Tuesday, October 1, 2024
Tuesday, October 1, 2024

D.K. Shivakumar ಡಿ.ಕೆ.ಶಿವಕುಮಾರ್, ವ್ಯಕ್ತಿಯಲ್ಲ ಅದೊಂದು ಶಕ್ತಿ- ಕಲ್ಮನೆಗುಡ್ಡಳ್ಳಿ ಸುರೇಶ್

Date:

D.K. Shivakumar ಉಪ-ಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರವರ 64ನೇ ಹುಟ್ಟು ಹಬ್ಬದ ಪ್ರಯುಕ್ತ ಶಿಕಾರಿಪುರ ತಾಲೂಕು ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹಾಗು ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಹಾಗು ಶ್ರೀಗಂಧದ ಗಿಡವನ್ನು ನೆಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿ ಬಳಗದ ತಾಲೂಕು ಅದ್ಯಕ್ಷ ಕಲ್ಮನೆ ಗುಡ್ಡಳ್ಳಿ ಸುರೇಶ್ ರವರು, ಡಿ.ಕೆ.ಶಿವಕುಮಾರ್ ರವರು ಒಬ್ಬ ವ್ಯಕ್ತಿ ಅಲ್ಲ ಅದೊಂದು ಶಕ್ತಿ, ಪಕ್ಷದ ಪೂಜೆ ಮಾಡುವ ವ್ಯಕ್ತಿ, ವಿರೋಧಿಗಳು ಸಾವಿರಾರು ತೊಂದರೆ ನೀಡಿದರು ಬಗ್ಗದ ಬಂಡೆ ಡಿ.ಕೆ.ಶಿವಕುಮಾರ್ ರವರು, ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುವ ಮೂಲಕ ಅವರಿಗೆ ಪ್ರೋತ್ಸಹ ನೀಡುವ ಪ್ರಯತ್ನ ಮಾಡಲಾಯಿತು ಎಂದರು.

D.K. Shivakumar ಶಿಕಾರಿಪುರದಲ್ಲಿ ಡಿಕೆಶಿ ಅವರ 64 ನೇ ಜನ್ಮದಿನಾಚರಣೆ ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾದ್ಯಕ್ಷರಾದ ಆರ್.ಮೋಹನ್ ರವರು, ಕೆಪಿಸಿಸಿ ಸದಸ್ಯರಾದ ಗೋಣೆ ಮಾಲತೇಶ್ ರವರು, ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್ ರವರು, ರಾಘವೇಂದ್ರ ನಾಯಕ್, ಪಾಲಾಕ್ಷಪ್ಪಗೌಡ್ರು, ಭಂಡಾರಿ ಮಾಲತೇಶ್, ಗಜೇಂದ್ರಪ್ಪ, ವೀರೇಶ್, ರಘುಪತಿ, ಶ್ರೀಕಾಂತ್, ಸಿದ್ದೇಶಣ್ಣ, ದೇವೆಂದ್ರಪ್ಪ, ಶೋಭಾ, ಪರಶುರಾಮ್, ಚರಣ್, ಆಹ್ಮದ್ ಖಾನ್, ಮಂಜು ನಾಯಕ್, ಮುಂತಾದ ಮುಖಂಡರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...