ಕಾರ ಹುಣ್ಣಿಮೆಯ ಪ್ರಯುಕ್ತ ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ರಾಜಯೋಗ ಧ್ಯಾನದ ಅದ್ಭುತಗಳನ್ನು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಧ್ಯಾನ ಶಿಕ್ಷಕಿ ಮತ್ತು ಆಧ್ಯಾತ್ಮಿಕ ವಾಗ್ಮಿ ಜಯಂತಿ ಅಕ್ಕನವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಜಯೋಗವು ದೈಹಿಕ ಭಂಗಿಗಳಿಗಿಂತ ಮಾನಸಿಕ ಸಂಪರ್ಕದ ಅಭ್ಯಾಸವಾಗಿದೆ. ನೀವು ಭೌತಿಕ ದೇಹಕ್ಕಿಂತ ಹೆಚ್ಚಾಗಿ ನಿಮ್ಮನ್ನು ಶಾಂತಿಯುತ, ಶಾಶ್ವತ ಆತ್ಮವೆಂದು ಕಲ್ಪಿಸಿಕೊಳ್ಳುವತ್ತ ಗಮನ ಹರಿಸುತ್ತೀರಿ. ವಿಶ್ರಾಂತಿ ಪಡೆಯಿರಿ-ದೃಶ್ಯೀಕರಿಸಿ-ದೃಢೀಕರಿಸಿ-ಸಂಪರ್ಕ ಸಾಧಿಸಿ. ಇದು ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳನ್ನು ಅನುಗ್ರಹದಿಂದ ಎದುರಿಸಲು ವೃತ್ತಿಪರರಿಗೆ ಮಾನಸಿಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.
ಮನಸ್ಸಿನಿಂದ ನಕಾರಾತ್ಮಕತೆಯನ್ನು ತೆರವುಗೊಳಿಸುವ ಮೂಲಕ, ಇದು ಆತಂಕವನ್ನು ಕಡಿಮೆ ಮಾಡುತ್ತದೆ. ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ. ನೀವು ನಿಮ್ಮ ಆಲೋಚನೆಗಳನ್ನು ಪರಮಾತ್ಮನ ಕಡೆಗೆ ನಿರ್ದೇಶಿಸುತ್ತೀರಿ. ಈ ಆಧ್ಯಾತ್ಮಿಕ ಸಂಪರ್ಕವನ್ನು ಸ್ಥಾಪಿಸುವ ಮೂಲಕ ನೀವು ಪ್ರೀತಿ, ಆನಂದ, ಪರಿಶುದ್ಧತೆ ಮತ್ತು ಶಕ್ತಿಯಂತಹ ದೈವಿಕ ಸದ್ಗುಣಗಳನ್ನು ಬಳಸಿಕೊಳ್ಳುತ್ತೀರಿ, ದೈನಂದಿನ ಕ್ರಿಯೆಗಳನ್ನು ಪರಿವರ್ತಿಸುತ್ತೀರಿ. ಆಧ್ಯಾತ್ಮಿಕ ಬುದ್ಧಿವಂತಿಕೆ ಪ್ರಾಯೋಗಿಕ ಸ್ಪೂರ್ತಿದಾಯಕ ಭಾವನಾತ್ಮಕ ಯೋಗಕ್ಷೇಮ, ಸಾವಧಾನತೆ ಮತ್ತು ಆಂತರಿಕ ಪರಿವರ್ತನೆಯ ವಿಷಯಗಳ ಕುರಿತು ನೆರೆದಿದ್ದ ಶಿಬಿರಾರ್ಥಿಗಳು, ಬ್ರಹ್ಮಕುಮಾರಿ ಪರಿವಾರದ ಸದಸ್ಯರು ಪ್ರೇಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗ ನಗರದ ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಸ್ಥೆ ರಾಜಯೋಗಿ ಬ್ರಹ್ಮಕುಮಾರಿ ಸ್ವಾತಿ ಅಕ್ಕನವರು, ಧ್ಯಾನದಿಂದ ನಿಮ್ಮ ಗಮನವನ್ನು, ಭೌತಿಕ ದೇಹದಿಂದ ಅಮರ ಆತ್ಮದ ಕಡೆಗೆ ಬದಲಾಯಿಸುವ ಮೂಲಕ ನೀವು ದೈನಂದಿನ ಒತ್ತಡಗಳಿಂದ ಬೇರ್ಪಡುತ್ತೀರಿ. ಈ ಧ್ಯಾನವು ನಿಮ್ಮನ್ನು ಅಪಾರವಾದ ಸಕಾರಾತ್ಮಕ ಶಕ್ತಿಯ ಮೂಲಕ್ಕೆ ಸಂಪರ್ಕಿಸುತ್ತದೆ. ಈ ಸಂಸ್ಥೆ ಎಲ್ಲರಿಗೂ ಮುಕ್ತವಾಗಿದೆ ಸಂಸ್ಥೆ ಹಮ್ಮಿಕೊಂಡಿರುವ ಮೆಡಿಟೇಶನ್ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರು ಭಾಗಿಯಾಗಿ ಅದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು.
ಈ ಕಾರ್ಯಕ್ರಮದ ಪ್ರಯೋಜನವನ್ನು 150ಕ್ಕೂ ಹೆಚ್ಚು ಜನ ಪಡೆದರು. ಈ ಸಂದಭದಲ್ಲಿ ಲೆಕ್ಕಪರಿಶೋಧಕರಾದ ಆರ್.ಮನೋಹರ, ಡಾ. ಪ್ರಸನ್ನ, ಶ್ರೀ ಗಿರಿರಾಜ್ ಎಸ್.ಒ., ಉಪ ತಹಸೀಲ್ದಾರರು, ಭಾವನಾ, ಕೃಷ್ಣಪ್ಪ, ಮಲ್ಲಪ್ಪ ಮತ್ತು ಮಕ್ಕಳು, ಕಾವ್ಯ, ಬಿ.ಕೆ.ನಾಗಮಣಿ, ಶಿಬಿರಾರ್ಥಿಗಳು, ಬ್ರಹ್ಮಕುಮಾರಿ ಸಮಾಜದ ಸದಸ್ಯರು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು
