Tuesday, May 5, 2026
Tuesday, May 5, 2026
Home Blog Page 11

B.Y. Raghavendra ಸಾಗರ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ಪ್ರಸ್ತಾವನೆ: ಸ್ಪಷ್ಟ ವಿರೋಧವಿದೆ- ಸಂಸದ ರಾಘವೇಂದ್ರ

0

B.Y. Raghavendra “ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ; ಜನರು ಆತಂಕ ಪಡುವ ಅವಶ್ಯಕತೆಯಿಲ್ಲ”- ‘ಜನರಿಗೆ ಹಾಗೂ ಪರಿಸರಕ್ಕೆ ಹಾನಿಯಾಗುವ ಯೋಜನೆ ಜಾರಿಗೆ ನಮ್ಮ ವಿರೋಧವಿದೆ’

ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸಂಬಂಧ ಗ್ರಾಮೀಣ ಭಾಗದ ಜನರು ಆತಂಕದಲ್ಲಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ಕೆಳಕಂಡ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ.

ಕೇಂದ್ರ ಸರ್ಕಾರ ಅಧೀನದ ಎನ್.ಟಿ.ಪಿ.ಸಿ (National Thermal Power Corporation) ಸಂಸ್ಥೆಯಿಂದ ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ವಿಜಯಪುರ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಸೂಕ್ತ ಸ್ಥಳಗಳ ಆಯ್ಕೆಗಾಗಿ ಪ್ರಾಥಮಿಕ ಅಧ್ಯಯನಗಳು ಹಾಗೂ ಭೂ-ವೈಜ್ಞಾನಿಕ ಪರಿಶೀಲನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

B.Y. Raghavendra ವಿಷಯ ಗಮನಕ್ಕೆ ಬರುತ್ತಿದ್ದಂತೆ, ಶಿವಮೊಗ್ಗ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಲಾಗಿಲ್ಲವೆಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶರಾವತಿ ಸಂತ್ರಸ್ತರಿಗೆ ಇಂದಿಗೂ ಸಮರ್ಪಕ ಭೂಪರಿಹಾರ ಒದಗಿಸಲಾಗಿಲ್ಲ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪರಿಸರ ಆಸಕ್ತರು ಮತ್ತು ಬುದ್ಧಿ ಜೀವಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿರುತ್ತಾರೆ. ಈ ಸಂಬಂಧ ಕೇಂದ್ರ ಸಚಿವರಿಗೆ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿದಂತೆ ಪ್ರಸ್ತಾವನೆಯನ್ನು ಕೈಬಿಡಲು ಮನವರಿಕೆ ಮಾಡಿಕೊಡಲಾಗುವುದು.

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಸಾರ್ವಜನಿಕರು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಪರಿಸರ ಹಾನಿ ಉಂಟಾಗುವ ಯಾವುದೇ ಯೋಜನೆಗೂ ತಮ್ಮ ಸ್ಪಷ್ಟ ವಿರೋಧವಿದ್ದು, ಜನರ ಹಿತಾಸಕ್ತಿ ಕಾಪಾಡಲು ಬದ್ಧರಾಗಿರುವುದು.

Klive Special Article ಕೆ ಲೈವ್ ವಿಶೇಷ. ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನಾಚರಣೆ. ಲೇ: ಅಡ್ವೋಕೇಟ್ ಸಾಧ್ವಿ.ಸಿ.ಕಾಂತ್.

