Monday, April 6, 2026
Monday, April 6, 2026

ಕೇಂದ್ರದ ಸಾಲದ ವೆಚ್ಚ ಏರಿಕೆ

Date:

ಕೋವಿಡ್ -19 ಬಿಕ್ಕಟ್ಟಿನ ಪರಿಣಾಮ ಭಾರೀ ಪ್ರಮಾಣದ ಸಾಲ ಪಡೆದಿರುವ ಕೇಂದ್ರ ಸರ್ಕಾರಕ್ಕೆ ಅದರ ಬಡ್ಡಿಯ ವೆಚ್ಚದಲ್ಲಿ ಶೇ.15 ಏರಿಕೆಯಾಗುವ ಸಾಧ್ಯತೆ ಇದೆ.
ನವೆಂಬರ್ ತನಕ ಸರ್ಕಾರ ಬಡ್ಡಿ ಪಾವತಿಗೆ 4.6ಲಕ್ಷ ಕೋಟಿ ರೂ.ಪಾವತಿಸಿದೆ. ಈ ಹಿಂದಿನ ಹಣಕಾಸು ನೀತಿಗಳೂ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಸಕ್ತ ಸಾಲಿನಲ್ಲಿ ತೈಲ ಬಾಂಡ್ ಗಳಿಗೆ 29,281 ಕೋಟಿ ರೂ. ಗಳನ್ನು ಸರಕಾರ ಪಾವತಿಸಿದೆ.ಯುಪಿಎ ಸರ್ಕಾರ ತೈಲ ಕಂಪನಿಗಳಿಗೆ ಸಬ್ಸಿಡಿ ನೀಡಲು ಬಾಂಡ್ ಗಳನ್ನು ಬಿಡುಗಡೆಗೊಳಿಸಿತ್ತು. ಪ್ರತಿವರ್ಷ ಸರಕಾರ ಇದಕ್ಕಾಗಿ 9,990 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮುಂಬರುವ 2022-23ರ ಸಾಲಿನಲ್ಲಿ ಸಾಲದ ಬಡ್ಡಿ ದರದ ಬಾಬ್ತು 9.30 ಲಕ್ಷ ಕೋಟಿ ರೂ.ಗೂ ಪಾವತಿಸಬೇಕಾಗಿದ್ದು, ಹಳೆಯ ಅಂದಾಜಿಗೆ ಹೋಲಿಸಿದರೆ ಶೇ.15 ಹೆಚ್ಚಳವಾದಂತಾಗಿದೆ. ಹೀಗಾಗಿ 2021-22ರಲ್ಲಿ ಸಂಗ್ರಹವಾದ ತೆರಿಗೆಯಲ್ಲಿ ಶೇ.45 ಪಾಲು ಸಾಲದ ಬಡ್ಡಿ ತೀರಿಸಲು ಬೇಕಾಗುತ್ತದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ ಡಿಎ ಸರ್ಕಾರ ಸಾರ್ವಜನಿಕ ಬ್ಯಾಂಕ್ ಗಳಿಗೆ ಬಂಡವಾಳ ಮರುಪೂರಣ ನೀಡಲು 3.1 ಲಕ್ಷ ಕೋಟಿ ರೂ.ಗಳ ಬಾಂಡ್ ಗಳನ್ನು 2017ರಲ್ಲಿ ಬಿಡುಗಡೆಗೊಳಿಸಿತ್ತು.
ಅದಕ್ಕೆ ಬಡ್ಡಿ 19,000 ಕೋಟಿ ರೂ. ನೀಡಬೇಕಾಗುತ್ತದೆ.
2021 ರಲ್ಲಿ ಸರ್ಕಾರದ ಕಂದಾಯದಲ್ಲಿ ಶೇ.28ರಷ್ಟು ಸಾಲದ ಬಡ್ಡಿ ತೀರಿಸಲು ಖರ್ಚಾಗಿತ್ತು. ಹೀಗಾಗಿ ಸಾಲದ ವೆಚ್ಚ ತಗ್ಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೆಚ್ಚುತ್ತಿರುವ ಸಾಲ ಮತ್ತು ಬಡ್ಡಿ ದರದ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರುದೀಪ- ಎಸ್.ಎನ್.ಚನ್ನಬಸಪ್ಪ.

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...