Monday, August 24, 2026
Monday, August 24, 2026

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

Date:

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ 5/4/2026 ರಂದು ಶಿವಮೊಗ್ಗನಗರದ ಕುವೆಂಪು ರಂಗಮಂದಿರದ ಹಿಂಭಾಗದ NES ಕ್ರೀಡಾ ಆವರಣದಲ್ಲಿ ದಿನಾಂಕ 5/4/2026 ರಂದು ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು.
ಶ್ರೀ ಐಡಿಯಲ್ ಗೋಪಾಲಕೃಷ್ಣ, DCA ಸಂಸ್ಥೆಯ ಸಹಾ ಕಾರ್ಯದರ್ಶಿ ರವರು ಉದ್ಘಾಟನಾ ಕಾರ್ಯಕ್ರಮದ ಅತಿಥಿ ಗಳಾದ ಶ್ರೀ ಸುಧೀಂದ್ರ ರಾವ್, ಶ್ರೀ ನಾಗರಾಜ ಶೆಣೈ,ಸಂಸ್ಥೆಯ ಅಧ್ಯಕ್ಷ ರಾದ ಡಿ. ಆರ್. ನಾಗರಾಜ್, ಕಾರ್ಯದರ್ಶಿ ಹೆಚ್. ಎಸ್. ಸದಾನಂದ ಹಾಗೂ ತರಬೇತಿ ಶಿಬಿರದ ಮುಖ್ಯತರಬೇತುದಾರರದ ನಿತ್ಯಾನಂದ ಪೈ ರವರನ್ನು,ವೇದಿಕೆಗೆ ಸ್ವಾಗತಿಸಿದರು. ಉಪಸ್ಥಿತರಿದ್ದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರನ್ನು, ಸಂಸ್ಥೆಯ ಹಿರಿಯ ಸದಸ್ಯರನ್ನು, ಶಿಬಿರಾರ್ಥಿಗಳನ್ನು, ಪಾಲಕರು /ಪೋಷಕರನ್ನು ಸ್ವಾಗತಿಸಿ ಸಂಸ್ಥೆಯ ಪರಿಚಯ, ಬೆಳೆದುಬಂದ ಹಾದಿ, ಸಂಸ್ಥೆ ವತಿಯಿಂದ ಬೆಳೆದ ಆಟಗಾರರ ವಿವರ,ಇವರಲ್ಲಿ ರಾಜ್ಯ ತಂಡ ಪ್ರತಿನಿಧಿಸಿದವರ ವಿವರ ಎಲ್ಲರಿಗೂ ಪರಿಚಯ ಮಾಡಿಕೊಟ್ಟರು.
ಶ್ರೀಯುತ ಸುಧೀಂದ್ರ ರಾವ್, ಆಕಾಶವಾಣಿಯ ಕಾರ್ಯಕ್ರಮ ಕಾರ್ಯನಿರ್ವಾಹಕ ಅಧಿಕಾರಿ (ನಿವೃತ್ತ )ರವರು ತರಬೇತಿ ಶಿಬಿರವನ್ನು ಉದ್ಘಾಟನೆ ಮಾಡುತ್ತಾ,ಸದರಿಯವರು ತಮ್ಮ ಉದ್ಘಾಟನಾ ಮಾತುಗಳಲ್ಲಿ ತಾವು ಚಿಕ್ಕವರಾಗಿದ್ದಾಗ, ಆಗಿನ ದಿನಪತ್ರಿಕೆಗಲ್ಲಿ DCA ತಂಡದ ವಿಜಯ ವಾರ್ತೆ ಓದುತಿದ್ದನ್ನು ಸ್ಮರಿಸಿಕೊಂಡು, ಸಂಸ್ಥೆಯ ಹಿರಿಯ ಸದಸ್ಯರುಗಳಾದ ನಾರಾಯಣ ಭಟ್, ಪುಟ್ಟಪ್ಪ, ನಾಣಿ ರವರನ್ನು ನೆನೆಪಿಸಿಕೊಂಡು ಸದರಿಯವರು ಸಂಸ್ಥೆ ಕಟ್ಟುವಲ್ಲಿ ಹಾಗೂ ಬೆಳೆಸುವಲ್ಲಿ ತೆಗೆದುಕೊಂಡ ಶ್ರಮದ ಬಗ್ಗೆ ಶ್ಲಾಘೀಸಿದರು.
ಇದೆ ಪರಂಪರೆಯನ್ನು ಮುಂದುವರಿಸುತ್ತಿರುವ ಹಾಗೂ ಇದಕ್ಕಾಗಿ ತಮ್ಮ ಸಮಯವನ್ನು ಮೀಸಲಿಡುತ್ತಿರುವ ಈಗಿನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ಅಭಿನಂದಿಸಿದರು.
ಮಕ್ಕಳಿಗೆ ತರಬೇತಿಯಲ್ಲಿ ಉತ್ತಮ ಆಟಕಲಿತು ಮುಂದೆ ತಾವು ಬೆಳೆಯಲು ಹಾಗೂ ಸಂಸ್ಥೆಗೆ ಯಶಸ್ಸು ತರುವಂತೆ ಶುಭ ಹಾರೈಸಿ ತರಬೇತಿ ಶಿಬರಕ್ಕೆ ಶುಭ ಹಾರೈಸಿದರು.
