Friday, February 13, 2026
Friday, February 13, 2026
Home Blog Page 112

Karnataka Rajyotsava ಕನ್ನಡ ಕೇವಲ ಭಾಷೆಯಲ್ಲ. ಭಾವನೆಗಳ ಬೆಸುಗೆ-ರೋ.ಕೆ.ಬಿ.ರವಿಶಂಕರ್

0

Karnataka Rajyotsava ೭೦ನೇ ಕನ್ನಡ ರಾಜ್ಯೋತ್ಸವವನ್ನು ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಪ್ರೌಢ ಶಾಲೆಯಲಿ,್ಲ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಈ ಸಮಾರಂಭವನ್ನು ಉದ್ಘಾಟಿಸಿದ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಕೆ ಬಿ ರವಿಶಂಕರ್ ಅವರು ಮಾತನಾಡುತ್ತಾ ರಾಜ್ಯೋತ್ಸವ ಎನ್ನುವುದು ಒಂದು ನಾಡಹಬ್ಬವಾಗಿದ್ದು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಶ್ರೀ ಆಲೂರು ವೆಂಕಟರಾಯರು, ಹುಯಲಗೊಳ ನಾರಾಯಣರು, ಬಿ ಎಮ್ ಶ್ರೀಕಂಠಯ್ಯ ಮುಂತಾದ ಮಹಾನೀಯರನ್ನು ಸ್ಮರಿಸುತ್ತಾ ಕರ್ನಾಟಕ ಸರ್ಕಾರವು ನಾಡು ನುಡಿಗಾಗಿ ಶ್ರಮಿಸಿರುವ ೭೦ ಜನ ಸಾಧಕರಿಗೆ ರಾಜ್ಯೊತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಿಂತಕ ಶ್ರೀ ಕೊಣಂದೂರು ನಿಂಗಪ್ಪ ಜಾನಪದ ಕಲಾವಿದ ಶ್ರೀ ಠಾಕಪ್ಪ ಕಣ್ಣೂರು ಮತ್ತು ಪ್ರೋ. ರಾಜೇಂದ್ರ ಚೆನ್ನಿ, ಇವರುಗಳಿಗೆ ರಾಜ್ಯೊತ್ಸವ ಪ್ರಶಸ್ತಿ ಲಭಿಸಿದ್ದು ಈ ಪ್ರಶಸ್ತಿಗಳು ಇಡೀ ಜಿಲ್ಲೆಗೆ ಸಂದ ಪ್ರಶಸ್ತಿ ಎಂದರೆ ತಪ್ಪಾಗಲಾರದು ಎಂದು ತಿಳಿಸುತ್ತಾ ಕನ್ನಡ ಕೇವಲ ಭಾಷೆಯಲ್ಲ ಭಾವನೆಗಳ ಬೆಸುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಎಸ್ ಸಿ ರಾಮಚಂದ್ರ ಇವರು ಮಾತನಾಡುತ್ತಾ ಕನ್ನಡನಾಡಿನಲ್ಲಿ ಕರ್ನಾಟಕವನ್ನು ಆಳಿದ ಅತ್ಯಂತ ಪ್ರಾಚೀನ ರಾಜ ಮನೆತನದಲ್ಲಿ ಕದಂಬ ಗಂಗರು, ರಾಷ್ಟಕೂಟರು, ಚಾಲುಕ್ಯರು, ಶಾತವಾಹನರು, ಹೊಯ್ಸಳರು ಮತ್ತು ಮೈಸೂರಿನ ವಡೆಯರ್ ಮನೆತನದವರು ಹೀಗೆ ಹಲವಾರು ರಾಜಮನೆತನದವರು ಕರ್ನಾಟಕದ ಕಲೆ ಸಾಹಿತ್ಯ ಮತ್ತು ಸಂಸೃತಿಗೆ ಅಪಾರ ಕೊಡುಗೆಯನ್ನು ನೀಡುತ್ತಾರೆ ಈ ಎಲ್ಲಾ ರಾಜ ಮನೆತನಗಳು