Sunday, December 7, 2025
Sunday, December 7, 2025

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Date:

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ 2024 ರ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ “ಸಹಕಾರ ರತ್ನ ” ಪ್ರಶಸ್ತಿ ಗೆ ಕೊಪ್ಪ, ಶೃಂಗೇರಿ ಯ ಹಿರಿಯ ಸಹಕಾರಿ ಎಸ್ ಎನ್ ವಿಶ್ವನಾಥ್ ಮೊದಲಮನೆ ಇವರು ಆಯ್ಕೆಯಾಗಿದ್ದಾರೆ.

ಇತ್ತೀಚಿಗೆ ಬಾಗಲಕೋಟೆ ಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮ ದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇವರಿಂದ ವಿಶ್ವನಾಥ್ ಈ ಪ್ರಶಸ್ತಿ ಸ್ವೀಕರಿಸಿದರು.

ಪ್ರಸ್ತುತ ಹಿಮಗಿರಿ ಸೌಹಾರ್ದ ಸಹಕಾರ ಸಂಫದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ್ 30 ವರ್ಷಗಳಿಂದ ಸಹಕಾರಿ ರಂಗದಲ್ಲಿ ಇದ್ದಾರೆ. ಕರಿಮನೆ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ, ಗಾಯಿತ್ರಿ ಸೌಹಾರ್ದ ದ ಸ್ಥಾಪಕ ಅಧ್ಯಕ್ಷರಾಗಿ , ರಾಜ್ಯ ಭೂ ಬ್ಯಾಂಕ್ ನ ಕಾಮನ್ ಕೆಡರ್ ಸಮಿತಿ ಸದಸ್ಯರಾಗಿ, 10 ವರ್ಷ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ದ ಸದಸ್ಯರಾಗಿ ಈ ಕ್ಷೇತ್ರ ಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ.

Department of Cooperation ಸಂಸ್ಥೆ ಗಳನ್ನು ಬೆಳೆಸುವಲ್ಲಿ ವಿಶ್ವನಾಥ್ ಸದಾ ಹಿರಿದಾದ ಪಾತ್ರ ನಿರ್ವಹಿಸುತ್ತಾರೆ.

ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ, ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ನ ವಿಶ್ವಸ್ತ ರಾಗಿಯೂ ಸೇವೆ ಸಲ್ಲಿಸಿರುವ ವಿಶ್ವನಾಥ್ ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ನಟರಾಗಿಯೂ ವಿವಿಧ ಕ್ಷೇತ್ರ ದಲ್ಲಿ ತೊಡಗಿದ ಕ್ರಿಯಾಶೀಲರಾಗಿದ್ದಾರೆ.
ಜಲಪಾತ ಸಿನಿಮಾ ದಲ್ಲಿ ರೈತ ರಾಮಣ್ಣ ನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿತ್ವ ದ ವಿಶ್ವನಾಥ್ ಅವರಿಗೆ ಈ ಸಂದರ್ಭದಲ್ಲಿ ಹಲವು ಸಂಫ ಸಂಸ್ಥೆ ಗಳೂ ಅಭಿನಂದನೆ ತಿಳಿಸಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...