0

Klive Special Article  ಲೇಖಕರು: ಅಡ್ವೋಕೇಟ್ ಸಾಧ್ವಿ ಸಿ. ಕಾಂತ್, ಎಸ್.ಸಿ.ಕೆ & ಅಸೋಸಿಯೇಟ್ಸ್, ಶಿವಮೊಗ್ಗ
ಪ್ರತಿ ವರ್ಷ ಏಪ್ರಿಲ್ 26 ರಂದು ಆಚರಿಸಲಾಗುವ ‘ವಿಶ್ವ ಬೌದ್ಧಿಕ ಆಸ್ತಿ ದಿನ’ (World IP Day) ಕೇವಲ ಕಾನೂನು ಕ್ಯಾಲೆಂಡರ್‌ನ ದಿನಾಂಕವಲ್ಲ, ಬದಲಿಗೆ ಸಂಕೀರ್ಣ ಕಾನೂನು ಚೌಕಟ್ಟುಗಳು ಮತ್ತು ಸೃಷ್ಟಿಕರ್ತರ ನಡುವಿನ ಅಂತರವನ್ನು ಕಡಿಮೆ ಮಾಡುವ ಜಾಗತಿಕ ವೇದಿಕೆಯಾಗಿದೆ. 2026ರ “ಐಪಿ ಮತ್ತು ಕ್ರೀಡೆಗಳು: ರೆಡಿ, ಸೆಟ್, ಇನ್ನೋವೇಟ್” ಎಂಬ ಥೀಮ್, ಕ್ರೀಡಾ ಪ್ರಪಂಚದ ಗಡಿಗಳನ್ನು ವಿಸ್ತರಿಸುವ ತೆರೆಯ ಹಿಂದಿನ ನಾವೀನ್ಯಕಾರರನ್ನು (ಎಂಜಿನಿಯರ್‌ಗಳು, ವಿನ್ಯಾಸಕರು ಮತ್ತು ಉದ್ಯಮಿಗಳನ್ನು) ಆಚರಿಸುತ್ತದೆ. ಈ ಜಾಗತಿಕ ಸಂಭಾಷಣೆಯು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ; ಏಕೆಂದರೆ, ನಮ್ಮ ದೇಶವು ಸಾಂಪ್ರದಾಯಿಕ ‘ಏಕ-ಕ್ರೀಡಾ’ ರಾಷ್ಟ್ರದ ಹಣೆಪಟ್ಟಿ ಕಳಚಿ, ಹೊಸ ಫ್ರ್ಯಾಂಚೈಸಿ ಲೀಗ್‌ಗಳು ಮತ್ತು ಐತಿಹಾಸಿಕ ಒಲಿಂಪಿಕ್ ಸಾಧನೆಗಳೊಂದಿಗೆ ಬೃಹತ್ ಕ್ರೀಡಾ ಪುನರುಜ್ಜೀವನವನ್ನು ಕಾಣುತ್ತಿದೆ. ಭಾರತೀಯ ಕ್ರೀಡೆಯ ಭವಿಷ್ಯವು ಕೇವಲ ಆಟಗಾರರ ಪ್ರತಿಭೆಯಿಂದ ಮಾತ್ರವಲ್ಲ, ಅದನ್ನು ಬೆಂಬಲಿಸುವ ದೃಢವಾದ ತಾಂತ್ರಿಕ, ವಾಣಿಜ್ಯ ಮತ್ತು ಐಪಿ ಮೂಲಸೌಕರ್ಯದಿಂದ ನಿರ್ಧರಿಸಲ್ಪಡುತ್ತದೆ ಎಂಬುದಕ್ಕೆ ಈ ವರ್ಷದ ಥೀಮ್ ಒಂದು ಆಚರಣೆ ಹಾಗೂ ಕಾರ್ಯತಂತ್ರದ ಎಚ್ಚರಿಕೆಯ ಗಂಟೆಯಾಗಿದೆ.
ಭಾರತೀಯ ಕ್ರೀಡಾಪಟುಗಳಿಗೆ, ಬೌದ್ಧಿಕ ಆಸ್ತಿಯು ಮೈದಾನದ ಹೊರಗಿನ ಅತ್ಯಮೂಲ್ಯ ಆಸ್ತಿಯಾಗಿ ವೇಗವಾಗಿ ಬದಲಾಗುತ್ತಿದೆ. ಇಂದಿನ ಕ್ರೀಡಾಪಟುಗಳು ಸಂಪೂರ್ಣವಾಗಿ ಸ್ವಯಂ-ನಿರ್ಮಿತ ಬ್ರಾಂಡ್‌ಗಳಾಗಿದ್ದಾರೆ. ವ್ಯಕ್ತಿತ್ವ ಹಕ್ಕುಗಳ ರಕ್ಷಣೆ (personality rights), ಸಿಗ್ನೇಚರ್ ಲೋಗೋಗಳು ಅಥವಾ ಕ್ಯಾಚ್‌ಫ್ರೇಸ್‌ಗಳ ಟ್ರೇಡ್‌ಮಾರ್ಕಿಂಗ್ ಮತ್ತು ಅವರ ಡಿಜಿಟಲ್ ಕಂಟೆಂಟ್‌ನ ಕಾಪಿರೈಟಿಂಗ್ – ಇವು ಭಾರತೀಯ ಕ್ರೀಡಾ ತಾರೆಗಳು ತಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಅವರು ವೇದಿಕೆಯಿಂದ ಕೆಳಗಿಳಿದ ಬಹಳ ಸಮಯದ ನಂತರವೂ ತಮ್ಮ ಕಷ್ಟಪಟ್ಟು ಗಳಿಸಿದ ಯಶಸ್ಸನ್ನು ಆರ್ಥಿಕವಾಗಿ ಬಳಸಿಕೊಳ್ಳಲು ಖಚಿತಪಡಿಸುತ್ತವೆ. ಹೆಚ್ಚು ಡಿಜಿಟಲ್ ಮತ್ತು ಕಂಟೆಂಟ್-ಆಧಾರಿತ ಮಾರುಕಟ್ಟೆಯಲ್ಲಿ, ಕ್ರೀಡಾಪಟುಗಳು ತಮ್ಮದೇ ಆದ ನಿರೂಪಣೆಗಳನ್ನು (narratives) ನಿಯಂತ್ರಿಸಲು ಇದು ಅಧಿಕಾರ ನೀಡುತ್ತದೆ ಹಾಗೂ ಅವರ ಹೆಸರು ಮತ್ತು ಚಿತ್ರಣಗಳ ಅನಧಿಕೃತ ವಾಣಿಜ್ಯ ಶೋಷಣೆಯನ್ನು ತಡೆಯುತ್ತದೆ.
