Saturday, June 20, 2026
Saturday, June 20, 2026

D.K. Shivakumar ಡಿ.ಕೆ.ಶಿವಕುಮಾರ್, ವ್ಯಕ್ತಿಯಲ್ಲ ಅದೊಂದು ಶಕ್ತಿ- ಕಲ್ಮನೆಗುಡ್ಡಳ್ಳಿ ಸುರೇಶ್

Date:

D.K. Shivakumar ಉಪ-ಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರವರ 64ನೇ ಹುಟ್ಟು ಹಬ್ಬದ ಪ್ರಯುಕ್ತ ಶಿಕಾರಿಪುರ ತಾಲೂಕು ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹಾಗು ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಹಾಗು ಶ್ರೀಗಂಧದ ಗಿಡವನ್ನು ನೆಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿ ಬಳಗದ ತಾಲೂಕು ಅದ್ಯಕ್ಷ ಕಲ್ಮನೆ ಗುಡ್ಡಳ್ಳಿ ಸುರೇಶ್ ರವರು, ಡಿ.ಕೆ.ಶಿವಕುಮಾರ್ ರವರು ಒಬ್ಬ ವ್ಯಕ್ತಿ ಅಲ್ಲ ಅದೊಂದು ಶಕ್ತಿ, ಪಕ್ಷದ ಪೂಜೆ ಮಾಡುವ ವ್ಯಕ್ತಿ, ವಿರೋಧಿಗಳು ಸಾವಿರಾರು ತೊಂದರೆ ನೀಡಿದರು ಬಗ್ಗದ ಬಂಡೆ ಡಿ.ಕೆ.ಶಿವಕುಮಾರ್ ರವರು, ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುವ ಮೂಲಕ ಅವರಿಗೆ ಪ್ರೋತ್ಸಹ ನೀಡುವ ಪ್ರಯತ್ನ ಮಾಡಲಾಯಿತು ಎಂದರು.

D.K. Shivakumar ಶಿಕಾರಿಪುರದಲ್ಲಿ ಡಿಕೆಶಿ ಅವರ 64 ನೇ ಜನ್ಮದಿನಾಚರಣೆ ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾದ್ಯಕ್ಷರಾದ ಆರ್.ಮೋಹನ್ ರವರು, ಕೆಪಿಸಿಸಿ ಸದಸ್ಯರಾದ ಗೋಣೆ ಮಾಲತೇಶ್ ರವರು, ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್ ರವರು, ರಾಘವೇಂದ್ರ ನಾಯಕ್, ಪಾಲಾಕ್ಷಪ್ಪಗೌಡ್ರು, ಭಂಡಾರಿ ಮಾಲತೇಶ್, ಗಜೇಂದ್ರಪ್ಪ, ವೀರೇಶ್, ರಘುಪತಿ, ಶ್ರೀಕಾಂತ್, ಸಿದ್ದೇಶಣ್ಣ, ದೇವೆಂದ್ರಪ್ಪ, ಶೋಭಾ, ಪರಶುರಾಮ್, ಚರಣ್, ಆಹ್ಮದ್ ಖಾನ್, ಮಂಜು ನಾಯಕ್, ಮುಂತಾದ ಮುಖಂಡರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...