Klive.news ಜಗದೀಶನಾಡುವ ಜಗವೇ ನಾಟಕ ರಂಗ…
ಈ ಹಾಡು ಕೇವಲ ಸಿನಿಮಾ ನೋಡಿ ಅರ್ಥಮಾಡಿಕೊಳ್ಳುವುದಲ್ಲ. ಪ್ರಾಚೀನವಾಗಿ ನಮ್ಮ ಸನಾತನ ತಳಹದಿಯಲ್ಲೇ ಈ ಸಂದೇಶವಿದೆ.
ಭಗವಂತ ವಿಷ್ಣುವಿಗೆ ಜಗನ್ನಾಟಕ ಸೂತ್ರಧಾರಿ. ಜಗನ್ನಾಥ ,ರಂಗನಾಥ ಎಂಬೆಲ್ಲ ಸ್ತುತಿಗಳಿವೆ.
ನಾಟಕದ ಅಂಶಗಳು ನಮ್ಮಲ್ಲಿಲ್ಲವೆ? ಅಂದರೆ ನಮ್ಮದೇ ಮನೋಧರ್ಮಗಳ ಬಿಂಬವೇ ನಾಟಕವಾಗಿ ರಂಗದಮೇಲೆ ಅಭಿನಯವಾಗುತ್ತದೆ.
ಅಂದರೆ ನಮ್ಮಿಂದಲೇ ಆ ವಸ್ತು ,ರಂಗರೂಪ ತಾಳುತ್ತದೆ. ಪಾತ್ರಧಾರಿಗಳು ನಟಿಸುತ್ತಾರೆ.
ಅಂದರೆ ಯಾಕೆ ಈ ಪ್ರಯೋಗ? ಇದು ಬೇಕೆ? ರಂಗರೂಪ ಯಾಕೆ ಪ್ರದರ್ಶಿತವಾಗಬೇಕು? ಅದು ಅನಿವಾರ್ಯವೆ? ಔಚಿತ್ಯವಿದೆಯೆ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತವೆ.
ಕೇವಲ ರಂಜನೆಯ ಪ್ರಯತ್ನವಾಗಿ ಜನಿಸಿದ ಈ ಮಾದರಿ ಇಂದು ಸಾಮಾಜಿಕರನ್ನ ತಿದ್ದುವ ಹೊಣೆ ಹೊತ್ತಿದೆ.