Klive Special Article  ಭಾರತದ ಬೆಳೆಯುತ್ತಿರುವ ಕ್ರೀಡಾ ಉದ್ಯಮಗಳ ಮೇಲಿನ ಪ್ರಭಾವವೂ ಅಷ್ಟೇ ನಿರ್ಣಾಯಕವಾಗಿದೆ. ನಮ್ಮ ದೇಶವು ಉಭಯ ಶಕ್ತಿಕೇಂದ್ರಗಳಿಗೆ ನೆಲೆಯಾಗಿದೆ: ಜಲಂಧರ್ ಮತ್ತು ಮೀರತ್‌ನಂತಹ ಕೇಂದ್ರಗಳಲ್ಲಿನ ಸಾಂಪ್ರದಾಯಿಕ ಕ್ರೀಡಾ ಸಲಕರಣೆಗಳ ತಯಾರಕರು, ಮತ್ತು ಇಲ್ಲಿಯೇ ಬೆಂಗಳೂರಿನಂತಹ ನಗರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅತ್ಯಾಧುನಿಕ ಸ್ಪೋರ್ಟ್ಸ್-ಟೆಕ್ (sports-tech) ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ. ಈ ಉದ್ಯಮಗಳಿಗೆ, ಬಲವಾದ ಐಪಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಸ್ಥಳೀಯ ನಾವೀನ್ಯತೆ ಮತ್ತು ಜಾಗತಿಕ ಪ್ರಾಬಲ್ಯದ ನಡುವಿನ ಸೇತುವೆಯಾಗಿದೆ. ದೇಶೀಯ ಸ್ಟಾರ್ಟ್‌ಅಪ್ ಎಐ-ಚಾಲಿತ (AI-driven) ಕಾರ್ಯಕ್ಷಮತೆ ವಿಶ್ಲೇಷಣಾ ಸಾಧನವನ್ನು ಪೇಟೆಂಟ್ ಮಾಡಿದಾಗ ಅಥವಾ ಸ್ಥಳೀಯ ತಯಾರಕರು ಸುಸ್ಥಿರ ಕ್ರೀಡಾ ಪರಿಕರಗಳಿಗಾಗಿ ಕೈಗಾರಿಕಾ ವಿನ್ಯಾಸವನ್ನು (industrial design) ನೋಂದಾಯಿಸಿದಾಗ, ಅವರು ಇಡೀ ಭಾರತೀಯ ಕ್ರೀಡಾ ಉದ್ಯಮದ ಮಟ್ಟವನ್ನು ಎತ್ತರಿಸುತ್ತಾರೆ.
ಅಂತಿಮವಾಗಿ, ಭಾರತೀಯ ಕ್ರೀಡೆಗಳ ಸಂದರ್ಭದಲ್ಲಿ ‘ವಿಶ್ವ ಐಪಿ ದಿನ’ವನ್ನು ಆಚರಿಸುವುದು, ಕ್ರೀಡಾ ಕ್ಷೇತ್ರದಲ್ಲಿನ ಆಳವಾದ ಬದಲಾವಣೆಯನ್ನು ಗುರುತಿಸುವುದಾಗಿದೆ. ನಾವೀನ್ಯಕಾರರಿಗೆ ಐಪಿ ರಕ್ಷಣೆಯನ್ನು ಹೆಚ್ಚು ಸುಲಭವಾಗಿ ಒದಗಿಸುವ ವಿಕಸನಗೊಳ್ಳುತ್ತಿರುವ ಚೌಕಟ್ಟುಗಳು ಮತ್ತು ದೇಶೀಯ ಉಪಕ್ರಮಗಳ ಬೆಂಬಲದೊಂದಿಗೆ, ಭಾರತವು ಜಾಗತಿಕ ಕ್ರೀಡಾ ತಂತ್ರಜ್ಞಾನದ ಕೇವಲ ಗ್ರಾಹಕನಾಗದೆ, ಪ್ರಾಥಮಿಕ ಸೃಷ್ಟಿಕರ್ತನಾಗಲು ಸಜ್ಜಾಗಿದೆ. ಸ್ಥಳೀಯ ಕಾರ್ಯಾಗಾರಗಳು, ತರಬೇತಿ ಅಕಾಡೆಮಿಗಳು ಮತ್ತು ಟೆಕ್ ಇನ್‌ಕ್ಯುಬೇಟರ್‌ಗಳಲ್ಲಿ ಹುಟ್ಟುವ ಅದ್ಭುತ ಆಲೋಚನೆಗಳನ್ನು ರಕ್ಷಿಸುವ ಮೂಲಕ, ಭಾರತೀಯ ಕ್ರೀಡಾ ಮನೋಭಾವವು ನಮಗೆ ಸ್ಫೂರ್ತಿ ನೀಡುವ ಕ್ರೀಡಾಪಟುಗಳಷ್ಟೇ ನವೀನ, ಸ್ಪರ್ಧಾತ್ಮಕ ಮತ್ತು ಬಲವಾಗಿ ರಕ್ಷಿಸಲ್ಪಟ್ಟಿದೆ ಎಂದು ನಾವು ಖಚಿತಪಡಿಸುತ್ತೇವೆ.

