Friday, February 13, 2026
Friday, February 13, 2026
Home Blog Page 115

Dr.Vishnuvardhan Award 2018 ಮತ್ತು 2019 ರ ರಾಜ್ಯ ಚಲನಚಿತ್ರ‌ ರಂಗದಲ್ಲಿನ “ಜೀವಮಾನ ಸಾಧನೆ” ಗಾಗಿ ಡಾ.ರಾಜ್ ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿ ಘೋಷಣೆ

0

Dr.Vishnuvardhan Award ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ.ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿ, ವಾರ್ಷಿಕ ಸಾಹಿತ್ಯ ಮತ್ತು ಕಿರುಚಿತ್ರ ಪ್ರಶಸ್ತಿಗಳಿಗೆ 2019 ನೇ ಸಾಲಿನ ಪುರಸ್ಕೃತರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನವೆಂಬರ್ 3 ರಂದು ಮೈಸೂರಿನಲ್ಲಿ ಆಯೋಜಿಸಿರುವ 2018 ಹಾಗೂ 2019 ರ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಕನ್ನಡ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ.ರಾಜಕುಮಾರ್ ಪ್ರಶಸ್ತಿಗೆ ಸಿನಿಮಾ ಮತ್ತು ರಂಗಭೂಮಿಯ ಹಿರಿಯ ನಟಿ ಉಮಾಶ್ರೀ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಎನ್ ಆರ್ ನಂಜುಂಡೇಗೌಡ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ರಿಚಾರ್ಡ್ ಕ್ಯಾಸ್ಟಲಿನೋ ಅವರು ಆಯ್ಕೆಯಾಗಿದ್ದಾರೆ.

ಈ ಮೂರು ಪ್ರಶಸ್ತಿಗಳು ತಲಾ ಐದು ಲಕ್ಷ ರೂ.ನಗದು ಹಾಗೂ ಐವತ್ತು ಗ್ರಾಂ ಚಿನ್ನದ ಪದಕ ಒಳಗೊಂಡಿದೆ.

2019ರ ಅತ್ಯುತ್ತಮ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಬರೆದಿರುವ “ಬೆಳ್ಳಿ ತೊರೆ” ಸಿನೆಮಾ ಪ್ರಬಂಧಗಳು ಕೃತಿ ಆಯ್ಕೆಯಾಗಿದೆ. ಅಂಕಿತ ಪುಸ್ತಕವು ಈ ಕೃತಿಯನ್ನು ಪ್ರಕಟಿಸಿದೆ.

ಈ ಪ್ರಶಸ್ತಿಯು ಕೃತಿಕಾರರಿಗೆ ಹಾಗೂ ಪ್ರಕಾಶಕರಿಗೆ ತಲಾ 20 ಸಾವಿರ ರೂ.ನಗದು ಮತ್ತು 50 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.

2019 ರ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಶ್ರೀನಾಥ್ ಎಸ್ ಹಡಗಲಿ ನಿರ್ದೇಶನದ “ಗುಳೆ” ಕಿರುಚಿತ್ರವು ಆಯ್ಕೆಯಾಗಿದೆ. ಮನೋಹರ್ ಎಸ್ ಐಯ್ಯರ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ತಲಾ 25 ಸಾವಿರ ರೂ. ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದವರ ಕಿರು ಪರಿಚಯ:

ಉಮಾಶ್ರೀ:
ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಒಬ್ಬ ಪ್ರತಿಭಾವಂತ ನಟಿ, ನಿರ್ದೇಶಕಿ ಮತ್ತು ರಾಜಕಾರಣಿಯಾಗಿದ್ದಾರೆ.

Dr.Vishnuvardhan Award ಬಾಲ್ಯದಲ್ಲಿಯೇ ರಂಗಭೂಮಿಯಲ್ಲಿ ಅಭಿನಯವನ್ನು ಪ್ರಾರಂಭಿಸಿದ ಇವರು 1980 ರದಶಕದಲ್ಲಿ “ಅನುಭವ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಅಭಿನಯದಲ್ಲಿ ತಮಾಷ ಸೇರಿದಂತೆ ಭಾವನಾತ್ಮಕ ಮತ್ತು ಗಂಭೀರ ಪಾತ್ರಗಳಲ್ಲಿ ಅವರ ಬಹುಮುಖ ಪ್ರತಿಭೆ ಎದ್ದು ಕಾಣುತ್ತದೆ. ಒಟ್ಟಾರೆಯಾಗಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಉಮಾಶ್ರೀ, ಕನ್ನಡ ಚಿತ್ರರಂಗದ ಒಂದು ದಂತ ಕತೆಯಾಗಿದ್ದಾರೆ.

ಉಮಾಶ್ರೀ ಅವರು ಎರಡು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. “ಗುಲಾಬಿ ಟಾಕೀಸ್” ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. ಕಲೆಯ ಮೂಲಕ ಜನಮಾನಸ ಗೆದ್ದು ರಾಜಕೀಯದಲ್ಲಿ ಸಹ ತೊಡಗಿಸಿ ಕೊಂಡಿರುವ ಅವರು 2013ರಿಂದ 2018 ರವರೆಗೆ ಶಾಸಕರಾಗಿ ಕರ್ನಾಟಕದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿದ್ದರೂ ಸಹ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯವಾಗಿ ನಟಿಸುತ್ತಿರುವ ಅವರು ಸರಳತೆ, ಸಾಮಾಜಿಕ ಕಳಕಳಿ ಮತ್ತು ಕಲಾತ್ಮಕ ಸಾಧನೆಗಾಗಿ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಇವರ ಜೀವಮಾನ ಸಾಧನೆಗಾಗಿ 2019 ನೇ ಸಾಲಿನ ‘ಡಾ.ರಾಜ್ ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಎನ್.ಆರ್. ನಂಜುಂಡೇಗೌಡ:
ಎನ್.ಆರ್. ನಂಜುಂಡೇಗೌಡ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಾಗಿದ್ದು, ನಟ ಮತ್ತು ಸಂಭಾಷಣಾಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ಸೇರಿದಂತೆ ರಂಗಭೂಮಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಶ್ರೀಯುತರು ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀಯುತರು 1989 ರಲ್ಲಿ ಸ್ವತಂತ್ರ ನಿರ್ದೇಶಕರಾಗಿ ‘ಸಂಕ್ರಾಂತಿʼಯಿಂದ ಕನ್ನಡ ಚಲನಚಿತ್ರದಲ್ಲಿ ಕ್ರಾಂತಿಯನ್ನು ಆರಂಭಿಸಿದರು.

ಮಕ್ಕಳ ಸಿನಿಮಾ, ಸಾಹಿತ್ಯ, ಕಲೆಗಳಿಗೆ ಮೀಸಲಾದ ಸ್ವಯಂ ಸೇವಾ ಸಂಸ್ಥೆ ಚಿಲ್ಡ್ರನ್ಸ್ ಇಂಡಿಯಾ ಸಂಸ್ಥಾಪಕ ಅಧ್ಯಕ್ಷರಾಗಿ, ಮಕ್ಕಳ ಮಾಸಪತ್ರಿಕೆ ‘ಚಿಲಿಪಿಲಿʼ ಪ್ರಕಾಶಕ ಮತ್ತು ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತರು ಚಲನಚಿತ್ರಗಳಿಗೆ ಸಂಬಂಧಿಸಿದ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಸಕ್ರಿಯ ಸೇವೆ ಸಲ್ಲಿಸುತ್ತಿದ್ದಾರೆ.

