು ವಿಕೆಟ್ ಪಾಲುದಾರಿಕೆಯನ್ನು ಅವಲಂಬಿಸಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಬ್ರಾಂಡ್ 55 ಎಸೆತಗಳಲ್ಲಿ 60 ರನ್ ಗಳಿಸಿ ಅಜೇಯರಾಗಿ 7 ವಿಜೇತರೊಂದಿಗೆ ಪಂದ್ಯವನ್ನು ಗೆದ್ದರು. ಮತ್ತೊಂದೆಡೆ ಹರ್ಮನ್ ಪ್ಲೇಟ್‌ಕವರ್ 5 ಎಸೆತಗಳು ಸೇರಿದಂತೆ 39 ಎಸೆತಗಳಲ್ಲಿ 37 ಎಸೆತಗಳನ್ನು ಗಳಿಸಿದರು. ನಂತರ ಆಮ್ರಾ ಖೇರ್ 8 ಎಸೆತಗಳಲ್ಲಿ ಎರಡು ಬೌಂಡರಿ ಸೇರಿದಂತೆ ಅಜೇಯ 14 ರನ್ ಗಳಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.

ಈ ಹಿಂದೆ, ಇಸ್ಸಿ ವಾಂಗ್ ಮತ್ತು ಹೇಲ್ ಮ್ಯಾಥ್ಯೂಸ್ ಮಾರಣಾಂತಿಕ ದೋಷಗಳೊಂದಿಗೆ ಹೋರಾಡಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಮೊತ್ತವನ್ನು ನೋಂದಾಯಿಸಲು ವಿಫಲವಾಗಿತ್ತು.

ರಾಧಾ ಯಾದವ್ 12 ಎಸೆತಗಳಲ್ಲಿ ಎರಡು 4 ಮತ್ತು 2 6 ಸೇರಿದಂತೆ 27 ರನ್ ಗಳಿಸಿದರು. ಶಿಖಾ ಪಾಂಡೆ 17 ಎಸೆತಗಳಲ್ಲಿ ಮೂರು 4 ಮತ್ತು 6 ಸೇರಿದಂತೆ ಅಜೇಯ 27 ರನ್ ಗಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Gandhi Grama Puraskara ರಾಜ್ಯ ಸರ್ಕಾರದಿಂದ ಹರಿಹರದಹಳ್ಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

0

Gandhi Grama Puraskara ಚಿಕ್ಕಮಗಳೂರು,ತಾಲ್ಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿಗೆ 2021-22ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ  ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಪ್ರಶಸ್ತಿ ನೀಡಿ ಗೌರವಿಸಿದೆ.

Gandhi Grama Puraskara ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಜೆ.ಎನ್.ಮಂಜೇಗೌಡ, ಉಪಾಧ್ಯಕ್ಷೆ ಶಾರದಾ ಮಾಸ್ತೇಗೌಡ, ಸದಸ್ಯ ರಾದ ಸ್ವಪ್ನ ಚಂದ್ರಶೇಖರ್, ಲಲಿತಾ ಶಿವಾನಂದ್, ಕವಿತಾ ಶಿವರಾಮ್, ಜಯಂತಿ ನಾಗರಾಜ್, ಪಟ್ಟಣ ಪಂಚಾ ಯಿತಿ ಅಭಿವೃದ್ದಿ ಅಧಿಕಾರಿ ಪಿ. ಲಕ್ಷ್ಮಣ್, ಕುರುಬರಹಳ್ಳಿ ಗ್ರಾಮದ ಮಾಸ್ತೇಗೌಡ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Ayushmati Clinic ಮಾರ್ಚ್ 27ರಂದು ಆಯುಷ್ಮತಿ ಕ್ಲಿನಿಕ್ ಆರಂಭ

0

Ayushmati Clinic ರಾಜ್ಯದಲ್ಲಿ ಒಟ್ಟು ರೂ.95 ಆಯುಷ್ಮತಿ ಕ್ಲಿನಿಕ್ ಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಮಾರ್ಚ್ 27ರಂದು ವರ್ಚುಯಲ್ ಮೂಲಕ ಬೆಂಗಳೂರಿನಿಂದ ಉದ್ಘಾಟನೆ ಮಾಡಲಿದ್ದಾರೆ. ಸ್ವಸ್ಥ ಮಹಿಳೆಯರು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಪ್ರತಿ ದಿನ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.

ಶಿವಮೊಗ್ಗದಲ್ಲಿ ಪ್ರಸೂತಿ ಆರೋಗ್ಯ ಕೇಂದ್ರ ತುಂಗಾ ನಗರದಲ್ಲಿ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಏರ್ಪಡಿಸಲಾಗಿದೆ.