Pailwaan ಸೊರಬದಲ್ಲಿ ಆಕರ್ಷಕ ಕುಸ್ತಿ ಪಂದ್ಯ. ಹಾವೇರಿ ಪೈಲ್ವಾನ್ ವಿಜಯ್ ಗೆ ” ಪೈಲ್ವಾನ್ ಲಿಂಗರಾಜ್ ಪ್ರಶಸ್ತಿ.

0

Pailwaan ತಾಲೂಕಿನ ಹುಲ್ತಿಕೊಪ್ಪ ಗ್ರಾಮದಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯಲ್ಲಿ ಹಾವೇರಿಯ ಕುಸ್ತಿಪಟು ವಿಜಯ್ ಹಾಗೂ ಆನವಟ್ಟಿಯ ವಿಹಾನ್ ಅವರನ್ನು ಅಖಾಡದಲ್ಲಿ ಮಣಿಸುವ ಮೂಲಕ ಹಳೇಸೊರಬದ ಪೈಲ್ವಾನ್ ಲಿಂಗರಾಜ್ ಪ್ರಶಸ್ತಿಗೆ ಭಾಜನರಾದರು. ಪೈಲ್ವಾನ್ ಲಿಂಗರಾಜ್ ಹಳೇಸೊರಬ ಅವರಿಗೆ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಪುರುಷೋತ್ತಮ ಹುಲ್ತಿಕೊಪ್ಪ, ಗಣೇಶ್, ಅರುಣ್, ಮಂಜುನಾಥ, ಶ್ರೀಧರ ಗುಂಡಶೆಟ್ಟಿಕೊಪ್ಪ, ಎಂ.ಡಿ. ಬಸವರಾಜ್, ನಾಗರಾಜ, Pailwaan ಗಿರೀಶ್ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳು, ನೆರೆಯ ತಾಲೂಕು ಮತ್ತು ಜಿಲ್ಲೆಯ ಸಾವಿರಾರು ಸಂಖ್ಯೆಯ ಕುಸ್ತಿ ಅಭಿಮಾನಿಗಳು ಇದ್ದರು.

Shimoga News ರಾಜ್ಯ ಸರ್ಕಾರದ ಕೃಷಿಪರಿಕರ ಮಾರಾಟ ನೀತಿ ವಿರೋಧಿಸಿ ಏಪ್ರಿಲ್ 27 ರಂದು ವಹಿವಾಟು ಬಂದ್- ರಾಕೇಶ್ ಗೌಡ.

0

Shimoga News ರಾಜ್ಯದ ಕೃಷಿ ಪರಿಕರ ಮಾರಾಟಗಾರರಿಗೆ ರಾಷ್ಟ್ರ ಹಾಗೂ ರಾಜ್ಯದ ಕೃಷಿ ಪರಿಕರ ಮಾರಾಟದ ನೀತಿ ರೀತಿಗಳು ಮಾರಕವಾಗಿದ್ದು ಅದನ್ನು ವಿರೋಧಿಸಿ ಏ. 27 ರ ಸೋಮವಾರ ರಾಜ್ಯಾದ್ಯಂತ ಎಲ್ಲ ಕೃಷಿ ಪರಿಕರ ಮಾರಾಟಗಾರರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಿ ಯಾವುದೇ ವಹಿವಾಟನ್ನು ನಡೆಸದೆ ಒಂದು ದಿನದ ಬಂದ್ ಆಚರಿಸಲಾಗುವುದೆಂದು ರಾಜ್ಯ ಸಮಿತಿಯ ಉಪಾಧ್ಯಕ್ಷ ರಾಕೇಶ್ ಗೌಡ ಹೇಳಿದರು. ‌‌‌‌
ಅವರು ಇಂದು ಮದ್ಯಾಹ್ನ ಜಿಲ್ಲಾ ಕೃಷಿ ಪರಿಕರ ಮಾರಾಟಗಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತುರ್ತುಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ರೈತರ ಬಹುಕಾಲದ ಬೇಡಿಕೆಗಳಾದ ಡಿಎಪಿ ಮತ್ತು ಯೂರಿಯಾ ಗೊಬ್ಬರಗಳ ಜೊತೆ ಮುತ್ತು ಪೂರಕವಾಗಿ ಬೇರೆ ಉತ್ಪನ್ನಗಳನ್ನು ಉತ್ಪಾದಕರು ಲಿಂಕ್ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಎಲ್ಲ ರಸಗೊಬ್ಬರಗಳ ಮೇಲೆ ಶೇಕಡ ಎಂಟು ಪರ್ಸೆಂಟ್ ಡೀಲರ್ ಲಾಭಾಂಶ ಇರುವ ಇರುವ ರೀತಿಯಲ್ಲಿ ನಿಗದಿ ಮಾಡಬೇಕು ಎಲ್ಲ ರಸಗೊಬ್ಬರಗಳನ್ನು ಅಂಗಡಿಯವರೆಗೂ ಕೊಡುವ ಹಾಗೆ ಕ್ರಮ ಕೈಗೊಳ್ಳ ಬೇಕಲ್ಲದೆ ಯಾವುದೇ ಪರಿಕರಗಳು ಕಳಪೆ ಎಂದು ಕಂಡು ಬಂದಾಗ ಉತ್ಪಾದಕ ಕಂಪನಿಯವರ ಮೇಲೆ ಕ್ರಮ ಕೈಗೊಳ್ಳಬೇಕೆ ಹೊರತು ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಬಾರದೆಂದು ಒತ್ತಾಯಿಸುವುದಲ್ಲದೆ ಮತ್ತಿತರ ಅನೇಕ ಕೃಷಿ Shimoga News ಪರಿಕರ ಮಾರಾಟ ನೀತಿಗಳನ್ನ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗಮನಕ್ಕೆ ತರಲಾಗುವುದೆಂದು ಅವರು ಹೇಳಿದರು.
ಇದೇ ತಿಂಗಳ 27ರ ಸೋಮವಾರದಂದು ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ತಮ್ಮ ಅಂಗಡಿಗಳನ್ನು ಮುಚ್ಚಿ ಯಾವುದೇ ವಹಿವಾಟನ್ನು ನಡೆಸದೆ ಬಂದ್ ಗೆ ಸಹಕಾರ ನೀಡಬೇಕೆಂದು ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೀರಶೇಕರ್ ವಹಿಸಿದ್ದರು ಉಪಾಧ್ಯಕ್ಷ ರುಗಳಾದ ಈಶ್ವರಪ್ಪ ಮತ್ತು ನಾಗೇಶ್ ಬಾಬು ಸಂಘದ ಕಾರ್ಯದರ್ಶಿ ಸಿ. ಲೋಕೇಶ್ವರ ಮತ್ತಿತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

SN Channabasappa ವಿದ್ಯಾರ್ಥಿಗಳು ಕೇವಲ ಪದವೀಧರರಾದರೆ ಸಾಲದು.ಶಿಸ್ತು ಮತ್ತು ಸೇವಾ ಮನೋಭಾವನೆ ಮೈಗೂಡಿಸಿಕೊಳ್ಳಬೇಕು- ಶಾಸಕ ಚನ್ನಿ.

