Friday, March 20, 2026
Friday, March 20, 2026

Klive Special Article ಕಾಡುವ ಹುಡುಗನ ಹಾಡು ಓದುಗರ ಅನಿಸಿಕೆ

Date:

Klive Special Article ಕಾಡುವ ಹುಡುಗನ ಹಾಡು…
ಇತ್ತೀಚೆಗೆ ನಾನು ಓದಿದ ಕಾವ್ಯಗುಚ್ಚಗಳಲ್ಲಿ ವಿನೂತನವಾಗಿ ಮೂಡಿಬಂದಿದೆ ಎಂದರೆ ತಪ್ಪಾಗಲಾರದು. ಕದಂಬರಾಳಿದ ಬನವಾಸಿಯತಹ ಊರಲ್ಲಿ ಹುಟ್ಟಿ, ಸಾಧನೆಯ ಹಾದಿ ಹಿಡಿದು ಊರೂರು ಸುತ್ತಿ, ಶೈಕ್ಷಣಿಕವಾಗಿ ತಾನೂ ಬೆಳೆದು, ಸಾಹಿತ್ಯದಲ್ಲೂ ಕೃಷಿ ಮಾಡುತ್ತಿರುವ ಅಂಜುಂ ಅವರ ಬರಹದ ಬೇರು ನೆಲೆಯೂರಿ ಹೆಮ್ಮರವಾಗಿ ಬೆಳೆದು ಸಾಹಿತ್ಯಲೋಕದಲ್ಲಿ ಹೊಸ ಹೊಸ ಹೂಗುಚ್ಚಗಳನ್ನ ನೀಡುವಂತಾಗಲಿ.

ದೈನಂದಿನ ಬದುಕಿನೊಂದಿಗೆ ತಾನು ಬೆರೆತ ಸಮಾಜವನ್ನ ತನ್ನ ಒಳಗಣ್ಣಿನಿಂದ ಸೂಕ್ಷ್ಮವಾಗಿ ಕಾಣುವ ಮನಸ್ಸಿದ್ದವರಲ್ಲಿ ಮಾತ್ರ ಈ ಒಂದು ಕವಿ ಹೃದಯ ಕಾಣಬಹುದು ಎನ್ನುವುದು ನನ್ನ ಭಾವನೆ.
ನಾಟ್ಯಕ್ಕೆ ಹೆಸರಾದ ನವಿಲು ಗಂಡೇ ಅದರೂ ನೋಡುವುದಕ್ಕೂ, ಆಡುವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲದ ಇಂದಿನ ನಾಗರಿಕ ಎಂಬ ಸಮಾಜದಲ್ಲಿ
Klive Special Article ತಪ್ಪು ನಡೆದರೆ ಗಂಡೇ ಎಲ್ಲಕ್ಕೂ ಕಾರಣ ಎಂಬಂತೆ ಬಿಂಬಿಸುವುದೇ ಹೆಚ್ಚು.
ಇಂತಹವರ ನಡುವೆ ಗಂಡಿಗೂ ಒಂದು ಮನಸ್ಸಿದೆ. ಅವನಲ್ಲೂ ಎಲ್ಲವನ್ನ, ಎಲ್ಲರನ್ನ ಪ್ರೀತಿಯಿಂದ ಕಾಣುವ ಮನಸ್ಸಿದೆ, ಸಹೃದಯಿಯಾದ ಅವನೂ ಎಲ್ಲರಿಂದಲೂ ಪ್ರೀತಿಪಾತ್ರನಾಗಬಲ್ಲ ಎಂಬುದನ್ನ ಮನಸ್ಸಿನ ಪುಟಗಳಲ್ಲಿ ಅರಳಿಸುವಲ್ಲಿ ಅಂಜುಂ ಪ್ರಯತ್ನ ಉತ್ತಮವಾಗಿ ಮೂಡಿದೆ.
ನಿಮ್ಮ ಕಾವ್ಯಪ್ರಪಂಚ ವಿಶಾಲವಾಗಿ ಬೆಳೆದು ಕಾವ್ಯಾಸಕ್ತರ ಮನತಣಿಸುವಂತಾಗಲಿ…
ಶುಭವಾಗಲಿ
ಅಂಜದೇ ಮುನ್ನಡೆ ಅಂಜುಮ್…..

ಪುಸ್ತಕ: ಕಾಡುವ ಹುಡುಗನ ಹಾಡು
ಲೇಖಕರು: ಅಂಜುಮ್ ಬಿ.ಎಸ್.
ಪ್ರಕಾಶಕರು : ಸುವ್ವಿ ಪ್ರಕಾಶನ ಶಿಕಾರಿಪುರ
ಪುಟ: 106
ಬೆಲೆ:110
ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಲು ಕರೆ ಮಾಡಿ 9980197085

ಕನ್ನಡದ ಓದುಗ…

ಲೇ: ಆದಿತ್ಯ ಪ್ರಸಾದ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...