ಕನ್ನಡ, ಕನ್ನಡದ ಭಾಷೆ, ಮತ್ತು ನಾಡಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರು, ಈ ಎಲ್ಲಾ ರಾಜಮನೆತನಗಳು ಕಲೆ ಮತ್ತು ಸಂಗೀತದ ಜೊತೆಗೆ ಸಾಹಿತ್ಯಕ್ಕೆ ಆದ್ಯತೆಯನ್ನು ಕೊಟ್ಟಿರುವ ಕಾರಣದಿಂದಲೇ ಪಂಪ ರನ್ನ ಜನ್ನ ಪೊನ್ನ ಮುಂತಾದ ಮಹಾಕವಿಗಳಿಗೆ ಆಶ್ರಯದಾತರಾಗಿದ್ದು ಕಾವ್ಯದ ರಚನೆಗೆ ಇವರುಗಳು Karnataka Rajyotsava ಪ್ರೇರಣೆಯಾಗಿದ್ದರೂ ಎಂದರೆ ಅತಿಶಯೋಕ್ತಿಯಲ್ಲ, ಪ್ರಾಚೀನ ಕನ್ನಡ ಸಾಹಿತ್ಯ , ನಡುಗನ್ನಡ ಮತ್ತು ಆದುನಿಕ ಕನ್ನಡದ ಶ್ರೀಮಂತ ಪರಂಪರೆಯ ಕಾರಣದಿಂದಾಗಿಯೇ ಕನ್ನಡಕ್ಕೆ ೮ ಜ್ಣಾನ ಪೀಠಪ್ರಶಸ್ತಿಗಳು ಅಭಿಸಿರುತ್ತವೆಂದು ತಿಳಿಸಿದರು. ರಾಜ್ಯೊತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡ ಅಭಿಮಾನ ತೋರದೆ ಪ್ರತಿ ದಿನವೂ ಕರ್ನಾಟಕದ ರಾಜ್ಯ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸುವುದನ್ನು ರೂಢಿಸಿಕೊಳ್ಳಬೇಕೆಂದು ಕರೆನೀಡಿದರು.
ಈ ಸಮಾರಂಭದಲ್ಲಿ ರೊ. ವಿಜಯಕುಮಾರ್, ರೊ. ಮಂಜುನಾಥ ಎನ್ ಬಿ ರೊ. ಮನೋಹರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಾಡುನುಡಿ ಬಗ್ಗೆ ಶ್ರಮಿಸಿದವರನ್ನು ಶ್ಲಾ಼ಘಿಸಿದರು. ಕರ‍್ಯಕ್ರಮದಲ್ಲಿ ೮ನೇ ಮತ್ತು ೯ನೇ ತರಗತಿ ಮಕ್ಕಳು ರಾಜ್ಯೋತ್ಸವಕ್ಕೆ ಸಂಬಂಧಿಸಿದ ನೃತ್ಯವನ್ನು ಪ್ರದರ್ಶಿಸಿ ರಾಜ್ಯೋತ್ಸವದ ಮೆರಗನ್ನು ಹೆಚ್ಚಿಸಿರುತ್ತಾರೆ.
ಸಮಾರಂಭದಲ್ಲಿ ರೋಟರಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಸರ‍್ಯನಾರಾಯಣ ಇವರು ಉಪಸ್ಥಿತಿರಿದ್ದು, ಪ್ರಸ್ತಾವಿಕವಾಗಿ ಶ್ರೀಮತಿ ಪ್ರತಿಮಾ ಅವರು ಮಾತನಾಡಿದ್ದು , ಕಾರ್ಯಕ್ರಮವನ್ನು ಶ್ರೀಮತಿ ಕಾವ್ಯರವರು ನಿರೂಪಿಸಿದ್ದು, ಶ್ರೀಮತಿ ಸುಜಾತ ರವರ ವಂದನಾರ‍್ಪಣೆಯೊಂದಿಗೆ ಕಾರ‍್ಯಕ್ರಮವನ್ನು ಮುಕ್ತಾಯಗೊಳಿಸಿದರು

Shimoga News ಮುಟ್ಟಿನ ಸಮಯದ ರಜೆ ನಿರ್ಧಾರಮಾಡಿ ಕ್ರಮ ಜಾರಿಗೊಳಿಸಿದ ಸರ್ಕಾರದ ನಿರ್ಧಾರ ಸ್ವಾಗತಾರ್ಹ- ಡಾ.ಟಿ.ನೇತ್ರಾವತಿ.

0

Shimoga News ರಾಜ್ಯ ಸರ್ಕಾರ ಮುಟ್ಟಿನ ರಜೆ ನಿರ್ಧಾರ ತೆಗೆದುಕೊಂಡಿರುವುದು ಕೃತಜ್ಞತೆಯ ಹೆಜ್ಜೆಯಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ. ಟಿ .ನೇತ್ರಾವತಿ ಹೇಳಿದ್ದಾರೆ.

ಸರ್ಕಾರದ ನಿರ್ಧಾರ ನಿಜಕ್ಕೂ ಸ್ವಾಗತ ಈಗಾಗಲೇ ಈ ಆದೇಶಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ವಲಯಗಳ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡುವ ನಿರ್ಧಾರ ನಿಜಕ್ಕೂ ಪ್ರಗತಿಪರ ಹೆಜ್ಜೆಯಾಗಿದೆ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ಸಂಕಟ ಹೆಣ್ಣಿಗೆ ಗೊತ್ತು ಇದಕ್ಕೆ ವಿಶ್ರಾಂತಿಯ ಅಗತ್ಯವಿದ್ದು, ಸರ್ಕಾರದ ಈ ನಿರ್ಧಾರದಿಂದ ಮಹಿಳೆಯರಲ್ಲಿ ಸಮಾಧಾನ ತಂದಿದೆ, ಹತ್ತಾರು ಒತ್ತಡಗಳಿಂದ ಹೈರಾಣಗಿ ದುಡಿಯುವ ಮಹಿಳೆಯರು ಈ ನಿರ್ಧಾರ ಕೃತಜ್ಞತೆ ಹೆಜ್ಜೆ ಎಂದಿದ್ದಾರೆ.
Shimoga News ನಮ್ಮ ಮಹಿಳೆಯರು ಈ ರಜವನ್ನು ದುರುಪಯೋಗಪಡಿಸಿಕೊಳ್ಳದಿರಲಿ, ಮತ್ತು ಸರ್ಕಾರದ ಈ ಆದೇಶ ಪರಿಣಾಮಕಾರವಾಗಿ ಅನುಷ್ಠಾನಕ್ಕೆ ಬರ ಬೇಕು. ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಈ ನಿರ್ಧಾರವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಲಿ. ದುಡಿಯುವ ಮಹಿಳೆಯರಿಗೆ ಇದು ಅನುಕೂಲವಾಗಿದೆ.
ಈ ಆದೇಶ ಅಸಂಘಟಿತ ವಲಯಕ್ಕೂ ಅನ್ವಯವಾಗಲಿ
ಎಂದು ನೇತ್ರಾವತಿ ತಿಳಿಸಿದ್ದಾರೆ.

Yogesh H C ಮನುಕುಲದ ಮಾನವೀಯ ಸೇವೆಗಳಿಗೆ ಶಿವಮೊಗ್ಗ ನಾಗರೀಕರ ಸ್ಪಂದನ ಶ್ಲಾಘನೀಯ- ಹೆಚ್.ಸಿ.ಯೋಗೇಶ್.