“ಅಮಾನುಷ”, “ನವತಾರೆ”, “ಚುಕ್ಕಿ ಚಂದ್ರಮ”, “ನಾನು ನೀನು ಜೋಡಿ” “ನಾನುಗಾಂಧಿ” ಮತ್ತು “ಅಪೂರ್ವ ಜೋಡಿ” ಹಾಗೂ ಮಕ್ಕಳ ಚಿತ್ರಗಳಾದ ಅಆಇಈ ಮತ್ತು ಚುಕ್ಕಿ ಚಂದ್ರಮ ಚಿತ್ರಗಳು ಅವರ ನಿರ್ದೇಶನದ ಪ್ರಸಿದ್ಧ ಚಿತ್ರಗಳು. 2018ರಲ್ಲಿ ಬಿಡುಗಡೆಯಾದ “ಹೆಬ್ಬೆಟ್ರಾಮಕ್ಕ” ಚಿತ್ರವು ಇವರ ವೃತ್ತಿಜೀವನದ ಮೈಲಿಗಲ್ಲಾಗಿ ನಿಲ್ಲುತ್ತದೆ. ಈ ಚಿತ್ರಕ್ಕಾಗಿ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಉತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿತ್ತು.

ನಂಜುಂಡೇಗೌಡರ ನಿರ್ದೇಶನ ಶೈಲಿ ಸರಳತೆ ಮತ್ತು ಭಾವನಾತ್ಮಕತೆಗೆ ಹೆಸರು ವಾಸಿಯಾಗಿದೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ ದೇಶ-ವಿದೇಶಗಳಲ್ಲಿ ಇವರು ನಿರ್ದೇಶಿಸಿದ ಚಿತ್ರಗಳು ಚಿತ್ರೋತ್ಸವದಲ್ಲಿ ಭಾಗವಹಿಸಿವೆ.

ಕನ್ನಡ ಚಿತ್ರರಂಗದಲ್ಲಿ ಗುಣಮಟ್ಟದ ಚಿತ್ರಗಳನ್ನು ರೂಪಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ನಂಜುಂಡೇಗೌಡ ಅವರ ಸಾಧನೆಗಳು ಉದಯೋನ್ಮುಖ ನಿರ್ದೇಶಕರಿಗೆ ಸ್ಫೂರ್ತಿಯಾಗಿವೆ.

ಇವರ ಜೀವಮಾನ ಸಾಧನೆಗಾಗಿ 2019 ನೇ ಸಾಲಿನ ‘ಪುಟ್ಟಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ರಿಚಾರ್ಡ್ ಕಾಸ್ಟೇಲಿನೋ:
ರಿಚಾರ್ಡ್ ಕಾಸ್ಟೇಲಿನೋ ಮಂಗಳೂರು ಮೂಲದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾಗಿದ್ದು, ತುಳು, ಕೊಂಕಣಿ, ಕೊಡವ ಮತ್ತು ಕನ್ನಡ ಚಿತ್ರರಂಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1990ರ ದಶಕದಲ್ಲಿ ತುಳು ಚಿತ್ರ “ಸೆಪ್ಟೆಂಬರ್ 8” ಅನ್ನು ಕೇವಲ 24 ಗಂಟೆಗಳಲ್ಲಿ ಪೂರ್ಣಗೊಳಿಸಿ, ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ತುಳು ಚಿತ್ರ “ಬಂಗಾರ ಪಟ್ಲೆರ್” ಅವರ ಅತ್ಯಂತ ಗಮನ ಸೆಳೆದ ಸಿನಿಮಾವಾಗಿದ್ದು, ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿದೆ.

2017ರಲ್ಲಿ “ಎಲ್ಲೆಲ್ಲು ನೀನೇ ನನ್ನಲ್ಲು ನೀನೇ” ಚಿತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಇದರೊಂದಿಗೆ “ಪೊನ್ನಮ್ಮ” ಮತ್ತು “ಕಜಾರ್” ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅವರ ಚಿತ್ರಗಳು ಸಾಮಾಜಿಕ ಸಂದರ್ಭಗಳು, ಸಾಂಸ್ಕøತಿಕ ಬೆಳವಣಿಗೆಗಳು ಮತ್ತು ಮಾನವೀಯ ಭಾವನೆಗಳನ್ನು ಚಿತ್ರಿಸುವಲ್ಲಿ ಪ್ರಮುಖವಾಗಿವೆ.

ರಿಚಾರ್ಡ್ ಕಾಸ್ಟೇಲಿನೋ, ದಕ್ಷಿಣ ಕನ್ನಡದ ಚಲನಚಿತ್ರ ಚಳವಳಿಯ ಪ್ರತೀಕವಾಗಿ ನಿಲ್ಲುತ್ತಾರೆ. ಅವರ ಬಹುಭಾಷ ನಿರ್ದೇಶನ ಕೌಶಲ್ಯ ಕನ್ನಡ ಸಿನಿಮಾದ ವೈವಿಧ್ಯತೆಗೆ ಕೊಡುಗೆ ನೀಡಿದೆ. ಇವರ ಜೀವಮಾನ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಶ್ರೀಯುತರಿಗೆ 2019 ನೇ ಸಾಲಿನ ‘ಡಾ.ವಿಷ್ಣು ವರ್ಧನ್ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