0

SN Channabasappa “ವಿದ್ಯಾರ್ಥಿಗಳು ಕೇವಲ ಪದವೀಧರರಾದರೆ ಸಾಲದು, ಶಿಸ್ತು ಮತ್ತು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸಮಾಜದ ಆಸ್ತಿಯಾಗಬೇಕು,” ಎಂದು ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಕರೆ ನೀಡಿದರು.

ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ನೀಡುವ ಇಂತಹ ವೇದಿಕೆಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಹಕಾರಿ. ದೇಶದ ರಕ್ಷಣೆ ಮತ್ತು ಸೇವೆಯಲ್ಲಿ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕಗಳ ಪಾತ್ರ ಮಹತ್ತರವಾದುದು ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Department of School Education ಪ್ರಥಮ ಪಿಯುಸಿ ದಾಖಲಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

0

Department of School Education ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಕವಶಿಸಸಂ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜುಗಳಿಗೆ 2026-27 ನೇ ಸಾಲಿನ ಪ್ರಥಮ ಪಿ.ಯು.ಸಿ.ಯ ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್. ಕೋರ್ಸ್ ಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿಲಾಗಿದೆ.
2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಆಸಕ್ತ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಸಾಮಾನ್ಯ/ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಏಪ್ರಿಲ್ 29 ರೊಳಗಾಗಿ ಜಾಲತಾಣ http://kreis.karnataka.gov.in ರಲ್ಲಿ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಯಾ ವಸತಿ ಕಾಲೇಜುಗಳಲ್ಲಿ ದಾಖಲಾತಿಯ ಸಂದರ್ಭದಲ್ಲಿ 02 ಭಾವಚಿತ್ರ, ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ, ಎಸ್‌ಎಟಿಎಸ್ ನಂಬರ್, ಆಧಾರ್ ಕಾರ್ಡ್ ನಕಲು ಪ್ರತಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಕಲು ಪ್ರತಿ, ಪೋಷಕರ ಮತ್ತು ಹಿಂದಿನ ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ, ವಿಶೇಷ ಪ್ರಮಾಣ ಪತ್ರ (ಇದ್ದಲ್ಲಿ) ಇವುಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Department of School Education ಕಾಲೇಜುಗಳ ವಿವರ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಗಾಜನೂರು-56 ಶಿವಮೊಗ್ಗ ತಾಲ್ಲೂಕು ಮೊ.ಸಂ.9739977365, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹೊಸೂರು-908 ಶಿಕಾರಿಪುರ ತಾಲ್ಲೂಕು ಮೊ. ಸಂ. 8971701958, ಅಟಲ್ ಬಿಹಾರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆವಿನಹಳ್ಳಿ-584 ಸಾಗರ ತಾಲ್ಲೂಕು ಮೊ.ಸಂ.9480767164/6363184683, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆನವೇರಿ-57, ಭದ್ರಾವತಿ ತಾಲೂಕು-8105352698 ಸಂಪರ್ಕಿಸುವAತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N. Channabasappa ಡಾ.ರಾಜ್ ಅವರ ಸಿನಿಮಾ, ಪಾತ್ರಗಳು ಸಮಾಜ ತಿದ್ದುವ ರೀತಿಯಲ್ಲಿವೆ- ಎಸ್.ಎನ್.ಚನ್ನಬಸಪ್ಪ.