0

Yogesh H C ನೂರು ಜನ ರಕ್ತಧಾನಿಗಳೊಂದಿಗೆ 75 ನೆ ಬಾರಿ ರಕ್ತದಾನ ಮಾಡಿ. ಕೃತಜ್ಞತೆ ಸಲ್ಲಿಸಿದ ಹೆಚ್ ಸಿ ಯೋಗೇಶ್
ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ ಇಂತಹ ಪವಿತ್ರ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು ಮನುಕುಲದ ಮಾನವೀಯ ಸೇವೆಗಳಿಗೆ ಶಿವಮೊಗ್ಗ ನಗರದ ಸಾರ್ವಜನಿಕರು ಸದಾ ನಮ್ಮ ಜೊತೆ ಕೈಜೋಡಿಸುತ್ತಾರೆ ಎನ್ನುವುದಕ್ಕೆ ಇವತ್ತಿನ ರಕ್ತದಾನ ಶಿಬಿರವೇ ಸಾಕ್ಷಿ . ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು ನಮ್ಮ ಕರೆಗೆ ಸ್ಪಂದಿಸಿ. ನೂರು ಜನರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರ ದಾನಿಗಳಾಗಿದ್ದಾರೆ ಎಂದು ನುಡಿದ ಅವರು ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಮನುಕುಲದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು ಇದೇ ಸಂದರ್ಭದಲ್ಲಿ ಎಲ್ಲಾ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಉಡುಗೊರೆ ಗಳನ್ನು ನೀಡಿ . ಗೌರವಿಸಿದರು ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು
Yogesh H C ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಎಂ ಬಿ ಶಿವಕುಮಾರ ಕಾಶಿ ವಿಶ್ವನಾಥ. ಗ್ಯಾರೆಂಟಿ ಸಮಿತಿಯ ಸದಸ್ಯರಾದ ಎಚ್ ಎಮ್ ಮಧು.
ಕೆ .ದೇವೇಂದ್ರಪ್ಪ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷರಾದ ಧರಣೇಂದ್ರ ದಿನಕರ್. ಮಾಜಿ ಅಧ್ಯಕ್ಷರಾದ ಜಿ ವಿಜಯಕುಮಾರ್. ರೆಡ್ ಕ್ರಾಸ್ ಸಭಾಪತಿ ಎಸ್ ಪಿ ದಿನೇಶ್
ಗೌರವ ಕಾರ್ಯದರ್ಶಿ. ಡಾ ದಿನೇಶ್. ಕಾಂಗ್ರೆಸ್ ಮುಖಂಡರಾದ .ಎಸ್ ಚಿನ್ನಪ್ಪ ಹಾಗೂ ಹಲವಾರು ಜನ ಕಾಂಗ್ರೆಸ್ ಮುಖಂಡರು ಯೋಗೀಶ್ ಅಭಿಮಾನಿ ಬಳಗದವರು ರಕ್ತದಾನಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು

Dr. Dhananjaya Sarji ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮಕ್ಕೆ ಸರ್ವರೀತಿಯ ಸಹಕಾರ ನೀಡುತ್ತೇನೆ. ಒಟ್ಟಾಗಿ ಯಶಸ್ವಿಗೊಳಿಸೋಣ- ಡಾ.ಧನಂಜಯ ಸರ್ಜಿ.

0

Dr. Dhananjaya Sarji ಶಿವಮೊಗ್ಗದಲ್ಲಿ ನವೆಂಬರ್ 30 ರಂದು ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ- 25 ,ಮಹಾಸಮರ್ಪಣೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಭಿಯಾನದ ಅಧ್ಯಕ್ಷ ಅಶೋಕ ಜಿ.ಭಟ್ ಅವರು ಕಾರ್ಯಕ್ರಮಕ್ಕೆ ವಿಧಾನಪರಿಷತ್ತಿನ ಸದಸ್ಯ ಡಾ.ಧನಂಜಯ ಸರ್ಜಿ ಅವರನ್ನ ಭೇಟಿಮಾಡಿದರು.
ಮೊದಲಿಗೆ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಾದಪೂರ್ವಕ ಕಳಿಸಿದ್ದ ಶಾಲು ಮತ್ತು ಪುಷ್ಪಹಾರವನ್ನ ಅಶೋಕಭಟ್ ಅವರು ಶಾಸಕ ಡಾ.ಧನಂಜಯ ಸರ್ಜಿ ಅವರಿಗೆ ಭಗವದ್ಗೀತಾ ಅಭಿಯಾನ ಸಮಿತಿ ಪರವಾಗಿ ಅರ್ಪಿಸಿದರು.

