Wednesday, December 17, 2025
Wednesday, December 17, 2025

Radio Shimoga ದ್ವಿತೀಯ ವಾರ್ಷಿಕೋತ್ಸವದ ಸಡಗರದಲ್ಲಿ ರೇಡಿಯೊ ಶಿವಮೊಗ್ಗ

Date:

Radio Shimoga ರೇಡಿಯೋ ಶಿವಮೊಗ್ಗ ಸಮುದಾಯ ಬಾನುಲಿಯ ದ್ವಿತೀಯ ವಾರ್ಷಿಕೋತ್ಸವ, ವಿಶ್ವ ಭೂ ದಿನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ಏಪ್ರಿಲ್ 22ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಮಥುರಾ ಪ್ಯಾರಡೈಸ್ ನ ಮೂರನೆಯ ಮಹಡಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ರೇಡಿಯೋ ಶಿವಮೊಗ್ಗ, ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರ, ಜ್ಞಾನಸಾಗರ ನಾವೆ ಟ್ರಸ್ಟ್ ಹಾಗೂ ಸ್ವೀಪ್ ಸಮಿತಿ ಶಿವಮೊಗ್ಗ ಇವರ ಸಹಯೋಗದಲ್ಲಿ ಕಾರ್ಯಕ್ರಮವು ಆಯೋಜನೆಗೊಂಡಿದೆ.

Radio Shimoga ಬಾನುಲಿಯ ಕೇಳುಗರೊಂದಿಗೆ ಅಪ್ಪಿಕೋ ಚಳುವಳಿಯ ಪ್ರವರ್ತಕ ಪಾಂಡುರಂಗ ಹೆಗಡೆ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್. ಸಿ. ಜಗದೀಶ್ ಹಾಗೂ ಐಐಟಿ ಧಾರವಾಡದ ಸಂದರ್ಶಕ ಪ್ರಾಧ್ಯಾಪಕ ಡಾ. ಎಲ್.ಕೆ. ಶ್ರೀಪತಿ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ ನಿಲಯದ ಸಂಯೋಜಕ ಗುರುಪ್ರಸಾದ್ (72591 76279)ಗೆ ಸಂಪರ್ಕಿಸಬಹುದು ಎಂದು ಆಯೋಜಕ ಸಂಸ್ಥೆಗಳ ಪರವಾಗಿ ಬಾನುಲಿ ಕೇಂದ್ರದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...