0

S.N. Channabasappa ಡಾ.ರಾಜ್‌ಕುಮಾರ್ ಸಿನಿಮಾಗಳು ಜೀವನ ಪಾಠದಂತಿದ್ದು, ಅವರ ಪ್ರತಿ ಪಾತ್ರ ಸಮಾಜವನ್ನು ತಿದ್ದುವ ರೀತಿಯಲ್ಲಿವೆ ಹಾಗೂ ಬದುಕಿಗೆ ಶಕ್ತಿ ತುಂಬುವುದರೊAದಿಗೆ ಜಾಗೃತಿ ಮೂಡಿಸುವಂತಿವೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಸ್ಮರಿಸಿದರು.
ಜಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪದ್ಮಭೂಷಣ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ, ಕನ್ನಡದ ವರನಟ ಡಾ.ರಾಜ್ ಕುಮಾರ್‌ರವರ 97 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವತಾ ಮನುಷ್ಯ, ಕಸ್ತೂರಿ ನಿವಾಸ, ಸತ್ಯ ಹರಿಶ್ಚಂದ್ರ, ಸತ್ಯಕ್ಕೆ ಸಾವಿಲ್ಲ, ಹೀಗೆ ಅವರ ಎಲ್ಲ ಸಿನಿಮಾಗಳು ಕೌಟುಂಬಿಕ ಮೌಲ್ಯ, ಸಾಮಾಜಿಕ ಜವಾಬ್ದಾರಿ ಮತ್ತು ದುಶ್ಚಗಳನ್ನು, ಅನಿಷ್ಟ ಪದ್ದತಿಗಳನ್ನು ವಿರೋಧಿಸುವ, ನಿಸ್ವಾರ್ಥ ಸೇವೆ, ತ್ಯಾಗದ ಗುಣಗಳು, ದುಡಿಮೆ ಗೌರವ ತರುವ ತತ್ವಗಳನ್ನು ಹೊಂದಿದ್ದು ಬಂಗಾರದ ಮನುಷ್ಯ ಚಿತ್ರ ನೋಡಿದ ಹಲವಾರು ಯುವಕರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆಂದು ಸ್ಮರಿಸಿದರು.
ಅವರ ಸಿನೆಮಾಗಳಲ್ಲಿ ವಿಶೇಷವಾಗಿ ಕನ್ನಡ ಭಾಷಾ ಪ್ರೇಮ, ದೇಶ ಭಕ್ತಿಯನ್ನು ಕಾಣಬಹುದು. ಹಾಗೂ ಮಾನವೀಯ ಗುಣಗಳೊಂದಿಗೆ ಸರಳತೆಯನ್ನು ಕಾಣಬಹುದಾಗಿದೆ.
ರಾಜ್ ಕುಮಾರ್ ಎಂದರೆ ಒಂದು ಸಂಸ್ಕೃತಿ, ಜೀವನ, ಸಾಹಿತ್ಯ ಎಲ್ಲವೂ ಆಗಿದ್ದು ಅವರು ಕಲಾ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬAತೆ ಎಲ್ಲಾ ಹಂದರದಲ್ಲೂ ಅವರು ಅಭಿನಯಿಸಿದ್ದಾರೆ . ಸಮಾಜದ ಅಂಕುಡೊAಕನ್ನು ಕಲೆಯ ಮೂಲಕ ತಿದ್ದುವ ಕೆಲಸ ಮಾಡಿದ್ದಾರೆ.
ಡಾ.ರಾಜ್ ಕುಮಾರ್ ಕಲಾಭಿಮಾನಿಗಳ ಆರಾಧ್ಯದೈವ. ಅವರ ಸಿನಿಮಾ ಹಾಡುಗಳೆಂದರೆ ಜೀವನ ಸಂದೇಶ ಸಾರುವ ಅರ್ಥ ಗರ್ಭಿತ ಗಾಥೆಗಳು. ಅವರನ್ನು ಅಪಹರಿಸಿದ್ದ ಕಾಡುಗಳ್ಳ ವೀರಪ್ಪನ್ ಮನಸ್ಸನ್ನು ಸಹ ಗೆದ್ದ ವ್ಯಕ್ತಿಯಾರಾದರೂ ಇದ್ದರೆ ಅದು ರಾಜ್ ಕುಮಾರ್ ಎಂದರು.
ಮನುಕುಲಕ್ಕೆ ಅಗತ್ಯವಾದ ಸತ್ಯ, ಪ್ರಾಮಾಣಿಕತೆ, ದಯೆ, ಪ್ರೀತಿ, ದೇಶಭಕ್ತಿ ಹೀಗೆ ಎಲ್ಲಾ ಸಂಗತಿಗಳು ಅವರ ಸಿನಿಮಾಗಳಲ್ಲಿ ಇದೆ. ಗೋಕಾಕ್ ವರದಿ ಚಳುವಳಿ ವೇಳೆ ಡಾ. ರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿದ್ದರು. ಕನ್ನಡ ನೆಲ, ಜಲ ಭಾಷೆಗೆ ಅಪಮಾನ ಆಗಬಾರದು, ಅದನ್ನು ಸಹಿಸುವುದಿಲ್ಲ ಎನ್ನುತ್ತಿದ್ದರು. ಅಣ್ಣಾವ್ರು ಶಿವಮೊಗ್ಗಕ್ಕೆ ಬಂದಾಗ ಅವರ ಮೆರವಣಿಗೆ ಮಾಡಲಾಗಿತ್ತು, ಆಗ ಇಡೀ ಭದ್ರಾವತಿ ಜನ ಪ್ರವಾಸಿ ಮಂದಿರಕ್ಕೆ ರಾಜ್ ಕುಮಾರ್ ರವರ ದರ್ಶನ ಮಾಡಲು ಬಂದಿದ್ದರು ಎಂದು ಸ್ಮರಿಸಿದರು.