ಪೂರ್ವಸಿದ್ಧತೆ ಕುರಿತು
ಸವಿವರವಾಗಿ ಡಾ.ಧನಂಜಯ ಸರ್ಜಿ ಅವರೊಡನೆ ಅಶೋಕ ಭಟ್ ಅವರು ಚರ್ಚಿಸಿದರು.
ನವೆಂಬರ್ 30 ರಂದು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ
ಇಪ್ಪತ್ತು ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.
ಅದರಲ್ಲಿ ಈಗಾಗಲೇ ಗುರುತಿಸಿರುವ ಗುಂಪುಗಳಿಂದ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಸಾಮೂಹಿಕ ಪಠಣವನ್ನ ಅಂದು ಏರ್ಪಡಿಸಲಾಗಿದೆ.
ಹತ್ತುಸಾವಿರ ಶಾಲಾಮಕ್ಕಳು ಈ ಪಠಣದಲ್ಲಿ ತಮ್ಮ ದನಿಸೇರಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬಹುಪಾಲು ಶಾಲಾಮಕ್ಕಳು ಇದರಲ್ಲಿ
ಪಾಲ್ಗೊಳ್ಳಲಿದ್ದಾರೆ.
ಭಗವದ್ಗೀತಾ ಅಭಿಮಾನಿಗಳೂ ಕೂಡ ರಾಜ್ಯ ಎಲ್ಲಾಕಡೆಯಿಂದ ಆಗಮಿಸಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಎಂದು ಅಶೋಕ ಜಿ ಭಟ್ ವಿವರ ಮಾಹಿತಿಯನ್ನ
ಡಾ. ಸರ್ಜಿಯವರ ಗಮನಕ್ಕೆ ತಂದರು.

Dr. Dhananjaya Sarji ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಮಹಾ ಸಮರ್ಪಣೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.
ಅಪಾರ ಸಂಖ್ಯೆಯಲ್ಲಿ ಶಾಲಾಮಕ್ಕಳು ಆಗಮಿಸುತ್ತಿರುವುದರಿಂದ ಅವರ ಬಸ್ ಪ್ರಯಾಣದ ಬಗ್ಗೆ ಸೂಕ್ತ ಸುರಕ್ಷತೆ ,ಭದ್ರತೆ ಬಗ್ಗೆ ಆದ್ಯ ಗಮನ ನೀಡಬೇಕು. ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಶುಚಿಯಾದ ಆಹಾರ, ಕುಡಿಯುವ ನೀರು , ಪೆಂಡಾಲ್, ವೇದಿಕೆ, ಆಸನಗಳ ವ್ಯವಸ್ಥೆ ಬಗ್ಗೆ
ಸೂಕ್ತ ಜಾಗೃತಿವಹಿಸಬೇಕು.
ಎಂದು ಕೂಲಂಕಷವಾಗಿ ಚರ್ಚಿಸಿದರು.
ಈ ಕಾರ್ಯಕ್ರಮ ರಾಜ್ಯಮಟ್ಟದಾದ್ದರಿಂದ
ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಎಂದು ಶಾಸಕ ಡಾ.ಧನಂಜಯ ಸರ್ಜಿ ದೀರ್ಘವಾಗಿ ಮಾತುಕತೆಯಲ್ಲಿ ತಮ್ಮ
ಕಾಳಜಿ ಹಂಚಿಕೊಂಡರು.

ಚರ್ಚೆಯಲ್ಲಿ ಅಭಿಯಾನದ ಕಾರ್ಯದರ್ಶಿ ಟಿ.ಜೆ.ಲಕ್ಷ್ಮೀನಾರಾಯಣ, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ
ನಿವೃತ್ತ ತಹಶೀಲ್ದಾರ್
ಕೆ.ಜಿ.ಮಂಜುನಾಥ ಶರ್ಮ ಹಾಗೂ ಕೆಲೈವ್ ನ್ಯೂಸ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ. ಉಪಸ್ಥಿತರಿದ್ದರು.

