ಕೃತಕ ಬುದ್ಧಿಮತ್ತೆ, ಹಸಿರು ಪರಿವರ್ತನೆ ಮತ್ತು ಸಾಮಾಜಿಕ-ಭಾವನಾತ್ಮಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ಯುವಕರು ಹೊಂದಿಕೊಳ್ಳಲು ಮತ್ತು ಮುನ್ನಡೆಸಲು ಪ್ರೋತ್ಸಾಹಿಸುವುದು ಅಗತ್ಯ ಪ್ರಸ್ತುತ ಕೌಶಲ್ಯಗಳು ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಉದ್ಯೋಗಗಳು ತಾಂತ್ರಿಕ ಅಡಚಣೆಯಿಂದಾಗಿ ರೂಪಾಂತರಗೊಳ್ಳುವ ನಿರೀಕ್ಷೆಯಿದೆ ಎಂದು ಹಿರಿಯ ಕೈಗಾರಿಕೋದ್ಯಮಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಎಸ್ ರುದ್ರೇಗೌಡರು ರ ಹೇಳಿದರು
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದಿಂದ ನಡೆದ ವಿಶ್ವ ಯುವ ಕೌಶಲ್ಯ ದಿನ 2026 ಪ್ರಯುಕ್ತ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಕಾರ್ಯಕ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿ ಭವಿಷ್ಯದಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಸರ್ಕಾರಗಳು, ಶಿಕ್ಷಣತಜ್ಞರು, ಉದ್ಯೋಗದಾತರು ಮತ್ತು ಯುವಜನರನ್ನು ಒಟ್ಟುಗೂಡಿಸಿ ಸಮಗ್ರ ಮತ್ತು ಭವಿಷ್ಯಕ್ಕೆ ಸಿದ್ಧವಾದ ವೃತ್ತಿಪರ ಶಿಕ್ಷಣದ ಕುರಿತು ಚರ್ಚಿಸಬೇಕು ಸಾಂಪ್ರದಾಯಿಕ ಪದವಿ-ಕೇಂದ್ರಿತ ಶಿಕ್ಷಣ ಮಾದರಿಗಳನ್ನು ಎದುರಿಸಲು ಮತ್ತು ಜನಸಂಖ್ಯಾ ಲಾಭಾಂಶವನ್ನು ಅನ್ಲಾಕ್ ಮಾಡಲು “ಕೌಶಲ್ಯ-ಮೊದಲು” ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸುತ್ತ ಕೇಂದ್ರೀಕೃತವಾ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಸಂಘದ ಕಾರ್ಯದರ್ಶಿ ವಿಶ್ವೇಶ್ವರಯ್ಯ ಎಸ್ ರವರು ಪ್ರಾಸ್ತಾವಿಕ ನುಡಿಗಳಲ್ಲಿ ಶಿವಮೊಗ್ಗ ಹಾಗೂ ರಾಜ್ಯದ ಇತರೆ ಎರಡನೇ ಹಂತ ಮೂರನೇ ಹಂತದ ನಗರಗಳಲ್ಲಿ ಅಗತ್ಯವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡಲು ಪ್ರೇಡ್ ಸೆಂಟರ್ ಅಗತ್ಯವಾಗಿ ಬೇಕಾಗುತ್ತದೆ ಎಂದು ಸಭೆಗೆ ತಿಳಿಸಿ ಮನವಿಯನ್ನು ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ರವರಿಗೆ ನೀಡಿದರು.
ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಆರ್ ಗಣೇಶ್ ಅವರು ಕೈಗಾರಿಕಾ ಸಂಘದ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಜಿಲ್ಲಾ ಕೈಗಾರಿಕ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕೈಗಾರಿಕಾ ಸಂಘದ ಅಧ್ಯಕ್ಷರು ಡಾಕ್ಟರ್ ಜೋಯಿಸ್ ರಾಮಾಚಾರಿ ಮಾತನಾಡಿ ನಮ್ಮ ಸಂಘವು ಕಳೆದ 40 ವರ್ಷಗಳಿಂದ ನಿರಂತರ ಸೇವೆ ನೀಡಿ ಮುಂದೆ ಈಗ ಕಾರ್ಯನಿರ್ವಹಿಸುತ್ತಿರುವ ಜಾಗದಲ್ಲಿ ಬೃಹತ್ ಟ್ರೇಡ್ ಸೆಂಟರ್ ಮಾಡಲು ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ ಎಂ ಸುರೇಶ್, ಖಜಾಂಚಿ ಆರ್. ಮನೋಹರ ವಿವಿಧ ಕೈಗಾರಿಕಾ ಹೊಸಹಾತುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಸಂಘದ ಖಜಾಂಚಿಗಳಾದ ಹೆಚ್ ಬಿ ರಮೇಶ್ ಬಾಬುರವರು ನಡೆಸಿಕೊಟ್ಟರು ಸ್ವಾಗತವನ್ನು ಭದ್ರಾವತಿ ಪ್ರಕಾಶ್ ರವರು ಮಾಡಿದರು,ವಂದನಾರ್ಪಣೆಯನ್ನು ಎಸ್ ಜಿ ಎಂ ಟೆಕ್ನಾಲಜೀಸ್ ಪ್ರಕಾಶ್ ರವರು ಮಾಡಿದರು.