ಡಾ. ರಾಜ್ ಕುಮಾರ್ ಅವರನ್ನು ವಿರೋಧ ಮಾಡಿದವರು ಯಾರೂ ಇಲ್ಲ. ಅವರೊಬ್ಬ ಅಜಾತಶತೃ. ಅವರು ಕರ್ನಾಟಕಕ್ಕೆ ದೊಡ್ಡ ಆಸ್ತಿ. ಅವರು ಹಾಕಿಕೊಟ್ಟಿರುವ ಆದರ್ಶದ ಮಾರ್ಗದಲ್ಲಿ ಜೀವನವನ್ನು ನಡೆಸೋಣ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ದೂರಿಯಾಗಿ ಜನ್ಮ ದಿನವನ್ನು ಆಚರಣೆ ಮಾಡೊಣ ಎಂದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕಳವಕಟ್ಟಿ ಮಾತನಾಡಿ, ಡಾ.ರಾಜ್ ಕುಮಾರ್ ರವರದ್ದು ಮೇರು ವ್ಯಕ್ತಿತ್ವ. ಅವರು ಲಕ್ಷಾಂತರ ಜನರಿಗೆ ಆದರ್ಶಪ್ರಾಯರಾಗಿದ್ದು, ಅವರ ಸಿನಿಮಾಗಳು ಮನರಂಜನೆ ಮಾತ್ರವಲ್ಲದೇ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ನೀಡಿವೆ.
S.N. Channabasappa 2006 ರ ಏ 12 ರಂದು ರಾಜ ಕುಮಾರ್‌ರವರು ಅಗಲಿದ ದಿನವಾಗಿದ್ದು ಅದಾದ ನಾಲ್ಕು ದಿನ ನಂತರ ನನಗೆ ಐಎಎಸ್ ಸಂದರ್ಶನ ಇತ್ತು. ಸಂದರ್ಶಕರು ನನಗೆ, ಒಬ್ಬ ನಟ ನಿಧನ ಆಗಿದ್ದಕ್ಕೆ ನಿಮ್ಮ ರಾಜ್ಯದಲ್ಲಿ ಅಷ್ಟು ಗಲಾಟೆ ಮಾಡಿದ್ದಾರೆ ಇದಕ್ಕೆ ಕಾರಣವೇನೆಂದು ಕೇಳಿದರು. ಆಗ ನಾನು ಡಾ. ರಾಜ ಕುಮಾರ್ ಅವರ ಕುರಿತು ಹೇಳಿದಾಗ ಅವರು ಡಾ. ರಾಜ್ ಕುಮಾರ್ ಅವರ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳಿದ್ದರೆ ತಿಳಿಸಿ ತಾವು ಓದುವುದಾಗಿ ತಿಳಿಸಿದರು. ಈ ಘಟನೆ ನನ್ನ ಜೀವನದಲ್ಲಿ ಚಿರಸ್ಮರಣೆಯಾಗಿ ಉಳಿದಿರುತ್ತದೆ ಎಂದು ತಿಳಿಸಿದ ಅವರು ಐಎಎಸ್ ಅಧಿಕಾರಿಯಾದ ರಾಮಚಂದ್ರರವರು ದಿನಕ್ಕೆ ಎರಡು ಚಲನಚಿತ್ರಗಳನ್ನು ನೋಡುವ ಮೂಲಕ ಕನ್ನಡ ಕಲಿತಿದ್ದೇನೆ ಎಂದು ತಿಳಿಸಿದ ಪ್ರಸಂಗವನ್ನು ಹಂಚಿಕೊAಡರು.
ಜಿ.ಪಂ ಉಪ ಕಾರ್ಯದರ್ಶಿ ಸುಜಾತ ಮಾತನಾಡಿ, ಹಿಂದೆ ಸಿನೆಮಾ ಒಂದು ಅತ್ಯುತ್ತಮ ಮಾಧ್ಯಮವಾಗಿತ್ತು. ಡಾ.ರಾಜ್ ಕುಮಾರ್ ರವರ ಸಿನೆಮಾಗಳು ಕೇವಲ ಮನರಂಜನೆಗೆ ಸೀಮಿತವಾಗದೇ ಸಮಾಜಕ್ಕೆ ಪೂರಕವಾದ ಮೌಲ್ಯಗಳನ್ನು ಸಾರುವಲ್ಲಿ ಯಶಸ್ವಿಯಾಗಿವೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಜ್ಯಾಧ್ಯಕ್ಷ ಡಾ.ಹೆಚ್ ಸುರೇಶ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯು ಡಾ.ರಾಜ್ ಕುಮಾರ್‌ರವರ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ನಡೆಸಿಕೊಡಲು ಹೋರಾಟ ನಡೆಸಿತ್ತು, ಅದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಣ್ಣಾವ್ರ ಜನ್ಮದಿನಾಚರಣೆಯನ್ನು ಘೋಷಿಸಿರುವುದು ಸಂತಸದ ವಿಷಯವಾಗಿದ್ದು ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ಎಲ್ಲರೂ ಕೈಜೋಡಿಸಿ ಅದ್ದೂರಿಯಾಗಿ ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆಯನ್ನು ಆಚರಿಸೋಣವೆಂದ ಅವರು ಕನ್ನಡ ನಾಡು ನುಡಿಗೆ ಸಿನೆಮಾ ಮಾಧ್ಯಮದ ಮೂಲಕ ಚಿರಸ್ಮರಣೀಯ ಕೊಡುಗೆ ನೀಡಿದ ರಾಜ್ ಕುಮಾರ್‌ರವರ ಪುತ್ಥಳಿಯನ್ನು ನಗರದಲ್ಲಿ ಸ್ಥಾಪಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಭಾಗ್ಯ ಎಂ.ಟಿ, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಜಿಲ್ಲಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ಬಿ, ರಾಜ್‌ಕುಮಾರ್ ಗೀತೆಗಳನ್ನು ಗಾಯನ ಮಾಡಿದ ಸಾಹಿತಿಗಳಾದ ಡಾ.ಶಶಿಕಾಂತ್ ಜೈನ್ ಮತ್ತು ಎಂಸಿಎ ವ್ಯವಸ್ಥಾಪಕ ಸಿದ್ದೇಶ್, ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.