ಮಕ್ಕಳಲ್ಲಿ ಉತ್ಸಾಹ ಬೆಳೆಯಲು 5 ಓವರ್ ಗಳ ಚುಟುಕು ಪಂದ್ಯಾವಳಿಯನ್ನು ತರಬೇತಿ ಸಮಯದಲ್ಲಿ ಆಯೋಜಿಸಲು ಸಲಹೆ ನೀಡಿದರು.
ಇನ್ನೊರ್ವ ಅತಿಥಿಗಳಾದ ಶ್ರೀಯುತ ನಾಗರಾಜ ಶೆಣೈ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಪ್ರತಿದಿನ ಬೆಳಿಗ್ಯೆ ಬೇಗನೆ ಏಳುವ ಕುರಿತು ತಿಳಿಸಿ ಇದರಿಂದಾಗುವ ಪ್ರಯೋಜನ ತಿಳಿಸಿದರು. ಇದರಿಂದ ಒಳ್ಳೆಯ ಆರೋಗ್ಯ, ಬುದ್ದಿ ಹಾಗೂ ದಿನವಿಡಿ ಲವಲವಿಕೆಯಿಂದ ಇರಬಹುದಾಗಿದ್ದು ದಿನವಿಡಿ ಉಲ್ಲಾಸದಿಂದಿರಬಹುದೆಂದು ತಿಳಿಸುತ್ತಾ ತರಬೇತಿಯಲ್ಲಿ ಉತ್ತಮ ಆಟ ಕಲಿಯುವಂತೆ ಶುಭಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ. ಆರ್. ನಾಗರಾಜ್ ರವರು ಮಾತನಾಡುತ್ತಾ ತರಬೇತಿ ಶಿಬಿರದಲ್ಲಿ ಸಂಸ್ಥೆವತಿಯಿಂದ ನೀಡುವ ಸವಲತ್ತು, ತರಬೇತಿ, ಸಮವಸ್ತ್ರ ಹಾಗೂ ತರಬೇತಿಯ ನಂತರ ಪ್ರತಿದಿನ ನೀಡುವ ಹಾಲು ಹಾಗೂ ಬನ್ನು ಗಳ ವಿವರ ಅತಿಥಿಗಳಿಗೆ ಹಾಗೂ ನೆರೆದಿದ್ದ ಶಿಬಿರಾರ್ಥಿಗಳಿಗೆ, ಪಾಲಕರಿಗೆ ತಿಳಿಸುತ್ತಾ ಶಿವಮೊಗ್ಗದಲ್ಲಿ ಅತೀ ಕಡಿಮೆ ಮೊತ್ತದಲ್ಲಿ ಸಂಸ್ಥೆಯು ನೀಡುತ್ತಿರುವ ಸೇವೆಬಗ್ಗೆ ವಿವರಿಸಿದರು.
ಈ ಸಮಯದಲ್ಲಿ ಕೆಲವು ಮಕ್ಕಳಿಗೆ ಉದ್ಘಾಟನೆಯ ಸಂಕೇತವಾಗಿ ಸಮವಸ್ತ್ರ ಹಾಗೂ ಟೋಪಿ ನೀಡಲಾಯಿತು.
ಶ್ರೀಯುತ ಅನಿಲ್ ಪಾಟೀಲ್ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.
ಶ್ರೀ. ಗೋಪಾಲಕೃಷ್ಣ ರವರು ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಮಾಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯರಾದ KL ಸುಬ್ರಮಣ್ಯ. DN ರಮಾನಂದ್. DV ರಾಮಚಂದ್ರ. ರಘುಪ್ರಸಾದ್ ಮನ್ ಮೋಹನ್
ತರಬೇತಿ ಶಿಬಿರದ ತರಬೇತುದಾರರದ ಮಿಥುನ್, ಗಣೇಶ್, ಅರ್ಜುನ್, ರವಿ, ಸಚ್ಚಿನ್ ರವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ರಕ್ಷಾಬಂಧನವು ಸಹೋದರ- ಸಹೋದರರಿಯರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ: ರಾಜಯೋಗಿನಿ ಬಿ.ಕೆ.ಅನಸೂಯ ಅಕ್ಕ

ರಕ್ಷಾಬಂಧನವು ಕೇವಲ ಒಂದು ಹಬ್ಬವಲ್ಲ. ಅದು ಪ್ರೀತಿ, ವಿಶ್ವಾಸ, ಗೌರವ ಮತ್ತು...

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...