Sunday, December 14, 2025
Sunday, December 14, 2025

Double Engine Government ಬೆಲೆ ಏರಿಕೆಯೇ ಬಿಜೆಪಿ- ಪ್ರಫುಲ್ಲಾ‌ ಮಧುಕರ್

Date:

Double Engine Government ಡಬ್ಬಲ್ ಇಂಜಿನ್‌ಗಳು ಕೆಟ್ಟು ಮೂಲೆ ಸೇರಿವೆ. ಮುಂಬರುವ ಮೇ 10 ರಂದು ರಾಜ್ಯದ ಜನತೆ ದುರಸ್ಥಿಗೂ ಬಾರದ ರಾಜ್ಯದ ಇಂಜಿನ್‌ನ್ನು ಗುಜರಿಗೆ ಹಾಕುತ್ತಾರೆ ಎನ್ನುವ ಮೂಲಕ ಬಿಜೆಪಿ ಸರ್ಕಾರ ಕೊನೆಗೊಂಡು ಕಾಂಗ್ರೆಸ್ ಅಡಳಿತ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾಮಧುಕರ್ ಹೇಳಿದರು.

ಸಾಗರದ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಆಪ್ ಸಾಗರ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಸಂವಾದದಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಟೀಕಿಸುವ ಬಿಜೆಪಿಯವರಿಗೆ ದೇಶದಲ್ಲಿ ಮೋದಿ ಬಿಟ್ಟರೇ ಬೇರೆ ಯಾವುದು ಗ್ಯಾರಂಟಿ ಇಲ್ಲವಾಗಿದೆ.ಮೋದಿಯನ್ನು ತೋರಿಸಿ ಮತ ಕೇಳುವ ಬಿಜೆಪಿಯವರಿಗೆ ಸ್ವಂತಿಕೆಯಿಲ್ಲ ಎಂದು ಟೀಕಿಸಿದರು.

ಬಿಜೆಪಿಯೇ ಭರವಸೆ ಎಂದು ಹೇಳುವ ಬಿಜೆಪಿಗರಿಗೆ ಬೆಲೆ ಏರಿಕೆಯೇ ಬಿಜೆಪಿ ಎಂಬ ಕುರಿತು ಜನಸಾಮಾನ್ಯರು ಅರಿತಿದ್ದಾರೆ.ಬೆಲೆ ಏರಿಕೆಯ ಬಿಸಿ ಒಲೆಯ ಉರಿಗಿಂತ ಬಿಸಿಯಾಗಿರುವುದೇ ಮಹಿಳಾ ಮತದಾರರು ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಬಿಸಿಲ ತಾಪದ ಜೊತೆಗೆ ಬೆಲೆ ಏರಿಕೆಯ ತಾಪವನ್ನು ತಣಿಸಲು ಮಹಿಳೆಯರು ಬಡವರು ಮತ್ತು ಮಧ್ಯಮ ವರ್ಗದ ಜನರು ಕಾಂಗ್ರೆಸ್ ಪಕ್ಷ ಗೆಲ್ಲಿಸುವುದೊಂದೆ ಪರಿಹಾರ ಎಂದು ತೀರ್ಮಾನಿಸಿದ್ದಾರೆ ಎಂದರು.

ಸ್ತ್ರೀ ಶಕ್ತಿ ರಾಷ್ಟ್ರದ ಶಕ್ತಿ ಎನ್ನುವಾಗ ಕಾಂಗ್ರೆಸ್ ಪಕ್ಷ ಸ್ತ್ರೀ ಯರ ಪರವಾಗಿ ಕೈಗೊಂಡಿರುವ ಕಾರ್ಯಕ್ರಮಗಳೇನು?ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪ್ರಫುಲ್ಲಾಮಧುಕರ್ ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ರೂಪಿಸಿರುವುದೇ ಕಾಂಗ್ರೆಸ್ ಪಕ್ಷವಾಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಹಿಳಾದೌರ್ಜನ್ಯ ತಡೆಯಲು ಮತ್ತು ನ್ಯಾಯ ಕೊಡಿಸಲು ರಾಜ್ಯಮಟ್ಟದ ಸಮಿತಿಯೊಂದನ್ನು ರಚಿಸಿದ್ದರು ಎಂದರು.

ಸಮಿತಿಯಲ್ಲಿ ಮಾಜಿ ಸಚಿವೆ ರಾಣಿ ಸತೀಶ್ ಮತ್ತು ನಾನು ಹಾಗೂ ಇನ್ನಿತರೆ ಸದಸ್ಯರುಗಳಿದ್ದು,ವಿ.ಎಸ್ ಉಗ್ರಪ್ಪನವರು ಸಮಿತಿಯ ಅಧ್ಯಕ್ಷರಾಗಿದ್ದರು.ನಾವು ತುಮಕೂರು ಮತ್ತು ಗುಲ್ಬರ್ಗ ಸೇರಿದಂತೆ ವಿವಿಧ ವಿದ್ಯಾರ್ಥಿನಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ವಸತಿ ನಿಲಯಗಳ ಕುರಿತು ಮತ್ತು ವಿದ್ಯಾರ್ಥಿನಿಯರುಗಳ ಸಮಸ್ಯೆಗಳ ಮಾಹಿತಿ ಪಡೆದಾಗ ವಿದ್ಯಾರ್ಥಿನಿಯರುಗಳಿಗೆ ಪ್ಯಾಂಪರ್ ಕೊರತೆಯ ಕುರಿತು ಅರಿವಿಗೆ ಬಂದಿತು.ತಕ್ಷಣ ಸರ್ಕಾರದ ಗಮನಕ್ಕೆ ತರುವ ಮೂಲಕ ಬಜೆಟ್‌ನಲ್ಲಿ ಘೋಷಿಸಿದ ಸಿದ್ದರಾಮಯ್ಯನವರು ವರ್ಷಕ್ಕೆ 12 ಗುಣಮಟ್ಟದ ಪ್ಯಾಂಪರ್‌ಗಳನ್ನು ಒಬ್ಬರು ವಿದ್ಯಾರ್ಥಿಗಳಿಗೆ ನೀಡುವ ಯೋಜನೆ ಮಹಿಳಾ ಸಬಲೀಕರಣ ಮಾತ್ರವಲ್ಲ ಆರೋಗ್ಯ ಸುರಕ್ಷೆಯ ಭಾಗವಾಗಿದೆ ಎಂದರು.

ಟಿಕೇಟ್ ಹಂಚಿಕೆಯ ನಂತರದ ಕಾಂಗ್ರೆಸ್ ಪಕ್ಷದಲಿನ ಅಸಮಾಧಾನ ತಣಿಸುವಲ್ಲಿ ಪಕ್ಷದ ಪ್ರಮುಖ ನಾಯಕರು ಆಸಕ್ತಿವಹಿಸಿದಂತೆ ಕಾಣಲಿಲ್ಲ ಎಂಬ ಅಬಿಪ್ರಾಯಕ್ಕೆ ಪ್ರತಿಯಾಗಿ ಮಾತನಾಡಿದ ಅವರು ಜಿಲ್ಲೆಗಳ ಹಂತದಲ್ಲಿನ ಪ್ರಮುಖ ನಾಯಕರುಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಪರಸ್ಪರ ಸಮಾಲೋಚನೆಯ ಮೂಲಕ ಸಮಾದಾನದ ಪ್ರಕ್ರಿಯೆಗಳ ನಡೆಸಬೇಕು.ಎಲ್ಲವನ್ನು ರಾಜ್ಯ ನಾಯಕರುಗಳು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರು.
ಕರ್ನಾಟಕ ವ ಇಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಜಯಗಳಿಸುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಫುಲ್ಲಾಮಧುಕರ್ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇರುವ ಕಾರಣ 120 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸಂಪೂರ್ಣ ಬಹುಮತದ ಕಾಂಗ್ರೆಸ್ ಆಡಳಿತ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಕಾಂಗ್ರೆಸ್ ಆಡಳಿತ ನಡೆಸುವಲ್ಲಿ ಸಪಲವಾಗುವ ಕಾಂಗ್ರೆಸ್ ವಿಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗುತ್ತಿದೆಯಲ್ಲ ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಆಡಲಿತ ಮತ್ತು ವಿಪಕ್ಷದ ಸ್ಥಾನಗಲನ್ನು ಸಮರ್ಪಕವಾಗಿ ಎದುರಿಸುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕರ್ನಾಟಕದ ನಗರ ಮತ್ತು ಗ್ರಾಮಗಲಲ್ಲಿಯೂ ಹೆಸರುವಾಸಿಯಾಗಿದ್ದಾರೆ.ಜಿಲ್ಲೆ ಮತ್ತು ತಾಲ್ಲೂಕು ಹಂತಗಳಲ್ಲಿ ಕಾರ್ಯಕರ್ತರುಗಳೇ ಕಾಲ ಕಾಲದ ಸಮಸ್ಯೆಗಳ ಕುರಿತು ಹೋರಾಟ ರೂಪಿಸಬೇಕು.ಆದರೂ ಆರ್.ಎಸ್.ಎಸ್ ಮತ್ತು ಕಮ್ಯೂನಿಷ್ಟ್ ಗಳಲ್ಲಿ ಫುಲ್‌ಟೈಮ್ ಕಾರ್ಯಕರ್ತರುಗಳಿಗೆ ನಿರಂತರ ರಾಜಕೀಯ ಚಟುವಟಿಕೆಗೆ ಸಾಧಯವಾಗುತ್ತದೆ.ಉಳಿದ ಪಕ್ಷದ ಕಾರ್ಯಕರ್ತರುಗಳಿಗೆ ನಿರಂತರ ರಾಜಕೀಯ ಸಾಧ್ಯವಿಲ್ಲ ಎಂದರು.

ರಾಜಕೀಯ ಪಕ್ಷಗಳಲ್ಲಿ ಮಹಿಳಾ ಶಕ್ತಿಯನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತವೆ.ಮಹಿಳೆಯರುಗಳಿಗೆ ಅಧಿಕಾರ ನೀಡುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನಿರಾಸಕ್ತಿವಹಿಸುತ್ತವೆ ಎನ್ನುವುದನ್ನು ಒಪ್ಪಿಕೊಂಡರು.ರಾಜಕೀಯ ಪಕ್ಷಗಳಲ್ಲಿ ರಾಜಕೀಯ ನಾಯಕರ ಮಗಳಿಗೂ ಅಥವಾ ಗಂಡ ಸತ್ತ ನಂತರ ಹೆಂಡತಿಗೆ ಟಿಕೇಟ್ ನೀಡುತ್ತಾರೆಯೇ ಹೊರತು ನಿಜವಾಗಿಯೂ ರಾಜಕೀಯ ಸೇವೆಯಲ್ಲಿ ವರ್ಚಸ್ಸು ಹೊಂದಿರುವ ಮಹಿಳೆಯರಿಗೆ ಅಧಿಕಾರ ಸಿಗುವುದೇ ದುಸ್ಥರವಾಗಿದೆ ಎಂದರು.

ಗಣಪತಿ ಕೆರೆ ಅಬಿವೃದ್ಧಿಯಾಗಿದೆ ಎಂದು ಮಾರಿಜಾತ್ರೆಯ ವಿದ್ಯುತ್ ಅಲಂಕಾರಿಕ ಬೆಳಕಿನಲ್ಲಿ ಸುಂದರವಾಗಿ ಗೋಚರಿಸಿದ ಕೆರೆಯನ್ನು ನೋಡಿ ಗಣಪತಿ ಕೆರೆ ಅಬಿವೃದ್ಧಿ ಆಗಿದೆ ಎಂದು ಶಾಸಕ ಹಾಲಪ್ಪನವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದೆ.ಆದರೇ ಜಾತ್ರೆಯ ನಂತರ ಗಣಪತಿ ಕೆರೆ ನೋಡಿದಾಗ ಕೆರೆಯನ್ನು ವಿರೂಪಗಳಿಸಿ ಕೆರೆಯ ಬಫರ್‌ಜೋನ್ ವ್ಯಾಪ್ತಿ ಅತಿಕ್ರಮಣ ಮಾಡಿರುವವರ ಸಾಲಿನಲ್ಲಿ ಶಾಸಕ ಹಾಲಪ್ಪನವರ ಹೆಸರು ಸೇರಿರುವುದರೊಂದಿಗೆ ಅಕ್ರಮಗಳ ಹೂರಣದ ದರ್ಶನವಾಗಿದೆ.ಆದ್ದರಿಂದ ಚುನಾವಣೆಯ ನಂತರ ಗಣಪತಿ ಕೆರೆ ಒತ್ತುವರಿ ವಿರುದ್ಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಅನ್ನಭಾಗ್ಯ,ಕ್ಷೀರಭಾಗ್ಯ ಸೇರಿದಂತೆ ಪ್ರಸ್ತುತ ಗ್ಯಾರಂಟಿ ಕಾರ್ಡುಗಳಲ್ಲಿನ ಮನೆಯೊಡತಿಗೆ ಗೌರವದನ,ನಿರುದ್ಯೋಗಿ ಪದವೀಧರರಿಗೆ ಪ್ರೋತ್ಸಾಹಧನ ,ಪ್ರತಿ ಕುಟುಂಬಕ್ಕು 200 ಯೂನೀಟ್ ಉಚಿತ ಕೊಡುಗೆಗಳ ಕುರಿತು ಮತದಾರರಲ್ಲಿ ವಿಶೇಷ ಭರವಸೆ ಮೂಡಿರುವುದೇ ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ ಎಂದರು.

Double Engine Government ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕಾಂಗ್ರೆಸ್ ಜಯಗಳಿಸುವ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಮತ್ತೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನಾಗಿ ಪರಿವರ್ತಿಸುತ್ತೇವೆ ಎಂದರು.

ಪತ್ರಿಕಾ ಸಂವಾದದಲ್ಲಿ ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯಭಟ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣಪತಿಶಿರಳಗಿ,ಖಜಾಂಚಿ ರಮೇಶ್ ಎನ್,ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...