Ayushmati Clinic ಮಾರ್ಚ್ 27ರಂದು ಬೆಳಿಗ್ಗೆ 11.30 ಗಂಟೆಗೆ ಶಿವಮೊಗ್ಗ ಜಿಲ್ಲೆಯ 4 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿವಮೊಗ್ಗದಲ್ಲಿ ತುಂಗಾ ನಗರ, ಸೀಗೆಹಟ್ಟಿ, ಬೊಮ್ಮನಕಟ್ಟೆ ಮತ್ತು ಭದ್ರಾವತಿ ತಾಲೂಕಿನ ಅಶ್ವತ ನಗರಗಳಲ್ಲಿ ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಗಾಗಿ ಆಯುಷ್ಮತಿ ಕ್ಲಿನಿಕ್ ಆರಂಭವಾಗುತ್ತಿದೆ. ಮಹಿಳೆಯರು ಈ ಆಯುಷ್ಮತಿ ಕ್ಲಿನಿಕ್ ಗೆ ಭೇಟಿ ನೀಡಿ ತಜ್ಞ ವೈದ್ಯರ ಸೇವೆ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Rahul Gandhi Latest News ಅನರ್ಹತೆ ತೀರ್ಪು ಹೊರಬಿದ್ದ ನಂತರ ಪ್ರಧಾನಿ ಮತ್ತು ಬಿಜೆಪಿ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ

0

Rahul Gandhi Latest News ನನ್ನನ್ನು ಸಂಸತ್ತಿನಿಂದ ಶಾಶ್ವತವಾಗಿ ಅನರ್ಹಗೊಳಿಸಿದರೂ ಸುಮ್ಮನಿರುವುದಿಲ್ಲ. ಸಂಸತ್ ಸದಸ್ಯನಾಗಿ ಇರಲಿ, ಇರದಿರಲಿ. ನಾನು ಮಾಡುವ ಕೆಲಸ ಮಾಡಿಯೇ ತೀರುತ್ತೇನೆ. ಉದ್ಯಮಿ ಗೌತಮ್ ಅದಾನಿಯವರನ್ನು ರಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುತ್ತಲೇ ಇರುತ್ತೇನೆ.

ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶಕ್ಕಾಗಿ ಹೋರಾಡುತ್ತಲೇ ಇರುತ್ತೇನೆ. ವಿದೇಶದಲ್ಲಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದ ನಾನು ಕ್ಷಮೆ ಕೇಳಲು ಬಯಸುವುದಿಲ್ಲ. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.

ಲೋಕಸಭೆಯಿಂದ ಅನರ್ಹ ಗೊಂಡ ನಂತರ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರ ಉದ್ಯಮಿ ಗೌತಮ್ ಅದಾನಿ, ಪಿ ಎಮ್ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.

Rahul Gandhi Latest News ಅದಾನಿ ನೇತೃತ್ವದ ಕಂಪನಿಗಳಲ್ಲಿ ಅನೇಕ ಶೆಲ್ ಕಂಪನಿಗಳು 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿವೆ. ಈ ಹಣ ಎಲ್ಲಿಂದ ಬಂದಿದೆ? ಈ ಬಗ್ಗೆ ಕೇಂದ್ರ ಸರ್ಕಾರ ಏಕೆ ತನಿಖೆ ಮಾಡುತ್ತಿಲ್ಲ. ಅಕ್ರಮ ಹೂಡಿಕೆಯಲ್ಲಿ ಕಾಂಗ್ರೆಸ್ ಆಡಳಿತದ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು ಜೈಲಿಗೆ ಹಾಕಲಿ. ಯಾರೇ ಅಕ್ರಮ ಮಾಡಿದರೂ ಶಿಕ್ಷೆ ನೀಡಲಿ ಎಂದು ರಾಹುಲ್ ಗಾಂಧಿ ಅವರು ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Narega Scheme ನರೇಗಾ ಕೂಲಿ ದರ ಹೆಚ್ಚಳ ಮಾಡಿ ಆದೇಶ

Narega Scheme ನರೇಗಾ ಯೋಜನೆ ಅಡಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು,ಇದರಿಂದ ಕೂಲಿ ಕಾರ್ಮಿಕರಿಗೆ ಅನುಕೂಲಕರವಾಗಿದೆ.

ಈಗ ಶಾಲೆ ಮತ್ತು ಆಸ್ಪತ್ರೆಗಳನ್ನು ಸಹ ನರೇಗಾ ಅಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಕೂಲಿ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ ತಕ್ಷಣದಿಂದಲೇ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.

Narega Scheme ಕೂಲಿ ದರದಲ್ಲಿ ಏಳೂರು ರೂಪಾಯಿ ಹೆಚ್ಚಳ ಮಾಡಲಾಗಿದೆ ಇದರಿಂದ 309 ರೂಪಾಯಿ ಇದ್ದ ಕೂಲಿ ದರವನ್ನು ಈಗ 316 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಕೂಲಿ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಈಗ ಕರ್ನಾಟಕದಲ್ಲಿ ಈ ಕೂಲಿ ದರವನ್ನು ಹೆಚ್ಚಳ ಮಾಡಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shri Guru Shivayogi Bakkeswara Mahaswami ಕಣ್ಮನ ಸೆಳೆಯುವ ಶತಮಾನ‌ ಕಂಡಿರುವ ದಾವಣಗೆರೆ ಶ್ರೀಬಕ್ಕೇಶ್ವರಸ್ವಾಮಿ ಕಲಾತ್ಮಕ ತೇರುಗಡ್ಡೆ

0

Shri Guru Shivayogi Bakkeswara Mahaswami ಶತಮಾನದ ಸಂಭ್ರಮದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇ ಶ್ವರ ಮಹಾ ರಥೋತ್ಸವ” -ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಮಹಾ ರಥೋತ್ಸವಕ್ಕೆ ನೂರು ವರ್ಷವಾದರೆ ರಥಕ್ಕೆ ನೂರಾರು ವರ್ಷ- ನೂರು ವರ್ಷಗಳ ಅವಧಿ ಎಂದರೆ ಇದಕ್ಕೆ ಶತಕ, ಶತಮಾನ ಎಂದೆಲ್ಲ ವಿಶೇಷವಾಗಿ ಬಣ್ಣಿಸಲಾಗುತ್ತದೆ. ಚೌಕೀ ಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಮಹಾ ರಥೋತ್ಸವಕ್ಕೆ ಈ ಬಾರಿ ಒಂದು ನೂರು ವರ್ಷ ಆದರೆ ಈ ರಥಕ್ಕೆ ನೂರಾರು ವರ್ಷಗಳ ಇತಿಹಾಸ ಇರುವುದು ಒಂದು ಸ್ವಾರಸ್ಯ. -ಬಕ್ಕೇಶ್ವರರ ಸಂಕ್ಷಿಪ್ತ ಇತಿಹಾಸ- ದೇವತೆಗಳ ಅವತಾರಗಳು ವಿಶ್ವ ವ್ಯಾಪ್ತಿಯಲ್ಲಿ ಆಗುತ್ತದೆಯಾದರೂ ದೈವಾಂಶ ಸಂಭೂತರ