CM Siddharamaiah ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಒಳ ಮೀಸಲಾತಿ ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ

0

CM Siddharamaiah ಒಳ ಮೀಸಲಾತಿ ಕುರಿತು ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ, ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮಾಜಿ ಸಚಿವರಾದ ಎಚ್. ಆಂಜನೇಯ, ವಿವಿಧೆಡೆಗಳಿಂದ ಆಗಮಿಸಿದ್ದ ಅಲೆಮಾರಿ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.

ಆರ್ಥಿಕವಾಗಿ ಹಿಂದುಳಿದವರಿಗೆ ಸೇವೆ ಉಚಿತವಾಗಿ ಮುಂದುವರೆಯಲಿ,- ಶಾಸಕಿ ಬಲ್ಕೀಷ್ ಬಾನು

0

ಕಳೆದ ನಾಲ್ಕು ವಾರಗಳಿಂದ ಉಚಿತ ಆರೋಗ್ಯ ತಪಾಸಣೆ ನಡೆಸುತ್ತಿರುವ ನಗರದ ದುರ್ಗಿಗುಡಿಯ ಪ್ರತಿಷ್ಠಿತ ತೃಪ್ತಿ ಹೆಲ್ತ್ ಕ್ಲೀನಿಕ್‌ನಿಂದ ಈ ಬಾರಿ ಬೀದಿಬದಿ ವ್ಯಾಪಾರಿಗಳಿಗೆ ಉಚಿತ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್‌ಸಿ ಬಲ್ಕಿಷ್ ಭಾನು, ತೃಪ್ತಿ ಆಸ್ಪತ್ರೆಯ ಸಂಸ್ಥಾಪಕ ಡಾ. ಚಂದ್ರಶೇಖರ್ ಅವರ ಸೇವೆ ನಿಜಕ್ಕೂ ಮೆಚ್ಚುವಂತಾದ್ದ ಅವರ ಸೇವೆ ಹೀಗೆ ಮುಂದುವರೆಯಲಿ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಎಲ್ಲ ರಿಗೂ ಉಚಿತವಾಗಿ ಇವರ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಆರೋಗ್ಯ ತಪಾಸಣೆ ನಡೆಯಲಿ ಎಂದು ಹಾರೈಸಿದರು.

ಚಿಕಿತ್ಸೆ ಪಡೆದ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಆಸ್ಪತ್ರೆ ಸಂಸ್ಥಾಪಕ ಡಾ. ಚಂದ್ರಶೇಖರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಣಿ, ಅಶೋಕ್ ಕುಮಾರ್ ಮತ್ತು ಜಮಿಯ ಮಸೀದಿ ಅಧ್ಯಕ್ಷ ರ‍್ವೀಜ್, ಪ್ರಮುಖರಾದ ಎಂ.ಡಿ. ಸರೀಫ್ ಹಾಗೂ ಮುಜೀಬ್ ಇನ್ನಿತರರಿದ್ದರು.

CM Siddharamaiah ಕನ್ನಡದ ಕನಸು ಸಾಕಾರಕ್ಕೆ ತ್ಯಾಗ,ಬಲಿದಾನ ನೀಡಿದ ಕನ್ನಾಡಾಭಿಮಾನಿಗಳನ್ನ ಸ್ಮರಿಸೋಣ : ಸಿದ್ಧರಾಮಯ್ಯ

0

(ಬೆಂಗಳೂರು ಪ್ರತಿನಿಧಿಯಿಂದ) CM Siddharamaiah ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮದ ಕನ್ನಡದ ಹಬ್ಬ ರಾಜ್ಯೋತ್ಸವಕ್ಕೆ ಚೈತನ್ಯಶಾಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಈ ದಿನ ಹೆಮ್ಮೆಯಿಂದ ಸ್ಮರಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

CM Siddharamaiah ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಶಿಕ್ಷಣ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ, ಬದುಕು ಕಟ್ಟಿಕೊಂಡಿರುವ ಎಲ್ಲರೂ ಕನ್ನಡಿಗರೇ, ನಮ್ಮವರೇ. ನಾವು – ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ.
ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ.

ನಾಡಬಂಧುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಜೈ ಭುವನೇಶ್ವರಿ, ಜೈ ಕರ್ನಾಟಕ ಎಂದಿದ್ದಾರೆ.

ಗಾಂಧೀಜಿಯವರ ಆದರ್ಶಗಳನ್ನ ಯುವಜನತೆ ಅಳವಡಿಸಿಕೊಂಡರೆ ಸದೃಢ ಸಮಾಜ ನಿರ್ಮಾಣ- ಸುರೇಶ್

0

ಮಹಾತ್ಮ ಗಾಂಧಿ ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ವೋದಯ ಮಂಡಲ ರಾಜ್ಯಾಧ್ಯಕ್ಷ ಸುರೇಶ್ ಹೇಳಿದರು.

ಗಾಂಧೀಜಿಯವರ ಮಾಸ ಅಂಗವಾಗಿ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸಮುದಾಯ ಸಂಸ್ಥೆಗಳಲ್ಲಿ ಆಯನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಭಾಷಣ ಸ್ಪರ್ಧೆ, ಜಾಗೃತಿ ಕಾರ್ಯಕ್ರಮ, ಚಿಂತನೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಅವರ ತತ್ವ, ಆದರ್ಶ ಗುಣಗಳು, ತ್ಯಾಗ ಹಾಗೂ ಅಹಿಂಸಾ ಮಾರ್ಗಗಳನ್ನು ಇಂದಿನ ಯುವ ಜನತೆ, ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಸದೃಢವಾದ ಸಮಾಜ ನಿರ್ಮಾಣ ಮಾಡಬಹುದು. ರಾಮರಾಜ್ಯ ಆಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.

ಗಾಂಧೀಜಿ ಅವರ ನಡೆನುಡಿಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಜೀವನ ಮೌಲ್ಯ ಹಾಗೂ ಸಾತ್ವಿಕ ಮನೋಭಾವ ಮೂಡುತ್ತದೆ. ಮಹಾರಾಷ್ಟ್ರದಲ್ಲಿ ಕೈದಿಯೊಬ್ಬ ಗಾಂಧೀಜಿ ಅವರ ಜೀವನ ಚರಿತ್ರೆಯಿಂದ ಪ್ರೇರಣೆಗೊಂಡು ಮನಪರಿವರ್ತನೆಯಾಗಿದ್ದ ಎಂದರು.

ಕರ್ನಾಟಕ ಸರ್ವೋದಯ ಮಂಡಲದ ಜಿಲ್ಲಾಧ್ಯಕ್ಷ ಆರ್.ಮನೋಹರ್ ಮಾತನಾಡಿ, ಗಾಂಧೀಜಿ ಅವರ ಜೀವನವು ಎಂದೆಂದಿಗೂ ಪ್ರೇರಣಾದಾಯಕ. ಅವರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದರಿಂದ ನಮ್ಮ ಜೀವನವನ್ನು ಹಸನು ಮಾಡಿಕೊಳ್ಳಬಹುದು ಎಂದು ಹೇಳಿದರು.

ಸರ್ವೋದಯ ಮಂಡಲದ ಜಿಲ್ಲಾ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲಾದ್ಯಂತ ಕಾಲೇಜುಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಾಂಧೀಜಿ ಅವರ ಮೌಲ್ಯಗಳನ್ನು ಪ್ರಚಾರ ಮಾಡಲಾಗುವುದು. ವಿದ್ಯಾರ್ಥಿಗಳು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಗಣೇಶ್ ಭಟ್ ಮಾತನಾಡಿ, ಗಾಂಧೀಜಿ ಅವರ ಮೌಲ್ಯ ಆಧಾರಿತ ಜೀವನವು ನಮಗೆಲ್ಲ ಮಾದರಿಯಾಗಿದೆ. ಇಲ್ಲಿರುವ ಒಬ್ಬ ವಿದ್ಯಾರ್ಥಿಗಳು ಸಹ ಇಂತಹ ಪವಿತ್ರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಶಕ್ಕಾಗಿ ದುಡಿದ ಮಹನಿಯರ ಸ್ಮರಣೆಯಿಂದ ಇತಿಹಾಸದ ಪರಿಚಯವಾಗುತ್ತದೆ ಎಂದರು.

ಸಮಾರಂಭದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಶಿಲ್ಪಾ ಪಾಟೀಲ್, ದೈಹಿಕ ಶಿಕ್ಷಣ ಅಧಿಕಾರಿ ಡಾ. ರೋಹನ್ ಡಿಕಾಸ್ಟ, ಸಹಾಯಕ ಪ್ರಾಧ್ಯಾಪಕ ರಜತ್ ದೀಕ್ಷಿತ್, ಗೌರೀಶ್ ಬಾಡ್ಕರ್ ಮತ್ತಿತರರು ಇದ್ದರು.

Women and Child Development Department ಮಾದಕ ವಸ್ತು ಬಳಕೆಯಿಂದ ಬದುಕು ನಾಶ.ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ- -ನ್ಯಾ. ಸಂತೋಷ್.

0

Women and Child Development Department ಮಾದಕ ವಸ್ತುಗಳನ್ನು ಬಳಸುವುದರಿಂದ ಬದುಕು ನಾಶವಾಗಲಿದ್ದು, ಸಾರ್ವಜನಿಕರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶ ಸಂತೋಷ್ ಹೇಳಿದರು.

ಶಿವಮೊಗ್ಗ ನಗರದ ಬಸವೇಶ್ವರ ಕಾಲೇಜಿನ ಆವರಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಶಿವಮೊಗ್ಗ, ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನಶಾ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳು ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಜಾಗೃತಿ ಹಾಗೂ ಪ್ರತಿಜ್ಞಾ ಬೋಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಶಾ ಮುಕ್ತ ಭಾರತ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಮಾದಕ ವಸ್ತುಗಳು ಬಳಸುವುದರಿಂದ ಬದುಕನ್ನು ಸಂಪೂರ್ಣವಾಗಿ ನಾಶವಾಗುವ ಜತೆಯಲ್ಲಿ ಕುಟುಂಬದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಮಾನವೀಯ ಮೌಲ್ಯಗಳನ್ನು ನಾವು ಉಳಿಸಿ ಬೆಳೆಸಬೇಕು. ನಮ್ಮ ಮಕ್ಕಳಲ್ಲಿ ಬೆಳೆಸುವುದರ ಜೊತೆಗೆ ಮದ್ಯ ಮತ್ತು ಮಾದಕ ವಸ್ತು ಬಳಕೆಯಿಂದ ಅವರನ್ನು ದೂರವಿಡಬೇಕು. ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸೋಣ. ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ತುಂಬಾ ಅಗತ್ಯ. ಯಾವುದೇ ಆಕರ್ಷಣೆಗೆ ಒಳಗಾಗದೆ ಮತ್ತು ಇಂತಹ ಅಪರಾಧಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಬೇಕು.

ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಇರಬೇಕು. ವಿದ್ಯಾರ್ಥಿಗಳು ಉತ್ತಮ ಜೀವನ ಕೌಶಲ್ಯಗಳನ್ನು ಸಕಾರಾತ್ಮಕ ಭಾವನೆಗಳನ್ನು ರೂಡಿಸಿಕೊಳ್ಳಬೇಕು. ಇದರಿಂದ ಸದೃಢವಾದ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಪಾತ್ರ ತುಂಬಾ ಪ್ರಮುಖವಾಗಿರುತ್ತದೆ ಎಂದರು.

Women and Child Development Department ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಬಸವೇಶ್ವರ ಎಜುಕೇಷನ್ ಅಕಾಡೆಮಿ ಅಧ್ಯಕ್ಷ ಮಹೇಶ್ವರಪ್ಪ, ಕಾರ್ಯದರ್ಶಿ ಎಸ್.ಪಿ.ಜಗನ್ನಾಥ್, ನಿರ್ದೇಶಕ ಆನಂದ್ ವಾಲಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

MESCOM ನವೆಂಬರ್ 4. ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ

0

MESCOM ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ನ. 04 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

MESCOM ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9448289519.