Adichunchanagiri Mutt ನವೆಂಬರ್ 4 ತೀರ್ಥಹಳ್ಳಿಯ ಆರಗದಲ್ಲಿ ಶ್ರೀಪುರಂದರ ಕೀರ್ತನೋತ್ಸವ

0

Adichunchanagiri Mutt ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠದ 35 ನೇ ವಾರ್ಷಿಕೋತ್ಸವ ಸಮಾರಂಭವನ್ನು ಅತ್ಯಂತ ವಿಭಿನ್ನ,ವಿಶೇಷವಾಗಿ ಆಚರಿಸಲು ಶ್ರೀ ಆದಿಚುಂಚನಗಿರಿ ಮಠ ತೀರ್ಮಾನಿಸಿದೆ.
ಇದೇ ಮೊದಲ ಬಾರಿಗೆ ದಾಸವರೇಣ್ಯ ಪುರಂದದಾಸರ ಕೀರ್ತನೋತ್ಸವ ಸಮಾರಂಭವನ್ನು ಮಾಜಿ ಸಚಿವ ಆರಗಜ್ಞಾನೇಂದ್ರ ಅವರ ಹುಟ್ಟೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಶಿವಮೊಗ್ಗದ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ 4 ಮತ್ತು 5 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನವಂಬರ್ 4 ರಂದು ಬೆಳಗ್ಗೆ 10ರಿಂದ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿರುವ ಸಹಕಾರ ಸಂಘ ಸಭಾ ಭವನದಲ್ಲಿ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದ್ದು, ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನ.5ರ ಬೆಳಗ್ಗೆ 10 ಗಂಟೆಗೆ ಶ್ರೀ ಮಠದ 35 ನೇ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯುವುದು.
ನವೆಂಬರ್ 5ರಂದು ಬೆಳಿಗ್ಗೆ 7 ಗಂಟೆಗೆ ಶರಾವತಿ ನಗರದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಹೋಮ – ಹವನ ಮತ್ತು ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುವುದು.
ಶ್ರೀ ಮಠದ ಶಾಖೆಯ ಶ್ರೀಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದು,
ಕಾರ್ಯಕ್ರಮಕ್ಕೆ ಸರ್ವರನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಸ್ವಾಗತಿಸಿ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Adichunchanagiri Mutt ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ನ. 4ರಂದು ನಡೆಯಲಿರುವ ವಿಶೇಷ, ವಿಭಿನ್ನವಾದ ದಾಸವರೇಣ್ಯ ಪುರಂದರ ದಾಸರ ಕೀರ್ತನೋತ್ಸವ ಸಮಾರಂಭದಲ್ಲಿ ನಾಡಿನ ಖ್ಯಾತ ಗಾಯಕರು ಆಗಮಿಸಿ ವಿವಿಧ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮೊದಲ ಅವಧಿಯಲ್ಲಿ: ವಿದ್ವಾನ್ ಪಣೀಂದ್ರ ಬೆಂಗಳೂರು ಮತ್ತು ಸಂಗಡಿಗರಿಂದ ಹಾಡುಗಾರಿಕೆಯನ್ನು ನಡೆಸಿಕೊಡಲಿದ್ದಾರೆ.
2ನೇ ಅವಧಿ : ವಿದ್ವಾನ್ ಹೊಸಳ್ಳಿ.ಕೆ.ವೆಂಕಟರಾಂ,ವಿದ್ವಾನ್ ಹೊಸಳ್ಳಿ ಕೆ. ಸುಬ್ಬರಾವ್, ವಿದ್ವಾನ್ ಹೊಸಳ್ಳಿ ವಿ.ರಘುರಾಂ ಮತ್ತು ಸಂಗಡಿಗರಿಂದ ಪಿಟೀಲು ವಾದನ ನಡೆಸಿಕೊಡುವರು.
3ನೇ ಅವಧಿ: ವಿದ್ವಾನ್ ಶೃಂಗೇರಿ ನಾಗರಾಜ್ ರವರ ಶಿಷ್ಯ ವೃಂದದವರಿಂದ ಮತ್ತು ಆರಗ ಗ್ರಾಮದ ಭಜನಾ ಮಂಡಳಿಯವರಿಂದ ಹಾಡುಗಾರಿಕೆ.
4ನೇ ಅವಧಿ :ವಿದ್ವಾನ್ ಹುಮಾಯುನ್ ಹರ್ಲಾಪುರ್, ವಿದ್ವಾನ್ ನವಶಾದ್ ಹರ್ಲಾಪುರ್, ವಿದ್ವಾನ್ ನಿಶಾದ್ ಹರ್ಲಾಪುರ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಗಾಯನ.
5ನೇ ಅವಧಿ : ರಾಷ್ಟ್ರಪತಿ ಪ್ರಶಸ್ತಿ ವಿಜೇತ ವಿದ್ವಾನ್ ಮಾರುತಿ ಪ್ರಸಾದ್ ಬೆಂಗಳೂರು ಮತ್ತು ಸಂಗಡಿಗರಿಂದ ಹಾಡುಗಾರಿಕೆ.
6ನೇ ಅವಧಿ: ಪೂಜ್ಯ ಶ್ರೀ ಶ್ರೀ ಸಾಯಿ ಕೀರ್ತಿನಾಥ ಸ್ವಾಮೀಜಿ ಹಾಗೂ ವಿದ್ವಾನ್ ಮಾರುತಿ ಪ್ರಸಾದ್ ಅವರಿಂದ ಹಾರ್ಮೋನಿಯಂ, ಕೀಬೋರ್ಡ್,ಜುಗಲ್ ಬಂದಿ ಕಾರ್ಯಕ್ರಮ ನಡೆಯುವುದು.
ಖ್ಯಾತ ಸಂಗೀತಗಾರರಿಂದ ಸಾಮೂಹಿಕ ಗಾಯನ ಹಾಗೂ ಸತ್ಸಂಗ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು, ಶ್ರೀಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕಾಗಿ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.

ವಿದ್ಯಾರ್ಥಿಗಳಿಗೆ ಪುರಂದಾಸರ ಕುರಿತು ವಿವಿಧ ಸ್ಪರ್ಧೆಗಳ ಆಯೋಜನೆ:
35ನೇ ವಾರ್ಷಿಕೋತ್ಸವ ಪ್ರಯುಕ್ತ ಮೊದಲ ಬಾರಿಗೆ ಶ್ರೀಮಠದಿಂದ ಕೀರ್ತನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ದಾಸವರೇಣ್ಯ ಪುರಂದರ ದಾಸರ ಕೀರ್ತನೆಗಳ ಗಾಯನ ಸ್ಪರ್ಧೆ, ಪುರಂದರ ದಾಸರ ಕೊಡುಗೆ ಕುರಿತು ಭಾಷಣ ಸ್ಪರ್ಧೆಯನ್ನು ಈಗಾಗಲೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಿನ ಹಂತದಲ್ಲಿ ನಡೆಸಲಾಗಿದ್ದು ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಆಕರ್ಷಕ ಬಹುಮಾನಗಳನ್ನು ಪೂಜ್ಯರಿಂದ ನೀಡಿ ಗೌರವಿಸಲಾಗಿರುತ್ತದೆ.
ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಗಳಲ್ಲಿ ತಾಲ್ಲೂಕು ಹಂತದಲ್ಲಿ ವಿಜೇತರಾದ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಇಂದು ನಡೆಯುವ ಜಿಲ್ಲಾ ಹಂತದ ಸ್ಪರ್ಧೆಗಳು ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯು

DVS College of Arts, Science and Commerce ಭೌಗೋಳಿಕ ಮಾನ್ಯತೆಯಿಂದ ಸ್ಥಳೀಯ ಉತ್ಪನ್ನಗಳ ಖ್ಯಾತಿ ರಕ್ಷಿಸಲು ಸಾಧ್ಯ- ಡಾ.ಟಿ.ಎಸ್. ರಾಘವೇಂದ್ರ

0

DVS College of Arts, Science and Commerce ಭೌಗೋಳಿಕ ಮಾನ್ಯತೆ ವಿಚಾರದಲ್ಲಿ ಭಾರತ ದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ನೋಂದಣಿ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುವುದರಿಂದ ಸ್ಥಳೀಯ ಉತ್ಪನ್ನಗಳನ್ನು ನಕಲು ಹಾಗೂ ದುರುಪಯೋಗದಿಂದ ರಕ್ಷಿಸಬಹುದು ಎಂದು ಸಾಗರದ ಎಲ್‌ಬಿ ಮತ್ತು ಬಿಎಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಟಿ.ಎಸ್.ರಾಘವೇಂದ್ರ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತ ದೇಶ ಸಂಬಂಧಿಸಿ ಭೌಗೋಳಿಕ ಮಾನ್ಯತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೌಗೋಳಿಕ ಮಾನ್ಯತೆ ಎಂಬುದು ನಿರ್ದಿಷ್ಟ ಮೂಲದ ಉತ್ಪನ್ನಗಳಿಗೆ ಬಳಸುವ ವಿಶಿಷ್ಟ ಗುರುತು ಆಗಿದ್ದು, ಸ್ಥಳೀಯ ಉತ್ಪನ್ನಗಳ ಖ್ಯಾತಿ ರಕ್ಷಿಸಲು ಸಾಧ್ಯವಾಗುತ್ತದೆ. ಉತ್ಪಾದಕರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಗ್ರಾಹಕರು ನಿಜವಾದ ಉತ್ಪನ್ನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಐ ನೋಂದಣಿ ವರ್ಷಗಳ ಅವಧಿಗೆ ಮಾನ್ಯ ಆಗಿರುತ್ತದೆ. ಪ್ರತಿ ವರ್ಷಗಳಿಗೊಮ್ಮೆ ನವೀಕರಿಸಬಹುದು. ಜಿಐ ನೋಂದಣಿಯಿಂದ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಸ್ಥಳೀಯ ಸಂಸ್ಕೃತಿ ಮತ್ತು ಕೌಶಲ್ಯಕ್ಕೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಭೌಗೋಳಿಕ ಮಾನ್ಯತೆ ಅಂದರೆ ಯಾವುದಾದರೂ ವಸ್ತು ಒಂದು ನಿರ್ದಿಷ್ಟ ಪ್ರದೇಶ, ರಾಜ್ಯ ಅಥವಾ ಸ್ಥಳದಿಂದ ಬಂದಿದೆ ಎಂಬುದನ್ನು ಸೂಚಿಸುವ ಗುರುತು, ಅದರ ಗುಣಮಟ್ಟ, ಖ್ಯಾತಿ ಅಥವಾ ಇತರ ಲಕ್ಷಣಗಳು ಆ ಸ್ಥಳದ ಭೌಗೋಳಿಕ ಮೂಲದೊಂದಿಗೆ ಸಂಬಂಧಿಸಿದ್ದಾಗಿರುತ್ತದೆ ಎಂದು ಹೇಳಿದರು.