ಅವತಾರಗಳು ಪ್ರಾದೇಶಿಕವಾಗಿ ಅಲ್ಲಲ್ಲಿ ಆದ ನಿದರ್ಶನಗಳು ಇವೆ. ಶ್ರೀ ಬಕ್ಕೇಶ್ವರರ ಜನ್ಮವು ದಾವಣಗೆರೆ ಸಮೀಪದ ಗುಮ್ಮನೂರಿನ ಹಿರೇಮಠದ ಬಸವಲಿಂಗಯ್ಯ ಪಾರ್ವತಮ್ಮನವರ ಗರ್ಭಾಂಬುದಿಯಲ್ಲಿ ಪಂಚಗಣಾಧೀಶರ ಕೃಪೆ ಹಾಗೂ ಹೆಬ್ಬಾಳದ ಶ್ರೀ ರುದ್ರೇಶ್ವರರ ಆಶೀರ್ವಾದದಿಂದ, ಉಳವಿಯ ಶ್ರೀ ರೇಚಿ ತಂದೆಯವರ ಕಾರುಣ್ಯದೊಂದಿಗೆ 1770ರಲ್ಲಿ ಆಗುವಾಗ ಮಗುವಿನ ಬಲಗಿವಿಯ ಮೇಲೆ ‘ಬೊಕ್ಕೆ’ಯೊಂದು ಅಂದರೆ ‘ಬಕ್ಕೆ’ಯೊಂದು ಇದ್ದದ್ದರಿಂದ ‘ಬಕ್ಕೇಶ’ ಎಂದು ನಾಮಕರಣ ಮಾಡಲಾಯಿತು. ಗುಮ್ಮನೂರಿನಲ್ಲಿ ಶ್ರೀ ಬಕ್ಕೇಶ್ವರರ ಗದ್ದುಗೆ ರೂಪದ ಸ್ಮಾರಕವಿದ್ದು ಅವರ ಪೂರ್ವಾ ಶ್ರಮದ ವಂಶಸ್ಥರು ಅಲ್ಲಿದ್ದಾರೆ. ಆ ವಂಶದ ರುದ್ರಯ್ಯ ರುದ್ರಮ್ಮನವರ ಪುತ್ರ ರುದ್ರೇಶ್ ರವರು ನಿವೃತ್ತ ಶಿಕ್ಷಕರಾಗಿದ್ದು ದೀಕ್ಷಿತ್ ರಸ್ತೆಯ ನಮ್ಮ ಮನೆಯ ಎದುರಿನಲ್ಲೇ ವಾಸವಾಗಿದ್ದಾರೆ. ಗುಮ್ಮನೂರಿನ ಆ ಮನೆಯಲ್ಲಿ ಒಂದಷ್ಟು ಗ್ರಂಥಗಳ ಕಟ್ಟು ಇತ್ತೆಂದೂ ಬಹಳ ಹಿಂದೆಯೇ ಕಣವಿ ಬಸ್ಸಜ್ಜರೆಂಬುವವರು ಅಧ್ಯಯನಕ್ಕಾಗಿ ಅದನ್ನು ತೆಗೆದುಕೊಂಡು ಹೋದರೆಂದು ಹೇಳುವರು. ಬಾಲಕ ಬಕ್ಕೇಶಗೆ ಸುಜ್ಞಾನಿ ಜಂಗಮ ಶಿವಾಚಾರ್ಯರಿಂದ ಶಿವ ದೀಕ್ಷೆ ದೊರೆತು ಮುಂದೆ ಜಂಗಮಾವಸ್ಥೆಯಲ್ಲಿ ದೇಶ ಸಂಚಾರ ಹೊರಟು ಕೊಟ್ಟೂರು, ಸೊಂಡೂರು, ಉಜ್ಜನಿ, ಹೇಮಕೂಟ, ಗೋಕರ್ಣ, ಕಂಚಿ, ಕಾಳಹಸ್ತಿ, ಶ್ರೀಶೈಲ,ವಾರಣಾಸಿ( ಕಾಶಿ) ಮುಂತಾದ ಕ್ಷೇತ್ರಗಳ ಸಂದರ್ಶನ ಮಾಡಿ ಹರಿಹರ ಸಮೀಪದ ಐರಣಿಗೆ ಬಂದು ಅಲ್ಲಿಂದ ತುಂಗಭದ್ರಾ ತೀರದ ‘ಶಂಕರನಾರಾಯಣ’ ಕ್ಷೇತ್ರ ಅಂದರೆ ಈಗಿನ ಪರಿಸರಕ್ಕೆ ಚಿತ್ತೈಸಿ ಅಲ್ಲಿನ ಸದ್ಭಕ್ತ ಸತ್ಯಪ್ಪ (ಸತ್ಯನಾರಾಯಣ) ಶೆಟ್ಟರಲ್ಲಿ ಕೆಲ ಕಾಲ ಇದ್ದು ಆಶೀರ್ವದಿಸಿ ನಂತರ ದಾವಣಗೆರೆಗೆ ಬಂದು ಹಳೆ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಮೀಪದಲ್ಲಿ ಮಠ ಮಾಡಿಕೊಂಡು ಭಕ್ತ ಜನರ, ಪುರಜನರ, ಪರಿಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಚಿತ್ರದುರ್ಗದ ಶ್ರೀಮನ್ ನಿರಂಜನ ಜಗದ್ಗುರು ರಾಚವಟ್ಟಿ ಮುರುಘರಾಜೇಂದ್ರ ಸ್ವಾಮಿಗಳವರ ಲಿಂಗಾಂಗ ಸಾಮರಸ್ಯ ಸುಜ್ಞಾನ ಹೊಂದಿ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಮೇಲೂ ಆಧ್ಯಾತ್ಮಿಕ ಪ್ರಭಾವ ಬೀರಿ 1855ನೇ ಇಸ್ವಿಯ ಚೈತ್ರ ಶುದ್ಧ ಪಂಚಮಿಯಂದು ತಮ್ಮ ಇಹಲೋಕದ ಕಾರ್ಯ ಮುಗಿಸಿದಾಗ ಅವರ ಇಚ್ಛೆಯಂತೆ ಚೌಕಿಗುಂಡಿ ಅಂದರೆ ಈಗಿನ ಚೌಕಿಪೇಟೆಯಲ್ಲಿ ಕ್ರಿಯಾ ಕಟ್ಟಳೆಯಂತೆ ಗದ್ದುಗೆ ಮಾಡಲಾಯಿತು. ಈ ಸ್ಥಳದಲ್ಲಿ ದೇವಸ್ಥಾನವನ್ನು ಮಾಗನಹಳ್ಳಿ ವಂಶಸ್ಥರು ಆಗಿನ ಅನೇಕ ಗಣ್ಯರ ಸಹಾಯದಿಂದ ನಿರ್ಮಿಸಿದರು. ಗದ್ದುಗೆಯಲ್ಲಿ ಅಂತರ್ಧಾನರಾಗಿ ಈಗಲೂ ಭಕ್ತರನ್ನು ಹರಸುತ್ತಿದ್ದಾರೆ. -ಮಹಾರಥೋತ್ಸವಕ್ಕೆ ವಿಶೇಷತೆ- ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳವರ ಮಹಾರಥೋತ್ಸವವು ಪ್ರತಿ ವರ್ಷದ ಚೈತ್ರ ಶುದ್ಧ ಪಂಚಮಿಯಂದು ಪಾರಂಪರಿಕ ಭಕ್ತಿ ಶೃದ್ಧಾ ಸಂಭ್ರಮಗಳಿಂದ ನೆರವೇರುತ್ತಿದೆ.

