Karnakata Sanga Shivamogga ದಿನಾಂಕ 06 ಏಪ್ರಿಲ್ 2024ರ ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಎಂ.ಎನ್. ಸುಂದರ ರಾಜ್ರವರ ಅಧ್ಯಕ್ಷತೆಯಲ್ಲಿ ‘ಗಮಕ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಶ್ರೀ ಕೃ. ರಾಮಚಂದ್ರ, ಡಾ. ಎನ್.ಕೆ. ರಾಮಶೇಷನ್ ಹಾಗೂ ಹೊಸಹಳ್ಳಿಯ ಶ್ರೀ ರಾಜಾರಾಮಮೂರ್ತಿ ಇವರಿಂದ (“ಕುಮಾರವ್ಯಾಸ ಭಾರತದ ಆಯ್ದ ಭಾಗ”) ಗಮಕ ಕಾರ್ಯಕ್ರಮ ಇರುತ್ತದೆ, ವಾಚನವನ್ನು ಶ್ರೀ ಕೃ. ರಾಮಚಂದ್ರ, ಮೈಸೂರು ಇವರು ಮತ್ತು ವ್ಯಾಖ್ಯಾನವನ್ನು ಡಾ. ಎನ್.ಕೆ. ರಾಮಶೇಷನ್, ಮೈಸೂರು ಹಾಗೂ ಶ್ರೀ ರಾಜಾರಾಮಮೂರ್ತಿ, ಹೊಸಹಳ್ಳಿ ಇವರು ನಡೆಸಿಕೊಡಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