DVS College of Arts, Science and Commerce ಈವರೆಗೂ ಭಾರತ ದೇಶದ 621ಕ್ಕೂ ಹೆಚ್ಚಿನ ಉತ್ಪನ್ನಗಳು ಜಿಐ ನೋಂದಣಿ ಆಗಿದ್ದು, ಚೀನಾಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯಲ್ಲಿದೆ. 2030ರ ವೇಳೆ ಹೆಚ್ಚಿನ ಸಂಖ್ಯೆಯ ನೋಂದಣಿ ಆಗಲು ಸರ್ಕಾರಗಳು ವಿಶೇಷ ಪ್ರೋತ್ಸಾಹ ನೀಡುತ್ತಿವೆ ಎಂದು ತಿಳಿಸಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎನ್.ಕುಮಾರಸ್ವಾಮಿ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ಶಿವಲಿಂಗಂ, ಸಹಾಯಕ ಪ್ರಾಧ್ಯಾಪಕಿ ಎಚ್.ಎಲ್.ರಂಜಿತಾ ಇತರರಿದ್ದರು.

ಕನ್ನಡದ ಪ್ರಸಿದ್ಧ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ, ಕಲಾವಿದ ಬಿ. ಟಾಕಪ್ಪ ಕಣ್ಣೂರು & ಸಮಾಜ ಸೇವಕ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

0

2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಮಹನೀಯರುಗಳಾದ ಪ್ರೊ. ರಾಜೇಂದ್ರ ಚೆನ್ನಿ (ಸಾಹಿತ್ಯ ಕ್ಷೇತ್ರ), ಶ್ರೀ ಬಿ.ಟಾಕಪ್ಪ ಕಣ್ಣೂರು (ಜಾನಪದ ಕ್ಷೇತ್ರ) ಹಾಗೂ ಶ್ರೀ ಕೋಣಂದೂರು ಲಿಂಗಪ್ಪ (ಸಮಾಜಸೇವೆ ಕ್ಷೇತ್ರ) ರವರಿಗೆ ಕನ್ನಡ ಸಾಹಿತ್ಯ ಜೀವಿಗಳ ಪರವಾಗಿ ಮತ್ತು ಕೆ ಲೈವ್ ನ್ಯೂಸ್ ಬಳಗದ ಆತ್ಮೀಯ ಅಭಿನಂದನೆಗಳು..

Sardar Vallabhabhai Patel ರಾಷ್ಟ್ರೀಯ ಏಕತಾ ದಿನಾಚರಣೆ ಸಿದ್ಧರಾಮಯ್ಯನವರಿಂದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರಿಗೆ ಗೌರವ ಅರ್ಪಣೆ

0

Sardar Vallabhabhai Patel ಸರ್ದಾರ್ ವಲಭಭಾಯ್ ಪಟೇಲ್‌ರವರ ಜನ್ಮ ದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ರಾಷ್ಟ್ರೀಯ ಏಕತಾ ದವಿಸದ ಪ್ರತಿಜ್ಞಾ ವಚನ ಭೋಧಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ದಾರ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ, ಗೌರವ ನಮನ ಸಲ್ಲಿಸಿದರು.

Sardar Vallabhabhai Patel ಈ ಸಂದರ್ಭದಲ್ಲಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಶಾಸಕ ಬಸವಂತಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಬಿ.ಬಿ.ಕಾವೇರಿ, ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಕಾರ್ಯದರ್ಶಿ ಜಗದೇಶ ಸೇರಿದಂತೆ ಹಿರಿಯ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.

Yoga and Research Foundation of Canada ನವೆಂಬರ್ 3ರಿಂದ “ಗ್ಯಾಸ್ಟ್ರಿಕ್‌ ಸಮಸ್ಯೆ” ಪರಿಹಾರಕ್ಕೆ ಯೋಗ- ಪ್ರಾಣಾಯಾಮ-ಧ್ಯಾನ ಶಿಬಿರ

0

Yoga and Research Foundation of Canada ಕಣಾದ ಯೋಗ ಮತ್ತು ರಿಸರ್ಚ್‌ ಫೌಂಡೇಷನ್ (ರಿ) ಮತ್ತು ಯುವಸಬಲೀಕರಣ & ಕ್ರೀಡಾ ಇಲಾಖೆಯ
ಸಹಯೋಗದೊಂದಿಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನವೆಂಬರ್ 3 ರ ಸೋಮವಾರದಿಂದ 13 ರವರೆಗೆ 10 ದಿನಗಳ ಕಾಲ “ಗ್ಯಾಸ್ಟ್ರಿಕ್‌ ಸಮಸ್ಯೆ”ಗೆ ಮತ್ತು ಸಹಜ ಆರೋಗ್ಯಕ್ಕಾಗಿ ಯೋಗ-ಪ್ರಾಣಾಯಾಮ-ಧ್ಯಾನ ಶಿಬಿರವನ್ನು
ಆಯೋಜಿಸಲಾಗಿದೆ.

ಪ್ರತಿ ದಿನ ಬೆಳಿಗ್ಗೆ 5:45 ರಿಂದ 7:15 ರವರೆಗೆ ನಡೆಯಲಿರುವ ಈ ಶಿಬಿರವನ್ನು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗಪಟು ಮತ್ತು ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ ರವರು ನಡೆಸಿಕೊಡಲಿದ್ದಾರೆ.

ಸೀಮಿತ ಪ್ರವೇಶ ಇರುವ ಈ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಪುರುಷ ಮಹಿಳೆಯರು ಹೆಚ್ಚಿನ ವಿವರಗಳನ್ನು ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ 9886674375, 9916570686 ರವರಿಂದ ಪಡೆಯಬಹುದು.

Sagara Police ಮೂವರು ನಾಪತ್ತೆಯಾಗಿದ್ದಾರೆ, ಸಿಕ್ಕರೆ ಸಾರ್ವಜನಿಕರು ಮಾಹಿತಿ ಕೊಡಿ. ಪೊಲೀಸ್ ಪ್ರಕಟಣೆ

0

Sagara Police ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ಪ್ರಕಟಣೆ ನೀಡಿದೆ.