Shri Guru Shivayogi Bakkeswara Mahaswami ಪ್ರಸ್ತುತ ಈ ಮಹಾರಥೋತ್ಸವಕ್ಕೆ ಒಂದು ನೂರು ವರ್ಷಗಳ ಸಂಭ್ರಮ. ರಥೋತ್ಸವಕ್ಕೆ ಒಂದು ನೂರು ವರ್ಷಗಳೇ ವಿನಹ ಈ ರಥವು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಂಭವವಿದೆ. ಏಕೆಂದರೆ ಪೂರ್ವದಲ್ಲಿ ಈ ರಥವು ಹರಿಹರದ ಒಂದು ದೇವಿಯ ರಥವಾಗಿತ್ತು ಎಂದು ತಿಳಿದು ಬರುತ್ತದೆ. ಕಾರಣಾಂತರಗಳಿಂದ ಅದನ್ನು ಬಳಸದೆ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಅಂದರೆ ನದಿ ಅಂಚಿನ ನೀರಿನಲ್ಲಿ ಮುಳುಗಿಸಿ ಇಡಲಾಗಿತ್ತೆಂದೂ, ಶತಮಾನಕ್ಕೂ ಹಿಂದೆ ಸುಮಾರು ಎರಡು ನೂರು ರೂಪಾಯಿಗಳ ‘ಭಕ್ತಿಧನ’ ಕೊಟ್ಟು ರಥವನ್ನು ದಾವಣಗೆರೆಗೆ ತಂದು ಶ್ರೀ ಬಕ್ಕೇಶ್ವರ ಸ್ವಾಮಿಯವರ ರಥವನ್ನಾಗಿ ಬಳಸಲಾಗುತ್ತಿದೆಯೆಂದೂ ಕೀರ್ತಿಶೇಷ ಮಾಗನಹಳ್ಳಿ ಗುರುಸಿದ್ದಪ್ಪನವರು ಹೇಳಿದ್ದು ನನಗೀಗಲೂ ನೆನಪಿದೆ. ಹೀಗಾಗಿಯೇ ಈ ರಥೋತ್ಸವಕ್ಕೆ ನೂರು ವರ್ಷಗಳಾದರೂ ರಥಕ್ಕೆ ನೂರಾರು ವರ್ಷಗಳ ಐತಿಹ್ಯವಿದೆ. ಗಾತ್ರದಲ್ಲಿ ಭಾರೀ ದೊಡ್ಡದಲ್ಲದಿದ್ದರೂ ಲಕ್ಷಣದಲ್ಲಿ ಈ ರಥವು ಅತ್ಯಂತ ಸುಂದರವಾಗಿದೆ. ಕಾರಣ ರಥದ ಪಾದ ಭಾಗವಾಗಿರುವ ತೇರು ಗಡ್ಡೆಯು ಸಾಂಪ್ರದಾಯಿಕ ರೂಪ ಲಕ್ಷಣಗಳಲ್ಲಿ ಪೂರ್ವ ಭಾಗಕ್ಕೆ ಶ್ರೀ ಮಹಾಗಣಪತಿ, ಪಶ್ಚಿಮಕ್ಕೆ ಪರಾಶಕ್ತಿರೂಪೀ ಶ್ರೀ ಲಕ್ಷ್ಮೀ, ಉತ್ತರಕ್ಕೆ ವೀಣಾಪಾಣಿ ಶ್ರೀ ಸರಸ್ವತೀ, ದಕ್ಷಿಣಕ್ಕೆ ಬಹುಶಃ ಶ್ರೀ ವೀರಭದ್ರ, ಈ ನಾಲ್ಕೂ ಮೇಲ್ಭಾಗಗಳಲ್ಲಿ ಸಪತ್ನೀಕರಾಗಿ ವಾಹನಾರೂಢರಾದ ಅಷ್ಟದಿಕ್ಪಾಲಕರು, ದಕ್ಷಿಣೋತ್ತರಗಳಲ್ಲಿ ಬೆಸೆದುಕೊಂಡಂತಿರುವ ಚತುಷ್ ಚಕ್ರಗಳು, ಪೂರ್ವೋತ್ತರಗಳಲ್ಲಿ ಗಜ ಮಂಡಿ ಸಾಲು,ಆಮ್ರತೋರಣ ಹಿಡಿದೆತ್ತಿರುವ ಬಾಹುಕಿ ಬೊಂಬೆಗಳ ಸೂಕ್ಷ್ಮಕೆತ್ತನೆಗಳು ಇದ್ದು ಪದೇ ಪದೇ ಹುರಿಮಂಜು ನಂತರದಲ್ಲಿ ಬಣ್ಣ ಹಚ್ಚುವುದರಿಂದಾಗಿ ಮುಚ್ಚಿ ಹೋಗಿದ್ದರೂ ಸಾಂಪ್ರದಾಯಿಕ ಮತ್ತು ಪಾರಂಪರಿಕ ಅಂದಮಾತ್ರ ರಥಗಡ್ಡೆಯಲ್ಲಿ ಅದ್ಭುತವಾಗಿದೆ. ರಥದ ಪಾದ ಭಾಗ ಅಂದರೆ ಕಟಿಭಾಗ, ಉದರಭಾಗ ನಾಲ್ಕು ದಿಕ್ಕುಗಳಿಗೆ ನಾಲ್ಕು ದ್ವಾರಗಳನ್ನು ಹೊಂದಿ ಹೃದಯ ಭಾಗವು ಆವರ್ತ ಮುಚ್ಚಲ್ಪಟ್ಟಿದ್ದು ಈ ಎರಡೂ ಹಂತಗಳು ಹಿತ್ತಾಳೆಯ ಅದ್ಭುತ ಉಬ್ಬು ಚಿತ್ರಗಳ ಫಲಕಗಳನ್ನು ಹೊಂದಿದ್ದು ರಥದ ಬಾಹುಭಾಗವು ಪಂಚವರ್ಣಾತ್ಮಕ ಧ್ವಜ ಸಹಸ್ರಗಳಿಂದ ತೂಗುತ್ತಿದ್ದರೆ ಶಿರೋಭಾಗವು ರಕ್ತವರ್ಣದ ಹಂಡೇವು, ಮೇಲೆ ಸುವರ್ಣ ವರ್ಣದ ‘ಕಳಶ’ ಮನೋಹರವಾಗಿದೆ. ನಾನಿಲ್ಲಿ ವಿವರಿಸಿರುವ ವಿಶೇಷತೆಗಳನ್ನೆಲ್ಲಾ ಕಣ್ತುಂಬಿಕೊಳ್ಳಬೇಕೆಂದರೆ ಮಹಾರಥೋತ್ಸವದ ದಿನ ಮಧ್ಯಾಹ್ನದೊಳಗೇ ಹೋಗಿ ನೋಡಬೇಕು, ನಂತರವಾದರೆ ಹೂವಿನ ಅಲಂಕಾರದಿಂದಾಗಿ ಮುಚ್ಚಿಹೋಗಿರುತ್ತದೆ,ಹಗಲು ಬೆಳಕೂ ಇರುವುದಿಲ್ಲ, ಜನಜಂಗುಳಿಯೂ ಅಪಾರವಾಗಿರುತ್ತದೆ. ಈ ಮಹಾ ರಥದ ತೇರು ಗಡ್ಡೆಯು ತುಸು ಜೀರ್ಣಾವಸ್ಥೆಯಲ್ಲಿ ಇರುವುದರಿಂದ ಹೊಸ ತೇರುಗಡ್ಡೆಯ ನಿರ್ಮಾಣ ಪ್ರಕ್ರಿಯೆ ಆರಂಭವಾಗಿದ್ದು ಬಹುಶಹ ಈ ನೂರಾರು ವರ್ಷದ ತೇರು ಗಡ್ಡೆಯನ್ನು ವೀಕ್ಷಿಸಲು ಈ ವರ್ಷದ ಮಹಾರಥೋತ್ಸವವೇ ಕೊನೆಯ ಅವಕಾಶವೆಂದು ಕಾಣುತ್ತದೆ. ಮುಂದಿನ ವರ್ಷ ಹೊಸ ತೇರುಗಡ್ಡೆ ಬರಬಹುದಾಗಿದೆ. ಸಂಪ್ರದಾಯದಂತೆ ಚೈತ್ರ ಶುದ್ಧ ಪಂಚಮಿಯಂದು ಈ ರಥೋತ್ಸವ ಜರುಗಬೇಕಾಗಿದ್ದರೂ ಈ ವರ್ಷ ಷಷ್ಟಿಯಂದು ನೆರವೇರುತ್ತಿದೆ, ಏಕೆಂದರೆ ಸೂರ್ಯನ ದಿನವಾದ ಆದಿತ್ಯವಾರದಂದು ಮಹಾ ರಥವನ್ನು ಪೂರ್ವ ದಿಕ್ಕಿಗೆ ಎಳೆಯುವಂತಿಲ್ಲವೆಂಬ ಪ್ರತೀತಿ ಕೆಲವೆಡೆ ಇದ್ದು ಭಾನುವಾರದ ಬದಲು ಇಂದು ಸೋಮವಾರ ಈ ಮಹಾ ರಥೋತ್ಸವ ಜರುಗಲಿದೆ. ಮಹಾರಥೋತ್ಸವದ ಮುನ್ನಾದಿನ ಶ್ರೀ ಸ್ವಾಮಿಯ ಗಜವಾಹನೋತ್ಸವವೂ, ಮಹಾರಥೋತ್ಸವದ ಮಾರನೆಯ ದಿನ ನಂದಿವಾಹನೋತ್ಸವವೂ ಇದ್ದು ಸಾಲಂಕೃತ ಗಜ ವಿಗ್ರಹ ವಿಗ್ರಹ ಮತ್ತು ಮನುಷ್ಯ ದೇಹ ನಂದಿ ಮುಖದ ನಂದಿ ವಿಗ್ರಹವು ಹಿತ್ತಾಳೆ ಹಾಗೂ ತಾಮ್ರಗಳಿಂದ ನಿರ್ಮಿಸಿದ್ದು ಅತ್ಯಂತ ಕಲಾತ್ಮಕವಾಗಿ ನೋಡಲೇಬೇಕೆನ್ನುವಂತಿದೆ.

