Wednesday, May 27, 2026
Wednesday, May 27, 2026

JCI Institute ಯುವ ನಾಯಕತ್ವ ಬೆಳವಣಿಗೆಯಲ್ಲಿ ಜೆಸಿಐ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ- ವಿಜಯಲಕ್ಷ್ಮಿ ಕಡಂಬ.

Date:

JCI Institute ಸ್ಥಳೀಯ ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ಯುವ ನಾಯಕತ್ವದ ಬೆಳವಣಿಗೆಯಲ್ಲಿ ಜೆಸಿಐ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ ಎಂದು 2026ನೇ ಸಾಲಿನ ಜೆಸಿಐ ಶಿವಮೊಗ್ಗ ವಿವೇಕ್ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಕಡಂಬ ಹೇಳಿದರು.

ಜೆಸಿಐ ಶಿವಮೊಗ್ಗ ವಿವೇಕ್ ಪೋಷಿಸುತ್ತಿರುವ ಸ್ವಾಮಿ ವಿವೇಕಾನಂದ ಪಾರ್ಕ್ಗೆ ಭೇಟಿ ನೀಡಿದ ಜೆಸಿಐ ಇಂಟರ್‌ನ್ಯಾಷನಲ್ ಉಪಾಧ್ಯಕ್ಷ ಕೆಂಗೊ ಸುಜುಕಿ ಅವರನ್ನು ಸನ್ಮಾನಿಸಿ ಮಾತನಾಡಿ, ನಮ್ಮ ಘಟಕ ದತ್ತು ಪಡೆದಿರುವ ಪಾರ್ಕ್ ಗೆ ವಿಶ್ವ ಉಪಾಧ್ಯಕ್ಷ ಕೆಂಗೊ ಸುಜುಕಿ ಅವರು ಭೇಟಿ ನೀಡಿ ನಮ್ಮ ಕೆಲಸ ಶ್ಲಾಘಿಸಿರುವುದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ಪಾರ್ಕ್ ವೀಕ್ಷಣೆ ಮಾಡಿದ ಅಂತರಾಷ್ಟ್ರೀಯ ಉಪಾಧ್ಯಕ್ಷ ಕೆಂಗೊ ಸುಜುಕಿ ಅವರಿಗೆ ಜೆಸಿಐ ಶಿವಮೊಗ್ಗ ವಿವೇಕ್ ಘಟಕವು ಪಾರ್ಕಿನ ಸೌಂದರ್ಯೀಕರಣ, ಸ್ವಚ್ಛತೆ ಹಾಗೂ ಸಾರ್ವಜನಿಕರ ಬಳಕೆಗೆ ಯೋಗ್ಯ ಆಗುವಂತೆ ರೂಪಿಸಿರುವ ಸಮಗ್ರ ರೂಪುರೇಷೆ ಮತ್ತು ನೀಲನಕಾಶೆಯನ್ನು ವಿವರಿಸಲಾಯಿತು.

ಜೆಸಿಐ ಇಂಟರ್‌ನ್ಯಾಷನಲ್ ಉಪಾಧ್ಯಕ್ಷ ಕೆಂಗೊ ಸುಜುಕಿ ಮಾತನಾಡಿ, ಸ್ಥಳೀಯ ಸಂಸ್ಥೆಯೊಂದು ಸಾರ್ವಜನಿಕ ಆಸ್ತಿಯನ್ನು ಸರ್ಕಾರದ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

JCI Institute ಜೆಸಿಐ ವಲಯ 24ರ ಅಧ್ಯಕ್ಷ ಮಧುಸೂದನ್ ನಾವುಡ, ವಲಯ ಉಪಾಧ್ಯಕ್ಷ ಗಣೇಶ್ ಪೈ, ಜೆ ಕಾಮ್ ಚೇರ್ಮನ್ ರುದ್ರೇಶ್ ಕೋರಿ, ವಲಯದ ಟ್ರೈನಿಂಗ್ ಗಣೇಶ್, ಮಾಜಿ ಕಾರ್ಪೊರೇಟರ್ ಇ.ವಿಶ್ವಾಸ್, ಜೆಸಿಐ ಶಿವಮೊಗ್ಗ ವಿವೇಕ್ ಫೌಂಡರ್ ಪ್ರೆಸಿಡೆಂಟ್ ಬಾಲರಾಜ್, ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ 2026ನೇ ಸಾಲಿನ ಕಾರ್ಯದರ್ಶಿ ಶ್ವೇತಾ ಸಚಿನ್, ಘಟಕದ ಗೌರವಾನ್ವಿತ ಪಾಸ್ಟ್ ಪ್ರೆಸಿಡೆಂಟ್ ಎಸ್.ಎಸ್.ಸತೀಶ್ ಕುಮಾರ್, ಭದ್ರೀಶ್, ಉದಯ್ ಕಡಂಬ, ದೀಪು, ವಿನಯ್, ಸುರೇಶ್, ಸಂಜಯ್, ಚಂದ್ರಹಾಸ್ ಹಾಗೂ ವಾಣಿ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ 2. ಭದ್ರಾವತಿ ಆಕಾಶವಾಣಿಯಿಂದ” ಬಾನುಲಿ ಬರಹ ” ವಿಶೇಷ ಕಾರ್ಯಾಗಾರ

Akashavani Bhadravati ಭಾರತದ ಸಾರ್ವಜನಿಕ ಪ್ರಸಾರ ಸೇವೆ ಸಂಸ್ಥೆಯಾದ ಪ್ರಸಾರ ಭಾರತಿಯ...

B.Y. Vijayendra ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ. ಅವಧಿಗೆ ಮುನ್ನವೇ ಚುನಾವಣೆ- ಬಿ.ವೈ.ವಿಜಯೇಂದ್ರ

B.Y. Vijayendra ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದೆಹಲಿಯಲ್ಲಿ...

B.Y. Raghavendra ಶಿಕಾರಿಪುರದಲ್ಲಿ ಸಂಸದ ರಾಘವೇಂದ್ರ ನೇತೃತ್ವದಲ್ಲಿ ರೈತರ ಪ್ರತಿಭಟನಾ ಸಭೆ

B.Y. Raghavendra ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂತರ ರೈತ ವಿರೋಧಿ ಧೋರಣೆಗಳನ್ನು...