ಸಾಗರ ತಾಲೂಕು ಪಡವಗೋಡು ಗ್ರಾಮದ ನವೀನ್ ಹೆಚ್.ಕೆ. ಬಿನ್ ಕೆರಿಯಪ್ಪ ಎಂಬ 29 ವರ್ಷದ ಯುವಕ ಸೆ.20 ರಂದು ಶಾಮಿಯಾನ ಹಾಕಲು ಹೋಗುವುದಾಗಿ ಹೇಳಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈತನ ಚಹರೆ 5.5 ಅಡಿ ಎತ್ತರ ಕೋಲುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.
ಹೆಗ್ಗೋಡು ಗ್ರಾಮದ ರಮೇಶ್ ಶಿವಾನಂದ ಭಟ್ ಎಂಬುವವರ ಮಗ ಅಶ್ವಿನ್ ಭಟ್ ಎಂಬ 29 ವರ್ಷದ ಯುವಕ ಏ. 05 ರಂದು ಕುಟುಂಬ ವ್ಯಾಜ್ಯದ ಸಲುವಾಗಿ ಠಾಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈತನ ಚಹರೆ 5.7 ಅಡಿ ಎತ್ತರ.ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ.
ಕಮಲಾಪುರ ಆವಿನಹಳ್ಳಿ ಗ್ರಾಮದ ದಾಮೋದರ ಎಂಬುವವರ ಮಗ ರವಿರಾಜ ಎಂಬ 26 ವರ್ಷದ ಯುವಕ ಮಾರ್ಚ್ 2024 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

Sagara Police ಈತ ಚಹರೆ 5.3 ಅಡಿ ಎತ್ತರ. ಕೋಲುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಬಲಗೈಯಲ್ಲಿ ಶಿವರಾಜ ಹಚ್ಚೆ ಗುರುತು ಇರುತ್ತದೆ.
ಈ ಮೂರು ಜನ ಕಾಣೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ದೂ.ಸಂ.: 08182-261400/ 08183-226082/ 9480803361/ 9480803385 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Delhi World School ಮಕ್ಕಳ ಸರ್ವತೋಮುಖ‌ ಬೆಳವಣಿಗೆಗೆ ಕ್ರೀಡೆ ಸಹಕಾರಿ-ನಿರಂಜನ ಮೂರ್ತಿ

0

Delhi World School ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗುತ್ತದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ನಿರಂಜನಮೂರ್ತಿ ಹೇಳಿದರು.

ಅವರು ಶಿವಮೊಗ್ಗ ನಗರದ ಡೆಲ್ಲಿ ವರ್ಲ್ಡ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಲ್ಲೂ ಸಹ ಸಾಕಷ್ಟು ಪ್ರತಿಭೆ ಇರುತ್ತದೆ. ಶಿಕ್ಷಕರು ಹಾಗೂ ಪಾಲಕರು ಪ್ರೋತ್ಸಾಹ ನೀಡಿ ಕ್ರೀಡಾ ಆಸಕ್ತಿ ಬೆಳೆಸಬೇಕು ಎಂದರು.

ಶಾಲೆಯ ಪ್ರಾಂಶುಪಾಲರಾದ ದಿವ್ಯಾಶೆಟ್ಟಿ ಮಾತನಾಡುತ್ತಾ, ಮಕ್ಕಳನ್ನು ಪುಸ್ತಕಕ್ಕೆ ಮಾತ್ರ ಸೀಮಿತವಾಗಿರಸದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಕಡೆ ಪೋಷಕರು ಗಮನಹರಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸದಾ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೆಚ್ಚಿನ ಅವಕಾಶಗಳಿವೆ ಎಂದರು.

Delhi World School ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ, ಪೋಷಕರು ಉಪಸ್ಥಿತರಿದ್ದರು.

Kannada Rajyotsava ಸೊರಬದಲ್ಲಿ “ಕರ್ನಾಟಕ ರತ್ನ” ನಟ ಪುನೀತ್ ಸ್ಮರಣೆ

0

Kannada Rajyotsava ಕರುನಾಡು ಕಂಡ ಪ್ರೀತಿಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರ ಅಭಿಮಾನಿ ಮತ್ತು ಯುವ ಮುಖಂಡ ಮಂಜುನಾಥ್ ಕೆ.ಟಿ. ತುರುವೆಕೆರೆ ಹೇಳಿದರು.

ಸೊರಬ ಪಟ್ಟಣದ ಸೊಪ್ಪಿನ ಕೇರಿ ಬಡಾವಣೆಯಲ್ಲಿ ಶ್ರೀ ದುರ್ಗಾಂಬ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಹಮ್ಮಿಕೊಂಡ ಡಾ. ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುನಿತ್ ರಾಜ್‌ಕುಮಾರ್ ಅವರು ಬಡ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವು ನೀಡಿದ್ದಾರೆ. ಜೊತೆಗೆ ವೃದ್ಧಾಶ್ರಮಗಳನ್ನು ಸ್ಥಾಪಿಸಿ ನೊಂದ ಹಿರಿಯ ಜೀವಗಳಿಗೆ ಆಶ್ರಯ ಕಲ್ಪಿಸಿದ್ದಾರೆ. ಅವರ ಸಾಮಾಜಿಕ ಸೇವೆ ಸಾರ್ವಕಾಲಿಕವಾದುದು. ಪುನಿತ್ ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ಸಾಮಾಜಿಕ ಕಳಕಳಿ ಇರುತ್ತಿತ್ತು. ಅವರು ಇಲ್ಲದೇ ನಾಲ್ಕು ವರ್ಷಗಳು ಕಳೆದಿವೆ.

ಆದರೆ, ಅವರ ನೆನಪು ಮತ್ತು ಪ್ರೀತಿ ಅಭಿಮಾನಿಗಳಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ. ಸದಾ ಜನಮಾನಸದಲ್ಲಿ ಅಪ್ಪು ಅಜರಾಮರ ಎಂದರು.
ಸಮಿತಿಯ ಗೌರವಾಧ್ಯಕ್ಷ ಕೆ. ಪಾಂಡುರಂಗ ಮಾತನಾಡಿ, ಪುನಿತ್ ರಾಜ್‌ಕುಮಾರ್ ನಮ್ಮನ್ನು ಅಗಲಿಲ್ಲ ಎನ್ನುವುದಕ್ಕೆ ಇಂದಿಗೂ ರಾಜ್ಯ ಹಾಗೂ ಇತರೆಡೆಯೂ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆಯನ್ನು ಆಚರಿಸುತ್ತಿರುವುದೇ ಸಾಕ್ಷಿಯಾಗಿದೆ.

ಅವರು ಸಮಾಜಮುಖಿ ಕಾರ್ಯಗಳನ್ನು ಎಲ್ಲಿಯೂ ಪ್ರಚಾರಕ್ಕೆ ಬಳಸಿಕೊಳ್ಳದೇ ಸಮಾಜಕ್ಕೆ ನೆರವಾದರು. ಇಂದಿಗೂ ಅವರು ಇದ್ದಾರೆ ಎಂಬುದು ಅಭಿಮಾನಿಗಳಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಸೇವೆ ಇಂದಿಗೂ ಪ್ರಸ್ತುತ. ನಗುವಿನ ಒಡೆಯ ಎಂದೇ ಖ್ಯಾತಿ ಪಡೆದ ಅವರ ಹೆಸರು ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.

Kannada Rajyotsava ಪಪಂ ಮಾಜಿ ಸದಸ್ಯ ಶ್ರೀಕಾಂತ್ ಶೇಟ್, ಶ್ರೀ ಭೂತೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ. ಕೆರಿಯಪ್ಪ, ಯುವ ಹೋರಾಟ ಸಮಿತಿಯ ಸುರೇಶ್ ಭಂಡಾರಿ, ಪ್ರಮುಖರಾದ ಪಿ. ಸುರೇಶ್, ಸಂತೋಷ ಸೊಪ್ಪಿನಕೇರಿ, ರಾಜು, ಗಣೇಶ, ಮೋಹನ್ ಭಾರ್ಕಿ, ಪ್ರವೀಣ್, ರಾಮಪ್ಪ ವಕೀಲ, ಮೋಹನ್ ಸೇರಿದಂತೆ ಇತರರಿದ್ದರು.

KLive Special Article ಸೂಕ್ಷ್ಮ ಸನ್ನಿವೇಶ, ಸರ್ಕಾರದ ಜಾಣ ನಡೆ ಅಗತ್ಯ

0

ಸಂಪಾದಕೀಯ

KLive Special Article ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆ ಬಗ್ಗೆ ವಿವಾದ ನಡೆಯುತ್ತಿದೆ. ಸನ್ಮಾನ್ಯ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ತೆರೆದ ಪುಸ್ತಕವಾಗಿದೆ. ಪ್ರಸ್ತುತ ಅವರು ದೃಶ್ಯಮಾಧ್ಯಮದಲ್ಲಿ ಮಾತಾಡುವಾಗ ತಮ್ಮ ಅಭಿಪ್ರಾಯವನ್ನು ಮಗ್ಗುಲು ಬದಲಿಸುವಂತೆ ಹೇಳಿದ್ದಾರೆ. ಬಿಜೆಪಿ ನಾಯಕರ ಮಕ್ಕಳು ಗಣವೇಷ ಧರಿಸಿ, ದಂಡಧಾರಿಗಳಾಗಿದ್ದಾರೆಯೆ? ಎಂದು ಪ್ರಶ್ನಿಸಿದ್ದಾರೆ. ಅವರ ಮಾತಿಗೆ ಮೇಲ್ಮನೆ ವಿಪಕ್ಷನಾಯಕ ಮಾನ್ಯ ಚಲವಾದಿ ನಾರಾಯಣ ಸ್ವಾಮಿ ಅವರು ಖರ್ಗೆ ಅವರು,ಮಕ್ಕಳು ದಲಿತ ಸಂಘರ್ಷ ಸಮಿತಿಯ ಚಟುವಟಿಕೆಯಲ್ಲಿದ್ದಾರೆಯೆ? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಇಂದಿನ ಸರ್ಕಾರದ ನಿರ್ಧಾರದ ಬಗ್ಗೆ ಒಳನೋಟ ಮುಖ್ಯ.

ಬಿಜೆಪಿ ಸರ್ಕಾರದ ಆಗಿನ ಆದೇಶವನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ.

ಈಗಾಗಲೇ ಆದೇಶವಿರುವದೇ ವಾಸ್ತವ. ಅದನ್ನ ಬಿಟ್ಟು ಯಾರೂ ಹೇಳಿಕೆಗಳನ್ನ ನೀಡುವುದು ಬೇಕಾಗಿರಲಿಲ್ಲ. ಬಿಜೆಪಿ ಸರ್ಕಾರದ ಆಡಳಿತವಿದ್ದಾಗ ಎಷ್ಟು ಸರ್ಕಾರಿ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಗಿದೆ? ಈ ಬಗ್ಗೆ ಇಂದಿನ ಸರ್ಕಾರದಿಂದ ಒಂದು‌ ಮಾಹಿತಿ ನೀಡಬೇಕಿತ್ತು. ಎಲ್ಲದನ್ನೂ ‘ಟಿಟ್ ಫಾರ್ ಟ್ಯಾಟ್ ‘ ಎನ್ನುವ ಎಳೆಯರ ಆಟವಾದಂತಾಗಿದೆ.

ಪ್ರಸ್ತುತ ಮಾಜಿಲೋಕಾಯುಕ್ತರಾಗಿರುವ ಮಾನ್ಯಶ್ರೀ ಸಂತೋಷ ಹೆಗಡೆ ಅವರು ಆರ್ ಎಸ್ ಎಸ್ ನಿಷೇಧ ಕ್ರಮಕೈಗೊಂಡರೆ ಅದು ಸರ್ಕಾರಕ್ಕೇ ತಿರುಗುಬಾಣವಾಗುತ್ತದೆ ಎಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ
ಮಾತಾಡಿದ್ದಾರೆ. ಅವರು ಹೀಗೆ ಹೇಳಬೇಕಾದರೆ ಆರ್ ಎಸ್ ಎಸ್ ಪರ ಹೇಳಿಕೆ ಎಂದು ಯಾರೂ ತೀರ್ಮಾನಿಸಲಾಗದು. ಏಕೆಂದರೆ
ಮಾಜಿ ನ್ಯಾಯಮೂರ್ತಿಗಳ ಹೇಳಿಕೆಯಲ್ಲಿ ಹುರುಳಿಲ್ಲ ಎನ್ನಲಾಗದು. ಮಾನ್ಯ ಮುಖ್ಯಮಂತ್ರಿಗಳೂ‌ ನ್ಯಾಯಕೋವಿದರಾಗಿದ್ದಾರೆ. ಅವರೂ ಕೂಡ “ಅಸಿಧಾರಾ ಖಡ್ಗವ್ರತ” ಮಾಡಬೇಕಿದೆ.

ನನ್ನ ಮಿತ್ರರೊಬ್ಬರೊಂದಿಗೆ ಮಾತಾಡುವಾಗ ಒಂದು ಸಂಗತಿ‌ ಹೊರಹೊಮ್ಮಿತು. ಸದ್ಯ ಆರ್ ಎಸ್ ಎಸ್ ನ ಗಣವೇಷ, ದಂಡಧಾರಿತ್ವ
ಸರ್ಕಾರದ ದಾಖಲೆಗಳಲ್ಲಿ ಅಧಿಕೃತ ಎಂದು ಇದೆಯೆ? ಅಥವಾ ಇದರ ದುರುಪಯೋಗವಾಗಿ ಅಹಿತಕರ ಘಟನೆ,ಅಶಾಂತಿ ಉಂಟಾಗಿದೆಯೆ? ಮುಂತಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.

ಸದ್ಯ ಜಾರಿಗೆ ತರುವಲ್ಲಿ ಒಂದು ಅವಕಾಶವನ್ನ, ಮುಂಜಾಗ್ರತೆ ವಹಿಸಲು ಸರ್ಕಾರಿ ಸಿಬ್ಬಂದಿಗಳಿಗೆ ವಾರ್ನಿಂಗ್ ಮಾದರಿ ಒಳಸುತ್ತೋಲೆ ಕಳಿಸಿದ್ದರೆ ಅದೊಂದು ಮಾನವೀಯ ಹಿನ್ನೆಲೆ ಇರುತ್ತಿತ್ತು. ಏಕೆಂದರೆ ಇಷ್ಟೂ ವರ್ಷಗಳು ಜಾಣಮೌನ ತಾಳಿ , ಧುತ್ತನೆ ಆರ್ ಎಸ್ ಎಸ್ ಶತಮಾನದ ಸನ್ನಿವೇಶದಲ್ಲಿ ತಕ್ಷಣ ಕೈಗೊಂಡ ಕ್ರಮ ಕಾನೂನು ರೀತ್ಯ ಸಾಧುವೆ. ಆದರೆ ಸರ್ಕಾರಿ ನೌಕರರು ಚಾಲನೆಯಲ್ಲಿರುವ ಸರ್ಕಾರದ ನೀತಿನಿಯಮಗಳನ್ನ , ಜನೋಪಯೋಗಿ ಯೋಜನೆಗಳನ್ನ ಜನತೆಗೆ ಸರ್ಕಾರದ ಧ್ವನಿಯಾಗಿಯೇ ಮುಟ್ಟಿಸಿರುತ್ತಾರೆ. ಆ ಒಂದು ಅಭಿಮಾನ ಸದ್ಯ ತಾಳಲೇ ಬೇಕು.

ಪ್ರಸ್ತುತ ಪಿಡಿಓ‌ ಓರ್ವರನ್ನ ಅಮಾನತ್ತು ಮಾಡಿರುವುದು ಮಾನವೀಯ ನೆಲೆಯಲ್ಲಿ ಸರಿಯಾದ ಕ್ರಮವಲ್ಲ.
ಅಂಥವರಿಗೆ ಒಂದು ಎಚ್ಚರಿಕೆ ನೋಟೀಸ್ ಜಾರಿ ಮಾಡಿ, ಸಮಜಾಯಷಿ ಕೇಳಿದ್ದರೆ ಅದಕ್ಕೆ ರಾಜಕಿಯಬಣ್ಣ ಬರುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಒಂದು ಮುಚ್ಚಳಿಕೆ ಪಡೆದರೆ ಅದೊಂದು ಸರ್ಕಾರದ ಮಾದರಿ ಕ್ರಮವಾಗುತ್ತದೆ.

ಮತ್ತೂ ಒಂದು ಅಂಶವೆಂದರೆ ಎಬಿವಿಪಿ ಅಂತೆಯೇ ಎನ್ ಎಸ್ ಯು ಐ ಸಂಘಟನೆ ಕಾಲೇಜು ವಿದ್ಯಾರ್ಥಿಗಳ ಮಟ್ಟದಲ್ಲಿ ಈಗಾಗಲೇ ಪ್ರಚಲಿತದಲ್ಲಿದೆ. ಅಂತಹ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಪ್ರತಿಭಟನೆ ಕೈಗೊಳ್ಳುತ್ತವೆ. ಇವುಗಳನ್ನು ಹೇಗೆ ನಿಯಂತ್ರಿಸುತ್ತೀರಿ? ಯುವಜನತೆಯ ಉರಿಗಣ್ಣಿಗೆ ಆಡಳಿತ ತುತ್ತಾಗುವುದಿಲ್ಲವೆ?. ವಿದ್ಯಾರ್ಥಿ ಸಂಘಟನೆಗಳ ಬಗ್ಗೆ ಉಪೇಕ್ಷೆ ಮಾಡುವಂತೆಯೇ ಇಲ್ಲ. ಅದು ಜೆ ಎನ್ ಯು ಇರಬಹುದು, ಅಸ್ಸಾಂ ಇರಬಹುದು ಕೊನೆಗೆ ನೇಪಾಳ ದೇಶದಂಥ ಸರ್ಕಾರ ಬದಲಿಸಿದ ಪ್ರಕ್ರಿಯೆ ಇರಬಹುದು.
ಯುವಶಕ್ತಿಯ ಯಾವಾಗ ಏನು ಮಾಡುತ್ತದೆ ಕಲ್ಪಿಸಲಸಾಧ್ಯ.

ಇಲ್ಲಿ ನನ್ನ ವಿಚಾರವೆಂದರೆ ಸರ್ಕಾರವನ್ನ ಅಧೀರಗೊಳಿಸುವುದಲ್ಲ. ಕೆಲವೊಮ್ಮೆ ಬಿಜೆಪಿಯ ಸರ್ಕಾರದ ಕೃತ್ಯವಿದ್ದಾಗ ಕೆಲವಕ್ಕೆ ಮಾತ್ರ ಕ್ರಮ. ಮತ್ತೆ ಕೆಲವಕ್ಕೆ ಜಾಣ ಮೌನ. ಬಿಜೆಪಿ ಸರ್ಕಾರವಿದ್ದಾಗ ಅವರೂ ಅಷ್ಟೆ ಕೆಲವಕ್ಕೆ ಕ್ರಮ ,ಕೆಲವಕ್ಕೆ ಜಾಣ
ಉಪೇಕ್ಷೆ . ಯಾಕೆ ಹೀಗೆ?.

KLive Special Article ಪ್ರತಿಯೊಂದು ಪಕ್ಷವೂ ಆಡಳಿತದಲ್ಲಿದ್ದಾಗ ವಿರೋಧಪಕ್ಷಗಳ ದೌರ್ಬಲ್ಯಗಳನ್ನ ಗುರಾಣಿ ಮಾಡಿಕೊಳ್ಳುವುದು ಸಾಮಾನ್ಯ.
ಈಗ ಅದೇ ಆಗುತ್ತಿದೆ. ಒಂದು ಕೋಮಿನ ಬಗ್ಗೆ ಉದಾರತೆ. ಮಿಕ್ಕಂತೆ
ಬಹುಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ. ಇದು ಆಗಬಾರದು. ಸರ್ವಜನಾಂಗದ ಶಾಂತಿಯ ತೋಟ ಎಂದಾಗ
ಬಹು ಸಂಖ್ಯಾತ ಮತ್ತು ಅಲ್ಪ ಸಂಖ್ಯಾತರನ್ನ ಸಮದೃಷ್ಟಿಯಲ್ಲಿ ಕಾಣುವ ಕ್ರಮ ದಾಖಲಾಗಬೇಕು. ಕೇವಲ ರಾಜಕೀಯ ನೀತಿಯೇ ಆದರೆ ಅದು ಬಹುಕಾಲ ನಿಲ್ಲದು. ಪ್ರಜಾಪ್ರಭುತ್ವದಲ್ಲಿ ಕೇವಲ ತುಷ್ಡೀಕರಣವೊಂದೇ ಆಗಿರಬಾರದು.
ಬಹುಸಂಖ್ಯಾತರೂ ಕೂಡ ತೆರಿಗೆ ನೀಡುವ ಸಂಪನ್ಮೂಲ ಎಂಬ ಮನವರಿಕೆ ಇರಬೇಕು.

ಸದ್ಯ ಜಾರಿಗೆ ತರುವಲ್ಲಿ ಒಂದು ಅವಕಾಶವನ್ನ, ಮುಂಜಾಗ್ರತೆ ವಹಿಸಲು ಸರ್ಕಾರಿ ಸಿಬ್ಬಂದಿಗಳಿಗೆ
ವಾರ್ನಿಂಗ್ ಮಾದರಿ ಒಳಸುತ್ತೋಲೆ
ಕಳಿಸಿದ್ದರೆ.ಅದೊಂದು ಮಾನವೀಯ ಹಿನ್ನೆಲೆ ಇರುತ್ತಿತ್ತು. ಏಕೆಂದರೆ ಇಷ್ಟೂ ವರ್ಷಗಳು ಜಾಣಮೌನ ತಾಳಿ , ಧುತ್ತನೆ ಆರ್ ಎಸ್ ಎಸ್ ಶತಮಾನದ ಸನ್ನಿವೇಶದಲ್ಲಿ ತಕ್ಷಣ ಕೈಗೊಂಡ ಕ್ರಮ
ಕಾನೂನು ರೀತ್ಯ ಸಾಧುವೆ. ಆದರೆ
ಸರ್ಕಾರಿ ನೌಕರರು ಚಾಲನೆಯಲ್ಲಿರುವ
ಸರ್ಕಾರದ ನೀತಿನಿಯಮಗಳನ್ನ , ಜನೋಪಯೋಗಿ ಯೋಜನೆಗಳನ್ನ
ಜನತೆಗೆ ಸರ್ಕಾರದ ಧ್ವನಿಯಾಗಿಯೇ ಮುಟ್ಟಿಸಿರುತ್ತಾರೆ. ಆ ಒಂದು ಅಭಿಮಾನ ಸದ್ಯ ತಾಳಲೇ ಬೇಕು.