 

ವಿಶೇಷ ಲೇಖನ: -ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ, ದಾವಣಗೆರೆ-

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Klive Special Article ಕೆ ಲೈವ್ ಸಂಪಾದಕೀಯ

0

Klive Special Article ಒಮ್ಮಿಂದೊಮ್ಮೆಲೆ ಈಗ ಸಾಮಾಜಿಕ ಕಾಳಜಿಯುಳ್ಳ ನಾಯಕರು ಮಾಧ್ಯಮಗಳಲ್ಲಿ ಮಿಂಚಲಾರಂಭಿಸಿದ್ದಾರೆ. ಪ್ರತಿಷ್ಠಿತ ನಾಯಕರ ಜನ್ಮದಿನ, ಮಹಾನ್ ದೇಶಭಕ್ತರ ಜಯಂತಿ,
ಊರ ಜಾತ್ರೆ,ತೇರು, ಸಾಮುದಾಯಿಕ ಹಬ್ಬಗಳು ಹೀಗೆ ನಾವು ಮರೆತರೂ ಅವರು ನೆನಪಿಸುತ್ತಿದ್ದಾರೆ.
ಅದೊಂದು ರೀತಿ ಒಳ್ಳೆಯ ಲಕ್ಷಣವೇ.
ಆದರೆ ಈಗ ವಿಧಾನ ಸಭಾ ಚುನಾವಣಾ ಗಾಳಿ ಗರಂ ಆಗಿ ಬೀಸತೊಡಗಿದೆ.

ಒಬ್ಬೊಬ್ಬರೇ ಒಂದೊಂದು ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿ ತಮ್ಮ ಘೋಷಣೆ, ಭರವಸೆಗಳೊಂದಿಗೆ ಫ್ಲೆಕ್ಸಿಗಳಲ್ಲಿ ನಗುಮುಖ, ಕೈಮುಗಿದು ನಿಲ್ಲುತ್ತಿದ್ದಾರೆ.
ಶಿವಮೊಗ್ಗದಲ್ಲಿ ಸೆಳೆದ ಅಂತಹ ನಾಯಕರಲ್ಲಿ ಆಯನೂರು ಮಂಜುನಾಥ್ ಫ್ಲೆಕ್ಸಿ ಕೂಡ ಒಂದು. ಅವರು ನಿಜವಾದ ನಾಯಕರೇ. ಒಳ್ಳೇ ವಾಗ್ಮಿ, ವಿಷಯಾಂತರವಿಲ್ಲದೇ ಮಾತಾಡುವ ಪಟುತ್ವ ಇದೆ. ಶಿವಮೊಗ್ಗದ ರಾಜಕಾರಣಿಗಳಲ್ಲೇ ಭಿನ್ನವಾಗಿರುವ ವ್ಯಕ್ತಿ.

ಎರಡು ಬಾರಿ ಎಮ್ಮೆಲ್ಯೆ,ಒಂದು ಬಾರಿ ರಾಜ್ಯಸಭಾ ಸದಸ್ಯ, ಅಲ್ಪಾವಧಿ ಲೋಕಸಭಾ ಸದಸ್ಯರಾಗಿದ್ದವರು.ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವ ರೂಢಿಸಿಕೊಂಡು ಬಂದ ಸಂಘಟನಾ ಶಕ್ತಿಯುಳ್ಳ ವ್ಯಕ್ತಿ.ಈಗ ಎಮ್ಮೆಲ್ಸಿ ಆಗಿದ್ದಾರೆ.ಆದರೆ ವಿಧಾನ ಸಭೆಯ ಸದಸ್ಯರಾಗುವ ತವಕ ಅವರಲ್ಲಿ ಒಮ್ಮೆಲೆ ಮೂಡಿದೆ. ಶಿವಮೊಗ್ಗದಲ್ಲಿ ಸದ್ಯ
ಹಾಲಿ ಶಾಸಕ ಕೆ.ಎಸ್
ಈಶ್ವರಪ್ಪ ಅಪವಾದ ವಿಮುಕ್ತರಾದರೂ ಅವರನ್ನ ವಯೋಮಿತಿಯ ಹರಿತ ಕತ್ತಿಯ ಮೂಲಕ ಮೂಲೆಗೆ ತಳ್ಳಬಹುದು. ಏಕೆಂದರೆ ಮಾಜಿ ಮುಖ್ಯಮಂತ್ರಿಗಳ ಮೇಲೆ ಇದನ್ನ ಬಿಜೆಪಿ ಪ್ರಯೋಗಮಾಡಿದೆ.

Klive Special Article ಸೌಮ್ಯವಾದಿ ರುದ್ರೇಗೌಡರು ಮುನ್ನೆಲೆಗೆ ಬಂದಿಲ್ಲ.
ಶಾಸಕರ ಪುತ್ರ ಕಾಂತೇಶ್ ,ವಿಜಯೇಂದ್ರರಷ್ಟು ಪ್ರಭಾವಳಿ ಹೊಂದಿಲ್ಲ.
ಆಕಾಂಕ್ಷಿ ಮತ್ತು ಸೂಕ್ತ ಆಯ್ಕೆಯಾಗಬಹುದಾದ ಡಾ.ಸರ್ಜಿ ಅವರನ್ನ ಚನ್ನಗಿರಿಗೆ ಬಿಜೆಪಿ ತಳ್ಳುವ ಪ್ಲಾನು ಮಾಡುತ್ತಿದೆ.
ಜ್ಯೋತಿ ಪ್ರಕಾಶ್, ದತ್ತಾತ್ರಿ. ಇವರನ್ನೆಲ್ಲ ತೂಗಿದರೆ ಆಯನೂರು ಒಂದು ತೂಕ ಮೇಲೆ ಬರುವಂತಿದೆ.
ಆದರೆ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕಾಗಿ ಆಯನೂರನ್ನೂ ಉಪೇಕ್ಷೆ ಮಾಡಬಹುದು.ಆಗ ಢಾಳಾಗಿ‌ ಕಾಣುವ‌ ಹೆಸರು ದತ್ತಾತ್ರಿ.
ಈತ ತಳಮಟ್ಟದಿಂದ ಪಕ್ಷದಲ್ಲಿ ಬೆಳೆದ ವ್ಯಕ್ತಿ.
ಹಿಂದೆ ಭಾನುಪ್ರಕಾಶ್ ಎಂಪಿ ಚುನಾವಣೆಗೆ ನಿಂತು ಸೋತಿದ್ದರು. ನಂತರ ಕ್ರಮೇಣ ಅವರಿಗೆ ಒಮ್ಮೆ ಎಮ್ಮೆಲ್ಸಿ ಅವಕಾಶ ಸಿಕ್ಕಿತು.
ಈ ಹಿನ್ನೆಲೆಯಲ್ಲಿ ದತ್ತಾತ್ರಿ ಅವರ ಆಯ್ಕೆ
ಅಚ್ಚರಿಯಾದರೂ ಸೂಕ್ತ ಮನ್ನಣೆ ನೀಡಿದ ಕೀರ್ತಿ ಬಿಜೆಪಿಗೆ ಸಿಗುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

BJP Viajay Sankalpa Yatre ಮೋದಿ ಅವರನ್ನ ಬಿಜಿಪಿ ಮಹಾಸಂಗಮದಲ್ಲಿ ಕಣ್ತುಂಬಿಕೊಂಡ ಮಹಾಜನ ಪ್ರವಾಹ

0

ದಾವಣಗೆರೆಯ ಜಿ ಎಮ್ ಐಟಿ ಕಾಲೇಜು ಪಕ್ಕದಲ್ಲಿ 400 ಎಕರೆ ಪ್ರದೇಶದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭ ನಡೆಯಿತು.ದೂರ ದೂರದ ಜಿಲ್ಲೆಗಳಿಂದ ಶುಕ್ರವಾರ ರಾತ್ರಿಯೇ ಸಾವಿರಾರು ಮುಖಂಡರು, ಕಾರ್ಯಕರ್ತರು, ಮೋದಿ ಅಭಿಮಾನಿಗಳು ದಾವಣಗೆರೆಗೆ ಆಗಮಿಸಿದ್ದರು.

BJP Viajay Sankalpa Yatre ಮಾರ್ಚ್ 25 ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಮೋದಿಯವರು ದಾವಣಗೆರೆಗೆ ಆಗಮಿಸುತ್ತಾರೆ ಎಂಬ ಸುದ್ದಿ ತಿಳಿದ ನಂತರದಲ್ಲಿ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಜನಸಾಗರ ಹರಿದು ಬಂದಿತ್ತು. ಮೂರು ಭಾಗದಲ್ಲಿ ಪೆಂಡಾಲ್ ಗಳನ್ನು ಹಾಕಲಾಗಿತ್ತು. ಇದನ್ನು ಮೀರಿಯೂ ಸಹ ಜನರು ಧಾವಿಸಿದ್ದರು. ಸ್ಥಳಕ್ಕೆ ಮೋದಿಯವರು ಆಗಮಿಸುತ್ತಿದ್ದಂತೆಯೇ, ಸ್ಥಳದಲ್ಲಿ ಸೇರಿದ ಜನರು ಅಭಿಮಾನದಿಂದ ಮೋದಿಜಿ ಮೋದಿಜಿ ಎಂದು ಹರ್ಷದಿಂದ ಕೂಗಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Job Vacancy Apply Now ಕೆಎಂಎಫ್ ವಿಜಯಪುರ ಮತ್ತು ಬಾಗಲಕೋಟೆ ಘಟಕಗಳಲ್ಲಿ ಕೆಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

Job Vacancy Apply Now ಕರ್ನಾಟಕ ಹಾಲು ಒಕ್ಕೂಟದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟ ಲಿಮಿಟೆಡ್ ನ ಅನೇಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜೂನಿಯರ್ ಟೆಕ್ನಿಷಿಯನ್, ಎಕ್ಸ್ಟೆಂಶನ್ ಆಫೀಸರ್ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಅಧಿಕೃತ ವೆಬ್ಸೈಟ್ bimul.deltainfo.in ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳ ಮಾಹಿತಿಗಳು ಇಲ್ಲಿವೆ…

ಕೆಎಂಎಫ್ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ಈ ಸಂಸ್ಥೆಯಲ್ಲಿ 40 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳಾಗಿರಬೇಕು. ಅರ್ಜಿ ಶುಲ್ಕ ಎಸ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 500 ರೂ. ಇತರೆ ಅಭ್ಯರ್ಥಿಗಳಿಗೆ 1000 ರೂಪಾಯಿ.

Job Vacancy Apply Now ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಇದರ ಕೊನೆಯ ದಿನಾಂಕ ಏಪ್ರಿಲ್ 25.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budge