Wednesday, August 12, 2026
Wednesday, August 12, 2026

Scouts and Guides ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಯುವ ಆಪತ್ ಮಿತ್ರ ಸಹಕಾರಿ: ಎಸ್.ಜಿ.ಆನಂದ್

Date:

Scouts and Guides ಯುವ ಆಪತ್ ಮಿತ್ರ ಕಾರ್ಯಕ್ರಮದಿಂದ ಮಕ್ಕಳಲ್ಲಿ ಆತ್ಮ ರಕ್ಷಣೆ, ಜೀವನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾದ ಎಸ್.ಜಿ.ಆನಂದ್ ಹೇಳಿದರು.

ಶಿವಮೊಗ್ಗ ನಗರದ ಸ್ಕೌಟ್ಸ್ ಭವನದಲ್ಲಿ ನಡೆದ 7 ದಿನಗಳ ಯುವ ಆಪತ್ ಮಿತ್ರ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಅವರು, ಇರುವಕ್ಕಿ ಅಗ್ರಿಕಲ್ಚರ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಮತ್ತು ವಿವಿಧ ವಿಪತ್ತುಗಳ ತಿಳುವಳಿಕೆಯನ್ನು ಹೆಚ್ಚಿಸಿ ಮತ್ತು ವಿಪತ್ತುಗಳಿಗೆ ಪ್ರತಿಕ್ರಿಯೆಸಲು ಸಹಾಯಕಾರಿಯಾದ ಜೀವ ಉಳಿಸಲು ತಂತ್ರಗಳನ್ನು ಕಲಿಸಲು ಈ ತರಬೇತಿಯನ್ನು ರಾಷ್ಟ್ರೀಯ ಯುವ ಆಪತ್ ಮಿತ್ರ ಶಿಬಿರದಲ್ಲಿ ತಿಳಿಸಲಾಯಿತು ಎಂದರು.

ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೂ.20 ರಿಂದ ಜೂ.26 ರವರಗೆ ನಡೆದ ಈ ಶಿಬಿರದಲ್ಲಿ ವಿಪತ್ತು ನಿರ್ವಣೆಯ ಮೂಲ ಪರಿಕಲ್ಪನೆಗಳು, ವಿಪತ್ತು ಸನದ್ಧತೆ, ಭೂಕಂಪನ, ಭೂಕುಸಿತ, ಪ್ರವಾಹ, ಸುನಾಮಿ, ಪ್ರಾಥಮಿಕ ಮಟ್ಟದ ಶೋಧನೆ ಮತ್ತು ರಕ್ಷಣೆ ಆಧಾರಿತ ಆರೋಗ್ಯ ಪ್ರಥಮ ಚಿಕಿತ್ಸೆ, ರಕ್ತಸ್ರಾವ ನಿಯಂತ್ರಣ ಮತ್ತು ಗಾಯದ ಆರೈಕೆ, ಬಿ ಎಲ್ ಎಸ್ ಮತ್ತು ಸಿ ಪಿ ಆರ್, ರೋಗಿಗಳನ್ನು ಎತ್ತುವುದು ಮತ್ತು ಹೋಯುವುದು, ಹಾವು ಕಡಿತ, ಪ್ರಾಣಿ ಕಡಿತ, ಹಗ್ಗ ಬಳಸಿ ರಕ್ಷಣೆ ಮಾಡುವ ತಂತ್ರಗಳು, ಅಗ್ನಿ ಸುರಕ್ಷತೆ ಇನ್ನಿತರೇ ತರಬೇತಿಗಳನ್ನು ಕಲಿಸಲಾಯಿತು. ಇದರ ಜೊತೆಗೆ ಮಾನವೀಯ ಮೌಲ್ಯಗಳ, ವ್ಯಕ್ತಿತ್ವ ವಿಕಾಸನ ಬಗ್ಗೆ ಮಾತನಾಡಿದರು.

Scouts and Guides ಈ ಸಂದರ್ಭದಲ್ಲಿ ಆಯುಕ್ತರಾದ ಕೆ.ರವಿ ಮಾತನಾಡಿ ಮಾನವೀಯ ಮೌಲ್ಯಗಳ ಬಗ್ಗೆ ಹಾಗೂ ಏಳು ದಿನ ನಡೆದ ಶಿಬಿರದ ಕುರಿತು ಮಾತನಾಡಿದರು. ಲಕ್ಷ್ಮಿ ರವಿ ಸ್ವಾಗತಿಸಿದರು, ಕಾರ್ಯದರ್ಶಿ ಚಂದ್ರಶೇಖರಯ್ಯ ವಂದಿಸಿದರು, ಶಿಬಿರದ ವಿದ್ಯಾರ್ಥಿನಿ ಮಾನ್ಯತಾ ಪಾಟೀಲ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ತರಬೇತಿ ಮುಖ್ಯಸ್ಥರಾದ ಶಿವಶಂಕರ್, ಚೂಡಾಮಣಿ ಪವರ್, ಮಲ್ಲಿಕಾರ್ಜುನ ಕಾನೂರ್, ಅಗ್ರಿಕಲ್ಚರ್ ಯೂನಿವರ್ಸಿಟಿ ಕಾಲೇಜ್ ಉಪನ್ಯಾಸಕರು, 180 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...