Wednesday, July 8, 2026
Wednesday, July 8, 2026

ಕೇಂದ್ರದ ಸಾಲದ ವೆಚ್ಚ ಏರಿಕೆ

Date:

ಕೋವಿಡ್ -19 ಬಿಕ್ಕಟ್ಟಿನ ಪರಿಣಾಮ ಭಾರೀ ಪ್ರಮಾಣದ ಸಾಲ ಪಡೆದಿರುವ ಕೇಂದ್ರ ಸರ್ಕಾರಕ್ಕೆ ಅದರ ಬಡ್ಡಿಯ ವೆಚ್ಚದಲ್ಲಿ ಶೇ.15 ಏರಿಕೆಯಾಗುವ ಸಾಧ್ಯತೆ ಇದೆ.
ನವೆಂಬರ್ ತನಕ ಸರ್ಕಾರ ಬಡ್ಡಿ ಪಾವತಿಗೆ 4.6ಲಕ್ಷ ಕೋಟಿ ರೂ.ಪಾವತಿಸಿದೆ. ಈ ಹಿಂದಿನ ಹಣಕಾಸು ನೀತಿಗಳೂ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಸಕ್ತ ಸಾಲಿನಲ್ಲಿ ತೈಲ ಬಾಂಡ್ ಗಳಿಗೆ 29,281 ಕೋಟಿ ರೂ. ಗಳನ್ನು ಸರಕಾರ ಪಾವತಿಸಿದೆ.ಯುಪಿಎ ಸರ್ಕಾರ ತೈಲ ಕಂಪನಿಗಳಿಗೆ ಸಬ್ಸಿಡಿ ನೀಡಲು ಬಾಂಡ್ ಗಳನ್ನು ಬಿಡುಗಡೆಗೊಳಿಸಿತ್ತು. ಪ್ರತಿವರ್ಷ ಸರಕಾರ ಇದಕ್ಕಾಗಿ 9,990 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮುಂಬರುವ 2022-23ರ ಸಾಲಿನಲ್ಲಿ ಸಾಲದ ಬಡ್ಡಿ ದರದ ಬಾಬ್ತು 9.30 ಲಕ್ಷ ಕೋಟಿ ರೂ.ಗೂ ಪಾವತಿಸಬೇಕಾಗಿದ್ದು, ಹಳೆಯ ಅಂದಾಜಿಗೆ ಹೋಲಿಸಿದರೆ ಶೇ.15 ಹೆಚ್ಚಳವಾದಂತಾಗಿದೆ. ಹೀಗಾಗಿ 2021-22ರಲ್ಲಿ ಸಂಗ್ರಹವಾದ ತೆರಿಗೆಯಲ್ಲಿ ಶೇ.45 ಪಾಲು ಸಾಲದ ಬಡ್ಡಿ ತೀರಿಸಲು ಬೇಕಾಗುತ್ತದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ ಡಿಎ ಸರ್ಕಾರ ಸಾರ್ವಜನಿಕ ಬ್ಯಾಂಕ್ ಗಳಿಗೆ ಬಂಡವಾಳ ಮರುಪೂರಣ ನೀಡಲು 3.1 ಲಕ್ಷ ಕೋಟಿ ರೂ.ಗಳ ಬಾಂಡ್ ಗಳನ್ನು 2017ರಲ್ಲಿ ಬಿಡುಗಡೆಗೊಳಿಸಿತ್ತು.
ಅದಕ್ಕೆ ಬಡ್ಡಿ 19,000 ಕೋಟಿ ರೂ. ನೀಡಬೇಕಾಗುತ್ತದೆ.
2021 ರಲ್ಲಿ ಸರ್ಕಾರದ ಕಂದಾಯದಲ್ಲಿ ಶೇ.28ರಷ್ಟು ಸಾಲದ ಬಡ್ಡಿ ತೀರಿಸಲು ಖರ್ಚಾಗಿತ್ತು. ಹೀಗಾಗಿ ಸಾಲದ ವೆಚ್ಚ ತಗ್ಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೆಚ್ಚುತ್ತಿರುವ ಸಾಲ ಮತ್ತು ಬಡ್ಡಿ ದರದ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...