ಪ್ರಸ್ತುತ ಪಿಡಿಓ‌ ಓರ್ವರನ್ನ ಅಮಾನತ್ತು ಮಾಡಿರುವುದು ಮಾನವೀಯ ನೆಲೆಯಲ್ಲಿ ಸರಿಯಾದ ಕ್ರಮವಲ್ಲ.
ಅಂಥವರಿಗೆ ಒಂದು ಎಚ್ಚರಿಕೆ ನೋಟೀಸ್ ಜಾರಿ ಮಾಡಿ, ಸಮಜಾಯಷಿ ಕೇಳಿದ್ದರೆ ಅದಕ್ಕೆ ರಾಜಕಿಯಬಣ್ಣ ಬರುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಒಂದು ಮುಚ್ಚಳಿಕೆ ಪಡೆದರೆ ಅದೊಂದು ಸರ್ಕಾರದ ಮಾದರಿ ಕ್ರಮವಾಗುತ್ತದೆ.

ಮತ್ತೂ ಒಂದು ಅಂಶವೆಂದರೆ ಎಬಿವಿಪಿ ಅಂತೆಯೇ ಎನ್ ಎಸ್ ಯು ಐ ಸಂಘಟನೆ ಕಾಲೇಜು ವಿದ್ಯಾರ್ಥಿಗಳ ಮಟ್ಟದಲ್ಲಿ ಈಗಾಗಲೇ ಪ್ರಚಲಿತದಲ್ಲಿದೆ. ಅಂತಹ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಪ್ರತಿಭಟನೆ ಕೈಗೊಳ್ಳುತ್ತವೆ. ಇವುಗಳನ್ನು ಹೇಗೆ ನಿಯಂತ್ರಿಸುತ್ತೀರಿ?
ಯುವಜನತೆಯ ಉರಿಗಣ್ಣಿಗೆ ಆಡಳಿತ ತುತ್ತಾಗುವುದಿಲ್ಲವೆ?. ವಿದ್ಯಾರ್ಥಿ ಸಂಘಟನೆಗಳ ಬಗ್ಗೆ ಉಪೇಕ್ಷೆ ಮಾಡುವಂತೆಯೇ ಇಲ್ಲ. ಅದು ಜೆ ಎನ್ ಯು ಇರಬಹುದು, ಅಸ್ಸಾಂ ಇರಬಹುದು ಕೊನೆಗೆ ನೇಪಾಳ ದೇಶದಂಥ ಸರ್ಕಾರ ಬದಲಿಸಿದ ಪ್ರಕ್ರಿಯೆ ಇರಬಹುದು.
ಯುವಶಕ್ತಿಯ ಯಾವಾಗ ಏನು ಮಾಡುತ್ತದೆ ಕಲ್ಪಿಸಲಸಾಧ್ಯ.

ಇಲ್ಲಿ ನನ್ನ ವಿಚಾರವೆಂದರೆ ಸರ್ಕಾರವನ್ನ ಅಧೀರಗೊಳಿಸುವುದಲ್ಲ.
ಕೆಲವೊಮ್ಮೆ ಬಿಜೆಪಿಯ ಸರ್ಕಾರದ ಕೃತ್ಯವಿದ್ದಾಗ ಕೆಲವಕ್ಕೆ ಮಾತ್ರ ಕ್ರಮ.
ಮತ್ತೆ ಕೆಲವಕ್ಕೆ ಜಾಣ ಮೌನ. ಬಿಜೆಪಿ ಸರ್ಕಾರವಿದ್ದಾಗ ಅವರೂ ಅಷ್ಟೆ ಕೆಲವಕ್ಕೆ ಕ್ರಮ ,ಕೆಲವಕ್ಕೆ ಜಾಣ
ಉಪೇಕ್ಷೆ . ಯಾಕೆ ಹೀಗೆ?.

ಪ್ರತಿಯೊಂದು ಪಕ್ಷವೂ ಆಡಳಿತದಲ್ಲಿದ್ದಾಗ ವಿರೋಧಪಕ್ಷಗಳ ದೌರ್ಬಲ್ಯಗಳನ್ನ ಗುರಾಣಿ ಮಾಡಿಕೊಳ್ಳುವುದು ಸಾಮಾನ್ಯ.
ಈಗ ಅದೇ ಆಗುತ್ತಿದೆ. ಒಂದು ಕೋಮಿನ ಬಗ್ಗೆ ಉದಾರತೆ. ಮಿಕ್ಕಂತೆ
ಬಹುಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ.
ಇದು ಆಗಬಾರದು. ಸರ್ವಜನಾಂಗದ ಶಾಂತಿಯ ತೋಟ ಎಂದಾಗ
ಬಹು ಸಂಖ್ಯಾತ ಮತ್ತು ಅಲ್ಪ ಸಂಖ್ಯಾತರನ್ನ
ಸಮದೃಷ್ಟಿಯಲ್ಲಿ ಕಾಣುವ ಕ್ರಮ ದಾಖಲಾಗಬೇಕು. ಕೇವಲ ರಾಜಕೀಯ ನೀತಿಯೇ ಆದರೆ
ಅದು ಬಹುಕಾಲ ನಿಲ್ಲದು.
ಪ್ರಜಾಪ್ರಭುತ್ವದಲ್ಲಿ ಕೇವಲ ತುಷ್ಡೀಕರಣವೊಂದೇ ಆಗಿರಬಾರದು.
ಬಹುಸಂಖ್ಯಾತರೂ ಕೂಡ ತೆರಿಗೆ ನೀಡುವ
ಸಂಪನ್ಮೂಲ ಎಂಬ ಮನವರಿಕೆ ಇರಬೇಕು.
ಸದ್ಯ ಕಲಬುರ್ಗಿ ಜಿಲ್ಲಾಡಳಿತ ಕರೆದ ಶಾಂತಿ ಸಭೆ ಯಶಸ್ವಿಯಾಗಲಿಲ್ಲ. ಇಲ್ಲಿ ಸಭೆಗೆ ಬಂದವರೇ ಪರಸ್ಪರ ವಾಗ್ವಾದಮಾಡಿಕೊಂಡ ಹಗರಣ ವರದಿಯಾಗಿದೆ. ಹೈಕೊರ್ಟ್ ಸರ್ಕಾರದ ಕ್ರಮಕ್ಕೆ ಮದ್ಯಕಾಲೀನ ತಡೆ ನೀಡಿದೆ.
ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸರ್ಕಾರ ಬಹಳ ಜಾಗರೂಕ ನಡೆ ತೋರಿಸಬೇಕಿದೆ.

ಬರಹ : ಡಾ.ಎನ್.ಸುಧೀಂದ್ರ
ಪ್ರಧಾನ ಸಂಪಾದಕರು
ಕೆ ಲೈವ್ ನ್ಯೂಸ್