SSLC ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸ.ಬಾಲಕಿಯರ ಬಾಲಮಂದಿರದ ಸಾಧನೆ

0

SSLC ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸ.ಬಾಲಕಿಯರ ಬಾಲಮಂದಿರದ ಸಾಧನೆಸರ್ಕಾರಿ ಬಾಲಕಿಯರ ಬಾಲ ಮಂದಿರದ ವಿದ್ಯಾರ್ಥಿನಿಯರು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಎಲ್ಲ ಶೇ.100 ಫಲಿತಾಂಶ ಲಭಿಸಿದೆ.
ಪೋಷಕರಿಂದ ನಿರ್ಲಕ್ಷö್ಯಕ್ಕೊಳಗಾಗಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಪಾಲನೆ ಪೋಷಣೆಯಡಿ ಇರುವ ಚೈತ್ರಾ ವಿ ಸಿ ಎಂಬ ವಿದ್ಯಾರ್ಥಿನಿ ಶೇ.89 ಅಂಕ ಪಡೆದು ಅತ್ಯುನ್ನತ ಶ್ರೇಣಿ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿ, ಬಾಲ ಮಂದಿರಕ್ಕೆ ಕೀರ್ತಿ ತಂದಿದ್ದಾರೆ.
ಬಾಲಕಿಯರ ಬಾಲಮಂದಿರದ ಮೂರು ವಿದ್ಯಾರ್ಥಿನಿಯರು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದು ಚೈತ್ರಾ ವಿ ಸಿ ಶೇ.89, ಸಿಂಧು ಶೇ.63 ಮತ್ತು ವರ್ಷಿಣಿ ಶೇ.52 ಫಲಿತಾಂಶ ಪಡೆದಿದ್ದಾರೆ.
ಸರ್ಕಾರಿ ಬಾಲಕರ ಬಾಲ ಮಂದಿರದ ವಿದ್ಯಾರ್ಥಿಗಳಾದ ಗಣೇಶ್ ಆರ್, ಹರೀಶ್ ಎಂ ಮತ್ತು ನಿತಿನ್ ಜಿ ಪರೀಕ್ಷೆ ಬರೆದೆದ್ದು, ಮೂರೂ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
SSLC ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸ.ಬಾಲಕಿಯರ ಬಾಲಮಂದಿರದ ಸಾಧನೆಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುನಾಥ್ ಆರ್ ಹಾಗೂ ಬಾಲಕಿಯರ ಬಾಲ ಮಂದಿರದ ಅಧೀಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿಯರು ಹಾಗೂ ಬಾಲಕರ ಬಾಲ ಮಂದಿರದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.

Prabhuling Kavalikatti ಜೋಗದಲ್ಲಿನ ಕಾಮಗಾರಿಗಳು ಗುಣಮಟ್ಟವಿರಲಿ. ನಿಗದಿತ ಅವಧಿಯೊಳಗೆ‌ ಪೂರೈಸಿ- ಪ್ರಭುಲಿಂಗ ಕವಳಿಕಟ್ಟಿ.

0

Prabhuling Kavalikatti ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಶುಕ್ರವಾರ ಜೋಗಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆ ಹಾಗೂ ಜೋಗ ನಿರ್ವಹಣಾ ಪ್ರಾಧಿಕರದ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ಸಂಬAಧಿಸಿದ ಅಧಿಕಾರಿಗಿಗೆ ನೀಡಿದರು.
ಜೋಗದಲ್ಲಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಮತ್ತು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Prabhuling Kavalikatti ಪ್ರವಾಸಿಗರಿಗಾಗಿ ಕೈಗೊಂಡಿರುವ ವಿವಿಧ ಕಾಮಗಾರಿಗಳು, ಪ್ರವಾಸಿಗರಿಗೆ ಅಗತ್ಯವಿರುವ ಕುಡಿಯುವ ನೀರು, ಮೂಲಭೂತ ಸೌಲಭ್ಯಗಳು, ಪಾರ್ಕಿಂಗ್ ಇತರೆ ವ್ಯವಸ್ಥೆಗಳ ಕುರಿತಾದ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ವೀಕ್ಷಣಾ ಗೋಪುರ, ಪ್ರವೇಶದ್ವಾರ ಮತ್ತು ಇತರೆ ಕಾಮಗಾರಿಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದರು.
ಪ್ರವಾಸೋದ್ಯಮ ಇಲಾಖೆ, ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

ಎಸ್ಎಸ್ಎಲ್ ಸಿ ಪರೀಕ್ಷೆ: ಹೆಚ್.ವಿ.ಇಂಚರ,625 ಕ್ಕೆ 598 ಅಂಕಗಳಿಕೆ

0

ಶಿವಮೊಗ್ಗ ನಗರದ ಪ್ರವೇಟ್‌ ಎಂಪ್ಲಾಯ್‌ ಮೆಂಟ್‌ ಬ್ಯೂರೊದ ಮ್ಯಾನೇಜರ್‌ ವಿನಯಚಂದ್ರ ಮತ್ತು ನಂದಿತಾ ದಂಪತಿ ಪುತ್ರಿ ಇಂಚರ ಹೆಚ್.ವಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 598 ಅಂಕ ಪಡೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಸಾಮಾಜಿಕ ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದು ಸಾಧನೆ ಮಾಡಿರುವ ಈ ಬಾಲಕಿ ರಾಷ್ಟ್ರಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ದಿ.ಸತೀಶ್‌ಶ್ಚಂದ್ರ ಅವರ ಮೊಮ್ಮಗಳಾದ ಇಂಚರಾ ಗೋಪಾಳದ ಇಂಡೊಕಿಡ್ಸ್‌ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಳು.