Sunday, August 2, 2026
Sunday, August 2, 2026

Shivamogga Bicycle Association ಸೈಕಲ್ ಸವಾರಿಯಿಂದ ಮನೋದೈಹಿಕ ದೃಢತೆ, ಉಲ್ಲಾಸ – ನರಸಿಂಹಮೂರ್ತಿ

Date:

Shivamogga Bicycle Association ಸೈಕಲ್ ಕಂಡು ಹಿಡಿದು ಇಂದಿಗೆ 2೦8 ವರ್ಷ ಗಳಾಗಿವೆ. ಸೈಕಲ್ ಪರಿಸರ ಸ್ನೇಹಿ ವಾಹನ.ಅತ್ಯಂತ ಹಗುರ ಕಡಿಮೆ ಖರ್ಚಿನ ಚಿಕ್ಕ ಹಾದಿಯಲ್ಲಿ ಓಡಿಸಬಹುದಾದ ಈ ವಾಹನ ಎಲ್ಲರ ನೆಚ್ಚಿನ ಸಾಧನ. ಇಂಧನ ಇಲ್ಲ ಮಾಲಿನ್ಯ ಇಲ್ಲ ಅಪಘಾತವೂ ಇಲ್ಲ. ಫ್ರಾನ್ಸ್ ಇಟಲಿ ಅಮೆರಿಕ ಬೆಲ್ಜಿಯಂ ಇಂಗ್ಲೆಂಡ್ ನೆದರ್ಲೆಂಡ್ ಮುಂತಾದ ದೇಶಗಳಲ್ಲಿ ಎಲ್ಲರೂ ಸೈಕಲ್ ಬಳಸುತ್ತಾರೆ. ಭಾರತದಲ್ಲಿಯೂ ಸೈಕಲ್ ಪರ್ವ ಇದೀಗ ಆರಂಭ ವಾಗಿದೆ. ಶಿವಮೊಗ್ಗದ ಸೈಕಲ್ ಸಂಘ ಅದರ ನಿರಂತರ ಚಟುವಟಿಕೆ ಇದಕ್ಕೊಂದು ತಾಜಾ ಉದಾಹರಣೆ. ಎಂದು ಮೂರ್ತಿ ಸೈಕಲ್ ಮತ್ತುಫಿಟ್ನೆಸ್ ಮಾಲೀಕರು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ಬಿನ ನಿರ್ದೇಶಕರಾದ ನರಸಿಂಹಮೂರ್ತಿ ಅವರು ಅಭಿಮತ ವ್ಯಕ್ತಪಡಿಸಿದರು. Shivamogga Bicycle Association ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಶಿವಮೊಗ್ಗ ಸೈಕಲ್ ಕ್ಲಬ್ ಮೂರ್ತಿ ಫಿಟ್ನೆಸ್ ಮತ್ತು ಸೈಕಲ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಸಾರ್ವಜನಿಕ ಸೈಕಲ್ ಜಾಗೃತಿ ಜಾತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾಕ್ಟರ್ ಶೇಖರ್ ಗೌಳೆ ರವರು ಸೈಕಲ್ ಬಳಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಯಾವುದೇ ಕಾಯಿಲೆ ನಮ್ಮ ಬಳಿ ಸುಳಿಯುವುದಿಲ್ಲ ಈಗಾಗಲೇ ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಹಲವಾರು ಆರೋಗ್ಯ ಮಾಹಿತಿ ಹಾಗೂ ಜಾಗೃತಿ ಜಾತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದ್ರ ಮುಖಾಂತರ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸೈಕಲ್ ಪ್ರವಾಸಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ನುಡಿದರು. ಈ ಜಾಗೃತಿ ಜಾತಾ ವಿನೋಬನಗರ ಮೂರ್ತಿ ಫಿಟ್ನೆಸ್ ನಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಹೊರವಲಯಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿತು ಕಾರ್ಯಕ್ರಮದಲ್ಲಿ ರೋಟರಿ ಜಿ ವಿಜಯಕುಮಾರ್. ಹರೀಶ್ ಕ್ಲಬ್ಬಿನ ಕಾರ್ಯದರ್ಶಿ ಕಾಮತ್ ಮನೋಜ್ ಹಾಗೂ ಸೈಕಲ್ ಕ್ಲಬ್ಬಿನ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...