Saturday, April 19, 2025
Saturday, April 19, 2025

Klive Special Article ಕಾಡುವ ಹುಡುಗನ ಹಾಡು ಓದುಗರ ಅನಿಸಿಕೆ

Date:

Klive Special Article ಕಾಡುವ ಹುಡುಗನ ಹಾಡು…
ಇತ್ತೀಚೆಗೆ ನಾನು ಓದಿದ ಕಾವ್ಯಗುಚ್ಚಗಳಲ್ಲಿ ವಿನೂತನವಾಗಿ ಮೂಡಿಬಂದಿದೆ ಎಂದರೆ ತಪ್ಪಾಗಲಾರದು. ಕದಂಬರಾಳಿದ ಬನವಾಸಿಯತಹ ಊರಲ್ಲಿ ಹುಟ್ಟಿ, ಸಾಧನೆಯ ಹಾದಿ ಹಿಡಿದು ಊರೂರು ಸುತ್ತಿ, ಶೈಕ್ಷಣಿಕವಾಗಿ ತಾನೂ ಬೆಳೆದು, ಸಾಹಿತ್ಯದಲ್ಲೂ ಕೃಷಿ ಮಾಡುತ್ತಿರುವ ಅಂಜುಂ ಅವರ ಬರಹದ ಬೇರು ನೆಲೆಯೂರಿ ಹೆಮ್ಮರವಾಗಿ ಬೆಳೆದು ಸಾಹಿತ್ಯಲೋಕದಲ್ಲಿ ಹೊಸ ಹೊಸ ಹೂಗುಚ್ಚಗಳನ್ನ ನೀಡುವಂತಾಗಲಿ.

ದೈನಂದಿನ ಬದುಕಿನೊಂದಿಗೆ ತಾನು ಬೆರೆತ ಸಮಾಜವನ್ನ ತನ್ನ ಒಳಗಣ್ಣಿನಿಂದ ಸೂಕ್ಷ್ಮವಾಗಿ ಕಾಣುವ ಮನಸ್ಸಿದ್ದವರಲ್ಲಿ ಮಾತ್ರ ಈ ಒಂದು ಕವಿ ಹೃದಯ ಕಾಣಬಹುದು ಎನ್ನುವುದು ನನ್ನ ಭಾವನೆ.
ನಾಟ್ಯಕ್ಕೆ ಹೆಸರಾದ ನವಿಲು ಗಂಡೇ ಅದರೂ ನೋಡುವುದಕ್ಕೂ, ಆಡುವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲದ ಇಂದಿನ ನಾಗರಿಕ ಎಂಬ ಸಮಾಜದಲ್ಲಿ
Klive Special Article ತಪ್ಪು ನಡೆದರೆ ಗಂಡೇ ಎಲ್ಲಕ್ಕೂ ಕಾರಣ ಎಂಬಂತೆ ಬಿಂಬಿಸುವುದೇ ಹೆಚ್ಚು.
ಇಂತಹವರ ನಡುವೆ ಗಂಡಿಗೂ ಒಂದು ಮನಸ್ಸಿದೆ. ಅವನಲ್ಲೂ ಎಲ್ಲವನ್ನ, ಎಲ್ಲರನ್ನ ಪ್ರೀತಿಯಿಂದ ಕಾಣುವ ಮನಸ್ಸಿದೆ, ಸಹೃದಯಿಯಾದ ಅವನೂ ಎಲ್ಲರಿಂದಲೂ ಪ್ರೀತಿಪಾತ್ರನಾಗಬಲ್ಲ ಎಂಬುದನ್ನ ಮನಸ್ಸಿನ ಪುಟಗಳಲ್ಲಿ ಅರಳಿಸುವಲ್ಲಿ ಅಂಜುಂ ಪ್ರಯತ್ನ ಉತ್ತಮವಾಗಿ ಮೂಡಿದೆ.
ನಿಮ್ಮ ಕಾವ್ಯಪ್ರಪಂಚ ವಿಶಾಲವಾಗಿ ಬೆಳೆದು ಕಾವ್ಯಾಸಕ್ತರ ಮನತಣಿಸುವಂತಾಗಲಿ…
ಶುಭವಾಗಲಿ
ಅಂಜದೇ ಮುನ್ನಡೆ ಅಂಜುಮ್…..

ಪುಸ್ತಕ: ಕಾಡುವ ಹುಡುಗನ ಹಾಡು
ಲೇಖಕರು: ಅಂಜುಮ್ ಬಿ.ಎಸ್.
ಪ್ರಕಾಶಕರು : ಸುವ್ವಿ ಪ್ರಕಾಶನ ಶಿಕಾರಿಪುರ
ಪುಟ: 106
ಬೆಲೆ:110
ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಲು ಕರೆ ಮಾಡಿ 9980197085

ಕನ್ನಡದ ಓದುಗ…

ಲೇ: ಆದಿತ್ಯ ಪ್ರಸಾದ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Karnataka Sports Karate Association ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀಹರ್ಷ ಉತ್ತೀರ್ಣ

Akhila Karnataka Sports Karate Association ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಅಖಿಲ...

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ

ಶಿವಮೊಗ್ಗ ಕನಕ ಭಜನಾ ಮಂಡಳಿಯವರು ದಶಮಾನೋತ್ಸವ ಕಾರ್ಯಕ್ರಮವನ್ನು ಜಯಂತಿ ಪರಮೇಶ್ವರ್ ರವರ...

Madhu Bangarappa ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ ಖಂಡನೀಯ- ಸಚಿವ‌ ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ...