Tuesday, August 25, 2026
Tuesday, August 25, 2026

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಆಸ್ತಿಪಾಸ್ತಿ ಜಾತಕ

Date:

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಂದ ಆಯ್ಕೆ ಆಗಿರುವ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ತಮ್ಮ ಆಸ್ತಿ ವಿವರಗಳನ್ನೂ ಘೋಷಿಸಿಕೊಂಡಿದ್ದಾರೆ. ಆದರೆ ಆಸ್ತಿ ವಿಚಾರದಲ್ಲಿ ಪಕ್ಷಭೇದವಿಲ್ಲದೆ ಎಲ್ಲರೂ ಕೋಟ್ಯಧೀಶ್ವರರೇ ಎಂಬುದು ಕಂಡುಬಂದಿದೆ.

ಪರಿಷತ್ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರ ಹೀಗಿದೆ.

ಕೇಶವ ಪ್ರಸಾದ್, ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 3 ಕೋಟಿ 92 ಲಕ್ಷ ರೂ.
ಚರಾಸ್ತಿ: 69.58 ಲಕ್ಷ ರೂ.
ಸ್ಥಿರಾಸ್ತಿ: 20 ಲಕ್ಷ ರೂ.
ಪತ್ನಿ ಹೆಸರಲ್ಲಿ ಚರಾಸ್ತಿ: 1 ಕೋಟಿ 4 ಲಕ್ಷ ರೂ.
ಸ್ಥಿರಾಸ್ತಿ: 1 ಕೋಟಿ 98 ಲಕ್ಷ ರೂ.
ಸಾಲ: 13 ಲಕ್ಷ 50 ಸಾವಿರ ರೂ.

ಟಿ.ಎ. ಶರವಣ (ಜೆಡಿಎಸ್ ಅಭ್ಯರ್ಥಿ)
ಒಟ್ಟು ಆಸ್ತಿ ಮೌಲ್ಯ: 41.79 ಕೋಟಿ ರೂ.
ಚರಾಸ್ತಿ: 3.25 ಲಕ್ಷ ರೂ.
ಸ್ಥಿರಾಸ್ತಿ: 26.36 ಕೋಟಿ ರೂ.
ಪತ್ನಿ ಶೀಲಾದೇವಿ ಹೆಸರಲ್ಲಿ ಚರಾಸ್ತಿ: 6.87 ಕೋಟಿ ರೂ.
ಸ್ಥಿರಾಸ್ತಿ: 5 ಕೋಟಿ ರೂ.
ಪುತ್ರಿ ಶ್ರೇಯಾ ಹೆಸರಲ್ಲಿ ಚರಾಸ್ತಿ: 15.30 ಲಕ್ಷ ರೂ.
ಪುತ್ರಿ ಶ್ರುತಿ ಹೆಸರಲ್ಲಿ ಸ್ಥಿರಾಸ್ತಿ: 2.59 ಲಕ್ಷ ರೂ.

ಹೇಮಲತಾ ನಾಯಕ್, ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 89 ಲಕ್ಷ ರೂ.
ಚರಾಸ್ತಿ: 28 ಲಕ್ಷ ರೂ.
ಸ್ಥಿರಾಸ್ತಿ: 29 ಲಕ್ಷ ರೂ.
ಪತಿ ಹೆಸರಲ್ಲಿ ಚರಾಸ್ತಿ: 2 ಲಕ್ಷ ರೂ.
ಸ್ಥಿರಾಸ್ತಿ: 30 ಲಕ್ಷ ರೂ.

ಲಕ್ಷ್ಮಣ ಸವದಿ, ಬಿಜೆಪಿ ಅಭ್ಯರ್ಥಿ
ಕುಟುಂಬದ ಒಟ್ಟು ಆಸ್ತಿ: 36 ಕೋಟಿ 37 ಲಕ್ಷ ರೂ.
ಚರಾಸ್ತಿ: 5 ಕೋಟಿ 84 ಲಕ್ಷ ರೂ.
ಸ್ಥಿರಾಸ್ತಿ: 29 ಕೋಟಿ 59 ಲಕ್ಷ ರೂ.
ಸಾಲ: 1 ಕೋಟಿ 81 ಲಕ್ಷ ರೂ.
ಲಕ್ಷಣ ಸವದಿ ಪತ್ನಿ ಪುಷ್ಪ ಆಸ್ತಿ ವಿವರ
ಚರಾಸ್ತಿ: 64 ಲಕ್ಷ ರೂ.
ಸ್ಥಿರಾಸ್ತಿ: 30 ಲಕ್ಷ ರೂ.

ನಾಗರಾಜ ಯಾದವ್, ಕಾಂಗ್ರೆಸ್‌ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 7 ಕೋಟಿ 12 ಲಕ್ಷ ರೂ.
ಚರಾಸ್ತಿ: 48 ಲಕ್ಷ ರೂ.
ಸ್ಥಿರಾಸ್ತಿ: 2 ಕೋಟಿ 59 ಲಕ್ಷ ರೂ.
ಪತ್ನಿ ರಾಜಶ್ರೀ ಹೆಸರಲ್ಲಿ ಚರಾಸ್ತಿ: 52 ಲಕ್ಷ ರೂ.
ಸ್ಥಿರಾಸ್ತಿ: 3 ಕೋಟಿ 53 ಲಕ್ಷ ರೂ.
ಸಾಲ: 10 ಲಕ್ಷ ರೂ.

ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 6 ಕೋಟಿ 32 ಲಕ್ಷ ರೂ.
ಚರಾಸ್ತಿ: 23 ಲಕ್ಷ ರೂ.
ಸ್ಥಿರಾಸ್ತಿ: 5 ಕೋಟಿ 85 ಲಕ್ಷ ರೂ.
ಪತ್ನಿ ಹೆಸರಲ್ಲಿ ಚರಾಸ್ತಿ: 24 ಲಕ್ಷ ರೂ.
ಯಾವುದೇ ಸಾಲ ಇಲ್ಲ

ಅಬ್ದುಲ್ ಜಬ್ಬಾರ್, ಕಾಂಗ್ರೆಸ್‌ನ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 7 ಕೋಟಿ ರೂ.
ಚರಾಸ್ತಿ: 34 ಲಕ್ಷ ರೂ.
ಸ್ಥಿರಾಸ್ತಿ: 5 ಕೋಟಿ 82 ಲಕ್ಷ ರೂ.
ಪತ್ನಿ ಪರ್ವೀನಾ ಹೆಸರಲ್ಲಿ ಚರಾಸ್ತಿ: 12 ಲಕ್ಷ ರೂ.
ಸ್ಥಿರಾಸ್ತಿ: 68 ಲಕ್ಷ ರೂ.
ಸಾಲ: 71 ಲಕ್ಷ ರೂ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...